Tue. Mar 24th, 2026

Kannada

ಕೆಎಎಸ್ ಪ್ರಚಲಿತ ವಿದ್ಯಮಾನಗಳು

ಪೂರ್ವಭಾವಿ ಪರೀಕ್ಷೆ

ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು


ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು

ಮುಖ್ಯ ಪರೀಕ್ಷೆ

ಪತ್ರಿಕೆ-I: ಪ್ರಬಂಧಗಳು

ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ

ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ

ಪತ್ರಿಕೆ-II: ಸಾಮಾನ್ಯ ಅಧ್ಯಯನ-1

ವೃತ್ತಿ ತೆರಿಗೆ ವಿವರ ಪ್ರತ್ಯೇಕ ಸಲ್ಲಿಕೆ ಅನಗತ್ಯ: ಮಸೂದೆ
ಸಂದರ್ಭ: ಆದಾಯ ತೆರಿಗೆಯ ವಿವರಗಳನ್ನು (ಐ.ಟಿ ರಿಟರ್ನ್ಸ್) ಸಲ್ಲಿಸಿದ ಬಳಿಕವೂ ವೃತ್ತಿ ತೆರಿಗೆಯ ವಿವರಗಳನ್ನು ಸಲ್ಲಿಸಬೇಕೆಂಬ ಷರತ್ತನ್ನು ತೆಗೆದುಹಾಕುವ ಉದ್ದೇಶದಿಂದ ಸರ್ಕಾರ ಮಂಡಿಸಿದ ‘ಕರ್ನಾಟಕ ವೃತ್ತಿಗಳ ಕಸುಬುಗಳ ಅಜೀವಿಕೆಗಳ ಮತ್ತು ಉದ್ಯೋಗಗಳ ಮೇಲಣ ತೆರಿಗೆಗಳ ತಿದ್ದುಪಡಿ ಮಸೂದೆ’ಗೆ ವಿಧಾನಸಭೆ ಅಂಗೀಕಾರ ನೀಡಿತು.

  • ಮಸೂದೆ ಮಂಡಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ‘ಒಮ್ಮೆ ತೆರಿಗೆ ಹಣ ಪಾವತಿಸಿದ ನಂತರ ಮತ್ತೆ ರಿಟರ್ನ್ಸ್ ಸಲ್ಲಿಸುವ ಅಗತ್ಯ ಇಲ್ಲ ಎಂಬ ಸರಳ ತಿದ್ದುಪಡಿ ತರಲಾಗಿದೆ.
  • ಹಿರಿಯ ನಾಗರಿಕರು, ಸೈನಿಕರು, ದೈಹಿಕ-ಮಾನಸಿಕ ಅಂಗಡಿಕಲರು ವೃತ್ತಿ ತೆರಿಗೆ ಸಲ್ಲಿಸುವ ಅಗತ್ಯ ಇಲ್ಲದಿದ್ದರೂ ‘ನಿಲ್ ರಿಟರ್ನ್ಸ್ ಸಲ್ಲಿಸಬೇಕಿತ್ತು. ಆದರೆ, ‘ನಿಲ್ ರಿಟರ್ನ್ಸ್ ಸಲ್ಲಿಸಲೂ ಕೂಡಾ ಈ ಮಸೂದೆಯಲ್ಲಿ ವಿನಾಯಿತಿ ನೀಡಲಾಗಿದೆ’.

ಪತ್ರಿಕೆ-III: ಸಾಮಾನ್ಯ ಅಧ್ಯಯನ-2

ಪತ್ರಿಕೆ-IV: ಸಾಮಾನ್ಯ ಅಧ್ಯಯನ-3

ದೇಶೀಯ ಪಥದರ್ಶಕ ವ್ಯವಸ್ಥೆಯ ಮತ್ತೊಂದು ಉಪಗ್ರಹ ಕಾರ್ಯಾಚರಣೆ ಸ್ಥಗಿತ

ನಾವಿಕ್‌ಗೆ ಹಿನ್ನಡೆ
ಅದು ಕಾರ್ಗಿಲ್ ಯುದ್ಧದ ಸಂದರ್ಭ. ಪಾಕಿಸ್ತಾನದ ಸೇನಾ ನೆಲೆಗಳ ಬಗ್ಗೆ ಜಿಪಿಎಸ್ (ಜಾಗತಿಕ ಪಥದರ್ಶಕ ಉಪಗ್ರಹ ವ್ಯವಸ್ಥೆಯ) ಮಾಹಿತಿ ನೀಡುವಂತೆ ಭಾರತವು ಅಮೆರಿಕವನ್ನು ಕೋರಿತ್ತು. ಆದರೆ, ಅಮೆರಿಕ ನಿರಾಕರಿಸಿತ್ತು. ದೇಶೀಯ ಪಥದರ್ಶಕ ವ್ಯವಸ್ಥೆಯೊಂದರ ಅಗತ್ಯವಿದೆ ಎಂದು ಭಾರತ ಮನಗಂಡಿದ್ದು ಆಗಲೇ. ಸ್ವದೇಶಿ ಪಥದರ್ಶಕ ಉಪಗ್ರಹ ವ್ಯವಸ್ಥೆ ರೂಪಿಸಲು ಅದೇ ನಾಂದಿಯಾಯಿತು. ಅದರ ಅಭಿವೃದ್ಧಿಯ ಜವಾಬ್ದಾರಿ ಹೊತ್ತುಕೊಂಡಿದ್ದು ಇಸ್ರೋ. 2013ರ ನಂತರ ತನ್ನದೇ ಆದ ಪಥದರ್ಶಕ ವ್ಯವಸ್ಥೆ ರೂಪಿಸಲು ಭಾರತಕ್ಕೆ ಸಾಧ್ಯವಾಗಿದ್ದರೂ ಅದು ಪೂರ್ಣವಾಗಿ ಕಾರ್ಯಾರಂಭ ಮಾಡಿಲ್ಲ.

ಆರಂಭದಿಂದಲೂ ಒಂದಲ್ಲ ಒಂದು ರೀತಿಯ ಸಮಸ್ಯೆ ಎದುರಿಸುತ್ತಲೇ ಬಂದ ಈ ಯೋಜನೆಗೆ, ಈಗ ಗಂಭೀರ ಸ್ವರೂಪದ ಹಿನ್ನಡೆಯೇ ಆಗಿದೆ. ದೀರ್ಘಕಾಲದ ನಿರ್ಲಕ್ಷ್ಯ,, ತಾಂತ್ರಿಕ ವೈಫಲ್ಯಗಳು, ಅವಧಿ ಮೀರಿದ ಉಪಗ್ರಹಗಳು ಮತ್ತು ಬದಲಿ ಉಪಗ್ರಹಗಳ ಉಡಾವಣೆ ವಿಳಂಬದಿಂದಾಗಿ ‘ನಾವಿಕ್’ ಕಾರ್ಯಾರಂಭ ಸ್ಥಗಿತಗೊಳಿಸುವ ಹಂತ ತಲುಪಿದೆ.

‘ನಾವಿಕ್’ ಅನ್ನು ವಿಮಾನಯಾನ, ನೌಕಾಯಾನ, ಸಾರಿಗೆ ವ್ಯವಸ್ಥೆ, ಸೇನೆ, ಪ್ರಕೃತಿ ವಿಕೋಪ ಇನ್ನಿತರ ತುರ್ತು ಪರಿಸ್ಥಿತಿಗಳಲ್ಲಿ ಬಳಸಲಾಗುತ್ತಿದೆ. ಉಪಗ್ರಹಗಳು ನಿಷ್ಕ್ರಿಯವಾಗುತ್ತಿರುವುದರಿಂದ, ಇದು ದೇಶದ ಸ್ಪರ್ಧಾತ್ಮಕತೆ, ಆರ್ಥಿಕತೆ ಮತ್ತು ರಕ್ಷಣಾ ವಲಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಂಭವ ಇದೆ. ಗಗನಯಾನ, ಬಾಹ್ಯಾಕಾಶದಲ್ಲಿ ತನ್ನದೇ ಆದ ನಿಲ್ದಾಣವನ್ನು ಹೊಂದುವ ಬೃಹತ್ ಯೋಜನೆಗಳೆಡೆಗೆ ಇಸ್ರೋ ಅತಿಯಾದ ಒತ್ತು ನೀಡಿದ್ದರಿಂದ ನಾವಿಕ್‌ನಂಥ ಪ್ರಮುಖ ಹಾಗೂ ಯುದ್ಧದಂಥ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಅತ್ಯಗತ್ಯವಾದ ಯೋಜನೆಗೆ ಹಿನ್ನಡೆ ಉಂಟಾಗಿದೆ ಎನ್ನುವ ವಿಶ್ಲೇಷಣೆಗಳು ಕೇಳಿಬರುತ್ತಿವೆ.

ಉಡಾವಣೆ ಮಾಡಿದ ಉಪಗ್ರಹಗಳೆಷ್ಟು?

ಸ್ವಂತದ ಪಥದರ್ಶಕ ವ್ಯವಸ್ಥೆಯನ್ನು ಹೊಂದುವ ಪ್ರಯತ್ನವನ್ನು 2000ದಿಂದಲೇ ಭಾರತ ಆರಂಭಿಸಿತ್ತು. ಇದಕ್ಕಾಗಿ ಎಳು ಉಪಗ್ರಹಗಳ ಗುಚ್ಛವನ್ನು ಆಗಸದಲ್ಲಿ ಸ್ಥಾಪಿಸುವ ಯೋಜನೆ ರೂಪಿಸಿದ ಇಸ್ರೋ, 2013ರ ಜುಲೈ 1ರಂದು ಐಆರ್‌ಎನ್‌ಎಸ್-1ಎ ಉಪಗ್ರಹವನ್ನು ಉಡಾವಣೆ ಮಾಡಿತ್ತು. ಆ ಬಳಿಕ 2016ರವರೆಗೆ ಮತ್ತೆ ಆರು ಉಪಗ್ರಹಗಳನ್ನು (ಐಆರ್‌ಎನ್‌ಎಸ್‌ಎಸ್-1ಬಿ, 1ಸಿ, 1ಡಿ, 1ಇ, 1ಎಫ್, 1ಜಿ) ಕಕ್ಷೆಗೆ ಬಿಟ್ಟಿತ್ತು 2016ರ ಏಪ್ರಿಲ್‌ನಲ್ಲಿ ಐರ್‌ಎನ್‌ಎಸ್‌ಎಸ್-1ಜಿ ಉಪಗ್ರಹವನ್ನು ಉಡಾವಣೆ ಮಾಡುವ ಮೂಲಕ ದೇಶೀಯ ಪಥದರ್ಶಕ ವ್ಯವಸ್ಥೆಯ ಮೊದಲ ಹಂತದ ಯೋಜನೆಯನ್ನು ಇಸ್ರೋ ಪೂರ್ಣಗೊಳಿಸಿತ್ತು. ಆ ಬಳಿಕ ಈ ವ್ಯವಸ್ಥೆಗೆ ‘ನಾವಿಕ್’ ಎಂಬ ಹೆಸರು ಬಂದಿದ್ದು.

ಈ ಉಪಗ್ರಹಗಳ ಕಾರ್ಯಾಚರಣೆ ಅವಧಿ 10 ವರ್ಷಗಳು, 1ಎ ಉಪಗ್ರಹ ಸ್ವಲ್ಪ ಬೇಗವೇ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು. ಹೀಗಾಗಿ, ಅದರ ಬದಲಿಗೆ 2017ರಲ್ಲಿ ಆಗಸ್ಟ್-31ರಂದು ಐಆರ್‌ಎನ್‌ಎಸ್‌ಎಸ್-1ಎಚ್ ಉಪಗ್ರಹವನ್ನು ಇಸ್ರೋ ಉಡಾವಣೆ ಮಾಡಿತ್ತು. ಆದರೆ, ಅದನ್ನು ಕಕ್ಷೆಗೆ ಸೇರಿಸುವಲ್ಲಿ ವಿಫಲವಾಗಿತ್ತು. 2018ರ ಏಪ್ರಿಲ್ 12ರಂದು ಐಆರ್‌ಎನ್‌ಎಸ್‌ಎಸ್ 1ಐ ಉಪಗ್ರಹವನ್ನು ಇಸ್ರೋ ಉಡಾವಣೆ ಮಾಡಿ ಕಕ್ಷೆಯಲ್ಲಿ ಕೂರಿಸಿದೆ. ಈ ‘ನಾವಿಕ್‌ಗೆ ಇನ್ನಷ್ಟು ಬಲ ತುಂಬುವ ಉದ್ದೇಶದಿಂದ ಇಸ್ರೋ 2023ರಲ್ಲಿ ‘ಎನ್‌ವಿಎಸ್-01 ಹೆಸರಿನ ಹೊಸ ಪೀಳಿಗೆಯ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. 2025ರ ಜನವರಿಯಲ್ಲಿ ‘ಎನ್‌ವಿಎಸ್-02’ ಉಪಗ್ರಹದ ಉಡಾವಣೆ ಯಶಸ್ವಿಯಾಗಿದ್ದರೂ ತಾಂತ್ರಿಕ ಕಾರಣದಿಂದ ಅದು ಕಕ್ಷೆಗೆ ಸೇರಲು ವಿಫಲಗೊಂಡಿತ್ತು.

2013ರಿಂದ ಇಲ್ಲಿಯವರೆಗೆ ‘ನಾವಿಕ್’ಗಾಗಿ ಇಸ್ರೋ ಒಟ್ಟು 11 ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಇವುಗಳಲ್ಲಿ ಒಂಬತ್ತು ಮೊದಲ ಪೀಳಿಗೆಯ ಉಪಗ್ರಹಗಳಾಗಿದ್ದರೆ, ಎರಡು ಉಪಗ್ರಹಗಳು ಎರಡನೇ ಪೀಳಿಗೆಯವು.

ಜಿಪಿಎಸ್ ಒಂದೇ ಅಲ್ಲ

ಜಗತ್ತಿನಲ್ಲಿ ನಾಲ್ಕು ಜಾಗತಿಕ ಪಥದರ್ಶಕ ಉಪಗ್ರಹ ವ್ಯವಸ್ಥೆಗಳಿವೆ. ಅವುಗಳೆಂದರೆ, ಅಮೆರಿಕದ ‘ಜಿಪಿಎಸ್’ (31 ಉಪಗ್ರಹಗಳು), ರಷ್ಯಾದ ‘ಜಿಎಲ್‌ಎನ್‌ಎಎನ್ಎಸ್ಎಸ್’ (24 ಉಪಗ್ರಹಗಳು), ಚೀನಾದ ‘ಬೈದೊ’ (40ಕ್ಕೂ ಹೆಚ್ಚು ಉಪಗ್ರಹಗಳು) ಮತ್ತು ಐರೋಪ್ಯ ಒಕ್ಕೂಟದ ಗೆಲಿಲಿಯೊ (30 ಉಪಗ್ರಹಗಳು).

ಜಪಾನ್ ನಾಲ್ಕು ಉಪಗ್ರಹಗಳನ್ನು ಒಳಗೊಂಡ ಕ್ಯುಜಡ್‌ಎಸ್‌ಎಸ್ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆಯನ್ನು ಒಳಗೊಂಡಿದೆ. ಪ್ರಾದೇಶಿಕ ಪಥದರ್ಶಕ ವ್ಯವಸ್ಥೆ ವ್ಯವಸ್ಥಿತವಾಗಿ ಕಾರ್ಯಾಚರಿಸಲು ಕನಿಷ್ಠ ಮೂರರಿಂದ ನಾಲ್ಕು ಉಪಗ್ರಹಗಳು ಅಗತ್ಯ.

ಭಾರತವು ಮೊದಲು ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆ ರೂಪಿಸಿ ನಂತರ ಅದನ್ನು ಜಾಗತಿಕ ಪಥದರ್ಶಕ ಉಪಗ್ರಹ ವ್ಯವಸ್ಥೆಯಾಗಿ ಪರಿವರ್ತಿಸುವ ಯೋಜನೆ ಹೊಂದಿತ್ತು. ಆದರೆ, ಈಗ ಪ್ರಾದೇಶಿಕ ವ್ಯವಸ್ಥೆಯೇ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.

ಪರಮಾಣು ಗಡಿಯಾರ ಎಂದರೇನು?

ಇದು ಪಥದರ್ಶಕ ಉಪಗ್ರಹದ ಬಹುಮುಖ್ಯ ಭಾಗ. ಅಣುಗಳ ಕಂಪನವನ್ನು ಆಧರಿಸಿ ಸಮಯವನ್ನು ಅತ್ಯಂತ ಖಚಿತವಾಗಿ ಅಳೆಯುವ ತಂತ್ರಜ್ಞಾನವೇ ಪರಮಾಣು ಗಡಿಯಾರ. ಪರಮಾಣುಗಳಲ್ಲಿ ಇರುವ ಎಲೆಕ್ಟ್ರಾನ್‌ಗಳ ಚಲನೆಯನ್ನು ಆಧರಿಸಿ ಸಮಯವನ್ನು ಅಳೆಯಲಾಗುತ್ತದೆ.ಈ ಗಡಿಯಾರಗಳಲ್ಲಿ ಪರಮಾಣುಗಳಲ್ಲಿರುವ ಎಲೆಕ್ಟ್ರಾನ್‌ಗಳನ್ನು ಪ್ರಚೋದಿಸಲಾಗುತ್ತದೆ. ಎಲೆಕ್ಟ್ರಾನ್ ಗಳಲ್ಲಿ ಬೇರೆ, ಬೇರೆ ಶಕ್ತಿಗಳು ಇರುವುದರಿಂದ ಇವನ್ನು ಒಂದೇ ನೆಲೆಗೆ ತಂದು ಅನಂತರ ಕಾಲವನ್ನು ಅಳೆಯಬೇಕು. ಇದಕ್ಕಾಗಿ ಲೇಸರ್ ಇಲ್ಲವೇ ಮೈಕ್ರೋವೇವ್‌ಗಳನ್ನು ಬಳಸುತ್ತಾರೆ. ಪರಮಾಣು ಗಡಿಯಾರಗಳಲ್ಲಿ ಸಾಮಾನ್ಯವಾಗಿ ಸೀಸಿಯಂ ಮತ್ತು ರುಬಿಡಿಯಂ ಪರಮಾಣುಗಳನ್ನು ಬಳಸುತ್ತಾರೆ.

ಪರಮಾಣು ಗಡಿಯಾರಗಳು ಯಾವುದೇ ಒಂದು ಪಥದರ್ಶಕ ಉಪಗ್ರಹ ವ್ಯವಸ್ಥೆಯ ಹೃದಯವಿದ್ದಂತೆ. ಇದು ವಿಫಲಗೊಂಡರೆ, ಆ ಉಪಗ್ರಹಗಳು ನಿಖರ ಸಮಯವನ್ನು ಅಳೆಯುವುದು ಸಾಧ್ಯವಿಲ್ಲ. ಆರಂಭದಲ್ಲಿ ಭಾರತವು ಪರಮಾಣು ಗಡಿಯಾರಗಳನ್ನು ವಿದೇಶಗಳಿಂದ ತರಿಸಿಕೊಳ್ಳುತ್ತಿತ್ತು. ನಂತರ ಅದರ ಮಹತ್ವ ಅರಿತ ಇಸ್ಕೊ, ಸ್ವದೇಶಿ ಪರಮಾಣು ಗಡಿಯಾರಗಳ ತಯಾರಿಕೆಯಲ್ಲಿ ತೊಡಗಿತ್ತು ಎನ್‌ವಿಎಸ್-01 ನಲ್ಲಿ ದೇಶಿಯಾವಾಗಿ ಅಭಿವೃದ್ಧಿ ಪಡಿಸಿದ ಗಡಿಯಾರಗಳನ್ನು ಬಳಸಲಾಗಿದೆ.

ಅತ್ಯಂತ ನಿಖರವಾದ ಸಮಯದ ಅಳತೆ ಬೇಡುವ ಪಥದರ್ಶಕ ಉಪಗ್ರಹ ವ್ಯವಸ್ಥೆ, ಸಂಶೋಧನೆ, ದೂರಸಂಪರ್ಕ, ಉದ್ಯಮಗಳು ಮುಂತಾದ ವಲಯಗಳಲ್ಲಿ ಪರಮಾಣು ಗಡಿಯಾರಗಳನ್ನು ಬಳಸುತ್ತಾರೆ.

ಮುಂದೇನು?

ಪಥದರ್ಶಕ ವ್ಯವಸ್ಥೆಯನ್ನು ಬಲಪಡಿಸುವ ಇರಾದೆ ಇಸ್ರೋಗೆ ಇದ್ದರೂ, ಹಳೆಯ ಉಪಗ್ರಹಗಳಿಗೆ ಬದಲಿ ಹೊಸ ಉಪಗ್ರಹಗಳನ್ನು ಕಳುಹಿಸುವ ಪ್ರಕ್ರಿಯೆ ನಿಧಾನವಾಗಿರುವುದು, 2025ರಲ್ಲಿ ಎನ್‌ವಿಎಸ್-02 ಉಪಗ್ರಹ ಉಡಾವಣಾ ವೈಫಲ್ಯ ಈ ಮಹತ್ವಾಕಾಂಕ್ಷಿ ಯೋಜನೆಗೆ ತೀವ್ರ ಹಿನ್ನಡೆ ಉಂಟುಮಾಡಿದೆ.

ಕಾರ್ಯಾಚರಣೆ ಸ್ಥಗಿತಗೊಳಿಸಿರುವ ಮತ್ತು ಹಳೆಯ ಉಪಗ್ರಹಗಳ ಬದಲಿಗೆ 2026ರ ವರ್ಷಾಂತ್ಯದ ವೇಳೆಗೆ ಮೂರು ಉಪಗ್ರಹಗಳನ್ನು ಉಡಾವಣೆ ಮಾಡುವುದಾಗಿ ಇಸ್ರೋ ಈ ಹಿಂದೆ ಹೇಳಿತ್ತು ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

ಏನಿದು ‘ನಾವಿಕ್ ?

ನಾವಿಕ್‌ (NaviC) ವಿಸ್ತ್ರತ ರೂಪ ನ್ಯಾವಿಗೇಷನ್ ವಿತ್ ಇಂಡಿಯನ್ ಕಾನ್‌ಸ್ಟಲೇಷನ್ ಕನ್ನಡದಲ್ಲಿ ಹೇಳುವುದಾದರೆ, ಭಾರತದ ಉಪಗ್ರಹಗಳ ಗುಚ್ಛದ ಮೂಲಕ ಪಥದರ್ಶನ. ಇದರ ಮೂಲ ಹೆಸರು ಭಾರತೀಯ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆ (ಐಆರ್‌ಎನ್‌ಎಸ್‌ಎಸ್–ಇಂಡಿಯನ್ ರೀಜನಲ್ ನ್ಯಾವಿಗೇಷನ್ ಸ್ಯಾಟಿಲೈಟ್ ಸಿಸ್ಟಮ್). ಇದು, ಅಮೆರಿಕದ ಜಿಪಿಎಸ್ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್) ಮಾದರಿಯಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ). ಸ್ವತಂತ್ರವಾಗಿ ಮತ್ತು ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ಪಥದರ್ಶಕ ವ್ಯವಸ್ಥೆ, 2016ರಲ್ಲಿ ಇದಕ್ಕೆ ‘ನಾವಿಕ್’ ಎಂದು ಮರುನಾಮಕರಣ ಮಾಡಲಾಯಿತು.

ಭೂಸ್ಥಿರ ಮತ್ತು ಭೂಸಮನ್ವಯ ಕಕ್ಷೆಗಳಲ್ಲಿ ಸುತ್ತುತ್ತಿರುವ ಏಳು ಉಪಗ್ರಹಗಳ ಗುಚ್ಛವು ಜಿಪಿಎಸ್ ಮಾದರಿಯಲ್ಲಿ ಪಥದರ್ಶನ (ದಿಕ್ಕು), ನಿಖರ ಸ್ಥಳದ ಮಾಹಿತಿ (ಪೊಸಿಷನಿಂಗ್) ಮತ್ತು ಸಮಯದ (ಟೈಮಿಂಗ್) ಮಾಹಿತಿ ನೀಡುತ್ತದೆ. ಭಾರತದ ಸಂಪೂರ್ಣ ಭೂಭಾಗ ಮತ್ತು ಸುತ್ತಲಿನ 1,500 ಕಿ.ಮೀ. ವ್ಯಾಪ್ತಿಯಲ್ಲಿ ನಿಖರ ಪಥದರ್ಶನ, ಸ್ಥಳದ ಮಾಹಿತಿ ನೀಡುವ ಸಾಮರ್ಥ್ಯ ಇದು ಹೊಂದಿದೆ (ಅಮೆರಿಕ, ರಷ್ಯಾ, ಚೀನಾ, ಯುರೋಪಿನ ಪಥದರ್ಶಕ ವ್ಯವಸ್ಥೆಯು ಇಡೀ ಜಗತ್ತನ್ನೇ ವ್ಯಾಪಿಸಿವೆ).

ಏನೆಲ್ಲಾ ಸೇವೆ?

ಪ್ರಮುಖವಾಗಿ ಎರಡು ಸೇವೆಗಳನ್ನು ಇದು ನೀಡುತ್ತದೆ. ಒಂದು ನಿಗದಿತ ಸ್ಥಳದ ಮಾಹಿತಿ ಸೇವೆ (ಸ್ಯಾಂಡರ್ಡ್ ಪೊಸಿಷನಿಂಗ್ ಸರ್ವಿಸ್ -ಎಸ್‌ಪಿಎಸ್). ಎಲ್ಲ ಬಳಕೆದಾರರಿಗೆ ಅಂದರೆ, ಸಾರ್ವಜನಿಕರಿಗೆ ಈ ಸೇವೆ ಲಭ್ಯ ಇನ್ನೊಂದು ನಿರ್ಬಂಧಿತ ಸೇವೆ (ರಿಟೈಡ್ ಸರ್ವಿಸ್-ಆರ್‌ಎಸ್) ಸೇನೆ ಮುಂತಾದ ಅಧಿಕೃತ ಬಳಕೆದಾರರಿಗೆ ಮಾತ್ರ ಈ ಸೇವೆಯನ್ನು ಇಸ್ಕೊ ನೀಡುತ್ತದೆ. ಇಸ್ಕೊ ಪ್ರಕಾರ, ಈ ವ್ಯವಸ್ಥೆಯು ಬಳಕೆದಾರ ಇರುವ ಸ್ಥಳದ ಮಾಹಿತಿಯನ್ನು ನಿಖರವಾಗಿ ಹೇಳುವ (ಗುರುತಿಸಿದ ಸ್ಥಳದ 20 ಮೀಟರ್ ವ್ಯಾಪ್ತಿಯ ಒಳಗೆ) ಸಾಮರ್ಥ್ಯವನ್ನು ಹೊಂದಿದೆ.

ಯಾವುದಕ್ಕೆ ಬಳಕೆ?

ದೇಶದಲ್ಲಿ ವಿಮಾನಯಾನ, ನೌಕಾಯಾನ, ರೈಲ್ವೆ, ಸೇನೆ ಉದ್ದೇಶಗಳು, ಪ್ರವಾಹ, ಭೂಕುಸಿತ, ಚಂಡಮಾರುತದಂತಹ ಪ್ರಾಕೃತಿಕ ವಿಕೋಪದ ತುರ್ತು ಪರಿಸ್ಥಿತಿಗಳಲ್ಲಿ ‘ನಾವಿಕ್ ಅನ್ನು ಬಳಸಲಾಗುತ್ತಿದೆ. ಜನಸಮಾನ್ಯರಿಗೆ ಇದು ಲಭ್ಯವಿದ್ದರೂ, ಇದನ್ನು ಬಳಸುವವರ ಸಂಖ್ಯೆ ಕಡಿಮೆ ಜಿಪಿಎಸ್‌ನಷ್ಟು ಜನಪ್ರಿಯತೆ ಪಡೆದಿಲ್ಲ.

ಈಗ ಏನಾಗಿದೆ?

ಪಥದರ್ಶಕ ವ್ಯವಸ್ಥೆಗಾಗಿ ಇಸ್ರೋ, 2013ರಿಂದ 2018ರವರೆಗೆ ಒಂಬತ್ತು ಉಪಗ್ರಹಗಳನ್ನು ಉಡಾವಣೆ ಮಾಡಿತ್ತು ಅದರಲ್ಲಿ ಎಂಟು ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿತ್ತು. ಪಥದರ್ಶಕ ಉಪಗ್ರಹಗಳಲ್ಲಿ ಪರಮಾಣು ಗಡಿಯಾರ ಅತ್ಯಂತ ಪ್ರಮುಖ ಸಾಧನವಾಗಿದ್ದು, ಅದು ಕಾರ್ಯಸ್ಥಗಿತಗೊಳಿಸಿದರೆ ಉಪಗ್ರಹದ ಕಾರ್ಯಾಚರಣೆ ಬಹುತೇಕ ಸ್ಥಗಿತಗೊಳ್ಳುತ್ತದೆ. 2025ರಲ್ಲಿ ಆರ್‌ಟಿಐ ಅರ್ಜಿಯೊಂದಕ್ಕೆ ಪ್ರತಿಕ್ರಿಯಿಸಿದ್ದ ಇಸ್ಕೊ, ಎಂಟರ ಪೈಕಿ ಐದು ಉಪಗ್ರಹಗಳಲ್ಲಿನ (1ಎ, 1ಸಿ, 1ಡಿ, 1ಇ, 1ಜಿ) ಪರಮಾಣು ಗಡಿಯಾರಗಳು ಸ್ಥಗಿತಗೊಂಡಿದ್ದು. (ಒಂದು ಉಪಗ್ರಹದಲ್ಲಿ ಮೂರು ಗಡಿಯಾರಗಳಿರುತ್ತವೆ) ನಾವಿಕ್‌ಗೆ ಅವುಗಳ ಸೇವೆ ಸಿಗುತ್ತಿಲ್ಲ ಎಂದು ಹೇಳಿತ್ತು.

ಇದೇ 13ರಂದು ಇಸ್ರೋ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಈ ಯೋಜನೆಯ ಅಡಿ ಉಡಾವಣೆ ಮಾಡಿದ್ದ 1ಎಫ್ ಉಪಗ್ರಹವು ತನ್ನ 10 ವರ್ಷಗಳ ಕಾರ್ಯಾಚರಣೆ ಅವಧಿಯನ್ನು ಮಾರ್ಚ್ 10ಕ್ಕೆ ಪೂರೈಸಿದೆ. ಅದರಲ್ಲಿರುವ ಪರಮಾಣು ಗಡಿಯಾರವು ಮಾರ್ಚ್ 13ರಂದು ಸ್ಥಗಿತಗೊಂಡಿದೆ. ಆದರೂ, ಉಪಗ್ರಹವು ಕಕ್ಷೆಯಲ್ಲಿ ಕಾರ್ಯಾಚರಣೆ ಮುಂದುವರಿಸಲಿದೆ. ಏಕಮುಖ ಸಂದೇಶ ಕಳುಹಿಸುವ ಉದ್ದೇಶಕ್ಕೆ ಇದು ಬಳಕೆಯಾಗಲಿದೆ’ ಎಂದು ಹೇಳಿದೆ.

ಇದರೊಂದಿಗೆ, ಬಾಕಿ ಉಳಿದಿದ್ದ ಮೂರು ಉಪಗ್ರಹಗಳ (1ಬಿ, 1ಎಫ್ ಮತ್ತು 1ಐ) ಪೈಕಿ ಮತ್ತೊಂದು ನಿಷ್ಕ್ರಿಯವಾದಂತಾಗಿದೆ. ಹೀಗಾಗಿ, ಮೊದಲು ಕಳುಹಿಸಿದ್ದ ಎರಡು ಉಪಗ್ರಹಗಳೊಂದಿಗೆ, 2023ರಲ್ಲಿ ಕಕ್ಷೆ ಸೇರಿಸಿರುವ ಎನ್‌ವಿಎಸ್-01 ಸೇರಿದಂತೆ ಒಟ್ಟು ಮೂರು ಉಪಗ್ರಹಗಳು ಮಾತ್ರ ‘ನಾವಿಕ್’ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿವೆ.

ಪತ್ರಿಕೆ-V: ಸಾಮಾನ್ಯ ಅಧ್ಯಯನ-4

Sources: Prajavani

ಕೆಎಎಸ್ ಪ್ರಚಲಿತ ವಿದ್ಯಮಾನಗಳು

ಪೂರ್ವಭಾವಿ ಪರೀಕ್ಷೆ

ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು

ದಾಖಲೆ ಬರೆದ ಪ್ರಧಾನಿ ಮೋದಿ
ಸಂದರ್ಭ:
ಮುಖ್ಯಮಂತ್ರಿ ಮತ್ತು ಪ್ರಧಾನಿಯಾಗಿ 8931 ದಿನಗಳನ್ನು ಪೂರೈಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಜೀವನದಲ್ಲಿ ದಾಖಲೆ ಬರೆದಿದ್ದಾರೆ.

  • ಪವನ್ ಕುಮಾರ್ ಚಾಮ್ಮಿಂಗ್ ಅವರು ಸಿಕ್ಕಿಂ ಮುಖ್ಯಮಂತ್ರಿಯಾಗಿ 8930 ದಿನ ಪೂರೈಸುವ ಮೂಲಕ ದೇಶದಲ್ಲಿಯೇ ದೀರ್ಘಾವಧಿಗೆ ಸರ್ಕಾರದ ಮುಖ್ಯಸ್ಥರಾಗಿದ್ದ ಖ್ಯಾತಿ ಹೊಂದಿದ್ದರು. ಇದೀಗ ಮೋದಿ ಅವರು ಚಾಮಿಂಗ್ ದಾಖಲೆಯನ್ನು ಮುರಿದಿದ್ದಾರೆ.

ಭಾರತದ ಸುದೀರ್ಘ ಅವಧಿಯ ಸರ್ಕಾರದ ಮುಖ್ಯಸ್ಥರು (CM ಮತ್ತು PM)

ಶ್ರೇಣಿನಾಯಕರ ಹೆಸರುಒಟ್ಟು ದಿನಗಳುರಾಜ್ಯ / ಕೇಂದ್ರಾಡಳಿತ ಪ್ರದೇಶ
1ನರೇಂದ್ರ ಮೋದಿ8,931+ಗುಜರಾತ್ (ಸಿಎಂ ಆಗಿ) ಮತ್ತು ಭಾರತ (ಪಿಎಂ ಆಗಿ)
2ಪವನ್ ಕುಮಾರ್ ಚಾಮ್ಲಿಂಗ್8,930ಸಿಕ್ಕಿಂ
3ನವೀನ್ ಪಟ್ನಾಯಕ್8,800+ಒಡಿಶಾ
4ಜ್ಯೋತಿ ಬಸು8,539ಪಶ್ಚಿಮ ಬಂಗಾಳ
5ಗೆಗಾಂಗ್ ಅಪಾಂಗ್8,156ಅರುಣಾಚಲ ಪ್ರದೇಶ
6ಲಾಲ್ ತನ್ಹಾವ್ಲಾ7,746ಮಿಜೋರಾಂ
7ವೀರಭದ್ರ ಸಿಂಗ್7,642ಹಿಮಾಚಲ ಪ್ರದೇಶ
8ಮಾಣಿಕ್ ಸರ್ಕಾರ್7,300ತ್ರಿಪುರಾ
9ಎಂ. ಕರುಣಾನಿಧಿ6,863ತಮಿಳುನಾಡು
10ಪ್ರಕಾಶ್ ಸಿಂಗ್ ಬಾದಲ್6,835ಪಂಜಾಬ್

ಕರ್ನಾಟಕದ ಸುದೀರ್ಘ ಅವಧಿಯ ಮುಖ್ಯಮಂತ್ರಿಗಳು

ಶ್ರೇಣಿಹೆಸರುಅಧಿಕಾರದಲ್ಲಿದ್ದ ಒಟ್ಟು ದಿನಗಳುಆಡಳಿತದ ಮುಖ್ಯಾಂಶಗಳು
1ಡಿ. ದೇವರಾಜ್ ಅರಸು2,907ಭೂ ಸುಧಾರಣೆ ಮತ್ತು ಸಾಮಾಜಿಕ ನ್ಯಾಯದ ಹರಿಕಾರ; ಎರಡು ಅವಧಿಗೆ ಸೇವೆ (1972-77 ಮತ್ತು 1978-80).
2ಎಸ್. ನಿಜಲಿಂಗಪ್ಪ2,739ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿ; ಮೂರು ಪ್ರತ್ಯೇಕ ಅವಧಿಗಳಲ್ಲಿ ಸೇವೆ (1956-58, 1962-67, 1967-68).
3ಸಿದ್ದರಾಮಯ್ಯ2,870+ (ಮುಂದುವರಿಯುತ್ತಿದೆ)ಪೂರ್ಣ 5 ವರ್ಷಗಳ ಅವಧಿ (2013-18) ಪೂರೈಸಿದವರು ಮತ್ತು ಪ್ರಸ್ತುತ ಎರಡನೇ ಅವಧಿಗೆ (2023–ಪ್ರಸ್ತುತ) ಸೇವೆ ಸಲ್ಲಿಸುತ್ತಿದ್ದಾರೆ.
4ರಾಮಕೃಷ್ಣ ಹೆಗಡೆ2,036ಕರ್ನಾಟಕದ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿ; 1983 ಮತ್ತು 1988 ರ ನಡುವೆ ಮೂರು ಅವಧಿಗಳಲ್ಲಿ ಸೇವೆ.
5ಬಿ. ಎಸ್. ಯಡಿಯೂರಪ್ಪ1,911ನಾಲ್ಕು ಪ್ರತ್ಯೇಕ ಅವಧಿಗಳಲ್ಲಿ ಸೇವೆ; ಕರ್ನಾಟಕದಲ್ಲಿ ಅತಿ ಹೆಚ್ಚು ಬಾರಿ (4 ಬಾರಿ) ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ದಾಖಲೆ.
6ಎಸ್. ಎಂ. ಕೃಷ್ಣ1,659ಬೆಂಗಳೂರಿನ “ಐಟಿ/ಬಿಟಿ (IT/BT) ಕ್ರಾಂತಿ”ಯ ರೂವಾರಿ ಎಂದು ಪರಿಗಣಿಸಲಾಗುತ್ತದೆ (1999-2004).

ವಿಶ್ವ ಒಳಾಂಗಣ ಅಥ್ಲೆಟಿಕ್ಸ್‌ನಲ್ಲಿ ಸತತ ನಾಲ್ಕನೇ ಚಿನ್ನ: ಪೋಲ್‌ವಾಲ್ಟ್: ಡುಪ್ಲಾಂಟಿಸ್ ದಾಖಲೆ
ಸಂದರ್ಭ:
ಟೊರುನ್ (ಪೋಲೆಂಡ್) ಪೋಲ್ ವಾಲ್ಸ್ ತಾರೆ ಅರ್ಮಾಂಡ್ ಡುಪ್ಯಾಂಟಿಸ್ ಅವರು ವಿಶ್ವ ಒಳಾಂಗಣ ಅಥ್ಲೆಟಿಕ್ಸ್‌ನಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು.

  • ಸ್ವೀಡನ್‌ ಡುಪ್ಲಾಂಟಿಸ್ 6.25 ಮೀಟರ್ ಎತ್ತರ ಜಿಗಿದರು ವರ್ಷದ ಹಿಂದೆ ನಾನ್‌ಜಿಂಗ್‌ನಲ್ಲಿ ತೋರಿದ ಸಾಧನೆಗಿಂತ 10 ಸೆಂಟಿಮೀಟರ್ ಎತ್ತರ ಜಿಗಿದು, ತನ್ನದೇ ದಾಖಲೆಯನ್ನು ಉತ್ತಮ ಪಡಿಸಿಕೊಂಡರು. ಈ ಮೂಲಕ ವಿಶ್ವ ಒಳಾಂಗಣ ಕೂಟದಲ್ಲಿ ಸತತ ನಾಲ್ಕನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡರು.
  • 26 ವರ್ಷದ ಡುಪ್ಲಾಂಟಿಸ್ ಕ್ರಮವಾಗಿ 6.10, 6.15 ಮತ್ತು 6.25 ಮೀಟರ್ ಎತ್ತರವನ್ನು ಯಶಸ್ವಿಯಾಗಿ ದಾಟಿದರು. ಗ್ರೀಸ್‌ನ ಇಮ್ಯಾನುವಲ್ ಕರಾಲಿಸ್ ಅವರು 6.15 ಮೀಟರ್ ಜಿಗಿದು ಸತತ ಎರಡನೇ ಬಾರಿ ಬೆಳ್ಳಿ ತಮ್ಮದಾಗಿಸಿಕೊಂಡರು.
  • ಡುಪ್ಪಾಂಟಿನ್ ಮಾರ್ಚ್ 12ರಂದುಮೊಂಡೊ ಕ್ಲಾಸಿಕ್ ಕೂಟದಲ್ಲಿ 6.31 ಮೀ. ಸಾಧನೆಯೊಂದಿಗೆ ವಿಶ್ವದಾಖಲೆ ನಿರ್ಮಿಸಿದ್ದರು ಅದನ್ನು ಮುರಿಯುವ ಪ್ರಯತ್ನ (6.32 ಮೀ.) ಇಲ್ಲಿ ನಡೆಸಿದರು. ಆದರೆ, ಅದು ಸಾಧ್ಯವಾಲಿಲ್ಲ.
  • ಆಸ್ಟ್ರೇಲಿಯಾದ ಕುರ್ಟಿಸ್ ಮಾರ್ಷಲ್ ವೈಯಕ್ತಿಕ ಅತ್ಯುತ್ತಮ 6 ಮೀಟರ್ ಸಾಧನೆಯೊಂದಿಗೆ ಮೂರನೇ ಸ್ನಾನ ಪಡೆದರು. ಕೂಟದ ಇತಿಹಾಸದಲ್ಲಿ ಮೊದಲ ಬಾರಿಗೆ ಮೂರು ಸ್ಪರ್ಧಿಗಳು ಆರು ಮೀಟರ್ ಗಡಿ ದಾಟಿದರು.
  • ಸ್ವಿಟ್ಸರ್ಲೆಂಡ್‌ನ ಸೈಮನ್ ಹ್ಯಾಮರ್ ವಿಶ್ವದಾಖಲೆಯ ಅಂಕ (6,670) ಗಳಿಸಿ ಹೆಪ್ಪಾಥಾನ್ ಪ್ರಶಸ್ತಿ ಗೆದ್ದರು. 2012ರಲ್ಲಿ ಅಮೆರಿಕದ ಆತ್ಮನ್ ಈಟನ್ (6645) ನಿರ್ಮಿಸಿದ ದಾಖಲೆಯನ್ನು ಸೈಮನ್ ಮುರಿದರು.


ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು
‘ತೇಜಸ್ವಿನಿಗೆ ‘ಅಕ್ಕ ಪ್ರಶಸ್ತಿ’

ಸಂದರ್ಭ: ಮಹಾಲಿಂಗಪುರ (ಬಾಗಲಕೋಟಿ ಜಿಲ್ಲೆ) ಸಮೀಪದ ಚಿಮ್ಮಡ ಗ್ರಾಮದ ವಿರಕ್ತಮಠದಿಂದ ಅಕ್ಕ ಮಹಾದೇವಿ ಜಯಂತಿ ಅಂಗವಾಗಿ ಪ್ರತಿ ವರ್ಷ ನೀಡುವ ರಾಜ್ಯಮಟ್ಟದ ‘ಅಕ್ಕ ಪ್ರಶಸ್ತಿ’ಗೆ ಕೇಂದ್ರದ ಮಾಜಿ ಸಚಿವ ದಿ.ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಭಾಜನರಾಗಿದ್ದಾರೆ.

  • ತೇಜಸ್ವಿನಿ ಅನಂತಕುಮಾರ್ ಅವರ ಸಾಮಾಜಿಕ ಸೇವೆ ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಏ.2ರಂದು ಶ್ರೀಮಠದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವಿರಕ್ತಮಠದ ಪ್ರಭು ಸ್ವಾಮೀಜಿ ತಿಳಿಸಿದ್ದಾರೆ.

ಮುಖ್ಯ ಪರೀಕ್ಷೆ

ಪತ್ರಿಕೆ-I: ಪ್ರಬಂಧಗಳು

ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ

“ಭಾರತದ ವಿದೇಶಾಂಗ ನೀತಿಯಲ್ಲಿ ಪಶ್ಚಿಮ ಏಷ್ಯಾದೊಂದಿಗಿನ ಸಂಬಂಧವು ಅತ್ಯಂತ ಕಾರ್ಯತಂತ್ರದ ಆದ್ಯತೆಗಳಲ್ಲಿ ಒಂದಾಗಿದೆ. ಇದು ಇಂಧನ ಅವಲಂಬನೆ, ಅನಿವಾಸಿ ಭಾರತೀಯರ ಸಂಬಂಧಗಳು, ವ್ಯಾಪಾರ ಮತ್ತು ಬದಲಾಗುತ್ತಿರುವ ಭೌಗೋಳಿಕ ರಾಜಕೀಯ ಸವಾಲುಗಳಿಂದ ರೂಪಿತವಾಗಿದೆ. ಗಲ್ಫ್ ರಾಷ್ಟ್ರಗಳೊಂದಿಗಿನ ಆರ್ಥಿಕ ಸಹಕಾರ, ಇರಾನ್ ಮತ್ತು ಇರಾಕ್‌ನೊಂದಿಗಿನ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಸಂಬಂಧಗಳು ಮತ್ತು ಇಸ್ರೇಲ್ ಹಾಗೂ ಪ್ಯಾಲೆಸ್ಟೈನ್ ನಡುವಿನ ಸೂಕ್ಷ್ಮ ರಾಜತಾಂತ್ರಿಕತೆಯನ್ನು ಭಾರತವು ಹೇಗೆ ಸಮತೋಲನಗೊಳಿಸುತ್ತದೆ ಎಂಬುದನ್ನು ಚರ್ಚಿಸಿ.”

ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ

“ಮಹದಾಯಿ ಜಲ ವಿವಾದ: ಕರ್ನಾಟಕದ ಅಭಿವೃದ್ಧಿ ಅಗತ್ಯಗಳನ್ನು ಪರಿಸರ ಮತ್ತು ಅಂತರರಾಜ್ಯ ಕಾಳಜಿಗಳೊಂದಿಗೆ ಸಮತೋಲನಗೊಳಿಸುವುದು”

ಪತ್ರಿಕೆ-II: ಸಾಮಾನ್ಯ ಅಧ್ಯಯನ-1

ಪತ್ರಿಕೆ-III: ಸಾಮಾನ್ಯ ಅಧ್ಯಯನ-2

ನಿಷೇಧ: ಆರು ವರ್ಷ ಹಲವು ಕಾಯ್ದೆ
ಮೌಡ್ಯ

  • ರಾಜ್ಯದಲ್ಲಿರುವ ಅಮಾನವೀಯ ಆಚರಣೆಗಳು, ಮಾಟ-ಮಂತ್ರ ಮತ್ತು ವಾಮಾಚಾರ ಇನ್ನಿತರ ಮೌಡ್ಯದ ಆಚರಣೆಗಳನ್ನು ತಡೆಗಟ್ಟುವ ಉದ್ದೇಶದಿಂದ ‘ಮೌಡ್ಯ ನಿಷೇಧ ಕಾಯ್ದೆ-2020 (ಮೌಡ್ಯ ನಿರ್ಬಂಧ ಮತ್ತು ನಿರ್ಮೂಲನಾ ಕಾಯ್ದೆ) ಅನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಇದರ ಪ್ರಕಾರ, ಮಡೆಸ್ನಾನ, ಬೆತ್ತಲೆ ಮೆರವಣಿಗೆ ಮತ್ತು ದೈಹಿಕ ಹಿಂಸೆ ನೀಡುವ ಮೂಢನಂಬಿಕೆಗಳನ್ನು ಪಾಲಿಸುವುದು ಶಿಕ್ಷಾರ್ಹ ಅಪರಾಧ. ಸಮಾಜದಲ್ಲಿ ಶೋಷಣೆಗೆ ಕಾರಣವಾಗುವ ಅನಿಷ್ಟ ಆಚರಣೆಗಳನ್ನು ಮಾತ್ರ ಕಾಯ್ದೆ ನಿಷೇಧಿಸುತ್ತದೆ.
  • ದೇವಸ್ಥಾನ, ಮಸೀದಿ, ಚರ್ಚ್ ಇತ್ಯಾದಿಗಳಲ್ಲಿ ನಡೆಯುವ ಸಾಂಪ್ರದಾಯಿಕ ಪೂಜೆಗಳು ಮತ್ತು ಧಾರ್ಮಿಕ ಆಚರಣೆಗಳಿಗೆ ಯಾವುದೇ ಅಡ್ಡಿ ಇಲ್ಲ. ಆದರೆ ದೈಹಿಕ ಹಿಂಸೆ ಇರಬಾರದು. ಸಮಾಜದಲ್ಲಿ ಆಜ್ಞಾನದಿಂದ ನಡೆಯುವ ಶೋಷಣೆಯನ್ನು ತಡೆಯುವುದು ಮತ್ತು ವೈಜ್ಞಾನಿಕ ಮನೋಭಾವವನ್ನು ಮೂಡಿಸುವುದು; ದುರ್ಬಲ ವರ್ಗದವರನ್ನು ಮಹಿಳೆಯರನ್ನು ಮತ್ತು ಹಿಂದುಳಿದವರನ್ನು ಮೌಢಾಚರಣೆಗಳ ಹೆಸರಿನಲ್ಲಿ ನಡೆಯುವ ಶೋಷಣೆಯಿಂದ ರಕ್ಷಿಸುವ ಗುರಿಯನ್ನು ಹೊಂದಿದೆ.
  • 2017ರಲ್ಲಿ ಕಾಂಗ್ರೆಸ್ ಸರ್ಕಾರ ಈ ಮಸೂದೆಯನ್ನು ರೂಪಿಸಿತ್ತು. ಕಾಯ್ದೆ ಜಾರಿಗೆ ಅಧಿಸೂಚನೆಯನ್ನೂ ಹೊರಡಿಸಿತ್ತು ನಂತರ ತಾಂತ್ರಿಕ ಕಾರಣಕ್ಕಾಗಿ ವಾಪಸ್ ಪಡೆಯಲಾಗಿತ್ತು ನಂತರ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಸರ್ಕಾರ 2020ರ ಜನವರಿಯಲ್ಲಿ ಈ ಕಾಯ್ದೆ ಜಾರಿಗೊಳಿಸಿ ಅಧಿಸೂಚನೆ ಹೊರಡಿಸಿತು.

ಮತಾಂತರ

  • ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಜಾರಿಗೆ ತಂದಿರುವ ಪ್ರಮುಖ ಕಾನೂನುಗಳ ಪೈಕಿ ಪ್ರಮುಖವಾದುದು ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ (ಮತಾಂತರ ನಿಷೇಧ) ಕಾಯ್ದೆ.
  • 2021ರ ಡಿಸೆಂಬರ್‌ನಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ (ಮತಾಂತರ ನಿಷೇಧ) ಮಸೂದೆಯನ್ನು ಮಂಡಿಸಲಾಗಿತ್ತು. ವಿಧಾನಸಭೆಯ ಅಂಗೀಕಾರವೂ ದೊರಕಿತ್ತು. ಆದರೆ, ವಿಧಾನ ಪರಿಷತ್‌ನಲ್ಲಿ ಸದಸ್ಯಬಲದ ಕೊರತೆಯಿಂದ ಮಸೂದೆ ಮಂಡಿಸಿರಲಿಲ್ಲ. ಸುಗ್ರೀವಾಜ್ಞೆ ಮೂಲಕ ಮಸೂದೆಯನ್ನು ಜಾರಿಗೊಳಿಸಲಾಗಿತ್ತು.
  • ತಿಂಗಳುಗಳ ಬಳಿಕ ಮೇಲ್ಮನೆಯಲ್ಲಿ ಮತ್ತೆ ಅಂಗೀಕಾರ ಪಡೆಯಲಾಗಿತ್ತು. ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು 2022ರ ಸೆಪ್ಟೆಂಬರ್‌ನಲ್ಲಿ ಅಂಕಿತ ಹಾಕಿದ್ದರು.
  • ಈ ಕಾಯ್ದೆಗೆ ಕ್ರೈಸ್ತರು ಸೇರಿದಂತೆ ಹಲವು ಸಮುದಾಯಗಳಿಂದ ವಿರೋಧ ವ್ಯಕ್ತವಾಗಿತ್ತು. ಇದು ಸಂವಿಧಾನ ನೀಡುವ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂಬ ಆರೋಪವೂ ಕೇಳಿಬಂದಿತ್ತು.
  • ‘ಕರ್ನಾಟಕವೂ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಜಾರಿಗೆ ತಂದಿದ್ದ ಈ ಕಾಯ್ದೆಯು ದೇಶದ ವಿವಿಧ ಭಾಗಗಳಲ್ಲಿ ಕ್ರೈಸ್ತರ ಮೇಲೆ ದಾಳಿ ಮಾಡುವಂತೆ ಪ್ರೇರೇಪಿಸಿತ್ತು’ ಎಂದು ಕರ್ನಾಟಕ ಪ್ರಾಂತ್ಯ ಕ್ಯಾಥೋಲಿಕ್ ಧರ್ಮಾಧ್ಯಕ್ಷರ ಮಂಡಳಿ, ಅಖಿಲ ಕರ್ನಾಟಕ ಕ್ರೈಸ್ತ ಮಾನವ ಹಕ್ಕುಗಳ ಒಕ್ಕೂಟ ವೇದಿಕೆ ಆರೋಪಿಸಿದವು.
  • 2023ರ ಚುನಾವಣೆಗೂ ಮುನ್ನ, ತಾನು ಅಧಿಕಾರಕ್ಕೆ ಬಂದರೆ ಈ ಕಾಯ್ದೆಯನ್ನು ರದ್ದುಪಡಿಸುವುದಾಗಿ ಕಾಂಗ್ರೆಸ್ ಹೇಳಿತ್ತು. ಆದರೆ, ಈವರೆಗೂ ಸರ್ಕಾರ ಕಾಯ್ದೆ ರದ್ದುಗೊಳಿಸಿಲ್ಲ. ಕಾಯ್ದೆ ದುರುಪಯೋಗಪಡಿಸಿಕೊಂಡು ಕ್ರೈಸ್ತರ ಮೇಲೆ ಎಫ್‌ಐಆರ್ ದಾಖಲಿಸಲಾಗುತ್ತಿದೆ ಎಂದು ಕ್ರೈಸ್ತ ಸಂಘಟನೆಗಳು ಆರೋಪಿಸುತ್ತಿವೆ.

ಜಾನುವಾರು ಹತ್ಯೆ

  • ರಾಜ್ಯದಲ್ಲಿ ಜಾನುವಾರುಗಳ ಹತ್ಯೆಯನ್ನು ತಡೆಯುವ ಉದ್ದೇಶದಿಂದ 2020ರಲ್ಲಿ ಹಿಂದಿನ ಬಿಜೆಪಿ ಸರ್ಕಾರ, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದಿತು ಗೋಹತ್ಯೆ ನಿಷೇಧ ಕಾಯ್ದೆ ಎಂದೂ ಇದು ಪ್ರಚಲಿತದಲ್ಲಿದೆ ಜಾನುವಾರಗಳ ಕಳ್ಳಸಾಗಣೆ, ಅವುಗಳ ಹತ್ಯೆಯನ್ನು ತಪ್ಪಿಸುವುದರ ಜೊತೆಗೆ ಅವುಗಳ ಸಂರಕ್ಷಣೆಗೂ ಒತ್ತು ಕೊಡುವ ಅಂಶಗಳು ಕಾಯ್ದೆಯಲ್ಲಿವೆ ಜಾನುವಾರುಗಳ ಸಾಗಣೆಗೆ ಕಠಿಣ ನಿಯಮಗಳನ್ನೂ ಈ ಕಾಯ್ದೆಯಡಿ ರೂಪಿಸಲಾಗಿದೆ ರೈತರು ಅವರ ಜಾನುವಾರುಗಳನ್ನು ಸಾಗಿಸುವುದಕ್ಕೂ ಇದರ ನಿಯಮಗಳು ಅನ್ವಯವಾಗುತ್ತವೆ ರೈತರ ಹಿತದೃಷ್ಟಿಯಿಂದ ಹಾಗೂ ಗೋವುಗಳ ಆರೋಗ್ಯ ಮತ್ತು ಮಾಂಸಕ್ಕಾಗಿ ಅವುಗಳ ಹತ್ಯೆಯನ್ನು ತಡೆಯುವ ಉದ್ದೇಶದಿಂದ ಕಾಯ್ದೆ ರೂಪಿಸಲಾಗಿದೆ ಎಂದು ಹಿಂದಿನ ಸರ್ಕಾರ ಹೇಳಿಕೊಂಡಿತ್ತು.
  • ರಾಜ್ಯದಲ್ಲಿ ಪರ ವಿರೋಧ ಚರ್ಚೆಯನ್ನು ಹುಟ್ಟುಹಾಕಿದ್ದ ಈ ಕಾನೂನನ್ನು ಪರಿಣಾ ಮಕಾರಿಯಾಗಿ ಜಾರಿಗೊಳಿಸಲು ಮತ್ತು ಜಾನುವಾರುಗಳ ಮೇಲೆ ನಡೆಯುವ ಕ್ರೌರ್ಯ ಮತ್ತು ಹಿಂಸೆ ತಡೆಗಟ್ಟಲು ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪಿಸಲಾಗಿತ್ತು.
  • ವಿರೋಧ ಪಕ್ಷದಲ್ಲಿದ್ದಾಗ ಕಾಯ್ದೆಯನ್ನು ತೀವ್ರವಾಗಿ ವಿರೋಧಿಸಿದ್ದ ಕಾಂಗ್ರೆಸ್, ಅಧಿಕಾರಕ್ಕೆ ಬಂದ ನಂತರ ಈ ಕಾಯ್ದೆಗೆ ತಿದ್ದುಪಡಿ ತರಲು ತೀರ್ಮಾನಿಸಿತ್ತು 2025ರ ಡಿಸೆಂಬ‌ರ್ನಲ್ಲಿ ಸಚಿವ ಸಂಪುಟ ಸಭೆ ಕೂಡ ತಿದ್ದುಪಡಿ ಮಸೂದೆ ಮಂಡನೆಗೆ ಒಪ್ಪಿಗೆ ಸೂಚಿಸಿತ್ತು ಬಿಜೆಪಿ, ವಿಎಚ್‌ಪಿ, ಬಜರಂಗದಳ ಸೇರಿದಂತೆ ಹಿಂದೂಪರ ಸಂಘಟನೆಗಳು ತಿದ್ದುಪಡಿ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದವು ಚಳಿಗಾಲದ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆಯನ್ನು ಮಂಡಿಸುವ ಬಗ್ಗೆಯೂ ಚರ್ಚೆಯಾಗಿತ್ತು ಆದರೆ, ಸರ್ಕಾರ ಮಸೂದೆ ಮಂಡಿಸಿಲ್ಲ. ಕಾಯ್ದೆಯನ್ನು ರದ್ದುಪಡಿಸುವ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಇತ್ತೀಚೆಗೆ ಹೇಳಿದ್ದಾರೆ.

ಸಾಮಾಜಿಕ ಬಹಿಷ್ಕಾರ

  • ರಾಜ್ಯದ ವಿವಿಧ ಕಡೆಗಳಲ್ಲಿ ಚಾಲ್ತಿಯಲ್ಲಿರುವ ಸಾಮಾಜಿಕ ಬಹಿಷ್ಕಾರ ಎಂಬ ಅನಿಷ್ಟ ಪದ್ಧತಿಯನ್ನು ಸಂಪೂರ್ಣ ನಿಷೇಧಿಸುವುದಕ್ಕಾಗಿ ‘ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧಕ, ನಿಷೇಧ ಮತ್ತು ಪರಿಹಾರ) ಕಾಯ್ದೆ-2025 ಅನ್ನು ರಾಜ್ಯ ಸರ್ಕಾರ ಈ ವರ್ಷದ ಜನವರಿಯಲ್ಲಿ ಜಾರಿಗೆ ತಂದಿದೆ. ಈ ಕಾಯ್ದೆಯು ಸಾಮಾಜಿಕ ಬಹಿಷ್ಕಾರವನ್ನು ಅಪರಾಧ ಎಂದು ಪರಿಗಣಿಸುತ್ತದೆ. ಯಾವುದೇ ವ್ಯಕ್ತಿ, ಕುಟುಂಬ ಅಥವಾ ಕುಟುಂಬದ ಸದಸ್ಯರನ್ನು ಸಾಮಾಜಿಕವಾಗಿ ಬಹಿಷ್ಕರಿಸಿದರೆ ಮೂರು ವರ್ಷದವರೆಗೆ ಜೈಲು ಶಿಕ್ಷೆ ಮತ್ತು ₹1 ಲಕ್ಷ ದಂಡ ವಿಧಿಸುವುದಕ್ಕೆ ಈ ಕಾನೂನು ಅವಕಾಶ ನೀಡುತ್ತದೆ.
  • ಬಹಿಷ್ಕರಿಸುವ ತೀರ್ಮಾನ ತೆಗೆದುಕೊಳ್ಳುವುದು, ಈ ಉದ್ದೇಶದಿಂದ ಸಭೆ, ವಂಚಾಯಿತಿ ಜಮಾವಣೆ, ಅಭಿಪ್ರಾಯ ಸಂಗ್ರಹಿಸುವುದು, ಬಹಿಷ್ಕಾರಕ್ಕೆ ಪ್ರತ್ಯಕ್ಷ ಪರೋಕ್ಷ ಸಹಾಯ, ಒತ್ತಡ, ಪ್ರಚೋದನೆ ನೀಡುವವರನ್ನೂ ಅಪರಾಧಿಗಳೆಂದು ಪರಿಗಣಿಸಿ ಜೈಲು ಅಥವಾ ದಂಡ ಅಥವಾ ಎರಡನ್ನೂ ವಿಧಿಸಲೂ ಈ ಕಾಯ್ಕೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
  • ಈ ಕಾಯ್ಕೆಯ ಅನ್ಯಾಯ ಬಹಿಷ್ಕಾರಕ್ಕೆ ಒಳಗಾದವರು ಪೊಲೀಸರಿಗೆ ಅಥವಾ ನ್ಯಾಯಾಧೀಶರಿಗೆ ದೂರು ನೀಡಬಹುದು ಪ್ರಥಮ ದರ್ಜೆ ನ್ಯಾಯಾಧೀಶರಿಗೆ ವಿಚಾರಣೆಯ ಅಧಿಕಾರ ನೀಡಲಾಗಿದೆ. ನೇರವಾಗಿ ಸಲ್ಲಿಕೆಯಾದ ದೂರಿನ ತನಿಖೆ ನಡೆಸುವಂತೆ ನ್ಯಾಯಾಧೀಶರು ಆದೇಶ ನೀಡಬಹುದು ಸಂತ್ರಸ್ತರಿಗೆ ಸಹಾಯ ಒದಗಿಸಲು ಮತ್ತು ದಂಡದ ಮೊತ್ತವನ್ನು ಪರಿಹಾರವಾಗಿ ನೀಡಲು ನಿರ್ದೇಶನ ನೀಡಬಹುದು. ಸಾಮಾಜಿಕ ಬಹಿಷ್ಕಾರದಂತಹ ನಿರ್ಧಾರ ತೆಗೆದುಕೊಳ್ಳಲು ನಡೆಸುವ ಸಭೆಗಳ ಕುರಿತು ಮಾಹಿತಿ ಬಂದರೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ನಿಷೇಧಿಸಿ ಆದೇಶಿಸಬಹುದು ಮರ್ಯಾದೆಗೇಡು ಹತ್ಯೆ
  • ಬೇರೆ ಜಾತಿಯವರನ್ನು ಪ್ರೀತಿಸಿ ಮದುವೆಯಾದವರನ್ನು ಮರ್ಯಾದೆ ಹೆಸರಿನಲ್ಲಿ ಹಲ್ಲೆ ಹತ್ಯೆ ಮಾಡುವ ಹಾಗೂ ಬಹಿಷ್ಕರಿಸುವವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವ ಉದ್ದೇಶದ ಇವ ನಮ್ಮವ ಇವ ನಮ್ಮವ ಮಸೂದೆಯನ್ನು ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿದೆ.
  • ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮರ್ಯಾದೆಗೇಡು ಹತ್ಯೆ ಹೆಸರಿನಲ್ಲಿ ನಡೆದ ಕೊಲೆ, ದೌರ್ಜನ್ಯಗಳ ತಡೆಗೆ ಕಠಿಣ ಕಾನೂನು ತರಬೇಕೆಂದು ನಾಗರಿಕರು, ವಿವಿಧ ಸಂಸ್ಥೆಗಳು ಸರ್ಕಾರದ ಮೇಲೆ ಒತ್ತಡ ಹೇರಿದ್ದವು.
  • ಕಾಯ್ದೆ ರೂಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ ಭರವಸೆಯಂತೆ ‘ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ (ಇವ ನಮ್ಮವ ಇವ ನಮ್ಮವ) ಮಸೂದೆ-2026 ಸಿದ್ಧಪಡಿಸಲಾಗಿದ್ದು, ಈಚೆಗೆ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ.
  • ಅಂತರ್ಜಾತಿ ವಿವಾಹಗಳನ್ನು ಮಾನ್ಯ ಮಾಡುವುದು, ಅಂತಹ ಮದುವೆಯಾದವರಿಗೆ ತಾರತಮ್ಯ ಮಾಡುವುದರ ವಿರುದ್ಧ ರಕ್ಷಣೆ ಒದಗಿಸುವುದು, ಮರ್ಯಾದೆ ಅಥವಾ ಸಂಪ್ರದಾಯದ ಹೆಸರಿನಲ್ಲಿ ದೌರ್ಜನ್ಯ ಎಸಗುವ, ಹತ್ಯೆ ಮಾಡುವ ಕೃತ್ಯಗಳನ್ನು ತಡೆಯುವುದು, ಮೇಲ್ವಿಚಾರಣಾ ಸಮಿತಿಗಳನ್ನು ರಚಿಸುವುದು, ಪ್ರತಿ ಜಿಲ್ಲೆಯಲ್ಲೂ ‘ಇವ ನಮ್ಮವ’ ವೇದಿಕೆಗಳನ್ನು ರಚಿಸುವುದು, ವಿಶೇಷ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸುವುದು, ಅಪರಾಧಿಗಳಿಗೆ ಐದು ವರ್ಷಗಳಿಗೆ ಕಡಿಮೆ ಇಲ್ಲದಂತಹ ಕಠಿಣ ಶಿಕ್ಷೆ ವಿಧಿಸಲು ಮಸೂದೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ.

ದ್ವೇಷ ಭಾಷಣ ನಿಷೇಧ

  • ರಾಜ್ಯದಲ್ಲಿ ದ್ವೇಷ ಭಾಷಣ ಹಾಗೂ ದ್ವೇಷಾಪರಾಧಗಳನ್ನು ತಡೆಯಲು ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ಮಸೂದೆ -2025’ ಅನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ರೂಪಿಸಿತ್ತು. ಎರಡೂ ಸದನಗಳಲ್ಲಿ ಅಂಗೀಕಾರವಾಗಿತ್ತು. ಅಂಕಿತಕ್ಕಾಗಿ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು.
  • ಆದರೆ, ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್ ನೀಡಿದ್ದ ಕೆಲವು ತೀರ್ಪುಗಳನ್ನು ಉಲ್ಲೇಖಿಸಿ ಮತ್ತು ಸಾಂವಿಧಾನಿಕವಾಗಿ ಸಂರಕ್ಷಿತವಾದ ಪ್ರಜಾಪ್ರಭುತ್ವದ ಮೇಲೆ ತೀವು ನಕಾರಾತ್ಮಕ ಪರಿಣಾಮ ಉಂಟುಮಾಡುವ ಸಾಧ್ಯತೆಯ ಆತಂಕ ವ್ಯಕ್ತಪಡಿಸಿ ಈ ಮಸೂದೆಯನ್ನು ರಾಜ್ಯಪಾಲರು ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದರು.
  • ‘ದ್ವೇಷ ಅಪರಾಧಗಳನ್ನು ಸಹಿಸುವುದಿಲ್ಲ’ ಎಂದು 2018ರ ಜುಲೈ 17ರಂದು ಹಾಗೂ ಕೋಮು ದ್ವೇಷ ಹರಡುವ ಅಥವಾ ದ್ವೇಷ ಭಾಷಣದಲ್ಲಿ ತೊಡಗಿಸಿಕೊಳ್ಳುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ’ ಎಂದು 2025ರ ಮೇ 5ರಂದು ಸುಪ್ರೀಂ ಕೋರ್ಟ್ ಪ್ರತ್ಯೇಕ ತೀರ್ಪುಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿತ್ತು ಈ ತೀರ್ಪುಗಳನ್ನು ಪರಿಗಣಿಸಿ ಮಸೂದೆಯನ್ನು ರೂಪಿಸಲಾಗಿದೆ. ಹೀಗಾಗಿ, ಅಂಕಿತ ಹಾಕುವಂತೆ ರಾಷ್ಟ್ರಪತಿಗೆ ಮನವಿ ಮಾಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯ ಹೇಳಿದೆ.
  • ಈ ಮಸೂದೆಯನ್ನು ಬಿಜೆಪಿ ನಾಯಕರು, ಆರ್‌ಎಸ್ಎಸ್. ಹಿಂದುತ್ವವಾದಿ ಸಂಘಟನೆಗಳ ಮುಖಂಡರು ತೀವ್ರವಾಗಿ ಖಂಡಿಸಿದ್ದರು. ವಿರೋಧದ ನಡುವೆಯೂ ಎರಡೂ ಸದನಗಳಲ್ಲಿ ಮಸೂದೆ ಅಂಗೀಕಾರವಾಗುವಂತೆ ಸರ್ಕಾರ ನೋಡಿಕೊಂಡಿತ್ತು.

ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ: ‘ಜೈಲುಗಳಲ್ಲಿ ದಟ್ಟಣೆ: ಮಾಹಿತಿ ಸಲ್ಲಿಸಲು ಸೂಚನೆ
ಸಂದರ್ಭ: ಕಾರಾಗೃಹ ಗಳಲ್ಲಿನ ದಟ್ಟಣೆ ನಿವಾರಣೆಗೆ ತೆಗೆದುಕೊಂಡಿರುವ ಕ್ರಮಗಳು ಹಾಗೂ ಪ್ರತಿಯೊಂದು ಕಾರಾಗೃಹದಲ್ಲಿನ ಅನುಮೋದಿತ ಸಾಮರ್ಥ್ಯಕ್ಕೆ ಸಂಬಂಧಿಸಿದ ಪರಿಷ್ಕೃತ ವಿವರಗಳನ್ನು ಸಲ್ಲಿಸುವಂತೆ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಜತೆಗೆ ವರದಿ ಸಲ್ಲಿಕೆಗೆ ಮೇ18ರ ವರೆಗೆ ಗಡುವು ನೀಡಿದೆ.

  • ಕಾರಾಗೃಹಗಳಲ್ಲಿನ ಅಮಾನವೀಯ ಸ್ಥಿತಿಗತಿಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ಪ್ರಕರಣವನ್ನು ಸುಪ್ರೀಂ ಕೋರ್ಟ್ ದಾಖಲಿಸಿಕೊಂಡಿದ್ದು, ನ್ಯಾಯಮೂರ್ತಿ ವಿಕ್ರಮ್ ನಾಥ್ ಹಾಗೂ ನ್ಯಾಯಮೂರ್ತಿ ಸಂದೀಪ್ ಮೆಹ್ರಾ ಅವರಿದ್ದ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿದೆ.
  • ಕಾರಾಗೃಹ ಸ್ಥಿತಿಗತಿ ಕುರಿತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸಲ್ಲಿಸಿರುವ ಅಂಕಿ-ಅಂಶದ ವರದಿಗಳು 2023ಕ್ಕೆ ಸಂಬಂಧಿಸಿದ್ದು ಎಂದು ಅಮಿಕಸ್ ಕ್ಯೂರಿ ಆಗಿರುವ ಹಿರಿಯ ವಕೀಲ ಗೌರವ್ ಅಗರ್ವಾಲ್ ಅವರು ನ್ಯಾಯಪೀಠದ ಗಮನಕ್ಕೆ ತಂದಿದ್ದಾರೆ.
  • ಹೀಗಾಗಿ, 2026ರ ಮಾರ್ಚ್1ರವರೆಗಿನ ದಾಖಲಾತಿಗೆ ಅನುಗುಣವಾಗಿ ವಿವರಗಳನ್ನು ಸಲ್ಲಿಸಲು ನ್ಯಾಯಪೀಠ ನಿರ್ದೇಶಿಸಿದೆ ಜತೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಒಟ್ಟು ಮಹಿಳಾ ಕಾರಾಗೃಹಗಳ ಸಂಖ್ಯೆ ಎಷ್ಟು? ಅಲ್ಲಿ ಏನೆಲ್ಲಾ ಸೌಲಭ್ಯಗಳಿದೆ ? ಮಹಿಳಾ ಕೈದಿಗಳ ಜತೆಗಿರುವ ಮಕ್ಕಳ ವಿದ್ಯಾಭ್ಯಾಸ ಹಾಗೂ ಕಲ್ಯಾಣಕ್ಕೆ ಸಂಬಂಧಿಸಿದಂತೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ವಿವರಗಳನ್ನು ಸಲ್ಲಿಸುವಂತೆಯೂ ಪೀಠ ಸೂಚಿಸಿದೆ.

ಪತ್ರಿಕೆ-IV: ಸಾಮಾನ್ಯ ಅಧ್ಯಯನ-3

ಪತ್ರಿಕೆ-V: ಸಾಮಾನ್ಯ ಅಧ್ಯಯನ-4

Sources: Prajavani

ಕೆಎಎಸ್ ಪ್ರಚಲಿತ ವಿದ್ಯಮಾನಗಳು

ಪೂರ್ವಭಾವಿ ಪರೀಕ್ಷೆ

ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು

ಒಡಿಶಾದಲ್ಲಿ 2028ರ ವಿಶ್ವ ಒಳಾಂಗಣ ಅಥ್ಲೆಟಿಕ್ಸ್
ಸಂದರ್ಭ: ಭಾರತವು 2028ರ ವಿಶ್ವ ಅಥ್ಲೆಟಿಕ್ಸ್ ಒಳಾಂಗಣ ಚಾಂಪಿಯನ್ಷಿಪ್ಗೆ ಆತಿಥ್ಯ ವಹಿಸಲಿದೆ. ಭುವನೇಶ್ವರದಲ್ಲಿ ಈ ಪ್ರತಿಷ್ಠಿತ ಕೂಟ ನಡೆಯಲಿದೆ.

  • ‘2028ರ ವಿಶ್ವ ಅಥ್ಲೆಟಿಕ್ಸ್ ಒಳಾಂಗಣ ಚಾಂಪಿಯನ್ಷಿಪ್ ಅನ್ನು ಒಡಿಶಾ ಆಯೋಜಿಸುತ್ತಿದೆ.
  • ಭಾರತದಲ್ಲಿ ಮೊದಲ ಸಲ ಚಾಂಪಿಯನ್ಷಿಪ್ನ ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳು 2028ರ ಮಾರ್ಚ್ 3 ರಿಂದ 5ರವರೆಗೆ ಆಯೋಜನೆಯಾಗಲಿವೆ. ಮೂರು ದಿನಗಳಲ್ಲಿ ಪುರುಷರು ಮತ್ತು ಮಹಿಳೆಯರಿಗೆ ತಲಾ 13ರಂತೆ ಒಟ್ಟು 26 ಸ್ಪರ್ಧೆಗಳನ್ನು ಒಳಗೊಂಡಿರುತ್ತವೆ.


ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು

ಕರ್ನಾಟಕದ ಪ್ರಮುಖ ಯೋಜನೆಗಳ ಸಮಗ್ರ ಮಾಹಿತಿ

ಯೋಜನೆಯ ಹೆಸರುಉದ್ದೇಶ ಮತ್ತು ಗುರಿಪ್ರಮುಖ ಸವಾಲುಗಳು ಮತ್ತು ವಿರೋಧಕ್ಕೆ ಕಾರಣಗಳುಆರ್ಥಿಕ ಮತ್ತು ಇತರ ವಿವರಗಳು
ಎತ್ತಿನಹೊಳೆ ಯೋಜನೆಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ.ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರಕ್ಕೆ ಹಾನಿ. ನದಿಯಲ್ಲಿ ನೀರಿನ ಲಭ್ಯತೆಯ ಬಗ್ಗೆ ತಜ್ಞರ ಆತಂಕ.ಆರಂಭಿಕ ಅಂದಾಜು ₹8,323 ಕೋಟಿ. ಪ್ರಸ್ತುತ ವೆಚ್ಚ ₹23,000 ಕೋಟಿಗೂ ಅಧಿಕ.
ಶರಾವತಿ ಪಂಪ್ ಸ್ಟೋರೇಜ್2,000 ಮೆಗಾವಾಟ್ ಸಾಮರ್ಥ್ಯದ ಜಲವಿದ್ಯುತ್ ಉತ್ಪಾದನೆ.ಲಿಂಗನಮಕ್ಕಿ-ಗೇರುಸೊಪ್ಪ ನಡುವೆ ಸುರಂಗ ಮಾರ್ಗದಿಂದ ಅರಣ್ಯ ನಾಶ. ಸಿಂಹಬಾಲದ ಸಿಂಗಳೀಕದ ವಾಸಸ್ಥಳಕ್ಕೆ ಧಕ್ಕೆ.ಕೆಪಿಸಿಎಲ್ (KPCL) ಮೂಲಕ ಅನುಷ್ಠಾನ. ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ನೆರವು.
ಚಾಮುಂಡಿಬೆಟ್ಟ ರೋಪವೇಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಭಕ್ತರ ಸುಲಭ ಸಂಚಾರ.ಬೆಟ್ಟದ ನೈಸರ್ಗಿಕ ಸೌಂದರ್ಯಕ್ಕೆ ಹಾನಿ ಮತ್ತು ಭೂಕುಸಿತದ ಭೀತಿ. ಪರಿಸರವಾದಿಗಳಿಂದ ತೀವ್ರ ಪ್ರತಿರೋಧ.ಕೇಂದ್ರ ಸರ್ಕಾರದ ‘ಪರ್ವತಮಾಲಾ’ ಯೋಜನೆಯಡಿ ಅನುಷ್ಠಾನ.
ಕಳಸಾ-ಬಂಡೂರಿ ಯೋಜನೆಹುಬ್ಬಳ್ಳಿ-ಧಾರವಾಡ ಮತ್ತು ಗದಗ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ.ಗೋವಾ ಸರ್ಕಾರದ ವಿರೋಧ ಮತ್ತು ಪರಿಸರ ಅನುಮತಿ ಪಡೆಯುವಲ್ಲಿ ವಿಳಂಬ. ಅರಣ್ಯ ಪ್ರದೇಶದ ಮುಳುಗಡೆ.ಮಹದಾಯಿ ನದಿಯ ನೀರನ್ನು ಮಲಪ್ರಭಾ ನದಿಗೆ ತಿರುಗಿಸುವ ಯೋಜನೆ.
ನಂದಿಬೆಟ್ಟ ರೋಪವೇಪ್ರವಾಸೋದ್ಯಮ ಉತ್ತೇಜನ ಮತ್ತು ಬೆಟ್ಟಕ್ಕೆ ಪರ್ಯಾಯ ಸಂಚಾರ.ಯೋಜನೆಗೆ ತಗುಲುವ ವೆಚ್ಚ ಅಧಿಕ ಮತ್ತು ಪರಿಸರ ಸಮತೋಲನದಲ್ಲಿ ವ್ಯತ್ಯಯ.ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ₹97.3 ಕೋಟಿ ಮೊತ್ತದ ಯೋಜನೆ.
ಆಗುಂಬೆ ಘಟ್ಟದ ಸುರಂಗಶಿವಮೊಗ್ಗ ಮತ್ತು ದಕ್ಷಿಣ ಕನ್ನಡದ ನಡುವಿನ ಸುಗಮ ಸಂಚಾರ.ಪಶ್ಚಿಮ ಘಟ್ಟದ ಜೀವವೈವಿಧ್ಯಕ್ಕೆ ಹಾನಿ ಮತ್ತು ಅಂತರ್ಜಲ ವ್ಯವಸ್ಥೆ ಏರುಪೇರಾಗುವ ಆತಂಕ.ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಸುಮಾರು 3.1 ಕಿ.ಮೀ ಉದ್ದದ ಸುರಂಗ ಮಾರ್ಗ.
ಕೆ.ಆರ್.ಎಸ್. ‘ಕಾವೇರಿ’ ಆರತಿಹರಿದ್ವಾರದ ಮಾದರಿಯಲ್ಲಿ ಪ್ರವಾಸಿಗರ ಆಕರ್ಷಣೆ ಮತ್ತು ನದಿ ಆರತಿ.ನದಿಯ ನೈಸರ್ಗಿಕ ಹರಿವಿಗೆ ಅಡ್ಡಿ ಮತ್ತು ನದಿ ಪಾತ್ರದಲ್ಲಿ ಕಾಂಕ್ರೀಟ್ ಕಾಮಗಾರಿಗಳ ವಿರೋಧ.ಸುಮಾರು ₹40 ಕೋಟಿ ವೆಚ್ಚದ ಯೋಜನೆ.
ಗಣಿಗಾಜಿ ಕಾಡು (ಕಟ್ಟೆಹೊಳೆ)ಉತ್ತರ ಕನ್ನಡದ ಕುಮಟಾ ಬಳಿ ಉದ್ಯಾನವನ ಅಥವಾ ಪ್ರವಾಸೋದ್ಯಮ ಅಭಿವೃದ್ಧಿ.ಮೀಸಲು ಅರಣ್ಯ ಪ್ರದೇಶದ ನಾಶಕ್ಕೆ ಸ್ಥಳೀಯ ಪರಿಸರ ಸಂಘಟನೆಗಳ ತೀವ್ರ ಪ್ರತಿರೋಧ.ಸುಮಾರು 470.4 ಎಕರೆ ಅರಣ್ಯ ಪ್ರದೇಶದ ಮೇಲೆ ಪ್ರಭಾವ.

1. ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಯೋಜನೆ
ಇದು ಕರ್ನಾಟಕದ ಅತಿದೊಡ್ಡ ಮತ್ತು ಅತ್ಯಂತ ವಿವಾದಿತ ಕುಡಿಯುವ ನೀರಿನ ಯೋಜನೆಗಳಲ್ಲಿ ಒಂದಾಗಿದೆ.
ವಿವರ: ಸಕಲೇಶಪುರ ತಾಲ್ಲೂಕಿನ ಎತ್ತಿನಹೊಳೆ ಸೇರಿದಂತೆ ಎಂಟು ಪಶ್ಚಿಮಕ್ಕೆ ಹರಿಯುವ ಹೊಳೆಗಳ ನೀರನ್ನು ಪೂರ್ವಕ್ಕೆ ತಿರುಗಿಸಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರು ನೀಡುವುದು ಇದರ ಗುರಿ.
ವಿಸ್ತಾರ: ಸುಮಾರು 24.01 ಟಿ.ಎಂ.ಸಿ. ನೀರನ್ನು ಎತ್ತುವ ಗುರಿ ಹೊಂದಲಾಗಿದೆ.
ಸವಾಲುಗಳು: * ನೀರಿನ ಲಭ್ಯತೆ: ತಜ್ಞರ ವರದಿಯ ಪ್ರಕಾರ ಅಲ್ಲಿ ಅಷ್ಟು ನೀರು ಲಭ್ಯವಿಲ್ಲ ಎಂಬ ವಾದವಿದೆ.
ವೆಚ್ಚ: ಆರಂಭದಲ್ಲಿ ₹8,323 ಕೋಟಿ ಅಂದಾಜಿಸಲಾಗಿದ್ದ ವೆಚ್ಚ ಈಗ ₹23,000 ಕೋಟಿ ದಾಟಿದೆ.
ಪರಿಸರ ನಾಶ: ಪೈಪ್‌ಲೈನ್ ಅಳವಡಿಸಲು ಸಾವಿರಾರು ಎಕರೆ ಅರಣ್ಯ ಭೂಮಿ ಬಳಕೆಯಾಗುತ್ತಿದೆ.

2. ಶರಾವತಿ ಪಂಪ್ ಸ್ಟೋರೇಜ್ ಯೋಜನೆ
ಇದು ವಿದ್ಯುತ್ ಬೇಡಿಕೆಯನ್ನು ಸರಿದೂಗಿಸಲು ರೂಪಿಸಲಾದ ಆಧುನಿಕ ತಂತ್ರಜ್ಞಾನದ ಯೋಜನೆಯಾಗಿದೆ.
ವಿವರ: ಲಿಂಗನಮಕ್ಕಿ ಮತ್ತು ಗೇರುಸೊಪ್ಪ ಜಲಾಶಯಗಳ ನಡುವೆ ಸುರಂಗ ಮಾರ್ಗ ನಿರ್ಮಾಣ ಮಾಡಿ, ವಿದ್ಯುತ್ ಬೇಡಿಕೆ ಹೆಚ್ಚಿದ್ದಾಗ ನೀರನ್ನು ಬಳಸಿ ವಿದ್ಯುತ್ ತಯಾರಿಸುವುದು ಮತ್ತು ಬೇಡಿಕೆ ಕಡಿಮೆ ಇದ್ದಾಗ ಅದೇ ನೀರನ್ನು ಮತ್ತೆ ಮೇಲಿನ ಜಲಾಶಯಕ್ಕೆ ಪಂಪ್ ಮಾಡುವುದು ಇದರ ಉದ್ದೇಶ.
ಸಾಮರ್ಥ್ಯ: 2,000 ಮೆಗಾವಾಟ್.
ವಿರೋಧ: ಶರಾವತಿ ಕಣಿವೆಯು ಅತಿ ಸೂಕ್ಷ್ಮ ಪರಿಸರ ವಲಯವಾಗಿದೆ. ಸುರಂಗ ಮಾರ್ಗಕ್ಕಾಗಿ ಅರಣ್ಯ ನಾಶವಾಗುವುದರಿಂದ ಇಲ್ಲಿ ಮಾತ್ರ ಕಂಡುಬರುವ ಸಿಂಹಬಾಲದ ಸಿಂಗಳೀಕ (Lion-tailed Macaque) ಸೇರಿದಂತೆ ಅಪರೂಪದ ಪ್ರಾಣಿ ಸಂಕುಲಕ್ಕೆ ಧಕ್ಕೆಯಾಗುತ್ತದೆ ಎಂಬ ಆತಂಕವಿದೆ.

3. ಚಾಮುಂಡಿಬೆಟ್ಟ ಮತ್ತು ನಂದಿಬೆಟ್ಟ ರೋಪವೇ ಯೋಜನೆಗಳು
ಈ ಯೋಜನೆಗಳು ಧಾರ್ಮಿಕ ಮತ್ತು ಪ್ರಕೃತಿ ಪ್ರವಾಸೋದ್ಯಮವನ್ನು ಆಧರಿಸಿವೆ.
ಚಾಮುಂಡಿಬೆಟ್ಟ: ಮೈಸೂರಿನ ಪಾರಂಪರಿಕ ಶ್ರೇಷ್ಠತೆಯನ್ನು ಕಾಪಾಡಲು ಮತ್ತು ಹಿರಿಯ ನಾಗರಿಕರಿಗೆ ಅನುಕೂಲವಾಗಲು ರೋಪವೇ ಪ್ರಸ್ತಾಪಿಸಲಾಗಿದೆ. ಆದರೆ, ಬೆಟ್ಟದಲ್ಲಿ ಈಗಾಗಲೇ ಭೂಕುಸಿತ ಸಂಭವಿಸುತ್ತಿರುವುದರಿಂದ ಕಾಂಕ್ರೀಟ್ ಕಾಮಗಾರಿಗಳು ಬೆಟ್ಟದ ಸ್ಥಿರತೆಯನ್ನು ಹಾಳುಮಾಡುತ್ತವೆ ಎಂದು ಸ್ಥಳೀಯರು ಪ್ರತಿಭಟಿಸುತ್ತಿದ್ದಾರೆ.
ನಂದಿಬೆಟ್ಟ: ಬೆಂಗಳೂರಿಗೆ ಹತ್ತಿರವಿರುವ ಈ ಪ್ರವಾಸಿ ತಾಣದಲ್ಲಿ ಟ್ರಾಫಿಕ್ ಕಡಿಮೆ ಮಾಡಲು ರೋಪವೇ ಯೋಜನೆಯನ್ನು ಪಿಪಿಪಿ (PPP) ಮಾದರಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ.

4. ಕಳಸಾ-ಬಂಡೂರಿ ನಾಲಾ ಯೋಜನೆ
ಇದು ಉತ್ತರ ಕರ್ನಾಟಕದ ಜನರ ದಶಕಗಳ ಕಾಲದ ಬೇಡಿಕೆಯಾಗಿದೆ.
ವಿವರ: ಮಹದಾಯಿ ನದಿಯ ಉಪನದಿಗಳಾದ ಕಳಸಾ ಮತ್ತು ಬಂಡೂರಿ ನಾಲಾಗಳ ನೀರನ್ನು ಮಲಪ್ರಭಾ ನದಿಗೆ ತಿರುಗಿಸಿ ಹುಬ್ಬಳ್ಳಿ-ಧಾರವಾಡ ಮತ್ತು ಗದಗ ಜಿಲ್ಲೆಗಳಿಗೆ ನೀರು ಒದಗಿಸುವುದು.
ಸವಾಲುಗಳು: ಗೋವಾ ಸರ್ಕಾರದ ಕಾನೂನು ಹೋರಾಟ ಮತ್ತು ಅರಣ್ಯ ಇಲಾಖೆಯ ಅನುಮತಿ ದೊರೆಯಲು ಆಗುತ್ತಿರುವ ವಿಳಂಬ. ಈ ಯೋಜನೆಯು ಅರಣ್ಯ ಪ್ರದೇಶದ ಮುಳುಗಡೆಗೆ ಕಾರಣವಾಗುತ್ತದೆ ಎಂದು ಪರಿಸರವಾದಿಗಳು ಹೇಳುತ್ತಾರೆ.

5. ಕೆ.ಆರ್.ಎಸ್. ‘ಕಾವೇರಿ’ ಆರತಿ
ವಿವರ: ವಾರಣಾಸಿಯ ಗಂಗಾ ಆರತಿಯ ಮಾದರಿಯಲ್ಲಿ ಕೆ.ಆರ್.ಎಸ್ ಅಣೆಕಟ್ಟಿನ ಕೆಳಭಾಗದಲ್ಲಿ ಕಾವೇರಿ ನದಿಗೆ ಆರತಿ ಬೆಳಗುವ ವೇದಿಕೆ ಮತ್ತು ಪ್ರವಾಸಿ ತಾಣವನ್ನು ಅಭಿವೃದ್ಧಿಪಡಿಸುವುದು.
ವಿರೋಧ: ನದಿ ಪಾತ್ರದಲ್ಲಿ ಕಾಂಕ್ರೀಟ್ ನಿರ್ಮಾಣ ಮಾಡುವುದರಿಂದ ನೈಸರ್ಗಿಕ ಹರಿವಿಗೆ ಅಡ್ಡಿಯಾಗುತ್ತದೆ ಮತ್ತು ನದಿ ಕಲುಷಿತಗೊಳ್ಳಬಹುದು ಎಂಬ ಭಯವಿದೆ.

6. ಆಗುಂಬೆ ಘಟ್ಟದ ಸುರಂಗ ಮಾರ್ಗ
ವಿವರ: ಮಲೆನಾಡು ಮತ್ತು ಕರಾವಳಿಯನ್ನು ಸಂಪರ್ಕಿಸುವ ಆಗುಂಬೆ ಘಟ್ಟದ ಹದಿನೆಂಟು ಹೇರ್‌ಪಿನ್ ತಿರುವುಗಳ ಸಂಚಾರ ಕಷ್ಟಕರವಾಗಿರುವುದರಿಂದ, ಪರ್ಯಾಯವಾಗಿ ಸುರಂಗ ಮಾರ್ಗ ನಿರ್ಮಿಸುವ ಪ್ರಸ್ತಾಪವಿದು.
ಸವಾಲು: ಆಗುಂಬೆಯು ‘ದಕ್ಷಿಣದ ಚಿರಪುಂಜಿ’ ಎಂದೇ ಖ್ಯಾತವಾಗಿದ್ದು, ಅತಿ ಹೆಚ್ಚು ಮಳೆ ಬೀಳುವ ಪ್ರದೇಶ. ಇಲ್ಲಿ ಸುರಂಗ ಕೊರೆಯುವುದರಿಂದ ಅಂತರ್ಜಲ ವ್ಯವಸ್ಥೆ ಏರುಪೇರಾಗಬಹುದು ಮತ್ತು ಘಟ್ಟದ ಸಾಲಿನ ಜೀವವೈವಿಧ್ಯಕ್ಕೆ ದೊಡ್ಡ ಕೊಡಲಿ ಪೆಟ್ಟು ಬೀಳಬಹುದು.

7. ಗಣಿಗಾಜಿ ಕಾಡು ನಾಶ (ಕಟ್ಟೆಹೊಳೆ)
ವಿವರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ಬಳಿಯ ಸುಂದರ ಅರಣ್ಯ ಪ್ರದೇಶದಲ್ಲಿ ಪ್ರವಾಸೋದ್ಯಮ ಅಥವಾ ಸೌರ ವಿದ್ಯುತ್ ಯೋಜನೆಯಂತಹ ಕಾರ್ಯಕ್ರಮಗಳಿಗೆ ತಯಾರಿ ನಡೆಸಲಾಗುತ್ತಿದೆ.
ಸವಾಲು: ಇದು ಮೀಸಲು ಅರಣ್ಯವಾಗಿದ್ದು, ಇಲ್ಲಿನ ಕಾಡನ್ನು ಕಡಿಯುವುದು ಪರಿಸರ ಸಮತೋಲನಕ್ಕೆ ಧಕ್ಕೆ ತರುತ್ತದೆ ಎಂದು ಸ್ಥಳೀಯ ಪರಿಸರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

    ತೀರ್ಮಾನ:
    ಈ ಎಲ್ಲಾ ಯೋಜನೆಗಳು ಒಂದೆಡೆ ಆರ್ಥಿಕ ಪ್ರಗತಿ ಮತ್ತು ಸೌಲಭ್ಯಗಳನ್ನು ನೀಡಿದರೆ, ಇನ್ನೊಂದೆಡೆ ಪರಿಸರದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತವೆ. ಆದ್ದರಿಂದ, ಪರಿಸರ ಪ್ರಭಾವದ ಮೌಲ್ಯಮಾಪನ (EIA) ವನ್ನು ವೈಜ್ಞಾನಿಕವಾಗಿ ನಡೆಸಿ, ಸುಸ್ಥಿರ ಅಭಿವೃದ್ಧಿಯ ಹಾದಿಯನ್ನು ಕಂಡುಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ.

    https://l.facebook.com/l.php?u=https%3A%2F%2Fwww.prajavani.net%2Fexplainer%2Fdetail%2Fwestern-ghats-development-projects-environmental-concerns-karnataka-3847539&h=AT6F0ezEWUmjv7baH-9E96LF0_NZbDzMT3xkWTkQ8DHb3XXzmu_cDSMwBYHY6AKY8hlPGeh8UCb11WxtzKWfpRqra9y2i3neLohAAVjTli3L6UDoxMWwRVt6lWnb38hwSbTAowWmcTBIO9epUyVZk1A7ZPAkXNs8&tn=R*F

    ಮುಖ್ಯ ಪರೀಕ್ಷೆ

    ಪತ್ರಿಕೆ-I: ಪ್ರಬಂಧಗಳು

    ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ

    “ಜಾಗತಿಕ ಹವಾಮಾನ ಬದಲಾವಣೆಯು ಕೇವಲ ಅಂತರಾಷ್ಟ್ರೀಯ ವೇದಿಕೆಗಳ ಚರ್ಚೆಯ ವಿಷಯವಾಗಿ ಉಳಿಯದೆ, ಇಂದು ಸಾಮಾನ್ಯ ರೈತನ ಹೊಲದ ಬುಡಕ್ಕೆ ಬಂದು ನಿಂತಿದೆ. ಕರ್ನಾಟಕದ ಕೃಷಿ ವಲಯದ ಮೇಲೆ ಹವಾಮಾನ ವೈಪರೀತ್ಯದ ಪರಿಣಾಮಗಳು ಮತ್ತು ಇದನ್ನು ಎದುರಿಸಲು ಬೇಕಾದ ಸುಸ್ಥಿರ ಕ್ರಮಗಳನ್ನು ಚರ್ಚಿಸಿ.”

    ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ

    “ನವ ಕರ್ನಾಟಕದ ಅಭಿವೃದ್ಧಿ ಮಂತ್ರ ಮತ್ತು ಪಶ್ಚಿಮ ಘಟ್ಟಗಳ ಪರಿಸರ ರಕ್ಷಣೆ: ಶಕ್ತಿ, ಜಲ ಮತ್ತು ಪ್ರವಾಸೋದ್ಯಮ ಯೋಜನೆಗಳ ನಡುವಿನ ಸಂಘರ್ಷ ಹಾಗೂ ಸುಸ್ಥಿರ ಸಮತೋಲನದ ಅನಿವಾರ್ಯತೆ.”

    ಪತ್ರಿಕೆ-II: ಸಾಮಾನ್ಯ ಅಧ್ಯಯನ-1

    ಏಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆಯ ನಿಯಮಗಳು ಜಾರಿ: ಐ.ಟಿ ಕಾಯ್ದೆ : ಅಧಿಸೂಚನೆ ಪ್ರಕಟ
    ಸಂದರ್ಭ: ಆದಾಯ ತೆರಿಗೆ ಕಾಯ್ದೆ-2026ರ ಅನುಷ್ಠಾನಕ್ಕೆ ಅಗತ್ಯವಿರುವ ನಿಯಮಗಳ ಅಧಿಸೂಚನೆಯನ್ನು ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು (ಸಿಬಿಡಿಟಿ) ಪ್ರಕಟಿಸಿದೆ.

    • ಈ ಹೊಸ ನಿಯಮಗಳು ಏಪ್ರಿಲ್ 1ರಿಂದ ಜಾರಿಗೆ ಬರಲಿವೆ ಎಂದು ಗೆಜೆಟ್ ಅಧಿಸೂಚನೆಯಲ್ಲಿ ತಿಳಿಸಿದೆ.
    • ಬ್ಯಾಂಕ್‌ಗಳಲ್ಲಿ ನಗದು ಠೇವಣೆ ಮಾಡುವುದು/ ಹಿಂಪಡೆಯುವಿಕೆ, ಮೋಟಾರು ವಾಹನಗಳು ಹಾಗೂ ಆಸ್ತಿ ಖರೀದಿ ಮತ್ತು ಹೋಟೆಲ್ ಬಿಲ್‌ಗಳ ಪಾವತಿಗಾಗಿ ಪ್ಯಾನ್ ಉಲ್ಲೇಖಿಸಿ ನಡೆಸಬಹುದಾದ ವಹಿವಾಟು ಮಿತಿಯನ್ನು ಹೊಸ ಕಾಯ್ದೆಯು ಹೆಚ್ಚಿಸಿದೆ.
    • ಆರು ದಶಕಗಳಷ್ಟು ಹಳೆಯದಾದ 1961ರ ಆದಾಯ ತೆರಿಗೆ (ಐ.ಟಿ) ಕಾಯ್ದೆಯನ್ನು ಬದಲಿಸಲು, ಸಂಸತ್ತು 2025ರ ಆಗಸ್ಟ್ 12ರಂದು ಹೊಸ ಆದಾಯ ತೆರಿಗೆ ಮಸೂದೆಗೆ ಅಂಗೀಕಾರ ನೀಡಿತ್ತು. ಆಗಸ್ಟ್ 21ರಂದು ರಾಷ್ಟ್ರಪತಿಯವರು ಈ ಮಸೂದೆಗೆ ಅಂಕಿತ ಹಾಕಿದ ಬಳಿಕ ಇದು ಕಾಯ್ದೆಯಾಯಿತು.
    • ಇದು ಯಾವುದೇ ಹೊಸ ತೆರಿಗೆ ದರವನ್ನು ವಿಧಿಸುವುದಿಲ್ಲ ಸಂಕೀರ್ಣವಾಗಿರುವ ಹಳೆಯ ಆದಾಯ ತೆರಿಗೆ ಕಾಯ್ದೆಯ ಭಾಷೆಯು, ತೆರಿಗೆದಾರರಿಗೆ ಸರಳವಾಗಿ ಅರ್ಥಮಾಡಿಕೊಳ್ಳುವಂತೆ ಭಾಷೆಯನ್ನು ಸರಳೀಕರಿಸಲಾಗಿದೆ.
    • ಹಳೆಯ ಕಾಯ್ದೆಯಲ್ಲಿದ್ದ ಅನಗತ್ಯ ನಿಬಂಧನೆಗಳು ಮತ್ತು ಸಂಕೀರ್ಣ ಭಾಷೆಯನ್ನು ಹೊಸ ಕಾಯ್ದೆಯು ತೆಗೆದುಹಾಕಿದೆ. 1961ರ ಆದಾಯ ತೆರಿಗೆ ಕಾಯ್ದೆಯಲ್ಲಿ 819 ಸೆಕ್ಷನ್‌ಗಳಿದ್ದವು. ಅದು ಈಗ 536ಕ್ಕೆ ಇಳಿದಿದೆ. ಅಧ್ಯಾಯಗಳು ಸಹ 47ರಿಂದ 23ಕ್ಕೆ ಇಳಿದಿವೆ. ಹಳೆಯ ಕಾಯ್ದೆಯಲ್ಲಿ 5.12 ಲಕ್ಷ ಪದಗಳಿದ್ದವು. ಅವು ಈಗ 2.6 ಲಕ್ಷಕ್ಕೆ ಕಡಿಮೆ ಆಗಿವೆ. ಕಾಯ್ದೆ ಬಗ್ಗೆ ಹೆಚ್ಚಿನ ಸ್ಪಷ್ಟತೆ ಮೂಡಿಸಲು ಇದೇ ಮೊದಲ ಬಾರಿಗೆ 39 ಹೊಸ ಕೋಷ್ಟಕಗಳು ಮತ್ತು 40 ಹೊಸ ಸೂತ್ರಗಳನ್ನು ಪರಿಚಯಿಸಲಾಗಿದೆ.
    • ಹೊಸ ನಿಯಮಗಳು ಬಂಡವಾಳ ಗಳಿಕೆ, ಷೇರುಪೇಟೆ ವಿನಿಮಯ ವಹಿವಾಟುಗಳು ಮತ್ತು ಎನ್‌ಆರ್‌ಐಗಳ ತೆರಿಗೆಗೆ ಸಂಬಂಧಿಸಿದಂತೆ ಕಠಿಣ ನಿಯಮಗಳನ್ನು ಹೊಂದಿವೆ.
    • ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ) ವಿನಾಯಿತಿ ಲೆಕ್ಕ ಹಾಕುವಾಗ ಪ್ರಸ್ತುತ ಮುಂಬೈ, ದೆಹಲಿ, ಕೋಲ್ಕತ್ತ ಮತ್ತು ಚೆನ್ನೈನಲ್ಲಿ ವೇತನದಾರರು ತಮ್ಮ ಸಂಬಳದ ಶೇ 50ರಷ್ಟು ವಿನಾಯಿತಿ ಪಡೆಯಲು ಅವಕಾಶ ಇದೆ.
    • ಇದೀಗ ಹೊಸ ನಿಯಮಗಳಡಿ ಬೆಂಗಳೂರು, ಹೈದರಾಬಾದ್, ಪುಣೆ ಮತ್ತು ಅಹಮದಾಬಾದ್‌ನಲ್ಲಿನ ವೇತನ ಪಡೆಯುವ ಉದ್ಯೋಗಿಗಳಿಗೂ ಸಹ ಈ ಪ್ರಯೋಜನ ದೊರೆಯಲಿದೆ ಉಳಿದ ಪ್ರದೇಶದಲ್ಲಿನ ವೇತನದಾರರು ಶೇ 40ರಷ್ಟು ಮಿತಿಗೆ ಅರ್ಹರಾಗಿದ್ದಾರೆ, ಆದಾಯ ತೆರಿಗೆ ಕಡಿತದ ಪ್ರಯೋಜನ ಪಡೆಯಲು ಬಾಡಿಗೆದಾರ-ಭೂಮಾಲೀಕರ ಸಂಬಂಧವನ್ನು ಬಹಿರಂಗಪಡಿಸುವುದು ಕಡ್ಡಾಯ ವಾಗಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
    • 50 ಸಾವಿರ ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತ ಜಮೆ ಮಾಡುವಾಗಲೆಲ್ಲ ಪ್ಯಾನ್ ಸಂಖ್ಯೆ ಉಲ್ಲೇಖಿಸುವ ಬದಲು, ವ್ಯಕ್ತಿಯೊಬ್ಬನ ಕಡೆಯಿಂದ ಆಗುವ ವಾರ್ಷಿಕ ಒಟ್ಟು ಜಮೆ ಮೊತ್ತ ಅಥವಾ ಹಣ ಹಿಂಪಡೆಯುವ ಮೊತ್ತವು ₹10 ಲಕ್ಷ ಮೀರಿದ್ದರೆ ಮಾತ್ರ ಪ್ಯಾನ್ ಉಲ್ಲೇಖ ಕಡ್ಡಾಯ ಎಂದು ಹೇಳಲಾಗಿದೆ.
    • ಕ್ರಿಪ್ರೊ ವಿನಿಮಯ ಕೇಂದ್ರಗಳು ತಮ್ಮಲ್ಲಿನ ಕೆಲವು ಮಾಹಿತಿಗಳನ್ನು ತೆರಿಗೆ ಇಲಾಖೆಯ ಜೊತೆ ಹಂಚಿಕೊಳ್ಳುವುದು ಕಡ್ಡಾಯ ಎಂದು ನಿಯಮಗಳಲ್ಲಿ ಹೇಳಲಾಗಿದೆ ಅಲ್ಲದೆ, ಕೇಂದ್ರೀಯ ಬ್ಯಾಂಕ್‌ನ ಡಿಜಿಟಲ್ ಕರೆನ್ಸಿಯು (ಸಿಬಿಡಿಸಿ) ಒಪ್ಪಿತ ಎಲೆಕ್ಟ್ರಾನಿಕ್ ಪಾವತಿ ವಿಧಾನಗಳಲ್ಲಿ ಒಂದು ಎಂದು ಹೇಳಿದೆ.
    • ದ್ವಿಚಕ್ರ ವಾಹನ ಸೇರಿದಂತೆ ₹5 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ಯಾವುದೇ ಮೋಟಾರು ವಾಹನ ಖರೀದಿಸುವಾಗ ಪ್ಯಾನ್ ಉಲ್ಲೇಖಿಸುವುದು ಕಡ್ಡಾಯ ಆಗುತ್ತದೆ.
    • ಹೋಟೆಲ್ ಅಥವಾ ರೆಸ್ಟೋರೆಂಟ್ ಬಿಲ್ ಮೊತ್ತ ಸಭಾಭವನಗಳಿಗೆ ಅಥವಾ ಬ್ಯಾಂಕ್ಷೆಟ್ ಹಾಲ್‌ಗಳಿಗೆ ಅಥವಾ ಕಾರ್ಯಕ್ರಮ ನಿರ್ವಹಣೆ ಮಾಡುವ ವ್ಯಕ್ತಿಗೆ ಮಾಡುವ ಪಾವತಿ ಮೊತ್ತ ₹1 ಲಕ್ಷಕ್ಕಿಂತ ಹೆಚ್ಚಿದ್ದರೆ ಪ್ಯಾನ್ ಸಂಖ್ಯೆ ನಮೂದು ಕಡ್ಡಾಯ ಆಗಲಿದೆ.
    • ಈಗಿರುವ ನಿಯಮಗಳ ಪ್ರಕಾರ ಹೋಟೆಲ್ ಅಥವಾ ರೆಸ್ಟೋರೆಂಟ್ ಶುಲ್ಕವು ₹50 ಸಾವಿರಕ್ಕಿಂತ ಹೆಚ್ಚಿದ್ದರೆ ಪ್ಯಾನ್ ಸಂಖ್ಯೆಉಲ್ಲೇಖಿಸಬೇಕಾಗುತ್ತದೆ.

    ಪತ್ರಿಕೆ-III: ಸಾಮಾನ್ಯ ಅಧ್ಯಯನ-2

    ಪತ್ರಿಕೆ-IV: ಸಾಮಾನ್ಯ ಅಧ್ಯಯನ-3

    ಶರಾವತಿ ಪಂಪ್ ಸ್ಟೋರೇಜ್ ಘಟಕ ವಿವರಣೆ ಕೇಳಿದ ವನ್ಯಜೀವಿ ಮಂಡಳಿ
    ಸಂದರ್ಭ: ಎರಡು ಸಾವಿರ ಮೆಗಾವಾಟ್ ಸಾಮರ್ಥ್ಯದ ಶರಾವತಿ ಪಂಪ್ ಸ್ಕೋರೇಜ್ ಘಟಕದ ಬಗ್ಗೆ ಹೆಚ್ಚುವರಿ ಮಾಹಿತಿ ಹಾಗೂ ವಿವರಣೆ ಒದಗಿಸುವಂತೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸ್ಥಾಯಿ ಸಮಿತಿಯು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

    • ಕೇಂದ್ರ ಅರಣ್ಯ ಸಚಿವ ಭೂಪೇಂದರ್ ಯಾದವ್‌ ಅಧ್ಯಕ್ಷತೆಯಲ್ಲಿ ನಡೆದ ಮಂಡಳಿಯ 89ನೇ ಸಭೆಯಲ್ಲಿ ವನ್ಯಜೀವಿ ಅನುಮೋದನೆಯ ಈ ಪ್ರಸ್ತಾವವನ್ನು ಮುಂದೂಡಲು ತೀರ್ಮಾನಿಸಲಾಯಿತು.
    • ಯೋಜನೆಯಿಂದ ವಿದ್ಯುತ್ ಲಭ್ಯತೆಯ ಹೆಚ್ಚಳದ ಬಗ್ಗೆ ವಿವರವಾದ ಸಮರ್ಥನೆಯನ್ನು ರಾಜ್ಯ ಸರ್ಕಾರ ಒದಗಿಸಬೇಕು. ಸಂರಕ್ಷಿತ ಪ್ರದೇಶದ ಹೊರಗೆ ವಿದ್ಯುತ್ ಸಂಗ್ರಹದ ಪರ್ಯಾಯ ತಂತ್ರಜ್ಞಾನಗಳನ್ನು ಪರಿಶೀಲಿಸಬೇಕು. ಪ್ರಸ್ತಾವದ ಬಗ್ಗೆ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಸ್ಟಡೀಸ್‌ನಿಂದ ಅಭಿಪ್ರಾಯ ಪಡೆದು ಸಲ್ಲಿಸಬೇಕು ಎಂದು ಸ್ಥಾಯಿ ಸಮಿತಿ ಸೂಚಿಸಿದೆ.
    • ಪಂಚ್ ಸ್ಟೋರೇಜ್ ಯೋಜನೆಯ ಪ್ರಸ್ತಾವ ಬಗ್ಗೆ, 2025ರ ಜೂನ್ 26ರಂದು ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯ 84ನೇ ಸಭೆಯಲ್ಲಿ ಚರ್ಚಿಸಲಾಗಿತ್ತು ಷರತ್ತುಗಳನ್ನು ವಿಧಿಸಿ ಯೋಜನೆಗೆ ತಾತ್ವಿಕ ಅನುಮೋದನೆ ನೀಡಲಾಗಿತ್ತು.
    • ಆಗಸ್ಟ್ 19ರಂದು ನಡೆದ ಸ್ಥಾಯಿ ಸಮಿತಿಯ 85ನೇ ಸಭೆಯಲ್ಲಿ ಪ್ರಸ್ತಾವವನ್ನು ಮರು ಪರಿಶೀಲಿಸಲಾಗಿತ್ತು ಪಶ್ಚಿಮ ಘಟ್ಟದಲ್ಲಿ ಜಾರಿಗೊಳ್ಳಲಿರುವ ಈ ಯೋಜನೆ ಬಗ್ಗೆ, ಕೆಲವು ಸದಸ್ಯರು ತೀವು ಶ್ರೀ ಕಳವಳ ವ್ಯಕ್ತಪಡಿಸಿದ್ದರು.
    • ಈ ಹಿನ್ನೆಲೆಯಲ್ಲಿ ತಜ್ಞರ ಸಮಿತಿ ರಚಿಸಿ ವರದಿ ಪಡೆದುಕೊಳ್ಳಲು ತೀರ್ಮಾನಿಸಲಾಗಿತ್ತು ‘ಯೋಜನೆಯ ಪ್ರಸ್ತಾವವು ತಾಂತ್ರಿಕ ಅರ್ಹತೆ, ಪರಿಸರ ಸುಸ್ಥಿರತೆ ಹಾಗೂ ಸಾರ್ವಜನಿಕ ಹಿತಾಸಕ್ತಿ ಹೊಂದಿಲ್ಲ’ ಎಂದು ಸಮಿತಿ ಇತ್ತೀಚೆಗೆ ವರದಿ ಸಲ್ಲಿಸಿತ್ತು.

    ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ 2,000 ಮೆಗಾವಾಟ್ ಸಾಮರ್ಥ್ಯದ ಹೈಡ್ರೋಎಲೆಕ್ಟ್ರಿಕ್ ಯೋಜನೆಯಾಗಿದೆ.

    ಶರಾವತಿ ಪಂಪ್ ಸ್ಟೋರೇಜ್ ಯೋಜನೆ-–ವಿವರಗಳು

    ಅಂಶವಿವರಗಳು
    ಯೋಜನೆಯ ಹೆಸರುಶರಾವತಿ ಪಂಪ್ ಸ್ಟೋರೇಜ್ ಹೈಡ್ರೋಎಲೆಕ್ಟ್ರಿಕ್ ಯೋಜನೆ
    ಸ್ಥಳಶರಾವತಿ ಕಣಿವೆ, ಶಿವಮೊಗ್ಗ ಜಿಲ್ಲೆ, ಕರ್ನಾಟಕ (ಪಶ್ಚಿಮ ಘಟ್ಟಗಳು)
    ಒಟ್ಟು ಸಾಮರ್ಥ್ಯ2,000 ಮೆಗಾವಾಟ್ (MW)
    ತಂತ್ರಜ್ಞಾನಪಂಪ್ ಸ್ಟೋರೇಜ್ ಹೈಡ್ರೋಎಲೆಕ್ಟ್ರಿಕ್ ಪ್ಲಾಂಟ್ (PSP)
    ನಿರ್ವಹಣೆ/ಮಾಲೀಕತ್ವಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (KPCL)
    ಯೋಜಿತ ಚಾಲನೆ ವರ್ಷ2029
    ಜಲಾಶಯಗಳ ಬಳಕೆಮೇಲಿನ ಜಲಾಶಯ: ತಲಕಳಲೆ ಅಣೆಕಟ್ಟು
    ಕೆಳಗಿನ ಜಲಾಶಯ: ಗೇರುಸೊಪ್ಪ ಅಣೆಕಟ್ಟು
    ತಾಂತ್ರಿಕ ಸೌಲಭ್ಯ14 ಕಿಲೋಮೀಟರ್ ಉದ್ದದ ಬೃಹತ್ ಭೂಗರ್ಭ ಸುರಂಗಗಳು
    ಅಂದಾಜು ವೆಚ್ಚ₹10,000 ಕೋಟಿಗೂ ಅಧಿಕ
    ಭೂಮಿಯ ಅಗತ್ಯತೆಒಟ್ಟು 153 ಹೆಕ್ಟೇರ್ (ಇದರಲ್ಲಿ 140 ಹೆಕ್ಟೇರ್ ದಟ್ಟ ಅರಣ್ಯ ಪ್ರದೇಶ)

    ಪರಿಸರ ಸವಾಲುಗಳು ಮತ್ತು ಪ್ರಸ್ತುತ ಸ್ಥಿತಿ

    ಅಂಶವಿವರಣೆ
    ಪರಿಸರ ಕಳವಳಗಳುಸಿಂಹಬಾಲದ ಸಿಂಗಳೀಕ (LTM) ಅಭಯಾರಣ್ಯಕ್ಕೆ ಹಾನಿ, ಜೀವವೈವಿಧ್ಯದ ನಾಶ ಮತ್ತು ವನ್ಯಜೀವಿಗಳ ಸಂಚಾರ ಮಾರ್ಗಕ್ಕೆ ಅಡ್ಡಿ.
    ಅರಣ್ಯ ಇಲಾಖೆ ಆಕ್ಷೇಪಸೂಕ್ಷ್ಮ ಪರಿಸರ ವಲಯದಲ್ಲಿ ಬೃಹತ್ ಸ್ಫೋಟ ಮತ್ತು ನಿರ್ಮಾಣ ಕಾರ್ಯಗಳಿಂದ ಆಗುವ ಹಾನಿ.
    ಪ್ರಸ್ತುತ ಸ್ಥಿತಿರಾಷ್ಟ್ರೀಯ ವನ್ಯಜೀವಿ ಮಂಡಳಿ (NBWL) ಹೆಚ್ಚುವರಿ ವಿವರಣೆ ಕೋರಿದೆ. ತಾಂತ್ರಿಕ ಮತ್ತು ಸಾರ್ವಜನಿಕ ಹಿತಾಸಕ್ತಿಯ ಕೊರತೆಯಿದೆ ಎಂದು ತಜ್ಞರ ವರದಿ ತಿಳಿಸಿದೆ.

    ಶರಾವತಿ ನದಿ

    ಮಾಹಿತಿವಿವರ
    ಮೂಲಅಂಬುತೀರ್ಥ (ತೀರ್ಥಹಳ್ಳಿ ತಾಲ್ಲೂಕು), ಶಿವಮೊಗ್ಗ ಜಿಲ್ಲೆ
    ಒಟ್ಟು ಉದ್ದಸುಮಾರು 128 ಕಿ.ಮೀ.
    ಮುಖ್ಯ ಆಕರ್ಷಣೆಜೋಗ ಜಲಪಾತ (ಭಾರತದ ಪ್ರಸಿದ್ಧ ಜಲಪಾತಗಳಲ್ಲಿ ಒಂದು)
    ನದಿಯ ಮುಖಜ ಭೂಮಿಹೊನ್ನಾವರ ಬಳಿ ಅರಬ್ಬೀ ಸಮುದ್ರವನ್ನು ಸೇರುತ್ತದೆ
    ಪ್ರಮುಖ ಪ್ರಾಣಿಗಳುಸಿಂಹಬಾಲದ ಸಿಂಗಳೀಕ (Lion-Tailed Macaque), ಮಲಬಾರ್ ಸಿವೆಟ್ (Malabar Civet)
    ಆರ್ಥಿಕ ಮಹತ್ವಕರ್ನಾಟಕದ ಅತಿದೊಡ್ಡ ವಿದ್ಯುತ್ ಉತ್ಪಾದನಾ ಮೂಲಗಳಲ್ಲಿ ಒಂದಾದ ‘ಶರಾವತಿ ಜಲವಿದ್ಯುತ್ ಯೋಜನೆ’ (ಲಿಂಗನಮಕ್ಕಿ ಅಣೆಕಟ್ಟು).
    • ಪಂಪ್ ಸ್ಟೋರೇಜ್ ಯೋಜನೆಯು ರಾತ್ರಿ ವೇಳೆ ಅಥವಾ ಸೌರಶಕ್ತಿ ಹೆಚ್ಚಿರುವಾಗ ನೀರನ್ನು ಮೇಲೆ ಪಂಪ್ ಮಾಡಿಟ್ಟುಕೊಂಡು, ವಿದ್ಯುತ್ ಬೇಡಿಕೆ ಹೆಚ್ಚಾದಾಗ ಅದನ್ನು ಬಳಸಿ ವಿದ್ಯುತ್ ಉತ್ಪಾದಿಸುವ ವಿಶಿಷ್ಟ ತಂತ್ರಜ್ಞಾನವಾಗಿದೆ.

    ಪತ್ರಿಕೆ-V: ಸಾಮಾನ್ಯ ಅಧ್ಯಯನ-4

    ಸಾರ್ವಜನಿಕ ಸೇವೆ ಮತ್ತು ಆಡಳಿತಾತ್ಮಕ ಜವಾಬ್ದಾರಿ

    1. ಸನ್ನಿವೇಶ (The Scenario)
    ನೀವು ಒಂದು ಜಿಲ್ಲೆಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಆಗಿದ್ದೀರಿ. ಬೇಸಿಗೆ ಆರಂಭವಾಗಿದ್ದು, ನಿಮ್ಮ ವ್ಯಾಪ್ತಿಯ ಅನೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವವಿದೆ. ಸರ್ಕಾರವು ತಿಂಗಳುಗಳ ಹಿಂದೆಯೇ “ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕಗಳನ್ನು (RO Plants) ದುರಸ್ತಿಗೊಳಿಸಿ ಸಿದ್ಧವಾಗಿಟ್ಟುಕೊಳ್ಳಿ” ಎಂದು ಆದೇಶಿಸಿತ್ತು. ಆದರೆ, ನಿಮ್ಮ ಕೆಳಗಿನ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈಗಲೂ 70ಕ್ಕೂ ಹೆಚ್ಚು ಘಟಕಗಳು ಕೆಟ್ಟು ನಿಂತಿವೆ. ಜನರು ಕುಡಿಯುವ ನೀರಿಲ್ಲದೆ ಪರದಾಡುತ್ತಿದ್ದಾರೆ ಮತ್ತು ಮಾಧ್ಯಮಗಳಲ್ಲಿ ಸರ್ಕಾರದ ವಿರುದ್ಧ ವರದಿಗಳು ಪ್ರಕಟವಾಗುತ್ತಿವೆ.

      ಸವಾಲುಗಳು:
      ಹಿರಿಯ ಅಧಿಕಾರಿಗಳಿಂದ ಮತ್ತು ಮಂತ್ರಿಗಳಿಂದ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಡವಿದೆ.
      ದುರಸ್ತಿಗೆ ಮೀಸಲಿಟ್ಟ ಹಣವನ್ನು ಬಳಸಲು ತಾಂತ್ರಿಕ ಪ್ರಕ್ರಿಯೆಗಳಿಗೆ ಸಮಯ ಬೇಕು.
      ಖಾಸಗಿ ಟ್ಯಾಂಕರ್ ಮಾಫಿಯಾದವರು ಈ ಪರಿಸ್ಥಿತಿಯ ಲಾಭ ಪಡೆದು ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ.

      2. ನೈತಿಕ ಸಂಘರ್ಷಗಳು (Ethical Dilemmas)
      ಕರ್ತವ್ಯ ಲೋಪ vs ಉತ್ತರದಾಯಿತ್ವ: ಕೆಳಗಿನ ಅಧಿಕಾರಿಗಳು ಕೆಲಸ ಮಾಡದಿದ್ದರೂ, ಅದರ ಅಂತಿಮ ಜವಾಬ್ದಾರಿ (Accountability) ನಿಮ್ಮ ಮೇಲಿರುತ್ತದೆ. ಅವರಿಗೆ ಶಿಕ್ಷೆ ನೀಡಬೇಕೆ ಅಥವಾ ಮೊದಲು ಕೆಲಸ ಮಾಡಿಸಿಕೊಳ್ಳಬೇಕೆ?
      ಪಾರದರ್ಶಕತೆ vs ತುರ್ತು ಪರಿಸ್ಥಿತಿ: ತುರ್ತು ಪರಿಸ್ಥಿತಿಯಲ್ಲಿ ಟೆಂಡರ್ ಪ್ರಕ್ರಿಯೆಗಳನ್ನು ಬದಿಗಿಟ್ಟು ಕೆಲಸ ಮಾಡಿಸಿದರೆ ನಂತರ ನಿಮ್ಮ ಮೇಲೆ ‘ಅವ್ಯವಹಾರ’ದ ಆರೋಪ ಬರಬಹುದು. ಆದರೆ ನಿಯಮ ಪಾಲಿಸಿದರೆ ಜನರಿಗೆ ನೀರು ಸಿಗುವುದು ತಡವಾಗುತ್ತದೆ.
      ಸಾರ್ವಜನಿಕ ಹಿತಾಸಕ್ತಿ vs ಆಡಳಿತಾತ್ಮಕ ವಿಳಂಬ: ಜನರ ಜೀವ ಉಳಿಸುವುದು ಮುಖ್ಯವೋ ಅಥವಾ ಕಚೇರಿಯ ಕಡತಗಳ ಪ್ರಕ್ರಿಯೆ ಮುಖ್ಯವೋ?

      3. ಲಭ್ಯವಿರುವ ಆಯ್ಕೆಗಳು (Options Available)
      ಆಯ್ಕೆ 1: ನಿಯಮಗಳ ಪ್ರಕಾರವೇ ಹೋಗುವುದು.
      ಪರಿಣಾಮ: ನೀವು ಸುರಕ್ಷಿತವಾಗಿರುತ್ತೀರಿ, ಆದರೆ ನೀರು ಪೂರೈಕೆ ವಿಳಂಬವಾಗಿ ಜನರ ಆಕ್ರೋಶ ಹೆಚ್ಚುತ್ತದೆ. ಇದು ‘ಬ್ಯೂರೋಕ್ರಾಟಿಕ್ ಅಪತಿ’ (Bureaucratic Apathy) ಎನಿಸಿಕೊಳ್ಳುತ್ತದೆ.
      ಆಯ್ಕೆ 2: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಅಮಾನತು ಮಾಡುವುದು.
      ಪರಿಣಾಮ: ಇದು ಕಟ್ಟುನಿಟ್ಟಿನ ಕ್ರಮದಂತೆ ಕಂಡರೂ, ತಕ್ಷಣದ ನೀರಿನ ಸಮಸ್ಯೆಗೆ ಪರಿಹಾರ ನೀಡುವುದಿಲ್ಲ. ಬದಲಿಗೆ ಕೆಲಸ ಮಾಡುವ ಸಿಬ್ಬಂದಿಗಳ ಕೊರತೆ ಉಂಟಾಗಬಹುದು.
      ಆಯ್ಕೆ 3: ‘ಮಿಷನ್ ಮೋಡ್’ನಲ್ಲಿ ಕೆಲಸ ಮಾಡಿ ಪರ್ಯಾಯ ವ್ಯವಸ್ಥೆ ಮಾಡುವುದು.
      ಪರಿಣಾಮ: ಇದು ಅತ್ಯುತ್ತಮ ನೈತಿಕ ಹಾದಿ. ಜನರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸುವುದು ನಿಮ್ಮ ಮೊದಲ ಆದ್ಯತೆಯಾಗಬೇಕು.

      4. ಪರಿಹಾರ ಮತ್ತು ಕ್ರಮಗಳು (Recommended Action Plan)
      ಒಬ್ಬ ನೈತಿಕ ಅಧಿಕಾರಿಯಾಗಿ ನೀವು ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಬೇಕು:
      ತಕ್ಷಣದ ಪರಿಹಾರ (Immediate Relief): ದುರಸ್ತಿ ಆಗುವವರೆಗೆ ಬಾಡಿಗೆ ಕೊಳವೆಬಾವಿ ಮತ್ತು ಟ್ಯಾಂಕರ್ ಮೂಲಕ ನೀರು ಒದಗಿಸಲು ಆದೇಶಿಸುವುದು. ಟ್ಯಾಂಕರ್ ಮಾಫಿಯಾ ತಡೆಯಲು ಜಿಪಿಎಸ್ (GPS) ಆಧಾರಿತ ಮೇಲ್ವಿಚಾರಣೆ ಮಾಡುವುದು.
      ಸಮಾನಾಂತರ ದುರಸ್ತಿ (Parallel Repair): 71 ಘಟಕಗಳ ದುರಸ್ತಿಗೆ ವಾರ್ ಫೂಟಿಂಗ್ (War footing) ಆಧಾರದಲ್ಲಿ ತಾಂತ್ರಿಕ ತಂಡಗಳನ್ನು ನೇಮಿಸುವುದು. ಹಣಕಾಸಿನ ವಿಳಂಬವಾಗದಂತೆ ‘ತುರ್ತು ನಿಧಿ’ (Contingency fund) ಬಳಸುವುದು.
      ಜವಾಬ್ದಾರಿ ನಿಗದಿ (Fixing Responsibility): ಕೆಲಸ ವಿಳಂಬ ಮಾಡಿದ ಅಧಿಕಾರಿಗಳಿಗೆ ‘ನೋಟಿಸ್’ ನೀಡಿ ವಿವರಣೆ ಕೇಳುವುದು. ಭವಿಷ್ಯದಲ್ಲಿ ಇಂತಹ ತಪ್ಪು ಮರುಕಳಿಸದಂತೆ ವಾರ್ಷಿಕ ನಿರ್ವಹಣಾ ಒಪ್ಪಂದ (AMC) ಕಡ್ಡಾಯಗೊಳಿಸುವುದು.
      ಪಾರದರ್ಶಕತೆ (Transparency): ಯಾವ ಹಳ್ಳಿಗೆ ಎಷ್ಟು ನೀರು ಹೋಗುತ್ತಿದೆ ಎಂಬುದನ್ನು ಸಾರ್ವಜನಿಕವಾಗಿ ಪ್ರಕಟಿಸಿ ಸಾರ್ವಜನಿಕರ ವಿಶ್ವಾಸ ಗಳಿಸುವುದು.

        ನೈತಿಕ ಪಾಠ (Ethical Lesson):
        ನಾಗರಿಕ ಸೇವೆಯಲ್ಲಿ “ಸಾರ್ವಜನಿಕ ಸೇವೆಯೇ ಪರಮೋಚ್ಚ” (Service to public is the highest goal). ನಿಯಮಗಳು ಜನರಿಗಾಗಿ ಇರಬೇಕೇ ಹೊರತು, ಜನರು ನಿಯಮಗಳಿಗಾಗಿ ಕಷ್ಟಪಡಬಾರದು. ಸಕಾಲದಲ್ಲಿ ಸ್ಪಂದಿಸುವುದು (Responsiveness) ಒಬ್ಬ ಉತ್ತಮ ಅಧಿಕಾರಿಯ ಲಕ್ಷಣ.

        Sources: Prajavani

        ಕೆಎಎಸ್ ಪ್ರಚಲಿತ ವಿದ್ಯಮಾನಗಳು

        ಪೂರ್ವಭಾವಿ ಪರೀಕ್ಷೆ

        ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು

        ಕೈಗಾರಿಕಾ ಪಾರ್ಕ್‌ಗಳ ನಿರ್ಮಾಣಕ್ಕೆ 233,660 ಕೋಟಿಗೆ ಅನುಮೋದನೆ L 15 ಲಕ್ಷ ನೇರ ಉದ್ಯೋಗ ಸೃಷ್ಟಿ ನಿರೀಕ್ಷೆ: ‘ಭವ್ಯ’ ಯೋಜನೆಗೆ ಕೇಂದ್ರ ಅಸ್ತು

        • ದೇಶದಲ್ಲಿ ತಯಾರಿಕಾ ವಲಯಕ್ಕೆ ಉತ್ತೇಜನ ನೀಡಲು ‘ಭಾರತ್ ಔದ್ಯೋಗಿಕ್ ವಿಕಾಸ್ ಯೋಜನೆ’ಗೆ (ಭವ್ಯ) ಯೋಜನೆಗೆ ಪ್ರಧಾನಿ ನೇತೃತ್ವದ ಸಚಿವ ಸಂಪುಟವು ಅನುಮೋದನೆ ನೀಡಿದೆ.
        • ಈ ಯೋಜನೆಯ ಅಡಿ ಬಳಕೆಗೆ ಸಿದ್ಧವಾಗಿರುವ 100 ಕೈಗಾರಿಕಾ ಪಾರ್ಕ್‌ಗಳನ್ನು ದೇಶದ ವಿವಿಧೆಡೆ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ 33,660 ಕೋಟಿ ವ್ಯಯಿ ಸಲು ಸಚಿವ ಸಂಪುಟವು ಒಪ್ಪಿಗೆ ನೀಡಿದೆ. ಈ ಯೋಜನೆಯಿಂದ 15 ಲಕ್ಷ ನೇರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.
        • ‘ವಿಶ್ವದರ್ಜೆಯ ಕೈಗಾರಿಕಾ ಮೂಲಸೌಕರ್ಯವನ್ನು ಈ ಯೋಜನೆಯ ಅಡಿ ಅಭಿವೃದ್ಧಿ ಮಾಡಲಾಗುವುದು ತಯಾರಿಕಾ ಘಟಕಗಳಲ್ಲಿ ಗರಿಷ್ಠ ಮಟ್ಟದ ಉತ್ಪಾದನೆ, ದಕ್ಷತೆ ಮತ್ತು ನಾವೀನ್ಯತೆ ಇರಲಿದೆ’.
        • ಈ ಪಾರ್ಕ್‌ಗಳು ರಸ್ತೆಗಳು, ನೀರು, ವಿದ್ಯುತ್‌, ಚರಂಡಿಗಳು, ಐಸಿಟಿ ಸೇರಿದಂತೆ ಪ್ರಮುಖ ಮೂಲಸೌಕರ್ಯ ಗಳನ್ನು ಹೊಂದಿರಲಿವೆ. ಇದರ ಜೊತೆಗೆ ಪರೀಕ್ಷಾ ಪ್ರಯೋಗಾಲಯಗಳು, ಗೋದಾಮು, ಕಾರ್ಮಿಕರಿಗೆ ವಸತಿ ಸೌಕರ್ಯ ಮತ್ತು ಇತರೆ ಸೌಲಭ್ಯಗಳು ಇರಲಿವೆ.
        • ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮದ (ಎನ್‌ಐಸಿಡಿಪಿ) ಅಡಿಯಲ್ಲಿ ಅಭಿವೃದ್ಧಿ ಪಡಿಸಲಾದ ಕೈಗಾರಿಕಾ ಸ್ಮಾರ್ಟ್ ಸಿಟಿಗಳ ಯಶಸ್ಸಿನ ಆಧಾರದ ಮೇಲೆ, ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಖಾಸಗಿ ವಲಯದ ಪಾಲುದಾರರ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗುವುದು.
        • ನಿಯಮಗಳ ಸಡಿಲಗೊಳಿಸುವಿಕೆ, ತ್ವರಿತವಾಗಿ ಯೋಜನೆಗಳಿಗೆ ಅನುಮೋದನೆ ನೀಡುವುದು, ಏಕಗವಾಕ್ಷಿ ವ್ಯವಸ್ಥೆಯನ್ನು ಪರಿಣಾಮ ಕಾರಿಯಾಗಿ ಜಾರಿಗೆ ತರುವುದು ಮತ್ತು ರಾಜ್ಯಗಳಿಂದ ಹೂಡಿಕೆದಾರ ಸ್ನೇಹಿ ಸುಧಾರಣೆಗಳ ಜಾರಿ ಮೂಲಕ ಸುಲಲಿತ ವಹಿವಾಟು ಸಾಧ್ಯವಾಗುವಂತೆ ಮಾಡುವ ಉದ್ದೇಶವನ್ನು ‘ಭವ್ಯ’ ಯೋಜನೆಯು ಹೊಂದಿದೆ.
        • ಹೊಸ ಯೋಜನೆಯು ಬಳಕೆಗೆ ಸಿದ್ಧವಾಗಿರುವ ಕೈಗಾರಿಕಾ ಮೂಲ ಸೌಕರ್ಯವನ್ನು ಬಯಸುವ ತಯಾರಿಕಾ ಘಟಕಗಳಿಗೆ, ಎಂಎಸ್‌ಎಂಇ ವಲಯದ ಉದ್ದಿಮೆಗಳಿಗೆ, ನವೋದ್ಯಮಗಳಿಗೆ, ಜಾಗತಿಕ ಹೂಡಿಕೆದಾರರಿಗೆ ನೇರವಾಗಿ ಅನುಕೂಲ ಮಾಡಿಕೊಡಲಿದೆ.
        • 100 ಎಕರೆಯಿಂದ 1 ಸಾವಿರ ಎಕರೆಯವರೆಗಿನ ವಿಸ್ತೀರ್ಣದ ಕೈಗಾರಿಕಾ ಪಾರ್ಕ್‌ಗಳ ಅಭಿವೃದ್ಧಿಗೆ ಪ್ರತಿ ಎಕರೆಗೆ 1 ಕೋಟಿ ಹಣಕಾಸಿನ ನೆರವನ್ನು ಈ ಯೋಜನೆಯ ಅಡಿಯಲ್ಲಿ ನೀಡಲಾಗುತ್ತದೆ.

        ₹2,585 ಕೋಟಿ ವೆಚ್ಚದ ಕಿರು ಜಲ ವಿದ್ಯುತ್ ಅಭಿವೃದ್ಧಿ ಯೋಜನೆ: ಕೇಂದ್ರದ ಒಪ್ಪಿಗೆ
        ಸಂದರ್ಭ: ₹2,585 ಕೋಟಿ ವೆಚ್ಚದ ಕಿರು ಜಲ ವಿದ್ಯುತ್ ಅಭಿವೃದ್ಧಿ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. 1,500 ಮೆಗಾ ವಾಟ್ ಸಾಮರ್ಥ್ಯದ ನವೀಕರಿಸಬಹುದಾದ ಇಂಧನ ಅಭಿವೃದ್ಧಿಯ ಉದ್ದೇಶ ಇದಾಗಿದೆ.

        • ‘ನದಿ ಹರಿಯುವ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಿಸದೆ, ಜನರನ್ನು ಸ್ಥಳಾಂತರ ಮಾಡದೇ ವಿದ್ಯುತ್ ಉತ್ಪಾದಿಸುವ ಯೋಜನೆ, ಇದು ದೇಶದ 7,133 ಸ್ಥಳಗಳಲ್ಲಿ 21,000 ಮೆ.ವಾ ವಿದ್ಯುತ್ ಉತ್ಪಾದಿಸುವ ಸಣ್ಣ ಜಲ ವಿದ್ಯುತ್ ಉತ್ಪಾದನಾ ಕೇಂದ್ರಗಳಿಗೆ ಅವಕಾಶ ಇದೆ.
        • ಒಂದು ಘಟಕದಿಂದ 1 ಮೆಗಾ ವಾಟ್‌ನಿಂದ 25 ಮೆಗಾ ವಾಟ್ವರೆಗೂ ವಿದ್ಯುತ್ ಉತ್ಪಾದಿಸಬಹುದಾಗಿದೆ’.
        • ‘ಮುಂದಿನ ಐದು ವರ್ಷಗಳಲ್ಲಿ (2030-31) ಯೋಜನೆಗಳನ್ನು ಅನುಷ್ಠಾನಗೊಳಿಸಲಿದ್ದು, ₹ 15,000 ಹೂಡಿಕೆ ಆಕರ್ಷಿಸುವ ಸಾಧ್ಯತೆ ಇದೆ.
        • ಗರಿಷ್ಠ 30 ಕೋಟಿ ವೆಚ್ಚದ ಒಂದು ಯೋಜನೆಗೆ ಕೇಂದ್ರ ಸರ್ಕಾರ ಯೋಜನಾ ವೆಚ್ಚದ ಶೇ.30ರಷ್ಟು ಆರ್ಥಿಕ ನೆರವು ನೀಡಲಿದೆ’.
        • ಸದ್ಯ ದೇಶದಲ್ಲಿ ಸಣ್ಣ ಜಲ ವಿದ್ಯುತ್ ಯೋಜನೆಗಳಿಂದ 5,100 ಮೆ.ವಾ ವಿದ್ಯುತ್ ಉತ್ಪಾದಿಸಲಾಗುತ್ತಿದೆ.

        ‘ದಿವ್ಯಾಂಗ ಶಕ್ತಿ’ ಯೋಜನೆಗೆ ಚಾಲನೆ

        • ಅಂಗವಿಕಲರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ‘ದಿವ್ಯಾಂಗ ಶಕ್ತಿ’ ಯೋಜನೆಗೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಚಾಲನೆ ನೀಡಿದರು. ಯುಗಾದಿ ಹಬ್ಬದ ವಿಶೇಷ ಉಡುಗೊರೆಯಾಗಿ ಘೋಷಿಸಲಾದ ಈ ಯೋಜನೆಯು ಸಾಮಾಜಿಕ ಸಮಾನತೆ, ಸಂಚಾರ ಸೌಲಭ್ಯ ಮತ್ತು ಕಟ್ಟಕಡೆಯ ವ್ಯಕ್ತಿಗೂ ಘನತೆಯ ಬದುಕು ನೀಡುವ ಗುರಿ ಹೊಂದಿದೆ.
        • ಯೋಜನೆಯು 21 ಅಂಗವೈಕಲ್ಯ ಇರುವವರನ್ನು ಒಳಗೊಳ್ಳಲಿದ್ದು, ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮದ (ಎಪಿಎಸ್‌ಆರ್‌ಟಿಸಿ) ಐದು ವಿಧದ ಬನ್‌ಗಳಲ್ಲಿ ಉಚಿತ ಪ್ರಯಾಣದ ಜೊತೆಗೆ, ಅವರ ಸಹಾಯಕರಿಗೆ ಶೇ 50ರಷ್ಟು ರಿಯಾಯಿತಿ ನೀಡುತ್ತದೆ.


        ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು

        ಮುಖ್ಯ ಪರೀಕ್ಷೆ

        ಪತ್ರಿಕೆ-I: ಪ್ರಬಂಧಗಳು

        ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ

        “ಭಾರತೀಯ ಮೀಸಲಾತಿ ವ್ಯವಸ್ಥೆಯಲ್ಲಿ ‘ಕೆನೆಪದರ’ (Creamy Layer) ನೀತಿ: ಸಂವಿಧಾನಾತ್ಮಕ ಆಶಯಗಳು, ನ್ಯಾಯಾಂಗದ ಹಸ್ತಕ್ಷೇಪ ಮತ್ತು ಸಾಮಾಜಿಕ ನ್ಯಾಯದ ಮುಂದಿರುವ ಸವಾಲುಗಳು.”

        ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ

        “ಕರ್ನಾಟಕದ 11G ಮಾದರಿ ಆರ್ಥಿಕತೆ: ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಯ ಹೊಸ ದಿಕ್ಸೂಚಿ.”

        ಪತ್ರಿಕೆ-II: ಸಾಮಾನ್ಯ ಅಧ್ಯಯನ-1

        ಪತ್ರಿಕೆ-III: ಸಾಮಾನ್ಯ ಅಧ್ಯಯನ-2

        ಆರ್‌ಟಿಐ ವ್ಯಾಪ್ತಿಗೆ ಅಪೆಕ್ಸ್ ಬ್ಯಾಂಕ್‌ : ಮಾಹಿತಿ ಆಯೋಗ
        ಸಂದರ್ಭ: ಅಪೆಕ್ಸ್ ಬ್ಯಾಂಕ್ ಅನ್ನು ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಸಾರ್ವಜನಿಕ ಪ್ರಾಧಿಕಾರ ಎಂದು ಘೋಷಿಸಿರುವ ರಾಜ್ಯ ಮಾಹಿತಿ ಆಯೋಗವು, ಎಲ್ಲಾ ಕಚೇರಿಗಳಲ್ಲಿ ತಕ್ಷಣವೇ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮತ್ತು ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳನ್ನು ನೇಮಿಸಬೇಕು ಎಂದೂ ಆದೇಶಿಸಿದೆ.

        • ರಾಜ್ಯ ಮಾಹಿತಿ ಆಯುಕ್ತ ಎಸ್. ರಾಜಶೇಖರ ಈ ಆದೇಶ ಹೊರಡಿಸಿದ್ದಾರೆ.
        • ಹನುಮಂತ ವಸಂತ ಶಿಂಧೆ ಸಲ್ಲಿಸಿದ್ದ ದ್ವಿತೀಯ ಮೇಲ್ಮನವಿಯಲ್ಲಿ ನಿರಾಣಿ ಶುಗರ್ಸ್ ಲಿಮಿಟೆಡ್ ಸಂಸ್ಥೆಯು ಮಾರ್ಚ್ 2022ರಿಂದ ಜೂನ್ 2024ರವರೆಗೆ ಅಪೆಕ್ಸ್ ಬ್ಯಾಂಕಿನಿಂದ ಪಡೆದ ಸಾಲಗಳಿಗೆ ಸಂಬಂಧಿಸಿದಂತೆ ಸಲ್ಲಿಸಿದ ದಾಖಲೆಗಳ ಪ್ರತಿಗಳನ್ನು ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ ಬ್ಯಾಂಕ್ ತಾವು ಸಹಕಾರ ಸಂಘವಾಗಿರುವುದರಿಂದ ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ಮಾಹಿತಿ ನೀಡಲು ನಿರಾಕರಿಸಿತ್ತು.
        • ಈ ಬಗ್ಗೆ ವಿಚಾರಣೆ ನಡೆಸಿದ ಮಾಹಿತಿ ಆಯುಕ್ತರು, ಬ್ಯಾಂಕ್ ಕಾರ್ಯಾಚರಣೆಯ ಮೇಲೆ ಸರ್ಕಾರದ ಆಳವಾದ ಮತ್ತು ವ್ಯಾಪಕ ನಿಯಂತ್ರಣ ಇದೆ’ ಎಂದು ತಮ್ಮ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
        • ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 4(1)(ಎ) ಮತ್ತು 4(1)(ಬಿ) ಅಡಿಯಲ್ಲಿ ಪ್ರಮುಖ ಮಾಹಿತಿಯನ್ನು ಅಪೆಕ್ಸ್ ಬ್ಯಾಂಕ್ ರ್ಸಾಜನಿಕವಾಗಿ ಪ್ರಕಟಿಸಬೇಕು. ಇದನ್ನು ತಕ್ಷಣ ಜಾರಿಗೆ ತರಲು ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಸಹಕಾರ ಸಂಘಗಳ ನೋಂದಣಾಧಿಕಾರಿಗಳು ಕ್ರಮವಹಿಸಬೇಕು ಎಂದು ಸೂಚನೆ ನೀಡಿದ್ದಾರೆ.

        ಕರ್ನಾಟಕ ಮುನ್ಸಿಪಾಲಿಟಿಗಳ ಮತ್ತು ಕೆಲವು ಇತರಕಾನೂನು ತಿದ್ದುಪಡಿಗೆ ವಿಧಾನ ಪರಿಷತ್ ಒಪ್ಪಿಗೆ: ಖಾಸಗಿ ಜಾಗದಲ್ಲಿನ ಜಾಹೀರಾತಿಗೂ ಶುಲ್ಕ
        ಸಂದರ್ಭ: ಸಾರ್ವಜನಿಕ, ಖಾಸಗಿ ಜಾಗಗಳಲ್ಲಿ ಜಾಹೀರಾತು ಪ್ರದರ್ಶಿಸುವ ಕಂಪನಿಗಳಿಂದ ಶುಲ್ಕ ವಸೂಲಿಗೆ ಹಾಗೂ ಅನಧಿಕೃತವಾಗಿ ಜಾಹೀರಾತು ಫಲಕ ಹಾಕಿದವರಿಗೆ ದಂಡ ವಿಧಿಸಲು ಅವಕಾಶ ಕಲ್ಪಿಸುವ ಮಸೂದೆಗೆ ವಿಧಾನ ಪರಿಷತ್ ಒಪ್ಪಿಗೆ ನೀಡಿತು.

        • ಕರ್ನಾಟಕ ಮುನ್ಸಿಪಾಲಿಟಿಗಳ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಮಸೂದೆ ಮಂಡಿಸಿದ ನಗರಾಭಿವೃದ್ಧಿ ಸಚಿವ, ‘ಬೆಂಗಳೂರು ಬಿಟ್ಟು, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಜಾಹೀರಾತು ಕಂಪನಿಗಳಿಂದ ಶುಲ್ಕ ವಸೂಲಿ ಮಾಡಲು ಮಸೂದೆ ಅವಕಾಶ ಕಲ್ಪಿಸುತ್ತದೆ. ಖಾಸಗಿ ಜಾಗದ ಮಾಲೀಕರಿಂದ ಶುಲ್ಕ ವಸೂಲಿ ಮಾಡುವುದಿಲ್ಲ.
        • ಅನಧಿಕೃತವಾಗಿ ಜಾಹೀರಾತು ಫಲಕಗಳನ್ನು ಹಾಕಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಇವುಗಳನ್ನು ಪತ್ತೆಹಚ್ಚಲು ಡೋನ್ ಮೂಲಕ ಸರ್ವೆ ಮಾಡಲಾಗುವುದು.
        • ‘ಸ್ಥಳೀಯ ಸಂಸ್ಥೆಗಳು ಗುರುತಿಸಿರುವ ಜಾಗದಲ್ಲಿ ಮಾತ್ರ ಜಾಹೀರಾತು ಪ್ರದರ್ಶಿಸಲು ಅವಕಾಶ ಇದೆ. ಶುಲ್ಕ ಕಟ್ಟಿದೆ ಇದ್ದರೆ ಜಾಹೀರಾತು ಫಲಕಗಳನ್ನು ನೆಲಸಮಗೊಳಿಸಲಾಗುವುದು. ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳ ಎಷ್ಟು ಜಾಹೀರಾತು ಫಲಕಗಳು ಇವೆ, ಇವುಗಳಲ್ಲಿ ಅಧಿಕೃತ ಯಾವುದು? ಅನಧಿಕೃತ ಯಾವುದು ಎಂದು ತಿಳಿಯಲು ಆಡಿಟ್ ಮಾಡಿಸುತ್ತೇವೆ’ ಎಂದರು.

        ಪೊಲೀಸ್ ಮಂಡಳಿ ಮೂಲಕವೇ ವರ್ಗಾವಣೆ

        • ದುರ್ನಡತೆ, ನಿರ್ಲಕ್ಷ್ಯ, ಕರ್ತವ್ಯಲೋಪ ಪ್ರಕರಣಗಳಲ್ಲಿ ಭಾಗಿಯಾದ ಅಧಿಕಾರಿಗಳನ್ನು ಸರ್ಕಾರದ ಬದಲು ಪೊಲೀಸ್ ಸಿಬ್ಬಂದಿ ಮಂಡಳಿ ಮೂಲಕವೇ ವರ್ಗಾವಣೆ ಮಾಡಲು ಅವಕಾಶ ನೀಡುವ ಕರ್ನಾಟಕ ಪೊಲೀಸ್ (ತಿದ್ದುಪಡಿ) ಮಸೂದೆಗೆ ವಿಧಾನ ಪರಿಷತ್ ಅನುಮೋದನೆ ನೀಡಿತು.
        • ತಿದ್ದುಪಡಿ ಮಸೂದೆ ಮಂಡಿಸಿದ ಗೃಹ ಸಚಿವ , ‘ಸರ್ಕಲ್ ಇನ್‌ಸ್ಪೆಕ್ಟ‌ರ್, ಇನ್‌ಸ್ಪೆಕ್ಟರ್, ಡಿವೈಎಸ್‌ಪಿ ಹಂತದವರೆಗಿನ ಅಧಿಕಾರಿಗಳಿಗೆ ಮಾತ್ರ ಇದು ಅನ್ವಯವಾಗಲಿದೆ.
        • ಸರ್ಕಾರದ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ವಿಳಂಬವಾಗುತ್ತಿತ್ತು ಮಂಡಳಿಗೆ ಅಧಿಕಾರ ನೀಡುವುದರಿಂದ ತ್ವರಿತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿದೆ’.
        • ಕಾರ್ಯನಿರ್ವಾಹಕೇತರ ಹುದ್ದೆಗೆ ವರ್ಗಾವಣೆ ಮಾಡುವ ಕೆಲಸವನ್ನಷ್ಟೇ ಮಂಡಳಿಯು ಮಾಡಲಿದೆ. ಆರೋಪಗಳ ಬಗ್ಗೆ, ತನಿಖೆ ನಡೆಸಿ ಶಿಸ್ತುಕ್ರಮಕೈಗೊಳ್ಳುವ ಅಧಿಕಾರ ಸರ್ಕಾರದ ಬಳಿಯೇ ಇರಲಿದೆ.

        ಮರ್ಯಾದೆಗೇಡು ಹತ್ಯೆ ನಿಷೇಧ ಮಸೂದೆ ಮಂಡನೆ

        ಸಂದರ್ಭ: ಜಾತಿ ಮೀರಿ ಪ್ರೀತಿಸುವ, ಮದುವೆಯಾದವರನ್ನು ಮರ್ಯಾದೆ ಹೆಸರಿನಲ್ಲಿ ಹಲ್ಲೆ, ಹತ್ಯೆ ಮಾಡುವ ಹಾಗೂ ಬಹಿಷ್ಕರಿಸುವವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವ ಉದ್ದೇಶದ ‘ಇವ ನಮ್ಮವ, ಇವ ನಮ್ಮವ’ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.

        • ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮರ್ಯಾದೆಗೇಡು ಹತ್ಯೆ’ ಹೆಸರಿನಲ್ಲಿ ನಡೆದ ಕೊಲೆ, ದೌರ್ಜನ್ಯಗಳ ಬಗ್ಗೆ, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇಂತಹ ಕೃತ್ಯಗಳ ತಡೆಗೆ ಕಠಿಣ ಕಾನೂನು ತರಬೇಕೆಂದು ನಾಗರಿಕರು, ವಿವಿಧ ಸಂಸ್ಥೆಗಳು ಸರ್ಕಾರದ ಮೇಲೆ ಒತ್ತಡ ಹೇರಿದ್ದವು.
        • ‘ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ (ಇವ ನಮ್ಮವ ಇವ ನಮ್ಮವ) ಮಸೂದೆ-2026’ ಸಿದ್ಧಪಡಿಸಲಾಗಿದ್ದು, ಈಚೆಗೆ ಸಂಪುಟ ಸಭೆಯಲ್ಲೂ ಅನುಮೋದನೆ ಪಡೆಯಲಾಗಿತ್ತು.
        • ಮಸೂದೆಯು ಅಂತರ್ಜಾತಿ ವಿವಾಹಗಳನ್ನು ಮಾನ್ಯಮಾಡುವುದು, ಅಂತಹ ಮದುವೆಯಾದವರಿಗೆ ತಾರತಮ್ಯ ಮಾಡುವುದರ ವಿರುದ್ಧ ರಕ್ಷಣೆ ಒದಗಿಸುವುದು, ಮರ್ಯಾದೆ ಅಥವಾ ಸಂಪ್ರದಾಯದ ಹೆಸರಿನಲ್ಲಿ ದೌರ್ಜನ್ಯ ಎಸಗುವ, ಹತ್ಯೆ ಮಾಡುವ ಕೃತ್ಯಗಳನ್ನು ತಡೆಯುವುದು, ಮೇಲ್ವಿಚಾರಣಾ ಸಮಿತಿಗಳನ್ನು ರಚಿಸುವುದು, ಪ್ರತಿ ಜಿಲ್ಲೆಯಲ್ಲೂ, ‘ಇವ ನಮ್ಮವ’ ವೇದಿಕೆಗಳನ್ನು ರಚಿಸುವುದು, ವಿಶೇಷ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸುವುದು ಅಪರಾಧಿಗಳಿಗೆ ಐದು ವರ್ಷಗಳಿಗೆ ಕಡಿಮೆ ಇಲ್ಲದಂತಹ ಕಠಿಣ ಶಿಕ್ಷೆ ವಿಧಿಸಲು ಮಸೂದೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ.

        ಪತ್ರಿಕೆ-IV: ಸಾಮಾನ್ಯ ಅಧ್ಯಯನ-3

        ಪಿಲಿಕುಳ ಜೈವಿಕ ಉದ್ಯಾನದಲ್ಲಿರುವ ತೋಳ ‘ಗೀತಾ’ ಜನವರಿ ತಿಂಗಳಿನಲ್ಲಿ ಜನ್ಮ

        ಪ್ರಮುಖ ಮಾಹಿತಿ
        ಸ್ಥಳ: ಪಿಲಿಕುಳ ಜೈವಿಕ ಉದ್ಯಾನ, ಮಂಗಳೂರು
        ತೋಳದ ಹೆಸರು: ಗೀತಾ (Indian Wolf)
        ಜನನ: ಜನವರಿ 2026
        ಮರಿಗಳ ಸಂಖ್ಯೆ: 7 (4 ಗಂಡು, 3 ಹೆಣ್ಣು)
        ಪ್ರಥಮ ಸಾಧನೆ: ಉದ್ಯಾನದಲ್ಲಿ ಬಂಧಿತ ಪರಿಸರದಲ್ಲಿ ತೋಳಗಳ ಮೊದಲ ಸಂತಾನೋತ್ಪತ್ತಿ

        ಮಹತ್ವ

        • ಸಂರಕ್ಷಣೆ: ಇದು ಭಾರತೀಯ ತೋಳಗಳ ಸಂರಕ್ಷಣಾ ಪ್ರಯತ್ನಗಳಿಗೆ ಮಹತ್ವದ ಹೆಜ್ಜೆ. ಬಂಧಿತ ಪರಿಸರದಲ್ಲಿ ಸಂತಾನೋತ್ಪತ್ತಿ ಯಶಸ್ವಿಯಾಗಿರುವುದು ಅಪರೂಪ.
        • ಜೈವಿಕ ವೈವಿಧ್ಯತೆ: ಪಿಲಿಕುಳ ಉದ್ಯಾನವು ಕರ್ನಾಟಕದ ಪ್ರಮುಖ ಜೈವಿಕ ಉದ್ಯಾನವಾಗಿದ್ದು, ಈ ಸಾಧನೆ ಅದರ ಸಂರಕ್ಷಣಾ ಕಾರ್ಯಕ್ಕೆ ಹೊಸ ಗೌರವ ತಂದಿದೆ.

        ಪಿಲಿಕುಳ ಉದ್ಯಾನದ ಪಾತ್ರ

        • ಉದ್ಯಾನವು ಕಳೆದ ಮೂರು ವರ್ಷಗಳಿಂದ ಭಾರತೀಯ ತೋಳಗಳನ್ನು ಸಂರಕ್ಷಿಸುತ್ತಿದೆ.
        • ಈ ಸಂತಾನೋತ್ಪತ್ತಿ ಕ್ಯಾಪ್ಟಿವ್ ಬ್ರೀಡಿಂಗ್ (Captive Breeding) ಕ್ಷೇತ್ರದಲ್ಲಿ ಮಹತ್ವದ ಸಾಧನೆ.
        • ಉದ್ಯಾನವು ಈಗಾಗಲೇ ಹಲವು ಅಪರೂಪದ ಪ್ರಾಣಿಗಳನ್ನು ಸಂರಕ್ಷಿಸುತ್ತಿದ್ದು, ತೋಳ ಮರಿಗಳ ಜನನವು ಅದರ ಸಂರಕ್ಷಣಾ ಕಾರ್ಯಕ್ಕೆ ಹೊಸ ಚೈತನ್ಯ ನೀಡಿದೆ.

        ಪಿಎನ್‌ಜಿಗೆ ಆದ್ಯತೆ ನೀಡಿದರೆ ಹೆಚ್ಚು ಎಲ್‌ಪಿಜಿ
        ಸಂದರ್ಭ: ಕೊಳವೆ ಮೂಲಕ ಅನಿಲ ಪೂರೈಕೆ ಮಾಡುವ ಜಾಲದ ನಿರ್ಮಾಣ ಕಾರ್ಯಕ್ಕೆ ವೇಗ ನೀಡುವ ರಾಜ್ಯಗಳಿಗೆ ವಾಣಿಜ್ಯ ಬಳಕೆ ಎಲ್‌ಪಿಜಿ ವಿತರಣೆಯನ್ನು ಹೆಚ್ಚು ಮಾಡಲಾಗುತ್ತದೆ ಎಂಬ ಭರವಸೆಯನ್ನು ಕೇಂದ್ರ ಸರ್ಕಾರ ನೀಡಿದೆ.

        • ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಕಾರಣದಿಂದಾಗಿ ದೇಶಕ್ಕೆ ಎಲ್‌ಪಿಜಿ ಪೂರೈಕೆಯಲ್ಲಿ ಸಮಸ್ಯೆ ಸೃಷ್ಟಿಯಾಗಿದೆ. ಕೇಂದ್ರ ಸರ್ಕಾರವು ಮನೆಗಳಿಗೆ ಅಡುಗೆ ಮಾಡಲು ಎಲ್‌ಪಿಜಿ ಪೂರೈಕೆಗೆ ಆದ್ಯತೆ ನೀಡಿದೆ. ಹೋಟೆಲ್‌ನಂತಹ ವಾಣಿಜ್ಯ ಘಟಕಗಳಿಗೆ ಎಲ್‌ ಪಿಜಿ ವೂರೈಕೆಯನ್ನು ಆರಂಭದಲ್ಲಿ ಸ್ಥಗಿತಗೊಳಿಸಲಾಗಿತ್ತು ಈಗ ವಾಣಿಜ್ಯ ಘಟಕಗಳ ಬೇಡಿಕೆಯ ಶೇ 20ರಷ್ಟನ್ನು ಪೂರೈಕೆ ಮಾಡಲಾಗುತ್ತಿದೆ.
        • ಕೊಳವೆ ಮೂಲಕ ನೈಸರ್ಗಿಕ ಅನಿಲ ಪೂರೈಸುವ ಮೂಲಸೌಕರ್ಯ ಕಲ್ಪಿಸುವ ಕೆಲಸಕ್ಕೆ ಚುರುಕು ನೀಡುವ ರಾಜ್ಯಗಳಿಗೆ ವಾಣಿಜ್ಯ ಬಳಕೆ ಎಲ್‌ಪಿಜಿ ಪೂರೈಕೆಯನ್ನು ಶೇ 30ಕ್ಕೆ ಹೆಚ್ಚು ಮಾಡುವುದಾಗಿ ಕೇಂದ್ರ ಹೇಳಿದೆ. ಕೊಳವೆ ಮೂಲಕ ನೈಸರ್ಗಿಕ ಅನಿಲವನ್ನು ಮನೆಗಳಿಗೂ ವಾಣಿಜ್ಯ ಬಳಕೆಗೂ ಪೂರೈಕೆ ಮಾಡಲಾಗುತ್ತದೆ.

        ಎಲ್‌ಪಿಜಿ (Liquefied Petroleum Gas) ಮತ್ತು ಪಿಎನ್‌ಜಿ (Piped Natural Gas) ನಡುವಿನ ವ್ಯತ್ಯಾಸ:

        ಅಂಶಎಲ್‌ಪಿಜಿ (LPG)ಪಿಎನ್‌ಜಿ (PNG)
        ಪೂರ್ಣ ರೂಪLiquefied Petroleum Gas (ದ್ರವೀಕೃತ ಪೆಟ್ರೋಲಿಯಂ ಅನಿಲ)Piped Natural Gas (ಪೈಪ್ಡ್ ನೈಸರ್ಗಿಕ ಅನಿಲ)
        ಮೂಲ ಸಂಪನ್ಮೂಲಕ್ರೂಡ್ ತೈಲ ಶೋಧನೆ ವೇಳೆ ಉತ್ಪಾದನೆಯಾಗುವ ಪ್ರೋಪೇನ್ ಮತ್ತು ಬ್ಯೂಟೇನ್ನೈಸರ್ಗಿಕ ಅನಿಲ (ಮುಖ್ಯವಾಗಿ ಮೆಥೇನ್)
        ಉತ್ಪಾದನಾ ಸ್ಥಳಪೆಟ್ರೋಲಿಯಂ ರಿಫೈನರಿಗಳು (ತೈಲ ಶುದ್ಧೀಕರಣ ಘಟಕಗಳು) ಮತ್ತು ನೈಸರ್ಗಿಕ ಅನಿಲ ಸಂಸ್ಕರಣಾ ಕೇಂದ್ರಗಳು.ನೈಸರ್ಗಿಕ ಅನಿಲದ ಬಾವಿಗಳು (ತೈಲ ಮತ್ತು ಅನಿಲ ಕ್ಷೇತ್ರಗಳು) ಮತ್ತು ಅನಿಲ ಸಂಸ್ಕರಣಾ ಘಟಕಗಳು.
        ರೂಪದ್ರವ ರೂಪದಲ್ಲಿ ಸಿಲಿಂಡರ್‌ಗಳಲ್ಲಿ ಸಂಗ್ರಹಣೆ.ಅನಿಲ ರೂಪದಲ್ಲಿ ಪೈಪ್‌ಗಳ ಮೂಲಕ ನೇರ ಪೂರೈಕೆ.
        ಸಂಗ್ರಹಣೆಸಿಲಿಂಡರ್‌ಗಳಲ್ಲಿ ಹೆಚ್ಚಿನ ಒತ್ತಡದಲ್ಲಿ ಸಂಗ್ರಹಿಸಲಾಗುತ್ತದೆ.ಪೈಪ್‌ಲೈನ್ ಜಾಲದ ಮೂಲಕ ನಿರಂತರವಾಗಿ ಹರಿಯುತ್ತದೆ.
        ಬಳಕೆಮನೆ ಅಡುಗೆ, ಹೋಟೆಲ್‌ಗಳು, ಕೈಗಾರಿಕೆಗಳು ಮತ್ತು ವಾಹನಗಳು.ಮನೆ ಅಡುಗೆ, ಹೋಟೆಲ್‌ಗಳು ಮತ್ತು ಕೈಗಾರಿಕೆಗಳು.
        ಪೂರೈಕೆ ಸ್ಥಿತಿಆಮದು ಅವಲಂಬಿತ; ಯುದ್ಧ ಅಥವಾ ಅಂತರಾಷ್ಟ್ರೀಯ ಕಾರಣಗಳಿಂದ ಅಡಚಣೆ ಸಾಧ್ಯತೆ.ಪೈಪ್‌ಲೈನ್ ಇರುವ ಪ್ರದೇಶಗಳಲ್ಲಿ ನಿರಂತರ ಮತ್ತು ಅಬಾಧಿತ ಪೂರೈಕೆ.
        ಸರ್ಕಾರದ ನೀತಿಮನೆಗಳಿಗೆ ಆದ್ಯತೆ; ವಾಣಿಜ್ಯ ಘಟಕಗಳಿಗೆ ಸೀಮಿತ ಪೂರೈಕೆ.PNG ಜಾಲ ವಿಸ್ತರಿಸಿದ ರಾಜ್ಯಗಳಿಗೆ ಹೆಚ್ಚಿನ ವಾಣಿಜ್ಯ ಪ್ರೋತ್ಸಾಹ.
        ಅನುಕೂಲತೆಎಲ್ಲೆಡೆ ಲಭ್ಯವಿದೆ, ಆದರೆ ಸಿಲಿಂಡರ್ ಬದಲಾವಣೆ/ಬುಕಿಂಗ್ ಅಗತ್ಯ.ಸುರಕ್ಷಿತ, ನಿರಂತರ ಪೂರೈಕೆ, ಸಿಲಿಂಡರ್ ಬದಲಿಸುವ ಕಿರಿಕಿರಿ ಇಲ್ಲ.
        ಸವಾಲುಗಳುಆಮದು ಅವಲಂಬನೆ ಮತ್ತು ಪೂರೈಕೆಯಲ್ಲಿ ಏರಿಳಿತ.ಪೈಪ್‌ಲೈನ್ ಮೂಲಸೌಕರ್ಯ ನಿರ್ಮಾಣಕ್ಕೆ ಹೆಚ್ಚಿನ ಹೂಡಿಕೆ ಬೇಕು.

        ಪ್ರಮುಖ ಮಾಹಿತಿ:

        • LPG ಅನ್ನು ಹೆಚ್ಚಾಗಿ ಸೌದಿ ಅರೇಬಿಯಾ, ಕತಾರ್‌ನಂತಹ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ ಅಥವಾ ದೇಶೀಯ ರಿಫೈನರಿಗಳಲ್ಲಿ (ಉದಾಹರಣೆಗೆ ಮಂಗಳೂರಿನ MRPL) ತಯಾರಿಸಲಾಗುತ್ತದೆ.
        • PNG ಗಾಗಿ ಭಾರತವು ತನ್ನದೇ ಆದ ನೈಸರ್ಗಿಕ ಅನಿಲದ ಬಾವಿಗಳನ್ನು (ಉದಾಹರಣೆಗೆ ಕೃಷ್ಣ-ಗೋದಾವರಿ ಬೇಸಿನ್) ಬಳಸುತ್ತದೆ ಮತ್ತು ದ್ರವೀಕೃತ ನೈಸರ್ಗಿಕ ಅನಿಲವನ್ನು (LNG) ಆಮದು ಮಾಡಿಕೊಂಡು ಅದನ್ನು ಅನಿಲ ರೂಪಕ್ಕೆ ಬದಲಿಸಿ ಪೂರೈಸುತ್ತದೆ.

        ಪತ್ರಿಕೆ-V: ಸಾಮಾನ್ಯ ಅಧ್ಯಯನ-4

        ನೈತಿಕತೆ ಮತ್ತು ಮಾನವ ಹಕ್ಕುಗಳು (Ethics and Human Rights)
        ಕೃತಕ ಬುದ್ಧಿಮತ್ತೆ (AI) ವ್ಯವಸ್ಥೆಗಳು ಸಮಾಜದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ರಚನೆಗೆ ಪರಿಣಾಮ ಬೀರುವ ಹಲವು ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಬಳಸಲ್ಪಡುತ್ತಿವೆ. ಇದನ್ನು “ನಾಲ್ಕನೇ ಕೈಗಾರಿಕಾ ಕ್ರಾಂತಿ” ಎಂದು ಕರೆಯಲಾಗುತ್ತಿದೆ. AI ಮಾನವಕುಲಕ್ಕೆ “ಉತ್ತಮ” ಅಥವಾ “ಕೆಟ್ಟ” ಎಂಬ ಪ್ರಶ್ನೆ ಇನ್ನೂ ಚರ್ಚೆಯಲ್ಲಿದೆ.

        ಪ್ರಮುಖ ನೈತಿಕ ಪ್ರಶ್ನೆಗಳು
        ಉದ್ಯೋಗ ಕಳೆದುಕೊಳ್ಳುವ ಭೀತಿ: AI ಮಾನವರನ್ನು ಬದಲಾಯಿಸಿದರೆ ಸಾಮೂಹಿಕ ನಿರುದ್ಯೋಗ ಉಂಟಾಗಬಹುದೇ?
        ಅನರ್ಹ/ಅಪಾಯಕಾರಿ ಬಳಕೆ: AI ಅನ್ನು ಅಪಾಯಕಾರಿ ಉದ್ದೇಶಗಳಿಗೆ ಬಳಸುವುದನ್ನು ಹೇಗೆ ತಡೆಯುವುದು?
        ಮಾನವ ಗೌರವ: AI ಮಾನವ ವ್ಯಕ್ತಿತ್ವ ಮತ್ತು ಗೌರವಕ್ಕೆ ಏನು ಪರಿಣಾಮ ಬೀರುತ್ತದೆ?
        ಮಾಹಿತಿ ಮರುಕಳಿಕೆ: ಚುನಾವಣೆಗಳ ಸಂದರ್ಭದಲ್ಲಿ ಮಾಹಿತಿ ಮರುಕಳಿಕೆ, ಹ್ಯಾಕಿಂಗ್ ಮುಂತಾದವುಗಳು ಪ್ರಜಾಪ್ರಭುತ್ವಕ್ಕೆ ಸವಾಲು.

        ವಿಶ್ವ ಆರ್ಥಿಕ ವೇದಿಕೆ (WEF) ಉಲ್ಲೇಖಿಸಿದ ನೈತಿಕ ಚಿಂತೆಗಳು
        ನಿರುದ್ಯೋಗ
        ಅಸಮಾನತೆ
        ಜಾತ್ಯಾತೀತತೆ
        ಭದ್ರತೆ
        ರೋಬೋಟ್‌ಗಳ ಹಕ್ಕುಗಳು

        ಖಾಸಗಿ ಕಂಪನಿಗಳ ನೈತಿಕ ಮಾರ್ಗಸೂಚಿಗಳು
        Microsoft, Google, SAP, IBM ಮುಂತಾದ ಕಂಪನಿಗಳು AI ಅಭಿವೃದ್ಧಿಯಲ್ಲಿ ಪಾಲಿಸಬೇಕಾದ ನೈತಿಕ ತತ್ವಗಳನ್ನು ರೂಪಿಸಿವೆ.

        AI ನೈತಿಕ ತತ್ವಗಳು

        ತತ್ವವಿವರಣೆ
        ಪಾರದರ್ಶಕತೆ (Transparency)AI ನಿರ್ಧಾರಗಳ ವಿವರ, ಡೇಟಾ ಬಳಕೆ ಮತ್ತು ಮಾನವ-ಯಂತ್ರ ಸಂವಹನದಲ್ಲಿ ಸ್ಪಷ್ಟತೆ ಇರುವುದು.
        ನ್ಯಾಯ ಮತ್ತು ಸಮಾನತೆ (Justice & Fairness)ಭೇದಭಾವ ತಪ್ಪಿಸುವುದು, ವೈವಿಧ್ಯತೆ ಕಾಪಾಡುವುದು ಮತ್ತು ಪ್ರಜಾಪ್ರಭುತ್ವದ ಮೇಲೆ ಧನಾತ್ಮಕ ಪರಿಣಾಮ ಬೀರುವುದು.
        ಹಾನಿ ಮಾಡದಿರುವುದು (Non-malfeasance)ಸುರಕ್ಷತೆ ಒದಗಿಸುವುದು, ಸೈಬರ್ ಹ್ಯಾಕಿಂಗ್ ತಡೆಗಟ್ಟುವುದು ಮತ್ತು ಬಳಕೆದಾರರ ಗೌಪ್ಯತೆ ಕಾಪಾಡುವುದು.
        ಜವಾಬ್ದಾರಿ ಮತ್ತು ಹೊಣೆಗಾರಿಕೆ (Responsibility)AI ಮೂಲಕ ಯಾವುದಾದರೂ ಹಾನಿ ಉಂಟಾದರೆ ಅದರ ಪರಿಹಾರ ಮತ್ತು ಹೊಣೆಗಾರಿಕೆಯನ್ನು ಸ್ಪಷ್ಟಪಡಿಸುವುದು.
        ಗೌಪ್ಯತೆ (Privacy)ಡೇಟಾ ರಕ್ಷಣೆ, ‘Privacy by design’ ಅಳವಡಿಕೆ ಮತ್ತು ಅನಗತ್ಯ ಡೇಟಾ ಸಂಗ್ರಹಣೆ ತಡೆಯುವುದು (Data minimization).
        ಹಿತಚಿಂತನೆ (Beneficence)ಸಮಾಜದ ಕಲ್ಯಾಣ, ಶಾಂತಿ ಮತ್ತು ಆರ್ಥಿಕ ಅವಕಾಶಗಳನ್ನು ವೃದ್ಧಿಸುವುದು.
        ಸ್ವಾತಂತ್ರ್ಯ ಮತ್ತು ಸ್ವಾಯತ್ತತೆ (Autonomy)ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ತಂತ್ರಜ್ಞಾನದ ದುರുപಯೋಗ ತಡೆದು ಮಾಹಿತಿ ಸ್ವಯಂ ನಿರ್ಧಾರಕ್ಕೆ ಅವಕಾಶ ನೀಡುವುದು.
        ನಂಬಿಕೆ (Trust)ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಮೂಲಕ AI ವ್ಯವಸ್ಥೆಯ ಮೇಲೆ ಸಾರ್ವಜನಿಕ ನಂಬಿಕೆ ಬೆಳೆಸುವುದು.
        ಗೌರವ (Dignity)ಮಾನವನ ಘನತೆ ಮತ್ತು ಗೌರವವನ್ನು ಯಾವುದೇ ಸಂದರ್ಭದಲ್ಲೂ ಕುಗ್ಗಿಸದಂತೆ ಕಾಪಾಡುವುದು.
        ಸತತತೆ (Sustainability)ಪರಿಸರ ರಕ್ಷಣೆ ಮತ್ತು ದೀರ್ಘಕಾಲೀನ ಸಮಾನ ಸಾಮಾಜಿಕ ವ್ಯವಸ್ಥೆಗಳ ನಿರ್ಮಾಣ ಮಾಡುವುದು.
        ಏಕತೆ (Solidarity)ಸಮಾಜದ ದುರ್ಬಲ ಗುಂಪುಗಳಿಗೆ ರಕ್ಷಣೆ ನೀಡುವುದು ಮತ್ತು ಸಾಮಾಜಿಕ ಒಗ್ಗಟ್ಟನ್ನು ಕಾಪಾಡುವುದು.

        ಅಂತರರಾಷ್ಟ್ರೀಯ ಮಾರ್ಗಸೂಚಿಗಳು
        OECD Principles on AI (2019): ಮಾನವ ಕೇಂದ್ರಿತ ಮೌಲ್ಯಗಳು, ಪಾರದರ್ಶಕತೆ, ಸುರಕ್ಷತೆ, ಹೊಣೆಗಾರಿಕೆ.
        G-20 Summit (2019): OECD ತತ್ವಗಳನ್ನು ಅಳವಡಿಸಿಕೊಂಡಿತು.
        Global Partnership on AI (GPAI, 2020): ಮಾನವ ಹಕ್ಕುಗಳು, ಪ್ರಜಾಪ್ರಭುತ್ವ ಮೌಲ್ಯಗಳಿಗೆ ಅನುಗುಣವಾಗಿ AI ಅಭಿವೃದ್ಧಿ.
        ಕಾರ್ಯ ಗುಂಪುಗಳು: (a) Responsible AI, (b) Data Governance, (c) Future of Work, (d) Innovation & Commercialisation.
        COVID-19 ಪ್ರತಿಕ್ರಿಯೆಯಲ್ಲಿ AI ಬಳಕೆ ಮೊದಲ ಆದ್ಯತೆ.

        ಸಾರಾಂಶ
        AI ನೈತಿಕತೆ ಮತ್ತು ಮಾನವ ಹಕ್ಕುಗಳ ಚರ್ಚೆ ಪಾರದರ್ಶಕತೆ, ನ್ಯಾಯ, ಹೊಣೆಗಾರಿಕೆ, ಗೌಪ್ಯತೆ, ಸ್ವಾತಂತ್ರ್ಯ, ನಂಬಿಕೆ, ಗೌರವ, ಸತತತೆ ಮತ್ತು ಏಕತೆ ಎಂಬ ತತ್ವಗಳ ಸುತ್ತ ನಡೆಯುತ್ತಿದೆ. OECD ಮತ್ತು GPAI ಮುಂತಾದ ಅಂತರರಾಷ್ಟ್ರೀಯ ವೇದಿಕೆಗಳು ಮಾನವ ಕೇಂದ್ರಿತ, ಹೊಣೆಗಾರಿಕೆಯಿಂದ AI ಅಭಿವೃದ್ಧಿಗೆ ಒತ್ತು ನೀಡುತ್ತಿವೆ.

        Sources: Prajavani

        ಕೆಎಎಸ್ ಪ್ರಚಲಿತ ವಿದ್ಯಮಾನಗಳು

        ಪೂರ್ವಭಾವಿ ಪರೀಕ್ಷೆ

        ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು

        ಪ್ಯಾರಾ ಅಥ್ಲೆಟಿಕ್ಸ್: ಪಾಲ್ಗೆ ಚಿನ್ನ
        ಸಂದರ್ಭ: ಪ್ಯಾರಾಲಿಂಪಿಕ್ಸ್ ಅವಳಿ ಪದಕ ವಿಜೇತೆ ಪ್ರೀತಿ ಪಾಲ್ ಅವರು ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರಾನ್ಪ್ರಿ ಮಹಿಳೆಯರ 200 ಮೀಟರ್ ಓಟದಲ್ಲಿ ಚಿನ್ನದ ಸಾಧನೆ ಮೆರೆದರು.

        • ಆತಿಥೇಯ ದೇಶದ ಕ್ರೀಡಾಪಟುಗಳು ಕೂಟದಲ್ಲಿ ಒಟ್ಟು 208 ಪದಕಗಳನ್ನು ಜಯಿಸುವ ಮೂಲಕ ಅಮೋಘ ಸಾಧನೆ ಮಾಡಿದರು. ಅದರಲ್ಲಿ 75 ಚಿನ್ನ, 69 ಬೆಳ್ಳಿ ಮತ್ತು 64 ಕಂಚಿನ ಪದಕಗಳು ಸೇರಿವೆ.
        • ಪ್ರೀತಿ 200 ಮೀಟರ್ (ಟಿ35-ಟಿ37 ವಿಭಾಗ) ಓಟವನ್ನು 30.26 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಮೀರತ್‌ನ 25 ವರ್ಷದ ಪ್ರೀತಿ 100 ಮೀಟರ್ ಓಟದಲ್ಲೂ ಸ್ವರ್ಣ ಸಾಧನೆ ಮಾಡಿದ್ದರು. ರಷ್ಯಾದ ಕರೀನಾ ಮಚುಲ್ಮಾಯಾ (32.227) ಬೆಳ್ಳಿ ಪದಕ ಗೆದ್ದರು ಭಾರತದ ಬಿನಾ ಶಂಭುಭಾ (32.35 ಸೆ) ಕಂಚಿನ ಪದಕ ಜಯಿಸಿದರು.
        • ಕೂಟದಲ್ಲಿ ರಷ್ಯಾ ಒಟ್ಟು 35 (15 ಚಿನ್ನ, 14 ಬೆಳ್ಳಿ ಮತ್ತು 6 ಕಂಚು) ಪದಕಗಳೊಂದಿಗೆ ಎರಡನೇ ಸ್ಥಾನ ಪಡೆಯಿತು.


        ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು

        ಜಾಹೀರಾತಿನ ಶುಲ್ಕಕ್ಕೆ ತೆರಿಗೆ: ಮಸೂದೆ ಮಂಡನೆ
        ಸಂದರ್ಭ: ಪುರಸಭೆ ಮತ್ತು ನಗರಪಾಲಿಕೆಗಳ ವ್ಯಾಪ್ತಿಯಲ್ಲಿ ಜಾಹೀರಾತುಗಳ ಶುಲ್ಕದ ಮೇಲೆ ತೆರಿಗೆ ವಿಧಿಸುವ ಉದ್ದೇಶಕ್ಕಾಗಿ ಕರ್ನಾಟಕ ಮುನ್ಸಿಪಾಲಿಟಿ ಮತ್ತು ಕೆಲವು ಇತರ ಕಾನೂನು ತಿದ್ದುಪಡಿ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.

        • ಪುರಸಭೆ ಮತ್ತು ನಗರಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಭೂಮಿ,ಕಟ್ಟಡ, ಗೋಡೆಯ ಅಥವಾ ರಚನೆಯ ಮೇಲೆ ಅಳವಡಿಸುವ ಜಾಹೀರಾತುಗಳಿಗೆ ಶುಲ್ಕದ ಮೇಲೆ ತೆರಿಗೆ ವಿಧಿಸಲಾಗುವುದು. 1 ಚದರ ಮೀಟರ್‌ವರೆಗಿನ ಜಾಗಕ್ಕೆ 50. 1 ಚದರ ಮೀಟರ್‌ಗಿಂತ ಹೆಚ್ಚು ಮತ್ತು 2.5 ಚದರ ಮೀಟರ್‌ಗಿಂತ ಜಾಗಕ್ಕೆ ಅಥವಾ ಅದಕ್ಕಿಂತ ಕಡಿಮೆ ಜಾಗಕ್ಕೆ 80.
        • ಪ್ರತಿಯೊಂದು ಹೆಚ್ಚಿನ 2.5 ಚದರ ಮೀಟರ್ ಜಾಗಕ್ಕೆ ಅಥವಾ ಅದಕ್ಕಿಂತ ಕಡಿಮೆ ಜಾಗಕ್ಕೆ ₹80 ವಾಹನಗಳ ಮೇಲೆ ಒಯ್ಯುವ ದೀಪಾಲಂಕೃತ ಜಾಹೀರಾತು ಫಲಕಗಳಿಗೆ 5 ಚದರ ಮೀಟರ್‌ವರೆಗಿನ ಜಾಗಕ್ಕೆ 375,

        ಚಿನ್ನ ಅಡಮಾನ ಸಾಲ ಪಡೆದ ಗ್ರಾಹಕರ ರಕ್ಷಣೆ: ಖಾಸಗಿ ಮಸೂದೆ
        ಸಂದರ್ಭ: ಚಿನ್ನ ಅಡಮಾನ ಸಾಲ ಪಡೆದ ಗ್ರಾಹಕರ ಹಕ್ಕುಗಳ ರಕ್ಷಣೆಗೆ ಅವಕಾಶ ನೀಡುವ ಖಾಸಗಿ ಮಸೂದೆಯನ್ನು ಮಂಡಿಸಲಾಯಿತು.

        • ‘ಕರ್ನಾಟಕ ಚಿನ್ನ ಅಡಮಾನವಿಟ್ಟು ಸಾಲಗಾರರ ರಕ್ಷಣಾ ಮಸೂದೆ’: ‘ಚಿನ್ನ ಅಡಮಾನ ಇರಿಸಿಕೊಳ್ಳುವ ಕಂಪನಿಗಳು, ಚಿನ್ನದ ಮಾರುಕಟ್ಟೆ ಮೌಲ್ಯದ ಶೇ 50ರಷ್ಟು ಮೊತ್ತವನ್ನಷ್ಟೇ ಸಾಲವಾಗಿ ನೀಡುತ್ತವೆ ವಿಪರೀತ ದರದ ಬಡ್ಡಿ ವಸೂಲಿ ಮಾಡುತ್ತವೆ. ಅಡಮಾನವಿಡುವ ಚಿನ್ನಕ್ಕೆ ನ್ಯಾಯಯುತವಾದ ಮೊತ್ತ ನೀಡದೆ ಗ್ರಾಹಕರನ್ನು ವಂಚಿಸುತ್ತವೆ. ಚಿನ್ನದ ಮಾರುಕಟ್ಟೆ ಮೌಲ್ಯದ ಕನಿಷ್ಠ ಇಂತಿಷ್ಟು ಪ್ರಮಾಣವನ್ನು ಸಾಲವಾಗಿ ನೀಡಬೇಕು ಎನ್ನುವುದನ್ನು ಕಡ್ಡಾಯ ಮಾಡಬೇಕು’.
        • ‘ಸಾಲ ನೀಡಿದ ಮೂರೇ ತಿಂಗಳೊಳಗೆ ಬಡ್ಡಿ ಪಾವತಿಸದಿದ್ದರೆ ಚಿನ್ನವನ್ನು ಹರಾಜು ಹಾಕುತ್ತವೆ. ಸಾಲ ಮತ್ತು ಅಸಲನ್ನು ಕಳೆದು ಉಳಿಕೆ ಮೊತ್ತವನ್ನು ಗ್ರಾಹಕರಿಗೆ ನೀಡುವುದಿಲ್ಲ. ಅಲ್ಲದೆ, ಚಿನ್ನ ಬಿಡಿಸಿಕೊಳ್ಳುವವರಿಗೆ ತೂಕದಲ್ಲಿ ಮೋಸ ಮಾಡಲಾಗುತ್ತಿದೆ. ಇದಕ್ಕೆಲ್ಲಾ ಕಡಿವಾಣ ಹಕುವ ಉದ್ದೇಶದಿಂದ ಹರಾಜಿಗೆ ಕಾಲಮಿತಿ, ತೂಕ ವಂಚನೆಗೆ ಕಠಿಣ ಶಿಕ್ಷೆ ವಿಧಿಸಬೇಕು’.

        50 ವಿಭಾಗ, 150 ಉಪ ವಿಭಾಗ ರಚನೆ
        ಸಂದರ್ಭ: ಐದು ನಗರ ಪಾಲಿಕೆಗಳ ಹೊಸ ವಾರ್ಡ್ನಂತೆ ಪುನರ್ ವಿಂಗಡಣೆ ಐದು ನಗರ ಪಾಲಿಕೆಗಳ 369 ವಾರ್ಡ್ಗಳ ಪುನರ್ ವಿಂಗಡಣೆಯ ಆಧಾರದಲ್ಲಿ 50 ವಿಭಾಗ ಹಾಗೂ 150 ಉಪ ವಿಭಾಗಗಳನ್ನು ರಚಿಸಿ ಜಿಬಿಎ ಮುಖ್ಯ ಆಯುಕ್ತ ಆದೇಶಿಸಿದ್ದಾರೆ.

        • ಬೆಂಗಳೂರು ಕೇಂದ್ರ ನಗರ ಪಾಲಿಕೆ, ಪೂರ್ವ ನಗರ ಪಾಲಿಕೆ, ಪಶ್ಚಿಮ ನಗರ ಪಾಲಿಕೆ, ಉತ್ತರ ನಗರ ಪಾಲಿಕೆ, ದಕ್ಷಿಣ ನಗರ ಪಾಲಿಕೆಗಳಿಗೆ ಸಂಬಂಧಿಸಿದಂತೆ ವಾರ್ಡ್‌ಗಳ ಪುನರ್ ವಿಂಗಡಣೆಯಾಗಿದೆ. ಆಡಳಿತಾತ್ಮಕ ಕೆಲಸ ಕಾರ್ಯಗಳ ಹಿತದೃಷ್ಟಿಯಿಂದ ವಿಭಾಗ, ಉಪ ವಿಭಾಗಗಳನ್ನು ರಚಿಸಲಾಗಿದೆ.

        ಬೃಹತ್ ಬೆಂಗಳೂರು ಪ್ರಾಧಿಕಾರ (GBA) ಎಂದರೇನು?
        ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿ ಮತ್ತು ಯೋಜನಾಬದ್ಧ ಬೆಳವಣಿಗೆಗಾಗಿ ಕರ್ನಾಟಕ ಸರ್ಕಾರವು ‘ಬೃಹತ್ ಬೆಂಗಳೂರು ಆಡಳಿತ ಮಸೂದೆ-2024’ ರ ಅಡಿಯಲ್ಲಿ ಈ ಹೊಸ ಪ್ರಾಧಿಕಾರವನ್ನು ರಚಿಸಲು ಮುಂದಾಗಿದೆ. ಇದು ಪ್ರಸ್ತುತ ಇರುವ ಬಿಬಿಎಂಪಿ (BBMP) ಗಿಂತ ಹೆಚ್ಚಿನ ವ್ಯಾಪ್ತಿ ಮತ್ತು ಅಧಿಕಾರವನ್ನು ಹೊಂದಿರುತ್ತದೆ.

        ವರ್ಗ (Category)ವಿವರಣೆ (Details)
        ಪೂರ್ಣ ಹೆಸರುಬೃಹತ್ ಬೆಂಗಳೂರು ಪ್ರಾಧಿಕಾರ (Greater Bengaluru Authority)
        ಅಧಿಕೃತ ಮಸೂದೆಬೃಹತ್ ಬೆಂಗಳೂರು ಆಡಳಿತ ಮಸೂದೆ – 2024 (BBG Bill 2024)
        ಮುಖ್ಯಸ್ಥರು (ಅಧ್ಯಕ್ಷರು)ಕರ್ನಾಟಕದ ಮುಖ್ಯಮಂತ್ರಿಗಳು
        ಉಪಾಧ್ಯಕ್ಷರುಉಪಮುಖ್ಯಮಂತ್ರಿಗಳು (ಬೆಂಗಳೂರು ನಗರಾಭಿವೃದ್ಧಿ ಸಚಿವರು)
        ಪ್ರಾಧಿಕಾರದ ವ್ಯಾಪ್ತಿಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಸುಮಾರು 714 ಚದರ ಕಿ.ಮೀ ಗಿಂತ ಹೆಚ್ಚಿನ ಪ್ರದೇಶ.
        ಮುಖ್ಯ ಗುರಿಬಿಬಿಎಂಪಿ, ಬಿಡಿಎ, ಬೆಸ್ಕಾಂ, ಬಿಡಬ್ಲ್ಯೂಎಸ್ಎಸ್‌ಬಿ ಸೇರಿದಂತೆ ಎಲ್ಲಾ ಸಂಸ್ಥೆಗಳ ನಡುವೆ ಸಮನ್ವಯ ಸಾಧಿಸುವುದು.
        ಆಡಳಿತ ವಿಭಜನೆನಗರವನ್ನು ಆಡಳಿತಾತ್ಮಕ ದೃಷ್ಟಿಯಿಂದ 5 ನಗರ ಪಾಲಿಕೆಗಳನ್ನಾಗಿ (Corporations) ವಿಭಜಿಸುವ ಪ್ರಸ್ತಾವನೆ ಇದೆ.
        ಪಾಲಿಕೆಗಳ ಸಂಖ್ಯೆಕೇಂದ್ರ (Central), ಉತ್ತರ (North), ದಕ್ಷಿಣ (South), ಪೂರ್ವ (East) ಮತ್ತು ಪಶ್ಚಿಮ (West).
        ಅಧಿಕಾರ ಅವಧಿಪಾಲಿಕೆ ಸದಸ್ಯರ ಅಧಿಕಾರ ಅವಧಿಯು 5 ವರ್ಷಗಳಾಗಿರುತ್ತದೆ.
        ಪ್ರಮುಖ ಜವಾಬ್ದಾರಿಗಳುನಗರದ ಮಾಸ್ಟರ್ ಪ್ಲಾನ್ ಸಿದ್ಧಪಡಿಸುವುದು, ಮೂಲಸೌಕರ್ಯ ಅಭಿವೃದ್ಧಿ, ಮತ್ತು ಆರ್ಥಿಕ ಸಂಪನ್ಮೂಲಗಳ ಹಂಚಿಕೆ.
        ಸೇವೆಯ ಗುಣಮಟ್ಟಸಾರ್ವಜನಿಕ ಸಾರಿಗೆ, ತ್ಯಾಜ್ಯ ನಿರ್ವಹಣೆ ಮತ್ತು ನೀರು ಸರಬರಾಜಿನ ಗುಣಮಟ್ಟವನ್ನು ಸುಧಾರಿಸುವುದು.

        GBA ಮತ್ತು BBMP ನಡುವಿನ ವ್ಯತ್ಯಾಸ:

        ವೈಶಿಷ್ಟ್ಯಪ್ರಸ್ತುತ ಬಿಬಿಎಂಪಿ (BBMP)ಉದ್ದೇಶಿತ ಜಿಬಿಎ (GBA)
        ನಾಯಕತ್ವಮೇಯರ್ ಮತ್ತು ಆಯುಕ್ತರುಮುಖ್ಯಮಂತ್ರಿಗಳ ನೇತೃತ್ವದ ಹೈ-ಪವರ್ ಕಮಿಟಿ
        ನಿರ್ಧಾರ ತೆಗೆದುಕೊಳ್ಳುವುದುಸೀಮಿತ ಅಧಿಕಾರ, ಅನುದಾನಕ್ಕಾಗಿ ಸರ್ಕಾರದ ಮೇಲೆ ಅವಲಂಬನೆಹೆಚ್ಚಿನ ಆರ್ಥಿಕ ಸ್ವಾಯತ್ತತೆ ಮತ್ತು ಸ್ವತಂತ್ರ ನಿರ್ಧಾರಗಳು
        ಸಂಯೋಜನೆಕೇವಲ ಪಾಲಿಕೆ ಕೆಲಸಗಳಿಗೆ ಸೀಮಿತವಿವಿಧ ಇಲಾಖೆಗಳನ್ನು (Water, Power, Transport) ಒಗ್ಗೂಡಿಸುವ ಶಕ್ತಿ

        ಈ ಪ್ರಾಧಿಕಾರವು ಬೆಂಗಳೂರಿನ ಸಂಕೀರ್ಣ ಸಮಸ್ಯೆಗಳಾದ ಸಂಚಾರ ದಟ್ಟಣೆ (Traffic) ಮತ್ತು ಪ್ರವಾಹ (Floods) ನಿಯಂತ್ರಿಸಲು ಒಂದು “ಅತ್ಯುನ್ನತ ಸಂಸ್ಥೆ”ಯಾಗಿ (Umbrella Body) ಕಾರ್ಯನಿರ್ವಹಿಸಲಿದೆ.

        ಮುಖ್ಯ ಪರೀಕ್ಷೆ

        ಪತ್ರಿಕೆ-I: ಪ್ರಬಂಧಗಳು

        ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ

        “ಯುದ್ಧದ ಪರಿಸರ ಪರಿಣಾಮಗಳು: ಭೂಮಿ, ನೀರು ಮತ್ತು ಗಾಳಿಯ ಕಲುಷಿತತೆ, ವನ್ಯಜೀವಿಗಳ ನಾಶ ಹಾಗೂ ಭವಿಷ್ಯದ ಪೀಳಿಗೆಯ ಮೇಲೆ ಬೀರುವ ದುಷ್ಪರಿಣಾಮಗಳು”

        ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ

        “ಬೃಹತ್ ಬೆಂಗಳೂರು ಪ್ರಾಧಿಕಾರ (GBA): ಸಂಚಾರ ದಟ್ಟಣೆ ಮತ್ತು ಪ್ರವಾಹ ನಿಯಂತ್ರಣಕ್ಕೆ ಸಮಗ್ರ ನಗರ ಆಡಳಿತದ ಅತ್ಯುನ್ನತ ಸಂಸ್ಥೆಯ ಪಾತ್ರ”

        ಪತ್ರಿಕೆ-II: ಸಾಮಾನ್ಯ ಅಧ್ಯಯನ-1

        ಪತ್ರಿಕೆ-III: ಸಾಮಾನ್ಯ ಅಧ್ಯಯನ-2

        ‘ಟ್ರಾನ್ಸ್ಜೆಂಡರ್’ ತಿದ್ದುಪಡಿ ಮಸೂದೆ ಮಂಡನೆ
        ಸಂದರ್ಭ: ಲಿಂಗತ್ವ ಅಲ್ಪಸಂಖ್ಯಾತರು (ಟ್ರಾನ್ಸ್ ಜೆಂಡರ್) ಪದಕ್ಕೆ ನಿಖರವಾದ ವ್ಯಾಖ್ಯಾನ ಒದಗಿಸಲು ಮತ್ತು ಅಂತಹವರ ಮೇಲೆ ಉಂಟಾಗುವ ಹಾನಿಯ ತೀವ್ರತೆಗೆ ತಕ್ಕಂತೆ ಶಿಕ್ಷಿಸಲು ಪೂರಕವಾದ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು.

        • ‘ಟ್ರಾನ್ಸ್‌ ಜೆಂಡರ್ ವ್ಯಕ್ತಿಗಳು (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಯನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಪರಿಚಯಿಸಿದರು.
        • ಕಾನೂನಿನ ಪ್ರಯೋಜನಗಳನ್ನು ತಲುಪಿಸಲು ಟ್ರಾನ್ಸ್‌ ಜೆಂಡರ್‌ಗಳ ಸರಿಯಾದ ಗುರುತಿಸುವಿಕೆ ಮತ್ತು ರಕ್ಷಣೆಗೆ ನಿಖರವಾದ ವ್ಯಾಖ್ಯಾನ ಅಗತ್ಯವಿದೆ ಎಂದು ಮಸೂದೆಯಲ್ಲಿ ಹೇಳಲಾಗಿದೆ. ಅಗತ್ಯವಿದ್ದರೆ ತಜ್ಞರ ಸಲಹೆ ಪಡೆಯುವ ಆಯ್ಕೆಯನ್ನು ಮಸೂದೆ ಹೊಂದಿದೆ.

        ಪಕ್ಷದ ಹೆಸರು ಘೋಷಿಸಿದ ಶಶಿಕಲಾ
        ಹೊಸ ರಾಜಕೀಯ ಪಕ್ಷ ಸ್ಥಾಪಿಸಿರುವ ವಿ.ಕೆ.ಶಶಿಕಲಾ ಅವರು, ಪಕ್ಷದ ಹೆಸರು ‘ಆಲ್ ಇಂಡಿಯಾ ಪುರಚ್ಚಿ ತಲೈವರ್ ಮಕ್ಕಳ್ ಮುನ್ನೇತ್ರ ಕಳಗಂ’ (ಎಐಪಿಟಿಎಂಎಂಕೆ) ವಿ.ಕೆ.ಶಶಿಕಲಾ ಘೋಷಿಸಿದ್ದಾರೆ.

        ಪತ್ರಿಕೆ-IV: ಸಾಮಾನ್ಯ ಅಧ್ಯಯನ-3

        ಹೆಬ್ಬಕ್ಕ ಪಕ್ಷಿಯ 2 ಮರಿಗಳ ಜನನ
        ಸಂದರ್ಭ: ರಾಜಸ್ಥಾನ ದಲ್ಲಿರುವ ತಳಿ ಸಂವರ್ಧಕ ಕೇಂದ್ರದಲ್ಲಿ ‘ಹೆಬ್ಬಕ್ಕ’ ಪಕ್ಷಿಯ (ಗ್ರೇಟ್ ಇಂಡಿಯನ್ ಬಸ್ಕರ್ಡ್) ಎರಡು ಮರಿಗಳು ಜನಿಸಿವೆ.

        • ‘ಅಳಿವಿನಂಚಿನಲ್ಲಿರುವ ಈ ಪಕ್ಷಿಗಳ ಸಂರಕ್ಷಣೆಗಾಗಿ ಸ್ಥಾಪಿಸಿರುವ ಪ್ರಾಜೆಕ್ಟ್ ಗ್ರೇಟ್ ಇಂಡಿಯನ್ ಬಸ್ಮರ್ಡ್ (ಜಿಐಬಿ) ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದ. ಗ್ರೇಟ್ ಇಂಡಿಯನ್ ಬಸ್ಮರ್ಡ್ ಮರಿಗಳ ಪೈಕಿ ಒಂದು ನೈಸರ್ಗಿಕ ಸಂಯೋಗದಿಂದ ಮತ್ತು ಇನ್ನೊಂದು ಕೃತಕ ಗರ್ಭಧಾರಣೆಯ ಮೂಲಕ ಜನಿಸಿದೆ. ಕೇಂದ್ರದಲ್ಲಿ ಈಗ ಒಟ್ಟು 70 ಪಕ್ಷಿಗಳಿವೆ’.

        ನ್ಯುಮೋನಿಯಾ ಲಸಿಕೆಗೆ ಒತ್ತಾಯ
        ಸಂದರ್ಭ: ದೇಶದ ಹಿರಿಯ ನಾಗರಿಕರಿಗೆ ನ್ಯುಮೋನಿಯಾ ಲಸಿಕೆ ಹಾಕಿಸಬೇಕು, ಬೆಂಗಳೂರು ಗ್ರಾಮಾಂತರ ಸಂಸದ.

        • ‘ದೇಶದಲ್ಲಿ ಶೇ 97ರಷ್ಟು ಮಕ್ಕಳಿಗೆ ಲಸಿಕೆ ಹಾಕಿಸಲಾದೆ ನಮ್ಮ ಜನರ ಜೀವಿತಾವಧಿ ಈಗ 71-72 ವರ್ಷಗಳು, 40 ಲಕ್ಷ ಜನರು ನ್ಯುಮೋನಿಯಾದಿಂದ ನರಳಿದ್ದಾರೆ. ಈ ಕಾಯಿಲೆಯ ಮರಣ ಪ್ರಮಾಣ ಶೇ 17ರಿಂದ ಶೇ 40ರಷ್ಟು ಇದೆ. ಹಿರಿಯ ನಾಗರಿಕರಿಗೆ ಒಂದು ಸಲ ಲಸಿಕೆ ಹಾಕಿಸುವ ಮೂಲಕ ಈ ಕಾಯಿಲೆಯನ್ನು ನಿಯಂತ್ರಿಸಬಹುದು’.

        ಅಪ್ಲಾಸ್ಟಿಕ್ ರಕ್ತಹೀನತೆ (ರಕ್ತದ ಕ್ಯಾನ್ಸರ್‌ನಷ್ಟೇ ಮಾರಕವಾದ ಸಮಸ್ಯೆ)

        ಅಪ್ಲಾಸ್ಟಿಕ್ ರಕ್ತಹೀನತೆ ಎಂದರೇನು?
        ನಮ್ಮ ದೇಹದ ಮೂಳೆಯ ಒಳಗಿರುವ ಮೂಳೆ ಮಜ್ಜೆ (Bone Marrow) ಹೊಸ ರಕ್ತದ ಕಣಗಳನ್ನು ಉತ್ಪಾದಿಸುವ “ಕಾರ್ಖಾನೆ” ಇದ್ದಂತೆ. ಅಪ್ಲಾಸ್ಟಿಕ್ ರಕ್ತಹೀನತೆ ಉಂಟಾದಾಗ, ಈ ಮೂಳೆ ಮಜ್ಜೆಯು ಹಾನಿಗೊಳಗಾಗುತ್ತದೆ ಮತ್ತು ದೇಹಕ್ಕೆ ಅಗತ್ಯವಿರುವಷ್ಟು ರಕ್ತದ ಕಣಗಳನ್ನು ಉತ್ಪಾದಿಸಲು ವಿಫಲವಾಗುತ್ತದೆ.

        ಇದು ಮೂರು ರೀತಿಯ ಕಣಗಳ ಮೇಲೆ ಪರಿಣಾಮ ಬೀರುತ್ತದೆ:
        1.ಕೆಂಪು ರಕ್ತ ಕಣಗಳು (RBC): ಇವು ದೇಹಕ್ಕೆ ಆಮ್ಲಜನಕವನ್ನು ಪೂರೈಸುತ್ತವೆ. ಇವುಗಳ ಕೊರತೆಯಿಂದ ತೀವ್ರ ಸುಸ್ತು ಉಂಟಾಗುತ್ತದೆ.
        2.ಬಿಳಿ ರಕ್ತ ಕಣಗಳು (WBC): ಇವು ಸೋಂಕುಗಳ ವಿರುದ್ಧ ಹೋರಾಡುತ್ತವೆ. ಇವುಗಳ ಕೊರತೆಯಿಂದ ಪದೇ ಪದೇ ಜ್ವರ ಮತ್ತು ಇನ್ಫೆಕ್ಷನ್ ಆಗುತ್ತದೆ.
        3.ಪ್ಲೇಟ್‌ಲೆಟ್‌ಗಳು (Platelets): ಇವು ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುತ್ತವೆ. ಇವುಗಳ ಕೊರತೆಯಿಂದ ಸಣ್ಣ ಗಾಯವಾದರೂ ರಕ್ತಸ್ರಾವ ನಿಲ್ಲುವುದಿಲ್ಲ.

        ಕಾರಣಗಳು (Causes)
        ಇದು ಜನ್ಮಜಾತವಾಗಿ ಬರಬಹುದು ಅಥವಾ ಜೀವನದ ಮಧ್ಯೆ ಹಠಾತ್ ಆಗಿ ಕಾಣಿಸಿಕೊಳ್ಳಬಹುದು. ಮುಖ್ಯ ಕಾರಣಗಳು:
        ರೋಗನಿರೋಧಕ ಶಕ್ತಿಯ ವೈಫಲ್ಯ (Autoimmune disorder): ದೇಹದ ರೋಗನಿರೋಧಕ ವ್ಯವಸ್ಥೆಯೇ ಸ್ವಂತ ಮೂಳೆ ಮಜ್ಜೆಯ ಮೇಲೆ ದಾಳಿ ಮಾಡುವುದು.
        ವಿಕಿರಣ ಮತ್ತು ಕೀಮೋಥೆರಪಿ: ಕ್ಯಾನ್ಸರ್ ಚಿಕಿತ್ಸೆಯ ಅಡ್ಡಪರಿಣಾಮವಾಗಿ ಬರಬಹುದು.
        ಕೆಲವು ರಾಸಾಯನಿಕಗಳು: ಬೆನ್ಜೀನ್‌ನಂತಹ ವಿಷಕಾರಿ ರಾಸಾಯನಿಕಗಳ ಸಂಪರ್ಕ.
        ವೈರಲ್ ಸೋಂಕುಗಳು: ಹೆಪಟೈಟಿಸ್, ಎಪ್ಸ್ಟೀನ್-ಬಾರ್ ವೈರಸ್ ಇತ್ಯಾದಿ.

        ಚಿಕಿತ್ಸಾ ವಿಧಾನಗಳು (Treatment Options)

        ಚಿಕಿತ್ಸೆವಿವರಣೆ
        ರಕ್ತ ಮರುಪೂರಣ (Blood Transfusion)ತಾತ್ಕಾಲಿಕವಾಗಿ ರಕ್ತದ ಕಣಗಳ ಮಟ್ಟವನ್ನು ಹೆಚ್ಚಿಸಲು ಬೇರೆಯವರ ರಕ್ತವನ್ನು ನೀಡುವುದು.
        ರೋಗನಿರೋಧಕ ಶಕ್ತಿ ಹತ್ತಿಕ್ಕುವಿಕೆ (Immunosuppressants)ಮೂಳೆ ಮಜ್ಜೆಯ ಮೇಲೆ ದಾಳಿ ಮಾಡುವ ರೋಗನಿರೋಧಕ ವ್ಯವಸ್ಥೆಯನ್ನು ನಿಯಂತ್ರಿಸುವುದು.
        ಮೂಳೆ ಮಜ್ಜೆ ಅಥವಾ ಆಕರ ಕೋಶ ಕಸಿ (Bone Marrow/Stem Cell Transplant)ಲೇಖನದಲ್ಲಿ ಆನಂದ್ ಅವರಿಗೆ ಮಾಡಿದಂತೆ, ದಾನಿಯಿಂದ ಪಡೆದ ಆರೋಗ್ಯವಂತ ಆಕರ ಕೋಶಗಳನ್ನು ರೋಗಿಯ ದೇಹಕ್ಕೆ ಸೇರಿಸುವುದು. ಇದು ಈ ಕಾಯಿಲೆಗೆ ಇರುವ ಕಾಯಂ ಪರಿಹಾರ.

        ಅಪ್ಲಾಸ್ಟಿಕ್ ರಕ್ತಹೀನತೆಯು ಕ್ಯಾನ್ಸರ್ ಅಲ್ಲದಿದ್ದರೂ, ಅದರ ತೀವ್ರತೆ ಮತ್ತು ಚಿಕಿತ್ಸಾ ವಿಧಾನಗಳು (ಉದಾಹರಣೆಗೆ ಕಸಿ) ಕ್ಯಾನ್ಸರ್ ಚಿಕಿತ್ಸೆಯಷ್ಟೇ ಜಟಿಲವಾಗಿರುತ್ತವೆ.

        ಪತ್ರಿಕೆ-V: ಸಾಮಾನ್ಯ ಅಧ್ಯಯನ-4

        Sources: Prajavani

        ಕೆಎಎಸ್ ಪ್ರಚಲಿತ ವಿದ್ಯಮಾನಗಳು

        ಪೂರ್ವಭಾವಿ ಪರೀಕ್ಷೆ

        ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು

        ಸುಮಿತ್‌ಗೆ ಜಾವೆಲಿನ್‌ ಚಿನ್ನ

        ಸಂದರ್ಭ: ಪ್ಯಾರಾಲಿಂಪಿಕ್ ಡಬಲ್ ಚಿನ್ನ ವಿಜೇತ ಜಾವೆಲಿನ್ ಥೋಪಟು ಸುಮಿತ್ ಆಂಟಿಲ್ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಗ್ರಾನ್‌ಪ್ರಿನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.

        • ಟೋಕಿಯೊ ಮತ್ತು ಪ್ಯಾರಿಸ್ ಪ್ಯಾರಾ ಲಿಂಪಿಕ್ಸ್‌ನಲ್ಲಿ ಸತತ ಚಿನ್ನದ ಪದಕಗಳನ್ನು ಗೆದ್ದಿರುವ ಭಾರತದ ಸುಮಿತ್ ಅವರು ಇಲ್ಲಿ ನಡೆದ ಪುರುಷರ ವಿಭಾಗದ ಸ್ಪರ್ಧೆಯಲ್ಲಿ (ಎಫ್43/ಎಫ್44/ಎಫ್64) ಸ್ಪರ್ಧೆಯಲ್ಲಿ 69.25 ಮೀಟರ್ ಸಾಧನೆಯೊಂದಿಗೆ ಅಗ್ರಸ್ಥಾನಿಯಾದರು.
        • ಪುಷ್ಪಂದ್ರ ಸಿಂಗ್ ಅವರು ಈಟಿಯನ್ನು 56.91 ಮೀಟರ್ ದೂರ ಎಸೆಯುವ ಮೂಲಕ ಬೆಳ್ಳಿ ಪದಕ ಗೆದ್ದರೆ, ಪೂನಂ ರಾಮ್ (49.48 ಮೀ) ಕಂಚಿನ ಪದಕ ಗೆದ್ದರು.

        ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು

        ಗಿಲ್‌ಗೆ ವರ್ಷದ ಕ್ರಿಕೆಟಿಗ ಪ್ರಶಸ್ತಿ, ದ್ರಾವಿಡ್‌ಗೆ ಜೀವಮಾನ ಸಾಧನೆ ಗೌರವ

        ಸಂದರ್ಭ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಕರ್ನಲ್ ಸಿ.ಕೆ. ನಾಯ್ಡು ಜೀವಮಾನ ಸಾಧನೆ ಗೌರವ ಪ್ರದಾನ ಮಾಡಲಿದೆ.

        • ಭಾರತ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ತಂಡಗಳ ನಾಯಕ ಶುಭಮನ್ ಗಿಲ್ ಅವರೂ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
        • ಭಾರತ ತಂಡವು 2024ರ ಟಿ20 ವಿಶ್ವಕಪ್ ಜಯಿಸಿದ್ದ ಸಂದರ್ಭದಲ್ಲಿ ರಾಹುಲ್ ಮುಖ್ಯ ಕೋಚ್ ಆಗಿದ್ದರು. ಕರ್ನಾಟಕದ ರಾಹುಲ್ ಅವರು ತಮ್ಮ ವೃತ್ತಿಜೀವನದಲ್ಲಿ ಭಾರತದ ಕ್ರಿಕೆಟ್ ಬೆಳವಣಿಗೆಗೆ ನೀಡಿರುವ ಕಾಣಿಕೆಗಳನ್ನು ಪರಿಗಣಿಸಿ ಬಿಸಿಸಿಐನ ಅತ್ಯುನ್ನತ ಗೌರವವನ್ನು ಪ್ರದಾನ ಮಾಡಲಾಗುತ್ತಿದೆ.
        • ಅವರು ಕೆಲವು ವರ್ಷಗಳ ಹಿಂದೆ ಜೂನಿಯರ್ ತಂಡಗಳ ಕೋಚ್ ಆಗಿದ್ದ ಸಂದರ್ಭದಲ್ಲಿ ಭಾರತ 19 ವರ್ಷದೊಳಗಿನವರ ತಂಡವು ವಿಶ್ವಕಪ್ ಜಯಿಸಿತ್ತು.
        • 26 ವರ್ಷದ ಗಿಲ್ ಅವರು ಈಚೆಗೆ ನಡೆದ ಟಿ20 ವಿಶ್ವಕಪ್ ಟೂರ್ನಿಯ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಆದರೆ ಇನ್ನುಳಿದ ಎರಡೂ ಮಾದರಿಗಳಲ್ಲಿ ಅವರ ಸಾಧನೆಯನ್ನು ಪರಿಗಣಿಸಿ ಈ ಗೌರವ ನೀಡಲಾಗುತ್ತಿದೆ.
        • ಹೋದ ವರ್ಷದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 983 ರನ್ ಪೇರಿಸಿದ್ದಾರೆ. ಅದರಲ್ಲೂ ಇಂಗ್ಲೆಂಡ್ ಎದುರು ನಡೆದಿದ್ದ ಟೆಸ್ಟ್ ಸರಣಿಯಲ್ಲಿ 754 ರನ್ ಗಳಿಸಿದ್ದರು. ಸುಮಾರು 70ರ ಸರಾಸರಿಯಲ್ಲಿ ಈ ರನ್‌ಗಳನ್ನು ಗಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅವರು ಒಟ್ಟು 490 ರನ್ ಗಳಿಸಿದ್ದಾರೆ. ಅದರಲ್ಲಿ ಭಾರತ ತಂಡವು ಚಾಂಪಿಯನ್ಸ್ ಟ್ರೋಫಿ ಜಯಿಸಿದ ತಂಡದಲ್ಲಿದ್ದ ಅವರು 188 ರನ್ ಗಳಿಸಿದ್ದರು. ಎರಡೂ ಮಾದರಿ ಸೇರಿ 49ರ ಸರಾಸರಿಯಲ್ಲಿ ಒಟ್ಟು 1764 ರನ್ ಗಳಿಸಿದ್ದಾರೆ. ಅದರಲ್ಲಿ ಏಳು ಶತಕ ಮತ್ತು ಮೂರು ಅರ್ಧಶತಕಗಳು ಇವೆ. ಆದರೆ ಅವರು ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಉತ್ತಮ ಫಾರ್ಮ್‌ನಲ್ಲಿ ಇರಲಿಲ್ಲ. ಹೋದ ಸಲದ ಐಪಿಎಲ್‌ನಲ್ಲಿ ಅವರು ಗುಜರಾತ್ ಟೈಟನ್ಸ್ ತಂಡದಲ್ಲಿ ಆಡಿ, 650ರನ್‌ ಗಳಿಸಿದ್ದರು.
        • ದೇಶಿ ಕ್ರಿಕೆಟ್‌ನ ‘ಉತ್ತಮ ಸಂಘಟನೆ’ ಗೌರವಕ್ಕೆ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಭಾಜನವಾಗಿದೆ.

        ಮುಖ್ಯ ಪರೀಕ್ಷೆ

        ಪತ್ರಿಕೆ-I: ಪ್ರಬಂಧಗಳು

        ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ

        “ಕಾವೇರಿ ಜಲ ವಿವಾದ: ನ್ಯಾಯಮಂಡಳಿ ತೀರ್ಪುಗಳ ಅನುಷ್ಠಾನ, ಮೇಕೆದಾಟು ಯೋಜನೆ ಮತ್ತು ಅಂತರರಾಜ್ಯ ಹಂಚಿಕೆಯ ಸವಾಲುಗಳು.”

        ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ

        “ಬೆಂಗಳೂರಿನ ಸಂಚಾರ ಚಕ್ರವ್ಯೂಹ: ಸಮಸ್ಯೆಗಳು, ಸವಾಲುಗಳು ಮತ್ತು ಸುಸ್ಥಿರ ಪರಿಹಾರಗಳು.”

        ಪತ್ರಿಕೆ-II: ಸಾಮಾನ್ಯ ಅಧ್ಯಯನ-1

        ಬೇಸಿಗೆ ಅವಧಿಯ ದ್ವಿತೀಯಾರ್ಧದಲ್ಲಿ ಬೀಳುವ ಮಳೆ: ಹವಾಮಾನ ತಜ್ಞರ ವಿಶ್ಲೇಷಣೆ: ಮುಂಗಾರು ಮೇಲೆ ಎಲ್ನಿನೊ ಪರಿಣಾಮ
        ಸಂದರ್ಭ: ಈ ಬಾರಿ ಬೇಸಿಗೆ ಅವಧಿಯ ದ್ವಿತೀಯಾರ್ಧದಲ್ಲಿ ಬೀಳುವ ಮಳೆ ಮೇಲೆ ಎಲ್ ನಿನೊ ಪರಿಣಾಮ ಬೀರಲಿದೆ. ಇದು ಮುಂದಿನ ವರ್ಷದ ಮುಂಗಾರಿನ ಮೇಲೂ ಪರಿಣಾಮ ಬೀರುವ ಸಾಧ್ಯತೆಯೂ ಹೆಚ್ಚು ಎಂದು ಹವಾಮಾನತಜ್ಞರು ಹೇಳಿದ್ದಾರೆ.

        • ‘ಎಲ್ ನಿನೊ ಬೀರುವ ಪರಿಣಾಮ ಸಾಧಾರಣ ಅಥವಾ ಪ್ರಬಲವಾಗಿರಬಹುದು, ಆದರೆ, ಪೆಸಿಫಿಕ್ ಸಾಗರದಲ್ಲಿ ಉಷ್ಣತೆಯಲ್ಲಿ ಕಂಡುಬರುವ ಹೆಚ್ಚಳವು ‘ಸೂಪ‌ರ್ ಎಲ್‌ನೊ’ ಆಗಿ ಪರಿವರ್ತನೆಗೊಳ್ಳಲಿದೆಯೇ ಎಂಬುದನ್ನು ಈಗಲೇ ಅಂದಾಜಿಸಲಾಗದು’ ಎಂದೂ ಹೇಳಿದ್ದಾರೆ.
        • ‘ಆಗಸ್ಟ್ ವೇಳೆಗೆ ಎಲ್‌ನೊ ಪರಿಣಾಮ ಸಾಧಾರಣ ಇರುವ ಸಾಧ್ಯತೆ ಶೇಕಡ 98ರಷ್ಟು ಹಾಗೂ ಪ್ರಬಲವಾಗಿರುವ ಸಾಧ್ಯತೆ ಶೇ 80ರಷ್ಟು ಇರಲಿದೆ. ಸೂಪರ್ ಎಲ್ ನಿನೊ ಆಗಿ ಪರಿವರ್ತನೆಯಾಗುವ ಸಾಧ್ಯತೆ ಶೇ 22ರಷ್ಟು’ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಹೇಳಿದೆ.
        • ‘ಸೂಪರ್ ಎಲ್ ನಿನೊ ಪರಿಣಾಮದ ಬಗ್ಗೆ ಸ್ಪಷ್ಟ ಚಿತ್ರಣವು ಮೇ ಅಂತ್ಯದ ವೇಳೆಗೆ ಸಿಗಲಿದೆ’ ಎಂದು ಐಎಂಸಿ ಪ್ರಧಾನ ನಿರ್ದೇಶಕ ತಿಳಿಸಿದ್ದಾರೆ.
        • ಎಲ್‌ನಿನೊ ಎಂದರೆ ಸಮುದ್ರದ ಉಷ್ಣತೆ ಹೆಚ್ಚಾಗುವುದು. ಲಾನಿನಾ ಎಂದರೆ ಸಮುದ್ರದ ಉಷ್ಣತೆ ಕಡಿಮೆ ಆಗುವುದು. ಎಲ್ ನಿನೊ ಎಂದರೆ ಮಳೆ ಕಡಿಮೆ, ಲಾನಿನಾ ಎಂದರೆ ಮಳೆ ಹೆಚ್ಚು ಬರುವುದು. ಇವೆರಡೂ ಭಾರತದ ಮುಂಗಾರಿನ ಮೇಲೆ ಪರಿಣಾಮ ಬೀರುವಂತಹ ಬೆಳವಣಿಗೆಗಳು.
        • ಎಲ್ ನಿನೋವನ್ನು ಆಧರಿಸಿ ಭಾರತದ ಮಳೆಯ ಪರಿಸ್ಥಿತಿಯನ್ನು ಮೂರು ತಿಂಗಳ ಮುಂಚೆ ಹೇಳಬಹುದು.

        ಎಲ್ ನಿನೊ (El Niño) ಮತ್ತು ಲಾ ನಿನಾ (La Niña) ಎಂಬುದು ಪೆಸಿಫಿಕ್ ಸಾಗರದ ಮೇಲ್ಮೈ ತಾಪಮಾನದಲ್ಲಿ ಉಂಟಾಗುವ ಬದಲಾವಣೆಗಳಾಗಿವೆ. ಇವು ಪ್ರಪಂಚದಾದ್ಯಂತದ ಹವಾಮಾನದ ಮೇಲೆ, ಅದರಲ್ಲೂ ವಿಶೇಷವಾಗಿ ಭಾರತದ ಮಾನ್ಸೂನ್ ಮಳೆಯ ಮೇಲೆ ಭಾರಿ ಪ್ರಭಾವ ಬೀರುತ್ತವೆ.

        ವೈಶಿಷ್ಟ್ಯಎಲ್ ನಿನೊ (El Niño)ಲಾ ನಿನಾ (La Niña)
        ಅರ್ಥಪೆಸಿಫಿಕ್ ಸಾಗರದ ಉಷ್ಣತೆಯ ಹೆಚ್ಚಳಪೆಸಿಫಿಕ್ ಸಾಗರದ ಉಷ್ಣತೆಯ ಇಳಿಕೆ
        ಗಾಳಿಯ ದಿಕ್ಕುವಾಣಿಜ್ಯ ಮಾರುತಗಳು ದುರ್ಬಲಗೊಳ್ಳುತ್ತವೆವಾಣಿಜ್ಯ ಮಾರುತಗಳು ಬಲಗೊಳ್ಳುತ್ತವೆ
        ಹವಾಮಾನದ ಮೇಲೆ ಪ್ರಭಾವಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣಜಾಗತಿಕವಾಗಿ ತಾಪಮಾನ ತಂಪಾಗಲು ಕಾರಣ
        ಭಾರತದ ಮೇಲೆ ಪರಿಣಾಮಮಳೆ ಕೊರತೆ ಅಥವಾ ಬರಗಾಲದ ಸಂಭವಉತ್ತಮ ಮಳೆ ಮತ್ತು ಚಟುವಟಿಕೆಯ ಮಾನ್ಸೂನ್

        ಭಾರತದ ಮೇಲೆ ಎಲ್ ನಿನೊ ಮತ್ತು ಲಾ ನಿನಾದ ಪ್ರಭಾವ

        ಅಂಶಎಲ್ ನಿನೊ (El Niño) ಪ್ರಭಾವಲಾ ನಿನಾ (La Niña) ಪ್ರಭಾವ
        ಮಾನ್ಸೂನ್ ಮಾರುತಗಳುಮಾರುತಗಳು ದುರ್ಬಲಗೊಳ್ಳುತ್ತವೆ.ಮಾರುತಗಳು ಬಲಗೊಳ್ಳುತ್ತವೆ.
        ಮಳೆಯ ಪ್ರಮಾಣಮಳೆ ಕೊರತೆ ಅಥವಾ ಬರಗಾಲದ ಪರಿಸ್ಥಿತಿ.ಹೆಚ್ಚಿನ ಮಳೆ ಮತ್ತು ಸಮೃದ್ಧ ಮಳೆಗಾಲ.
        ಕೃಷಿ ಪರಿಣಾಮಬೆಳೆ ಉತ್ಪಾದನೆ ಕುಸಿತ, ಆಹಾರ ಬೆಲೆ ಏರಿಕೆ.ಕೃಷಿ ಉತ್ಪಾದನೆಯಲ್ಲಿ ಹೆಚ್ಚಳ, ಆಹಾರ ಭದ್ರತೆ.
        ಇತರ ಅಪಾಯಗಳುಬರಗಾಲದಿಂದ ರೈತರಿಗೆ ಆರ್ಥಿಕ ನಷ್ಟ.ಅತಿಯಾದ ಮಳೆಯಿಂದ ಪ್ರವಾಹ ಮತ್ತು ಆಸ್ತಿ-ಪಾಸ್ತಿ ಹಾನಿ.
        ನಿರ್ಣಾಯಕ ಅಂಶಗಳುIOD (ಹಿಂದೂ ಮಹಾಸಾಗರದ ದ್ವಿಧ್ರುವಿ) ಧನಾತ್ಮಕವಾಗಿದ್ದರೆ ಪರಿಣಾಮ ತಗ್ಗಬಹುದು.ಅಧಿಕ ಮಳೆಯು ಜಲಾಶಯಗಳ ಮಟ್ಟ ಹೆಚ್ಚಿಸಲು ಸಹಕಾರಿ.

        ಪತ್ರಿಕೆ-III: ಸಾಮಾನ್ಯ ಅಧ್ಯಯನ-2

        ‘ಕೆನೆಪದರ: ಆದಾಯವಷ್ಟೇ ಆಧಾರವಲ್ಲ’: ಒಬಿಸಿ ಮೀಸಲಾತಿ ಕುರಿತು ‘ಸುಪ್ರೀಂ’ ಮಹತ್ವದ ತೀರ್ಪು
        ಸಂದರ್ಭ: ಹಿಂದುಳಿದ ವರ್ಗಗಳಿಗೆ (ಒಬಿಸಿ) ಸೇರಿದ ಅಭ್ಯರ್ಥಿಯೊಬ್ಬರು ಕೆನೆಪದರದ ವ್ಯಾಪ್ತಿಯಲ್ಲಿ ಬರುತ್ತಾರೋ ಅಥವಾ ಇಲ್ಲವೋ ಎನ್ನುವುದನ್ನು ಆ ಅಭ್ಯರ್ಥಿಯ ಪೋಷಕರ ಆದಾಯವೊಂದನ್ನೇ ಆಧರಿಸಿ ನಿರ್ಧರಿಸಲು ಸಾಧ್ಯವಿಲ್ಲ. ಪೋಷಕರು ಯಾವ ಹುದ್ದೆಯಲ್ಲಿದ್ದಾರೆ ಎನ್ನುವುದೂ ಮುಖ್ಯವಾಗುತ್ತದೆ’ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

        • ಪೋಷಕರು ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಲ್ಲಿ ನೌಕರಿಯಲ್ಲಿದ್ದಾರೆ. ಬ್ಯಾಂಕುಗಳು ಅಥವಾ ಖಾಸಗಿ ವಲಯದ ಉದ್ಯೋಗದಲ್ಲಿದ್ದಾರೆ ಎನ್ನುವ ಕಾರಣಕ್ಕೆ ಹಿಂದುಳಿದ ವರ್ಗಗಳಿಗೆ ಸೇರಿದ ಕೆಲವು ಯುಪಿಎಸ್‌ಸಿ ಆಕಾಂಕ್ಷಿಗಳನ್ನು ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯವು ಕೆನೆಪದರಕ್ಕೆ ಸೇರಿಸಿ ನೇಮಕಾತಿಯಲ್ಲಿ ಮೀಸಲಾತಿ ನಿರಾಕರಿಸಿತ್ತು.
        • ಇದನ್ನು ಪ್ರಶ್ನಿಸಿ ಆಕಾಂಕ್ಷಿಗಳು ದೆಹಲಿ, ಮದ್ರಾಸ್ ಮತ್ತು ಕೇರಳ ಹೈಕೋರ್ಟ್‌ಗಳಲ್ಲಿ ಅರ್ಜಿ ಸಲ್ಲಿಸಿದ್ದರು. ಈ ನ್ಯಾಯಾಲಯಗಳಲ್ಲಿ ಆಕಾಂಕ್ಷಿಗಳ ಪರವಾಗಿ ತೀರ್ಪು ಬಂದಿತ್ತು ಈ ತೀರ್ಪುಗಳನ್ನು ಪ್ರಶ್ನಿಸಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಆ‌ರ್ ಮಹಾದೇವನ್ ಅವರ ಪೀಠವು ಈ ಅರ್ಜಿಗಳ ವಿಚಾರಣೆ ನಡೆಸಿ, ಕೇಂದ್ರದ ಮೇಲ್ಮನವಿಯನ್ನು ವಜಾ ಮಾಡಿ ಮಾರ್ಚ್ 11ರಂದು ತೀರ್ಪು ನೀಡಿದೆ.
        • 1993ರ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯದ ಟಿಪ್ಪಣಿಯನ್ನು (ಒಬಿಸಿಗಳಿಗೆ ಮೀಸಲಾತಿ ನೀಡುವ ಬಗ್ಗೆ ಇದ್ದ ಟಿಪ್ಪಣಿ) ಓದಿದರೂ 2004ರ ಅಕ್ಟೋಬರ್ 14ರಂದು ಇದೇ ಸಚಿವಾಲಯ ನೀಡಿದ ಸ್ಪಷ್ಟಿಕರಣ ಪತ್ರವನ್ನು ಓದಿದರೂ ಸಂಬಳದಿಂದ ಬರುವ ಆದಾಯವನ್ನು ಮಾತ್ರವೇ ಆಧಾರವಾಗಿಟ್ಟುಕೊಂಡು ಅಭ್ಯರ್ಥಿಯೊಬ್ಬರನ್ನು ಕೆನೆಪದರದಲ್ಲಿ ಇರಿಸುವುದು ಅಥವಾ ಹೊರಗಿಡುವುದನ್ನು ನಿರ್ಧರಿಸಲು ಸಾಧ್ಯವಿಲ್ಲ’ ಎಂದು ಪೀಠ ಸ್ಪಷ್ಟ ಮಾತುಗಳಲ್ಲಿ ಹೇಳಿತು.
        • ‘ಅಭ್ಯರ್ಥಿಯ ಪೋಷಕರ ಸ್ಥಾನಮಾನಗಳು ಮತ್ತು ಅವರು ಯಾವ ಹುದ್ದೆಯಲ್ಲಿದ್ದಾರೆ ಎನ್ನುವುದೂ ಮುಖ್ಯವಾಗುತ್ತವೆ ಕೆನೆಪದರವನ್ನು ಆದಾಯದ ಆಧಾರದಲ್ಲಿ ಅಲ್ಲ ಸ್ನಾನಮಾನದ ಆಧಾರದಲ್ಲಿ ನಿರ್ಧರಿಸಬೇಕಾಗುತ್ತದೆ ಎಂಬುದಾಗಿ ಸಚಿವಾಲಯದ ಟಿಪ್ಪಣಿಯ ಒಂದನೇ ಮತ್ತು ಮೂರನೇ ವಿಭಾಗದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ’ ಎಂದು ಪೀಠ ಅಭಿಪ್ರಾಯಪಟ್ಟಿದೆ.

        ಒಬಿಸಿ (OBC) ಮೀಸಲಾತಿಯಲ್ಲಿನ ‘ಕೆನೆಪದರ’ (Creamy Layer) ಪರಿಕಲ್ಪನೆ ಮತ್ತು ಅದರ ವಿಕಸನದ ಐತಿಹಾಸಿಕ ಹಿನ್ನೆಲೆ:

        ಕಾಲಘಟ್ಟ / ಘಟನೆಪ್ರಮುಖ ಅಂಶಗಳುಮಹತ್ವ
        1979 (ಮಂಡಲ ಆಯೋಗ)ಬಿ.ಪಿ. ಮಂಡಲ ನೇತೃತ್ವದ ಆಯೋಗವು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು (SEBC) ಗುರುತಿಸಿತು.ಮೀಸಲಾತಿಗೆ ವೈಜ್ಞಾನಿಕ ಆಧಾರವನ್ನು ಒದಗಿಸಿತು.
        1990 (ವಿ.ಪಿ. ಸಿಂಗ್ ಸರ್ಕಾರ)ಮಂಡಲ ಆಯೋಗದ ಶಿಫಾರಸುಗಳನ್ನು ಜಾರಿಗೆ ತಂದು, ಒಬಿಸಿಗಳಿಗೆ ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ 27% ಮೀಸಲಾತಿ ಘೋಷಿಸಲಾಯಿತು.ಮೀಸಲಾತಿ ಜಾರಿಗೆ ಬಂದ ಪ್ರಮುಖ ಮೈಲಿಗಲ್ಲು.
        1992 (ಇಂದಿರಾ ಸಾಹ್ನಿ ತೀರ್ಪು)ಸುಪ್ರೀಂ ಕೋರ್ಟ್ ಮೀಸಲಾತಿಯನ್ನು ಎತ್ತಿಹಿಡಿಯಿತು, ಆದರೆ ‘ಕೆನೆಪದರ’ದವರನ್ನು ಹೊರಗಿಡಬೇಕು ಎಂದು ಸ್ಪಷ್ಟವಾಗಿ ಆದೇಶಿಸಿತು.ಕೆನೆಪದರ ಎಂಬ ಪರಿಕಲ್ಪನೆ ಕಾನೂನಾತ್ಮಕವಾಗಿ ಅಸ್ತಿತ್ವಕ್ಕೆ ಬಂದಿತು.
        1993 (DoPT ಟಿಪ್ಪಣಿ)ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯವು ಕೆನೆಪದರವನ್ನು ನಿರ್ಧರಿಸಲು ಮಾನದಂಡಗಳನ್ನು ರೂಪಿಸಿತು.ಆದಾಯದ ಮಿತಿಯ ಜೊತೆಗೆ ಸಾಮಾಜಿಕ ಸ್ಥಾನಮಾನದ ಮಾನದಂಡಗಳನ್ನೂ ಪರಿಗಣಿಸಲಾಯಿತು.
        2004 (DoPT ಸ್ಪಷ್ಟೀಕರಣ)ಸಂಬಳ ಮತ್ತು ಕೃಷಿ ಆದಾಯವನ್ನು ಕೆನೆಪದರದ ಆದಾಯದ ಮಿತಿಯಲ್ಲಿ ಪರಿಗಣಿಸಬಾರದು ಎಂದು ಸರ್ಕಾರ ಸ್ಪಷ್ಟಪಡಿಸಿತು.ಈ ಸ್ಪಷ್ಟೀಕರಣವನ್ನು ಇತ್ತೀಚಿನ ತೀರ್ಪಿನಲ್ಲಿ ಕೋರ್ಟ್ ಪ್ರಬಲವಾಗಿ ಬಳಸಿದೆ.
        2026 (ಸುಪ್ರೀಂ ಕೋರ್ಟ್ ತೀರ್ಪು)ಪೋಷಕರ ಆದಾಯವನ್ನೇ ಏಕೈಕ ಮಾನದಂಡವಾಗಿಟ್ಟುಕೊಳ್ಳುವಂತಿಲ್ಲ; ಹುದ್ದೆಯ ಸ್ಥಾನಮಾನವೇ ಮುಖ್ಯ ಎಂದು ನ್ಯಾಯಾಲಯದ ಆದೇಶ.ಆದಾಯ ಆಧಾರಿತ ನಿರ್ಧಾರಕ್ಕೆ ತಡೆ, ಸ್ಥಾನಮಾನ ಆಧಾರಿತ ನಿರ್ಧಾರಕ್ಕೆ ಆದ್ಯತೆ.

        ದಯಾಮರಣಕ್ಕೆ ಕಾನೂನು ಬಲ

        ಪತ್ರಿಕೆ-IV: ಸಾಮಾನ್ಯ ಅಧ್ಯಯನ-3

        ಮಹಾರಾಷ್ಟ್ರ ಸರ್ಕಾರದ ನಿರ್ಧಾರ: ‘ಪ್ರಾಣ ರಕ್ಷಣೆಗಾಗಿ ಚಿರತೆ ಹತ್ಯೆ ಮಾಡಿದರೆ ಕ್ರಮವಿಲ್ಲ’
        ಸಂದರ್ಭ: ಚಿರತೆಗಳನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪರಿಚ್ಛೇದ 1ರಿಂದ ತೆಗೆದು ಹಾಕಿ, ಪರಿಚ್ಛೇದ 2ಕ್ಕೆ ಸೇರಿಸುವ ಪ್ರಸ್ತಾವವನ್ನು ಮಹಾರಾಷ್ಟ್ರ ಸಚಿವ ಸಂಪುಟ ಸಭೆ ಅನುಮೋದಿಸಿದೆ.

        • ಪರಿಚ್ಛೇದ 1ರಲ್ಲಿ ಗುರುತಿಸಲಾಗುವ ಪ್ರಾಣಿಗಳನ್ನು ಹತ್ಯೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅದರೆ ಪರಿಚ್ಛೇದ 2ರಲ್ಲಿರುವ ಪ್ರಾಣಿಗಳನ್ನು ತಮ್ಮ ಪ್ರಾಣ ರಕ್ಷಣೆಗಾಗಿ ಹತ್ಯೆ ಮಾಡಿದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದಿಲ್ಲ.
        • ‘ಚಿರತೆಗಳು ಜನವಸತಿ ಪ್ರದೇಶಕ್ಕೆ ಪ್ರವೇಶಿಸುವ ಘಟನೆಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಇಂಥ ಸಂದರ್ಭದಲ್ಲಿ ಪ್ರಾಣರಕ್ಷಣೆಗಾಗಿ ಅವುಗಳನ್ನು ಹತ್ಯೆ ಮಾಡಿದರೆ, ಅಂಥವರ ವಿರುದ್ಧದ ಕಾನೂನು ಕ್ರಮವನ್ನು ತಪ್ಪಿಸಲು ಸರ್ಕಾರವು ಈ ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಅನುಮತಿ ಪಡೆಯಲಾಗುವುದು’ ಎಂದು ಅರಣ್ಯ ಸಚಿವ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
        • ಮಾನವ ವಸತಿ ಪ್ರದೇಶಕ್ಕೆ ನುಗ್ಗಿ, ಸಾವು-ನೋವು ಉಂಟುಮಾಡುವ ಮಾಡುವ ಚಿರತೆಗಳನ್ನು ನರಭಕ್ಷಕ’ ಎಂದು ಘೋಷಿಸುವಂತೆಯೂ ನಿರ್ದೇಶಿಸಲಾಗಿದೆ.
        • 150 ಚಿರತೆಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲು ರಾಜ್ಯ ಸರ್ಕಾರವು ಕೇಂದ್ರಕ್ಕೆ ಪ್ರಸ್ತಾವ ಕಳುಹಿಸಿತ್ತು. ಪ್ರಾಯೋಗಿಕವಾಗಿ ಹಣ್ಣು ಚಿರತೆಗಳನ್ನು ಸೆರೆ ಹಿಡಿದು ಚಿಕಿತ್ಸೆಗೊಳಪಡಿಸಲು ಕೇಂದ್ರವು ಅನುಮತಿ ನೀಡಿದೆ. ಇದರಂತೆ ಕ್ರಮ ಕೈಗೊಳ್ಳಲಾಗುತ್ತಿದೆ.
        • ಮಾನವ-ಚಿರತೆ ಸಂಘರ್ಷ ಹೆಚ್ಚಾಗಿರುವ ಸೂಕ್ಷ್ಮ ಪ್ರದೇಶಗಳಲ್ಲಿ ಅರಣ್ಯ ಸಿಬ್ಬಂದಿ ಗಸ್ತು ನಡೆಸುತ್ತಿದ್ದಾರೆ. ಇಂತಹ ಪ್ರದೇಶಗಳಲ್ಲಿ ಶಾಲೆಗಳ ಸಮಯವನ್ನೂ ಬದಲಾಯಿಸಲಾಗಿದೆ.
        • ಸೆರೆ ಹಿಡಿಯಲಾದ ಹುಲಿಗಳು, ಚಿರತೆಗಳು ಹಾಗೂ ಇತರ ವನ್ಯಪ್ರಾಣಿಗಳನ್ನು ರಕ್ಷಿಸಿ ಇರಿಸಲಾಗುವ ಸಂರಕ್ಷಣಾ ಕೇಂದ್ರಗಳ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು ಸೆರೆ ಹಿಡಿದಿರುವ ಚಿರತೆಗಳನ್ನು ಕೇಂದ್ರೀಯ ಮೃಗಾಲಯ ಪ್ರಾಧಿಕಾರದ ಅನುಮತಿ ಪಡೆದು ಹೊರ ರಾಜ್ಯಗಳ ಮೃಗಾಲಯ ಹಾಗೂ ಸಂರಕ್ಷಣಾ ಕೇಂದ್ರಗಳಿಗೆ ಸ್ಥಳಾಂತರಿಸುವುದಕ್ಕೂ ಪ್ರಯತ್ನ ನಡೆದಿದೆ’.

        ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ (Wildlife Protection Act,1972) ಪ್ರಾಣಿಗಳ ವರ್ಗೀಕರಣ ಮತ್ತು ಅವುಗಳ ಹತ್ಯೆಗೆ ಸಂಬಂಧಿಸಿದ ಕಾನೂನು ಕ್ರಮಗಳ ನಡುವಿನ ವ್ಯತ್ಯಾಸ.

        ಹೊಸ ಪರಿಚ್ಛೇದ (Schedules)ಹಳೆಯ ಪರಿಚ್ಛೇದಗಳ ವಿಲೀನಪ್ರಾಣಿ/ಸಸ್ಯಗಳ ವರ್ಗ ಮತ್ತು ವಿವರಣೆಉದಾಹರಣೆಗಳುಕಾನೂನು ಮತ್ತು ಅಧಿಕಾರಿಗಳ ಅನುಮತಿ
        ಪರಿಚ್ಛೇದ Iಹಳೆಯ ಪರಿಚ್ಛೇದ I ಮತ್ತು II ರ ಭಾಗಗಳುಅತ್ಯುನ್ನತ ರಕ್ಷಣೆ: ಅಳಿವಿನಂಚಿನಲ್ಲಿರುವ ಅಪರೂಪದ ಪ್ರಾಣಿಗಳು. ಇವುಗಳ ಹತ್ಯೆ ಅಥವಾ ಬೇಟೆ ಸಂಪೂರ್ಣ ನಿಷೇಧ.ಹುಲಿ, ಆನೆ, ಸಿಂಹ, ಕೃಷ್ಣಮೃಗ, ಘೇಂಡಾಮೃಗ, ಚಿರತೆ.ಚೀಫ್ ವೈಲ್ಡ್ ಲೈಫ್ ವಾರ್ಡನ್ ಅವರು ಆ ಪ್ರಾಣಿ ಮನುಷ್ಯನ ಜೀವಕ್ಕೆ ಅಪಾಯಕಾರಿ ಎಂದು ಘೋಷಿಸಿದರೆ ಮಾತ್ರ ಹತ್ಯೆಗೆ ಅವಕಾಶ.
        ಪರಿಚ್ಛೇದ IIಹಳೆಯ ಪರಿಚ್ಛೇದ II, III ಮತ್ತು IV ರ ಭಾಗಗಳುಸಂರಕ್ಷಿತ ಪ್ರಾಣಿಗಳು: ಇವುಗಳಿಗೂ ರಕ್ಷಣೆ ಇರುತ್ತದೆ ಆದರೆ ಶಿಕ್ಷೆಯ ಪ್ರಮಾಣ ಪರಿಚ್ಛೇದ I ಕ್ಕಿಂತ ತುಲನಾತ್ಮಕವಾಗಿ ಕಡಿಮೆ.ನಾಗರಹಾವು, ನರಿ, ಕಾಡುಹಂದಿ, ಸಾಂಬಾರ್ ಜಿಂಕೆ, ವಿವಿಧ ಪಕ್ಷಿಗಳು.ರಕ್ಷಣೆಗಾಗಿ ಮಾಡಿದ ಹತ್ಯೆಯನ್ನು ತನಿಖೆಯ ನಂತರ ಸಮರ್ಥನೀಯವೆಂದು ಕಂಡುಬಂದರೆ ಪ್ರಕರಣ ಕೈಬಿಡಲಾಗುತ್ತದೆ.
        ಪರಿಚ್ಛೇದ IIIಹಳೆಯ ಪರಿಚ್ಛೇದ VIಸಂರಕ್ಷಿತ ಸಸ್ಯಗಳು: ಅಪರೂಪದ ಮತ್ತು ವಾಣಿಜ್ಯ ಮೌಲ್ಯವಿರುವ ಸಸ್ಯಗಳ ಸಂರಕ್ಷಣೆ.ಕೆಂಪು ಚಂದನ, ನೀಲಕುರಿಂಜಿ, ಬೆಡ್‌ಡೋಮ್ಸ್ ಸೈಕಾಡ್.ಇವುಗಳ ಕೃಷಿ, ಸಂಗ್ರಹಣೆ ಅಥವಾ ಮಾರಾಟಕ್ಕೆ ರಾಜ್ಯ ಅರಣ್ಯ ಇಲಾಖೆಯ ಪೂರ್ವಾನುಮತಿ ಮತ್ತು ಪರವಾನಗಿ ಕಡ್ಡಾಯ.
        ಪರಿಚ್ಛೇದ IVಹೊಸ ಸೇರ್ಪಡೆ (CITES ಅನ್ವಯ)ಅಂತರರಾಷ್ಟ್ರೀಯ ವ್ಯಾಪಾರ: CITES ಒಪ್ಪಂದದ ಅಡಿಯಲ್ಲಿ ಬರುವ ಪ್ರಾಣಿ ಮತ್ತು ಸಸ್ಯಗಳ ಸಂರಕ್ಷಣೆ.ಅಂತರರಾಷ್ಟ್ರೀಯ ಮಟ್ಟದಲ್ಲಿ ರಕ್ಷಿಸಲ್ಪಟ್ಟ ವಿದೇಶಿ ಪ್ರಾಣಿಗಳು ಮತ್ತು ಸಸ್ಯಗಳು.ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಸಾಗಾಣಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ನಿಗದಿಪಡಿಸಿದ ನಿಯಮಗಳು ಅನ್ವಯಿಸುತ್ತವೆ.

        ಹೊಸ ತಿದ್ದುಪಡಿಯ ಪ್ರಮುಖ ಮುಖ್ಯಾಂಶಗಳು:
        ಪರಿಚ್ಛೇದ 5 (Vermin) ರದ್ದತಿ: ಈ ಮೊದಲು ‘ಉಪದ್ರವಕಾರಿ ಪ್ರಾಣಿಗಳು’ ಎಂದು ಪ್ರತ್ಯೇಕ ಪರಿಚ್ಛೇದವಿತ್ತು. ಈಗ ಅದನ್ನು ತೆಗೆದುಹಾಕಲಾಗಿದ್ದು, ಕೇಂದ್ರ ಸರ್ಕಾರವು ಅಧಿಸೂಚನೆಯ ಮೂಲಕ ಯಾವುದೇ ಪ್ರಾಣಿಯನ್ನು ನಿರ್ದಿಷ್ಟ ಅವಧಿಗೆ ‘ವರ್ಮಿನ್’ ಎಂದು ಘೋಷಿಸುವ ಅಧಿಕಾರ ಹೊಂದಿದೆ.

        ಆನೆಗಳ ಬಳಕೆ: ಧಾರ್ಮಿಕ ಅಥವಾ ಇತರ ಉದ್ದೇಶಗಳಿಗಾಗಿ ಆನೆಗಳ ವರ್ಗಾವಣೆಗೆ ಸಂಬಂಧಿಸಿದ ನಿಯಮಗಳನ್ನು ಸ್ವಲ್ಪ ಸಡಿಲಗೊಳಿಸಲಾಗಿದೆ (ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅಡಿಯಲ್ಲಿ).

        ದಂಡದ ಹೆಚ್ಚಳ: ಸಾಮಾನ್ಯ ಉಲ್ಲಂಘನೆಗೆ ದಂಡವನ್ನು ₹25,000 ರಿಂದ ₹1,00,000 ವರೆಗೆ ಹೆಚ್ಚಿಸಲಾಗಿದೆ. ಪರಿಚ್ಛೇದ 1ರ ಪ್ರಾಣಿಗಳ ಹತ್ಯೆಗೆ ಕನಿಷ್ಠ ₹25,000 ದಂಡ ವಿಧಿಸಲಾಗುತ್ತದೆ.

        ಆತ್ಮರಕ್ಷಣೆ ಮತ್ತು ಮಾಲೀಕತ್ವ: ಯಾವುದೇ ಸಂದರ್ಭದಲ್ಲಿ ಹತ್ಯೆಗೀಡಾದ ಪ್ರಾಣಿಯ ದೇಹದ ಭಾಗಗಳು ಸರ್ಕಾರದ ಆಸ್ತಿಯಾಗಿರುತ್ತವೆ. ಅದನ್ನು ಯಾರೂ ವೈಯಕ್ತಿಕವಾಗಿ ಹೊಂದುವಂತಿಲ್ಲ.

        ಪತ್ರಿಕೆ-V: ಸಾಮಾನ್ಯ ಅಧ್ಯಯನ-4

        ಪ್ರಕರಣದ ಅಧ್ಯಯನ: ರಾಜ್ಯದ ಆದಾಯ ಮತ್ತು ಸಾರ್ವಜನಿಕ ಆರೋಗ್ಯ – ಅಬಕಾರಿ ನೀತಿಯ ಸಂಘರ್ಷ

        1. ಪ್ರಕರಣದ ಸಾರಾಂಶ (Case Context)
        ಕರ್ನಾಟಕ ಸರ್ಕಾರವು ತನ್ನ ಅಬಕಾರಿ ನೀತಿಯನ್ನು ಸುಧಾರಿಸಲು ಮುಂದಾಗಿದೆ. ಇದರಲ್ಲಿ ಮದ್ಯದ ಮೇಲಿನ ತೆರಿಗೆಯನ್ನು ಮದ್ಯದ ಪ್ರಮಾಣದ (Ex-Distillery Price-EDP) ಬದಲು ಆಲ್ಕೋಹಾಲ್ ಸಾಂದ್ರತೆಯ (Alcohol By Volume-ABV) ಆಧಾರದ ಮೇಲೆ ವಿಧಿಸುವ ವೈಜ್ಞಾನಿಕ ಕ್ರಮವೂ ಸೇರಿದೆ. ಒಂದೆಡೆ ಸರ್ಕಾರವು ತನ್ನ ಬಜೆಟ್ ಗುರಿಯನ್ನು ತಲುಪಲು ಅಬಕಾರಿ ಇಲಾಖೆಯಿಂದ ಹೆಚ್ಚಿನ ಆದಾಯವನ್ನು ನಿರೀಕ್ಷಿಸುತ್ತಿದ್ದರೆ, ಮತ್ತೊಂದೆಡೆ ಗಡಿ ಜಿಲ್ಲೆಗಳಲ್ಲಿ ಅಕ್ರಮ ಮದ್ಯ ಸಾಗಾಣಿಕೆ ಮತ್ತು ಸಾರ್ವಜನಿಕರ ಆರೋಗ್ಯದ ಸವಾಲುಗಳು ಎದುರಾಗಿವೆ.

        2. ಪ್ರಕರಣದಲ್ಲಿರುವ ಸತ್ಯಾಂಶಗಳು (Facts in the Case)
        ಆದಾಯದ ಗುರಿ: ಸರ್ಕಾರವು ಮುಂದಿನ ಆರ್ಥಿಕ ವರ್ಷಕ್ಕೆ ₹45,000 ಕೋಟಿ ಅಬಕಾರಿ ಸಂಗ್ರಹದ ಗುರಿ ಹೊಂದಿದೆ. ಪ್ರಸ್ತುತ ಫೆಬ್ರವರಿ ಅಂತ್ಯದವರೆಗೆ ₹32,492 ಕೋಟಿ ಸಂಗ್ರಹವಾಗಿದೆ.
        ಅಕ್ರಮ ಮದ್ಯದ ಹಾವಳಿ: ಕಳೆದ ಮೂರು ವರ್ಷಗಳಲ್ಲಿ ಗೋವಾ, ತೆಲಂಗಾಣ ಮತ್ತು ಆಂಧ್ರಪ್ರದೇಶಗಳಿಂದ ಕರ್ನಾಟಕಕ್ಕೆ ಅಕ್ರಮವಾಗಿ ಮದ್ಯ ಸಾಗಾಟವಾಗುತ್ತಿರುವ 1,489 ಪ್ರಕರಣಗಳು ದಾಖಲಾಗಿವೆ.
        ಗಡಿ ಜಿಲ್ಲೆಗಳ ಸಮಸ್ಯೆ: ಬೆಳಗಾವಿ (242), ರಾಯಚೂರು (268), ಕಲಬುರಗಿ (200) ಜಿಲ್ಲೆಗಳಲ್ಲಿ ಅಕ್ರಮ ಮದ್ಯದ ಪ್ರಕರಣಗಳು ಅತಿ ಹೆಚ್ಚಿವೆ.
        ಜಪ್ತಿ ವಿವರ: ಸುಮಾರು 42,927 ಲೀಟರ್ ಮದ್ಯವನ್ನು ಆಂಧ್ರ/ತೆಲಂಗಾಣ ಗಡಿಯಲ್ಲಿ ಮತ್ತು 1.05 ಲಕ್ಷ ಲೀಟರ್ ಮದ್ಯವನ್ನು ಗೋವಾ ಗಡಿಯಲ್ಲಿ ಜಪ್ತಿ ಮಾಡಲಾಗಿದೆ. 934 ಆರೋಪಿಗಳನ್ನು ಬಂಧಿಸಲಾಗಿದೆ.
        ಸುಧಾರಣಾ ಕ್ರಮಗಳು: ಮದ್ಯ ತಯಾರಿಕಾ ವಲಯದಲ್ಲಿ ಪಾರದರ್ಶಕತೆ ತರಲು ‘ಡಿಜಿಟಲ್ ಫ್ಲೋ ಮೀಟರ್’ ಅಳವಡಿಕೆ ಮತ್ತು ತೆರಿಗೆ ಪದ್ಧತಿಯಲ್ಲಿ ಬದಲಾವಣೆ ತರಲಾಗುತ್ತಿದೆ.

        3. ನೈತಿಕ ಸಂದಿಗ್ಧತೆಗಳು (Ethical Dilemmas)
        ಈ ಪ್ರಕರಣದಲ್ಲಿ ಪ್ರಮುಖವಾಗಿ ಮೂರು ನೈತಿಕ ಸಂಘರ್ಷಗಳು ಕಂಡುಬರುತ್ತವೆ:
        1. .ಆದಾಯ vs ಸಾರ್ವಜನಿಕ ಕಲ್ಯಾಣ: ಸರ್ಕಾರದ ಬೊಕ್ಕಸ ತುಂಬಿಸಲು ಮದ್ಯ ಮಾರಾಟದ ಗುರಿ ಹೆಚ್ಚಿಸುವುದು ಸರಿ ಅಥವಾ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಮದ್ಯಪಾನವನ್ನು ನಿರುತ್ಸಾಹಗೊಳಿಸುವುದು ಸರಿ ಎಂಬ ಪ್ರಶ್ನೆ.
        2.ಗುರಿ ತಲುಪುವ ಒತ್ತಡ vs ಭ್ರಷ್ಟಾಚಾರ: ಅಧಿಕಾರಿಗಳಿಗೆ ಅತಿಯಾದ ಆದಾಯದ ಗುರಿ ನೀಡುವುದರಿಂದ, ಅವರು ಕೆಳಮಟ್ಟದ ಅಂಗಡಿಗಳ ಮೇಲೆ ಒತ್ತಡ ಹೇರಬಹುದು ಅಥವಾ ಅಕ್ರಮಗಳನ್ನು ಕಡೆಗಣಿಸುವ ಸಾಧ್ಯತೆ ಇರುತ್ತದೆ.
        3.ಕಾನೂನು ಜಾರಿ vs ಭೌಗೋಳಿಕ ಸವಾಲುಗಳು: ಗಡಿ ಭಾಗಗಳಲ್ಲಿ ಕಡಿಮೆ ಬೆಲೆಗೆ ಸಿಗುವ ಮದ್ಯದ ಆಕರ್ಷಣೆಯನ್ನು ತಡೆಗಟ್ಟುವಲ್ಲಿನ ವೈಫಲ್ಯ ಮತ್ತು ಅದರಿಂದ ಉಂಟಾಗುವ ಆರ್ಥಿಕ ನಷ್ಟ.

        4. ಒಳಗೊಂಡಿರುವ ನೀತಿಶಾಸ್ತ್ರದ ಮೌಲ್ಯಗಳು (Stakeholders & Values)
        ಸರ್ಕಾರ: ಆರ್ಥಿಕ ಸ್ಥಿರತೆ ಮತ್ತು ಜನರಿಗಾಗಿ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುವ ಜವಾಬ್ದಾರಿ.
        ಸಾರ್ವಜನಿಕರು: ಸಂವಿಧಾನದ 47ನೇ ವಿಧಿಯಡಿ (Article 47) ಆರೋಗ್ಯಕರ ಜೀವನ ನಡೆಸುವ ಹಕ್ಕು.
        ಅಬಕಾರಿ ಇಲಾಖೆ: ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ಕಾನೂನುಬದ್ಧ ಆಡಳಿತ.

        5. ಸಂಭವನೀಯ ಪರಿಹಾರಗಳು ಮತ್ತು ಕ್ರಮಗಳು
        ಪ್ರಬಂಧ ಅಥವಾ ಪರೀಕ್ಷೆಯ ದೃಷ್ಟಿಯಿಂದ ಈ ಕೆಳಗಿನ ಕ್ರಮಗಳನ್ನು ಸೂಚಿಸಬಹುದು:
        ವೈಜ್ಞಾನಿಕ ತೆರಿಗೆ ಪದ್ಧತಿ: ಆಲ್ಕೋಹಾಲ್ ಪ್ರಮಾಣಕ್ಕೆ ತಕ್ಕಂತೆ ತೆರಿಗೆ ವಿಧಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ ಕ್ರಮ (ಹೆಚ್ಚು ಕಿಕ್ ನೀಡುವ ಮದ್ಯಕ್ಕೆ ಹೆಚ್ಚು ತೆರಿಗೆ).
        ಗಡಿ ನಿಗಾ ಘಟಕಗಳ ಬಲವರ್ಧನೆ: ತಂತ್ರಜ್ಞಾನ ಮತ್ತು ಚೆಕ್‌ಪೋಸ್ಟ್‌ಗಳ ಮೂಲಕ ಅಕ್ರಮ ಸಾಗಾಟ ತಡೆಯುವುದು.
        ಜಾಗೃತಿ ಕಾರ್ಯಕ್ರಮಗಳು: ಕೇವಲ ಮದ್ಯ ಮಾರಾಟ ಮಾಡುವುದಲ್ಲದೆ, ಅಬಕಾರಿ ಆದಾಯದ ಒಂದು ಪಾಲನ್ನು ಮದ್ಯಪಾನ ಮುಕ್ತ ಸಮಾಜದ ಜಾಗೃತಿಗಾಗಿ ಬಳಸುವುದು.
        ಪಾರದರ್ಶಕತೆ: ಡಿಜಿಟಲ್ ವ್ಯವಸ್ಥೆಯ ಮೂಲಕ ಸೋರಿಕೆಯನ್ನು ತಡೆಗಟ್ಟುವುದು.

          Source: Prajavani

          ಕೆಎಎಸ್ ಪ್ರಚಲಿತ ವಿದ್ಯಮಾನಗಳು

          ಪೂರ್ವಭಾವಿ ಪರೀಕ್ಷೆ

          ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು

          ‘ಹೊರ್ಮುಜ್ ಮುಚ್ಚಿದರೆ ಏಷ್ಯಾ ದೇಶಗಳಿಗೇ ಹೆಚ್ಚು ಹೊಡೆತ’
          ಸಂದರ್ಭ: ‘ಒಂದುವೇಳೆ ಹೊರ್ಮುಜೆ ಜಲಸಂಧಿಯನ್ನು ಮುಚ್ಚಿದರೆ ಆಹಾರ ಪದಾರ್ಥಗಳು, ಜೀವನ ನಿರ್ವಹಣಾ ವೆಚ್ಚವು ಏರಿಕೆಯಾಗಲಿದೆ. ಜೊತೆಗೆ, ಇಂಧನ ಪೂರೈಕೆಗೆ ಸಂಬಂಧಿಸಿ ಏಷ್ಯಾದ ದೇಶಗಳೇ ಹೆಚ್ಚಿನ ಸಂಕಷ್ಟಕ್ಕೆ ಒಳಗಾಗುತ್ತವೆ’ ಎಂದು ವ್ಯಾಪಾರಮತ್ತು ಅಭಿವೃದ್ಧಿಗೆ ಸಂಬಂಧಿಸಿದ ವಿಶ್ವ ಸಂಸ್ಥೆಯ ಅಂಗಸಂಸ್ಥೆಯುಎನ್ಸಿಟಿಎಡಿ ಎಚ್ಚರಿಕೆ ನೀಡಿದೆ.

          • ಜಲಸಂಧಿ ಮುಚ್ಚುವುದರಿಂದ ಜಗತ್ತಿನ ವ್ಯಾಪಾರ ಮತ್ತು ಅಭಿವೃದ್ಧಿಯ ಮೇಲಾಗುವ ಪರಿಣಾಮಗಳ ಕುರಿತು ಯುಎನ್‌ಸಿಟಿಎಡಿ ವರದಿ ಬಿಡುಗಡೆ ಮಾಡಿದೆ.
          • ತೈಲಬೆಲೆ ಏರಿಕೆಯಾದರೆ, ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗುತ್ತದೆ. ಅಡುಗೆ ಅನಿಲ ಬೆಲೆ ಏರಿಕೆಯಾದರೆ, ರಸಗೊಬ್ಬರಗಳ ಬೆಲೆಯೂ ಏರಿಕೆಯಾಗುತ್ತದೆ’.
          • ಏಷ್ಯಾದ ದೇಶಗಳು ಮಾತ್ರವಲ್ಲ ಇಡೀ ಜಗತ್ತಿನ ಪೂರೈಕೆ ಸರಪಳಿ ಮೇಲೆಯೇ ತೀವ್ರ ಪರಿಣಾಮ ಉಂಟಾಗಲಿದೆ. ಹಡಗಿನಲ್ಲಿ ಬಳಸುವ ಇಂಧನ ಮತ್ತು ವಿಮೆ ಕಂತುಗಳು ಅಲ್ಲದೆ ಇಂಧನ, ರಸಗೊಬ್ಬರ ಮತ್ತು ಸಂಚಾರದ ವೆಚ್ಚ ಏರಿಕೆಯಾದರೆ, ಜನರ ಜೀವನ ನಿರ್ವಹಣಾ ವೆಚ್ಚ ಅಧಿಕವಾಗಲಿದೆ. ಇದರಿಂದ ಸಮಾಜದ ದುರ್ಬಲ ಜನರು ಹೆಚ್ಚು ಸಂಕಷ್ಟಕ್ಕೆ ಒಳಗಾಗುತ್ತಾರೆ.

          ಹೊರ್ಮುಜ್ ಜಲಸಂಧಿ: ಜಾಗತಿಕ ತೈಲ ಮಾರ್ಗದ ನಾಡಿಮಿಡಿತ

          ವಿಭಾಗ (Category)ವಿವರ (Details)
          ಸ್ಥಳ (Location)ಇರಾನ್ ಮತ್ತು ಒಮಾನ್ ದೇಶಗಳ ನಡುವಿನ ಆಯಕಟ್ಟಿನ ಜಲಸಂಧಿ.
          ಪ್ರಮುಖತೆ (Significance)ಜಗತ್ತಿನ 20% ಕಚ್ಚಾ ತೈಲ ಮತ್ತು LNG (ನೈಸರ್ಗಿಕ ಅನಿಲ) ಸಾಗಾಟ ಈ ಮಾರ್ಗದ ಮೂಲಕವೇ ನಡೆಯುತ್ತದೆ.
          ಅವಲಂಬಿತ ರಾಷ್ಟ್ರಗಳು (Dependent Nations)ಭಾರತ, ಚೀನಾ, ಜಪಾನ್, ದಕ್ಷಿಣ ಕೊರಿಯಾ, ಸಿಂಗಪೂರ್, ಇಂಡೋನೇಷಿಯಾ, ಥಾಯ್ಲ್ಯಾಂಡ್, ಫಿಲಿಪೈನ್ಸ್, ಪಾಕಿಸ್ತಾನ.
          ಗಡಿಹಂಚಿಕೊಂಡಿರುವ ರಾಷ್ಟ್ರಗಳು (Bordering Nations)ಇರಾನ್, ಒಮಾನ್ ಮತ್ತು ಯುಎಇ (UAE – ಅಲ್ಪ ಪ್ರಮಾಣದ ಗಡಿ).
          ಇತಿಹಾಸದ ಪ್ರಮುಖ ಘಟನೆಗಳು (Historical Events)1980–88: ಇರಾನ್–ಇರಾಕ್ ಯುದ್ಧ (ಟ್ಯಾಂಕರ್ ಸಮರ).
          2011: ಇರಾನ್‌ನಿಂದ ಜಲಸಂಧಿ ಮುಚ್ಚುವ ಬೆದರಿಕೆ.
          2019: ತೈಲ ಟ್ಯಾಂಕರ್‌ಗಳ ಮೇಲೆ ದಾಳಿ.
          2026: US–ಇಸ್ರೇಲ್–ಇರಾನ್ ನಡುವಿನ ತೀವ್ರ ಉದ್ವಿಗ್ನತೆ.
          2026ರ ವರದಿ (UNCTAD Report)“ಹೊರ್ಮುಜ್ ಮುಚ್ಚಲ್ಪಟ್ಟರೆ ಏಷ್ಯಾ ಖಂಡದ ದೇಶಗಳಿಗೆ ಆರ್ಥಿಕವಾಗಿ ಅತಿ ಹೆಚ್ಚು ಹೊಡೆತ ಬೀಳಲಿದೆ.”
          ಆರ್ಥಿಕ ಪರಿಣಾಮಗಳು (Economic Impacts)ತೈಲ ಬೆಲೆ ಏರಿಕೆ → ಆಹಾರ ಪದಾರ್ಥಗಳ ಬೆಲೆ ಏರಿಕೆ → ರಸಗೊಬ್ಬರ ವೆಚ್ಚ ಹೆಚ್ಚಳ → ಸಾಮಾನ್ಯ ಜನರ ಜೀವನ ನಿರ್ವಹಣಾ ವೆಚ್ಚದಲ್ಲಿ ಭಾರೀ ಏರಿಕೆ.
          ಪೂರೈಕೆ ಸರಪಳಿ (Supply Chain)ಹಡಗು ಇಂಧನ ದರ, ವಿಮೆ ವೆಚ್ಚ (Insurance) ಮತ್ತು ಒಟ್ಟಾರೆ ಸಾಗಾಟ ದರಗಳಲ್ಲಿ ಗಣನೀಯ ಏರಿಕೆ.

          ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು

          ಮುಖ್ಯ ಪರೀಕ್ಷೆ

          ಪತ್ರಿಕೆ-I: ಪ್ರಬಂಧಗಳು

          ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ

          ವಿಜ್ಞಾನ ಮತ್ತು ಯುದ್ಧದ ನಡುವಿನ ಸಂಬಂಧ: ಪೆನ್ಸಿಲಿನ್‌ನಿಂದ ಇಂಟರ್ನೆಟ್‌ವರೆಗೆ ಮತ್ತು ಪರಮಾಣು ಶಕ್ತಿಯಿಂದ ಬಾಹ್ಯಾಕಾಶ ಉಪಗ್ರಹಗಳವರೆಗೆ ಹಲವು ಆವಿಷ್ಕಾರಗಳು ಯುದ್ಧದ ಕೂಸುಗಳು. ಯುದ್ಧಕ್ಕಾಗಿ ವ್ಯಯಿಸುವ ಶ್ರಮ ಮತ್ತು ಹಣವನ್ನು ಮಾನವ ಕಲ್ಯಾಣಕ್ಕಾಗಿ ಮುಂಚಿತವಾಗಿಯೇ ಬಳಸಲು ಸಾಧ್ಯವೇ? ನಿಮ್ಮ ಅಭಿಪ್ರಾಯಗಳನ್ನು ಮಂಡಿಸಿ

          ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ

          “ಮತಪತ್ರ ಪುನರುಜ್ಜೀವನ: ತಾಂತ್ರಿಕ ಪ್ರಗತಿ ಮತ್ತು ಚುನಾವಣಾ ವಿಶ್ವಾಸಾರ್ಹತೆಯ ನಡುವೆ ಭಾರತೀಯ ಸ್ಥಳೀಯ ಆಡಳಿತದಲ್ಲಿ ಸಮತೋಲನ ಸಾಧಿಸುವುದು”

          ಪತ್ರಿಕೆ-II: ಸಾಮಾನ್ಯ ಅಧ್ಯಯನ-1

          ಪತ್ರಿಕೆ-III: ಸಾಮಾನ್ಯ ಅಧ್ಯಯನ-2

          ದಯಾಮರಣಕ್ಕೆ ಅನುಮತಿ
          ಸಂದರ್ಭ:
          ಹನ್ನೆರಡು ವರ್ಷದಿಂದಲೂ ಕೋಮಾದಲ್ಲಿರುವ 32 ವರ್ಷದ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.

          • ಗಾಜಿಯಾಬಾದ್‌ನ ಹರೀಶ್ ರಾಣಾ ‘ಸುಪ್ರೀಂ’ನಿಂದ ದಯಾಮರಣಕ್ಕೆ ಅವಕಾಶ ಪಡೆದವರು. ದಯಾಮರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ಮೊದಲ ತೀರ್ಪು ಇದಾಗಿದೆ. ದೀರ್ಘಕಾಲ ಚರ್ಚಿಸಲಾದ ಈ ಭಾವನಾತ್ಮಕ ವಿಷಯದ ಬಗ್ಗೆ ತೀರ್ಪುನೀಡಿದ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಹಾಗೂ ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠವು, ದಯಾಮರಣದ ಕುರಿತು ಸಮಗ್ರ ಕಾಯ್ದೆ ಯೊಂದನ್ನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
          • ಪಂಜಾಬ್ ವಿಶ್ವವಿದ್ಯಾಲಯದ ಬಿ.ಟೆಕ್ ವಿದ್ಯಾರ್ಥಿಯಾಗಿದ್ದ ಗಾಜಿಯಾಬಾದ್‌ನ ಹರೀಶ್ ರಾಣಾ ಅವರು 2013ರಲ್ಲಿ ತಾವು ವಾಸವಿದ್ದ ವಸತಿಗೃಹದ ನಾಲ್ಕನೇ ಮಹಡಿಯಿಂದ ಬಿದ್ದಿದ್ದರಿಂದ, ತಲೆಗೆ ಗಂಭೀರ ಗಾಯಗಳಾಗಿದ್ದವು. ಆಗಿನಿಂದಲೂ ಅವರು ಕೋಮಾದಲ್ಲಿದ್ದರು (ದೀರ್ಘಕಾಲದ ಅಸಹಜ ಪ್ರಜ್ಞಾಶೂನ್ಯ ಸ್ಥಿತಿ).
          • ಪೈಪ್ ಮೂಲಕ ನೀಡುತ್ತಿರುವ ಪೌಷ್ಟಿಕಾಂಶಯುಕ್ತ ಆಹಾರದಿಂದಲೇ ಹರೀಶ್ ಅವರ ಜೀವ ಉಳಿದಿದೆ ಎಂಬುದನ್ನು ನ್ಯಾಯಾಲಯವು ಪರಿಗಣಿಸಿತು. ಪ್ರಸ್ತುತ ಉಪಶಾಮಕ ಆರೈಕೆಯಲ್ಲಿರುವ ಅವರಿಗೆ ನೀಡಲಾಗುತ್ತಿರುವ ವೈದ್ಯಕೀಯ ಚಿಕಿತ್ಸೆಯನ್ನು ಹಿಂತೆಗೆದುಕೊಳ್ಳುವಂತೆ ನ್ಯಾಯಪೀಠವು ನವದೆಹಲಿಯ ಏಮ್ಸ್‌ಗೆ ನಿರ್ದೇಶಿಸಿತು ಜೀವರಕ್ಷಕ ವ್ಯವಸ್ಥೆಯ ಹಿಂಪಡೆಯುವಿಕೆಯನ್ನು ಮಾನವೀಯ ರೀತಿಯಲ್ಲಿ ಕೈಗೊಳ್ಳಬೇಕು. ಘನತೆಯನ್ನು ಕಾಪಾಡಿಕೊಳ್ಳಲು ಅನುಗುಣವಾದ ಯೋಜನೆಯೊಂದಿಗೆ ಚಿಕಿತ್ಸೆಯನ್ನು ಹಿಂಪಡೆಯ ಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದೂ ಪೀಠ ಹೇಳಿದೆ.
          • ಹರೀಶ್ ಅವರಿಗೆ ನೀಡುತ್ತಿರುವ ಚಿಕಿತ್ಸೆಯ ವಿವರಗಳ ಕುರಿತು ನವದೆಹಲಿಯ ಏಮ್ಸ್‌ ನ ತಜ್ಞ ವೈದ್ಯರನ್ನು ಒಳಗೊಂಡ ಎರಡನೇ ವೈದ್ಯಕೀಯ ಮಂಡಳಿಯು ಸಲ್ಲಿಸಿದ ವರದಿಯನ್ನು ಪರಿಶೀಲಿಸಿದ ನ್ಯಾಯಾಲಯವು, ‘ಇದು ‘ದುಃಖ’ದ ವರದಿ’ ಎಂದಿದೆ.
          • ಪ್ರಾಥಮಿಕ ವೈದ್ಯಕೀಯ ಮಂಡಳಿಯು ರೋಗಿಯ ಆರೋಗ್ಯ ಸ್ಥಿತಿಯನ್ನು ಕೂಲಂಕಷವಾಗಿ ಪರೀಕ್ಷಿಸಿದ ನಂತರ, ಅವರ ಚೇತರಿಕೆಯ ಅವಕಾಶ ಅತ್ಯಲ್ಪ ಎಂದಿತ್ತು ಎರಡೂ ವರದಿಗಳ ಪ್ರಕಾರ ‘ಯುವಕನ ಆರೋಗ್ಯ ಕರುಣಾಜನಕ ಸ್ಥಿತಿಯಲ್ಲಿದೆ’ ಎಂಬುದನ್ನು ಡಿ. 11ರಂದು ನ್ಯಾಯಾಲಯ ಗಮನಿಸಿದೆ.
          • ಚಿಕಿತ್ಸೆಯ ಮುಂದುವರಿಕೆಯು ಯಾವುದೇ ಚೇತರಿಕೆಯ ಸಾಧ್ಯತೆ ಇಲ್ಲದೆ, ಜೈವಿಕ ಅಸ್ತಿತ್ವವನ್ನಷ್ಟೇ ದೀರ್ಘಕಾಲದವರೆಗೆ ಮುಂದುವರಿಸಿದೆ ಎಂದು ಎರಡೂ ವೈದ್ಯಕೀಯ ಮಂಡಳಿಗಳು ಸರ್ವಾನುಮತದಿಂದ ತೀರ್ಮಾನಿಸಿವೆ.
          • ಪ್ರಾಥಮಿಕ ಹಾಗೂ ದ್ವಿತೀಯ ಮಂಡಳಿಗಳು ಜೀವರಕ್ಷಕ ವ್ಯವಸ್ಥೆಯನ್ನು ಹಿಂತೆಗೆನ್ನು ಕೊಳ್ಳುವುದನ್ನು ಪ್ರಮಾಣೀಕರಿಸಿದಾಗ, ನ್ಯಾಯಾಂಗದ ಮಧ್ಯಸ್ಥಿಕೆಯ ಅಗತ್ಯವಿಲ್ಲ ಎಂದು ಹೇಳಿರುವ ಪೀಠವು, ತಮ್ಮ ಮಗನ ಕುರಿತು ಅಪಾರ ಪ್ರೀತಿ ಮತ್ತು ಕಾಳಜಿ ತೋರಿದ ಹರೀಶ್ ಹೆತ್ತವರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ.

          ಭಾರತದಲ್ಲಿ ದಯಾಮರಣದ ಕಾನೂನು ವಿಕಾಸ
          ಭಾರತದಲ್ಲಿ “ಘನತೆಯಿಂದ ಸಾಯುವ ಹಕ್ಕು” ಮೂಲಭೂತ ಹಕ್ಕಿನ ಭಾಗವೇ ಎಂಬ ಚರ್ಚೆ ದಶಕಗಳಿಂದ ನಡೆಯುತ್ತಾ ಬಂದಿದೆ. ಈ ಕೆಳಗಿನ ಕೋಷ್ಟಕವು ಅದರ ಮೈಲಿಗಲ್ಲುಗಳನ್ನು ವಿವರಿಸುತ್ತದೆ:

          ವರ್ಷಪ್ರಕರಣ / ಘಟನೆತೀರ್ಪು / ನಿರ್ಧಾರಮಹತ್ವ
          1990ರ ದಶಕ“Right to Die with Dignity” ಚರ್ಚೆಸ್ಪಷ್ಟ ಕಾನೂನುಬದ್ಧ ಅವಕಾಶ ಇರಲಿಲ್ಲದಯಾಮರಣದ ಕುರಿತು ಸಾರ್ವಜನಿಕ ಮತ್ತು ಕಾನೂನು ಚರ್ಚೆಗೆ ನಾಂದಿ ಹಾಡಿತು.
          2011ಅರುಣಾ ಶಾನಬಾಗ್ v. ಯೂನಿಯನ್ ಆಫ್ ಇಂಡಿಯಾPassive Euthanasia (ನಿಷ್ಕ್ರಿಯ ದಯಾಮರಣ) ಗೆ ಸಿದ್ಧಾಂತಾತ್ಮಕ ಅನುಮತಿಭಾರತದಲ್ಲಿ ದಯಾಮರಣದ ಕುರಿತು ನ್ಯಾಯಾಂಗವು ನೀಡಿದ ಮೊದಲ ಮಹತ್ವದ ತೀರ್ಪು.
          2018ಕಾಮನ್ ಕಾಸ್ v. ಯೂನಿಯನ್ ಆಫ್ ಇಂಡಿಯಾನಿಷ್ಕ್ರಿಯ ದಯಾಮರಣಕ್ಕೆ ಸಂವಿಧಾನಾತ್ಮಕ ಮಾನ್ಯತೆ ಮತ್ತು Living Will ಮಾನ್ಯರೋಗಿಯು ಪ್ರಜ್ಞಾವಸ್ಥೆಯಲ್ಲಿರುವಾಗಲೇ ತನ್ನ ಜೀವನಾಂತ್ಯದ ನಿರ್ಧಾರವನ್ನು ದಾಖಲಿಸುವ ವ್ಯವಸ್ಥೆ ಜಾರಿಗೆ ಬಂದಿತು.
          2023ಸುಪ್ರೀಂ ಕೋರ್ಟ್ ತಿದ್ದುಪಡಿವೈದ್ಯಕೀಯ ಮಂಡಳಿಗಳ ಅನುಮತಿ ಪ್ರಕ್ರಿಯೆಯ ಸರಳೀಕರಣಈ ಹಿಂದಿನ ಸಂಕೀರ್ಣ ನಿಯಮಗಳನ್ನು ಸಡಿಲಗೊಳಿಸಿ, ಪ್ರಾಯೋಗಿಕವಾಗಿ ಅನುಷ್ಠಾನ ಸುಲಭಗೊಳಿಸಲಾಯಿತು.
          2026ಹರೀಶ್ ರಾಣಾ v. ಯೂನಿಯನ್ ಆಫ್ ಇಂಡಿಯಾಜೀವ ಉಳಿಸುವ ವ್ಯವಸ್ಥೆ ಹಿಂತೆಗೆದುಕೊಳ್ಳಲು ಅನುಮತಿಭಾರತದಲ್ಲಿ ದಯಾಮರಣದ ಮೊದಲ ನೈಜ ಅನುಷ್ಠಾನ; ಕೇಂದ್ರಕ್ಕೆ ಸಮಗ್ರ ಕಾಯ್ದೆ ರೂಪಿಸಲು ಸುಪ್ರೀಂ ಸೂಚನೆ.

          ಪತ್ರಿಕೆ-IV: ಸಾಮಾನ್ಯ ಅಧ್ಯಯನ-3

          ಪತ್ರಿಕೆ-V: ಸಾಮಾನ್ಯ ಅಧ್ಯಯನ-4

          ನೈತಿಕ ಪ್ರಕರಣ ಅಧ್ಯಯನ: ಅಕ್ರಮ ಗಣಿಗಾರಿಕೆ ಮತ್ತು ವ್ಯವಸ್ಥೆಯ ವೈಫಲ್ಯ
          ಹಿನ್ನೆಲೆ (Background)
          ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿ ಭಾಗದಲ್ಲಿರುವ ಓಬಳಾಪುರಂ ಗಣಿ ಕಂಪನಿ (OMC) ವ್ಯಾಪ್ತಿಯಲ್ಲಿ ಬೃಹತ್ ಮಟ್ಟದ ಅಕ್ರಮ ಗಣಿಗಾರಿಕೆ ನಡೆದಿದೆ ಎಂಬ ಆರೋಪವಿದೆ. ಈ ಅಕ್ರಮದಿಂದಾಗಿ ಸರ್ಕಾರಿ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಮಾತ್ರವಲ್ಲದೆ, ಅರಣ್ಯ ಪ್ರದೇಶದ ಅತಿಕ್ರಮಣ ಮತ್ತು ಅಂತರ-ರಾಜ್ಯ ಗಡಿ ಗುರುತುಗಳ ನಾಶವೂ ಸಂಭವಿಸಿದೆ. ಸುಪ್ರೀಂ ಕೋರ್ಟ್ ಈಗ ನಿವೃತ್ತ ನ್ಯಾಯಮೂರ್ತಿ ಸುಧಾಂಶು ಧುಲಿಯಾ ನೇತೃತ್ವದ ಸಮಿತಿಗೆ ಈ ನಷ್ಟದ ಕುರಿತು ವರದಿ ನೀಡಲು ಆದೇಶಿಸಿದೆ.

          ಪ್ರಮುಖ ನೈತಿಕ ಬಿಕ್ಕಟ್ಟುಗಳು (Ethical Dilemmas)
          ಆರ್ಥಿಕ ಲಾಭ vs ಪರಿಸರ ಸಂರಕ್ಷಣೆ: ಕೈಗಾರಿಕಾ ಅಭಿವೃದ್ಧಿ ಮತ್ತು ಲಾಭದ ಹೆಸರಿನಲ್ಲಿ ಮೀಸಲು ಅರಣ್ಯ ಪ್ರದೇಶವನ್ನು ಅತಿಕ್ರಮಿಸಿರುವುದು.

          ವೈಯಕ್ತಿಕ ಹಿತಾಸಕ್ತಿ vs ಸಾರ್ವಜನಿಕ ಸೇವೆ: ಅಧಿಕಾರದಲ್ಲಿರುವ ವ್ಯಕ್ತಿಗಳು (ಮಾಜಿ ಸಚಿವರು) ತಮ್ಮ ಪ್ರಭಾವ ಬಳಸಿ ನೈಸರ್ಗಿಕ ಸಂಪನ್ಮೂಲಗಳನ್ನು ದುರುಪಯೋಗಪಡಿಸಿಕೊಂಡಿರುವುದು.

          ಸಾಂಸ್ಥಿಕ ವಿಳಂಬ vs ನ್ಯಾಯದಾನ: 2007ರಲ್ಲಿ ಕೇಳಿಬಂದ ಆರೋಪಕ್ಕೆ 2026ರಲ್ಲೂ ತನಿಖೆ ನಡೆಯುತ್ತಿರುವುದು (Justice delayed is justice denied).

          ಸತ್ಯದ ಮರೆಮಾಚುವಿಕೆ: ಅಂತರ-ರಾಜ್ಯ ಗಡಿ ಗುರುತುಗಳನ್ನು ನಾಶಪಡಿಸುವ ಮೂಲಕ ಪುರಾವೆಗಳನ್ನು ಇಲ್ಲದಂತೆ ಮಾಡಿರುವುದು.

          ಪಾಲುದಾರರು (Stakeholders)
          ಸರ್ಕಾರ ಮತ್ತು ಸಾರ್ವಜನಿಕರು: ಬೊಕ್ಕಸಕ್ಕೆ ಆಗಿರುವ ಆರ್ಥಿಕ ನಷ್ಟದ ವಾರಸುದಾರರು.

          ಗಣಿ ಕಂಪನಿ ಮತ್ತು ಮಾಲೀಕರು: ಲಾಭದ ಉದ್ದೇಶ ಹೊಂದಿರುವ ಮತ್ತು ಅಕ್ರಮದ ಆರೋಪ ಎದುರಿಸುತ್ತಿರುವವರು.

          ನ್ಯಾಯಾಂಗ (ಸುಪ್ರೀಂ ಕೋರ್ಟ್): ನ್ಯಾಯ ಒದಗಿಸುವ ಮತ್ತು ನಷ್ಟವನ್ನು ಅಂದಾಜಿಸುವ ಜವಾಬ್ದಾರಿ ಹೊಂದಿರುವ ಸಂಸ್ಥೆ.

          ಪರಿಸರ ಮತ್ತು ಅರಣ್ಯ ಇಲಾಖೆ: ನಾಶವಾಗಿರುವ ನೈಸರ್ಗಿಕ ಸಂಪನ್ಮೂಲಗಳ ರಕ್ಷಕರು.

          ನೀವು ಈ ಸಮಿತಿಯ ಸದಸ್ಯರಾಗಿದ್ದರೆ ನಿಮ್ಮ ಕ್ರಮಗಳೇನು? (Options for Action)
          ಆಯ್ಕೆ 1: ಕೇವಲ ತಾಂತ್ರಿಕ ವರದಿ ನೀಡುವುದು
          ದಾಖಲೆಗಳನ್ನು ಪರಿಶೀಲಿಸಿ ಕೇವಲ ಅಂದಾಜು ನಷ್ಟದ ಮೊತ್ತವನ್ನು ನೀಡುವುದು. ಇದರಿಂದ ತನಿಖೆ ಬೇಗ ಮುಗಿಯಬಹುದು, ಆದರೆ ಭವಿಷ್ಯದ ಅಕ್ರಮಗಳಿಗೆ ಕಡಿವಾಣ ಬೀಳುವುದಿಲ್ಲ.

          ಆಯ್ಕೆ 2: ಸಮಗ್ರ ಮತ್ತು ಶಿಫಾರಸು ಸಹಿತ ವರದಿ (Recommended)
          ನಷ್ಟದ ಅಂದಾಜಿನ ಜೊತೆಗೆ, ಭವಿಷ್ಯದಲ್ಲಿ ಗಡಿ ಗುರುತುಗಳ ನಾಶ ತಡೆಯಲು ಡಿಜಿಟಲ್ ಮ್ಯಾಪಿಂಗ್ (GIS) ಅಳವಡಿಕೆ, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಮತ್ತು ಪರಿಸರ ಮರುಸ್ಥಾಪನೆಗೆ (Reforestation) ಗಣಿ ಕಂಪನಿಯಿಂದಲೇ ದಂಡ ವಸೂಲಿ ಮಾಡಲು ಶಿಫಾರಸು ಮಾಡುವುದು.

          ಆಯ್ಕೆ 3: “ಬಳಕೆದಾರರೇ ಪಾವತಿಸಲಿ” ತತ್ವ ಮತ್ತು ಪರಿಸರ ಹಾನಿ ಪರಿಹಾರ (Polluter Pays Principle & Ecological Restitution)
          ಕೇವಲ ಸರ್ಕಾರಕ್ಕೆ ಆದ ಆರ್ಥಿಕ ನಷ್ಟವನ್ನಷ್ಟೇ ಅಲ್ಲದೆ, ಪ್ರಕೃತಿಗೆ ಆದ ಹಾನಿಯನ್ನು ಸರಿಪಡಿಸಲು ಗಣಿ ಕಂಪನಿಯ ಮೇಲೆ ಹೊಣೆಗಾರಿಕೆ ಹೊರಿಸುವುದು.

          ಕ್ರಮ: ಅರಣ್ಯ ನಾಶದಿಂದಾಗಿ ಜೀವವೈವಿಧ್ಯಕ್ಕೆ ಆದ ನಷ್ಟವನ್ನು ವೈಜ್ಞಾನಿಕವಾಗಿ ಲೆಕ್ಕ ಹಾಕುವುದು. ಆ ಕಂಪನಿಯ ಲಾಭದ ಒಂದು ದೊಡ್ಡ ಪಾಲನ್ನು ಅದೇ ಪ್ರದೇಶದ ಮರು-ಅರಣ್ಯೀಕರಣ (Afforestation) ಮತ್ತು ಸ್ಥಳೀಯ ಸಮುದಾಯದ ಆರೋಗ್ಯ ಸುಧಾರಣೆಗೆ ಬಳಸುವಂತೆ ಕಡ್ಡಾಯಗೊಳಿಸುವುದು.

          ನೈತಿಕ ತರ್ಕ: ಪ್ರಕೃತಿಯನ್ನು ಮರಳಿ ಮೊದಲಿನ ಸ್ಥಿತಿಗೆ ತರುವುದು ಕೇವಲ ಆರ್ಥಿಕ ದಂಡಕ್ಕಿಂತ ಮಿಗಿಲಾದ ಜವಾಬ್ದಾರಿ.

          ಆಯ್ಕೆ 4: ಸಾಂಸ್ಥಿಕ ಹೊಣೆಗಾರಿಕೆ ಮತ್ತು ಅಧಿಕಾರಿಗಳ ವಿರುದ್ಧ ತನಿಖೆ (Administrative Accountability)
          ಅಕ್ರಮ ಗಣಿಗಾರಿಕೆಯು ಕೇವಲ ಕಂಪನಿಯಿಂದ ಮಾತ್ರ ಸಾಧ್ಯವಿಲ್ಲ; ಇದಕ್ಕೆ ಇಲಾಖೆಗಳ ಮೌನ ಸಮ್ಮತಿ ಅಥವಾ ಭ್ರಷ್ಟಾಚಾರವೂ ಕಾರಣವಾಗಿರುತ್ತದೆ.

          ಕ್ರಮ: ಅಕ್ರಮ ನಡೆಯುವಾಗ ಆಯಾ ಭಾಗದಲ್ಲಿ ಕರ್ತವ್ಯದಲ್ಲಿದ್ದ ಗಣಿ, ಭೂವಿಜ್ಞಾನ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ಪಟ್ಟಿಯನ್ನು ಸಿದ್ಧಪಡಿಸುವುದು. ಅವರ ವೈಫಲ್ಯ ಅಥವಾ ಶಾಮೀಲಾಗಿರುವ ಬಗ್ಗೆ ಪ್ರತ್ಯೇಕ ತನಿಖೆಗೆ ಶಿಫಾರಸು ಮಾಡುವುದು.

          ನೈತಿಕ ತರ್ಕ: ಕೇವಲ ಕಂಪನಿಯನ್ನು ದಂಡಿಸಿದರೆ ಸಾಲದು, ವ್ಯವಸ್ಥೆಯ ಒಳಗಿರುವ ‘ಕಪ್ಪು ಕುರಿ’ಗಳನ್ನು ಪತ್ತೆಹಚ್ಚದಿದ್ದರೆ ಭ್ರಷ್ಟಾಚಾರ ಮುಂದುವರಿಯುತ್ತದೆ.

          ಆಯ್ಕೆ 5: ತಂತ್ರಜ್ಞಾನ ಆಧಾರಿತ ನಿಗಾ ವ್ಯವಸ್ಥೆ (Technology-Driven Surveillance)
          ಭವಿಷ್ಯದಲ್ಲಿ ಅಂತರ-ರಾಜ್ಯ ಗಡಿ ಗುರುತುಗಳನ್ನು ಯಾರೂ ನಾಶಪಡಿಸಲು ಸಾಧ್ಯವಾಗದಂತೆ ತಾಂತ್ರಿಕ ಸುರಕ್ಷಾ ಕವಚ ನಿರ್ಮಿಸುವುದು.

          ಕ್ರಮ: ಡ್ರೋನ್ ಸರ್ವೆ (Drone Survey) ಮತ್ತು ಉಪಗ್ರಹ ಆಧಾರಿತ ಚಿತ್ರಣ (Satellite Imagery) ಬಳಸಿ ಪ್ರತಿ ತಿಂಗಳು ಗಣಿಗಾರಿಕೆ ಪ್ರದೇಶದ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡುವುದು. ಗಡಿ ಭಾಗಗಳಲ್ಲಿ ‘ಜಿಯೋ-ಫೆನ್ಸಿಂಗ್’ (Geo-fencing) ಅಳವಡಿಸಲು ಶಿಫಾರಸು ಮಾಡುವುದು.

          ನೈತಿಕ ತರ್ಕ: ತಪ್ಪು ನಡೆದ ಮೇಲೆ ಶಿಕ್ಷಿಸುವುದಕ್ಕಿಂತ, ತಪ್ಪು ನಡೆಯದಂತೆ ತಡೆಯುವ ತಾಂತ್ರಿಕ ವ್ಯವಸ್ಥೆ ರೂಪಿಸುವುದು ಉತ್ತಮ ಆಡಳಿತ.

          ಆಯ್ಕೆ 6: ಸಾರ್ವಜನಿಕ ಸಹಭಾಗಿತ್ವ ಮತ್ತು ‘ವಿಸ್ತಲ್ ಬ್ಲೋಯರ್’ ರಕ್ಷಣೆ (Public Oversight & Whistleblower Protection)
          ಸ್ಥಳೀಯ ಜನರಿಗೆ ಅಕ್ರಮಗಳ ಬಗ್ಗೆ ಮಾಹಿತಿ ನೀಡಲು ವೇದಿಕೆ ಕಲ್ಪಿಸುವುದು.

          ಕ್ರಮ: ಗಣಿಗಾರಿಕೆ ಪ್ರದೇಶದ ಸುತ್ತಮುತ್ತಲ ಗ್ರಾಮಸ್ಥರು ಅಕ್ರಮ ಕಂಡ ಕೂಡಲೇ ಅನಾಮಧೇಯವಾಗಿ ದೂರು ನೀಡಲು ಪ್ರತ್ಯೇಕ ಪೋರ್ಟಲ್ ಅಥವಾ ಸಹಾಯವಾಣಿ ಸ್ಥಾಪಿಸುವುದು. ಮಾಹಿತಿ ನೀಡುವವರಿಗೆ ಸೂಕ್ತ ರಕ್ಷಣೆ ಒದಗಿಸುವುದು.

          ನೈತಿಕ ತರ್ಕ: ಸ್ಥಳೀಯರು ನೈಸರ್ಗಿಕ ಸಂಪನ್ಮೂಲಗಳ ನಿಜವಾದ ಕಾವಲುಗಾರರು. ಅವರ ಪಾಲ್ಗೊಳ್ಳುವಿಕೆ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ.

          Sources: Prajavani

          ಕೆಎಎಸ್ ಪ್ರಚಲಿತ ವಿದ್ಯಮಾನಗಳು

          ಪೂರ್ವಭಾವಿ ಪರೀಕ್ಷೆ

          ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು

          ರಾಮನ್ ಪರಿಣಾಮ (Raman Effect) – ರಾಷ್ಟ್ರೀಯ ವಿಜ್ಞಾನ ದಿನದ ಹಿನ್ನೆಲೆ
          ಸಂದರ್ಭ:
          ಭಾರತದಲ್ಲಿ ಪ್ರತಿ ವರ್ಷ ಫೆಬ್ರವರಿ 28 ಅನ್ನು ರಾಷ್ಟ್ರೀಯ ವಿಜ್ಞಾನ ದಿನವಾಗಿ ಆಚರಿಸಲಾಗುತ್ತದೆ. ಈ ದಿನವು ಮಹಾನ್ ಭಾರತೀಯ ವಿಜ್ಞಾನಿ ಸಿ.ವಿ. ರಾಮನ್ ಅವರು 1928ರಲ್ಲಿ ಕಂಡುಹಿಡಿದ ರಾಮನ್ ಪರಿಣಾಮ (Raman Effect) ಘೋಷಣೆಯ ಸ್ಮರಣಾರ್ಥವಾಗಿದೆ.

          ರಾಮನ್ ಪರಿಣಾಮ ಎಂದರೇನು?

          ರಾಮನ್‌ರ ಪ್ರಯೋಗದ ಪ್ರಕಾರ, ಬೆಳಕು ಯಾವುದಾದರೂ ಒಂದು ವಸ್ತುವಿನ ಮೇಲೆ ಬಿದ್ದಾಗ, ಅದು ಚದುರುತ್ತದೆ. ಈ ರೀತಿ ಚದುರಿದ ಬೆಳಕಿನ ಬಣ್ಣ (ತರಂಗಾಂತರ) ಸ್ವಲ್ಪ ಬದಲಾಗುತ್ತದೆ. ಇದನ್ನೇ ‘ರಾಮನ್ ಪರಿಣಾಮ’ ಎನ್ನಲಾಗುತ್ತದೆ. ಇದು ಅಣುಗಳ ‘ಬೆರಳಚ್ಚು’ ಇದ್ದಂತೆ. ಇಂದು ಈ ತಂತ್ರಜ್ಞಾನವನ್ನು ಬಳಸಿ ಕ್ಯಾನ್ಸರ್ ಪತ್ತೆ ಯಿಂದ ಹಿಡಿದು, ಮಂಗಳ ಗ್ರಹದ ಮೇಲಿರುವ ಖನಿಜಗಳ ವರೆಗೆ ಎಲ್ಲವನ್ನೂ ಪತ್ತೆಹಚ್ಚಲಾಗುತ್ತಿದೆ!

          ಐತಿಹಾಸಿಕ ಮಹತ್ವ
          1928ರಲ್ಲಿ ರಾಮನ್ ಪರಿಣಾಮವನ್ನು ಕಂಡುಹಿಡಿದರು
          1930ರಲ್ಲಿ ಭೌತಶಾಸ್ತ್ರದ ನೋಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ವಿಜ್ಞಾನಿ
          ಭಾರತೀಯ ವಿಜ್ಞಾನ ಕ್ಷೇತ್ರದ ಜಾಗತಿಕ ಮಾನ್ಯತೆ ಹೆಚ್ಚಿಸಿದ ಸಾಧನೆ

          ಪ್ರಸ್ತುತ ಮಹತ್ವ (Current Relevance)
          1. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಬಳಕೆ
          ರಸಾಯನಿಕ ಸಂಯೋಜನೆ ವಿಶ್ಲೇಷಣೆ
          ವೈದ್ಯಕೀಯ ಕ್ಷೇತ್ರದಲ್ಲಿ ಕ್ಯಾನ್ಸರ್ ಪತ್ತೆ
          ಫಾರ್ಮಾಸ್ಯೂಟಿಕಲ್ ಪರೀಕ್ಷೆಗಳು
          ಪರಿಸರ ಮಾಲಿನ್ಯ ಪತ್ತೆ
          ನ್ಯಾನೋ ತಂತ್ರಜ್ಞಾನ ಅಧ್ಯಯನ

          2. “ಮೇಕ್ ಇನ್ ಇಂಡಿಯಾ” ಮತ್ತು ಸಂಶೋಧನಾ ಪ್ರೋತ್ಸಾಹ
          ರಾಮನ್ ಪರಿಣಾಮ ಆಧಾರಿತ ಸ್ಪೆಕ್ಟ್ರೋಸ್ಕೋಪಿ ಉಪಕರಣಗಳ ಸ್ವದೇಶೀ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡುತ್ತಿದೆ.

          3. ರಾಷ್ಟ್ರೀಯ ವಿಜ್ಞಾನ ದಿನ – 2026
          “ವಿಜ್ಞಾನದಲ್ಲಿ ನವೀನತೆ ಮತ್ತು ಆತ್ಮನಿರ್ಭರ ಭಾರತ” ಎಂಬ ಥೀಮ್‌.


          ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು

          ಸ್ವಾವಲಂಬನೆಗೆ ಲಕ್ಷ್ಮಿ ಆಸರೆ
          ಸಂದರ್ಭ: ‘ಗೃಹಲಕ್ಷ್ಮಿ’ ಯೋಜನೆಯ ಫಲಾನುಭವಿಗಳ ಸಹಕಾರ ಸಂಘವನ್ನು ಸ್ಥಾಪಿಸಲು ಮುಂದಾಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಫಲಾನುಭವಿಗಳಿಂದ ₹1,250 ಸದಸ್ಯತ್ವ ಶುಲ್ಕ ಮತ್ತು ತಿಂಗಳಿಗೆ ₹200ರಂತೆ ಠೇವಣಿ ಸಂಗ್ರಹಿಸಲು ತೀರ್ಮಾನಿಸಿದೆ.

          • ‘ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ’ ಸ್ಥಾಪನೆ ಮಾಡಲು ಸರ್ಕಾರ ನಿರ್ಧರಿಸಿದೆ. ಇದಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
          • ‘ಗೃಹಲಕ್ಷ್ಮಿ’ ಗ್ಯಾರಂಟಿ ಯೋಜನೆಯಡಿ ಈವರೆಗೆ 1.24 ಕೋಟಿ ಫಲಾನುಭವಿಗಳಿಗೆ ತಿಂಗಳಿಗೆ ತಲಾ ₹2,000ರಂತೆ, ಈವರೆಗೆ 26 ಕಂತುಗಳನ್ನು ಪಾವತಿಸಿದೆ.
          • ಪ್ರತಿ ತಿಂಗಳು ನೀಡುವ ₹2,000ದಲ್ಲಿ ಸಹಕಾರ ಸಂಘ ಬಲ ಗೊಳಿಸಲು ಠೇವಣಿ ರೂಪದಲ್ಲಿ ₹200 ಅನ್ನು ಕಡಿತಗೊಳಿಸಲಾಗುತ್ತದೆ.
          • ಸಹಕಾರ ಸಂಘ ಸ್ಥಾಪನೆ ಪ್ರಕ್ರಿಯೆ ಆರಂಭವಾದ ಬಳಿಕ ಆರು ತಿಂಗಳವರೆಗೆ ಮಹಿಳೆಯರ ಖಾತೆಗೆ ₹1,800 ಮಾತ್ರ ಜಮೆಯಾಗಲಿದೆ. ಉಳಿದ ಮೊತ್ತವು ಸದಸ್ಯರ ಖಾತೆಯಲ್ಲಿಯೇ ಇರಲಿದೆ.
          • ಫಲಾನುಭವಿಗಳನ್ನು ಸಂಘಟಿಸಿ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ತರಬೇತಿ ನೀಡುವುದಕ್ಕಾಗಿ ಈ ಸಹಕಾರ ಸಂಘ ಹುಟ್ಟು ಹಾಕಲಾಗುತ್ತಿದೆ.ಗೃಹಲಕ್ಷ್ಮಿ ಯೋಜನೆಯ ಎಲ್ಲ ಫಲಾನುಭವಿಗಳನ್ನು ಸದಸ್ಯರನ್ನಾಗಿಸುವ ಗುರಿ ಹೊಂದಲಾಗಿದೆ.
          • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ: ಸಂಘದ ಮೂಲಕ ಈ ಮಹಿಳೆಯರಿಗೆ ವಿವಿಧ ಉದ್ದೇಶಗಳಿಗೆ ಸಾಲ-ಸೌಲಭ್ಯ ಒದಗಿಸುವ ಮೂಲಕ ಮಹಿಳೆಯರನ್ನು ಉದ್ಯಮಿಗಳಾಗಿಸುವ ಮತ್ತು ಅವರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶ ಹೊಂದಲಾಗಿದೆ.
          • 30 ಸಾವಿರದಿಂದ 13 ಲಕ್ಷದವರೆಗೆ ಸಾಲ: ಸದಸ್ಯರಿಗೆ ಕಡಿಮೆ ಬಡ್ಡಿ ದರದಲ್ಲಿ ₹30 ಸಾವಿರದಿಂದ ₹3 ಲಕ್ಷದವರೆಗೆ ವೈಯಕ್ತಿಕ ಸಾಲ ಒದಗಿಸಲಾಗುವುದು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸಮನಾಗಿ ವಾರ್ಷಿಕ ಶೇ 7ರಿಂದ ಶೇ 9 ಅಥವಾ ಅದಕ್ಕಿಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ಉದ್ದೇಶಿಸಲಾಗಿದೆ. ಸಾಲದ ಹಣವನ್ನು ಮಹಿಳೆಯರು ಸಣ್ಣಪುಟ್ಟ ವ್ಯಾಪಾರ, ಗುಡಿ ಕೈಗಾರಿಕೆ, ಕೃಷಿ, ಪಶುಸಂಗೋಪನೆ ಮಕ್ಕಳ ಶಿಕ್ಷಣ, ವಾಹನ ಖರೀದಿಗೆ ಬಳಸಬಹುದು. ಇದರಿಂದ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಹಾಯಕವಾಗುತ್ತದೆ.
          • ಸದಸ್ಯತ್ವ ಪಡೆಯಲು ಒಂದು ಬಾರಿಗೆ ₹1,000 ಷೇರು ಹಣ ನೀಡಬೇಕು. ಇದು ₹1,250ರ ಸದಸ್ಯತ್ವದ ಶುಲ್ಕದಲ್ಲಿ ಸೇರಿದೆ ಅಲ್ಲದೇ, ಪ್ರತಿ ತಿಂಗಳು ₹200 ರಂತೆ ಕನಿಷ್ಠ ಆರು ತಿಂಗಳವರೆಗೆ ಉಳಿತಾಯ ರೂಪದಲ್ಲಿ ಜಮೆ ಮಾಡಬೇಕು. ಈ ರೀತಿ ಉಳಿತಾಯ ಮಾಡಿದವರು ಸಾಲ ಪಡೆಯಲು ಅರ್ಹರಾಗುತ್ತಾರೆ, ಸಾಲ ಪಡೆಯುವುದಕ್ಕೆ ಜಾಮೀನು (ಶೂರಿಟಿ) ಅಗತ್ಯವಿರುವುದಿಲ್ಲ. ಸಂಪೂರ್ಣ ನಗದುರಹಿತ ಡಿಜಿಟಲ್ ಪಾವತಿಯ ಮೂಲಕ ವಹಿವಾಟಿಗೆ ಆದ್ಯತೆ ನೀಡಲಾಗಿದೆ.


          ಮುಖ್ಯ ಪರೀಕ್ಷೆ

          ಪತ್ರಿಕೆ-I: ಪ್ರಬಂಧಗಳು

          ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ

          “2047ರ ವಿಕಸಿತ ಭಾರತ ದೃಷ್ಟಿಕೋನದಲ್ಲಿ ಮಹಿಳಾ ವಿಜ್ಞಾನಿಗಳ ಪಾತ್ರ: ಸಂಶೋಧನೆ, ನವೀನತೆ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಅವರ ಪಾತ್ರವನ್ನು ವಿಮರ್ಶಾತ್ಮಕವಾಗಿ ಚರ್ಚಿಸಿ.”

          ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ

          “ತ್ರಿಭಾಷಾ ಪದವಿಗಳ ಅಂತ್ಯಕಾಲ: ಹೊಸ ಶಿಕ್ಷಣ ನೀತಿ ಹಿನ್ನೆಲೆಯಲ್ಲಿನ ಭಾಷಾ ನೀತಿ, ಜಾಗತೀಕರಣ ಮತ್ತು ಉನ್ನತ ಶಿಕ್ಷಣದ ಭವಿಷ್ಯ – ವಿಮರ್ಶಾತ್ಮಕವಾಗಿ ಚರ್ಚಿಸಿ.”

          ಪತ್ರಿಕೆ-II: ಸಾಮಾನ್ಯ ಅಧ್ಯಯನ-1

          ವಿತ್ತೀಯ ಕೊರತೆ ₹9.8 ಲಕ್ಷ ಕೋಟಿ
          ಸಂದರ್ಭ: ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್ನಿಂದ ಜನವರಿವರೆಗಿನ ಅವಧಿಯಲ್ಲಿ ಕೇಂದ್ರ ಸರ್ಕಾರದ ವರಮಾನ ಮತ್ತು ವೆಚ್ಚದ ನಡುವಿನ ಅಂತರವಾದ ವಿತ್ತೀಯ ಕೊರತೆಯು ಇಡೀ ವರ್ಷದ ಗುರಿಯ ಶೇ 63ರಷ್ಟಾಗಿದೆ.

          • ಹಣಕಾಸಿನ ಮೌಲ್ಯದ ಲೆಕ್ಕದಲ್ಲಿ ಇದು ₹9.8 ಲಕ್ಷ ಕೋಟಿಯಾಗಿದೆ ಎಂದು ಬಿಡುಗಡೆ ಆಗಿರುವ ಲೆಕ್ಕಪತ್ರಗಳ ಮಹಾನಿಯಂತ್ರಕರ (ಸಿಜಿಎ) ವರದಿ ತಿಳಿಸಿದೆ. 2024-25ರ ಅರ್ಥಿಕ ವರ್ಷದ ಇದೇ ಅವಧಿಯಲ್ಲಿ ವಿತ್ತೀಯ ಕೊರತೆಯು ಶೇ 74.5ರಷ್ಟಿತ್ತು, 2025-26ರ ಆರ್ಥಿಕ ವರ್ಷದಲ್ಲಿ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ 4.4ಕ್ಕೆ (ಹಣಕಾಸಿನ ಮೌಲ್ಯದ ಲೆಕ್ಕದಲ್ಲಿ ₹15.58 ಲಕ್ಷ ಕೋಟಿ) ತಗ್ಗಿಸಲು ಸರ್ಕಾರ ಬಜೆಟ್‌ನಲ್ಲಿ ಗುರಿ ನಿಗದಿ ಮಾಡಿದೆ.
          • ಏಪ್ರಿಲ್‌ನಿಂದ ಜನವರಿವರೆಗೆ ಸರ್ಕಾರವು ₹27.08 ಲಕ್ಷ ಕೋಟಿ ವರಮಾನ ಸ್ವೀಕರಿಸಿದೆ.
          • ಕೇಂದ್ರ ಸರ್ಕಾರ ಸ್ವೀಕರಿಸಿದ ಈ ಮೊತ್ತದ ಪೈಕಿ ₹20.94 ಲಕ್ಷ ಕೋಟಿ ತೆರಿಗೆ ವರಮಾನದಿಂದ ಸಂಗ್ರಹಿಸಿದೆ. ₹5.57 ಲಕ್ಷ ಕೋಟಿ ತೆರಿಗೆಯೇತರ ವರಮಾನ ಮತ್ತು ಇತರೆ ಮೂಲಗಳಿಂದ ₹57.129 ಕೋಟಿ ಸಂಗ್ರಹಿಸಿದೆ.
          • ಕೇಂದ್ರ ಸರ್ಕಾರವು, ರಾಜ್ಯ ಸರ್ಕಾರಗಳಿಗೆ ₹11.39 ಲಕ್ಷ ಕೋಟಿಯನ್ನು ತೆರಿಗೆ ಪಾಲಾಗಿ ವರ್ಗಾಯಿಸಿದೆ. ಇದು ಕಳೆದ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದರೆ ₹65,588 ಕೋಟಿಯಷ್ಟು ಅಧಿಕವಾಗಿದೆ.
          • ಇದೇ ಅವಧಿಯಲ್ಲಿ ಸರ್ಕಾರದ ಒಟ್ಟು ವೆಚ್ಚವು ₹36.9 ಲಕ್ಷ ಕೋಟಿಯಾಗಿದೆ. ಈ ಪೈಕಿ ಬಡ್ಡಿಗೆ ₹9.88 ಲಕ್ಷ ಕೋಟಿ ಪಾವತಿಸಲಾಗಿದ್ದು, ₹3.54 ಲಕ್ಷ ಕೋಟಿಯನ್ನು ಪ್ರಮುಖ ಸಬ್ಸಿಡಿಗಳಿಗೆ ನೀಡಲಾಗಿದೆ.
          • ಎಫ್‌ಡಿಐ ಶೇ 18ರಷ್ಟು ಹೆಚ್ಚಳ: ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ದೇಶದಲ್ಲಿನ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಪ್ರಮಾಣ ಶೇ 18ರಷ್ಟು ಹೆಚ್ಚಳವಾಗಿದ್ದು, ₹4.35 ಲಕ್ಷ ಕೋಟಿಯಷ್ಟಾಗಿದೆ.
          • ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ವಿದೇಶಿ ನೇರ ಹೂಡಿಕೆ ₹3.70 ಲಕ್ಷ ಕೋಟಿಯಷ್ಟಾಗಿತ್ತು.

          ಜಿಡಿಪಿ: ಶೇ 7.8ರಷ್ಟು ದಾಖಲು
          ಸಂದರ್ಭ: ‘ಪ್ರಸಕ್ತ ಆರ್ಥಿಕ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಶೇ 7.8ರಷ್ಟು ದಾಖಲಾಗಿದೆ.

          • ಭಾರತದ ಆರ್ಥಿಕತೆ ಬೆಳವಣಿಗೆಯ ವೇಗ ಹೆಚ್ಚಾಗಿರುವುದು. ಗ್ರಾಹಕರ ಖರೀದಿ ಭರಾಟೆಯು ಇದಕ್ಕೆ ಕಾರಣವಾಗಿವೆ’ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು ಬಿಡುಗಡೆಗೊಳಿಸಿದ ದತ್ತಾಂಶದಲ್ಲಿ ತಿಳಿಸಿದೆ.
          • ಶೇ 7.6ರಷ್ಟು ನಿರೀಕ್ಷೆ: ಪ್ರಸಕ್ತ ಪೂರ್ಣ ಆರ್ಥಿಕ ವರ್ಷದಲ್ಲಿ ಜಿಡಿಪಿ ಬೆಳವಣಿಗೆಯ ಅಂದಾಜನ್ನು ಶೇ 7.6ಕ್ಕೆ ಏರಿಕೆ ಮಾಡಲಾಗಿದೆ.
          • ಜಾಗತಿಕ ವ್ಯಾಪಾರದ ಅಡೆತಡೆಯ ನಡುವೆಯೂ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ದೇಶದ ಆರ್ಥಿಕತೆ ಚೇತರಿಸಿಕೊಂಡ ಕಾರಣ ಜಿಡಿಪಿ ಲೆಕ್ಕಾಚಾರದ ಪರಿಷ್ಕರಣೆ ನಿರ್ಧರಿಸಲಾಗಿದೆ.
          • ಹಳೆಯ ದತ್ತಾಂಶ ಸರಣಿಯ ಪ್ರಕಾರ,ಶೇ 7.1ರಷ್ಟು ಜಿಡಿಪಿ ಏರಿಕೆಯನ್ನು ನಿರೀಕ್ಷಿ ಸಲಾಗಿತ್ತು. 2024-25ರ ವಿತ್ತೀಯ ದತ್ತಾಂಶದ ಪ್ರಕಾರ ಏರಿಕೆಯು ಶೇ7.1ರಷ್ಟಿತ್ತು.
          • ಲೆಕ್ಕಾಚಾರದ ಪರಿಷ್ಕರಣೆಯ ಪ್ರಕಾರ, 2022-23ಕ್ಕೆ ಪರಿಷ್ಕೃಸಲಾಗಿದ್ದು, ಮೂಲ ವರ್ಷವನ್ನು ಬದಲಾಯಿಸಿ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿರುವ ಸುಧಾರಿತ ಅಂಶಗಳ ಪರಿಗಣನೆಯನ್ನು ಒಳಗೊಂಡಿದೆ.
          • ಆದಾಗ್ಯೂ, ಅಕ್ಟೋಬರ್ ಡಿಸೆಂಬರ್‌ನಲ್ಲಿ ಜಿಡಿಪಿ ಬೆಳವಣಿಗೆಯು ಮಧ್ಯಮ ಇಳಿಕೆಗೆ ಕಾರಣವಾಯಿತು. ಇದು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 8.4ರಷ್ಟಿತ್ತು. ಅದು ಈಗ ಶೇ 7.8ಕ್ಕೆ ಇಳಿಕೆಯಾಗಿದೆ.

          ಪತ್ರಿಕೆ-III: ಸಾಮಾನ್ಯ ಅಧ್ಯಯನ-2

          ಪತ್ರಿಕೆ-IV: ಸಾಮಾನ್ಯ ಅಧ್ಯಯನ-3

          ‘ಡಾಲ್ಫಿನ್ ಹಂಟ‌ರ್’ ಅಂಜದೀಪ್ ಯುದ್ಧನೌಕೆ ನೌಕಾಪಡೆಗೆ ಸೇರ್ಪಡೆ
          ಸಂದರ್ಭ: ಶತ್ರು ಜಲಾಂತರ್ಗಾಮಿ ನೌಕೆ ಗಳ ಪತ್ತೆ, ಟ್ರ್ಯಾಕಿಂಗ್ ಮತ್ತು ನಾಶಪಡಿ ಸುವಲ್ಲಿ ಮಹತ್ವದ ಪಾತ್ರ ವಹಿಸಲಿರುವ, ‘ಡಾಲ್ಟಿನ್ ಹಂಟರ್’ ಎಂದೇ ಪ್ರಸಿದ್ಧ ವಾದ ‘ಐಎನ್‌ಎಸ್ ಅಂಜದೀಪ್ ಯುದ್ಧನೌಕೆ ಭಾರತೀಯ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆ ಗೊಂಡಿದೆ. ಕರ್ನಾಟಕದ ಕಾರವಾರ ಕರಾವಳಿಯಲ್ಲಿರುವ ‘ಅಂಜದೀಪ್’ ದ್ವೀಪದ ಹೆಸರನ್ನು ಇದಕ್ಕಿಟ್ಟಿರುವುದು ವಿಶೇಷ.

          • ‘ಆ್ಯಂಟಿ ಸಬ್‌ಮರೈನ್ ವಾರ್‌ಫೇರ್ ಶಾಲೋ ವಾಟರ್ ಕ್ರಾಫ್ಟ್’ (ಎಎಸ್‌ಡಬ್ಲ್ಯು- ಎಸ್‌ಡಬ್ಲ್ಯುಸಿ) ಯೋಜನೆಯಡಿ ನಿರ್ಮಿಸಲಾಗುತ್ತಿರುವ, ಜಲಾಂತರ್ಗಾಮಿ ವಿರೋಧಿ ಯುದ್ಧನೌಕೆ ಯೋಜನೆಯಡಿ ಯಲ್ಲಿ ನಿರ್ಮಿಸಲಾಗುತ್ತಿರುವ 8 ಸಮರ ಹಡಗುಗಳ ಪೈಕಿ ಇದು 3ನೆಯದು.

          ಅಂಜದೀಪ್ ವಿಶೇಷತೆ: ಕೋಲ್ಕತಾದ ದ ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಮತ್ತು ಸ್ಥಳೀಯವಾಗಿ ಎಂಜಿನಿಯರ್‌ಗಳು ನಿರ್ಮಿಸಿದ ಈ ನೌಕೆಯನ್ನು ‘ಡಾಲ್ವಿನ್ ಹಂಟರ್’ ರೀತಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಕರಾವಳಿ ಪ್ರದೇಶಗಳಲ್ಲಿ ಶತ್ರು ಜಲಾಂತರ್ಗಾಮಿ ನೌಕೆಗಳ ಪತ್ತೆ, ಟ್ರ್ಯಾಕಿಂಗ್ ಮತ್ತು ತಟಸ್ಥಗೊಳಿಸುವಿಕೆಯಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ. 77 ಮೀ.

          ಉದ್ದದ ಈ ಹಡಗು ಅತಿ ವೇಗದ ವಾಟರ್-ಜೆಟ್ ಪ್ರೊಪಲ್ಸನ್ ವ್ಯವಸ್ಥೆಯನ್ನು ಹೊಂದಿದ್ದು, ತ್ವರಿತ ಪ್ರತಿಕ್ರಿಯೆ ಮತ್ತು ನಿರಂತರ ಕಾರ್ಯಾಚರಣೆಗಾಗಿ 25 ನಾಟ್‌ಗಳ ಗರಿಷ್ಠ ವೇಗವನ್ನು ಸಾಧಿಸಲು ಅನುವು ಮಾಡಿಕೊಡುತ್ತದೆ.ಕರಾವಳಿ ಕಣ್ಣಾವಲು, ಕಡಿಮೆ ತೀವ್ರತೆಯ ಸಮುದ್ರಯಾನವನ್ನು ಕೈಗೊಳ್ಳಲು ಸಹ ಸಜ್ಜುಗೊಂಡಿದೆ.

          ಕಾರವಾರ ಕರಾವಳಿ ದ್ವೀಪದ ಹೆಸರು

          ಈ ಕರ್ನಾಟಕದ ಕಾರವಾರದಿಂದ 10 ಕಿ.ಮೀ. ದೂರದಲ್ಲಿರುವ ‘ಅಂಜ ದೀಪ’ ಎಂಬ ದ್ವೀಪದ ಹೆಸರನ್ನು ಈ ನೌಕೆಗೆ ಇಟ್ಟಿರುವುದು ವಿಶೇಷ. ದ್ವೀಪದಲ್ಲಿ ನೌಕಾದಳ ಶಸ್ತ್ರಾಸ್ತ್ರ ತರಬೇತಿ ನಡೆಸುತ್ತಿತ್ತು. ನೌಕಾ ದಳಕ್ಕೆ ಬಹುದೊಡ್ಡ ಕೊಡುಗೆ ನೀಡಿ ರುವ ಕಾರಣಕ್ಕೆ ನೌಕೆಗೆ ದ್ವೀಪದ ಹೆಸರಿಟ್ಟು ಗೌರವಿಸಲಾಗಿದೆ.

          ಡಾಲ್ಟಿನ್ ಹಂಟರ್: ಕರಾವಳಿ ಪ್ರದೇಶಗಳಲ್ಲಿ ಶತ್ರು ಜಲಾಂತರ್ಗಾಮಿಗಳನ್ನು ಪತ್ತೆಹಚ್ಚಿ, ಬೆನ್ನಟ್ಟಿ ನಾಶಪಡಿಸುವ ವಿಶೇಷ ಸಾಮರ್ಥ್ಯ ಹೊಂದಿರುವ ಈ ನೌಕೆಯನ್ನು ‘ಡಾಲ್ವಿನ್ ಹಂಟರ್’ ಎಂದೇ ಕರೆಯಲಾಗುತ್ತದೆ. ಇದರಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಅತ್ಯಾಧುನಿಕ ಜಲಾಂತರ್ಗಾಮಿ ನಿಗ್ರಹ ಅಸ್ತ್ರಗಳು, ಹಲ್‌ಮೌಂಟೆಡ್ ‘ಅಭಯ್’ ಸೋನಾ‌ರ್, ಹಗುರವಾದ ಟಾರ್ಪಿಡೊಗಳು ಮತ್ತು ಎಎಸ್‌ಡಬ್ಲ್ಯು ರಾಕೆಟ್ ಗಳನ್ನು ಅಳವಡಿಸಲಾಗಿದೆ. ಕೋಲ್ಕತದ ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್‌ ಆ್ಯಂಡ್ ಇಂಜಿನಿಯರ್ಸ್ ನಿರ್ಮಿಸಿರುವ 77 ಮೀಟರ್ ಉದ್ದದ ಈ ನೌಕೆಯು, ವಾಟರ್‌ಜೆಟ್ ಪ್ರೊಪಲ್ಸನ್ ಸಿಸ್ಟಮ್ ಹೊಂದಿದ್ದು, ಗರಿಷ್ಠ 25 ನಾಟ್‌ಗಳ ವೇಗದಲ್ಲಿ ಚಲಿಸಬಲ್ಲದು. ಯುದ್ಧದ ಜತೆಗೆ ಕರಾವಳಿ ಕಣ್ಣಾವಲು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೂ ಇದು ಸಜ್ಜಾಗಿದೆ.

          ಐತಿಹಾಸಿಕ: 2025ರಲ್ಲಿ 12 ಯುದ್ಧನೌಕೆಗಳು ಮತ್ತು ಒಂದು ಜಲಾಂತರ್ಗಾಮಿಯನ್ನು ನೌಕಾಪಡೆಗೆ ಸೇರಿಸಲಾಗಿತ್ತು.

          2026ರಲ್ಲಿ ಐಎನ್‌ಎಸ್ ಅಂಜದೀಪ್ ಹೊರತಾಗಿ ಇನ್ನೂ 15 ನೌಕೆಗಳನ್ನು ಸೇರ್ಪಡೆಗೊಳಿಸುವ ಗುರಿ ಹೊಂದಲಾಗಿದೆ.

          ಇದು ನಮ್ಮ ಇತಿಹಾಸದಲ್ಲೇ ಅತಿ ವೇಗದ ಸೇರ್ಪಡೆ ಪ್ರಕ್ರಿಯೆ ಎಂದು ಅಡ್ಮಿರಲ್ ದಿನೇಶ್‌ ತ್ರಿಪಾಠಿ ಹೇಳಿದ್ದಾರೆ.

          ಕರ್ನಾಟಕ ಹಿನ್ನೆಲೆ

          ಕರ್ನಾಟಕದ ಕಾರವಾರದ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ರುವ ಅಂಜುದೀವ’ ದ್ವೀಪದ ಹೆಸರಿನ ಹಿನ್ನೆಲೆಯಲ್ಲಿ ಈ ನೌಕೆಗೆ ನಾಮಕರಣ ಮಾಡಲಾಗಿದೆ.

          1961ರಲ್ಲಿ ಗೋವಾ ವಿಮೋಚನೆಗಾಗಿ ನಡೆದ ‘ಆಪರೇಷನ್‌ ಚಟ್ಟಿ’ ಕಾರ್ಯಾಚರಣೆಯಲ್ಲಿ ಈ ದ್ವೀಪವು ನಿರ್ಣಾಯಕ ಪಾತ್ರ ವಹಿಸಿತ್ತು. ಇದು 1972 ರಿಂದ 2003ರವರೆಗೆ ಸೇವೆ ಸಲ್ಲಿಸಿದ ಹಿಂದಿನ ಪೆಟ್ಯಾ ಕ್ಲಾಸ್‌ ನೌಕೆಯ ಯಶಸ್ವಿ ಉತ್ತರಾಧಿಕಾರಿಯಾಗಿದೆ.

          ಪತ್ರಿಕೆ-V: ಸಾಮಾನ್ಯ ಅಧ್ಯಯನ-4

          ನೈತಿಕ ಪ್ರಕರಣ ಅಧ್ಯಯನ: ₹5.24 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ – ಕಾನೂನು ಜಾರಿ, ಸಾರ್ವಜನಿಕ ಹಿತ ಮತ್ತು ನೈತಿಕ ಸವಾಲುಗಳು
          ಹಿನ್ನೆಲೆ
          :
          ನಗರದಲ್ಲಿ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಸುಮಾರು ₹5.24 ಕೋಟಿ ಮೌಲ್ಯದ ಮಾದಕ ದ್ರವ್ಯಗಳನ್ನು (ಡ್ರಗ್ಸ್) ಜಪ್ತಿ ಮಾಡಲಾಗಿದೆ. ಈ ಪ್ರಕರಣದಲ್ಲಿ ಹಲವು ಆರೋಪಿಗಳನ್ನು ಬಂಧಿಸಲಾಗಿದ್ದು, ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಾದಕ ವಸ್ತುಗಳ ಜಾಲವನ್ನು ಬಯಲುಗೊಳಿಸಲಾಗಿದೆ.

          ಪೊಲೀಸ್ ಇಲಾಖೆ ಈ ಕಾರ್ಯಾಚರಣೆಯನ್ನು ಕಾನೂನು ಪ್ರಕಾರ ಯಶಸ್ವಿಯಾಗಿ ನಡೆಸಿದರೂ, ಕೆಲವು ಪ್ರಶ್ನೆಗಳು ಉದ್ಭವಿಸಿವೆ:
          a) ಆರೋಪಿಗಳ ಹಕ್ಕುಗಳು ಸಮರ್ಪಕವಾಗಿ ಕಾಪಾಡಲ್ಪಟ್ಟಿವೆಯೇ?
          b) ಬಂಧನ ಮತ್ತು ಜಪ್ತಿ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ಇತ್ತೇ?
          c) ಯುವಜನತೆಯ ಮೇಲೆ ಪರಿಣಾಮ ಬೀರುತ್ತಿರುವ ಮಾದಕ ವಸ್ತುಗಳ ನಿಯಂತ್ರಣದಲ್ಲಿ ದೀರ್ಘಕಾಲೀನ ಕ್ರಮಗಳಿವೆಯೇ?

          ನೀವು ನಗರದ ಪೊಲೀಸ್ ಆಯುಕ್ತರಾಗಿದ್ದು, ಈ ಪ್ರಕರಣದ ನಿರ್ವಹಣೆಯಲ್ಲಿ ನೈತಿಕ ಮತ್ತು ಕಾನೂನುಬದ್ಧ ಸಮತೋಲನ ಸಾಧಿಸುವ ಜವಾಬ್ದಾರಿಯನ್ನು ಹೊಂದಿದ್ದೀರಿ.
          ಪ್ರಮುಖ ನೈತಿಕ ಪ್ರಶ್ನೆಗಳು

          1..ಸಾರ್ವಜನಿಕ ಸುರಕ್ಷತೆ vs ವೈಯಕ್ತಿಕ ಹಕ್ಕುಗಳು
          2.ಕಠಿಣ ಕಾನೂನು ಜಾರಿ vs ಮಾನವ ಹಕ್ಕುಗಳ ಗೌರವ
          3.ತ್ವರಿತ ಕ್ರಮ vs ನ್ಯಾಯಸಮ್ಮತ ತನಿಖೆ
          4.ಮಾಧ್ಯಮ ಪ್ರಚಾರ vs ತನಿಖೆಯ ಪಾರದರ್ಶಕತೆ
          5.ಅಪರಾಧ ನಿಯಂತ್ರಣ vs ಸಾಮಾಜಿಕ ಪುನರ್ವಸತಿ

          ಪಾಲುದಾರರು
          ಬಂಧಿತ ಆರೋಪಿಗಳು
          ಅವರ ಕುಟುಂಬಗಳು
          ನಗರ ಯುವಜನತೆ
          ಪೊಲೀಸ್ ಇಲಾಖೆ
          ನ್ಯಾಯಾಂಗ ವ್ಯವಸ್ಥೆ
          ಸಾರ್ವಜನಿಕರು
          ಮಾಧ್ಯಮ

          ನಿಮ್ಮ ಮುಂದೆ ಇರುವ ಆಯ್ಕೆಗಳು
          ಆಯ್ಕೆ 1:

          ಕಠಿಣ ಕಾನೂನು ಕ್ರಮ, ವೇಗದ ತನಿಖೆ ಮತ್ತು ಆರೋಪಿಗಳ ವಿರುದ್ಧ ಕಟ್ಟುನಿಟ್ಟಾದ ಕ್ರಮ.

          ಆಯ್ಕೆ 2:
          ತನಿಖೆಯಲ್ಲಿ ಪಾರದರ್ಶಕತೆ ಕಾಪಾಡಿ, ಆರೋಪಿಗಳ ಹಕ್ಕುಗಳನ್ನು ಗೌರವಿಸಿ, ನ್ಯಾಯಾಂಗ ಪ್ರಕ್ರಿಯೆಯನ್ನು ಅನುಸರಿಸುವುದು.

          ಆಯ್ಕೆ 3:
          ಮಾದಕ ವಸ್ತು ನಿಯಂತ್ರಣದ ಜೊತೆಗೆ ಜಾಗೃತಿ ಅಭಿಯಾನ ಮತ್ತು ಪುನರ್ವಸತಿ ಕಾರ್ಯಕ್ರಮಗಳನ್ನು ಆರಂಭಿಸುವುದು.

          Sources: Prajavani, Vijayavani, Vartha bharathi, Samyukta Karnataka etc.

          ಕೆಎಎಸ್ ಪ್ರಚಲಿತ ವಿದ್ಯಮಾನಗಳು

          ಪೂರ್ವಭಾವಿ ಪರೀಕ್ಷೆ

          ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು

          10 ಕೋಟಿ ದಾಟಿದ ಮೋದಿ ಇನ್ಸ್ಟಾಗ್ರಾಮ್ ಫಾಲೋವರ್ಸ್
          ಸಂದರ್ಭ: ಪ್ರಧಾನಿ ನರೇಂದ್ರ ಮೋದಿ ಅವರ ಇನ್ಸ್ಟಾಗ್ರಾಮ್ ಫಾಲೋವರ್ಸ್ಗಳ ಸಂಖ್ಯೆ 10 ಕೋಟಿ ದಾಟಿದೆ. ಈ ಮೂಲಕ ಅವರು ಇಷ್ಟು ದೊಡ್ಡ ಸಂಖ್ಯೆಯ ಫಾಲೋವರ್ಸ್ಗಳನ್ನು ಹೊಂದಿರುವ ವಿಶ್ವದ ಮೊದಲ ನಾಯಕ ಮತ್ತು ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

          • 2014ರಲ್ಲಿ ಮೋದಿ ಅವರು ಇನ್‌ಸ್ಟಾಗ್ರಾಮ್ ಖಾತೆ ಆರಂಭಿಸಿದ್ದರು. ಜಾಗತಿಕ ನಾಯಕರಿಗೆ ಹೋಲಿಸಿದರೆ ಕಳೆದ 10 ವರ್ಷಗಳಲ್ಲಿ ಮೋದಿ ಅವರ ಖಾತೆಯು ಅತಿ ಹೆಚ್ಚು ಬಳಕೆಯಾದ ಡಿಜಿಟಲ್ ವೇದಿಕೆಯಾಗಿದೆ. ವಿಶ್ವದ ಐವರು ಪ್ರಭಾವಿ ನಾಯಕರ ಫಾಲೋವರ್ಸ್‌ಗಿಂತಲೂ ಮೋದಿ ಅವರ ಫಾಲೋವರ್ಸ್ ಹೆಚ್ಚಿದ್ದಾರೆ.
          • ಎರಡನೇ ಸ್ಥಾನದಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಾಮಾಜಿಕ ಮಾಧ್ಯಮ ವೇದಿಕೆಗಿಂತಲೂ (4.32 ಕೋಟಿ ಫಾಲೋವರ್ಸ್) ಮೋದಿ ಅವರ ಇನ್‌ಸ್ಟಾಗ್ರಾಮ್ ಫಾಲೋವರ್ಸ್‌ಗಳ ಸಂಖ್ಯೆ ಎರಡುಪಟ್ಟು.
          • ಮಕರ ಇಂಡೋನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂತೋ (1.50 ಕೋಟಿ), ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೋ ಲೂಲಾ ಡಾ ಸಿಲ್ವಾ (1.44 ಕೋಟಿ), ಟರ್ಕಿಯ ಅಧ್ಯಕ್ಷ ರಜಬ್ ತಯ್ಯಬ್ ಇರ್ದುಗನ್ (1.16 ಕೋಟಿ) ಮತ್ತು ಅರ್ಜೆಂಟಿನಾ ಅಧ್ಯಕ್ಷ ಜೀವಿಯರ್ ಮಾಯಿಲಿ ಅವರು 64 ಲಕ್ಷ ಫಾಲೋವ ರ್ಸ್‌ಗಳನ್ನು ಹೊಂದಿದ್ದಾರೆ.
          • ಭಾರತದಲ್ಲಿ ಮೋದಿ ಅವರ ನಂತರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಅವರು ಸುಮಾರು 1.61 ಕೋಟಿ ಫಾಲೋವರ್ಸ್ ಹೊಂದಿದ್ದಾರೆ. ಆನಂತರದ ಸ್ಥಾನದಲ್ಲಿರುವ ರಾಹುಲ್ ಗಾಂಧಿ ಅವರಿಗೆ ಅಂದಾಜು 1.20 ಕೋಟಿ ಪಾಲೋವರ್ಸ್‌ಗಳಿದ್ದಾರೆ.

          ಡಿಜಿಟಲ್ ಕರೆನ್ಸಿ ಮೂಲಕ ಆಹಾರ ಸಬ್ಸಿಡಿ: ಪುದುಚೇರಿಯಲ್ಲಿ ಚಾಲನೆ

          • ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಆಧಾರಿತ ಆಹಾರ ಸಬ್ಸಿಡಿ ವಿತರಣಾ ಯೋಜನೆಗೆ ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ನೀಡಿದರು. ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಆಹಾರ ಸಬ್ಸಿಡಿ ವಿತರಣೆಯಲ್ಲಿ ಈ ಯೋಜನೆ ಪಾರದರ್ಶಕವಾಗಿದೆ. ಇದು ಡಿಜಿಟಲ್ ರೂಪಾಂತರದ ಮುಂದಿನ ಹಂತವಾಗಿದೆ.
          • ಸರ್ಕಾರ ನೀಡುವ ಆಹಾರ ಮತ್ತು ಸೌಲಭ್ಯಗಳು ಯಾವುದೇ ಸೋರಿಕೆ ಅಥವಾ ಭ್ರಷ್ಟಾಚಾರವಿಲ್ಲದೆ ನೇರವಾಗಿ ಅರ್ಹ ಫಲಾನುಭವಿಗಳನ್ನು ತಲುಪಬೇಕು ಎಂಬುದು ಪ್ರಮುಖ ಆಶಯವಾಗಿದೆ.

          ಯೋಜನೆಯ ಪ್ರಮುಖ ಅಂಶಗಳು

          • ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಅನ್ನ ಯೋಜನೆಯ ಫಲಾನುಭವಿಗಳಿಗೆ ನೇರವಾಗಿ ಸುರಕ್ಷಿತ ಡಿಜಿಟಲ್ ನಗದು ಒದಗಿಸುವ ಮೂಲಕ ಡಿಬಿಟಿ ವ್ಯವಸ್ಥೆ ಮೇಲ್ದರ್ಜೆಗೆ
          • ಆರ್‌ಬಿಐ ಹೊರತಂದಿರುವ ಡಿಜಿಟಲ್ ರೂಪಾಯಿಯನ್ನು ಡಿಬಿಟಿ ವ್ಯವಸ್ಥೆಯೊಂದಿಗೆ ಸಂಯೋಜಿಸಿ, ಸಬ್ಸಿಡಿ ಹಣ ಯಾವುದೇ ಅಡೆತಡೆಯಿಲ್ಲದೆ ಸುಗಮವಾಗಿ ಜನರನ್ನು ತಲುಪಲಿದೆ.
          • ಜನರ ಪೌಷ್ಟಿಕಾಂಶದ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಆದ್ಯತೆ ನೀಡಿದ್ದು, ಫಲಾನುಭವಿಗಳಿಗೆ ಸಿರಿಧಾನ್ಯಗಳನ್ನು ಪೂರೈಸಲಾಗುತ್ತಿದೆ.

          ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು

          ‘ಆಶಾಕಿರಣ’ ಯೋಜನೆಯಡಿ ರಾಜ್ಯದಲ್ಲಿ 1.40 ಕೋಟಿ ಜನರಿಗೆ ನೇತ್ರ ತಪಾಸಣೆ
          ಸಂದರ್ಭ: ರಾಜ್ಯದಲ್ಲಿ ‘ಆಶಾಕಿರಣ’ ಯೋಜನೆಯಡಿ 1.40 ಕೋಟಿ ಮಂದಿಗೆ ಕಣ್ಣಿನ ತಪಾಸಣೆ ನಡೆಸಲಾಗಿದ್ದು, 24.50 ಲಕ್ಷ ಜನರಲ್ಲಿ ನೇತ್ರ ಸಮಸ್ಯೆ ದೃಢಪಟ್ಟಿದೆ.

          • 2022ರಲ್ಲಿ ಪ್ರಾರಂಭ: ಡಿಜಿಟಲ್ ಸಾಧನಗಳ ಅತಿಯಾದ ಬಳಕೆ, ವಾಯು ಮಾಲಿನ್ಯ ಸೇರಿ ವಿವಿಧ ಕಾರಣಗಳಿಂದ ಚಿಕ್ಕ ವಯಸ್ಸಿನಲ್ಲಿಯೇ ದೃಷ್ಟಿದೋಷ ಸಮಸ್ಯೆಗೆ ಒಳಪಡುವವರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಳವಾಗುತ್ತಿದೆ. ಚಿಕಿತ್ಸೆ ವಿಳಂಬವಾದಲ್ಲಿ ಸಮಸ್ಯೆ ಗಂಭೀರ ಸ್ವರೂಪ ಪಡೆದು, ದೃಷ್ಟಿ ನಷ್ಟವಾಗುವ ಸಾಧ್ಯತೆಯಿರುತ್ತದೆ. ಅದ್ದರಿಂದ ಆರಂಭಿಕ ಹಂತದಲ್ಲಿಯೇ ನೇತ್ರ ಸಮಸ್ಯೆ ಪತ್ತೆ ಮಾಡಿ, ಚಿಕಿತ್ಸೆ ಒದಗಿಸುವ ಉದ್ದೇಶದಿಂದ ರಾಷ್ಟ್ರೀಯ ಅಂಧತ್ವ ಮತ್ತು ದೃಷ್ಟಿ ಮಾಂದ್ಯತೆ ನಿಯಂತ್ರಣ ಕಾರ್ಯಕ್ರಮದಡಿ ಈ ಯೋಜನೆಯನ್ನು 2022ರಲ್ಲಿ ಪ್ರಾರಂಭಿಸಲಾಗಿತ್ತು.
          • ಮೊದಲೆರಡು ಹಂತದಲ್ಲಿ ಆಯ್ದ ಜಿಲ್ಲೆಗಳಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ, ನೇತ್ರ ತಪಾಸಣೆ ನಡೆಸಿ ಸಮಸ್ಯೆ ಪತ್ತೆ ಮಾಡಿದ್ದರು. ಈಗ ರಾಜ್ಯದಾದ್ಯಂತ ಶಾಕಿರಣ ದೃಷ್ಟಿ ಕೇಂದ್ರ’ಗಳಲ್ಲಿಯೂ ತಪಾಸಣೆ ನಡೆಸಲಾಗುತ್ತಿದೆ.
          • ಮೊದಲ ಹಂತದಲ್ಲಿ ಚಿಕ್ಕಬಳ್ಳಾಪುರ, ಕಲಬುರಗಿ, ಹಾವೇರಿ ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಯೋಜನೆ ಜಾರಿಗೆ ತರಲಾಗಿತ್ತು.
          • ಎರಡನೇ ಹಂತದಲ್ಲಿ ಚಿತ್ರದುರ್ಗ, ಮಂಡ್ಯ, ರಾಯಚೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ವಿಸ್ತರಿಸಿ, ನೇತ್ರ ತಪಾಸಣೆ ಮಾಡಲಾಗಿತ್ತು.
          • 2025ರ ಜುಲೈನಲ್ಲಿ ಈ ಯೋಜನೆಯನ್ನು ಮರುವಿನ್ಯಾಸ ಮಾಡಿ, ಜಿಲ್ಲಾ ಆಸ್ಪತ್ರೆಗಳು, ತಾಲ್ಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ 393 ‘ಆಶಾಕಿರಣ ದೃಷ್ಟಿ ಕೇಂದ್ರ’ಗಳನ್ನು ಸ್ಥಾಪಿಸಲಾಗಿದೆ.
          • ಶಸ್ತ್ರಚಿಕಿತ್ಸೆ: ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಶಸ್ತ್ರ ಚಿಕಿತ್ಸೆಯನ್ನೂ ನಡೆಸಲಾಗುತ್ತಿದೆ. ಕಣ್ಣಿನ ಪೊರೆ ಸಮಸ್ಯೆ ದೃಢಪಟ್ಟಲ್ಲಿ ಉನ್ನತ ಆರೋಗ್ಯ ಕೇಂದ್ರಗಳಿಗೆ ಶಿಫಾರಸು ಮಾಡ ಲಾಗುತ್ತಿದ್ದು, ಅಲ್ಲಿ ಹೆಚ್ಚಿನ ತಪಾಸಣೆಗೆ ಒಳಪಡಿಸಲಾಗುತ್ತಿದೆ.
          • ಯೋಜನೆಯಡಿ ಈ ವರ್ಷ ಜನವರಿ ಅಂತ್ಯಕ್ಕೆ 4.19 ಲಕ್ಷ ಜನರಿಗೆ ಯಶಸ್ವಿ ಯಾಗಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ಶಸ್ತ್ರಚಿಕಿತ್ಸೆ ಗಳಲ್ಲಿ 58,582 ಮಂದಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಿದರೆ, ಉಳಿದವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
          • ‘ಆಶಾಕಿರಣ ದೃಷ್ಟಿ ಕೇಂದ್ರಗಳಲ್ಲಿ ನೇತ್ರ ತಪಾಸಣೆ ನಡೆಸಿ, ಸಮಸ್ಯೆಯನ್ನು ಪತ್ತೆ ಮಾಡಲಾಗುತ್ತಿದೆ. ಸಮಸ್ಯೆ ಇರುವವರಿಗೆ ಚಿಕಿತ್ಸೆ ಜತೆಗೆ ಕನ್ನಡಕ ವಿತರಣೆಗೆ ಕ್ರಮವಹಿಸಲಾಗಿದೆ. ಆಸ್ಪತ್ರೆ ಗಳಲ್ಲಿ ಶಾಶ್ವತ ದೃಷ್ಟಿ ಕೇಂದ್ರಗಳನ್ನು ಸ್ಥಾಪಿಸಿರುವುದರಿಂದ, ಸಾರ್ವಜನಿಕರು ಹತ್ತಿರದ ಕೇಂದ್ರಗಳಿಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಲು ಸಾಧ್ಯವಾಗುತ್ತದೆ’.

          ಕರ್ನಾಟಕ ರೈತ ಸುರಕ್ಷಾ ಫಸಲ್ ಬಿಮಾ ಯೋಜನೆ ಅನುಷ್ಠಾನಕ್ಕೆ ಸಂಪುಟ ಅಸ್ತು

          • 2026-27ನೇ ಸಾಲಿನಿಂದ ರಾಜ್ಯದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಕಂಪ್ಲಿಟ್ ರಿಸ್ಕ್ ಟ್ರಾನ್ಸ್‌ಫ‌ರ್ ಮೆಕಾನಿಸಂ(ಸಿಆರ್ ಟಿಎಂ) ಮಾದರಿಯಲ್ಲಿ ಅನುಷ್ಠಾನಗೊಳಿಸಲು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
          • ಈ ಮೂಲಕ ಬೆಳೆ ಹಾನಿಯಿಂದ ಉಂಟಾಗುವ ಆರ್ಥಿಕ ಆಘಾತವನ್ನು ರೈತರಿಂದ ವಿಮಾ ಕಂಪನಿಗಳಿಗೆ ಸಂಪೂರ್ಣವಾಗಿ ವರ್ಗಾಯಿಸುವ ವ್ಯವಸ್ಥೆ ರೂಪಿಸಲಾಗುತ್ತಿದೆ.

          1) ಯೋಜನೆಯ ಉದ್ದೇಶಗಳು
          ಪ್ರಕೃತಿ ವಿಪತ್ತು, ಅತಿವೃಷ್ಠಿ/ಬರ, ಗಾಳಿ-ಮಳೆ, ಕೀಟ-ರೋಗಗಳಿಂದ ಉಂಟಾಗುವ ಬೆಳೆ ಹಾನಿಗೆ ಆರ್ಥಿಕ ರಕ್ಷಣೆ
          ರೈತರ ಆದಾಯ ಸ್ಥಿರತೆ ಮತ್ತು ಕೃಷಿಯಲ್ಲಿ ವಿಶ್ವಾಸ ವೃದ್ಧಿ
          ಸಾಲದ ಅವಲಂಬನೆ ಕಡಿಮೆ ಮಾಡಿ ಕೃಷಿ ಹೂಡಿಕೆ ಪ್ರೋತ್ಸಾಹ
          ತ್ವರಿತ ಪರಿಹಾರದಿಂದ ಸಾಮಾಜಿಕ ಭದ್ರತೆ

          2) CRTM (Complete Risk Transfer Mechanism) ಎಂದರೇನು?
          ಸರ್ಕಾರದ ಪಾಲಿನ ಪ್ರೀಮಿಯಂ ನೀಡಿದ ನಂತರ ಹಾನಿ ಪರಿಹಾರದ ಸಂಪೂರ್ಣ ಅಪಾಯವನ್ನು ವಿಮಾ ಕಂಪನಿ ಹೊರುತ್ತದೆ
          ರಾಜ್ಯಕ್ಕೆ ಅನಿರೀಕ್ಷಿತ ಹೆಚ್ಚಿನ ಹಾನಿ ಸಂದರ್ಭಗಳಲ್ಲಿ ಹಣಕಾಸು ಒತ್ತಡ ಕಡಿಮೆ
          ಕ್ಲೇಮ್‌ಗಳ ಲೆಕ್ಕಾಚಾರ, ಪಾವತಿ ಪ್ರಕ್ರಿಯೆಗಳಿಗೆ ಸ್ಪಷ್ಟ ಜವಾಬ್ದಾರಿ ಮತ್ತು ಸಮಯಬದ್ಧತೆ

          3) ವ್ಯಾಪ್ತಿ ಮತ್ತು ಅರ್ಹತೆ
          ಸಣ್ಣ, ಅತಿಸಣ್ಣ, ದೊಡ್ಡ ರೈತರು – ಎಲ್ಲ ವರ್ಗಗಳಿಗೂ ಅನ್ವಯ
          ಸಾಲ ಪಡೆದ ರೈತರು (loanee) ಮತ್ತು ಸ್ವಯಂ ಸೇರ್ಪಡೆಗೊಂಡ ರೈತರು (non-loanee)
          ಆಹಾರ ಧಾನ್ಯ, ಪಲ್ಸ್, ತೈಲಬೀಜ, ವಾಣಿಜ್ಯ ಬೆಳೆಗಳು – ಅಧಿಸೂಚಿತ ಬೆಳೆಗಳು
          ಹಾನಿ ಕಾರಣಗಳು: ಬರ/ಅತಿವೃಷ್ಠಿ, ಚಂಡಮಾರುತ, ಪ್ರವಾಹ, ಕೀಟ-ರೋಗ, ಕೊಯ್ಲಿನ ನಂತರದ ಹಾನಿ

          4) ಪ್ರೀಮಿಯಂ ಹಂಚಿಕೆ (ಸಾಮಾನ್ಯ ಮಾರ್ಗಸೂಚಿ)
          ರೈತರ ಪಾಲು: ಕಡಿಮೆ ಶೇಕಡಾವಾರು (ಉದಾ., ಖರೀಫ್ – 2%, ರಬಿ – 1.5%, ವಾಣಿಜ್ಯ ಬೆಳೆ – 5%)*
          ಉಳಿದ ಪ್ರೀಮಿಯಂ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಂಚಿಕೆ
          (*ಅಂತಿಮ ದರಗಳನ್ನು ಅಧಿಸೂಚನೆಯಂತೆ ನಿಗದಿಪಡಿಸಲಾಗುತ್ತದೆ)

          5) ಪರಿಹಾರ ಲೆಕ್ಕಾಚಾರ ಮತ್ತು ಪಾವತಿ
          ಎರಿಯಾ ಅಪ್ರೋಚ್ ಆಧಾರಿತ ಬೆಳೆ ಉತ್ಪಾದನೆ ಅಂದಾಜು
          ಕ್ರಾಪ್ ಕಟಿಂಗ್ ಎಕ್ಸ್‌ಪೆರಿಮೆಂಟ್‌ಗಳು (CCE), ಉಪಗ್ರಹ/ಡ್ರೋನ್ ಡೇಟಾ ಬಳಕೆ
          ಹಾನಿ ದೃಢಪಟ್ಟ ಬಳಿಕ DBT ಮೂಲಕ ನೇರವಾಗಿ ರೈತರ ಖಾತೆಗೆ ಪಾವತಿ
          ನಿಗದಿತ ಕಾಲಾವಧಿಯೊಳಗೆ ಕ್ಲೇಮ್ ಪರಿಹಾರ

          ಗಮನಿಸಿ: ಪೂರ್ವಭಾವಿ ಪರೀಕ್ಷೆಯ ಸಾಮಾನ್ಯ ಅಧ್ಯಯನದ ಪ್ರಚಲಿತ ವಿದ್ಯಮಾನಗಳನ್ನು ಮುಖ್ಯ ಪರೀಕ್ಷೆಯ ಆಯಾ ವಿಷಯಗಳೊಂದಿಗೆ ಕೆಳಗೆ ಸಂಯೋಜಿಸಲಾಗಿದೆ.

          ಮುಖ್ಯ ಪರೀಕ್ಷೆ

          ಪತ್ರಿಕೆ-I: ಪ್ರಬಂಧಗಳು

          ಪ್ರಬಂಧ-1:

          “ಬಹುಧ್ರುವೀಯ ಜಾಗತಿಕ ವ್ಯವಸ್ಥೆಯಲ್ಲಿ ಭಾರತದ ಬಹು-ಸಂಯೋಜನಾ (Multi-alignment) ತಂತ್ರವನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ.”

          ಪ್ರಬಂಧ-2:

          “ಭಾರತದ ನವೀಕರಿಸಬಹುದಾದ ಇಂಧನ ಮಿಷನ್‌ಗೆ ಕರ್ನಾಟಕದ ಕೊಡುಗೆಯನ್ನು, ವಿಶೇಷವಾಗಿ ಸೌರ ಮತ್ತು ಗಾಳಿ ವಿದ್ಯುತ್ ಯೋಜನೆಗಳ ದೃಷ್ಟಿಯಿಂದ ಮೌಲ್ಯಮಾಪನ ಮಾಡಿ.”

          ಪತ್ರಿಕೆ-II: ಸಾಮಾನ್ಯ ಅಧ್ಯಯನ-1

          ಜಿಡಿಪಿ ಬೆಳವಣಿಗೆ ಶೇ 7.2ರಷ್ಟು ನಿರೀಕ್ಷೆ
          ಸಂದರ್ಭ: ಮುಂದಿನ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಶೇ 6.8ರಿಂದ ಶೇ 7.2ರ ನಡುವೆ ಇರಬಹುದು ಎಂದು ‘ಇ.ವೈ ಎಕಾನಮಿ ವಾಚ್’ ವರದಿ ತಿಳಿಸಿದೆ.

          • 2047ರ ವೇಳೆಗೆ ವಿಕಸಿತ ಭಾರತ ಗುರಿ ಸಾಧಿಸಲು, ತೆರಿಗೆ ಸುಧಾರಣೆಗಳ ಮೂಲಕ ದೇಶವು ತನ್ನ ತೆರಿಗೆ ಜಿಡಿಪಿ ಅನುಪಾತವನ್ನು ಹೆಚ್ಚಿಸಬೇಕಿದೆ ಎಂದು ತಿಳಿಸಿದೆ.
          • ಪ್ರಮುಖ ದೇಶಗಳೊಂದಿಗಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಗಳ ಕಾರಣದಿಂದಾಗಿ ದೇಶದ ಮಧ್ಯಮ ಅವಧಿಯ ಆರ್ಥಿಕ ಸ್ಥಿತಿಯು ಉಜ್ವಲವಾಗಿರುವಂತೆ ಕಾಣುತ್ತಿದೆ.
          • 2026-27ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ 6.8ರಿಂದ ಶೇ 7.2ರ ನಡುವೆ ಇರುವ ಅಂದಾಜಿದೆ ಎಂದು ಇ.ವೈ ಇಂಡಿಯಾದ ಮುಖ್ಯ ನೀತಿ ಸಲಹೆಗಾರ ತಿಳಿಸಿದ್ದಾರೆ.

          ಪತ್ರಿಕೆ-III: ಸಾಮಾನ್ಯ ಅಧ್ಯಯನ-2

          ಭಾರತ–ಇಸ್ರೇಲ್ ಸಂಬಂಧ
          ಸಂದರ್ಭ:
          ಭಾರತ ಮತ್ತು ಇಸ್ರೇಲ್ ನಡುವಿನ ಬಾಂಧವ್ಯವು ಕಳೆದ ಕೆಲವು ದಶಕಗಳಲ್ಲಿ ಬಹಳ ಗಟ್ಟಿಯಾಗಿದ್ದು, ಇತ್ತೀಚಿನ ವರ್ಷಗಳಲ್ಲಿ “ವಿಶೇಷ ತಂತ್ರಜ್ಞಾನದ ಸಹಭಾಗಿತ್ವ” (Special Strategic Partnership) ಮಟ್ಟಕ್ಕೆ ಏರಿದೆ.

          ಇತಿಹಾಸಿಕ ಹಿನ್ನೆಲೆ

          Image Credits: Samyukta Karnataka

          ಪ್ರಮುಖ ಕ್ಷೇತ್ರಗಳು
          ರಕ್ಷಣಾ ಸಹಕಾರ: ಡ್ರೋನ್‌ಗಳು, ಕ್ಷಿಪಣಿ ವ್ಯವಸ್ಥೆಗಳು, ಸೈಬರ್ ಸೆಕ್ಯೂರಿಟಿ.
          ಕೃಷಿ ಮತ್ತು ನೀರಿನ ನಿರ್ವಹಣೆ: ಇಸ್ರೇಲ್‌ನ ತಂತ್ರಜ್ಞಾನವನ್ನು ಭಾರತದಲ್ಲಿ “ಕೃಷಿ ಕೇಂದ್ರಗಳು” ಮೂಲಕ ಬಳಸಲಾಗುತ್ತಿದೆ.
          ವ್ಯಾಪಾರ ಮತ್ತು ಹೂಡಿಕೆ: 2026ರಲ್ಲಿ ಉಚಿತ ವ್ಯಾಪಾರ ಒಪ್ಪಂದ (FTA) ಕುರಿತು ಮಾತುಕತೆಗಳು ನಡೆಯುತ್ತಿವೆ.
          ಶಿಕ್ಷಣ ಮತ್ತು ಸಂಶೋಧನೆ: ವಿದ್ಯಾರ್ಥಿ ವಿನಿಮಯ, ಸಂಯುಕ್ತ ಸಂಶೋಧನಾ ಯೋಜನೆಗಳು.
          ಹೊಸ ಒಕ್ಕೂಟಗಳು: I2U2 (India, Israel, UAE, USA) ಮೂಲಕ ತಂತ್ರಜ್ಞಾನ ಮತ್ತು ಆರ್ಥಿಕ ಸಹಕಾರ.

          ಇತ್ತೀಚಿನ ಬೆಳವಣಿಗೆಗಳು (2026)
          ಪ್ರಧಾನಿ ಮೋದಿ ಅವರ ಇಸ್ರೇಲ್ ಪ್ರವಾಸದಲ್ಲಿ ಹಲವು MoUಗಳು ಮತ್ತು ಒಪ್ಪಂದಗಳು ಸಹಿ.
          ಕೃತಕ ಬುದ್ಧಿಮತ್ತೆ, ಸೈಬರ್ ಸೆಕ್ಯೂರಿಟಿ, ಶಿಕ್ಷಣ, ಕೃಷಿ ಕ್ಷೇತ್ರಗಳಲ್ಲಿ ಹೊಸ ಯೋಜನೆಗಳು.
          ಉಚಿತ ವ್ಯಾಪಾರ ಒಪ್ಪಂದ (FTA) ಶೀಘ್ರದಲ್ಲೇ ಅಂತಿಮಗೊಳ್ಳುವ ನಿರೀಕ್ಷೆ.

          ಡಿಪಿಡಿಪಿ ಕಾಯ್ದೆ ಆರ್‌ಟಿಐ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

          Content Credits/Source: Vartha Bharathi

          ಪತ್ರಿಕೆ-IV: ಸಾಮಾನ್ಯ ಅಧ್ಯಯನ-3

          ಗ್ರಾಮಾಂತರ ಪ್ರದೇಶಗಳಲ್ಲಿ ವೈ-ಫೈ ಯೋಜನೆಗೆ ಚಾಲನೆ (Rural Wi-Fi Project)
          ಸಂದರ್ಭ: ರಾಜ್ಯದ ಕೆಲವು ದುರ್ಗಮ ಪ್ರದೇಶಗಳಲ್ಲಿ ವೈ-ಫೈ ಸೌಲಭ್ಯ ಕಲ್ಪಿಸುವ ಉದ್ದೇಶದ ಯೋಜನೆಗೆ ಚಾಲನೆ.

          • ಇದರ ಭಾಗವಾಗಿ ಉತ್ತರ ಕನ್ನಡ ಜಿಲ್ಲೆಯ ಯಾಣ ಹಾಗೂ ಸಹಸ್ರಲಿಂಗದಲ್ಲಿ ಸಾರ್ವಜನಿಕ ವೈ-ಫೈ ಸೌಲಭ್ಯ ಆರಂಭಿಸಲಾಗಿದೆ ಎಂದು ಜಿಎನ್ಎ ಇಂಡಿಯಾ ಕಂಪನಿಯ ಸಿಇಒ ತಿಳಿಸಿದ್ದಾರೆ. ಈ ಕಂಪನಿಯು ಯೋಜನೆಯ ಅಡಿಯಲ್ಲಿ ವೈ-ಫೈ ಕೇಂದ್ರಗಳನ್ನು ಆರಂಭಿಸುತ್ತಿದೆ.
          • ‘ಆರಂಭಿಕ ಹೆಜ್ಜೆಯಾಗಿ ನಾವು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಯಾಣ ಹಾಗೂ ಸಹಸ್ರಲಿಂಗದಲ್ಲಿ ಈ ಸೌಲಭ್ಯ ಆರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ ಇದನ್ನು ರಾಜ್ಯದ ಇನ್ನಷ್ಟು ಸ್ಥಳಗಳಿಗೆ ವಿಸ್ತರಿಸ ಲಿದ್ದೇವೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ, ಇಂಟರ್ನೆಟ್ ಇನ್ನೂ ತಲುಪಿಲ್ಲದ ಸ್ಥಳಗಳನ್ನು ಗುರುತಿಸಿ ಅಲ್ಲಿ ವೈ-ಫೈ ಸೌಲಭ್ಯ ಆರಂಭಿಸಲಾಗುವುದು’.
          • ವೈ-ಫೈ ಸೌಲಭ್ಯ ಕಲ್ಪಿಸಲು ಜಿಎನ್ಎ ಕಂಪನಿಯು ಬಿಎಸ್‌ಎನ್‌ಎಲ್ ಜೊತೆ ಒಪ್ಪಂದ ಮಾಡಿಕೊಂಡಿದೆ.
          • ಜನರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಸ್ಥಳಗಳಲ್ಲಿ ಇಂಟರ್ನೆಟ್ ಸೌಲಭ್ಯ ಇಲ್ಲವೆಂದಾದರೆ ಅಲ್ಲಿ ಯುಪಿಐ ಪಾವತಿಯಿಂದ ಆರಂಭಿಸಿ ಇಂಟರ್ನೆಟ್ ಆಧಾರಿಸಿದ ಯಾವ ಅನುಕೂಲಗಳೂ ಲಭ್ಯವಾಗುವುದಿಲ್ಲ. ಹೀಗಾಗಿ ಈ ಯೋಜನೆ ಆರಂಭಿಸಲಾಗಿದೆ.
          • ‘ನಮ್ಮ ಭಾಗದ ಗ್ರಾಮಾಂತರ ಪ್ರದೇಶ ಗಳನ್ನು ಈ ಯೋಜನೆಯು ಇಂಟರ್ನೆಟ್ ಜಾಲದ ಜೊತೆ ಬೆಸೆಯುತ್ತಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಈ ಸೌಲಭ್ಯ ಸಿಗುವ ಪರಿಣಾಮವಾಗಿ ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ ಸಾಧ್ಯ ವಾಗುತ್ತದೆ.

          ಗಡಿಗೆ ಮಾನವರ ಬದಲಿಗೆ ಎಐ ಕಾವಲು: ಗಡಿ ನಿರ್ವಹಣಾ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿ

          ಸಂದರ್ಭ: ಗಡಿ ನಿರ್ವಹಣಾ ವ್ಯವಸ್ಥೆ ಯಲ್ಲಿ ಕ್ರಾಂತಿ ಸೃಷ್ಟಿಸುವ ಉದ್ದೇಶ ಹೊಂದಿರುವ ಗಡಿಭದ್ರತಾ ಪಡೆ (ಬಿಎಸ್‌ಎಫ್)ಯು ಇದೀಗ ಕೃತಕ ಬುದ್ಧಿಮತ್ತೆ (ಎಐ) ಚಾಲಿತ ಗಡಿ ವೀಕ್ಷಣೆ ಹಾಗೂ ನಿಗಾವಣೆ ವ್ಯವಸ್ಥೆ ( ಸ್ಮಾರ್ಟ್ ಬಾರ್ಡರ್ ಆಟ್ಸರ್‌ವೇಶನ್ ಆಂಡ್ ಮಾನಿಟರಿಂಗ್ ಸಿಸ್ಟಮ್) ಯನ್ನು ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಗಡಿ ಯುದ್ದಕ್ಕೂ ಇರುವ ಮೂಲ ಸೌಕರ್ಯಗಳ ಜೊತೆ ಸಂಯೋಜಿಸುವ ಗುರಿಯನ್ನು ಹೊಂದಿದೆ.

          • ಮಾನವ ಕೇಂದ್ರೀತ ಗಡಿಕಣ್ಣಾವಲು ವ್ಯವಸ್ಥೆಯ ಮೇಲಿನ ಅವ ಲಂಬನೆಯನ್ನು ಕಡಿಮೆಗೊಳಿಸು ವುದರ ಜೊತೆಗೆ ಸ್ವಯಂಚಾಲಿತ ಹಾಗೂ ತಕ್ಷಣದ ಬೇಹುಗಾರಿಕಾ ಮಾಹಿತಿಯನ್ನು ಒದಗಿಸುವ ಮೂಲಕ ಗಡಿಗಳನ್ನು ಸುಭದ್ರವಾಗಿಡುವ ಉದ್ದೇಶವನ್ನು ಹೊಂದಿದೆ.
          • ಗಡಿಗಳ ಸುರಕ್ಷತೆಗಾಗಿ ಮುಂದಿನ ತಲೆಮಾ ರಿನ ಕಣ್ಣಾವಲು ವ್ಯವಸ್ಥೆಯ ನೀಲನಕಾಶೆಯನ್ನು 2025ರ ಡಿಸೆಂಬರ್‌ನಲ್ಲಿ ಅಂತಿಮಗೊಳಿಸಲಾ ಗಿತ್ತು. ಏಕೀಕೃತ ಎಐ ಪ್ಲಾಟ್‌ ಫಾರಂ ಅನ್ನು ನಿಯೋಜಿಸುವುದೇ ಬಿಎಸ್‌ಎಫ್‌ನ ಉದ್ದೇಶವಾಗಿದೆ.
          • ಗಡಿಗಳಲ್ಲಿ ಒಳನುಸುಳುವಿಕೆ ಪತ್ತೆಹಚ್ಚುವಿಕೆ, ಸಂಚಾರ ವೀಕ್ಷಣೆ ಹಾಗೂ ಏಕ ಹಾಗೂ ಸಮಗ್ರ ವ್ಯವಸ್ಥೆಯೊಂದಿಗೆ ಇತರ ಸೆನ್ಸರ್ ದತ್ತಾಂಶಗಳ ಪರಿಷ್ಕರಣೆಯನ್ನು ಈ ವ್ಯವಸ್ಥೆಯು ಒದಗಿಸಲಿದೆ. ಈಗ ಅಳವಡಿಸಲಾಗಿರುವ ಅಥವಾ ನೂತನ ಸಿಸಿಟಿವಿ ಕ್ಯಾಮರಾಗಳಿಂದ ನೇರವಾಗಿ ವೀಡಿಯೊಗಳ ಪ್ರಸಾರ ಕೂಡಾ ಈ ವ್ಯವಸ್ಥೆಯಡಿ ಲಭ್ಯವಿದೆ.

          ಪತ್ರಿಕೆ-V: ಸಾಮಾನ್ಯ ಅಧ್ಯಯನ-4

          ನೈತಿಕ ಪ್ರಕರಣ ಅಧ್ಯಯನ – ಚಿಕ್ಕಮಗಳೂರಿನಲ್ಲಿ ಕಾಡಾನೆಗಳ ಹಿಂಡು ಮತ್ತು ಮಾನವ–ವೈಲ್ಡ್‌ಲೈಫ್ ಸಂಘರ್ಷ
          ಹಿನ್ನಲೆ:

          ಚಿಕ್ಕಮಗಳೂರು ಜಿಲ್ಲೆಯ ಬೆಟ್ಟ ಪ್ರದೇಶಗಳಲ್ಲಿ ಕಾಡಾನೆಗಳ ಹಿಂಡು ಗ್ರಾಮಗಳಿಗೆ ನುಗ್ಗಿ ಬೆಳೆ ಹಾನಿ ಮತ್ತು ಜನರಲ್ಲಿ ಆತಂಕ ಉಂಟುಮಾಡಿದೆ. ಇತ್ತೀಚಿನ ಘಟನೆಯಲ್ಲಿ ಸುಮಾರು 30–35 ಕಾಡಾನೆಗಳು ಕೃಷಿಭೂಮಿಗೆ ನುಗ್ಗಿ ಕಾಫಿ, ಮಕ್ಕೆಜೋಳ ಮತ್ತು ಇತರ ಬೆಳೆಗಳಿಗೆ ಹಾನಿ ಮಾಡಿವೆ. ಸ್ಥಳೀಯ ರೈತರು ಆರ್ಥಿಕ ನಷ್ಟಕ್ಕೆ ಒಳಗಾಗಿದ್ದು, ಸರ್ಕಾರದಿಂದ ತಕ್ಷಣದ ಪರಿಹಾರ ಮತ್ತು ಕಾಡಾನೆಗಳನ್ನು ಕಾಡಿಗೆ ಹಿಂತಿರುಗಿಸುವ ಕ್ರಮಗಳನ್ನು ಒತ್ತಾಯಿಸಿದ್ದಾರೆ.
          ಅರಣ್ಯ ಇಲಾಖೆ ಕಾಡಾನೆಗಳನ್ನು ತಳ್ಳಿಹಾಕಲು ಕಾರ್ಯಾಚರಣೆ ನಡೆಸುತ್ತಿದ್ದರೂ, ಕೆಲವು ಸಂಘಟನೆಗಳು ಪ್ರಾಣಿಹಕ್ಕುಗಳ ದೃಷ್ಟಿಯಿಂದ ಕಾಡಾನೆಗಳನ್ನು ಹಿಡಿಯುವುದು ಅಥವಾ ಸ್ಥಳಾಂತರಿಸುವುದು ಸೂಕ್ತವಲ್ಲ ಎಂದು ವಾದಿಸುತ್ತಿವೆ. ಪರಿಸರ ಸಂರಕ್ಷಣೆ, ಮಾನವ ಸುರಕ್ಷತೆ ಮತ್ತು ರೈತರ ಜೀವನೋಪಾಯ – ಇವುಗಳ ನಡುವೆ ಸಮತೋಲನ ಸಾಧಿಸುವುದು ದೊಡ್ಡ ಸವಾಲಾಗಿದೆ.

          ನೀವು ಜಿಲ್ಲೆಯ ಉಪ ಆಯುಕ್ತ (Assistant District Collector) ಆಗಿದ್ದು, ಈ ಸಮಸ್ಯೆಗೆ ತಕ್ಷಣ ಮತ್ತು ದೀರ್ಘಕಾಲೀನ ಪರಿಹಾರ ಕಂಡುಹಿಡಿಯುವ ಜವಾಬ್ದಾರಿಯನ್ನು ಹೊಂದಿದ್ದೀರಿ.
          ಪ್ರಮುಖ ನೈತಿಕ ಪ್ರಶ್ನೆಗಳು
          1.ಮಾನವ ಸುರಕ್ಷತೆ vs ವನ್ಯಜೀವಿ ಸಂರಕ್ಷಣೆ
          2.ರೈತರ ಜೀವನೋಪಾಯ vs ಪರಿಸರ ಸಮತೋಲನ
          3.ತಕ್ಷಣದ ಪರಿಹಾರ vs ದೀರ್ಘಕಾಲೀನ ಶಾಶ್ವತ ಕ್ರಮಗಳು
          4.ಭಾವನಾತ್ಮಕ ಒತ್ತಡ vs ವೈಜ್ಞಾನಿಕ ನಿರ್ಧಾರಗಳು
          5.ಸಾರ್ವಜನಿಕ ಒತ್ತಡ vs ಕಾನೂನುಬದ್ಧ ಅರಣ್ಯ ನಿಯಮಗಳು

          ಪಾಲುದಾರರು (Stakeholders)

          • ಸ್ಥಳೀಯ ರೈತರು ಮತ್ತು ಗ್ರಾಮಸ್ಥರು
          • ಅರಣ್ಯ ಇಲಾಖೆ
          • ವನ್ಯಜೀವಿ ತಜ್ಞರು
          • ಪ್ರಾಣಿಹಕ್ಕು ಸಂಘಟನೆಗಳು
          • ಜಿಲ್ಲಾ ಆಡಳಿತ
          • ರಾಜ್ಯ ಸರ್ಕಾರ

          ನಿಮ್ಮ ಮುಂದಿರುವ ಆಯ್ಕೆಗಳು
          ಆಯ್ಕೆ 1:
          ಕಾಡಾನೆಗಳನ್ನು ತಕ್ಷಣ ಹಿಡಿದು ಸ್ಥಳಾಂತರಿಸುವುದು.

          ಆಯ್ಕೆ 2:
          ತಾತ್ಕಾಲಿಕವಾಗಿ ಗ್ರಾಮಗಳ ಸುತ್ತ ಕಾವಲು ಬಲಪಡಿಸಿ, ಪರಿಹಾರ ಮೊತ್ತ ನೀಡುವುದು.

          ಆಯ್ಕೆ 3:
          ಮಾನವ–ವೈಲ್ಡ್‌ಲೈಫ್ ಸಂಘರ್ಷ ಕಡಿಮೆ ಮಾಡಲು ದೀರ್ಘಕಾಲೀನ ಯೋಜನೆ ರೂಪಿಸುವುದು (ಎಲಿಫೆಂಟ್ ಕಾರಿಡಾರ್, ಸೌರ ಬೇಲಿ, ತ್ವರಿತ ಪರಿಹಾರ ವ್ಯವಸ್ಥೆ).

          Sources: Prajavani, Vijayavani, Samyukta Karntaka, Vishwavani

          ಕೆಎಎಸ್ ಪ್ರಚಲಿತ ವಿದ್ಯಮಾನಗಳು

          ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು

          ಸೌರ ಉತ್ಪನ್ನಗಳಿಗೆ ಭಾರಿ ಸುಂಕ
          ಸಂದರ್ಭ: ಭಾರತದಿಂದ ಅಮೆರಿಕ ಪ್ರವೇಶಿಸುವ ಕೆಲವು ಬಗೆಯ ಸೌರ ಉತ್ಪನ್ನಗಳ ಮೇಲೆ ಅಲ್ಲಿನ ಆಡಳಿತವು ಶೇಕಡ 125.87ರಷ್ಟು ಸುಂಕ ವಿಧಿಸಿದೆ.

          • ಈ ಸೌರ ಉತ್ಪನ್ನಗಳಿಗೆ ಭಾರತದ ಸರ್ಕಾರವು ‘ನ್ಯಾಯಸಮ್ಮತವಲ್ಲದ ಬಗೆಯಲ್ಲಿ ಸಬ್ಸಿಡಿಗಳನ್ನು ನೀಡುತ್ತಿರುವ ಕಾರಣಕ್ಕಾಗಿ ಹೆಚ್ಚುವರಿ ಸುಂಕ ವಿಧಿಸಲಾಗಿದೆ’ ಎಂದು ಅಮೆರಿಕ ಹೇಳಿದೆ. ಇಂಡೊನೇಷ್ಯಾ ಮತ್ತು ಲಾವೋಸ್‌ನಿಂದ ಅಮೆರಿಕ ಪ್ರವೇಶಿಸುವ ನಿರ್ದಿಷ್ಟ ಸೌರ ಉತ್ಪನ್ನಗಳ ಮೇಲೆಯೂ ಅಮೆರಿಕ ಸರ್ಕಾರ ಬೇರೆ ಬೇರೆ ಪ್ರಮಾಣದಲ್ಲಿ ಸುಂಕ ವಿಧಿಸಿದೆ.
          • ಭಾರತದ ಸೌರ ಉತ್ಪನ್ನಗಳ ಮೇಲೆ ವಿಧಿಸಿರುವ ಸುಂಕವು ಈಗಾಗಲೇ ಜಾರಿಗೆ ಬಂದಿರುವ ಶೇ 10ರಷ್ಟು ಸುಂಕದ ಮೇಲೆ ಹೆಚ್ಚುವರಿಯಾಗಿ ಅನ್ವಯ ಆಗಲಿದೆ. ಅಮೆರಿಕ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ನೀಡಿರುವ ವಿವರದ ಪ್ರಕಾರ, 2022ರಲ್ಲಿ ಅಮೆರಿಕವು ಭಾರತದಿಂದ ಆಮದು ಮಾಡಿಕೊಂಡ ಸೌರ ಉತ್ಪನ್ನಗಳ ಮೊತ್ತವು 83.86 ಮಿಲಿಯನ್ ಡಾಲರ್ (ಇಂದಿನ ಅಂದಾಜು ₹762 ಕೋಟಿ) ಆಗಿತ್ತು. ಇದು, 2024ರಲ್ಲಿ 792 ಮಿಲಿಯನ್ ಡಾಲರ್‌ಗೆ (ಇಂದಿನ ಅಂದಾಜು ₹7.204 ಕೋಟಿ) ತಲುಪಿದೆ.
          • ಭಾರತದಲ್ಲಿ ಉತ್ತೇಜನ: ಭಾರತದಲ್ಲಿ ನವೀಕರಿಸಬಹುದಾದ ಮೂಲಗಳಿಂದ ಇಂಧನ ಉತ್ಪಾದನೆ ಹೆಚ್ಚಿಸಲು, ಈ ಕ್ಷೇತ್ರದಲ್ಲಿ ಅಮದು ಅವಲಂಬನೆ ಕಡಿಮೆ ಮಾಡಲು ಕೇಂದ್ರ ಸರ್ಕಾರವು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಸೌರವಿದ್ಯುತ್ ಉತ್ಪಾದನಾ ಕ್ಷೇತ್ರಕ್ಕೆ ಕೂಡ ಈ ಕ್ರಮಗಳ ಅಡಿಯಲ್ಲಿ ಆದ್ಯತೆ ನೀಡಲಾಗಿದೆ.
          • ಜಗತ್ತಿನಲ್ಲಿ ಸೌರವಿದ್ಯುತ್‌ ಉತ್ಪಾದನೆಯಲ್ಲಿ ಭಾರತವು ಈಗ ಮೂರನೆಯ ಸ್ಥಾನದಲ್ಲಿದೆ.
          • ದೇಶದಲ್ಲಿ ಸೌರಫಲಕಗಳ, ಸೌರವಿದ್ಯುತ್ ಉತ್ಪಾದನೆಯಲ್ಲಿ ಬಳಕೆಯಾಗುವ ಇತರ ವಸ್ತುಗಳ ತಯಾರಿಕೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರವು, ಮೇಲಾವಣೆ ಸೌರವಿದ್ಯುತ್ ಯೋಜನೆ, ಪಿಎಂ-ಕುಸುಮ್ ಯೋಜನೆಯಲ್ಲಿ ಭಾರತದಲ್ಲಿಯೇ ತಯಾರಾದ ಉತ್ಪನ್ನಗಳ ಬಳಕೆಯನ್ನು ಕಡ್ಡಾಯ ಮಾಡಿದೆ.
          • ಕೇಂದ್ರ ಸರ್ಕಾರವು 2022ರಲ್ಲಿ ಸೌರ ಕೋಶಗಳು, ಸೌರ ಮಾಡ್ಯೂಲ್‌ಗಳ ಮೇಲೆ ಮೂಲ ಸೀಮಾ ಸುಂಕವನ್ನು ವಿಧಿಸಿದೆ. ಆಮದು ತಗ್ಗಿಸುವ ಉದ್ದೇಶದಿಂದ ಹೀಗೆ ಮಾಡಲಾಗಿದೆ.

          ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು

          ಲಿಂಗತ್ವ ಅಲ್ಪಸಂಖ್ಯಾತರ ಲೋಕದಲ್ಲಿ…

          ಪತ್ರಿಕೆ-I: ಪ್ರಬಂಧಗಳು

          ಪ್ರಬಂಧ-1:

          ಮೆರಿಟೋಕ್ರಸಿಯಿಂದ ಕಾರ್ಯಕ್ಷಮತೆ ಆಧಾರಿತ ಆಡಳಿತದತ್ತ: ನಾಗರಿಕ ಸೇವಾ ಸುಧಾರಣೆಗಳ ಅಗತ್ಯತೆ ಮತ್ತು ಸವಾಲುಗಳ ಕುರಿತು ಚರ್ಚಿಸಿ.

          Reference:

          ಪ್ರಬಂಧ–2:

          ಕರ್ನಾಟಕದಲ್ಲಿ ಲಿಂಗ ಅಲ್ಪಸಂಖ್ಯಾತರು ಮತ್ತು ದೇವದಾಸಿಯರ ಸಾಮಾಜಿಕ ಆರ್ಥಿಕ ಸಮೀಕ್ಷೆ: ಒಳಗೊಳ್ಳುವ ನೀತಿ ನಿರೂಪಣೆಯತ್ತ ಒಂದು ಹೆಜ್ಜೆ? ಚರ್ಚಿಸಿ.

          ಪತ್ರಿಕೆ-II: ಸಾಮಾನ್ಯ ಅಧ್ಯಯನ-1

          ರಫ್ತು: ಫೋನ್‌ಗೆ ಅಗ್ರ ಸ್ಥಾನ

          ಸಂದರ್ಭ: ಭಾರತದಿಂದ ರಫ್ತಾಗುವ ಸರಕುಗಳ ವರ್ಗದಲ್ಲಿ ಈಗ ಸ್ಮಾರ್ಟ್‌ಫೋನ್‌ಗಳು ಮೊದಲ ಸ್ಥಾನಕ್ಕೆ ಬಂದಿವೆ.

          • 2024-25 ಭಾರತದಲ್ಲಿ ಅಂದಾಜು ಸಾಲಿನಲ್ಲಿ 25.5 ಲಕ್ಷ ಕೋಟಿ ಮೌಲ್ಯದ ಮೊಬೈಲ್ ಫೋನ್‌ಗಳನ್ನು ತಯಾರು ಮಾಡಲಾಗಿದೆ.
          • 2025ರಲ್ಲಿ ದೇಶದಿ೦ದ ರಫ್ತಾಗಿರುವ ಎಲೆಕ್ಟ್ರಾನಿಕ್ಸ್ ಸರಕುಗಳ ಮೌಲ್ಯವು ₹4 ಲಕ್ಷ ಕೋಟಿಯನ್ನು ದಾಟಿದೆ. ದೇಶದಲ್ಲಿ ನಾಲ್ಕು ಸೆಮಿಕಂಡಕ್ಟರ್ ತಯಾರಿಕಾ ಘಟಕಗಳು ಈ ವರ್ಷ ಉತ್ಪಾದನೆ ಆರಂಭಿಸಿದ ನಂತರದಲ್ಲಿ ಈ ಮೌಲ್ಯವು ಇನ್ನಷ್ಟು ಹೆಚ್ಚಾಗಲಿದೆ ಎಂಬ ಅಂದಾಜು ಮಾಡಲಾಗಿದೆ.

          ಪತ್ರಿಕೆ-III: ಸಾಮಾನ್ಯ ಅಧ್ಯಯನ-2

          ವಿಶ್ವಸಂಸ್ಥೆ ನಿರ್ಣಯದ ಮೇಲಿನ ಮತದಾನದಿಂದ ದೂರವುಳಿದ ಭಾರತ

          • ಭಾರತ ಸೇರಿದಂತೆ 51 ದೇಶಗಳು ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ರಷ್ಯ ಮತ್ತು ಉಕ್ರೇನ್ ನಡುವೆ ‘ತಕ್ಷಣದ, ಸಂಪೂರ್ಣ ಮತ್ತು ಬೇಷರತ್ ಕದನ ವಿರಾಮ’ಕ್ಕೆ ಕರೆ ನೀಡಿರುವ ನಿರ್ಣಯದ ಮೇಲಿನ ಮತದಾನದಿಂದ ದೂರವುಳಿದಿವೆ.
          • ಉಕ್ರೇನ್ ಮಂಡಿಸಿದ ನಿರ್ಣಯವನ್ನು 193 ಸದಸ್ಯರ ಅಧಿವೇಶನವು ಅಂಗೀಕರಿಸಿತು. ನಿರ್ಣಯದ ಪರವಾಗಿ 107 ಮತ್ತು ನಿರ್ಣಯದ ವಿರುದ್ಧವಾಗಿ 12 ದೇಶಗಳು ಮತ ಚಲಾಯಿಸಿದ್ದವು.
          • ಭಾರತವಲ್ಲದೆ ನಿರ್ಣಯದಿಂದ ದೂರವುಳಿದ ಇತರ 50 ಸದಸ್ಯ ರಾಷ್ಟ್ರಗಳಲ್ಲಿ ಬಹರೈನ್,ಬಾಂಗ್ಲಾದೇಶ, ಬ್ರೆಝಿಲ್, ಚೀನಾ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಯುಎಇ ಮತ್ತು ಅಮೆರಿಕ ಸೇರಿವೆ.
          • ನಿರ್ಣಯವು ಉಕ್ರೇನ್‌ನ ಸಾರ್ವಭೌಮತೆ, ಸ್ವಾತಂತ್ರ್ಯ ಮತ್ತು ಪ್ರಾದೇಶಿಕ ಅಖಂಡತೆಗೆ ಬೆಂಬಲವನ್ನು ಪುನರುಚ್ಚರಿಸಿದೆ. ಜೊತೆಗೆ ಯುದ್ಧಕೈದಿಗಳ ವಿನಿಮಯ ಹಾಗೂ ಬಲವಂತದಿಂದ ಸ್ಥಳಾಂತರಿಸಲ್ಪಟ್ಟ ಅಥವಾ ಗಡಿಪಾರುಗೊಂಡ ನಾಗರಿಕರು ಮತ್ತು ಮಕ್ಕಳನ್ನು ಮರಳಿಸುವಂತೆ ಒತ್ತಾಯಿಸಿದೆ.
          • ನಾಗರಿಕರು, ನಾಗರಿಕ ಆಸ್ತಿಗಳು ಮತ್ತು ಪ್ರಮುಖ ಇಂಧನ ಮೂಲಸೌಕರ್ಯಗಳ ಮೇಲೆ ರಶ್ಯದಿಂದ ನಿರಂತರ ಮತ್ತು ತೀವ್ರ ದಾಳಿಗಳು ಹಾಗೂ ಹದಗೆಡುತ್ತಿರುವ ಮಾನವೀಯ ಪರಿಸ್ಥಿತಿಯ ಕುರಿತು ಕಳವಳವನ್ನೂ ನಿರ್ಣಯವು ವ್ಯಕ್ತಪಡಿಸಿದೆ.

          ಪತ್ರಿಕೆ-IV: ಸಾಮಾನ್ಯ ಅಧ್ಯಯನ-3

          ಪತ್ರಿಕೆ-V: ಸಾಮಾನ್ಯ ಅಧ್ಯಯನ-4

          ನೈತಿಕ ಪ್ರಕರಣ ಅಧ್ಯಯನ – ವಾಣಿಜ್ಯ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತಾ ಉಲ್ಲಂಘನೆ

          ಹಿನ್ನಲೆ:
          ಬೆಂಗಳೂರಿನ ಗಿಜಿಗುಡಿದ ವಾಣಿಜ್ಯ ಪ್ರದೇಶದಲ್ಲಿ ಸಂಭವಿಸಿದ ಅಗ್ನಿ ಅವಘಡವು ಅಗ್ನಿ ಸುರಕ್ಷತಾ ನಿಯಮಗಳ ಗಂಭೀರ ಉಲ್ಲಂಘನೆಗಳನ್ನು ಬಹಿರಂಗಪಡಿಸಿದೆ. ಅನೇಕ ಅಂಗಡಿಗಳು ಮತ್ತು ಸಣ್ಣ ವ್ಯಾಪಾರಗಳನ್ನು ಹೊಂದಿರುವ ಕಟ್ಟಡದಲ್ಲಿ ತುರ್ತು ನಿರ್ಗಮನ ದ್ವಾರಗಳು, ಕಾರ್ಯನಿರ್ವಹಣೆಯಲ್ಲಿರುವ ಅಗ್ನಿ ನಂದಕಗಳು, ಸರಿಯಾದ ವಿದ್ಯುತ್ ಸಂಪರ್ಕ ವ್ಯವಸ್ಥೆ ಇತ್ಯಾದಿ ಮೂಲಭೂತ ಸುರಕ್ಷತಾ ಸೌಲಭ್ಯಗಳು ಅಪೂರ್ಣವಾಗಿದ್ದವು ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಪ್ರಾಣಹಾನಿ ಸಂಭವಿಸದಿದ್ದರೂ, ಸಾರ್ವಜನಿಕ ಸುರಕ್ಷತೆ, ಆಡಳಿತಾತ್ಮಕ ಜವಾಬ್ದಾರಿ ಮತ್ತು ನಿಯಂತ್ರಣದ ಪರಿಣಾಮಕಾರಿತ್ವದ ಕುರಿತು ಪ್ರಶ್ನೆಗಳು ಉದ್ಭವಿಸಿವೆ.
          ಪ್ರಾಥಮಿಕ ಮಾಹಿತಿಯ ಪ್ರಕಾರ, ಕಟ್ಟಡಕ್ಕೆ ಹಿಂದೆ ಅಗ್ನಿಶಾಮಕ ಇಲಾಖೆಯಿಂದ ನೋಟಿಸ್‌ಗಳು ನೀಡಲಾಗಿದ್ದರೂ, ತಿದ್ದುಪಡಿ ಕ್ರಮಗಳು ಪೂರ್ಣವಾಗಿ ಜಾರಿಯಾಗಿರಲಿಲ್ಲ. ಮೇಲ್ವಿಚಾರಣೆ ಮತ್ತು ಅನುಷ್ಠಾನದಲ್ಲಿ ನಿರ್ಲಕ್ಷ್ಯವೋ, ಅಥವಾ ಅಕ್ರಮಗಳೇ ನಡೆದಿವೆಯೋ ಎಂಬ ಅನುಮಾನವೂ ವ್ಯಕ್ತವಾಗಿದೆ.

          ನೀವು ಜಿಲ್ಲೆಯ ಹಿರಿಯ ಆಡಳಿತಾಧಿಕಾರಿಯಾಗಿ ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸುವ ಜವಾಬ್ದಾರಿಯನ್ನು ಹೊಂದಿದ್ದೀರಿ.
          ಪ್ರಮುಖ ನೈತಿಕ ಪ್ರಶ್ನೆಗಳು
          :

          1. ಸಾರ್ವಜನಿಕ ಸುರಕ್ಷತೆ vs ವ್ಯಾಪಾರ ಹಿತಾಸಕ್ತಿ
          2. ನಿಯಂತ್ರಣ ಜವಾಬ್ದಾರಿ vs ಆಡಳಿತಾತ್ಮಕ ನಿರ್ಲಕ್ಷ್ಯ
          3. ಅಕ್ರಮ/ಭ್ರಷ್ಟಾಚಾರ vs ಸತ್ಯನಿಷ್ಠೆ
          4. ನಗರ ಅಭಿವೃದ್ಧಿ vs ಸುರಕ್ಷತಾ ಮಾನದಂಡಗಳು
          5. ಸಂಸ್ಥೆಯ ಪ್ರತಿಷ್ಠೆ vs ಪೀಡಿತರ ನ್ಯಾಯ

          ಪಾಲುದಾರರು
          ಅಂಗಡಿ ಮಾಲೀಕರು ಮತ್ತು ವ್ಯಾಪಾರಿಗಳು
          ಉದ್ಯೋಗಿಗಳು ಮತ್ತು ಗ್ರಾಹಕರು
          ಸ್ಥಳೀಯ ನಿವಾಸಿಗಳು
          ಅಗ್ನಿಶಾಮಕ ಇಲಾಖೆ
          ಮಹಾನಗರ ಪಾಲಿಕೆ
          ಜಿಲ್ಲಾಡಳಿತ
          ಸಾಮಾನ್ಯ ಸಾರ್ವಜನಿಕರು

          ನಿಮ್ಮ ಮುಂದಿರುವ ಆಯ್ಕೆಗಳು
          ಆಯ್ಕೆ 1:
          ಕಟ್ಟಡವನ್ನು ತಕ್ಷಣ ಸೀಲ್ ಮಾಡಿ, ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವುದು.

          ಆಯ್ಕೆ 2:
          ಹೊಸ ನೋಟಿಸ್ ನೀಡಿ, ದಂಡ ವಿಧಿಸಿ, ನಿಗದಿತ ಅವಧಿಯಲ್ಲಿ ತಿದ್ದುಪಡಿ ಮಾಡಲು ಅವಕಾಶ ನೀಡುವುದು.

          ಆಯ್ಕೆ 3:
          ಸ್ವತಂತ್ರ ತನಿಖೆ ಆದೇಶಿಸಿ, ಜವಾಬ್ದಾರಿಯನ್ನು ನಿಗದಿಪಡಿಸಿ, ನಗರಮಟ್ಟದಲ್ಲಿ ಸಮಗ್ರ ಸುರಕ್ಷತಾ ಪರಿಶೀಲನೆ ಆರಂಭಿಸುವುದು.

          Sources: Prajavani, Vishwavani