Wed. May 6th, 2026

Kannada

ಕೆಎಎಸ್ ಪ್ರಚಲಿತ ವಿದ್ಯಮಾನಗಳು

ಕೆ.ಎ.ಎಸ್ ಪ್ರಚಲಿತ ವಿದ್ಯಮಾನಗಳು: ಪ್ರಚಲಿತ ವಿದ್ಯಮಾನಗಳು ಕೆ.ಪಿ.ಎಸ್.ಸಿ ಪಠ್ಯಕ್ರಮದ ‘ಜೀವಂತ ನಾಡಿಮಿಡಿತ’ವಿದ್ದಂತೆ. ಇದು ಕೇವಲ ಪ್ರತ್ಯೇಕವಾಗಿ ನೆನಪಿಡಬೇಕಾದ ವಿಷಯವಲ್ಲ; ಬದಲಿಗೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳೆರಡರಲ್ಲೂ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ನೀತಿಶಾಸ್ತ್ರವನ್ನು ಒಂದಕ್ಕೊಂದು ಬೆಸೆಯುವ ಒಂದು ಚಲನಶೀಲ ಕೊಂಡಿಯಾಗಿದೆ. ಮುಂಬರುವ ಪರೀಕ್ಷೆಗಳ ಸಂದರ್ಭದಲ್ಲಿ, ಕೇವಲ “ಸುದ್ದಿ ಓದುವುದರಿಂದ” “ಸುದ್ದಿಯ ಮೂಲಕ ಪಠ್ಯಕ್ರಮವನ್ನು ಅಭ್ಯಾಸ ಮಾಡುವುದು” ಎಂಬ ಹಂತಕ್ಕೆ ಬದಲಾಗುವುದು ಒಬ್ಬ ಗಂಭೀರ ಅಭ್ಯರ್ಥಿಯನ್ನು ಸಾಮಾನ್ಯ ಓದುಗನಿಂದ ಪ್ರತ್ಯೇಕಿಸುವ ಪ್ರಮುಖ ಬದಲಾವಣೆಯಾಗಿದೆ.

“ಪಠ್ಯಕ್ರಮಕ್ಕೆ ಮೊದಲ ಆದ್ಯತೆ” ಎಂಬ ತತ್ವ
ಕೆ.ಪಿ.ಎಸ್.ಸಿ ಪಠ್ಯಕ್ರಮಕ್ಕೆ ಕಟ್ಟುನಿಟ್ಟಾಗಿ ಹೊಂದಿಕೆಯಾಗುವ ಪ್ರಚಲಿತ ವಿದ್ಯಮಾನಗಳ ಮಾದರಿಯನ್ನು ಅನುಸರಿಸುವ ಮೂಲಕ, ನೀವು ದಿನಪತ್ರಿಕೆ ಓದಲು ವ್ಯಯಿಸುವ ಪ್ರತಿ ಗಂಟೆಯೂ ನಿಮ್ಮ ಪರೀಕ್ಷೆಯ ಶ್ರೇಣಿಯನ್ನು (Rank) ಉತ್ತಮಪಡಿಸಲು ಪೂರಕವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

ಪೂರ್ವಭಾವಿ ಪರೀಕ್ಷೆ

ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು

ಪಲಕ್-ಮುಕೇಶ್ ವಿಶ್ವದಾಖಲೆ
ಸಂದರ್ಭ:
ಭಾರತದ ಶೂಟರ್ಗಳಾದ ಪಲಕ್ ಮತ್ತು ಮುಕೇಶ್ ನೆಲವಲ್ಲಿ ಜೋಡಿ, ಐಎಸ್ಎಸ್ಎಫ್ ವಿಶ್ವ ಕಪ್ ಶೂಟಿಂಗ್ ಚಾಂಪಿಯನ್ಷಿಪ್ನ 10 ಮೀ ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಚಿನ್ನ ಗೆದ್ದುಕೊಂಡಿತು. ಆ ಹಾದಿಯಲ್ಲಿ ವಿಶ್ವ ದಾಖಲೆಯನ್ನೂ ಬರೆಯಿತು.

  • ಭಾರತದ ಜೋಡಿ ಫೈನಲ್‌ನಲ್ಲಿ 487.7 ಸ್ಕೋರ್ ಗಳಿಸಿತು. ಇದು ಜೂನಿಯರ್ ವಿಶ್ವ ದಾಖಲೆ ಕೂಡ. ಅರ್ಹತಾ ಸುತ್ತಿನಲ್ಲೇ ಉತ್ತಮ ಗುರಿ ಪ್ರದರ್ಶಿಸಿ 581 ಅಂಕ ದಾಖಲಿಸಿತ್ತು.
  • ಚೀನಾದ ಕ್ರಿಯಾನ್‌ಮನ್ ಯಾವೊ ಮತ್ತು ಕಯ್ ಹು ಜೋಡಿ 484.8 ಸ್ಕೋರ್‌ನೊಡನೆ ಬೆಳ್ಳಿ ಗೆದ್ದಿತು. ಹಂಗೆರಿಯ ವೆರೋನಿಕಾ ಮೇಜರ್ ಮತ್ತು ಅಕೋಸ್ ಕರೋಲಿ ಜೋಡಿ (414.9) ಕಂಚಿನ ಪದಕ ಗಳಿಸಿತು.
  • ಭಾರತದ ಪರ ಫೈನಲ್‌ನಲ್ಲಿ ಪಲಕ್ 243 ಮತ್ತು ಮುಕೇಶ್ 244 7 ಸ್ಕೋರ್ ದಾಖಲಿಸಿದರು. ಕ್ಯಾಲಿಫಿಕೇಷನ್ ಸುತ್ತಿನಲ್ಲಿ ಭಾರತದ ಜೋಡಿ ಎರಡನೇ ಸ್ಥಾನದಲ್ಲಿತ್ತು.
  • 18 ವರ್ಷ ವಯಸ್ಸಿನ ಪಲಕ್, 2023ರ ಏಷ್ಯನ್ ಕ್ರೀಡೆಗಳ 10 ಮೀ ಏರ್ ಪಿಸ್ತೂಲ್ ವೈಯಕ್ತಿಕ ಚಿನ್ನ ಮತ್ತು ತಂಡ ವಿಭಾಗದಲ್ಲಿ ಬೆಳ್ಳಿ ಗೆಲ್ಲುವ ಮೂಲಕ ಪ್ರವರ್ಧಮಾನಕ್ಕೆ ಬಂದಿದ್ದರು.

ಕುಸ್ತಿ: ಲಲಿತ್‌ಗೆ ಬೆಳ್ಳಿ, ಸುನಿಲ್‌ಗೆ ಕಂಚು
ಸಂದರ್ಭ:
ಅನುಭವಿ ಪೈಲ್ಮಾನ್ ಲಲಿತ್ ಅವರು ಸೀನಿಯರ್ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನ 55 ಕೆ.ಜಿ ವಿಭಾಗದ ಗ್ರೀಕೊ ರೋಮನ್‌ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದರು ಇದು ಚಾಂಪಿಯನ್‌ಷಿಪ್ ನಲ್ಲಿ ಭಾರತಕ್ಕೆ ಮೊದಲ ಪದಕ ಎನಿಸಿತು.

  • ಭಾರತದ ನಿತೇಶ್ 97 ಕೆ.ಜಿ ವಿಭಾಗದಲ್ಲಿ ಪ್ರಶಸ್ತಿ ಸುತ್ತನ್ನು ಪ್ರವೇಶಿಸಿದರು.
  • 23 ವರ್ಷದೊಳಗಿನವರ ಮಾಜಿ ಏಷ್ಯನ್ ಕಂಚಿನ ಪದಕ ವಿಜೇತರಾದ ಲಲಿತ ಸೆಮಿಫೈನಲ್‌ನಲ್ಲಿ ಚೀನಾದ ಹುವೊಯಿಂಗ್ ಶಿ ಅವರನ್ನು ಸೋಲಿಸಿದ್ದರು ಫೈನಲ್‌ನಲ್ಲಿ ಉಕಿಸ್ತಾನದ ಇಕ್ತಿಯಾರ್ ಬೊಟಿರೋವ್ ಎದುರು ಪ್ರತಿರೋಧ ತೋರಿದರೂ 0-9 ರಿಂದ ಸೋತರು.
  • 87 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕಕ್ಕೆ ನಡೆದ ಹಣಾಹಣಿಯಲ್ಲಿ ಮಾಜಿ ಚಾಂಪಿಯನ್ ಸುನಿಲ್ ಕುಮಾರ್ ಅವರು ಮೊದಲ ಸುತ್ತಿನಲ್ಲಿ 0-4 ಹಿನ್ನಡೆಯಿಂದ ಅಮೋಘವಾಗಿ ಚೇತರಿಸಿ ಉಜೈಕಿಸ್ತಾನದ ಮುಖಮಡ್ಗದಿರ್ ರಸುಲೋವ್ ಅವರನ್ನು 5-4 ರಿಂದ ಸೋಲಿಸಿದರು. ಇದು ಅವರಿಗೆ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಸತತ ಎರಡನೇ ಕಂಚು ಎನಿಸಿತು
  • ಇದಕ್ಕೆ ಮೊದಲು, 23 ವರ್ಷ ವಯಸ್ಸಿನ ನಿತೇಶ್ 97 ಕೆ.ಜಿ. ಗ್ರೀಕೊ ರೋಮನ್ ಕೆಟಗರಿಯಲ್ಲಿ ಫೈನಲ್ ತಲುಪಿದರು ಕಳೆದ ವರ್ಷ ಕಂಚಿನ ಪದಕ ಗೆದ್ದುಕೊಂಡಿದ್ದ ಅವರು ಈ ಬಾರಿ ಸುಧಾರಿತ ಫಲಿತಾಂಶ ಕಾಣುವುದು ಖಚಿತವಾಯಿತು ನಿತೀಶ್ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಮೊಹಮ್ಮದ್‌ಹದಿ ಸರವಿ (ಇರಾನ್) ಅವರನ್ನು ಸೋಲಿಸಿದರು.
  • 82 ಕೆ.ಜಿ ಗ್ರೀಕೊ ರೋಮನ್ ಸ್ಪರ್ಧೆಯಲ್ಲಿ ಪ್ರಿನ್ಸ್ ಅವರು ಕಂಚಿನ ಪದಕಕ್ಕಾಗಿ ನಡೆಯುವ ಸೆಣಸಾಟದಲ್ಲಿ ತುರ್ಕಮೆನಿಸ್ತಾನದ ದಿದಾ‌ರ್ ಅಮ್ಮಾನಝರೋವ್ ಅವರನ್ನು ಎದುರಿಸಲಿದ್ದಾರೆ 20 ವರ್ಷ ವಯಸ್ಸಿನ ಪ್ರಿನ್ನು ಸೆಮಿಫೈನಲ್‌ನಲ್ಲಿ ಇರಾನ್‌ ಮೊಹಮ್ಮದಮಿನ್ ಹುಸೇನಿ ಅವರಿಗೆ ಮಣಿದಿದ್ದರು.
  • ಅಮನ್‌ಗೆ ಹಿನ್ನಡೆ ಆದರೆ ಭಾರತದ ಪ್ರಮುಖ ಸ್ಪರ್ಧಿ ಅಮನ್ ಅವರಿಗೆ ಒಂದು ಪಾಯಿಂಟ್ ಅಂತರದಿಂದ ಹಿನ್ನಡೆಯಾಯಿತು 77 ಕೆ.ಜಿ ಗ್ರೀಕ್ ರೋಮನ್ ಕೆಟಗರಿಯಲ್ಲಿ ಕಂಚಿನ ಪದಕಕ್ಕೆ, ನಡೆದ ಸೆಣಸಾಟದಲ್ಲಿ ಅವರು ದಕ್ಷಿಣ ಕೊರಿಯಾದ ಯೊನ್ನಮ್ ನ್ಯೂ ಅವರಿಗೆ 14-15ರಲ್ಲಿ ಸೋತರು ಸಚಿನ್ ಸಹಾವತ್ (67 ಕೆ.ಜಿ ಗ್ರೀಕೊ ರೋಮನ್) ಅವರು ಕಂಚಿನ ಪದಕಕ್ಕೆ ಸೆಣಸುವ ಆರ್ಹತೆ ಪಡೆದರು ಅವರು ಬುಧವಾರ ರಜೆನಾಜ್ ಸುತ್ತಿನಲ್ಲಿ ಚೀನಾದ ಜಿ ಬೆಂಗ್ ವಿರುದ್ಧ ಅಖಾಡಕ್ಕಿಳಿಯಲಿದ್ದಾರೆ

ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು

ಬಾಲಕಿಯರ ಗರ್ಭಧಾರಣೆ: ಲೆಕ್ಕಪರಿಶೋಧನೆ ಕಡ್ಡಾಯ
ಸಂದರ್ಭ:
ರಾಜ್ಯದಲ್ಲಿ 10-18 ವರ್ಷ ವಯಸ್ಸಿನ ಹೆಣ್ಣು ಮಕ್ಕಳ ಆರೋಗ್ಯ ಬಲಪಡಿಸುವ ಸಲುವಾಗಿ ಹದಿಹರೆಯದ ಗರ್ಭಧಾರಣೆ ಪ್ರಕರಣಗಳನ್ನು ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಆರ್ಸಿಎಚ್ ವೇದಿಕೆಯಲ್ಲಿ ಕಡ್ಡಾಯವಾಗಿ ವರದಿ ಮಾಡಬೇಕು. ಸಂಬಂಧಪಟ್ಟ ತಾಲ್ಲೂಕು ಆರೋಗ್ಯಾಧಿಕಾರಿ ಲೆಕ್ಕಪರಿಶೋಧನೆ ನಡೆಸಿ ವರದಿ ನೀಡಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.

  • ಈ ವಯಸ್ಸಿನ ಹೆಣ್ಣುಮಕ್ಕಳಲ್ಲಿ ಗರ್ಭಧಾರಣೆಯು ತಾಯಿಗೆ ತೊಡಕು, ಹೆರಿಗೆಯ ವೇಳೆ ಅನಾನುಕೂಲ, ಸಾಮಾಜಿಕ ಸಮಸ್ಯೆಗಳ ಅಪಾಯವನ್ನು ಸೃಷ್ಟಿಸುತ್ತದೆ ಹದಿಹರೆಯದ ಗರ್ಭಧಾರಣೆಗಳು ವರದಿ ಆಗುತ್ತಲೇ ಇವೆ. ಇವು ಬಾಲ್ಯವಿವಾಹ, ಶಿಕ್ಷಣ ಮೊಟಕುಗೊಳಿಸುವುದು, ಸಾಮಾಜಿಕ ಸಮಸ್ಯೆ.
  • ಸರ್ಕಾರಿ ಸೇವೆಗಳನ್ನು ಪಡೆಯುವಲ್ಲಿ ಅಡಚಣೆ ಉಂಟು ಮಾಡಬಹುದು ಹೀಗಾಗಿ ಅಂತಹ ಪ್ರಕರಣಗಳನ್ನು ಪರಿಶೀಲಿಸಲು ವ್ಯವಸ್ಥಿತ ಕಾರ್ಯವಿಧಾನ ಅಗತ್ಯ ಹಾಗಾಗಿ ಕಡ್ಡಾಯ ಲೆಕ್ಕ ಪರಿಶೋಧನೆ ನಡೆಸಬೇಕು. ಈ ಮೂಲಕ ಹದಿಹರೆಯದ ಗರ್ಭಧಾರಣೆಯನ್ನು ತಡೆಗಟ್ಟುವ ಗುರಿ ಹೊಂದಲಾಗಿದೆ.

ಮುಖ್ಯ ಪರೀಕ್ಷೆ

ಪತ್ರಿಕೆ-I: ಪ್ರಬಂಧಗಳು

ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ

ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ

ಪತ್ರಿಕೆ-II: ಸಾಮಾನ್ಯ ಅಧ್ಯಯನ-1

ದಕ್ಷಿಣದ ಜನಸಂಖ್ಯೆ ಕುಸಿತ: ಸಣ್ಣದಲ್ಲ ಈ ಸವಾಲು
ಸಂದರ್ಭ:
ಹೆಚ್ಚು ಮಕ್ಕಳನ್ನು ಹೊಂದಲು ಪೋಷಕರನ್ನು ಪ್ರೋತ್ಸಾಹಿಸುವ ಸಂಬಂಧ ಕಾನೂನು ರೂಪಿಸುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ಇತ್ತೀಚೆಗೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಹೇಳಿದ್ದಾರೆ. ಅದು ರಾಜಕೀಯ ಘೋಷಣೆಯಂತೆ ಕಾಣಬಹುದು. ಆದರೆ, ವಾಸ್ತವವಾಗಿ ಅದು ಆಪತ್ಕಾಲದ ಕೂಗು; ಭಾರತದಲ್ಲಿ ಆರ್ಥಿಕ ಬೆಳವಣಿಗೆ ಸಾಧಿಸಿರುವ ದಕ್ಷಿಣ ರಾಜ್ಯಗಳಲ್ಲಿ ಸದ್ದಿಲ್ಲದೇ ಘಟಿಸುತ್ತಿರುವ ಜನಸಂಖ್ಯೆ ಕುಸಿತದ ಸವಾಲನ್ನು ಬಹಿರಂಗವಾಗಿ ಒಪ್ಪಿಕೊಂಡ ಹೇಳಿಕೆಯಾಗಿದೆ.

  • ಮಹಿಳಾ ಸಾಕ್ಷರತೆ, ಮಹಿಳಾ ಸಬಲೀಕರಣ ಮತ್ತು ಕುಟುಂಬ ಕಲ್ಯಾಣ ಕಾರ್ಯಕ್ರಮಗಳನ್ನು ದಶಕಗಳವರೆಗೆ ದಕ್ಷತೆಯಿಂದ ಅನುಷ್ಠಾನ ಮಾಡುವ ಮೂಲಕ ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ಪ್ರತಿ ಮಹಿಳೆಗೆ 21 ಮಕ್ಕಳಂತೆ ಬದಲಿ (ಜನಸಂಖ್ಯೆಯ ಪ್ರಮಾಣವನ್ನು ಕಾಯ್ದುಕೊಳ್ಳಲು ಅಗತ್ಯವಾದ) ಫಲವಂತಿಕೆಯ ಮಟ್ಟ ಮುಟ್ಟಿದ್ದವು.
  • ಆದರೆ, ಕಷ್ಟಪಟ್ಟು ಸಾಧಿಸಿದ ಈ ಜನಸಂಖ್ಯಾ ನಿಯಂತ್ರಣವು ಈಗ ತೀವ್ರ ಆರ್ಥಿಕ ಆತಂಕವಾಗಿ ಬದಲಾಗುತ್ತಿದೆ. ಇದು ಮಕ್ಕಳ ಜನನದ ವಿಚಾರ ಮಾತ್ರವಾಗಿರದೇ ಕಾರ್ಮಿಕರ ಪೂರೈಕೆ, ಪ್ರಗತಿ, ಸಾರ್ವಜನಿಕ ಹಣಕಾಸಿನ ವಿಚಾರವೂ ಆಗಿದೆ. ಜತೆಗೆ, ಒಂದು ಕಾಲದಲ್ಲಿ ತಾವು ಹಿಂದಿಕ್ಕಿದ ಉತ್ತರದ ರಾಜ್ಯಗಳನ್ನೇ ದಕ್ಷಿಣದ ರಾಜ್ಯಗಳು ಅವಲಂಬಿಸಬೇಕಾಗಿದೆ.
  • ಮಾದರಿ ನೋಂದಣಿ ವ್ಯವಸ್ಥೆಯ (ಎಸ್‌ಆರ್‌ಎಸ್) 2021ರ ಹೊಸ ದತ್ತಾಂಶವು ಜನಸಂಖ್ಯಾ ಸ್ವರೂಪದಲ್ಲಿನ ಬದಲಾವಣೆಯ ತೀವ್ರತೆಯನ್ನು ತೋರುತ್ತಿದೆ. ದಕ್ಷಿಣದ ಎಲ್ಲ ಐದು ರಾಜ್ಯಗಳ ಒಟ್ಟು ಫಲವಂತಿಕೆ ದರ (ಟಿಎಫ್‌ಆರ್) ಪ್ರತಿ ಮಹಿಳೆಗೆ 1.5 ಮತ್ತು 1.6 ಮಕ್ಕಳ ನಡುವೆ ಇದ್ದು ಇದು ಇತ್ತೀಚಿನ ಅಂದಾಜುಗಳಿಗಿಂತಲೂ ಕಡಿಮೆ ಇದೆ. ಈ ರೀತಿ ಪ್ರತಿ ತಲೆಮಾರಿನ ಗಾತ್ರ ತನ್ನ ಹಿಂದಿನ ತಲೆಮಾರಿಗಿಂತ ಸುಮಾರು ಶೇ 25ರಷ್ಟು ಕಡಿಮೆ ಆಗುತ್ತಿದ್ದು, ಇದು ಸಮುದಾಯಗಳು ಕುಗ್ಗುತ್ತಿರುವುದನ್ನು ಸೂಚಿಸುತ್ತಿದೆ. ಜತೆಗೆ, ಇದು ಕಾರ್ಮಿಕ ಮಾರುಕಟ್ಟೆಯಲ್ಲಿ ಕೊರತೆ ಸೃಷ್ಟಿಸಿ, ಕಾಲಾಂತರದಲ್ಲಿ ಸಾರ್ವಜನಿಕ ಹಣಕಾಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
  • ಉತ್ತರ ಭಾರತದಲ್ಲಿ ಪರಿಸ್ಥಿತಿ ತದ್ವಿರುದ್ಧವಾಗಿದೆ ಬಿಹಾರವು ಟಿಆರ್‌ಎಫ್‌ನಲ್ಲಿ ಅಗ್ರಸ್ಥಾನದಲ್ಲಿದ್ದರೆ (3.0), ಉತ್ತರ ಪ್ರದೇಶದಲ್ಲಿ 2.7 ಮತ್ತು ಮಧ್ಯಪ್ರದೇಶದಲ್ಲಿ 2.6 ಇದ್ದು ದಕ್ಷಿಣದ ರಾಜ್ಯಗಳಿಗಿಂತ ಎರಡರಷ್ಟಿದೆ ಬಿಹಾರದಲ್ಲಿ ಪ್ರತಿ 1,000 ಮಂದಿಗೆ ಶಿಶು ಜನನ ಪ್ರಮಾಣವು 25.6ರಷ್ಟು ಇದ್ದರೆ, ಕೇರಳದಲ್ಲಿ 12 9ರಷ್ಟು ಇದೆ ಇವು ಕೇವಲ ಅಲ್ಪ ವ್ಯತ್ಯಾಸಗಳಲ್ಲ ‘ಎರಡು ಭಾರತಗಳು’ ಜನಸಂಖ್ಯೆಯ ಸ್ವರೂಪದಲ್ಲಿ ವಿರುದ್ಧ ದಿಕ್ಕಿನಲ್ಲಿ ಮತ್ತು ಸಂಘರ್ಷದ ಹಾದಿಯಲ್ಲಿ ಸಾಗುತ್ತಿರುವುದನ್ನು ಇವು ಸೂಚಿಸುತ್ತಿವೆ.
  • ವಲಸೆ ಮತ್ತು ಅಭಿವೃದ್ಧಿಯ ಅಂತರರಾಷ್ಟ್ರೀಯ ಸಂಸ್ಥೆ ಮತ್ತು ಭಾರತದ ಜನಸಂಖ್ಯಾ ಫೌಂಡೇಷನ್‌ ಮುನ್ನೋಟ ವರದಿಯು ಜನಸಂಖ್ಯಾಶಾಸ್ತ್ರಜ್ಞರು ಈ ಬಗ್ಗೆ ಹಿಂದೆಯೇ ನೀಡಿದ್ದ ಎಚ್ಚರಿಕೆಯನ್ನು ದೃಢಪಡಿಸಿದೆ ದಕ್ಷಿಣದ ರಾಜ್ಯಗಳಲ್ಲಿ, 2041ರ ನಂತರ ಜನಸಂಖ್ಯೆಯಲ್ಲಿ ತೀವ್ರ ಕುಸಿತ ಆರಂಭವಾಗುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಕೆ ನೀಡಿದ್ದರು.
  • ‘ನೇಚರ್ ಪತ್ರಿಕೆಯಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ 1981 ಮತ್ತು 2021ರ ನಡುವೆ ಭಾರತದ ಜಿಡಿಪಿಗೆ ಜನಸಂಖ್ಯೆಯು ವಾರ್ಷಿಕವಾಗಿ ಶೇ 19ರನ್ನು ಕೊಡುಗೆ ನೀಡಿದೆ. ಉತ್ಪಾದನಾ ಸಾಮರ್ಥ್ಯ ಹೆಚ್ಚಿರುವ ದೇಶದ ಅತ್ಯಂತ ಪ್ರಮುಖ ರಾಜ್ಯಗಳಲ್ಲಿ ದುಡಿಯುವ ವಯಸ್ಸಿನ ಜನರ ಕೊರತೆಯುಂಟಾದರೆ, ಜನಸಂಖ್ಯೆಯಿಂದ ಆಗುತ್ತಿದ್ದ ಪ್ರಯೋಜನಗಳು ಹಿಮ್ಮುಖವಾಗಬಹುದು.
  • ಭಾರತದ ಅಗ್ರಗಣ್ಯ ಜನಸಂಖ್ಯಾಶಾಸ್ತ್ರಜ್ಞರಲ್ಲಿ ಒಬ್ಬರಾದ ಎಸ್ ಇರುದಯ ರಾಜನ್ ಅವರು ಟಿಎಫ್‌ಆರ್ ಪ್ರವೃತ್ತಿಯ ಬಗ್ಗೆ, ಮಾತನಾಡಿದ್ದು, ಫಲವಂತಿಕೆ ನಿಯಂತ್ರಿಸಲು ದಶಕಗಳ ಕಾಲ ರಾಜಕೀಯ ಬದ್ಧತೆ ತೋರಿದ್ದರ ಅನಿವಾರ್ಯ ಫಲಿತಾಂಶ ಇದು ಎಂದಿದ್ದಾರೆ. 1970ರ ದಶಕದಲ್ಲಿ ಕೇರಳದಲ್ಲಿ ನಡೆದ ಒಂದು ಅಭಿಯಾನದತ್ತ ಅವರು ಗಮನ ಸೆಳೆಯುತ್ತಾರೆ. ಆಗ ಸರ್ಕಾರದ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಅಭಿಯಾನವನ್ನು ಸಾರ್ವಜನಿಕ ಉತ್ಸವದಂತೆ ನಡೆಸಲಾಗಿತ್ತು.
  • ‘ಈಗ ಅವರು ಹೆಚ್ಚು ಮಕ್ಕಳನ್ನು ಹೊಂದುವಂತೆ ಒತ್ತಾಯಿಸು ತ್ತಿದ್ದಾರೆ. ಕಡಿಮೆ ಮಕ್ಕಳನ್ನು ಹೊಂದುವ ದಿಸೆಯಲ್ಲಿ ಸರ್ಕಾರವು ಸಣ್ಣ ಕುಟುಂಬಗಳಿಗೆ ಪ್ರೋತ್ಸಾಹ ನೀಡಿದಾಗ, ಜನರು ಅದನ್ನು ಅನುಸರಿಸಿದ್ದರು. ಆದರೆ, ಹೆಚ್ಚಿನ ಮಕ್ಕಳನ್ನು ಹೊಂದುವಂತೆ ಸರ್ಕಾರ ನೀಡುತ್ತಿರುವ ಪ್ರೋತ್ಸಾಹವನ್ನು ಜನ ಅದೇ ರೀತಿಯಲ್ಲಿ ಸ್ವೀಕರಿಸದೇ ಇರಬಹುದು. ಇಂದಿನ ತಲೆಮಾರು ಕೂಡ ತಮ್ಮ ಪೋಷಕರು ಹುಟ್ಟುಹಾಕಿದ ಮಾದರಿಯನ್ನೇ ಅನುಸರಿಸುವ ಸಾಧ್ಯತೆಯಿದೆ. ಮುಂದಿನ ಪೀಳಿಗೆಯು ವಿಭಿನ್ನವಾಗಿ ಯೋಚಿಸಬಹುದೇನೋ. ಆದರೆ, ಅದು 30 ರಿಂದ 40 ವರ್ಷಗಳನ್ನು ತೆಗೆದುಕೊಳ್ಳಬಹುದು’ ಎಂದು ಅವರು ಹೇಳುತ್ತಾರೆ.
  • ಪ್ರೋತ್ಸಾಹ ಧನದ ನೀಡುವಂತಹ ಕ್ರಮಗಳಿಗಿಂತ ನೀತಿಯ ಮಟ್ಟದಲ್ಲಿ ಬದಲಾವಣೆ ತರುವುದು ಉತ್ತಮ ಎನ್ನುವುದು ರಾಜನ್ ಅವರ ಅನಿಸಿಕೆ ಮಕ್ಕಳನ್ನು ಪಡೆದ ನಂತರ ಮತ್ತೆ ಕೆಲಸಕ್ಕೆ ಹಿಂದಿರುಗುವ ಬಗ್ಗೆ ಮಹಿಳೆಯರಿಗೆ ಖಾತರಿ ಬೇಕು’ ಎಂದು ಅವರು ಹೇಳುತ್ತಾರೆ:
  • ಅಂತರರಾಷ್ಟ್ರೀಯ ಪುರಾವೆಗಳೂ ರಾಜನ್ ಅವರ ನಿಲುವನ್ನು ಸಮರ್ಥಿಸುತ್ತವೆ. ಹೆಚ್ಚು ಮಕ್ಕಳನ್ನು ಹೆರುವಂತೆ ಉತ್ತೇಜಿಸುವ ಚೀನಾದ (ಪ್ರೋನಾಟಲಿಸ್) ಕಾರ್ಯಕ್ರಮವು ಫಲವಂತಿಕೆ ಕುಸಿತವನ್ನು ಹಿಮ್ಮೆಟ್ಟಿಸುವ ವಿಫಲವಾಗಿದೆ ಎಂದು ರಾಂಡ್ ಕಾರ್ಪೊರೇಷನ್ 2025 ನವೆಂಬರ್‌ನಲ್ಲಿ ನಡೆಸಿದ ಮೌಲ್ಯಮಾಪನ ವರದಿಯಲ್ಲಿ ತಿಳಿಸಿದೆ.
  • ರಾಜನ್ ಅವರ ಪ್ರಕಾರ. ಮಕ್ಕಳನ್ನು ಹೊಂದು ಬಗೆಗಿನಮೂಲಭೂತ ಲೆಕ್ಕಾಚಾರವು ತಲೆಕೆಳಗಾಗಿದೆ. ‘ಮೊದಲು ಮಕ್ಕಳನ್ನು ಆಸ್ತಿ ಎಂದು ಪರಿಗಣಿಸಲಾಗುತ್ತಿತ್ತು ಈಗ ಅವರು ಹೊಣೆಗಾರಿಕೆಗಳಂತೆ ಆಗಿದ್ದಾರೆ’ ಎಂದು ಅವರು ಹೇಳುತ್ತಾರೆ
  • ಗ್ರಹಿಕೆಯಲ್ಲಿನ ಬದಲಾವಣೆಯು ಜೀವನದ ವಿವಿಧ ಹಂತಗಳಲ್ಲಿ ಗೋಚರಿಸುತ್ತಿದೆ ಒಂದು ಕಾಲದಲ್ಲಿ ಮನೆಗಳಲ್ಲಿಯೇ ಮಕ್ಕಳ ಜನನ ಆಗುತ್ತಿತ್ತು. ಆದರೆ, ಈಗ ಹೆಚ್ಚಿನ ಹರಿಗೆಗಳು ಖಾಸಗಿ ಆಸ್ಪತ್ರೆಗಳಲ್ಲಿ ಆಗುತ್ತಿದ್ದು, ಅದಕ್ಕೆ ದುಬಾರಿ ವೆಚ್ಚ ಭರಿಸಬೇಕು ಸಣ್ಣ ಕುಟುಂಬಗಳು ನಗರಕ್ಕೆ ವಲಸೆ ಬರುವ ಪ್ರಮತ್ತಿ ಹೆಚ್ಚಾಗಿದ್ದು, ಮಕ್ಕಳ ಅನೌಪಚಾರಿಕ ಪಾಲನೆ ಕಣ್ಮರೆಯಾಗಿದೆ ಇದರಿಂದ ಮಹಿಳೆಯರು ಹೆಚ್ಚುವರಿ ಸವಾಲನ್ನು ಎದುರಿಸಬೇಕಾಗಿ ಬಂದಿದೆ. ಮಕ್ಕಳ ಪಾಲನೆಗಾಗಿ ವೃತ್ತಿಜೀವನದ ಮಧ್ಯೆ ಬಿಡುವು ಪಡೆಯುವ ಅವರಿಗೆ ನಂತರ ಕೆಲಸಕ್ಕೆ ಹಿಂದಿರುಗುವ ಅವಕಾಶಗಳು ಸೀಮಿತವಾಗುತ್ತವೆ
  • ಇದೆಲ್ಲದರ ಪರಿಣಾಮವಾಗಿ ಫಲವಂತಿಕೆ ಪ್ರಮಾಣವು ಕುಸಿದಿದ್ದು ಅದು ಹೆಚ್ಚಾಗುವ ಯಾವುದೇ ಸೂಚನೆ ಪ್ರಸ್ತುತ ಕಾಣುತ್ತಿಲ್ಲ, ರಾಜನ್ ಅವರು ಹೇಳುವಂತೆ, ಇದು ವೈಯಕ್ತಿಕ ಬೆಳವಣಿಗೆಯ ಮಾನದಂಡವಾಗಿ ರೂಢಿಗೆ ಬಂದಿದ್ದು ಸಾಮಾಜಿಕ ಪದ್ದತಿ’ಯಾಗಿ ಮಾರ್ಪಟ್ಟಿದೆ. ಜ್ಞಾನದ ರೀತಿಯಲ್ಲಿಯೇ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತಿದೆ.

ವಲಸಿಗರನ್ನು ಆಧರಿಸಿದ ಆರ್ಥಿಕತೆ

  • ಜನಸಂಖ್ಯೆಯ ಸ್ವರೂಪದಲ್ಲಿ ಆಗುವ ಬದಲಾವಣೆಯಿಂದಾಗಿ ಅತ್ಯಂತ ಹೆಚ್ಚು ಪರಿಣಾಮವಾಗುವುದು ವಲಸೆ ಮತ್ತು ವಿದೇಶದಲ್ಲಿರುವ ಭಾರತೀಯರು ತಾಯ್ತಾಡಿಗೆ ಕಳುಹಿಸುವ ಹಣದ ಆರ್ಥಿಕತೆಯ ಮೇಲೆ ಈ ಆರ್ಥಿಕತೆಯೇ ದಕ್ಷಿಣ ಭಾರತದ ರಾಜ್ಯಗಳನ್ನು ದೀರ್ಘ ಸಮಯದಿಂದ ಪೋಷಿಸುತ್ತಾ ಬಂದಿದೆ. ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶ ದಶಕಗಳಿಂದ ಕೌಶಲ ಮತ್ತು ಅರೆಕೌಶಲ ಹೊಂದಿರುವ ಕಾರ್ಮಿಕರನ್ನು ಕೊಲ್ಲಿ ಮತ್ತು ಬೇರೆ ರಾಷ್ಟ್ರಗಳಿಗೆ ಕಳುಹಿಸುತ್ತಾ ಬಂದಿವೆ.
  • ವಿದೇಶಗಳಲ್ಲಿರುವ ಭಾರತೀಯರು ತಾಯ್ಯಾಡಿಗೆ ಕಳುಹಿಸುತ್ತಿರುವ ಹಣದಲ್ಲಿ ಕೇರಳದ ಪಾಲು 2017ರಲ್ಲಿ ಶೇ 19ರಷ್ಟು ಇದ್ದದ್ದು, 2024ರ ಹೊತ್ತಿಗೆ ಶೇ 19.7ಕ್ಕೆ ಏರಿಕೆಯಾಗಿತ್ತು ತಮಿಳುನಾಡಿನ ಪಾಲು ಶೇ 8ರಿಂದ ಶೇ 10.4ಕ್ಕೆ ಏರಿಕೆ ಕಂಡಿತ್ತು ಕೇರಳದ ಬ್ಯಾಂಕುಗಳಲ್ಲಿ ಅನಿವಾಸಿ ಭಾರತೀಯರು (ಎನ್‌ಆರ್‌ಐ) ಇರಿಸಿರುವ ಠೇವಣಿ ಮೊತ್ತ 3 ಲಕ್ಷ ಕೋಟಿ.
  • ಕೇರಳದಿಂದ ಕೊಲ್ಲಿ ರಾಷ್ಟ್ರಗಳಿಗೆ ಉದ್ಯೋಗಕ್ಕಾಗಿ ವಲಸೆ ಹೋಗುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗಿದೆ. ಸ್ಥಳೀಯವಾಗಿ ಕೌಶಲ ಮಟ್ಟ ಹೆಚ್ಚಾಗುತ್ತಿರುವುದು ಮತ್ತು ಉತ್ತಮ ಸಂಬಳ ಸಿಗುತ್ತಿರುವುದರಿಂದ ವಿದೇಶದಲ್ಲಿ ಕಡಿಮೆ ಸಂಬಳದ ಕೆಲಸಕ್ಕೆ ಹೋಗಲು ಜನರು ಹಿಂದೇಟು ಹಾಕುತ್ತಿರುವುದು ಇದಕ್ಕೆ ಭಾಗಶಃ ಕಾರಣ. ಇದರ ನಡುವೆಯೇ, ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಿಂದ ಕಡಿಮೆ ಮತ್ತು ಅರೆಕೌಶಲ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಟ್ಟಡ ನಿರ್ಮಾಣ, ಆತಿಥ್ಯ ಮತ್ತು ಸೇವಾ ಕ್ಷೇತ್ರಗಳಲ್ಲಿ ಕೆಲಸ ಅರಸಿಕೊಂಡು ಕೊಲ್ಲಿ ರಾಷ್ಟ್ರಗಳಿಗೆ ಹೋಗಲು ಆರಂಭಿಸಿದ್ದಾರೆ.
  • ‘ವಿದೇಶಗಳಲ್ಲಿರುವ ಕೇರಳದ ಕಾರ್ಮಿಕರು ಈಗ ಕೌಶಲಯುಕ್ತ ಉದ್ಯೋಗಗಳನ್ನು ಬಯಸುತ್ತಿದ್ದಾರೆ ರಾಜ್ಯದಲ್ಲಿ ಸುಲಭವಾಗಿ ಶಿಕ್ಷಣ ಸಿಗುತ್ತಿರುವುದರಿಂದ ಇದು ಸಾಧ್ಯವಾಗಿದೆ’ ಎಂದು ಹೇಳುತ್ತಾರೆ ಕೇರಳದ ವಲಸೆ ಮತ್ತು ಎಲ್ಲರನ್ನೊಳಗೊಂಡ ಅಭಿವೃದ್ಧಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ಬಿನೋಯ್ ಪೀಟರ್ ಹೇಳುತ್ತಾರೆ. ‘ಆದರೆ ಈಗ ಹೆಚ್ಚಿನ ಮಲಯಾಳಿಗಳು ಅದರಲ್ಲೂ ಹೆಚ್ಚಾಗಿ ವಿದ್ಯಾರ್ಥಿಗಳು ಯುರೋಪ್ ಕೆನಡಾ ಮತ್ತು ಆಸ್ಟ್ರೇಲಿಯಾಕ್ಕೆ ಹೋಗುತ್ತಿದ್ದು ಭವಿಷ್ಯದಲ್ಲಿ ಅಲ್ಲಿಯೇ ಅವರು ನೆಲಸುವ ಸಾಧ್ಯತೆ ಇದೆ ಹೀಗಾದರೆ, ತಾನ್ನಾಡಿಗೆ ಬರುವ ಹಣ ಕಡಿಮೆಯಾಗುತ್ತದೆ’ ಎನ್ನುತ್ತಾರೆ ಅವರು

ಫಲವಂತಿಕೆ ಕುಸಿತದ ಪರಿಣಾಮ

  • ಇನ್ನೊಂದು ಕಡೆ ದಕ್ಷಿಣದ ರಾಜ್ಯಗಳಲ್ಲಿ ಕಡಿಮೆಯಾಗುತ್ತಿರುವ ಜನನ ಪ್ರಮಾಣವು ಈ ಪ್ರದೇಶದ ಕಾರ್ಮಿಕರ ಚಿತ್ರಣಕ್ಕೆ ಹೊಸ ರೂಪ ನೀಡುತ್ತಿದೆ
  • ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶದಿಂದ ವಲಸೆ ಬಂದಿರುವ ಕಾರ್ಮಿಕರು ಕರ್ನಾಟಕ, ಕೇರಳ, ತಮಿಳುನಾಡಿನಾದ್ಯಂತ ಕಟ್ಟಡ ನಿರ್ಮಾಣ, ಕೈಗಾರಿಕೆ, ಮೀನುಗಾರಿಕಾ ಬಂದರು ಮತ್ತು ಮನೆಗಳ ಅಡುಗೆ ಕೋಣೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
  • ‘ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಟ್ಟು ಫಲವಂತಿಕೆ ದರ ಕುಸಿದಿರುವುದು ಉತ್ತರದಿಂದ ದಕ್ಷಿಣದೆಡೆಗೆ ಆಂತರಿಕ ವಲಸೆ ಹೆಚ್ಚಾಗುತ್ತಿರುವುದಕ್ಕೆ ನೇರ ಕಾರಣ’ ಎಂಬುದು ಪಾಪ್ಯುಲೇಷನ್ ಫೌಂಡೇಷನ್ ಆಫ್ ಇಂಡಿಯಾದ ಹಿರಿಯ ರಿಸರ್ಚ್ ಫೆಲೋ ರತ್ನಕುಮಾರ್ ಅವರ ಸ್ಪಷ್ಟ ಅಭಿಪ್ರಾಯ.
  • ‘ಇದರ ತಕ್ಷಣದ ಪರಿಣಾಮವೇ ಕಾರ್ಮಿಕರ ಕೊರತೆ ಭವಿಷ್ಯದಲ್ಲಿ ಇದು ಇನ್ನಷ್ಟು ಹೆಚ್ಚಾಗಲಿದೆ’ ಎಂದು ಹೇಳುತ್ತಾರೆ ಅವರು.
  • ಇದರ ಇನ್ನೊಂದು ಪರಿಣಾಮ ಏನೆಂದರೆ, ಯುವಜನರ ಸಂಖ್ಯೆ ಕಡಿಮೆಯಾಗಿ ವಯಸ್ಕರ, ವೃದ್ಧರ ಸಂಖ್ಯೆ ಹೆಚ್ಚಾಗುತ್ತಿರುವುದು. ಇದಕ್ಕೆ ಕೇರಳದ ಪಟ್ಟಣಂತಿಟ್ಟಿದ ಉದಾಹರಣೆಯನ್ನು ರತ್ನಕುಮಾರ್ ಕೊಡುತ್ತಾರೆ. ಈ ಜಿಲ್ಲೆಯು ದೇಶದಲ್ಲೇ ಅತ್ಯಂತ ಕಡಿಮೆ ಫಲವಂತಿಕೆ ದರವನ್ನು ಹೊಂದಿದೆ. ಇಲ್ಲಿನ ಜನಸಂಖ್ಯೆಯಲ್ಲಿ ವಯಸ್ಸಾದವರೇ ಹೆಚ್ಚಿದ್ದಾರೆ. ಮಕ್ಕಳ ಸಂಖ್ಯೆ ಕಡಿಮೆ ಇರುವುದರಿಂದ ಶಾಲೆಗಳು ಮುಚ್ಚುತ್ತಿವೆ. ಯುವ ಗ್ರಾಹಕರನ್ನು ಅವಲಂಬಿಸಿದ ವ್ಯಾಪಾರಕ್ಕೂ ಧಕ್ಕೆಯಾಗುತ್ತಿದೆ. ಇದು ಈ ಜಿಲ್ಲೆ ಒಂದರ ಕಥೆಯಲ್ಲ, ಭವಿಷ್ಯದಲ್ಲಿ ಇಡೀ ದಕ್ಷಿಣ ಭಾರತದಲ್ಲಿ ಇಂತಹ ಸ್ಥಿತಿ ನಿರ್ಮಾಣವಾಗಬಹುದು ಎಂಬುದು ಅವರ ಕಳವಳ.

ಹಣಕಾಸಿನ ಒತ್ತಡ

  • ಫಲವಂತಿಕೆ ಕುಸಿತದಿಂದ ಕಾರ್ಮಿಕ ಬಲಕ್ಕೆ ಸೇರ್ಪಡೆಗೊಳ್ಳುವ ಯುವಜನರ ಸಂಖ್ಯೆ ಕಡಿಮೆಯಾಗುತ್ತಿದ್ದು ಅವಲಂಬನೆ ಅನುಪಾತ ಹೆಚ್ಚಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಉದ್ಯೋಗ ಮಾಡುವ ಪ್ರತಿ ವಯಸ್ಕನೂ ಹಿರಿಯ ನಾಗರಿಕರಿಗೆ ಬೆಂಬಲವಾಗಿ ನಿಲ್ಲಬೇಕಾಗುತ್ತದೆ. ದಕ್ಷಿಣದ ರಾಜ್ಯಗಳು ಉದಾರವಾಗಿರುವಂತಹ ಜನಕಲ್ಯಾಣ ಯೋಜನೆಗಳನ್ನು ಜಾರಿ ಮಾಡಿವೆ. ಆದರೂ, ಇದು ದೀರ್ಘಾವಧಿಯಲ್ಲಿ ಸರ್ಕಾರದ ಮೇಲಿನ ಹಣಕಾಸಿನ ಹೊರೆ ಹೆಚ್ಚಿಸುತ್ತದೆ. ಮುಂದಿನ ಎರಡು ದಶಕಗಳಲ್ಲಿ ದಕ್ಷಿಣದ ರಾಜ್ಯಗಳ ಜನಸಂಖ್ಯಾ ಸ್ವರೂಪದಲ್ಲಿ ಬದಲಾವಣೆ ಆರಂಭವಾಗುವ ನಿರೀಕ್ಷೆ ಇದೆ.
  • ಯುವಜನರ ಸಂಖ್ಯೆ ಕುಸಿದು, ಹಿರಿಯರ ಸಂಖ್ಯೆ ಹೆಚ್ಚಾಗಲಿರುವುದರಿಂದ ಕಾರ್ಮಿಕ ಮತ್ತು ಸಾಮಾಜಿಕ ನೀತಿಗಳು ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳಬೇಕಾದ ಅಗತ್ಯವಿದೆ ಮಹಿಳೆಯರು ಕಾರ್ಮಿಕಬಲದಲ್ಲಿ ತೊಡಗಿಕೊಳ್ಳುವುದಕ್ಕೆ ಪ್ರೋತ್ಸಾಹ ನೀಡುವುದು, ಹಿರಿಯ ಕಾರ್ಮಿಕರ ಸಾಮರ್ಥ್ಯವನ್ನು ಬಳಸಿಕೊಳ್ಳುವುದು, ವಲಸೆ ಕಾರ್ಮಿಕರನ್ನು ಪರಿಣಾಮಕಾರಿಯಾಗಿ ಸಂಯೋಜಿಸುವುದು ಮತ್ತು ಬದಲಾಗುತ್ತಿರುವ ಜನಸಂಖ್ಯೆಯ ಸ್ಮರೂಪಕ್ಕೆ ಅನುಗುಣವಾಗಿ ಸಾರ್ವಜನಿಕ ವೆಚ್ಚವನ್ನು ಮರುಮಾಪನಕ್ಕೆ ಒಳಪಡಿಸುವುದು ಮುಂತಾದ ಪ್ರಮುಖ ವಿಷಯಗಳತ್ತ ಸರ್ಕಾರ ಗಮನ ಹರಿಸಬೇಕಾಗಿದೆ.

ಪತ್ರಿಕೆ-III: ಸಾಮಾನ್ಯ ಅಧ್ಯಯನ-2

ಪತ್ರಿಕೆ-IV: ಸಾಮಾನ್ಯ ಅಧ್ಯಯನ-3

ಕಾಳಿ ಹುಲಿ ಅಭಯಾರಣ್ಯ: 663 ಚ.ಕಿ.ಮೀ ಪರಿಸರ ಸೂಕ್ಷ್ಮ ಪ್ರದೇಶ
ಸಂದರ್ಭ:
ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಪ್ರದೇಶದ 663 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವಾಲಯ ಮಂಗಳವಾರ ಕರಡು ಅಧಿಸೂಚನೆ ಹೊರಡಿಸಿದೆ.

  • ಅರಣ್ಯದ ಅಂಚಿನಿಂದ 10ಕಿ.ಮೀ. ವರೆಗಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ.
  • ಭೀಮಗಡ ವನ್ಯಜೀವಿಧಾಮವು ಪಕ್ಕದಲ್ಲಿ ಇರುವುದರಿಂದ ಉತ್ತರ ಹಾಗೂ ಪಶ್ಚಿಮ ದಿಕ್ಕಿನಲ್ಲಿ ಪರಿಸರ ಸೂಕ್ಷ್ಮ ಪ್ರದೇಶವನ್ನು ಗುರುತಿಸಿಲ್ಲ ಈಶಾನ್ಯದಲ್ಲಿ 5 ಕಿ ಮೀ.ಯಿಂದ 10 ಕಿ.ಮೀ. ಪೂರ್ವದಲ್ಲಿ 1ಕಿ.ಮೀ.ಯಿಂದ 7ಕಿ.ಮೀ. ವರೆಗೆ ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ.
  • ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ 75 ಚ.ಕಿ.ಮೀ. ಕಂದಾಯ ಪ್ರದೇಶ, 84 ಚ.ಕಿ.ಮೀ ಕಂದಾಯ ಗ್ರಾಮಗಳು ಹಾಗೂ 503 ಚ.ಕಿ.ಮೀ. ಅರಣ್ಯ ಸೇರಿವೆ. ಆಕ್ಷೇಪಣೆ ಸಲ್ಲಿಕೆಗೆ 60 ದಿನಗಳ ಕಾಲಾವಕಾಶ ನೀಡಲಾಗಿದೆ.
  • ಅಂತಿಮ ಅಧಿಸೂಚನೆ ಪ್ರಕಟಗೊಂಡ ಬಳಿಕ ಎರಡು ವರ್ಷಗಳಲ್ಲಿ ರಾಜ್ಯ ಸರ್ಕಾರವು ವಲಯ ಮಾಸ್ಟರ್ ಪ್ಲಾನ್ ಸಿದ್ಧಪಡಿಸಬೇಕು ಸ್ಥಳೀಯ ಜನರೊಂದಿಗೆ ಸಮಾಲೋಚಿಸಿ ಈ ಪ್ರಕ್ರಿಯೆ ನಡೆಸಬೇಕು’ ಎಂದು ಸಚಿವಾಲಯ ಸೂಚಿಸಿದೆ.

ಕಾಳಿ ಹುಲಿ ಅಭಯಾರಣ್ಯವು (Kali Tiger Reserve) ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಮತ್ತು ಜೊಯಿಡಾ ತಾಲ್ಲೂಕುಗಳಲ್ಲಿ ಹರಡಿಕೊಂಡಿರುವ ಒಂದು ಪ್ರಮುಖ ಸಂರಕ್ಷಿತ ಪ್ರದೇಶವಾಗಿದೆ.
೧. ಹಿನ್ನೆಲೆ ಮತ್ತು ಹೆಸರು:
ಇದನ್ನು ಮೊದಲು ‘ದಾಂಡೇಲಿ-ಅಂಶಿ ಹುಲಿ ಅಭಯಾರಣ್ಯ’ ಎಂದು ಕರೆಯಲಾಗುತ್ತಿತ್ತು.
೨೦೧೫ರಲ್ಲಿ ಕರ್ನಾಟಕ ಸರ್ಕಾರವು ಇದರ ಹೆಸರನ್ನು ‘ಕಾಳಿ ಹುಲಿ ಅಭಯಾರಣ್ಯ’ ಎಂದು ಬದಲಾಯಿಸಿತು. ಈ ಪ್ರದೇಶದ ಜೀವನದಿಯಾಗಿರುವ ‘ಕಾಳಿ’ ನದಿಯ ಹೆಸರನ್ನು ಇದಕ್ಕೆ ಇಡಲಾಗಿದೆ.

೨. ಭೌಗೋಳಿಕತೆ:
ಇದು ಪಶ್ಚಿಮ ಘಟ್ಟಗಳ ಉತ್ತರ ಭಾಗದಲ್ಲಿದೆ.
ಈ ಅಭಯಾರಣ್ಯವು ದಟ್ಟವಾದ ಎಲೆ ಉದುರಿಸುವ ಕಾಡುಗಳು ಮತ್ತು ನಿತ್ಯಹರಿದ್ವರ್ಣದ ಕಾಡುಗಳಿಂದ ಕೂಡಿದೆ.

೩. ವನ್ಯಜೀವಿಗಳು:
ಹುಲಿ: ಇಲ್ಲಿನ ಪ್ರಮುಖ ಆಕರ್ಷಣೆ.
ಕಪ್ಪು ಚಿರತೆ (Black Panther): ಈ ಅಭಯಾರಣ್ಯವು ಕಪ್ಪು ಚಿರತೆಗಳಿಗೆ ಹೆಚ್ಚು ಪ್ರಸಿದ್ಧವಾಗಿದೆ. ದಟ್ಟವಾದ ಕಾಡು ಇರುವುದರಿಂದ ಇಲ್ಲಿ ಕಪ್ಪು ಚಿರತೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ.
ಇತರ ಪ್ರಾಣಿಗಳು: ಆನೆ, ಕಾಟಿ (Indian Bison), ಚಿರತೆ, ಜಿಂಕೆ, ಮತ್ತು ಹನುಮಾನ್ ಲಂಗೂರ್.
ಪಕ್ಷಿಗಳು: ಗ್ರೇಟ್ ಹಾರ್ನ್‌ಬಿಲ್ (ಮಲಬಾರ್ ಪೈಡ್ ಹಾರ್ನ್‌ಬಿಲ್) ಸೇರಿದಂತೆ ನೂರಾರು ಜಾತಿಯ ಪಕ್ಷಿಗಳಿಗೆ ಇದು ಆಶ್ರಯತಾಣವಾಗಿದೆ.

೪. ನದಿ ಮತ್ತು ಪ್ರವಾಸೋದ್ಯಮ:
ಕಾಳಿ ನದಿ: ಈ ನದಿಯು ಅಭಯಾರಣ್ಯದ ಮಧ್ಯದಲ್ಲಿ ಹರಿಯುತ್ತದೆ.
ಸಾಹಸ ಕ್ರೀಡೆಗಳು: ಇಲ್ಲಿ ರಿವರ್ ರಾಫ್ಟಿಂಗ್ (River Rafting) ಅತ್ಯಂತ ಜನಪ್ರಿಯ. ಜೊತೆಗೆ ಕಯಾಕಿಂಗ್ ಮತ್ತು ಜಂಗಲ್ ಸಫಾರಿಗೂ ಇದು ಹೆಸರುವಾಸಿ.
ಪ್ರಮುಖ ಸ್ಥಳಗಳು: ಸಿನೆರಿ ರಾಕ್, ಕವಳ ಗುಹೆಗಳು ಮತ್ತು ಉಳವಿ ಚನ್ನಬಸವೇಶ್ವರ ದೇವಸ್ಥಾನ ಈ ಭಾಗದ ಪ್ರಮುಖ ಆಕರ್ಷಣೆಗಳು.

೫. ಪರಿಸರ ಮಹತ್ವ:
ಇದು ಯುನೆಸ್ಕೋ (UNESCO) ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿರುವ ಪಶ್ಚಿಮ ಘಟ್ಟಗಳ ಒಂದು ಭಾಗವಾಗಿದೆ. ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಈ ಅಭಯಾರಣ್ಯದ ಪಾತ್ರ ಬಹಳ ದೊಡ್ಡದಿದೆ.

ದಕ್ಷಿಣ ಧ್ರುವದಲ್ಲಿ ಮಾನವ ಹೆಜ್ಜೆ ಇಡುವ ಪ್ರಯತ್ನಕ್ಕೆ ಮುನ್ನುಡಿ: ಚಂದ್ರನ ಪರಿಭ್ರಮಣ ನಡೆಸಿದ ‘ಆರ್ಟೆಮಿಸ್-2’
ಸಂದರ್ಭ:
ನಾಸಾದ ಮಹತ್ವಾಕಾಂಕ್ಷೆಯ ‘ಆರ್ಟಿಮಿಸ್-2’ನ ಓರಿಯೋನ್ ಕೋಶವು ಸೋಮವಾರ ರಾತ್ರಿ ಚಂದ್ರನ ಸುತ್ತ ಐತಿಹಾಸಿಕ ಪರಿಭ್ರಮಣ ನಡೆಸಿದೆ.

  • ನಾಲ್ವರು ಗಗನಯಾನಿಗಳಿದ್ದ ಅಮೆರಿಕದ ಓರಿಯೊನ್ ಕೋಶವು ಚಂದ್ರನ ಸುತ್ತ ಏಳು ಗಂಟೆ ಪರಿಭ್ರಮಣ ಮಾಡಿದ ವೇಳೆ ಭೂಮಿಗೆ ಗೋಚರಿಸದ, ಚಂದ್ರನ ಇನ್ನೊಂದು ಬದಿಯ ಈ ಹಿಂದೆ ಕಂಡಿರದ ಹಲವು ಚಿತ್ರಗಳನ್ನು ಸೆರೆಹಿಡಿದು ನಾಸಾಗೆ ಕಳುಹಿಸುತ್ತಿದೆ.
  • ಐದು ದಶಕಗಳ ಬಳಿಕ ಚಂದ್ರನ ಕಕ್ಷೆಗೆ ನಾಸಾ, ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಗಗನಯಾನಿಗಳನ್ನು ಕಳುಹಿಸಿತ್ತು. ಈ ಪರಿಭ್ರಮಣವು ‘ಅಪೋಲೊ ಯುಗ’ದ ನಂತರ ಚಂದ್ರನಲ್ಲಿ ನಾಸಾದ ಮೊದಲ ಪಯಣವಾಗಿದೆ. ಮುಂದಿನ 2 ವರ್ಷಗಳಲ್ಲಿ ದಕ್ಷಿಣ ಧ್ರುವದಲ್ಲಿ ಮಾನವ ಹೆಜ್ಜೆ ಇಡುವ ಪ್ರಯತ್ನಕ್ಕೆ ಇದು ಮುನ್ನುಡಿ ಬರೆದಿದೆ.
  • 1972ರಲ್ಲಿ ‘ಆಪೋಲೊ-13’ ತಂಡವು ಚಂದ್ರನಲ್ಲಿಗೆ ಪಯಣಿಸಿತ್ತು. 2,48,655 ಮೈಲಿ( 4,00।71 ಕಿಲೋಮೀಟರ್) ದೂರ ಕ್ರಮಿಸಿದ ಅಪೋಲೊದ ದಾಖಲೆಯನ್ನು ‘ಆರ್ಟಿಮಿಸ್-2’ ಮೀರಿದೆ.
  • ‘ಚಂದ್ರನನ್ನು ಈಗ ಬರಿಗಣ್ಣಿನಲ್ಲಿ ನೋಡಬಹುದು ಎಂದು ನನ್ನ ಮನಸ್ಸಿಗೆ ಅನ್ನಿಸಿತು. ಇದು ನಂಬಲಸಾಧ್ಯವಾದುದು ಈ ಪೀಳಿಗೆ ಮತ್ತು ಮುಂದಿನ ಪೀಳಿಗೆ ಈ ದಾಖಲೆಯನ್ನು ಬೇಗ ಮುರಿಯಬೇಕು ಎಂದು ಕೆನಡಾದ ಗಗನಯಾನಿ ಜೆರೆಮಿ ಹ್ಯಾನ್ಸನ್ ಅವರು ರೇಡಿಯೊ ಸಂದೇಶ ರವಾನಿಸಿದ್ದಾರೆ.
  • ‘ಅಪೋಲೊ 13’ರ ದಾಖಲೆಯನ್ನು ಅಳಿಸಿಹಾಕಿದ ನಂತರ ಈ ಗಗನಯಾನಿಗಳು ಈಗಾಗಲೇ ಗುರ್ತಿಸಿರುವ ಚಂದ್ರನ ಎರಡು ಹೊಸ ಕುಳಿಗಳಿಗೆ ಹೆಸರು ಇಡಲು ಅನುಮತಿ ಕೋರಿದರು. ತಾವು ತೆರಳಿದ ಕೋಶದ ಹೆಸರು ಮತ್ತು 2020ರಲ್ಲಿ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದ ಕಮಾಂಡರ್ ರೀಡ್ ವೈಸ್‌ಮನ್ ಅವರ ಪತ್ನಿಯ ಹೆಸರನ್ನು ನಾಮಕರಣ ಮಾಡುವುದಾಗಿ ಹೇಳಿದರು.
  • ಈ ಮನವಿಯಿಂದ ವೈಸ್‌ಮನ್ ಅವರ ಕಣ್ಣಾಲಿಗಳಲ್ಲಿ ನೀರು ತುಂಬಿ ಬಂದವು. ನಾಲ್ವರೂ ಗಗನಯಾನಿಗಳು ಭಾವುಕರಾದರು. ಇಡೀ ದೃಶ್ಯವನ್ನು ಚಿತ್ರಗಳ ರೂಪದಲ್ಲಿ ರೇಡಿಯೊದಲ್ಲಿ ಪ್ರಸಾರ ಮಾಡಲಾಯಿತು.
  • ಚಂದ್ರ ಮತ್ತು ಭೂಮಿಯನ್ನು ಒಂದೇ ಬಾರಿಗೆ ಸೆರೆಹಿಡಿದಿರುವುದಾಗಿ ಗಗನಯಾನಿಗಳು ಹೂನ್‌ನಲ್ಲಿರುವ ವಿಜ್ಞಾನಿಗಳಿಗೆ ವಿವರಣೆ ನೀಡಿದರು.
  • ‘ಕೆಲವು ಶಿಖರಗಳು ಹೊಳೆಯುತ್ತಿದ್ದವು ಹಿಮದಿಂದ ಆವೃತ್ತವಾಗಿದ್ದರೂ ಅವು ಗೋಚರಿಸಿದವು’ ಎಂದು ಪೈಲಟ್ ವಿಕ್ಟರ್ ಗೋವರ್ ಅವರು ಹೇಳಿದರು.
  • ನಿಕಾನ್ ಕಾಮರಾದ ಮೂಲಕ ಚಿತ್ರ ಸೆರೆಹಿಡಿಯಲಾಗಿದೆ ಕೆಲವು ಚಿತ್ರಗಳನ್ನು, ಸೆರೆಹಿಡಿಯಲು ಗಗನಯಾನಿಗಳು ತಮ, ಐಪೋನ್‌ಗಳನ್ನೂ ಬಳಸಿದರು.
  • ಅಮೆರಿಕದ ರೀಡ್ ವೈಸ್‌ಮನ್, ವಿಕ್ಟರ್ ಗೋವರ್. ಕ್ರಿಸ್ಟಿನಾ ಕೋಚ್ ಹಾಗೂ ಕೆನಡಾದ ಜೆರೆಮಿ ಹ್ಯಾನ್ಸನ್ ತಂಡದಲ್ಲಿದ್ದರು. 54 ವರ್ಷಗಳ ಬಳಿಕ ಚಂದ್ರನನ್ನು ಮನುಷ್ಯ ಮತ್ತೊಮ್ಮೆ ಹತ್ತಿರದಿಂದ ನೋಡಿದ ದಾಖಲೆಯನ್ನು ಈ ತಂಡ ಬರೆದಿದೆ.

ಪತ್ರಿಕೆ-V: ಸಾಮಾನ್ಯ ಅಧ್ಯಯನ-4

Source: Prajavani

ಕೆಎಎಸ್ ಪ್ರಚಲಿತ ವಿದ್ಯಮಾನಗಳು

ಕೆ.ಎ.ಎಸ್ ಪ್ರಚಲಿತ ವಿದ್ಯಮಾನಗಳು: ಪ್ರಚಲಿತ ವಿದ್ಯಮಾನಗಳು ಕೆ.ಪಿ.ಎಸ್.ಸಿ ಪಠ್ಯಕ್ರಮದ ‘ಜೀವಂತ ನಾಡಿಮಿಡಿತ’ವಿದ್ದಂತೆ. ಇದು ಕೇವಲ ಪ್ರತ್ಯೇಕವಾಗಿ ನೆನಪಿಡಬೇಕಾದ ವಿಷಯವಲ್ಲ; ಬದಲಿಗೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳೆರಡರಲ್ಲೂ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ನೀತಿಶಾಸ್ತ್ರವನ್ನು ಒಂದಕ್ಕೊಂದು ಬೆಸೆಯುವ ಒಂದು ಚಲನಶೀಲ ಕೊಂಡಿಯಾಗಿದೆ. ಮುಂಬರುವ ಪರೀಕ್ಷೆಗಳ ಸಂದರ್ಭದಲ್ಲಿ, ಕೇವಲ “ಸುದ್ದಿ ಓದುವುದರಿಂದ” “ಸುದ್ದಿಯ ಮೂಲಕ ಪಠ್ಯಕ್ರಮವನ್ನು ಅಭ್ಯಾಸ ಮಾಡುವುದು” ಎಂಬ ಹಂತಕ್ಕೆ ಬದಲಾಗುವುದು ಒಬ್ಬ ಗಂಭೀರ ಅಭ್ಯರ್ಥಿಯನ್ನು ಸಾಮಾನ್ಯ ಓದುಗನಿಂದ ಪ್ರತ್ಯೇಕಿಸುವ ಪ್ರಮುಖ ಬದಲಾವಣೆಯಾಗಿದೆ.

“ಪಠ್ಯಕ್ರಮಕ್ಕೆ ಮೊದಲ ಆದ್ಯತೆ” ಎಂಬ ತತ್ವ
ಕೆ.ಪಿ.ಎಸ್.ಸಿ ಪಠ್ಯಕ್ರಮಕ್ಕೆ ಕಟ್ಟುನಿಟ್ಟಾಗಿ ಹೊಂದಿಕೆಯಾಗುವ ಪ್ರಚಲಿತ ವಿದ್ಯಮಾನಗಳ ಮಾದರಿಯನ್ನು ಅನುಸರಿಸುವ ಮೂಲಕ, ನೀವು ದಿನಪತ್ರಿಕೆ ಓದಲು ವ್ಯಯಿಸುವ ಪ್ರತಿ ಗಂಟೆಯೂ ನಿಮ್ಮ ಪರೀಕ್ಷೆಯ ಶ್ರೇಣಿಯನ್ನು (Rank) ಉತ್ತಮಪಡಿಸಲು ಪೂರಕವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

ಪೂರ್ವಭಾವಿ ಪರೀಕ್ಷೆ

ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು

ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು

ವಿಶ್ವ 10ಕೆ ಓಟ: ಬ್ಲಾಂಕಾ ಗ್ಲಾಸಿಕ್ ರಾಯಭಾರಿ
ಸಂದರ್ಭ: ದಿಗ್ಗಜ ಹೈಜಂಪ್ ಅಸ್ಟ್ರೀಟ್, ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತರಾದ ಬ್ಯಾಂಕಾ ಪ್ಲಾಸಿಕ್ ಅವರು ಇದೇ 26ರಂದು ‘ಸಿಲಿಕಾನ್ ಸಿಟಿ’ಯಲ್ಲಿ ನಡೆಯುವ ‘ಟಿಸಿಎಸ್ ವಿಶ್ವ 10ಕೆ ಬೆಂಗಳೂರು’ ಓಟದ ರಾಯಭಾರಿಯಾಗಿದ್ದಾರೆ.

  • ವಿಶ್ವ ಅಥ್ಲೆಟಿಕ್ಸ್ನಿಂದ ‘ಗೋಲ್ಡ್ ಲೇಬಲ್ ರೇಸ್’ ಮಾನ್ಯತೆ ಪಡೆದಿರುವ 18ನೇ ಆವೃತ್ತಿಯ ಓಟದ ಸ್ಪರ್ಧೆಯು ಒಟ್ಟು ₹1.97 ಕೋಟಿ ಬಹುಮಾನ ಮೊತ್ತವನ್ನು ಒಳಗೊಂಡಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಖ್ಯಾತನಾಮ ಅಥ್ಲೆಟ್‌ಗಳು ಕಣಕ್ಕಳಿಯಲಿದ್ದಾರೆ.
  • 2008ರ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ, 2016ರ ರಿಯೊ ಕೂಟದಲ್ಲಿ ಕಂಚಿನ ಪದಕ ಗೆದ್ದಿರುವ ಪ್ರೊವೇಷ್ಯಾದ ವ್ಯಾಸಿಕ್ ಅವರು ವಿಶ್ವ ಚಾಂಪಿಯನ್‌ಷಿಪ್ ಮತ್ತು ವಿಶ್ವ ಒಳಾಂಗಣ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. 2009ರಲ್ಲಿ ಅವರು ಸಾಧಿಸಿದ 2.08 ಮೀಟರ್ ಜಿಗಿತವು ಪ್ರೊವೇಷ್ಯಾದ ರಾಷ್ಟ್ರೀಯ ದಾಖಲೆಯಾಗಿ ಉಳಿದಿದೆ.
  • ‘ವಿಶ್ವ 10ಕೆ 18ನೇ ಆವೃತ್ತಿಯ ಭಾಗವಾಗಲು ನನಗೆ ಹೆಮ್ಮೆ ಇದೆ. ಒಟದ ಮೂಲಕ ಸಾವಿರಾರು ಜನರನ್ನು ಒಟ್ಟುಗೂಡಿಸುವ ಈ ಕಾರ್ಯಕ್ರಮ ನಿಜವಾಗಿಯೂ ಸ್ಫೂರ್ತಿದಾಯಕ ಮತ್ತು ಶಕ್ತಿಯುತವಾಗಿದೆ. ಒಟವು ನಮ್ಮನ್ನು ದೈಹಿಕವಾಗಿ ಸಕ್ರಿಯವಾಗಿಸುವ ಜೊತೆಗೆ ಮಾನಸಿಕವಾಗಿ ಸದೃಢಗೊಳಿಸುತ್ತದೆ’ ಎಂದು ಕ್ಲಾಸಿಕ್ ಹೇಳಿದ್ದಾರೆ.


ಮುಖ್ಯ ಪರೀಕ್ಷೆ

ಪತ್ರಿಕೆ-I: ಪ್ರಬಂಧಗಳು

ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ

ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ

ಪತ್ರಿಕೆ-II: ಸಾಮಾನ್ಯ ಅಧ್ಯಯನ-1

ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶದ ಆರ್ಥಿಕತೆಯಲ್ಲಿ ಹಣದ ಪೂರೈಕೆ ಮತ್ತು ಬಡ್ಡಿದರಗಳನ್ನು ನಿಯಂತ್ರಿಸಲು ಬಳಸುವ ಕ್ರಮಗಳೇ ವಿತ್ತೀಯ ನೀತಿ (Monetary Policy).
ಪ್ರಸ್ತುತ ಏಪ್ರಿಲ್ 2026ರ ಸಂದರ್ಭಕ್ಕೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿ ಇಲ್ಲಿದೆ:

  1. ಇತ್ತೀಚಿನ ಬೆಳವಣಿಗೆ (ಏಪ್ರಿಲ್ 2026)
    ಆರ್‌ಬಿಐನ ಹಣಕಾಸು ನೀತಿ ಸಮಿತಿಯು (MPC) ಏಪ್ರಿಲ್ 6 ರಿಂದ 8, 2026 ರವರೆಗೆ ತನ್ನ ಮೊದಲ ದ್ವೈಮಾಸಿಕ ಸಭೆಯನ್ನು ನಡೆಸುತ್ತಿದೆ. ಸದ್ಯದ ಮಾರುಕಟ್ಟೆ ವಿಶ್ಲೇಷಣೆಗಳ ಪ್ರಕಾರ:
    ರೆಪೋ ದರ (Repo Rate): ಶೇ. 5.25 ರಷ್ಟು ಸ್ಥಿರವಾಗಿರುವ ಸಾಧ್ಯತೆಯಿದೆ.
    ಕಾರಣ: ಜಾಗತಿಕ ಅನಿಶ್ಚಿತತೆ, ಪಶ್ಚಿಮ ಏಷ್ಯಾದ ಸಂಘರ್ಷ ಮತ್ತು ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ಆರ್‌ಬಿಐ ‘ಕಾದು ನೋಡುವ’ ತಂತ್ರ ಅನುಸರಿಸುತ್ತಿದೆ.
  2. ಪ್ರಮುಖ ಬಡ್ಡಿದರಗಳು (ಏಪ್ರಿಲ್ 2026 ರಂತೆ)
ಅಂಶದರ (%)ವಿವರಣೆ
ರೆಪೋ ದರ5.25%ಆರ್‌ಬಿಐ ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ.
ರಿವರ್ಸ್ ರೆಪೋ ದರ3.35%ಬ್ಯಾಂಕುಗಳು ಆರ್‌ಬಿಐನಲ್ಲಿ ಇಡುವ ಹಣಕ್ಕೆ ಸಿಗುವ ಬಡ್ಡಿ.
SDF ದರ5.00%ಸ್ಟ್ಯಾಂಡಿಂಗ್ ಡೆಪಾಸಿಟ್ ಫೆಸಿಲಿಟಿ.
MSF & ಬ್ಯಾಂಕ್ ದರ5.50%ತುರ್ತು ಸಂದರ್ಭದಲ್ಲಿ ಬ್ಯಾಂಕುಗಳು ಪಡೆಯುವ ಸಾಲದ ದರ.
  1. ವಿತ್ತೀಯ ನೀತಿಯ ಮುಖ್ಯ ಉದ್ದೇಶಗಳು
    ಬೆಲೆ ಸ್ಥಿರತೆ (Price Stability): ಹಣದುಬ್ಬರವನ್ನು (Inflation) ನಿಯಂತ್ರಣದಲ್ಲಿಡುವುದು. ಕೇಂದ್ರ ಸರ್ಕಾರವು 2026 ರಿಂದ 2031 ರ ಅವಧಿಗೆ ಹಣದುಬ್ಬರ ಗುರಿಯನ್ನು ಶೇ. 4 (+/- 2%) ಎಂದು ನಿಗದಿಪಡಿಸಿದೆ.
    ಆರ್ಥಿಕ ಬೆಳವಣಿಗೆ (Economic Growth): ಕೈಗಾರಿಕೆ ಮತ್ತು ಸೇವಾ ವಲಯಕ್ಕೆ ಸುಲಭವಾಗಿ ಸಾಲ ಸಿಗುವಂತೆ ಮಾಡುವುದು.
    ವಿನಿಮಯ ದರ ಸ್ಥಿರತೆ: ರೂಪಾಯಿ ಮೌಲ್ಯವು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿಯದಂತೆ ನೋಡಿಕೊಳ್ಳುವುದು.
  2. ವಿತ್ತೀಯ ನೀತಿಯ ವಿಧಗಳು
    ವಿಸ್ತರಣಾ ನೀತಿ (Expansionary Policy): ಆರ್ಥಿಕ ಹಿಂಜರಿತವಿದ್ದಾಗ ಬಡ್ಡಿದರಗಳನ್ನು ಕಡಿಮೆ ಮಾಡಿ ಮಾರುಕಟ್ಟೆಯಲ್ಲಿ ಹಣದ ಹರಿವು ಹೆಚ್ಚಿಸುವುದು.
    ಸಂಕೋಚನ ನೀತಿ (Contractionary Policy): ಹಣದುಬ್ಬರ ಹೆಚ್ಚಾದಾಗ ಬಡ್ಡಿದರಗಳನ್ನು ಏರಿಸಿ ಮಾರುಕಟ್ಟೆಯಿಂದ ಹಣವನ್ನು ಹಿಂತೆಗೆದುಕೊಳ್ಳುವುದು.
    ಗಮನಿಸಿ: ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ನೇತೃತ್ವದ ಸಮಿತಿಯು ಏಪ್ರಿಲ್ 8 ರಂದು ಅಧಿಕೃತವಾಗಿ ದರ ಘೋಷಣೆ ಮಾಡಲಿದೆ.

ಪತ್ರಿಕೆ-III: ಸಾಮಾನ್ಯ ಅಧ್ಯಯನ-2

ಪತ್ರಿಕೆ-IV: ಸಾಮಾನ್ಯ ಅಧ್ಯಯನ-3

ಭಾರತ ಮತ್ತು ವಿಶ್ವದಲ್ಲಿ ಯೂರಿಯಾ ಉತ್ಪಾದನೆ (2026ರ ಸ್ಥಿತಿಗತಿ)

  1. ಭಾರತದಲ್ಲಿ ಯೂರಿಯಾ ಉತ್ಪಾದನೆ (2026ರ ವರದಿ)
    ಭಾರತವು ವಿಶ್ವದ ಎರಡನೇ ಅತಿದೊಡ್ಡ ಯೂರಿಯಾ ಗ್ರಾಹಕ ಮತ್ತು ಉತ್ಪಾದಕ ದೇಶವಾಗಿದೆ. 2026-27ರ ಅಂತ್ಯದ ವೇಳೆಗೆ ಯೂರಿಯಾದಲ್ಲಿ “ಆತ್ಮನಿರ್ಭರತೆ” (ಸ್ವಾವಲಂಬನೆ) ಸಾಧಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ.
    ಉತ್ಪಾದನಾ ಸಾಮರ್ಥ್ಯ: ಭಾರತವು ತನ್ನ ದೇಶೀಯ ಯೂರಿಯಾ ಉತ್ಪಾದನೆಯನ್ನು 2015ರಲ್ಲಿ ಇದ್ದ ~22.5 ಮಿಲಿಯನ್ ಮೆಟ್ರಿಕ್ ಟನ್‌ಗಳಿಂದ (LMT) 2026ರ ವೇಳೆಗೆ 31 ಮಿಲಿಯನ್ ಮೆಟ್ರಿಕ್ ಟನ್‌ಗಿಂತಲೂ ಹೆಚ್ಚು ಹೆಚ್ಚಿಸಿದೆ.
    “ಶೇ. 90 ಪೂರೈಕೆ”ಯ ಕಾರ್ಯತಂತ್ರ: ಪೆಟ್ರೋಲಿಯಂ ಸಚಿವಾಲಯವು ಯೂರಿಯಾ ಸ್ಥಾವರಗಳಿಗೆ ನೈಸರ್ಗಿಕ ಅನಿಲ (LNG) ಪೂರೈಕೆಯನ್ನು ಅವುಗಳ ಸಾಮರ್ಥ್ಯದ ಶೇ. 90ಕ್ಕೆ ಹೆಚ್ಚಿಸಿದೆ (ಸಂಘರ್ಷದ ಸಮಯದಲ್ಲಿ ಇದು ಶೇ. 60ಕ್ಕೆ ಇಳಿದಿತ್ತು). ಜೂನ್‌ನಲ್ಲಿ ಪ್ರಾರಂಭವಾಗುವ ಖಾರಿಫ್ ಹಂಗಾಮಿಗೆ ಮುಂಚಿತವಾಗಿ ದೇಶೀಯ ಘಟಕಗಳು ಗರಿಷ್ಠ ಮಟ್ಟದಲ್ಲಿ ಕಾರ್ಯನಿರ್ವಹಿಸಲು ಇದು ಸಹಕಾರಿಯಾಗಿದೆ.
    ಕಚ್ಚಾವಸ್ತುಗಳ ಪೂರೈಕೆ ಮೂಲ ಬದಲಾವಣೆ: ಭಾರತದ ಶೇ. 80ರಷ್ಟು ಯೂರಿಯಾವನ್ನು ಎಲ್‌ಎನ್‌ಜಿ (LNG) ಬಳಸಿ ಉತ್ಪಾದಿಸಲಾಗುತ್ತದೆ. ಪಶ್ಚಿಮ ಏಷ್ಯಾದ ಯುದ್ಧದ ಹಿನ್ನೆಲೆಯಲ್ಲಿ, ಭಾರತವು ತನ್ನ ಎಲ್‌ಎನ್‌ಜಿ ಆಮದನ್ನು ಕತಾರ್‌ನಿಂದ ಅಮೆರಿಕ, ಆಸ್ಟ್ರೇಲಿಯಾ ಮತ್ತು ರಷ್ಯಾಕ್ಕೆ ಬದಲಾಯಿಸಿದೆ. ವ್ಯಾಪಾರ ಮಾರ್ಗಗಳ ಅಡಚಣೆಯನ್ನು ತಪ್ಪಿಸಲು ‘ಸ್ಪಾಟ್ ಮಾರ್ಕೆಟ್’ ಮೂಲಕ ಇವುಗಳನ್ನು ಖರೀದಿಸಲಾಗುತ್ತಿದೆ.
    ಹೊಸ ಘಟಕಗಳು: ಐದು ಪ್ರಮುಖ ಘಟಕಗಳ ಪುನಶ್ಚೇತನ (ರಾಮಗುಂಡಂ, ತಾಲ್ಚರ್, ಗೋರಖ್‌ಪುರ, ಸಿಂದ್ರಿ ಮತ್ತು ಬರೌನಿ) ಈ ಉತ್ಪಾದನಾ ಸಾಮರ್ಥ್ಯದ ಹೆಚ್ಚಳಕ್ಕೆ ಬೆನ್ನೆಲುಬಾಗಿ ನಿಂತಿವೆ.
  2. ವಿಶ್ವ ಯೂರಿಯಾ ಉತ್ಪಾದನೆ (2026ರ ಅಂದಾಜು)
    2026ರಲ್ಲಿ ಜಾಗತಿಕ ಯೂರಿಯಾ ಮಾರುಕಟ್ಟೆಯ ಮೌಲ್ಯ ಅಂದಾಜು 50.7 ಬಿಲಿಯನ್ ಡಾಲರ್ ಆಗಿದೆ. ನೈಸರ್ಗಿಕ ಅನಿಲ ಸಮೃದ್ಧವಾಗಿರುವ ದೇಶಗಳಲ್ಲಿ ಉತ್ಪಾದನೆ ಕೇಂದ್ರೀಕೃತವಾಗಿದೆ.

ಜಾಗತಿಕ ಪ್ರಮುಖ ಉತ್ಪಾದಕರು (2026)

ಶ್ರೇಣಿದೇಶವಾರ್ಷಿಕ ಉತ್ಪಾದನೆ (ಅಂದಾಜು)ಪ್ರಮುಖ ಲಕ್ಷಣಗಳು
1ಚೀನಾ~55 ಮಿಲಿಯನ್ ಟನ್ಅತಿದೊಡ್ಡ ಉತ್ಪಾದಕ; ತನ್ನ ಆಹಾರ ಭದ್ರತೆಗೆ ಆದ್ಯತೆ ನೀಡಲು ರಫ್ತಿನ ಮೇಲೆ ನಿರ್ಬಂಧ ಹೇರಿದೆ.
2ಭಾರತ~32-34 ಮಿಲಿಯನ್ ಟನ್ಹೆಚ್ಚಿನ ಉತ್ಪಾದನೆ ಮತ್ತು ಬಳಕೆ; 2027ರ ವೇಳೆಗೆ ಶೂನ್ಯ ಆಮದು ಗುರಿ ಹೊಂದಿದೆ.
3ಅಮೆರಿಕ~18-19 ಮಿಲಿಯನ್ ಟನ್ಅಗ್ಗದ ಶೇಲ್ ಗ್ಯಾಸ್‌ನಿಂದಾಗಿ ಪ್ರಮುಖ ಉತ್ಪಾದಕ; ಈಗ ಭಾರತಕ್ಕೆ ಪ್ರಮುಖ ರಫ್ತುದಾರ.
4ಮಧ್ಯಪ್ರಾಚ್ಯ~26 ಮಿಲಿಯನ್ ಟನ್(ಸೌದಿ, ಕತಾರ್, ಓಮನ್, ಇರಾನ್). ರಫ್ತು ಆಧಾರಿತ, ಆದರೆ ಪ್ರಸ್ತುತ ಹಡಗು ಸಂಚಾರದ ಅಡಚಣೆ ಎದುರಿಸುತ್ತಿದೆ.
5ರಷ್ಯಾ~11 ಮಿಲಿಯನ್ ಟನ್ಪ್ರಮುಖ ರಫ್ತುದಾರ; ಭಾರತವು ಪೂರೈಕೆಯನ್ನು ಸ್ಥಿರಗೊಳಿಸಲು ರಷ್ಯಾದಿಂದ ಆಮದನ್ನು ಹೆಚ್ಚಿಸಿದೆ.
  1. 2026ರ ಪ್ರಮುಖ ಸವಾಲುಗಳು ಮತ್ತು ಪ್ರವೃತ್ತಿಗಳು
    ಭೂ-ರಾಜಕೀಯ ಪ್ರಭಾವ: ಪಶ್ಚಿಮ ಏಷ್ಯಾದ ಸಂಘರ್ಷವು ಜಾಗತಿಕ ಯೂರಿಯಾ ಬೆಲೆಗಳಲ್ಲಿ ಶೇ. 30-40ರಷ್ಟು ಏರಿಕೆಗೆ ಕಾರಣವಾಗಿದೆ. ಇದು ಭಾರತದಂತಹ ದೇಶಗಳು ತಮ್ಮ ರಸಗೊಬ್ಬರ ಸಬ್ಸಿಡಿ ಬಜೆಟ್ ಅನ್ನು ಹೆಚ್ಚಿಸಲು ಪ್ರೇರೇಪಿಸಿದೆ (2026-27ಕ್ಕೆ ಅಂದಾಜು ₹1.26 ಲಕ್ಷ ಕೋಟಿ).
    ‘ಸ್ಪಾಟ್ ಮಾರ್ಕೆಟ್’ ಕಡೆಗೆ ಒಲವು: ಅರಬ್ ರಾಷ್ಟ್ರಗಳೊಂದಿಗಿನ ದೀರ್ಘಾವಧಿಯ ಒಪ್ಪಂದಗಳ ಬದಲಾಗಿ, ಭಾರತದಂತೆ ಅನೇಕ ರಾಷ್ಟ್ರಗಳು ಅಮೆರಿಕ ಮತ್ತು ಆಸ್ಟ್ರೇಲಿಯಾದಿಂದ ಸ್ಪಾಟ್ ಮಾರ್ಕೆಟ್ ಮೂಲಕ ಅನಿಲ ಖರೀದಿಸುತ್ತಿವೆ.
    ಹಸಿರು ಯೂರಿಯಾ (Green Urea): ನೈಸರ್ಗಿಕ ಅನಿಲದ ಬದಲು ಹಸಿರು ಹೈಡ್ರೋಜನ್ ಬಳಸಿ ಯೂರಿಯಾ ತಯಾರಿಸುವ ಪ್ರವೃತ್ತಿ ಬೆಳೆಯುತ್ತಿದೆ, ಆದರೆ ಇದು ಪ್ರಸ್ತುತ ಒಟ್ಟು ಉತ್ಪಾದನೆಯ ಶೇ. 1ಕ್ಕಿಂತ ಕಡಿಮೆ ಇದೆ.
    ನ್ಯಾನೋ ಯೂರಿಯಾ: ದ್ರವ ರೂಪದ ನ್ಯಾನೋ ಯೂರಿಯಾ ತಂತ್ರಜ್ಞಾನದಲ್ಲಿ ಭಾರತವು ಜಗತ್ತಿಗೆ ಮುಂಚೂಣಿಯಲ್ಲಿದೆ. ಇದು ಸಾಂಪ್ರದಾಯಿಕ ಯೂರಿಯಾ ಚೀಲಗಳ ಅಗತ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಸಾರಿಗೆ ವೆಚ್ಚವನ್ನು ಉಳಿಸುತ್ತದೆ.

ಪತ್ರಿಕೆ-V: ಸಾಮಾನ್ಯ ಅಧ್ಯಯನ-4

ಕೆಎಎಸ್ ಪ್ರಚಲಿತ ವಿದ್ಯಮಾನಗಳು

ಕೆ.ಎ.ಎಸ್ ಪ್ರಚಲಿತ ವಿದ್ಯಮಾನಗಳು: ಪ್ರಚಲಿತ ವಿದ್ಯಮಾನಗಳು ಕೆ.ಪಿ.ಎಸ್.ಸಿ ಪಠ್ಯಕ್ರಮದ ‘ಜೀವಂತ ನಾಡಿಮಿಡಿತ’ವಿದ್ದಂತೆ. ಇದು ಕೇವಲ ಪ್ರತ್ಯೇಕವಾಗಿ ನೆನಪಿಡಬೇಕಾದ ವಿಷಯವಲ್ಲ; ಬದಲಿಗೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳೆರಡರಲ್ಲೂ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ನೀತಿಶಾಸ್ತ್ರವನ್ನು ಒಂದಕ್ಕೊಂದು ಬೆಸೆಯುವ ಒಂದು ಚಲನಶೀಲ ಕೊಂಡಿಯಾಗಿದೆ. ಮುಂಬರುವ ಪರೀಕ್ಷೆಗಳ ಸಂದರ್ಭದಲ್ಲಿ, ಕೇವಲ “ಸುದ್ದಿ ಓದುವುದರಿಂದ” “ಸುದ್ದಿಯ ಮೂಲಕ ಪಠ್ಯಕ್ರಮವನ್ನು ಅಭ್ಯಾಸ ಮಾಡುವುದು” ಎಂಬ ಹಂತಕ್ಕೆ ಬದಲಾಗುವುದು ಒಬ್ಬ ಗಂಭೀರ ಅಭ್ಯರ್ಥಿಯನ್ನು ಸಾಮಾನ್ಯ ಓದುಗನಿಂದ ಪ್ರತ್ಯೇಕಿಸುವ ಪ್ರಮುಖ ಬದಲಾವಣೆಯಾಗಿದೆ.

“ಪಠ್ಯಕ್ರಮಕ್ಕೆ ಮೊದಲ ಆದ್ಯತೆ” ಎಂಬ ತತ್ವ
ಕೆ.ಪಿ.ಎಸ್.ಸಿ ಪಠ್ಯಕ್ರಮಕ್ಕೆ ಕಟ್ಟುನಿಟ್ಟಾಗಿ ಹೊಂದಿಕೆಯಾಗುವ ಪ್ರಚಲಿತ ವಿದ್ಯಮಾನಗಳ ಮಾದರಿಯನ್ನು ಅನುಸರಿಸುವ ಮೂಲಕ, ನೀವು ದಿನಪತ್ರಿಕೆ ಓದಲು ವ್ಯಯಿಸುವ ಪ್ರತಿ ಗಂಟೆಯೂ ನಿಮ್ಮ ಪರೀಕ್ಷೆಯ ಶ್ರೇಣಿಯನ್ನು (Rank) ಉತ್ತಮಪಡಿಸಲು ಪೂರಕವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

ಕೆಎಎಸ್ ಪ್ರಚಲಿತ ವಿದ್ಯಮಾನಗಳು

ಕೆ.ಎ.ಎಸ್ ಪ್ರಚಲಿತ ವಿದ್ಯಮಾನಗಳು: ಪ್ರಚಲಿತ ವಿದ್ಯಮಾನಗಳು ಕೆ.ಪಿ.ಎಸ್.ಸಿ ಪಠ್ಯಕ್ರಮದ ‘ಜೀವಂತ ನಾಡಿಮಿಡಿತ’ವಿದ್ದಂತೆ. ಇದು ಕೇವಲ ಪ್ರತ್ಯೇಕವಾಗಿ ನೆನಪಿಡಬೇಕಾದ ವಿಷಯವಲ್ಲ; ಬದಲಿಗೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳೆರಡರಲ್ಲೂ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ನೀತಿಶಾಸ್ತ್ರವನ್ನು ಒಂದಕ್ಕೊಂದು ಬೆಸೆಯುವ ಒಂದು ಚಲನಶೀಲ ಕೊಂಡಿಯಾಗಿದೆ. ಮುಂಬರುವ ಪರೀಕ್ಷೆಗಳ ಸಂದರ್ಭದಲ್ಲಿ, ಕೇವಲ “ಸುದ್ದಿ ಓದುವುದರಿಂದ” “ಸುದ್ದಿಯ ಮೂಲಕ ಪಠ್ಯಕ್ರಮವನ್ನು ಅಭ್ಯಾಸ ಮಾಡುವುದು” ಎಂಬ ಹಂತಕ್ಕೆ ಬದಲಾಗುವುದು ಒಬ್ಬ ಗಂಭೀರ ಅಭ್ಯರ್ಥಿಯನ್ನು ಸಾಮಾನ್ಯ ಓದುಗನಿಂದ ಪ್ರತ್ಯೇಕಿಸುವ ಪ್ರಮುಖ ಬದಲಾವಣೆಯಾಗಿದೆ.

“ಪಠ್ಯಕ್ರಮಕ್ಕೆ ಮೊದಲ ಆದ್ಯತೆ” ಎಂಬ ತತ್ವ
ಕೆ.ಪಿ.ಎಸ್.ಸಿ ಪಠ್ಯಕ್ರಮಕ್ಕೆ ಕಟ್ಟುನಿಟ್ಟಾಗಿ ಹೊಂದಿಕೆಯಾಗುವ ಪ್ರಚಲಿತ ವಿದ್ಯಮಾನಗಳ ಮಾದರಿಯನ್ನು ಅನುಸರಿಸುವ ಮೂಲಕ, ನೀವು ದಿನಪತ್ರಿಕೆ ಓದಲು ವ್ಯಯಿಸುವ ಪ್ರತಿ ಗಂಟೆಯೂ ನಿಮ್ಮ ಪರೀಕ್ಷೆಯ ಶ್ರೇಣಿಯನ್ನು (Rank) ಉತ್ತಮಪಡಿಸಲು ಪೂರಕವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

ಪೂರ್ವಭಾವಿ ಪರೀಕ್ಷೆ

ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು

ಪೋಕ್ಸ್ ಪ್ರಕರಣ: ಖಾಸಗಿ ಆಸ್ಪತ್ರೆಗಳಿಗೂ ವರದಿ ಕಡ್ಡಾಯ
ಸಂದರ್ಭ: ಬಾಲ ಗರ್ಭಿಣಿ ಪ್ರಕರಣಗಳ ವಿವರವನ್ನು ಖಾಸಗಿ ಆಸ್ಪತ್ರೆಗಳೂ ಕಡ್ಡಾಯವಾಗಿ ಪೋಟೊ ಕಾಯ್ದೆಯಡಿ ವರದಿ ಮಾಡಬೇಕು ಎಂದು ಸೂಚಿಸಿರುವ ಆರೋಗ್ಯ ಇಲಾಖೆ, ಒಂದು ವೇಳೆ ವರದಿ ಮಾಡಲು ವಿಫಲವಾದಲ್ಲಿ ವೈದ್ಯರು ಮತ್ತು ಆಸ್ಪತ್ರೆಗಳ ವಿರುದ್ಧ ಕಾನೂನಿನಡಿ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.

  • ಪೋಕ್ಕೂ ಕಾಯ್ದೆ ಅನ್ವಯ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ, ಬಾಲ ಗರ್ಭಿಣಿ ಪ್ರಕರಣಗಳ ವಿವರವನ್ನು ಕಾನೂನುಬದ್ಧವಾಗಿ ವರದಿ ಮಾಡಬೇಕಿದೆ. ಯಾವುದೇ ಬಾಲ ಗರ್ಭಿಣಿ ಖಾಸಗಿ ಆಸ್ಪತ್ರೆಗೆ ದಾಖಲಾದಲ್ಲಿ ಸಂಬಂಧಿತ ವೈದ್ಯರು ತಕ್ಷಣ ಸಮೀಪದ ವಿಶೇಷ ಬಾಲ ನ್ಯಾಯ ಪೊಲೀಸ್ ಘಟಕ ಅಥವಾ ಪೊಲೀಸ್ ಠಾಣೆಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು ಎಂದು ತಿಳಿಸಿದೆ.
  • ಇಂತಹ ಪ್ರಕರಣಗಳು ದಾಖಲಾದ ಸಂದರ್ಭದಲ್ಲಿ ತಕ್ಷಣವೇ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಕ್ಕೆ ಕರೆ ಮಾಡಿ, ಮಾಹಿತಿ ನೀಡಬೇಕು. ಇದರಿಂದ ರಕ್ಷಣಾತ್ಮಕ ಮತ್ತು ಪುನರ್ವಸತಿ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದೆ.
  • ಖಾಸಗಿ ಆಸ್ಪತ್ರೆಗಳು ಪೋಕ್ಸ್ ಪ್ರಕರಣದ ವಿವರಗಳನ್ನು ಸೂಕ್ತವಾಗಿ ದಾಖಲಿಸಬೇಕು. ವೈದ್ಯಕೀಯ ದಾಖಲೆಗಳನ್ನು ಕಾನೂನುಬದ್ಧವಾಗಿ ಸಂಗ್ರಹಿಸಬೇಕು ರೋಗಿಯ ಗೋಪ್ಯತೆಯನ್ನು ಕಾಪಾಡಬೇಕು ತನಿಖಾ ಅಧಿಕಾರಿಗೆ ಅಗತ್ಯ ಸಹಕಾರ ನೀಡಬೇಕು. ಎಲ್ಲ ಖಾಸಗಿ ಆಸ್ಪತ್ರೆಗಳು ತಮ್ಮ ವೈದ್ಯರು ಹಾಗೂ ಸಿಬ್ಬಂದಿಗೆ ಪೋಟ್ರೊ ಕಾಯ್ದೆಯ ವಿಧಿನಿಯಮಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸೂಚಿಸಲಾಗಿದೆ.

ಎನ್ಸಿಇಆರ್ಟಿಗೆ ಡೀಮ್ಸ್ ವಿಶ್ವವಿದ್ಯಾಲಯ ಸ್ಥಾನಮಾನ
ಸಂದರ್ಭ: ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್ ಸಿಇಆರ್ಟಿ) ಮತ್ತು ಅದರ ಆರು ಘಟಕಗಳಿಗೆ ಶಿಕ್ಷಣ ಸಚಿವಾಲಯವು ವಿಶಿಷ್ಟ ವರ್ಗದಡಿ ಡೀಮ್ಸ್ ವಿಶ್ವವಿದ್ಯಾಲಯ ಸ್ನಾನಮಾನವನ್ನು ನೀಡಿದೆ.

  • ಆ ಮೂಲಕ ಎನ್‌ಸಿಇಆರ್‌ಟಿಯ ಅಧಿಕಾರವನ್ನು ವಿಸ್ತರಿಸಲಾಗಿದೆ ಮತ್ತು ಅದನ್ನು ಯುಜಿಸಿ ವ್ಯಾಪ್ತಿಗೆ ತರಲಾಗಿದೆ. ಜೊತೆಗೆ ಎನ್‌ಸಿಇಆರ್‌ಟಿ ತನ್ನದೇ ಆದ ಕೋರ್ಸ್‌ಗಳನ್ನು ವಿನ್ಯಾಸಗೊಳಿಸಲು, ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ನೀಡಲು ಸಾಧ್ಯವಾಗುತ್ತದೆ.
  • ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಸಲಹೆಯ ಮೇರೆಗೆ ಶಿಕ್ಷಣ ಸಚಿವಾಲಯವು ಈ ಸ್ನಾನಮಾನ ನೀಡಿದೆ ಎಂದು ಪ್ರಕಟಣೆ ತಿಳಿಸಿದೆ.

ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು

ಸಂಜೀವಿನಿ’ಗೆ ತೊಡಕಾದ ನಿರಾಸಕ್ತಿ
ಸಂದರ್ಭ: ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ ಒಪ್ಪಿಕೊಳ್ಳಲು ಬಹುತೇಕ ಖಾಸಗಿ ಆಸ್ಪತ್ರೆಗಳು ನಿರಾಸಕ್ತಿ ತೋರುತ್ತಿರುವುದು ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರ ನಗದುರಹಿತ ಚಿಕಿತ್ಸೆಗೆ ತೊಡಕಾಗಿದೆ.

  • ರಾಜ್ಯ ಸರ್ಕಾರ ಹಲವು ವರ್ಷಗಳ ಹಿಂದೆಯೇ ಯೋಜನೆ ರೂಪಿಸಿತ್ತಾದರೂ 2025ರ ಅ.1ರಿಂದ ಯೋಜನೆಯನ್ನು ಅಧಿಕೃತವಾಗಿ ಜಾರಿಗೊಳಿಸಲಾಗಿದೆ. ಯೋಜನೆ ಜಾರಿಗೂ ಮೊದಲು ಒಂದು ಸಾವಿರಕ್ಕೂ ಹೆಚ್ಚು ಆಸ್ಪತ್ರೆಗಳು ನಗದು ರಹಿತ ಚಿಕಿತ್ಸೆ ನೀಡಲು ಸರ್ಕಾರದ ಜತೆ ಒಪ್ಪಂದಮಾಡಿಕೊಳ್ಳುವ ಕುರಿತು ಭರವಸೆ ನೀಡಿದ್ದವು.
  • ಆದರೆ, ಯೋಜನೆ ಆರಂಭವಾಗಿ ಆರು ತಿಂಗಳು ಕಳೆದರೂ ಯೋಜನೆ ಅಳವಡಿಸಿ ಕೊಂಡ ಆಸ್ಪತ್ರೆಗಳ ಸಂಖ್ಯೆ 243 ಮಾತ್ರ. ಆರಂಭದಲ್ಲಿ ಸಹಿ ಹಾಕಿದ್ದ ಸುಮಾರು 25 ಆಸ್ಪತ್ರೆಗಳು ಒಪ್ಪಂದದಿಂದ ಹಿಂದೆ ಸರಿದಿವೆ. 700ಕ್ಕೂ ಹೆಚ್ಚು ಆಸ್ಪತ್ರೆಗಳು ಯೋಜನೆಗೆ ಒಳಪಡಲು ಮೀನಮೇಷ ಎಣಿಸುತ್ತಿವೆ.
  • ದರ ಪರಿಷ್ಕರಣೆ ಸಮಸ್ಯೆ ‘ರಾಜ್ಯ ಸರ್ಕಾರಿ ನೌಕರರು, ನಿಗಮ, ಮಂಡಳಿ, ಅನುದಾನಿತ ಸಂಸ್ಥೆಗಳ ಸಿಬ್ಬಂದಿ ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರು ಯೋಜನೆಯ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಜ್ಯೋತಿ ಸಂಜೀವಿನಿ ಯೋಜನೆಯಲ್ಲಿ ಪುರುಷ ನೌಕರರ ತಂದೆ-ತಾಯಿಗೆ ಮಾತ್ರ ಸಿಗುತ್ತಿದ್ದ ಆರೋಗ್ಯ ಸೌಲಭ್ಯವನ್ನು ಹೊಸ ಯೋಜನೆಯಲ್ಲಿ ಮಹಿಳಾ ನೌಕರರ ತಂದೆ-ತಾಯಿಗೂ ವಿಸ್ತರಿಸಲಾಗಿತ್ತು.
  • ಆದರೆ, ಆಸ್ಪತ್ರೆಗಳಿಗೆ ನೀಡುತ್ತಿರುವ ಚಿಕಿತ್ಸಾ ವೆಚ್ಚವನ್ನು ರಾಷ್ಟ್ರೀಯ ಆರೋಗ್ಯ ಯೋಜನೆಯ ದರಗಳಿಗೆ ಅನುಗುಣವಾಗಿ ಪರಿಷ್ಕರಿಸಿಲ್ಲ. ಹೆರಿಗೆ, ಕ್ಯಾನ್ಸರ್, ಶ್ವಾಸಕೋಶ ಸಮಸ್ಯೆ ಕಣ್ಣಿನ ಚಿಕಿತ್ಸೆ ಸೇರಿದಂತೆ ಬಹತೇಕ ಕಾಯಿಲೆಗಳ ಚಿಕಿತ್ಸಾ ವೆಚ್ಚ ಅತ್ಯಂತ ಕಡಿಮೆ ಇದೆ. ಅಷ್ಟು ಮೊತ್ತದಲ್ಲಿ ಸೌಲಭ್ಯ ನೀಡಲು ಸಾಧ್ಯವಿಲ್ಲ’ ಎನ್ನುವುದು ಯೋಜನೆ ವ್ಯಾಪ್ತಿಯಿಂದ ಹೊರ ಹೋಗುತ್ತಿರುವ, ಯೋಜನೆ ಅಳವಡಿಸಿಕೊಳ್ಳಲು ಹಿಂದೇಟು ಹಾಕುತ್ತಿರುವ ಖಾಸಗಿ ಆಸ್ಪತ್ರೆಗಳ ವಾದ.
  • ಸುವರ್ಣ ಕರ್ನಾಟಕ ಆರೋಗ್ಯ ಸುರಕ್ಷಾ ಟ್ರಸ್ಟ್ (ಎಸ್‌ಎಎಸ್‌ಟಿ) ಯೋಜನೆಯ ಅನುಷ್ಠಾನದ ಸಂಸ್ಥೆಯಾಗಿ ಹೊಣೆ ನಿರ್ವಹಿಸುತ್ತಿದ್ದು. ಎಲ್ಲ ವರ್ಗದ ನೌಕರರು ಪ್ರತಿ ತಿಂಗಳು ತಮ್ಮ ಪಾಲಿನ ಕಂತು ಪಾವತಿಸುತ್ತಿದ್ದಾರೆ. ಕಳೆದ ಆರು ತಿಂಗಳಲ್ಲಿ ನೌಕರರು ಪಾವತಿಸಿದ ಕಂತು ₹120 ಕೋಟಿಗೂ ಅಧಿಕ. ಟ್ರಸ್ಟ್ ಪಾವತಿಸಿರುವ ಚಿಕಿತ್ಸಾ ವೆಚ್ಚ ₹35 ಕೋಟಿ
  • ‘ಯೋಜನೆ ವ್ಯಾಪ್ತಿಗೆ ಒಳಪಡುವ ಎಲ್ಲ ನೌಕರರ ಕಂತನ್ನು ಅಕ್ಟೋಬರ್ ತಿಂಗಳ ವೇತನದಿಂದಲೇ ಕಟಾವು ಮಾಡಿ, ಖಜಾನೆ-2 ಮೂಲಕ ಟ್ರಸ್ಟ್ ಖಾತೆಗೆ ಜಮೆ ಮಾಡಲಾಗುತ್ತಿದೆ ಟ್ರಸ್ಟ್‌ನಲ್ಲಿ ಸಾಕಷ್ಟು ಹಣ ಸಂಗ್ರಹವಾದರೂ ರಾಜ್ಯದ ಪ್ರಮುಖ ಆಸ್ಪತ್ರೆಗಳು ಸೇರಿದಂತೆ ಬಹುತೇಕ ಖಾಸಗಿ ಆಸ್ಪತ್ರೆಗಳು ಯೋಜನೆ ಅಡಿ ಚಿಕಿತ್ಸೆ ನೀಡಲು ಒಲವು ತೋರಿಲ್ಲ ಹಾಗಾಗಿ, ನೌಕರರಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಸೌಲಭ್ಯ ಸಿಗುತ್ತಿಲ್ಲ. ಯೋಜನೆ ನಿರೀಕ್ಷಿತ ಫಲ ನೀಡುತ್ತಿಲ್ಲ’ ಎನ್ನುತ್ತಾರೆ ಶಿಕ್ಷಕ ಸದಾನಂದ.

‘ಸಂಜೀವಿನಿ’ಗೆ ತೊಡಕಾದ ನಿರಾಸಕ್ತಿ
ಸಂದರ್ಭ: ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ ಒಪ್ಪಿಕೊಳ್ಳಲು ಬಹುತೇಕ ಖಾಸಗಿ ಆಸ್ಪತ್ರೆಗಳು ನಿರಾಸಕ್ತಿ ತೋರುತ್ತಿರುವುದು ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರ ನಗದುರಹಿತ ಚಿಕಿತ್ಸೆಗೆ ತೊಡಕಾಗಿದೆ.

ಬಾಬೂ ಜಗಜೀವನ್ ರಾಮ್’ ಪ್ರಶಸ್ತಿಗೆ ಐವರು ಆಯ್ಕೆ
ಸಂದರ್ಭ: ರಾಜ್ಯಸರ್ಕಾರ ನೀಡುವ 2026ನೇ ಸಾಲಿನ ಬಾಬೂ ಜಗಜೀವನ್ ರಾಮ್ ಪ್ರಶಸ್ತಿಗೆ ಸಾಮಾಜಿಕ ಕಾರ್ಯಕರ್ತೆ ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐವರು ಭಾಜನರಾಗಿದ್ದಾರೆ.

  • ರಾಯಚೂರು ಜಿಲ್ಲೆ ಅಶಾಪುರದ ಜಾನಪದ ಕಲಾವಿದ ಡಿಂಗಿ ನರಸಪ್ಪ, ಬೆಳಗಾವಿಯ ಪತ್ರಕರ್ತ ಸರಜೂ ಕಾಟ್ಕರ್, ಮೈಸೂರಿನ ಮಾಜಿ ಮೇಯರ್ ನಾರಾಯಣ. ತುಮಕೂರಿನ ನಗರಸಭೆ ಮಾಜಿ ಸದಸ್ಯ ನರಸೀಯಪ್ಪ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಸಮಾಜ ಕಲ್ಯಾಣ ಇಲಾಖೆ ಪಟ್ಟಿಯನ್ನು ಬಿಡುಗಡೆ ಮಾಡಿದೆ.
  • ಪ್ರಶಸ್ತಿಯು ತಲಾ 15 ಲಕ್ಷ ನಗದು, 20 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿದೆ. ಬಾಬೂ ಜಗಜೀವನ್ ರಾಮ್ ಅವರ ಜನ್ಮದಿನವಾದ ಏ.5ರಂದು ವಿಧಾನಸೌಧದ ಅವರಣದಲ್ಲಿ ಆಯೋಜಿಸಲಾಗುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಆಯುಕ್ತ ನೀಡಿದ್ದಾರೆ.

ಬಸವರಾಜ ಆಚಾರ್ಗೆ ‘ಪ್ರಿಂಟ್ ಬಿನಾಲೆ ಇಂಡಿಯಾ’ ಪ್ರಶಸ್ತಿ
ಸಂದರ್ಭ: ಹಾಸನ ಜಿಲ್ಲೆಯ ಕಲಾವಿದ ಕೆ.ಆರ್.ಬಸವರಾಜ ಆಚಾರ್ ಅವರಿಗೆ ಕೇಂದ್ರ ಲಲಿತಕಲಾ ಅಕಾಡೆಮಿ ಕೊಡುವ ಅಂತರರಾಷ್ಟ್ರೀಯ ಮಟ್ಟದ ‘ಪ್ರಿಂಟ್ ಬಿನಾಲೆ ಇಂಡಿಯಾ’ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಮೊತ್ತ 12 ಲಕ್ಷ ನಗದು, ಪಾರಿತೋಷಕ ಹಾಗೂ ಪ್ರಮಾಣಪತ್ರ ಒಳಗೊಂಡಿದೆ.

  • ಮುದ್ರಣ ಮಾಧ್ಯಮದ ಕಲೆ ಉತ್ತೇಜಿಸುವ ದೃಷ್ಟಿಯಿಂದ ಪ್ರಪಂಚದಾದ್ಯಂತ ಇರುವ ವೃತ್ತಿಪರ ಐವರು ಕಲಾವಿದರನ್ನು ಗುರುತಿಸಿ ಪ್ರಶಸ್ತಿ ಕೊಡಲಾಗುತ್ತದೆ. ಇದರಲ್ಲಿ ಭಾರತಕ್ಕೆ ಎರಡು ಪ್ರಶಸ್ತಿ ಬಂದಿದೆ. ಬಸವರಾಜ ಆಚಾರ್ ಜೊತೆಗೆ, ಮಧ್ಯಪ್ರದೇಶದ ಭೋಪಾಲ್‌ನ ರವೀಂದ್ರ ರಾಯ್ ಅವರಿಗೆ ಪ್ರಶಸ್ತಿ ಲಭಿಸಿದೆ.
  • ಜೊತೆಗೆ ಫ್ರಾನ್ಸ್, ಪೋಲೆಂಡ್, ಕೊರಿಯಾ ದೇಶದ ತಲಾ ಒಬ್ಬೊಬ್ಬರು ಕಲಾವಿದರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ ಭಾರತ ಹಾಗೂ ಇತರೆ 34 ದೇಶಗಳಿಂದ ಸುಮಾರು 1449 ಪ್ರವೇಶಗಳು ಬಂದಿದ್ದವು.

ಮುಖ್ಯ ಪರೀಕ್ಷೆ

ಪತ್ರಿಕೆ-I: ಪ್ರಬಂಧಗಳು

ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ

ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ

ಪತ್ರಿಕೆ-II: ಸಾಮಾನ್ಯ ಅಧ್ಯಯನ-1

ಪತ್ರಿಕೆ-III: ಸಾಮಾನ್ಯ ಅಧ್ಯಯನ-2

ವಿಶ್ವಸಂಸ್ಥೆ: ಹೊರ್ಮುಜ್ ತೆರೆಸುವ ಪ್ರಸ್ತಾವ ಮತಕ್ಕೆ
ಸಂದರ್ಭ: ಸೇನಾ ಶಕ್ತಿ ಬಳಸಿ ಹೊರ್ಮುಜ್ ಜಲಸಂಧಿಯನ್ನು ಜಾಗತಿಕ ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸುವ ಪ್ರಸ್ತಾವವನ್ನು ರಷ್ಯಾ ಮತ್ತು ಚೀನಾ ವಿರೋಧದ ಮಧ್ಯೆಯೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮತಕ್ಕೆ ಹಾಕಲು ನಿರ್ಧರಿಸಲಾಗಿದೆ.

  • ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಸೃಷ್ಟಿಯಾದ ನಂತರ ಹೊರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿದೆ. ವಿಶ್ವದ ಐದನೇ ಒಂದರಷ್ಟು ತೈಲ ಈ ಮಾರ್ಗದಿಂದ ಸಾಗಣೆಯಾಗುತ್ತದೆ. ಹಡಗು ಸಂಚಾರಕ್ಕೆ ಆದ ಅಡ್ಡಿಯು ಜಾಗತಿಕವಾಗಿ ತೈಲ ಬೆಲೆಯ ಭಾರಿ ಏರಿಕೆ ಮತ್ತು ಆರ್ಥಿಕತೆಯ ಕುಸಿತಕ್ಕೆ ಕಾರಣವಾಗಿದೆ.
  • ಹೊರ್ಮುಜ್ ಜಲಸಂಧಿಯನ್ನು ಸೇನಾ ಪಡೆ ಬಳಸಿ ಮುಕ್ತಗೊಳಿಸುವ ಪ್ರಸ್ತಾವ ಇದಾಗಿದೆ. ಆದರೆ ಭದ್ರತಾ ಮಂಡಳಿಯಲ್ಲಿ ವೀಟೊ ಅಧಿಕಾರ ಹೊಂದಿರುವ 5 ಸದಸ್ಯ ರಾಷ್ಟ್ರಗಳ ಪೈಕಿ ಚೀನಾ ಮತ್ತು ರಷ್ಯಾ ಸೇನಾ ಬಲ ಬಳಕೆಗೆ ವಿರೋಧ ವ್ಯಕ್ತಪಡಿಸಿವೆ. ಇದರ ಮಧ್ಯೆಯೂ ‘ಬಹರೇನ್ ಪ್ರಸ್ತಾವ’ದ ಕರಡು ಅಂತಿಮಗೊಂಡಿದೆ.
  • ಯಾವುದೇ ಹಾನಿ ಮಾಡದೇ ರಕ್ಷಣಾತ್ಮಕವಾಗಿ ಪಡೆಗಳನ್ನು ಬಳಸಬೇಕು ಎಂಬ ಅಂಶ ಪ್ರಸ್ತಾವದಲ್ಲಿದೆ. ಬಹುರಾಷ್ಟ್ರೀಯ ನೌಕಾ ಪಾಲುದಾರಿಕೆ ಹೊಂದಿರುವ ದೇಶಗಳು ‘ಹೊರ್ಮುಜ್ ಜಲಸಂಧಿ, ಕೊಲ್ಲಿ ಮತ್ತು ಗಲ್ಸ್ ಆಫ್ ಒಮನ್’ನಲ್ಲಿ ಹಡಗುಗಳ ಮುಕ್ತ ಸಂಚಾರಕ್ಕೆ ‘ಎಲ್ಲ ಅಗತ್ಯ ವಿಧಾನ ಅನುಸರಿಸಲು ಅವಕಾಶ ಕಲ್ಪಿಸುತ್ತದೆ’ ವಿಶ್ವಸಂಸ್ಥೆ ಪ್ರಕಾರ ಸೇನಾ ಕಾರ್ಯಾಚರಣೆಯ ಸಾಧ್ಯತೆಯೂ ಇದರಲ್ಲಿದೆ.
  • ಕನಿಷ್ಠ ಆರು ತಿಂಗಳವರೆಗಾದರೂ ಈ ಮಾರ್ಗವನ್ನು ಅಂತರರಾಷ್ಟ್ರೀಯ ಹಡಗು ಸಂಚಾರಕ್ಕೆ ಸುರಕ್ಷಿತಗೊಳಿಸಲು ಹೊಣೆ ಹೊತ್ತ ರಾಷ್ಟ್ರಗಳು ಎಲ್ಲ ರೀತಿಯ ರಕ್ಷಣಾತ್ಮಕ ಕ್ರಮ ಕೈಗೊಳ್ಳಬಹುದು. ಈ ಬಗ್ಗೆ ‘ಮುಂಚಿತವಾಗಿ ಭದ್ರತಾ ಮಂಡಳಿಯ ಗಮನಕ್ಕೆ ತರಬೇಕು’ ಎಂಬ ಅಂಶ ಪ್ರಸ್ತಾವದಲ್ಲಿದೆ.

ಪತ್ರಿಕೆ-IV: ಸಾಮಾನ್ಯ ಅಧ್ಯಯನ-3

50 ವರ್ಷಗಳ ಬಳಿಕ ನಾಸಾ ಕೈಗೊಂಡ ಯೋಜನೆ: ಚಂದ್ರನತ್ತ ಹೊರಟ ‘ಅರ್ಟೆಮಿಸ್-2’
ಸಂದರ್ಭ: ಐದು ದಶಕಗಳ ಬಳಿಕ ಚಂದ್ರನ ಕಕ್ಷೆಗೆ ಗಗನಯಾನಿಗಳನ್ನು ಕಳುಹಿಸಲು ಮುಂದಾಗಿರುವ ನಾಸಾ, ತನ್ನ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಕಾರ್ಯಕ್ರಮ ‘ಆರ್ಟೆಮಿಸ್-2’ರ ರಾಕೆಟ್ ಅನ್ನು ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ.

  • ಗಗನನೌಕೆ ಹೊತ್ತ ರಾಕೆಟ್ ವರ್ಷದ ಆರಂಭದಲ್ಲಿಯೇ ಅಂತರಿಕ್ಷಯಾನ ಆರಂಭಿಸಬೇಕಿತ್ತು. ಆದರೆ, ಉಡ್ಡ ಯನಕ್ಕೂ ಕೆಲ ಗಂಟೆಗಳ ಮುನ್ನ ರಾಕೆಟ್‌ನಲ್ಲಿನ ಇಂಧನ ಜಲಜನಕ ಸೋರಲು ಆರಂಭಿಸಿದ್ದರಿಂದ ಉಡ್ಡಯನ ವನ್ನು ಮುಂದೂಡಲಾಗಿತ್ತು.
  • 32 ಮಹಡಿಯ ಈ ರಾಕೆಟ್‌ ಗೆ 26 ಲಕ್ಷ ಲೀಟರ್ ಇಂಧನ ತುಂಬಬೇಕಿತ್ತು. ಈ ಕಾರ್ಯ ಪೂರ್ಣಗೊಂಡ ಬಳಿಕ ರಾಕೆಟ್ ನಭಕ್ಕೆ ಚಿಮ್ಮಿದೆ.
  • 10 ದಿನಗಳ ಕಾಲ ಯೋಜನೆಯು ನಡೆಯಲಿದ್ದು, ಅಮೆರಿಕದ ರೀಡ್ ವೈಸ್‌ಮನ್, ವಿಕ್ಟರ್ ಗೋವರ್, ಕ್ರಿಸ್ಟಿನಾ ಕೋಚ್ ಹಾಗೂ ಕೆನಡಾದ ಜೆರೆಮಿ ಹ್ಯಾನ್ಸನ್ ತಂಡದಲ್ಲಿದ್ದಾರೆ.
  • ಉಡಾವಣೆಗೊಂಡ 25 ಗಂಟೆಗಳ ನಂತರ ನಾಲ್ವರೂ ಭೂಮಿಯ ಕಕ್ಷೆಯಿಂದ ಹೊರಗೆ ಇದ್ದರೂ, ಭೂಮಿಗೆ ಹತ್ತಿರವೇ ಇರಲಿದ್ದಾರೆ. ಕೋಶವನ್ನು (ಕ್ಯಾಪ್ಸುಲ್) ಭೂಮಿಯ ಹತ್ತಿರ ಪರೀಕ್ಷಿಸಲಿದ್ದಾರೆ. ನಂತರ ಚಂದ್ರನ ಸಮೀಪದಲ್ಲಿ ಪ್ರಯಾಣಿ ಸಲಿದ್ದಾರೆ ನಿಗದಿತ ಅವಧಿವರೆಗೆ ಪರಿಭ್ರಮಣೆ ಮಾಡಿದ ಬಳಿಕ ಅವರು ಭೂಮಿಗೆ ಮರಳಲಿದ್ದು, ಅವರನ್ನು ಹೊತ್ತ ಬಾಹ್ಯಾಕಾಶ ಕೋಶವು ಪೆಸಿಫಿಕ್ ಸಾಗರದಲ್ಲಿ ಇಳಿಯಲಿದೆ.
  • ‘ಎಲ್ಲ ನನ್ನ ಮಿತ್ರರೇ, 1972ರ ಅಪೋಲೊ-17ರ ನಂತರ ಮಾನವರು ಭೂಮಿಯ ಕಕ್ಷೆಯನ್ನು ದಾಟಿ ಮುಂದೆ ಸಾಗಿದ್ದಾರೆ’ ಎಂದು ನಾಸಾದ ಹಿರಿಯ ವಿಜ್ಞಾನಿ ಲೊರೊ ಗೋಜ್ ತಿಳಿಸಿದ್ದಾರೆ.
  • ‘ರಾಕೆಟ್ ಇಂಧನ ತುಂಬಿಸುವ ಪ್ರಕ್ರಿಯೆಯಲ್ಲಿ ಯಾವುದೇ ಲೋಪವಾಗಲಿಲ್ಲ’ ಎಂದು ಹೇಳಿದ್ದಾರೆ.
  • ‘ಮಾನವೀಯ ಸಾಮರ್ಥ್ಯ ಏನೆಂಬುದನ್ನು ಮತ್ತೊಮ್ಮೆ ತೋರಿಸಿದೆ. ನಿಮ್ಮ ಭವಿಷ್ಯದ ಭರವಸೆಗಳೇ ನಮ್ಮನ್ನು ಚಂದ್ರನ ಸುತ್ತ ಈ ಪ್ರಯಾಣದಲ್ಲಿ ಕರೆದೊಯ್ದಿದೆ’ ಎಂದು ಗಗನಯಾನಿ ಜೆರೆಮಿ ಹ್ಯಾನ್ಸನ್ ತಿಳಿಸಿದ್ದಾರೆ.
  • 1972ರಲ್ಲಿ ಅಪೋಲೊ-17 ಕಾರ್ಯಕ್ರಮದಡಿ ಗಗನಯಾನಿಗಳು ಕೊನೆಯದಾಗಿ ಚಂದ್ರನ ಅಂಗಳದಲ್ಲಿ ಇಳಿದಿದ್ದರು.

ಪತ್ರಿಕೆ-V: ಸಾಮಾನ್ಯ ಅಧ್ಯಯನ-4

Source: Prajavani

ಕೆಎಎಸ್ ಪ್ರಚಲಿತ ವಿದ್ಯಮಾನಗಳು

ಕೆ.ಎ.ಎಸ್ ಪ್ರಚಲಿತ ವಿದ್ಯಮಾನಗಳು: ಪ್ರಚಲಿತ ವಿದ್ಯಮಾನಗಳು ಕೆ.ಪಿ.ಎಸ್.ಸಿ ಪಠ್ಯಕ್ರಮದ ‘ಜೀವಂತ ನಾಡಿಮಿಡಿತ’ವಿದ್ದಂತೆ. ಇದು ಕೇವಲ ಪ್ರತ್ಯೇಕವಾಗಿ ನೆನಪಿಡಬೇಕಾದ ವಿಷಯವಲ್ಲ; ಬದಲಿಗೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳೆರಡರಲ್ಲೂ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ನೀತಿಶಾಸ್ತ್ರವನ್ನು ಒಂದಕ್ಕೊಂದು ಬೆಸೆಯುವ ಒಂದು ಚಲನಶೀಲ ಕೊಂಡಿಯಾಗಿದೆ. ಮುಂಬರುವ ಪರೀಕ್ಷೆಗಳ ಸಂದರ್ಭದಲ್ಲಿ, ಕೇವಲ “ಸುದ್ದಿ ಓದುವುದರಿಂದ” “ಸುದ್ದಿಯ ಮೂಲಕ ಪಠ್ಯಕ್ರಮವನ್ನು ಅಭ್ಯಾಸ ಮಾಡುವುದು” ಎಂಬ ಹಂತಕ್ಕೆ ಬದಲಾಗುವುದು ಒಬ್ಬ ಗಂಭೀರ ಅಭ್ಯರ್ಥಿಯನ್ನು ಸಾಮಾನ್ಯ ಓದುಗನಿಂದ ಪ್ರತ್ಯೇಕಿಸುವ ಪ್ರಮುಖ ಬದಲಾವಣೆಯಾಗಿದೆ.

“ಪಠ್ಯಕ್ರಮಕ್ಕೆ ಮೊದಲ ಆದ್ಯತೆ” ಎಂಬ ತತ್ವ
ಕೆ.ಪಿ.ಎಸ್.ಸಿ ಪಠ್ಯಕ್ರಮಕ್ಕೆ ಕಟ್ಟುನಿಟ್ಟಾಗಿ ಹೊಂದಿಕೆಯಾಗುವ ಪ್ರಚಲಿತ ವಿದ್ಯಮಾನಗಳ ಮಾದರಿಯನ್ನು ಅನುಸರಿಸುವ ಮೂಲಕ, ನೀವು ದಿನಪತ್ರಿಕೆ ಓದಲು ವ್ಯಯಿಸುವ ಪ್ರತಿ ಗಂಟೆಯೂ ನಿಮ್ಮ ಪರೀಕ್ಷೆಯ ಶ್ರೇಣಿಯನ್ನು (Rank) ಉತ್ತಮಪಡಿಸಲು ಪೂರಕವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

ಪೂರ್ವಭಾವಿ ಪರೀಕ್ಷೆ

ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು

ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರ ಪ್ರಮುಖ ಯೋಜನೆಗಳು

ಮುಖ್ಯ ಪರೀಕ್ಷೆ

ಪತ್ರಿಕೆ-I: ಪ್ರಬಂಧಗಳು

ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ

ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ

ಪತ್ರಿಕೆ-II: ಸಾಮಾನ್ಯ ಅಧ್ಯಯನ-1

ಪತ್ರಿಕೆ-III: ಸಾಮಾನ್ಯ ಅಧ್ಯಯನ-2

ಪತ್ರಿಕೆ-IV: ಸಾಮಾನ್ಯ ಅಧ್ಯಯನ-3

ಪತ್ರಿಕೆ-V: ಸಾಮಾನ್ಯ ಅಧ್ಯಯನ-4

ಕೆಎಎಸ್ ಪ್ರಚಲಿತ ವಿದ್ಯಮಾನಗಳು

ಕೆ.ಎ.ಎಸ್ ಪ್ರಚಲಿತ ವಿದ್ಯಮಾನಗಳು: ಪ್ರಚಲಿತ ವಿದ್ಯಮಾನಗಳು ಕೆ.ಪಿ.ಎಸ್.ಸಿ ಪಠ್ಯಕ್ರಮದ ‘ಜೀವಂತ ನಾಡಿಮಿಡಿತ’ವಿದ್ದಂತೆ. ಇದು ಕೇವಲ ಪ್ರತ್ಯೇಕವಾಗಿ ನೆನಪಿಡಬೇಕಾದ ವಿಷಯವಲ್ಲ; ಬದಲಿಗೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳೆರಡರಲ್ಲೂ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ನೀತಿಶಾಸ್ತ್ರವನ್ನು ಒಂದಕ್ಕೊಂದು ಬೆಸೆಯುವ ಒಂದು ಚಲನಶೀಲ ಕೊಂಡಿಯಾಗಿದೆ. ಮುಂಬರುವ ಪರೀಕ್ಷೆಗಳ ಸಂದರ್ಭದಲ್ಲಿ, ಕೇವಲ “ಸುದ್ದಿ ಓದುವುದರಿಂದ” “ಸುದ್ದಿಯ ಮೂಲಕ ಪಠ್ಯಕ್ರಮವನ್ನು ಅಭ್ಯಾಸ ಮಾಡುವುದು” ಎಂಬ ಹಂತಕ್ಕೆ ಬದಲಾಗುವುದು ಒಬ್ಬ ಗಂಭೀರ ಅಭ್ಯರ್ಥಿಯನ್ನು ಸಾಮಾನ್ಯ ಓದುಗನಿಂದ ಪ್ರತ್ಯೇಕಿಸುವ ಪ್ರಮುಖ ಬದಲಾವಣೆಯಾಗಿದೆ.

“ಪಠ್ಯಕ್ರಮಕ್ಕೆ ಮೊದಲ ಆದ್ಯತೆ” ಎಂಬ ತತ್ವ
ಕೆ.ಪಿ.ಎಸ್.ಸಿ ಪಠ್ಯಕ್ರಮಕ್ಕೆ ಕಟ್ಟುನಿಟ್ಟಾಗಿ ಹೊಂದಿಕೆಯಾಗುವ ಪ್ರಚಲಿತ ವಿದ್ಯಮಾನಗಳ ಮಾದರಿಯನ್ನು ಅನುಸರಿಸುವ ಮೂಲಕ, ನೀವು ದಿನಪತ್ರಿಕೆ ಓದಲು ವ್ಯಯಿಸುವ ಪ್ರತಿ ಗಂಟೆಯೂ ನಿಮ್ಮ ಪರೀಕ್ಷೆಯ ಶ್ರೇಣಿಯನ್ನು (Rank) ಉತ್ತಮಪಡಿಸಲು ಪೂರಕವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

ಪೂರ್ವಭಾವಿ ಪರೀಕ್ಷೆ

ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು


ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು

ಮುಖ್ಯ ಪರೀಕ್ಷೆ

ಪತ್ರಿಕೆ-I: ಪ್ರಬಂಧಗಳು

ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ

ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ

ಪತ್ರಿಕೆ-II: ಸಾಮಾನ್ಯ ಅಧ್ಯಯನ-1

2025-26ರ ಏಪ್ರಿಲ್ನಿಂದ ಮಾರ್ಚ್ ವರೆಗೆ ₹22.27 ಲಕ್ಷ ಕೋಟಿ ಸಂಗ್ರಹ: ಜಿಎಸ್ಟಿ: ₹2 ಲಕ್ಷ ಕೋಟಿ ಸಂಗ್ರಹ
ಸಂದರ್ಭ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮೂಲಕ ಮಾರ್ಚ್ ತಿಂಗಳಿನಲ್ಲಿ ₹2 ಲಕ್ಷ ಕೋಟಿ ವರಮಾನ ಸಂಗ್ರಹವಾಗಿದೆ. ಇದು ಈ ಆರ್ಥಿಕ ವರ್ಷದಲ್ಲಿ ಮೂರನೇ ಅತಿದೊಡ್ಡ ಮಾಸಿಕ ಸಂಗ್ರಹವಾಗಿದೆ.

  • ಕಳೆದ ವರ್ಷದ ಮಾರ್ಚ್‌ನಲ್ಲಿ ₹1.83 ಲಕ್ಷ ಕೋಟಿ ಸಂಗ್ರಹವಾಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ವರಮಾನ ಸಂಗ್ರಹವು ಶೇ 8.8ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
  • ಆಮದು ಮಾಡಿಕೊಂಡ ಸರಕು ಗಳಿಂದ ಬಂದ ವರಮಾನದಲ್ಲಿ ಏರಿಕೆಯಾಗಿರುವುದು, ದೇಶದ ಮಾರುಕಟ್ಟೆಯಲ್ಲಿ ಮಾರಾಟ ಮತ್ತು ಖರೀದಿ ಹೆಚ್ಚಳ ಆಗಿರುವುದು ಜಿಎಸ್‌ಟಿ ಸಂಗ್ರಹ ಜಾಸ್ತಿ ಆಗಿರುವುದಕ್ಕೆ ಕಾರಣ ಎಂದು ತಿಳಿಸಿದೆ.
  • ದೇಶದ ಆಂತರಿಕ ವಹಿವಾಟುಗಳಿಂದ ಬರುವ ಜಿಎಸ್‌ಟಿ ವರಮಾನ ದಲ್ಲಿ ಶೇ5.9ರಷ್ಟು ಹೆಚ್ಚಳವಾಗಿ, ₹1.46 ಲಕ್ಷ ಕೋಟಿ ಆಗಿದೆ. ಆಮದು ಸರಕುಗಳಿಂದ ಬಂದ ವರಮಾನದಲ್ಲಿ ಶೇ 17.8ರಷ್ಟು ಏರಿಕೆಯಾಗಿದ್ದು, ₹53,861 ಕೋಟಿ ಆಗಿದೆ. ಒಟ್ಟು ಮರುಪಾವತಿಯು ₹22,074 ಕೋಟಿಯಾಗಿದ್ದು, ಶೇ 13.8ರಷ್ಟು ಹೆಚ್ಚಳವಾಗಿದೆ.
  • ಮರುಪಾವತಿ ಬಳಿಕ ನಿವ್ವಳ ಜಿಎಸ್‌ಟಿ ವರಮಾನ ₹1.78 ಲಕ್ಷ ಕೋಟಿಯಾಗಿದ್ದು ಹಿಂದಿನ ವರ್ಷದ ಮಾರ್ಚ್‌ಗೆ ಹೋಲಿಸಿದರೆ ಶೇ 8.2ರಷ್ಟು ಏರಿಕೆಯಾಗಿದೆ.
  • 2025-26ರ ಆರ್ಥಿಕ ವರ್ಷದ ಏಪ್ರಿಲ್ನಿಂದ ಮಾರ್ಚ್‌ವರೆಗೆ ಒಟ್ಟು ಜಿಎಸ್‌ಟಿ ಸಂಗ್ರಹ ₹22.27 ಲಕ್ಷ ಕೋಟಿಯಾಗಿದ್ದು, ಶೇ8.3ರಷ್ಟು ಏರಿಕೆ ಆಗಿದೆ. ಮರುಪಾವತಿ ಹಂಚಿಕೆ ಬಳಿಕ ವರಮಾನವು ₹19.34 ಲಕ್ಷ ಕೋಟಿಯಾಗಿದ್ದು ಶೇ7.1ರಷ್ಟು ಬೆಳವಣಿಗೆ ದಾಖಲಿಸಿದೆ.
  • ಏಪ್ರಿಲ್‌ನಲ್ಲಿ ಅತ್ಯಧಿಕ ₹2.36 ಲಕ್ಷ ಕೋಟಿ ಮತ್ತು ಮೇ ತಿಂಗಳಿನಲ್ಲಿ ₹2.01 ಲಕ್ಷ ಕೋಟಿ ಸಂಗ್ರಹವಾಗಿತ್ತು. ಇದು ಈ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ವರಮಾನ ಸಂಗ್ರಹವಾದ ತಿಂಗಳಾಗಿವೆ. ಇದೀಗ ಮಾರ್ಚ್‌ನಲ್ಲಿ ₹2 ಲಕ್ಷ ಕೋಟಿ ಸಂಗ್ರಹವಾಗಿದೆ.
  • ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಜಿಎಸ್‌ಟಿ ದರ ಪರಿಷ್ಕರಣೆ ಆಯಿತು. ಇದರಿಂದ ನವೆಂಬರ್ ತಿಂಗಳಿನಲ್ಲಿ ಜಿಎಸ್‌ಟಿ ಸಂಗ್ರಹ ಇಳಿಕೆಯಾಗಿ, ₹1.70 ಲಕ್ಷ ಕೋಟಿ ಸಂಗ್ರಹವಾಗಿತ್ತು ಡಿಸೆಂಬರ್ಗೆಗೆ ಸಂಗ್ರಹವು ಏರಿಕೆಯಾಗಿ, ₹1.74 ಲಕ್ಷ ಕೋಟಿಯಷ್ಟಾಯಿತು.
  • ಮಹಾರಾಷ್ಟ್ರ, ಕರ್ನಾಟಕ ಮತ್ತು ತೆಲಂಗಾಣದಂತಹ ದೊಡ್ಡ ರಾಜ್ಯಗಳು ಸಂಗ್ರಹದಲ್ಲಿ ಸದೃಢ ಏರಿಕೆ ಕಂಡಿವೆ. ಹರಿಯಾಣ, ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಸಂಗ್ರಹವು ನಿಧಾನವಾಗಿ ಪ್ರಗತಿ ಕಂಡಿದೆ ಎಂದು ತಿಳಿಸಿದೆ.

ಪತ್ರಿಕೆ-III: ಸಾಮಾನ್ಯ ಅಧ್ಯಯನ-2

ವಿದೇಶಿ ದೇಣಿಗೆ ನಿಯಂತ್ರಣ ತಿದ್ದುಪಡಿ ಮಸೂದೆಗೆ ‘ತಡೆ’
ಸಂದರ್ಭ: ವಿಪಕ್ಷಗಳು ಹಾಗೂ ಕ್ರೈಸ್ತ ನಾಯಕರ ವಿರೋಧ ಮತ್ತು ಬಿಜೆಪಿ ಕೇರಳ ಘಟಕದ ಒತ್ತಡದಿಂದ, ವಿಧಾನಸಭಾ ಚುನಾವಣೆಯಲ್ಲಿ ಹೊಡೆತ ಬೀಳಬಹುದು ಎಂಬ ಆತಂಕದಿಂದ ಕೇಂದ್ರ ಸರ್ಕಾರವು ವಿವಾದಾತ್ಮಕ ‘ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ’ಗೆ ಲೋಕಸಭೆಯಲ್ಲಿ ಅಂಗೀಕಾರ ಪಡೆಯುವುದನ್ನು ಮುಂದೂಡಿದೆ.

  1. ಮಸೂದೆಯ ಹಿನ್ನೆಲೆ ಮತ್ತು ವಿವಾದ
    ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA) ಅಡಿಯಲ್ಲಿ ತಿದ್ದುಪಡಿ ತರುವ ಮೂಲಕ ಸ್ವಯಂ ಸೇವಾ ಸಂಸ್ಥೆಗಳು (NGOs) ಮತ್ತು ಧಾರ್ಮಿಕ ಸಂಸ್ಥೆಗಳಿಗೆ ವಿದೇಶದಿಂದ ಬರುವ ಹಣದ ಮೇಲೆ ಕಟ್ಟುನಿಟ್ಟಿನ ನಿಗಾ ಇಡುವುದು ಸರ್ಕಾರದ ಉದ್ದೇಶವಾಗಿತ್ತು. ಆದರೆ, ಈ ತಿದ್ದುಪಡಿಯು ಕೆಲವು ನಿರ್ದಿಷ್ಟ ಸಮುದಾಯಗಳು ಮತ್ತು ಸಾಮಾಜಿಕ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡಿದೆ ಎಂಬ ಟೀಕೆ ವ್ಯಕ್ತವಾಯಿತು.
  2. ತಡೆಹಿಡಿಯಲು ಪ್ರಮುಖ ಕಾರಣಗಳು
    ಕೇರಳ ವಿಧಾನಸಭಾ ಚುನಾವಣೆ (ಏಪ್ರಿಲ್ 2026): ಕೇರಳದಲ್ಲಿ ಕ್ರೈಸ್ತ ಸಮುದಾಯದ ಮತಗಳು ನಿರ್ಣಾಯಕವಾಗಿವೆ. ಈ ಮಸೂದೆಯಿಂದ ಕ್ರೈಸ್ತ ಧಾರ್ಮಿಕ ಸಂಸ್ಥೆಗಳು ಮತ್ತು ಮಿಷನರಿಗಳಿಗೆ ಬರುವ ದೇಣಿಗೆಗೆ ಅಡ್ಡಿಯಾಗಬಹುದು ಎಂಬ ಆತಂಕವಿತ್ತು. ಇದು ಚುನಾವಣೆಯಲ್ಲಿ ಬಿಜೆಪಿ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಕೇರಳ ಬಿಜೆಪಿ ಘಟಕವು ಕೇಂದ್ರಕ್ಕೆ ವರದಿ ನೀಡಿತ್ತು.
    ಕ್ರೈಸ್ತ ನಾಯಕರ ವಿರೋಧ: ದಕ್ಷಿಣ ಭಾರತದ, ವಿಶೇಷವಾಗಿ ಕೇರಳ ಮತ್ತು ತಮಿಳುನಾಡಿನ ಕ್ರೈಸ್ತ ಮುಖಂಡರು ಈ ಮಸೂದೆಯು ಧಾರ್ಮಿಕ ಸ್ವಾತಂತ್ರ್ಯ ಮತ್ತು ಸೇವಾ ಚಟುವಟಿಕೆಗಳಿಗೆ ಧಕ್ಕೆ ತರುತ್ತದೆ ಎಂದು ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದರು.
    ವಿಪಕ್ಷಗಳ ಒಗ್ಗಟ್ಟು: ಕಾಂಗ್ರೆಸ್ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳು ಈ ಮಸೂದೆಯನ್ನು ‘ಅಪ್ರಜಾಪ್ರಭುತ್ವ’ ಎಂದು ಕರೆದು ಸದನದ ಒಳಗೂ ಮತ್ತು ಹೊರಗೂ ಪ್ರತಿಭಟನೆ ನಡೆಸಿದ್ದವು.
  3. ಮಸೂದೆಯಲ್ಲಿನ ಪ್ರಮುಖ ಅಂಶಗಳೇನು?
    ಈ ತಿದ್ದುಪಡಿ ಮಸೂದೆಯು ಈ ಕೆಳಗಿನ ಬದಲಾವಣೆಗಳನ್ನು ಪ್ರಸ್ತಾಪಿಸಿತ್ತು:
    ಆಧಾರ್ ಕಡ್ಡಾಯ: ವಿದೇಶಿ ದೇಣಿಗೆ ಪಡೆಯುವ ಸಂಸ್ಥೆಯ ಪದಾಧಿಕಾರಿಗಳು ಆಧಾರ್ ಕಾರ್ಡ್ ನೀಡುವುದು ಕಡ್ಡಾಯ.
    ಆಡಳಿತಾತ್ಮಕ ವೆಚ್ಚದ ಮಿತಿ: ವಿದೇಶಿ ದೇಣಿಗೆಯನ್ನು ಆಡಳಿತಾತ್ಮಕ ವೆಚ್ಚಗಳಿಗಾಗಿ (Administrative expenses) ಬಳಸುವ ಮಿತಿಯನ್ನು ಈಗಿರುವ ಶೇ. 20ರಿಂದ ಇನ್ನಷ್ಟು ಕಡಿಮೆ ಮಾಡುವುದು.
    ಕೇಂದ್ರೀಕೃತ ಖಾತೆ: ಎಲ್ಲಾ ವಿದೇಶಿ ದೇಣಿಗೆಗಳು ದೆಹಲಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಶಾಖೆಯ ಮೂಲಕವೇ ಬರಬೇಕು.
  4. ಮುಂದಿನ ಹಾದಿ
    ಸರ್ಕಾರವು ಸದ್ಯಕ್ಕೆ ಈ ಮಸೂದೆಯನ್ನು “ತಡೆಹಿಡಿದಿದೆ” (Deferred) ಅಷ್ಟೆ, ಸಂಪೂರ್ಣವಾಗಿ ಕೈಬಿಟ್ಟಿಲ್ಲ.
    ಚುನಾವಣೆಗಳ ನಂತರ ಈ ಮಸೂದೆಯನ್ನು ಮತ್ತೆ ಚರ್ಚೆಗೆ ತರುವ ಸಾಧ್ಯತೆ ಇದೆ.
    ಇದರ ನಡುವೆ, ಜಾರಿ ನಿರ್ದೇಶನಾಲಯ (ED) ಮತ್ತು ಸಿಬಿಐ (CBI) ಮೂಲಕ ಈಗಾಗಲೇ ನಿಯಮ ಉಲ್ಲಂಘಿಸಿರುವ ಕೆಲವು ಎನ್‌ಜಿಒಗಳ ಮೇಲೆ ತನಿಖೆ ಮುಂದುವರಿಯುತ್ತಿದೆ.

ರಾಷ್ಟ್ರಪತಿ ಅಂಕಿತ
ಸಂದರ್ಭ: ಲಿಂಗತ್ವ ಅಲ್ಪ ಸಂಖ್ಯಾತರ ಹಕ್ಕುಗಳ ರಕ್ಷಣೆ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಬ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ.

  • ಕೇಂದ್ರ ಸರ್ಕಾರವು ಲಿಂಗತ್ವ ಅಲ್ಪ ಸಂಖ್ಯಾತರ ಹಕ್ಕುಗಳ ರಕ್ಷಣೆ ತಿದ್ದುಪಡಿ ಮಸೂದೆ- 2026 ಅನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡಿಸಿ, ಅಂಗೀಕಾರ ಪಡೆದಿತ್ತು.
  1. ಪ್ರಮುಖ ತಿದ್ದುಪಡಿಗಳು ಮತ್ತು ಬದಲಾವಣೆಗಳು
    ಸ್ವಯಂ ಘೋಷಿತ ಗುರುತಿನ ಹಕ್ಕು ರದ್ದು: 2019ರ ಕಾಯ್ದೆಯು ವ್ಯಕ್ತಿಗಳು ತಮ್ಮನ್ನು ತಾವು ಲಿಂಗತ್ವ ಅಲ್ಪಸಂಖ್ಯಾತರೆಂದು ಗುರುತಿಸಿಕೊಳ್ಳಲು (Self-identification) ಅವಕಾಶ ನೀಡಿತ್ತು. ಆದರೆ, 2026ರ ತಿದ್ದುಪಡಿಯು ಇದನ್ನು ಕೈಬಿಟ್ಟಿದೆ.
    ವೈದ್ಯಕೀಯ ಮಂಡಳಿಯ ಕಡ್ಡಾಯ ತಪಾಸಣೆ: ಇನ್ನು ಮುಂದೆ ಲಿಂಗತ್ವ ಅಲ್ಪಸಂಖ್ಯಾತ ಎಂಬ ಗುರುತಿನ ಚೀಟಿ ಪಡೆಯಲು ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದಾಗ, ಸರ್ಕಾರ ನಿಗದಿಪಡಿಸಿದ ವೈದ್ಯಕೀಯ ಮಂಡಳಿಯು (Medical Board) ಆ ವ್ಯಕ್ತಿಯನ್ನು ಪರೀಕ್ಷಿಸಿ ಶಿಫಾರಸು ಮಾಡುವುದು ಕಡ್ಡಾಯವಾಗಿದೆ.
    ಸೀಮಿತ ವ್ಯಾಖ್ಯಾನ: ಈ ಕಾಯ್ದೆಯು ‘ಲಿಂಗತ್ವ ಅಲ್ಪಸಂಖ್ಯಾತ’ ಎಂಬ ಪದವನ್ನು ಹೆಚ್ಚು ಸ್ಪಷ್ಟವಾಗಿ ಮತ್ತು ಸಂಕುಚಿತವಾಗಿ ವ್ಯಾಖ್ಯಾನಿಸಿದೆ. ಇದು ಕೇವಲ ಜೈವಿಕ ವ್ಯತ್ಯಾಸಗಳು ಅಥವಾ ನಿರ್ದಿಷ್ಟ ಸಾಂಸ್ಕೃತಿಕ ಸಮುದಾಯಗಳಿಗೆ (ಹಿಜ್ರಾ, ಕಿನ್ನರ್, ಅರವಣಿ ಇತ್ಯಾದಿ) ಸೇರಿದವರನ್ನು ಮಾತ್ರ ಒಳಗೊಳ್ಳುತ್ತದೆ.
    ಲೈಂಗಿಕ ಆಸಕ್ತಿಗಳ ಹೊರಗಿಡುವಿಕೆ: ಈ ಕಾಯ್ದೆಯು ವಿಭಿನ್ನ ಲೈಂಗಿಕ ಆಸಕ್ತಿಗಳನ್ನು (Sexual Orientation – ಉದಾಹರಣೆಗೆ ಗೇ, ಲೆಸ್ಬಿಯನ್) ಈ ವ್ಯಾಖ್ಯಾನದಿಂದ ಸ್ಪಷ್ಟವಾಗಿ ಹೊರಗಿಟ್ಟಿದೆ.
  2. ಶಿಕ್ಷೆ ಮತ್ತು ದಂಡದ ಪ್ರಮಾಣದಲ್ಲಿ ಹೆಚ್ಚಳ
    ಲಿಂಗತ್ವ ಅಲ್ಪಸಂಖ್ಯಾತರ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಯಲು ಕಠಿಣ ಶಿಕ್ಷೆಯನ್ನು ವಿಧಿಸಲಾಗಿದೆ:
    ಬಾಧಿತರಾಗುವವರಿಗೆ ರಕ್ಷಣೆ: ಲಿಂಗತ್ವ ಅಲ್ಪಸಂಖ್ಯಾತರ ಮೇಲೆ ದೈಹಿಕ ಹಲ್ಲೆ ಅಥವಾ ಗಂಭೀರ ಗಾಯ ಮಾಡಿದರೆ ಅಪರಾಧಿಗಳಿಗೆ ಕಠಿಣ ಶಿಕ್ಷೆಯಿದೆ.
    ಬಲವಂತದ ಗುರುತು ಬದಲಾವಣೆ: ಒಬ್ಬ ವ್ಯಕ್ತಿಯನ್ನು ಬಲವಂತವಾಗಿ ಲಿಂಗತ್ವ ಅಲ್ಪಸಂಖ್ಯಾತ ಚಹರೆ ಅಳವಡಿಸಿಕೊಳ್ಳುವಂತೆ ಪೀಡಿಸಿದರೆ ಅಥವಾ ಅಪಹರಿಸಿದರೆ 10 ವರ್ಷದಿಂದ ಜೀವಾವಧಿ ಶಿಕ್ಷೆ ಮತ್ತು ₹2 ಲಕ್ಷಕ್ಕೂ ಅಧಿಕ ದಂಡ ವಿಧಿಸಲು ಅವಕಾಶವಿದೆ.
    ಬಾಲಕಾರ್ಮಿಕ ಅಥವಾ ಭಿಕ್ಷಾಟನೆ: ಮಕ್ಕಳನ್ನು ಅಥವಾ ವಯಸ್ಕರನ್ನು ಬಲವಂತವಾಗಿ ಭಿಕ್ಷಾಟನೆ ಅಥವಾ ಜೀತ ಪದ್ಧತಿಗೆ ದೂಡಿದರೆ 10 ರಿಂದ 14 ವರ್ಷಗಳವರೆಗೆ ಶಿಕ್ಷೆ ವಿಧಿಸಲಾಗುತ್ತದೆ.
  3. ವಿವಾದ ಮತ್ತು ಟೀಕೆಗಳು
    ಈ ಮಸೂದೆಯು ಅಂಗೀಕಾರವಾಗುವ ಸಮಯದಲ್ಲಿ ವಿರೋಧ ಪಕ್ಷಗಳು ಮತ್ತು ಮಾನವ ಹಕ್ಕುಗಳ ಹೋರಾಟಗಾರರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು:
    ಹಿನ್ನಡೆ: ಸುಪ್ರೀಂ ಕೋರ್ಟ್ ನೀಡಿದ್ದ ‘ನಾಲ್ಸಾ’ (NALSA) ತೀರ್ಪಿನ ಆಶಯಕ್ಕೆ ವಿರುದ್ಧವಾಗಿ, ವ್ಯಕ್ತಿಯ ಸ್ವಯಂ ಗುರುತಿನ ಹಕ್ಕನ್ನು ಕಿತ್ತುಕೊಳ್ಳಲಾಗಿದೆ ಎಂಬುದು ಪ್ರಮುಖ ಟೀಕೆ.
    ವೈದ್ಯಕೀಯ ಹಸ್ತಕ್ಷೇಪ: ವೈದ್ಯಕೀಯ ಮಂಡಳಿಯ ತಪಾಸಣೆಯು ವ್ಯಕ್ತಿಯ ಘನತೆ ಮತ್ತು ಖಾಸಗಿತನಕ್ಕೆ ಧಕ್ಕೆ ತರುತ್ತದೆ ಎಂದು ಹೋರಾಟಗಾರರು ವಾದಿಸಿದ್ದಾರೆ.

ಪತ್ರಿಕೆ-IV: ಸಾಮಾನ್ಯ ಅಧ್ಯಯನ-3

ಪತ್ರಿಕೆ-V: ಸಾಮಾನ್ಯ ಅಧ್ಯಯನ-4

ಕೆಎಎಸ್ ಪ್ರಚಲಿತ ವಿದ್ಯಮಾನಗಳು

ಕೆ.ಎ.ಎಸ್ ಪ್ರಚಲಿತ ವಿದ್ಯಮಾನಗಳು: ಪ್ರಚಲಿತ ವಿದ್ಯಮಾನಗಳು ಕೆ.ಪಿ.ಎಸ್.ಸಿ ಪಠ್ಯಕ್ರಮದ ‘ಜೀವಂತ ನಾಡಿಮಿಡಿತ’ವಿದ್ದಂತೆ. ಇದು ಕೇವಲ ಪ್ರತ್ಯೇಕವಾಗಿ ನೆನಪಿಡಬೇಕಾದ ವಿಷಯವಲ್ಲ; ಬದಲಿಗೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳೆರಡರಲ್ಲೂ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ನೀತಿಶಾಸ್ತ್ರವನ್ನು ಒಂದಕ್ಕೊಂದು ಬೆಸೆಯುವ ಒಂದು ಚಲನಶೀಲ ಕೊಂಡಿಯಾಗಿದೆ. ಮುಂಬರುವ ಪರೀಕ್ಷೆಗಳ ಸಂದರ್ಭದಲ್ಲಿ, ಕೇವಲ “ಸುದ್ದಿ ಓದುವುದರಿಂದ” “ಸುದ್ದಿಯ ಮೂಲಕ ಪಠ್ಯಕ್ರಮವನ್ನು ಅಭ್ಯಾಸ ಮಾಡುವುದು” ಎಂಬ ಹಂತಕ್ಕೆ ಬದಲಾಗುವುದು ಒಬ್ಬ ಗಂಭೀರ ಅಭ್ಯರ್ಥಿಯನ್ನು ಸಾಮಾನ್ಯ ಓದುಗನಿಂದ ಪ್ರತ್ಯೇಕಿಸುವ ಪ್ರಮುಖ ಬದಲಾವಣೆಯಾಗಿದೆ.

“ಪಠ್ಯಕ್ರಮಕ್ಕೆ ಮೊದಲ ಆದ್ಯತೆ” ಎಂಬ ತತ್ವ
ಕೆ.ಪಿ.ಎಸ್.ಸಿ ಪಠ್ಯಕ್ರಮಕ್ಕೆ ಕಟ್ಟುನಿಟ್ಟಾಗಿ ಹೊಂದಿಕೆಯಾಗುವ ಪ್ರಚಲಿತ ವಿದ್ಯಮಾನಗಳ ಮಾದರಿಯನ್ನು ಅನುಸರಿಸುವ ಮೂಲಕ, ನೀವು ದಿನಪತ್ರಿಕೆ ಓದಲು ವ್ಯಯಿಸುವ ಪ್ರತಿ ಗಂಟೆಯೂ ನಿಮ್ಮ ಪರೀಕ್ಷೆಯ ಶ್ರೇಣಿಯನ್ನು (Rank) ಉತ್ತಮಪಡಿಸಲು ಪೂರಕವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

Coming Soon…

ಕೆಎಎಸ್ ಪ್ರಚಲಿತ ವಿದ್ಯಮಾನಗಳು

ಕೆ.ಎ.ಎಸ್ ಪ್ರಚಲಿತ ವಿದ್ಯಮಾನಗಳು: ಪ್ರಚಲಿತ ವಿದ್ಯಮಾನಗಳು ಕೆ.ಪಿ.ಎಸ್.ಸಿ ಪಠ್ಯಕ್ರಮದ ‘ಜೀವಂತ ನಾಡಿಮಿಡಿತ’ವಿದ್ದಂತೆ. ಇದು ಕೇವಲ ಪ್ರತ್ಯೇಕವಾಗಿ ನೆನಪಿಡಬೇಕಾದ ವಿಷಯವಲ್ಲ; ಬದಲಿಗೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳೆರಡರಲ್ಲೂ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ನೀತಿಶಾಸ್ತ್ರವನ್ನು ಒಂದಕ್ಕೊಂದು ಬೆಸೆಯುವ ಒಂದು ಚಲನಶೀಲ ಕೊಂಡಿಯಾಗಿದೆ. ಮುಂಬರುವ ಪರೀಕ್ಷೆಗಳ ಸಂದರ್ಭದಲ್ಲಿ, ಕೇವಲ “ಸುದ್ದಿ ಓದುವುದರಿಂದ” “ಸುದ್ದಿಯ ಮೂಲಕ ಪಠ್ಯಕ್ರಮವನ್ನು ಅಭ್ಯಾಸ ಮಾಡುವುದು” ಎಂಬ ಹಂತಕ್ಕೆ ಬದಲಾಗುವುದು ಒಬ್ಬ ಗಂಭೀರ ಅಭ್ಯರ್ಥಿಯನ್ನು ಸಾಮಾನ್ಯ ಓದುಗನಿಂದ ಪ್ರತ್ಯೇಕಿಸುವ ಪ್ರಮುಖ ಬದಲಾವಣೆಯಾಗಿದೆ.

“ಪಠ್ಯಕ್ರಮಕ್ಕೆ ಮೊದಲ ಆದ್ಯತೆ” ಎಂಬ ತತ್ವ
ಕೆ.ಪಿ.ಎಸ್.ಸಿ ಪಠ್ಯಕ್ರಮಕ್ಕೆ ಕಟ್ಟುನಿಟ್ಟಾಗಿ ಹೊಂದಿಕೆಯಾಗುವ ಪ್ರಚಲಿತ ವಿದ್ಯಮಾನಗಳ ಮಾದರಿಯನ್ನು ಅನುಸರಿಸುವ ಮೂಲಕ, ನೀವು ದಿನಪತ್ರಿಕೆ ಓದಲು ವ್ಯಯಿಸುವ ಪ್ರತಿ ಗಂಟೆಯೂ ನಿಮ್ಮ ಪರೀಕ್ಷೆಯ ಶ್ರೇಣಿಯನ್ನು (Rank) ಉತ್ತಮಪಡಿಸಲು ಪೂರಕವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

ಪೂರ್ವಭಾವಿ ಪರೀಕ್ಷೆ

ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು

ವಿಶ್ವ ವುಶು: ಭಾರತಕ್ಕೆ 3 ಸ್ವರ್ಣ
ಸಂದರ್ಭ: ಭಾರತದ ಅಥೀಟ್ಗಳು ಇಲ್ಲಿ ನಡೆಯುತ್ತಿರುವ 10ನೇ ವಿಶ್ವ ಜೂನಿಯರ್ ವುಶು ಚಾಂಪಿಯನ್ಷಿಪ್ನಲ್ಲಿ ಮೂರು ಚಿನ್ನ ಸೇರಿ 10 ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದರು.

  • ಸ್ಯಾಂಡಾ (ಕುಸ್ತಿ) ಸ್ಪರ್ಧೆಯಲ್ಲಿ ಪಾರಮ್ಯ ಸಾಧಿಸಿದ ಭಾರತದ ಅಥೀಟ್ ಗಳು ಮೂರು ಚಿನ್ನದ ಪದಕ ಬಾಚಿದರು. ಉಪೇಂದ್ರೆ ತೌಗಮ್ (ಬಾಲಕರ 45 ಕೆ.ಜಿ.), ನೊಂಗಮ್ಮೆಥಮ್ ಪಮ್‌ಹೀಬಾ (ಜೂನಿಯರ್ ಬಾಲಕರ 52 ಕೆ.ಜಿ.) ಹಾಗೂ ಲಾಯ್ಕಂಗ್‌ಬಮ್ ವಿಕ್ಟರ್ (ಯುವ ಬಾಲಕರು 52 ಕೆ.ಜಿ.) ಸೋಮವಾರ ಸ್ವರ್ಣಕ್ಕೆ ಮುತ್ತಿಕ್ಕಿದರು.
  • ಬಾಲಕರ 48 ಕೆ ಜಿ. ವಿಭಾಗದಲ್ಲಿ ಯುವರಾಜ್ ಬೆಳ್ಳಿ ಜಯಿಸಿದರು. ಗೌತಮ್ ಮಂಕಾಸ್ (ಜೂನಿಯರ್ ಬಾಲಕರ 48 ಕೆ.ಜಿ.) ಹಾಗೂ ಅನು (ಯುವ ಬಾಲಕಿಯರು 48 ಕೆ.ಜಿ.) ಅವರು ಭಾನುವಾರ ಕಂಚು ಜಯಿಸಿದ್ದರು.
  • ಟೌಲೊ (ಕಲಾತ್ಮಕ) ಸ್ಪರ್ಧೆಗಳಲ್ಲಿ ಕೊಂಥ್ಜಮ್ ದೇವಿಕರಣಿ ದೇವಿ ಅವರು ತಲಾ ಒಂದು ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದರು. ರಾಜಕುಮಾರಿ ಲಾನ್‌ಚೆನ್ನಿ ಚಾನು ಕಂಚಿನ ಪದಕಕ್ಕೆ ಕೊರಳೊಡ್ಡಿದರು.

ವುಶು (Wushu) ಎಂಬುದು ಚೀನಾದ ಸಾಂಪ್ರದಾಯಿಕ ಸಮರ ಕಲೆಗಳ (Martial Arts) ಒಂದು ಆಧುನಿಕ ರೂಪವಾಗಿದೆ. ಇದು ಕೇವಲ ಕ್ರೀಡೆಯಲ್ಲದೆ, ಆತ್ಮರಕ್ಷಣೆ ಮತ್ತು ದೈಹಿಕ ಶಿಸ್ತಿನ ಸಮನ್ವಯವಾಗಿದೆ.
೧. ವುಶು ಎಂದರೇನು?
‘ವುಶು’ ಎಂಬ ಪದವು ಎರಡು ಚೀನೀ ಪದಗಳಿಂದ ಬಂದಿದೆ: ‘Wu’ (ಮಿಲಿಟರಿ/ಸಮರ) ಮತ್ತು ‘Shu’ (ಕಲೆ). ಇದನ್ನು ಸಾಮಾನ್ಯವಾಗಿ ಎರಡು ವಿಭಾಗಗಳಲ್ಲಿ ಸ್ಪರ್ಧಿಸಲಾಗುತ್ತದೆ:
ತಾವೊಲು (Taolu): ಇದು ಕತ್ತಿವರಸೆ, ಲಾಠಿ ಅಥವಾ ಬರಿಗೈ ಮೂಲಕ ಮಾಡುವ ಕಲಾತ್ಮಕ ಚಲನೆಗಳನ್ನು ಒಳಗೊಂಡಿರುತ್ತದೆ. ಇದು ಜಿಮ್ನಾಸ್ಟಿಕ್ಸ್‌ನಂತೆ ಪ್ರದರ್ಶನ ಆಧಾರಿತವಾಗಿರುತ್ತದೆ.
ಸಂದಾ (Sanda): ಇದು ಪೂರ್ಣ-ಸಂಪರ್ಕದ (Full-contact) ಹೋರಾಟವಾಗಿದೆ. ಇದರಲ್ಲಿ ಬಾಕ್ಸಿಂಗ್, ಕಿಕ್-ಬಾಕ್ಸಿಂಗ್ ಮತ್ತು ಕುಸ್ತಿಯ ಅಂಶಗಳಿರುತ್ತವೆ.

೨. ವಿಶ್ವ ವುಶು ಚಾಂಪಿಯನ್‌ಶಿಪ್ (World Wushu Championships – WWC)
ಇದು ಅಂತರಾಷ್ಟ್ರೀಯ ವುಶು ಫೆಡರೇಶನ್ (IWUF) ಆಯೋಜಿಸುವ ಅತ್ಯುನ್ನತ ಮಟ್ಟದ ಜಾಗತಿಕ ಸ್ಪರ್ಧೆಯಾಗಿದೆ.
ಆರಂಭ: ಮೊದಲ ವಿಶ್ವ ಚಾಂಪಿಯನ್‌ಶಿಪ್ 1991 ರಲ್ಲಿ ಬೀಜಿಂಗ್‌ನಲ್ಲಿ ನಡೆಯಿತು.
ಆವರ್ತನ: ಇದು ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುತ್ತದೆ.
ಪ್ರಾಮುಖ್ಯತೆ: ಇದು ವಿಶ್ವದಾದ್ಯಂತ ಇರುವ ಅತ್ಯುತ್ತಮ ವುಶು ಕ್ರೀಡಾಪಟುಗಳನ್ನು ಒಂದೆಡೆ ಸೇರಿಸುತ್ತದೆ.

೩. ಭಾರತ ಮತ್ತು ವುಶು
ಇತ್ತೀಚಿನ ವರ್ಷಗಳಲ್ಲಿ ಭಾರತವು ವಿಶ್ವ ವುಶು ವೇದಿಕೆಯಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದೆ:
ರೋಶಿಬಿನಾ ದೇವಿ (Roshibina Devi): ಇವರು ಏಷ್ಯನ್ ಗೇಮ್ಸ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ಪದಕ ಗೆದ್ದು ಭಾರತದ ಹೆಮ್ಮೆಯಾಗಿದ್ದಾರೆ.
ಪೂಜಾ ಕಾದಿಯನ್ (Pooja Kadian): 2017ರಲ್ಲಿ ವಿಶ್ವ ವುಶು ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಇತಿಹಾಸ ಸೃಷ್ಟಿಸಿದರು.
ಸಂತೋಷ್ ಕುಮಾರ್ ಮತ್ತು ಸೂರ್ಯ ಭಾನು ಪ್ರತಾಪ್ ಸಿಂಗ್: ಇವರು ಸಹ ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕ ವಿಜೇತರಾಗಿದ್ದಾರೆ.


ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು

ಜನಸಂಖ್ಯಾಶಾಸ್ತ್ರ: ನಾಳೆಯಿಂದ ಜನಗಣತಿ
ಸಂದರ್ಭ: ಕರ್ನಾಟಕದಲ್ಲಿ ಏಪ್ರಿಲ್ 1ರಿಂದ ಸ್ವಯಂ ಗಣತಿಯೊಂದಿಗೆ ‘ಜನಗಣತಿ-2027’ ಆರಂಭವಾಗಲಿದೆ. ಏಪ್ರಿಲ್ 16ರಿಂದ ಒಂದು ತಿಂಗಳು ‘ಮನೆಗಳ ಪಟ್ಟಿ ತಯಾರಿಕೆ ಮತ್ತು ವಸತಿ ಗಣತಿ’ ನಡೆಯಲಿದೆ.

  • ಕೇಂದ್ರ ಗೃಹ ಸಚಿವಾಲಯ 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲು ಉದ್ದೇಶಿಸಿದ್ದು. ಮೊದಲ ಹಂತದಲ್ಲಿ ಮನೆಪಟ್ಟಿ ಮತ್ತು ಮನೆ ಗಣತಿಯನ್ನು ಏಪ್ರಿಲ್ 1ರಿಂದ 15ರವರೆಗೆ ವೆಬ್ ಪೋರ್ಟಲ್ (https://se.census.gov.in) ಮೂಲಕ ಸ್ವಯಂ-ಗಣತಿಗೆ ಅವಕಾಶ ಕಲ್ಪಿಸಿರುತ್ತದೆ.ಮನೆಯ ಯಾವುದೇ ಒಬ್ಬ ಸದಸ್ಯ ಸುಮಾರು 15ರಿಂದ 20 ನಿಮಿಷಗಳಲ್ಲಿ ಸ್ವಯಂ-ಗಣತಿ ಮಾಡಿ, ಮನೆಯ ವಿವರಗಳನ್ನು ಒದಗಿಸಬಹುದು ಮತ್ತು ಮೊಬೈಲ್/ಇಮೇಲ್‌ನಲ್ಲಿ ‘ಸ್ವಯಂ-ಗಣತಿ ಐಡಿ’ಯನ್ನು ಪಡೆಯ ಬಹುದಾಗಿರುತ್ತದೆ. ಸ್ವಯಂ ಗಣತಿ ಪ್ರಕ್ರಿಯೆಗಾಗಿ ನಿಗದಿಪಡಿಸಿರುವ ಅವಧಿಯಲ್ಲಿ ನಾಗರಿಕರು ತಮ್ಮ ಮಾಹಿತಿಯನ್ನು ದಾಖಲಿಸಲು ಅವಕಾಶವಿದ್ದು, ಇದರಿಂದ ಜನಗಣತಿ ಕಾರ್ಯದಲ್ಲಿ ಪಾರದರ್ಶಕತೆ, ವೇಗ ಮತ್ತು ನಿಖರತೆ ಹೆಚ್ಚಲಿದೆ.
  • ಜನಗಣತಿಯ ಎರಡನೇ ಹಂತ ಏಪ್ರಿಲ್ 16ರಿಂದ ಮೇ 15ರವರೆಗೆ ನಡೆಯಲಿದ್ದು, ಗಣತಿದಾರರು ಮನೆ-ಮನೆಗೆ ಭೇಟಿ ನೀಡಿ ಮನೆಪಟ್ಟಿ ಮತ್ತು ಮನೆ ಗಣತಿ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ ಗಣತಿ ದಾರರು ಮನೆಗೆ ಭೇಟಿ ನೀಡಿದಾಗ, ದೃಢೀಕರಿಸಲು ಮತ್ತು ಸ್ವಯಂ-ಗಣತಿ ದತ್ತಾಂಶದ ಅಂತಿಮ ಸಲ್ಲಿಕೆಗಾಗಿ ಸ್ವಯಂ-ಗಣತಿ ಐಡಿಯನ್ನು ಗಣತಿದಾರರೊಂದಿಗೆ ಹಂಚಿಕೊಳ್ಳಬೇಕಾಗಿರುತ್ತದೆ.
  • ‘ಮನೆಗಳ ಪಟ್ಟಿ ತಯಾರಿಕೆ ಮತ್ತು ವಸತಿ ಗಣತಿ’ಯು ಜನಗಣತಿಯ ಮೊದಲ ಹಂತವಾಗಿದ್ದು, ದೇಶದಾದ್ಯಂತ ಏಪ್ರಿಲ್ 1ರಿಂದ ಸೆಪ್ಟೆಂಬರ್ 30ರವರೆಗೆ ನಡೆಸಲಾಗುವುದು. ಈ ಸಮಯದಲ್ಲಿ ಮನೆಗಳ ಸ್ಥಿತಿಗತಿಗಳು, ಆಸ್ತಿಗಳು ಮತ್ತು ಮನೆಗಳ ಸೌಕರ್ಯಗಳಿಗೆ ಸಂಬಂಧಿಸಿದ ವಿವರಗಳನ್ನು ಕಲೆ ಹಾಕಲಾಗುತ್ತದೆ.
  • ಕರ್ನಾಟಕದೊಂದಿಗೆ ಇತರ ಏಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಪ್ರಕ್ರಿಯೆ ಆರಂಭವಾಗಲಿದೆ ಕರ್ನಾಟಕದಲ್ಲಿ ಏಪ್ರಿಲ್ 1ರಿಂದ 15ರ ವರೆಗೆ ಸ್ವಯಂ ಗಣತಿ ಜರುಗಲಿದೆ. ಮನೆ-ಮನೆಗೆ ತೆರಳಿ ಮಾಹಿತಿ ಕಲೆ ಹಾಕುವ ಪ್ರಕ್ರಿಯೆ ಏಪ್ರಿಲ್ 16ರಂದು ಪ್ರಾರಂಭವಾಗಿ ಮೇ 15ರಂದು ಕೊನೆಗೊಳ್ಳಲಿದೆ.
  • ಸ್ವಯಂ ಎಣಿಕೆ ಪ್ರಕ್ರಿಯೆಯ ಸಂದರ್ಭದಲ್ಲಿ ವ್ಯಕ್ತಿಯು ಪೋರ್ಟಲ್‌ನಲ್ಲಿ ತಮ್ಮ ಮನೆಯ ವಿವರಗಳನ್ನು ಭರ್ತಿ ಮಾಡಬೇಕು. ಬಳಿಕ ಸ್ವಯಂ ಗಣತಿಯ ಸಂಖ್ಯೆ ಲಭ್ಯವಾಗುತ್ತದೆ. ಈ ಸಂಖ್ಯೆಯನ್ನು ಗಣತಿದಾರರಿಗೆ ಕ್ಷೇತ್ರ ಭೇಟಿಯ ಸಂದರ್ಭದಲ್ಲಿ ನೀಡಬೇಕು ಮತ್ತು ಸ್ವಯಂ ಎಣಿಕೆಯ ದತ್ತಾಂಶಗಳನ್ನು ದೃಢೀಕರಿಸಿದ ನಂತರ ಗಣತಿದಾರರು ಇದನ್ನು ಮೂಲ ದತ್ತಾಂಶದಲ್ಲಿ ಸೇರಿಸುತ್ತಾರೆ.
  • ಪಶ್ಚಿಮ ಬಂಗಾಳ ಹೊರತುಪಡಿಸಿ, ಚುನಾವಣೆ ನಡೆಯಲಿರುವ ರಾಜ್ಯಗಳ ಗಣತಿ ವೇಳಾಪಟ್ಟಿಯನ್ನು ಸಹ ಪ್ರಕಟಿಸಲಾಗಿದೆ. ಪುದುಚೇರಿಯಲ್ಲಿ ಮೇ 17ರಿಂದ ಸ್ವಯಂ ಎಣಿಕೆ ಮತ್ತು ಜೂನ್ 1ರಿಂದ ಮನೆ ಮನೆಗೆ ತೆರಳಿ ಎಣಿಕೆ ನಡೆಯಲಿದೆ. ಕೇರಳದಲ್ಲಿ ಕ್ರಮವಾಗಿ ಜೂನ್ 16 ಮತ್ತು ಜುಲೈ 1ರಂದು ಗಣತಿ ನಡೆಯಲಿದೆ ತಮಿಳುನಾಡಿನಲ್ಲಿ ಕ್ರಮವಾಗಿ ಜುಲೈ 17 ಮತ್ತು ಆಗಸ್ಟ್ 1 ರಂದು ಹಾಗೂ ಅಸ್ಸಾಂನಲ್ಲಿ ಆಗಸ್ಟ್ 2 ಮತ್ತು ಆಗಸ್ಟ್ 17 ರಂದು ಗಣತಿ ಜರುಗಲಿದೆ ಸ್ವಯಂ ಗಣತಿ ಆರಂಭವಾಗುವ (ಆಗಸ್ಟ್ 17ರಿಂದ) ಮತ್ತು ಮನೆ ಮನೆ ಎಣಿಕೆ ಪ್ರಕ್ರಿಯೆ (ಸೆಪ್ಟೆಂಬರ್ 1ರಿಂದ 30) ಪೂರ್ಣಗೊಳಿಸುವ ಕೊನೆಯ ರಾಜ್ಯ ಮಣಿಪುರವಾಗಲಿದೆ.
  • ಮುಂದಿನ ವರ್ಷದ ಫೆಬ್ರುವರಿಯಲ್ಲಿ ಎರಡನೇ ಹಂತದ ಗಣತಿ ನಡೆಯಲಿದೆ. ಆಗ ಜನಸಂಖ್ಯೆ ಎಣಿಕೆ ಮಾಡಲಾಗುತ್ತದೆ. ಆಗ ಪ್ರತಿಯೊಂದು ಮನೆಯ ಪ್ರತಿ ವ್ಯಕ್ತಿಯ ಜಾತಿ, ಸಾಮಾಜಿಕ-ಆರ್ಥಿಕ ಸಾಮಾಜಿಕ ಮತ್ತು ಇತರ ವಿವರ ಸಂಗ್ರಹಿಸಲಾಗುತ್ತದೆ.
  • ಜನಗಣತಿ ಮಾಹಿತಿಯ ಆಧಾರದ ಮೇಲೆ ಭವಿಷ್ಯದ ನಗರ ಯೋಜನೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂಸಾರ್ವಜನಿಕ ಕಲ್ಯಾಣ ಕಾರ್ಯಕ್ರಮ ಗಳನ್ನು ರೂಪಿಸಲಾಗುತ್ತದೆ.

ಮುಖ್ಯ ಪರೀಕ್ಷೆ

ಪತ್ರಿಕೆ-I: ಪ್ರಬಂಧಗಳು

ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ

“ಪ್ರಜಾಪ್ರಭುತ್ವ ಎನ್ನುವುದು ಕೇವಲ ಅಂಕಿಅಂಶಗಳ ಆಟವಲ್ಲ, ಅದು ಸಮಾನ ಧ್ವನಿಯ ಹಕ್ಕು. ಭಾರತದ ಸಂದರ್ಭದಲ್ಲಿ, ಚುನಾವಣಾ ಗಣಿತಕ್ಕಿಂತ ಒಕ್ಕೂಟ ವ್ಯವಸ್ಥೆಯ ಸ್ಥಿರತೆಯು ಹೆಚ್ಚು ಮುಖ್ಯವಾಗಿದೆ – ಚರ್ಚಿಸಿ.”

ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ

“ಜಾಗತಿಕ ಇಂಧನ ಬಿಕ್ಕಟ್ಟು ಮತ್ತು ಪರಿಸರ ಮಾಲಿನ್ಯದ ಹಿನ್ನೆಲೆಯಲ್ಲಿ, ಕರ್ನಾಟಕದ ಎಲೆಕ್ಟ್ರಿಕ್ ವಾಹನ (EV) ನೀತಿಯು ರಾಜ್ಯವನ್ನು ಸುಸ್ಥಿರ ಸಾರಿಗೆಯತ್ತ ಕೊಂಡೊಯ್ಯುವಲ್ಲಿ ಎಷ್ಟು ಯಶಸ್ವಿಯಾಗಿದೆ? ವಿಮರ್ಶಿಸಿ.”

ಪತ್ರಿಕೆ-II: ಸಾಮಾನ್ಯ ಅಧ್ಯಯನ-1

ಸಾರ್ವಜನಿಕ ವಿತರಣೆ ವ್ಯವಸ್ಥೆಯ (ಪಿಡಿಎಸ್): ಸೀಮೆಎಣ್ಣೆ ವಿತರಣೆಗೆ ಮುಂದಾದ ಕೇಂದ್ರ
ಸಂದರ್ಭ: ಇಂಧನ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯ ದಿಂದ ತೊಂದರೆ ಅನುಭವಿಸುತ್ತಿರುವ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಗೃಹ ಬಳಕೆ ಉದ್ದೇಶಗಳಿಗಾಗಿ ತಾತ್ಕಾಲಿಕವಾಗಿ ಸೀಮೆಎಣ್ಣೆ ವಿತರಣೆಗೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮುಂದಾಗಿದೆ.

  • ‘ಸೀಮೆಎಣ್ಣೆ ಮುಕ್ತ’ ಎಂದು ಘೋಷಿಸಿರುವ ರಾಜ್ಯಗಳೂ ಸೇರಿದಂತೆ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಾರ್ವಜನಿಕ ವಿತರಣೆ ವ್ಯವಸ್ಥೆಯ (ಪಿಡಿಎಸ್) ಅಡಿಯಲ್ಲಿ ತಾತ್ಕಾಲಿಕವಾಗಿ ಸೀಮೆಎಣ್ಣೆ ಹಂಚಿಕೆ ಮಾಡಲಾಗುವುದು ಎಲ್‌ಪಿಜಿ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಮನೆಗಳಲ್ಲಿ ಅಡುಗೆ ಮಾಡಲು ಮತ್ತು ದೀಪದ ಅಗತ್ಯಗಳನ್ನು ಪೂರೈಸಿಕೊಳ್ಳಲು ಇದು ನೆರವಾಗಲಿದೆ.
  • ಅಧಿಸೂಚನೆ ಪ್ರಕಾರ, ಪ್ರತಿ ಜಿಲ್ಲೆಗೆ ಗೊತ್ತುಪಡಿಸಿದ ಎರಡು ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳ ಮಾಲೀಕತ್ವದ ಸೇವಾ ಕೇಂದ್ರಗಳು 5 ಸಾವಿರ ಲೀಟರ್‌ವರೆಗೆ ಸೀಮೆಎಣ್ಣೆ ದಾಸ್ತಾನು ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ.
  • ಈ ಆದೇಶವು ತಕ್ಷಣದಿಂದಲೇ ಜಾರಿಗೆ ಬರಟ್ಟಿದ್ದು. ಮುಂದಿನ 60 ದಿನದವರೆಗೆ ಅಥವಾ ಮುಂದಿನ ಆದೇಶದವರೆಗೆ ಜಾರಿಯಲ್ಲಿ ಇರಲಿದೆ.
  • ಭಾರತವು ತನ್ನ ಆಡುಗೆ ಅನಿಲದ ಅಗತ್ಯದ ಪೈಕಿ ಶೇ 60ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ ಇದರಲ್ಲಿ ಶೇ 90ರಷ್ಟು ಕೊಲ್ಲಿ ರಾಷ್ಟ್ರಗಳಿಂದ ಬರುತ್ತದೆ ಸಂಘರ್ಷದಿಂದ ಪೂರೈಕೆಗೆ ಸಮಸ್ಯೆಯಾಗಿದ್ದು ಹೋಟೆಲ್ ಮತ್ತು ರೆಸ್ಟೋರೆಂಟ್ಗಳಂತಹ ವಾಣಿಜ್ಯ ಬಳಕೆದಾರರಿಗೆ ಅನಿಲ ಪೂರೈಕೆಯಲ್ಲಿ ಕಡಿತ ಉಂಟಾಗಿದೆ.
  • ಲಭ್ಯವಿರುವ ಎಲ್‌ಪಿಜಿಯಲ್ಲಿ ಗೃಹ ಬಳಕೆಗೆ ಆದ್ಯತೆ ನೀಡಲಾಗಿದ್ದರೂ ಸೀಮಿತ ದಾಸ್ತಾನಿನ ಆತಂಕದಿಂದ ಜನರು ಭೀತಿಗೊಂಡು ಖರೀದಿಸಲು ಮುಂದಾಗಿದ್ದಾರೆ ಎಲ್‌ಪಿಜಿ ಮೇಲಿನ ಒತ್ತಡ ಕಡಿಮೆ ಮಾಡಲು ಇದೀಗ ಸೀಮೆ ಎಣ್ಣೆ ವಿತರಣೆಗೆ ಸರ್ಕಾರ ಮುಂದಾಗಿದೆ.

ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರ: ಸಂಹಿತೆಯಲ್ಲಿ 12 ತಿದ್ದುಪಡಿ: ಆಡಳಿತ ಸುಧಾರಣೆಗೆ ಸಹಕಾರಿ: ದಿವಾಳಿತನ ಮಸೂದೆಗೆ ಲೋಕಸಭೆ ಒಪ್ಪಿಗೆ
ಸಂದರ್ಭ: ದಿವಾಳಿತನ ಮತ್ತು ದಿವಾಳಿತನ ಸಂಹಿತೆ ತಿದ್ದುಪಡಿ ಮಸೂದೆಗೆ ಲೋಕಸಭೆ ಸೋಮವಾರ ಒಪ್ಪಿಗೆ ನೀಡಿದೆ.

  • ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಅವರು ಲೋಕಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಿದರು.
  • 2016ರಲ್ಲಿ ಜಾರಿಗೊಂಡಿದ್ದ ದಿವಾಳಿತನ ಮತ್ತು ದಿವಾಳಿತನ ಸಂಹಿತೆಗೆ (ಐಬಿಸಿ) 12 ತಿದ್ದುಪಡಿಗಳನ್ನು ಮಾಡಲಾಗುತ್ತಿದೆ. ಇದು ಪಾಲುದಾರರ ಮೌಲ್ಯವನ್ನು ಗರಿಷ್ಠಗೊಳಿಸಲು ಮತ್ತು ಆಡಳಿತ ಪ್ರಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡಲಿದೆ.
  • ತಿದ್ದುಪಡಿಗಳು ಅಸ್ತಿತ್ವ ದಲ್ಲಿರುವ ದಿವಾಳಿತನ ಚೌಕಟ್ಟನ್ನು ಬಲಪಡಿಸಲು, ಎದುರಾಗುವ ಸವಾಲುಗಳನ್ನು ಪರಿಹರಿಸಲು ಹಾಗೂ ವಿಕಸನಗೊಳ್ಳುತ್ತಿರುವ ಜಾಗತಿಕ ರೂಢಿಗಳನ್ನು ಅಳವಡಿಸಲು ಯತ್ನಿಸುತ್ತವೆ.
  • ದೇಶದ ಬ್ಯಾಂಕಿಂಗ್ ಕ್ಷೇತ್ರದ ಆರೋಗ್ಯ ಸುಧಾರಿಸುವಲ್ಲಿ ಈ ಕಾಯ್ದೆಯು ನಿರ್ಣಾಯಕ ಪಾತ್ರ ವಹಿಸಲಿದೆ.
  • ದಿವಾಳಿತನ ಮತ್ತು ದಿವಾಳಿತನ ಸಂಹಿತೆ (ತಿದ್ದುಪಡಿ) ಮಸೂದೆ-2025 ಅನ್ನು ಲೋಕಸಭೆಯು ಅಂಗೀಕರಿಸಿದೆ.
  • ಐಬಿಸಿ ತಿದ್ದುಪಡಿ ಮಾಡಲು ಸರ್ಕಾರವು 2025ರ ಆಗಸ್ಟ್ 12ರಂದು ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಿತ್ತು.
  • ದಿವಾಳಿತನ ಪರಿಹಾರ ಅರ್ಜಿಗಳನ್ನು ವಿಲೇವಾರಿಗೊಳಿಸಲು ತೆಗೆದುಕೊಳ್ಳುವ ಸಮಯವನ್ನು ಕಡಿಮೆ ಮಾಡುವ ನಿಬಂಧನೆಗಳು ಒಳಗೊಂಡಂತೆ ಹಲವು ಬದಲಾವಣೆಗಳನ್ನು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿತ್ತು.
  • ಈ ಮಸೂದೆಯನ್ನು ಲೋಕಸಭೆಯ ಪರಿಶೀಲನಾ ಸಮಿತಿಗೆ ಸ್ಥಳುಹಿಸಲಾಗಿತ್ತು ಸಮಿತಿಯು 2025ರ ಡಿಸೆಂಬರ್‌ನಲ್ಲಿ ತನ್ನ ವರದಿ ಸಲ್ಲಿಸಿತ್ತು. ಸಮಿತಿಯ ಎಲ್ಲ ಶಿಫಾರಸುಗಳನ್ನು ಅಂಗೀಕರಿಸಲಾಗಿದೆ.

ದಿವಾಳಿತನ ಮತ್ತು ದಿವಾಳಿತನ ಸಂಹಿತೆ (Insolvency and Bankruptcy Code – IBC), 2016ರಲ್ಲಿ ಜಾರಿಗೆ ಬಂದ ಈ ಕಾಯಿದೆಯು ಭಾರತದ ಆರ್ಥಿಕ ಸುಧಾರಣೆಯಲ್ಲಿ ಒಂದು ಮಹತ್ವದ ಮೈಲಿಗಲ್ಲು.

೧. ಸಂಹಿತೆಯ ಮುಖ್ಯ ಉದ್ದೇಶ
IBC ಜಾರಿಗೆ ಬರುವ ಮೊದಲು, ಸಾಲ ಮರುಪಾವತಿ ಮಾಡದ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅನೇಕ ಹಳೆಯ ಕಾಯಿದೆಗಳಿದ್ದವು (ಉದಾ: SICA, SARFAESI). ಇವುಗಳಿಂದಾಗಿ ಪ್ರಕ್ರಿಯೆಗಳು ವಿಳಂಬವಾಗುತ್ತಿದ್ದವು. IBC ಈ ಕೆಳಗಿನ ಗುರಿಗಳನ್ನು ಹೊಂದಿದೆ:
ಸಮಯ ಮಿತಿ: ಸಾಲದ ಸುಳಿಯಲ್ಲಿರುವ ಕಂಪನಿಗಳ ಸಮಸ್ಯೆಯನ್ನು ನಿಗದಿತ ಸಮಯದಲ್ಲಿ (ಗರಿಷ್ಠ 330 ದಿನಗಳು) ಪರಿಹರಿಸುವುದು.
ವ್ಯಾಪಾರ ಸುಲಭೀಕರಣ (Ease of Doing Business): ವಿಫಲವಾದ ಕಂಪನಿಗಳಿಂದ ಬಂಡವಾಳವನ್ನು ಮುಕ್ತಗೊಳಿಸಿ ಆರ್ಥಿಕತೆಯನ್ನು ಚುರುಕುಗೊಳಿಸುವುದು.
ಹೂಡಿಕೆದಾರರ ರಕ್ಷಣೆ: ಸಾಲ ನೀಡಿದ ಬ್ಯಾಂಕುಗಳು ಮತ್ತು ಇತರ ಸಂಸ್ಥೆಗಳ ಹಿತಾಸಕ್ತಿ ಕಾಪಾಡುವುದು.

೨. ಪ್ರಮುಖ ತಿದ್ದುಪಡಿಗಳು (IBC Amendment Bills)
ಕಾಲಕಾಲಕ್ಕೆ ಸರ್ಕಾರವು ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು ತಿದ್ದುಪಡಿಗಳನ್ನು ತಂದಿದೆ. ಇತ್ತೀಚಿನ ಪ್ರಮುಖ ಬದಲಾವಣೆಗಳು ಇಲ್ಲಿವೆ:
ಅ) ಪ್ರಿ-ಪ್ಯಾಕೇಜ್ಡ್ ದಿವಾಳಿತನ ಪರಿಹಾರ ಪ್ರಕ್ರಿಯೆ (Pre-packaged Insolvency Resolution – PPIRP)
ಇದು ವಿಶೇಷವಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (MSMEs) ಸಹಾಯ ಮಾಡುತ್ತದೆ.
ಇಲ್ಲಿ ಕಂಪನಿಯು ದಿವಾಳಿಯಾದಾಗ, ಕೋರ್ಟ್‌ಗೆ ಹೋಗುವ ಮೊದಲೇ ಸಾಲಗಾರರು ಮತ್ತು ಮಾಲೀಕರು ಒಪ್ಪಂದಕ್ಕೆ ಬರಲು ಅವಕಾಶವಿರುತ್ತದೆ. ಇದರಿಂದ ಸಮಯ ಮತ್ತು ಹಣ ಉಳಿತಾಯವಾಗುತ್ತದೆ.

ಆ) ಮನೆ ಖರೀದಿದಾರರ ಹಕ್ಕುಗಳು (Homebuyers’ Rights)
ತಿದ್ದುಪಡಿಯ ಮೂಲಕ ಮನೆ ಖರೀದಿದಾರರನ್ನು ‘ಹಣಕಾಸು ಸಾಲಗಾರರು’ (Financial Creditors) ಎಂದು ಪರಿಗಣಿಸಲಾಗಿದೆ. ಅಂದರೆ, ಬಿಲ್ಡರ್ ಕಂಪನಿ ದಿವಾಳಿಯಾದರೆ, ಬ್ಯಾಂಕುಗಳಂತೆಯೇ ಮನೆ ಖರೀದಿದಾರರಿಗೂ ಸಮಾನ ಹಕ್ಕುಗಳು ಸಿಗುತ್ತವೆ.

ಇ) ಗಡಿಯಾಚೆಗಿನ ದಿವಾಳಿತನ (Cross-border Insolvency)
ಭಾರತೀಯ ಕಂಪನಿಗಳು ವಿದೇಶದಲ್ಲಿ ಆಸ್ತಿ ಹೊಂದಿದ್ದರೆ ಅಥವಾ ವಿದೇಶಿ ಕಂಪನಿಗಳು ಭಾರತದಲ್ಲಿ ಸಾಲ ಬಾಕಿ ಇರಿಸಿದ್ದರೆ, ಅಂತಹ ಪ್ರಕರಣಗಳನ್ನು ನಿರ್ವಹಿಸಲು ಹೊಸ ನಿಯಮಗಳನ್ನು ತರಲಾಗುತ್ತಿದೆ.

೩. IBC ಕಾರ್ಯನಿರ್ವಹಿಸುವ ಸಂಸ್ಥೆಗಳು
ಈ ಸಂಹಿತೆಯನ್ನು ಜಾರಿಗೊಳಿಸಲು ನಾಲ್ಕು ಪ್ರಮುಖ ಪಿಲ್ಲರ್‌ಗಳಿವೆ:
Insolvency Professionals (IPs): ದಿವಾಳಿಯಾದ ಕಂಪನಿಯ ಆಡಳಿತವನ್ನು ತಾತ್ಕಾಲಿಕವಾಗಿ ನೋಡಿಕೊಳ್ಳುವ ವೃತ್ತಿಪರರು.
Insolvency Agencies: ಇವರು ಈ ವೃತ್ತಿಪರರನ್ನು (IPs) ನೋಂದಾಯಿಸುತ್ತಾರೆ ಮತ್ತು ನಿಯಂತ್ರಿಸುತ್ತಾರೆ.
Information Utilities (IU): ಸಾಲ ಮತ್ತು ಮರುಪಾವತಿಯ ಬಗ್ಗೆ ಡಿಜಿಟಲ್ ಮಾಹಿತಿಯನ್ನು ಸಂಗ್ರಹಿಸುವ ಕೇಂದ್ರಗಳು.
IBBI (Insolvency and Bankruptcy Board of India): ಈ ಇಡೀ ವ್ಯವಸ್ಥೆಯನ್ನು ನಿಯಂತ್ರಿಸುವ ಉನ್ನತ ಸಂಸ್ಥೆ.

೪. ನ್ಯಾಯಾಂಗ ವ್ಯವಸ್ಥೆ (Adjudicating Authority)
ದಿವಾಳಿತನ ಪ್ರಕರಣಗಳ ವಿಚಾರಣೆ ಎರಡು ಪ್ರತ್ಯೇಕ ವೇದಿಕೆಗಳಲ್ಲಿ ನಡೆಯುತ್ತದೆ:
NCLT (National Company Law Tribunal): ಕಂಪನಿಗಳು ಮತ್ತು ಎಲ್‌ಎಲ್‌ಪಿಗಳಿಗೆ (LLP).
DRT (Debt Recovery Tribunal): ವ್ಯಕ್ತಿಗಳು ಮತ್ತು ಪಾಲುದಾರಿಕೆ ಸಂಸ್ಥೆಗಳಿಗೆ.

೫. ಸವಾಲುಗಳು
ನ್ಯಾಯಾಲಯಗಳಲ್ಲಿನ ವಿಳಂಬ: ನಿಗದಿತ ಸಮಯದಲ್ಲಿ ಪ್ರಕರಣಗಳು ಮುಗಿಯುತ್ತಿಲ್ಲ.
ಕಡಿಮೆ ರಿಕವರಿ ದರ: ಸಾಲ ನೀಡಿದವರಿಗೆ ಸಿಗುತ್ತಿರುವ ಹಣದ ಪ್ರಮಾಣ (Recovery Rate) ನಿರೀಕ್ಷೆಗಿಂತ ಕಡಿಮೆಯಿದೆ.
ಸಿಬ್ಬಂದಿ ಕೊರತೆ: NCLT ಗಳಲ್ಲಿ ನ್ಯಾಯಾಧೀಶರ ಕೊರತೆ ಇರುವುದು ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತಿದೆ.೫. ಸವಾಲುಗಳು
ನ್ಯಾಯಾಲಯಗಳಲ್ಲಿನ ವಿಳಂಬ: ನಿಗದಿತ ಸಮಯದಲ್ಲಿ ಪ್ರಕರಣಗಳು ಮುಗಿಯುತ್ತಿಲ್ಲ.
ಕಡಿಮೆ ರಿಕವರಿ ದರ: ಸಾಲ ನೀಡಿದವರಿಗೆ ಸಿಗುತ್ತಿರುವ ಹಣದ ಪ್ರಮಾಣ (Recovery Rate) ನಿರೀಕ್ಷೆಗಿಂತ ಕಡಿಮೆಯಿದೆ.
ಸಿಬ್ಬಂದಿ ಕೊರತೆ: NCLT ಗಳಲ್ಲಿ ನ್ಯಾಯಾಧೀಶರ ಕೊರತೆ ಇರುವುದು ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತಿದೆ.

1949ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ: ಬಡ್ಡಿ ಆದಾಯಕ್ಕೂ ಟಿಡಿಎಸ್ ಕಡಿತ
ಸಂದರ್ಭ: 1949ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯಲ್ಲಿನ ‘ಬ್ಯಾಂಕಿಂಗ್ ಕಂಪನಿ’ ವ್ಯಾಖ್ಯಾನದ ವ್ಯಾಪ್ತಿಯಲ್ಲಿ ಬರುವ ಎಲ್ಲ ಹಣಕಾಸು ಸಂಸ್ಥೆಗಳು (50,000ಕ್ಕಿಂತ ಹೆಚ್ಚಿನ ಮೊತ್ತದ ಬಡ್ಡಿ ವರಮಾನದ ಮೇಲೆ ಇನ್ನು ಮೂಲದಲ್ಲೇ ತೆರಿಗೆ ಕಡಿತ (ಟಿಡಿಎಸ್) ಮಾಡಲಿವೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

  • ಬ್ಯಾಂಕ್ ಅಥವಾ ಅಂಚೆ ಕಚೇರಿ ಠೇವಣಿಗಳಿಂದ ಬರುವ ಬಡ್ಡಿ ಆದಾಯವು ಆರ್ಥಿಕ ವರ್ಷವೊಂದರಲ್ಲಿ ಸಾಮಾನ್ಯ ನಾಗರಿಕರಿಗೆ ₹50,000 ಮತ್ತು ಹಿರಿಯ ನಾಗರಿಕರಿಗೆ ₹1 ಲಕ್ಷದ ಮಿತಿ ಮೀರಿದರೆ ಅದರಿಂದ ಟಿಡಿಎಸ್ ಕಡಿತಗೊಳಿಸಲಾಗುವುದು. 2025ರ ಆದಾಯ ತೆರಿಗೆ ಕಾಯ್ದೆಯ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಇಲಾಖೆ ‘ಎಕ್ಸ್’ಪೋಸ್ಟ್‌ನಲ್ಲಿ ಮಾಹಿತಿ ನೀಡಿದೆ.

ಮೂಲದಲ್ಲೇ ತೆರಿಗೆ ಕಡಿತ (Tax Deducted at Source – TDS) ಎಂಬುದು ಭಾರತೀಯ ಆದಾಯ ತೆರಿಗೆ ವ್ಯವಸ್ಥೆಯ ಒಂದು ಪ್ರಮುಖ ಭಾಗವಾಗಿದೆ. “ಗಳಿಸಿದಾಗ ಪಾವತಿಸು” (Pay as you earn) ಎಂಬ ತತ್ವದ ಮೇಲೆ ಇದು ಕಾರ್ಯನಿರ್ವಹಿಸುತ್ತದೆ.

೧. ಟಿಡಿಎಸ್ (TDS) ಎಂದರೇನು?
ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯು (Deductor) ಮತ್ತೊಬ್ಬರಿಗೆ ಹಣವನ್ನು ಪಾವತಿಸುವಾಗ, ಆ ಮೊತ್ತದಲ್ಲಿ ನಿರ್ದಿಷ್ಟ ಪ್ರಮಾಣದ ತೆರಿಗೆಯನ್ನು ಮೊದಲೇ ಕಡಿತಗೊಳಿಸಿ ಉಳಿದ ಹಣವನ್ನು ನೀಡಲಾಗುತ್ತದೆ. ಹೀಗೆ ಕಡಿತಗೊಳಿಸಿದ ಮೊತ್ತವನ್ನು ಪಾವತಿದಾರರು ಸರ್ಕಾರದ ಪರವಾಗಿ ಆದಾಯ ತೆರಿಗೆ ಇಲಾಖೆಗೆ ಜಮಾ ಮಾಡುತ್ತಾರೆ.

೨. ಟಿಡಿಎಸ್ ಯಾವುದಕ್ಕೆ ಅನ್ವಯಿಸುತ್ತದೆ?
ಆದಾಯ ತೆರಿಗೆ ಕಾಯಿದೆಯಡಿ ವಿವಿಧ ರೀತಿಯ ಪಾವತಿಗಳಿಗೆ ಟಿಡಿಎಸ್ ಅನ್ವಯಿಸುತ್ತದೆ:
ವೇತನ (Salary): ಉದ್ಯೋಗದಾತರು ಸಂಬಳ ನೀಡುವಾಗ.
ಬಡ್ಡಿ (Interest): ಬ್ಯಾಂಕ್ ಠೇವಣಿ ಅಥವಾ ಇತರ ಹೂಡಿಕೆಗಳ ಮೇಲಿನ ಬಡ್ಡಿ.
ಬಾಡಿಗೆ (Rent): ಒಂದು ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಮನೆ ಅಥವಾ ಭೂಮಿಯ ಬಾಡಿಗೆ.
ವೃತ್ತಿಪರ ಶುಲ್ಕ (Professional Fees): ಸಲಹೆಗಾರರು, ವಕೀಲರು ಅಥವಾ ತಾಂತ್ರಿಕ ಸೇವೆಗಳಿಗೆ ನೀಡುವ ಶುಲ್ಕ.
ಗುತ್ತಿಗೆ ಪಾವತಿ (Contract Payments): ಸಿವಿಲ್ ಅಥವಾ ಇತರ ಗುತ್ತಿಗೆದಾರರಿಗೆ ನೀಡುವ ಹಣ.
ಕಮಿಷನ್ ಅಥವಾ ಬ್ರೋಕರೇಜ್ (Commission).
ಗಿಗ್ ಎಕಾನಮಿ (Gig Economy): ಇತ್ತೀಚಿನ ದಿನಗಳಲ್ಲಿ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ನಡೆಯುವ ಪಾವತಿಗಳಿಗೂ ಇದು ಅನ್ವಯಿಸುತ್ತಿದೆ.

೩. ಟಿಡಿಎಸ್ ಕೆಲಸ ಮಾಡುವ ವಿಧಾನ
ಕಡಿತ (Deduction): ಪಾವತಿದಾರರು (ಉದಾಹರಣೆಗೆ ಬ್ಯಾಂಕ್ ಅಥವಾ ಕಂಪನಿ) ಹಣ ನೀಡುವಾಗಲೇ ತೆರಿಗೆ ಕಡಿತ ಮಾಡುತ್ತಾರೆ.
ಠೇವಣಿ (Deposit): ಕಡಿತಗೊಳಿಸಿದ ತೆರಿಗೆಯನ್ನು ಪ್ರತಿ ತಿಂಗಳು ಸರ್ಕಾರಕ್ಕೆ ಜಮಾ ಮಾಡಬೇಕು.
ರಿಟರ್ನ್ ಸಲ್ಲಿಕೆ (TDS Return): ಕಡಿತ ಮಾಡಿದವರು ಪ್ರತಿ ತ್ರೈಮಾಸಿಕಕ್ಕೊಮ್ಮೆ ಯಾರಿಂದ ಎಷ್ಟು ತೆರಿಗೆ ಕಡಿತ ಮಾಡಲಾಗಿದೆ ಎಂಬ ವಿವರವನ್ನು ಸರ್ಕಾರಕ್ಕೆ ಸಲ್ಲಿಸುತ್ತಾರೆ.
ಟಿಡಿಎಸ್ ಪ್ರಮಾಣಪತ್ರ (Form 16/16A): ತೆರಿಗೆ ಕಡಿತ ಮಾಡಿದ ನಂತರ, ಪಾವತಿದಾರರು ನಿಮಗೆ ‘ಫಾರ್ಮ್ 16’ ಅಥವಾ ‘ಫಾರ್ಮ್ 16A’ ನೀಡುತ್ತಾರೆ. ಇದು ನೀವು ತೆರಿಗೆ ಪಾವತಿಸಿದ್ದೀರಿ ಎಂಬುದಕ್ಕೆ ಸಾಕ್ಷಿ.

೪. ಪ್ರಮುಖ ಅಂಶಗಳು
PAN ಕಾರ್ಡ್ ಅನಿವಾರ್ಯ: ನಿಮ್ಮ ಪ್ಯಾನ್ (PAN) ವಿವರಗಳನ್ನು ಪಾವತಿದಾರರಿಗೆ ನೀಡದಿದ್ದರೆ, ಹೆಚ್ಚಿನ ದರದಲ್ಲಿ (ಸಾಮಾನ್ಯವಾಗಿ 20%) ಟಿಡಿಎಸ್ ಕಡಿತಗೊಳಿಸಲಾಗುತ್ತದೆ.
Form 15G/15H: ನಿಮ್ಮ ಒಟ್ಟು ಆದಾಯವು ತೆರಿಗೆ ಮಿತಿಗಿಂತ ಕಡಿಮೆ ಇದ್ದರೆ, ಬ್ಯಾಂಕ್ ಬಡ್ಡಿಯಲ್ಲಿ ಟಿಡಿಎಸ್ ಕಡಿತ ಮಾಡದಂತೆ ತಡೆಯಲು ಈ ಫಾರ್ಮ್‌ಗಳನ್ನು ಸಲ್ಲಿಸಬಹುದು.
Form 26AS: ನಿಮ್ಮ ಹೆಸರಿನಲ್ಲಿ ಎಷ್ಟು ಟಿಡಿಎಸ್ ಕಡಿತವಾಗಿದೆ ಮತ್ತು ಸರ್ಕಾರಕ್ಕೆ ಜಮೆಯಾಗಿದೆ ಎಂಬುದನ್ನು ನಿಮ್ಮ ಆದಾಯ ತೆರಿಗೆ ಪೋರ್ಟಲ್‌ನಲ್ಲಿರುವ ‘Form 26AS’ ಮೂಲಕ ಪರಿಶೀಲಿಸಬಹುದು.

೫. ಪ್ರಯೋಜನಗಳು
ಸರ್ಕಾರಕ್ಕೆ: ವರ್ಷವಿಡೀ ನಿಯಮಿತವಾಗಿ ತೆರಿಗೆ ಸಂಗ್ರಹವಾಗುತ್ತದೆ ಮತ್ತು ತೆರಿಗೆ ವಂಚನೆಯನ್ನು ತಡೆಯಬಹುದು.
ತೆರಿಗೆದಾರರಿಗೆ: ವರ್ಷದ ಕೊನೆಯಲ್ಲಿ ಒಂದೇ ಬಾರಿಗೆ ದೊಡ್ಡ ಮೊತ್ತದ ತೆರಿಗೆ ಪಾವತಿಸುವ ಹೊರೆ ತಪ್ಪುತ್ತದೆ.

ಪ್ರತಿ ವರ್ಷದ ಬಜೆಟ್‌ನಲ್ಲಿ ಟಿಡಿಎಸ್ ದರಗಳು ಮತ್ತು ಮಿತಿಗಳಲ್ಲಿ ಬದಲಾವಣೆಗಳಾಗಬಹುದು. 2026-27ರ ಆರ್ಥಿಕ ವರ್ಷದ ಇತ್ತೀಚಿನ ನಿಯಮಗಳ ಪ್ರಕಾರ, ಡಿಜಿಟಲ್ ಪಾವತಿಗಳು ಮತ್ತು ಹೊಸ ಆರ್ಥಿಕ ಚಟುವಟಿಕೆಗಳ ಮೇಲೆಯೂ ಟಿಡಿಎಸ್ ವ್ಯಾಪ್ತಿಯನ್ನು ವಿಸ್ತರಿಸಲಾಗುತ್ತಿದೆ.

ವಿತ್ತೀಯ ಕೊರತೆ ₹12.52 ಲಕ್ಷ ಕೋಟಿ
ಸಂದರ್ಭ: ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್ನಿಂದ ಫೆಬ್ರುವರಿ ವರೆಗೆ ಕೇಂದ್ರ ಸರ್ಕಾರದ ವರ ಮಾನ ಮತ್ತು ವೆಚ್ಚದ ನಡುವಿನ ಅಂತರ ವಾದ ವಿತ್ತೀಯ ಕೊರತೆಯು ಇಡೀ ವರ್ಷದ ಗುರಿಯ ಶೇ 80.4ರಷ್ಟಾಗಿದೆ. ಹಣಕಾಸಿನ ಮೌಲ್ಯದ ಲೆಕ್ಕದಲ್ಲಿ ಇದು ₹12.52 ಲಕ್ಷ ಕೋಟಿಯಾಗಿದೆ.

  • 2024-25ರ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ವಿತ್ತೀಯ ಕೊರತೆಯು ಶೇ85.8ರಷ್ಟಿತ್ತು ಎಂದು ಬಿಡುಗಡೆ ಆಗಿರುವ ಲೆಕ್ಕಪತ್ರಗಳಮಹಾನಿಯಂತ್ರಕರ ವರದಿ ತಿಳಿಸಿದೆ.
  • ಏಪ್ರಿಲ್‌ನಿಂದ ಫೆಬ್ರುವರಿ ವರೆಗೆ ಸರ್ಕಾರವು ₹27.91 ಲಕ್ಷ ಕೋಟಿ ವರಮಾನ ಸ್ವೀಕರಿಸಿದೆ. ಇದೇ ಅವಧಿಯಲ್ಲಿ ಸರ್ಕಾರದ ಒಟ್ಟು ವೆಚ್ಚವು ₹40.44 ಲಕ್ಷ ಕೋಟಿಯಾಗಿದೆ ಎಂದು ತಿಳಿಸಿದೆ.

ವಿತ್ತೀಯ ಕೊರತೆ (Fiscal Deficit) ಎನ್ನುವುದು ಒಂದು ದೇಶದ ಹಣಕಾಸಿನ ಆರೋಗ್ಯವನ್ನು ಅಳೆಯುವ ಪ್ರಮುಖ ಸೂಚಕವಾಗಿದೆ. ಸರಳವಾಗಿ ಹೇಳುವುದಾದರೆ, ಸರ್ಕಾರದ ಒಟ್ಟು ಆದಾಯಕ್ಕಿಂತ ಅದರ ಒಟ್ಟು ವೆಚ್ಚ ಹೆಚ್ಚಾದಾಗ ಉಂಟಾಗುವ ವ್ಯತ್ಯಾಸವೇ ವಿತ್ತೀಯ ಕೊರತೆ.
೧. ವಿತ್ತೀಯ ಕೊರತೆ ಎಂದರೇನು? (ಅರ್ಥ)
ಸರ್ಕಾರವು ಸಾಲವನ್ನು ಹೊರತುಪಡಿಸಿ ಪಡೆಯುವ ಒಟ್ಟು ಆದಾಯಕ್ಕಿಂತ (Total Receipts), ಅದು ಮಾಡುವ ಒಟ್ಟು ವೆಚ್ಚ (Total Expenditure) ಹೆಚ್ಚಾದಾಗ ವಿತ್ತೀಯ ಕೊರತೆ ಉಂಟಾಗುತ್ತದೆ.
ಸೂತ್ರ: ವಿತ್ತೀಯ ಕೊರತೆ = ಒಟ್ಟು ವೆಚ್ಚ – (ಕಂದಾಯ ಆದಾಯ + ಸಾಲವಲ್ಲದ ಬಂಡವಾಳ ಆದಾಯ)
(ಗಮನಿಸಿ: ಸಾಲವಲ್ಲದ ಬಂಡವಾಳ ಆದಾಯ ಎಂದರೆ ಸಾಲ ವಸೂಲಾತಿ ಮತ್ತು ಸರ್ಕಾರಿ ಸಂಸ್ಥೆಗಳ ಮಾರಾಟದಿಂದ ಬರುವ ಹಣ).

೨. ಸರ್ಕಾರ ಈ ಕೊರತೆಯನ್ನು ಹೇಗೆ ತುಂಬುತ್ತದೆ?
ವಿತ್ತೀಯ ಕೊರತೆಯನ್ನು ನೀಗಿಸಲು ಸರ್ಕಾರವು ಮುಖ್ಯವಾಗಿ ಸಾಲ (Borrowing) ಮಾಡುತ್ತದೆ. ಈ ಸಾಲವನ್ನು ಎರಡು ಮೂಲಗಳಿಂದ ಪಡೆಯಬಹುದು:
ಆಂತರಿಕ ಮೂಲ: ಭಾರತೀಯ ರಿಸರ್ವ್ ಬ್ಯಾಂಕ್ (RBI), ವಾಣಿಜ್ಯ ಬ್ಯಾಂಕುಗಳು ಅಥವಾ ಸಾರ್ವಜನಿಕರಿಂದ ಬಾಂಡ್‌ಗಳ ಮೂಲಕ.
ಬಾಹ್ಯ ಮೂಲ: ವಿಶ್ವ ಬ್ಯಾಂಕ್ (World Bank), ಅಂತರಾಷ್ಟ್ರೀಯ ಹಣಕಾಸು ನಿಧಿ (IMF) ಅಥವಾ ಇತರ ದೇಶಗಳಿಂದ.

೩. ವಿತ್ತೀಯ ಕೊರತೆ ಹೆಚ್ಚಾದರೆ ಏನಾಗುತ್ತದೆ?
ಒಂದು ಮಿತಿಯಲ್ಲಿ ವಿತ್ತೀಯ ಕೊರತೆ ಇರುವುದು ಅಭಿವೃದ್ಧಿಗೆ ಪೂರಕ (ರಸ್ತೆ, ಶಾಲೆ, ಆಸ್ಪತ್ರೆ ನಿರ್ಮಾಣಕ್ಕಾಗಿ ವೆಚ್ಚ ಮಾಡಿದರೆ). ಆದರೆ ಅದು ಅತಿಯಾದರೆ ಈ ಕೆಳಗಿನ ಸಮಸ್ಯೆಗಳು ಎದುರಾಗುತ್ತವೆ:
ಹಣದುಬ್ಬರ (Inflation): ಮಾರುಕಟ್ಟೆಯಲ್ಲಿ ಹಣದ ಹರಿವು ಹೆಚ್ಚಾಗಿ ವಸ್ತುಗಳ ಬೆಲೆ ಏರಿಕೆಯಾಗಬಹುದು.
ಸಾಲದ ಹೊರೆ: ಭವಿಷ್ಯದ ಪೀಳಿಗೆಯ ಮೇಲೆ ಹೆಚ್ಚಿನ ಸಾಲ ಮತ್ತು ಬಡ್ಡಿಯ ಹೊರೆ ಬೀಳುತ್ತದೆ.
ಖಾಸಗಿ ಹೂಡಿಕೆಗೆ ಅಡ್ಡಿ (Crowding Out Effect): ಸರ್ಕಾರವೇ ಬ್ಯಾಂಕುಗಳಿಂದ ಹೆಚ್ಚಿನ ಸಾಲ ಪಡೆದರೆ, ಖಾಸಗಿ ಉದ್ಯಮಿಗಳಿಗೆ ಸಾಲ ಸಿಗುವುದು ದುಬಾರಿಯಾಗುತ್ತದೆ.

೪. FRBM ಕಾಯಿದೆ (Fiscal Responsibility and Budget Management Act)
ಸರ್ಕಾರದ ವಿತ್ತೀಯ ಶಿಸ್ತನ್ನು ಕಾಪಾಡಲು 2003ರಲ್ಲಿ ಈ ಕಾಯಿದೆಯನ್ನು ತರಲಾಯಿತು.
ಇದರ ಉದ್ದೇಶ ವಿತ್ತೀಯ ಕೊರತೆಯನ್ನು ಜಿಡಿಪಿಯ (GDP) ಶೇ. 3ಕ್ಕೆ ಸೀಮಿತಗೊಳಿಸುವುದಾಗಿದೆ.
ಕರ್ನಾಟಕ ಸರ್ಕಾರವು ಸಹ ತನ್ನದೇ ಆದ ‘ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯಿದೆ’ (Karnataka Fiscal Responsibility Act) ಅನ್ನು ಅಳವಡಿಸಿಕೊಂಡಿದ್ದು, ರಾಜ್ಯದ ವಿತ್ತೀಯ ಕೊರತೆಯನ್ನು ನಿಯಂತ್ರಣದಲ್ಲಿಡಲು ಪ್ರಯತ್ನಿಸುತ್ತದೆ.

೫. ಪ್ರಸ್ತುತ ಸಂದರ್ಭ (2026-27)
ಇತ್ತೀಚಿನ ಕರ್ನಾಟಕ ಬಜೆಟ್‌ನಲ್ಲಿ, ಸರ್ಕಾರವು ವಿವಿಧ ಗ್ಯಾರಂಟಿ ಯೋಜನೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿಯ ನಡುವೆ ಸಮತೋಲನ ಕಾಯ್ದುಕೊಳ್ಳಲು ಶ್ರಮಿಸುತ್ತಿದೆ. ಬಜೆಟ್‌ನಲ್ಲಿ ವಿತ್ತೀಯ ಕೊರತೆಯು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (GSDP) ನಿಗದಿತ ಮಿತಿಯೊಳಗೆ (ಸಾಮಾನ್ಯವಾಗಿ ಶೇ. 3) ಇದೆಯೇ ಎಂಬುದು ಆರ್ಥಿಕ ವಿಶ್ಲೇಷಣೆಯ ಪ್ರಮುಖ ಭಾಗವಾಗಿರುತ್ತದೆ.

ಸಂಕ್ಷಿಪ್ತವಾಗಿ: ವಿತ್ತೀಯ ಕೊರತೆಯು ಸರ್ಕಾರವು ತನ್ನ ವೆಚ್ಚವನ್ನು ಭರಿಸಲು ಆ ವರ್ಷ ಎಷ್ಟು ಸಾಲ ಮಾಡಬೇಕಾಗುತ್ತದೆ ಎಂಬುದನ್ನು ತೋರಿಸುತ್ತದೆ.

ಕೈಗಾರಿಕಾ ಉತ್ಪಾದನೆ ಏರಿಕೆ
ಸಂದರ್ಭ: ದೇಶದ ಕೈಗಾರಿಕಾ ಉತ್ಪಾದನೆಯ ಬೆಳವಣಿಗೆಯು (ಐಐಪಿ) ಫೆಬ್ರುವರಿ ತಿಂಗಳಿನಲ್ಲಿ ಏರಿಕೆಯಾಗಿದ್ದು, ಶೇ 5.2ರಷ್ಟು ದಾಖಲಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಅಂಕಿ-ಅಂಶಗಳು ತಿಳಿಸಿವೆ.

  • ಕಳೆದ ವರ್ಷದ ಫೆಬ್ರುವರಿಯಲ್ಲಿ ಕೈಗಾರಿಕಾ ಉತ್ಪಾದನೆಯ ಪ್ರಗತಿ ಶೇ 2.7ರಷ್ಟಿತ್ತು ತಯಾರಿಕಾ ವಲಯದ ಉತ್ಪಾದನೆಯಲ್ಲಿನ ಹೆಚ್ಚಳವು ಬೆಳವಣಿಗೆಗೆ ಕಾರಣ ಎಂದು ತಿಳಿಸಿದೆ.
  • ಕಳೆದ ವರ್ಷದ ಫೆಬ್ರುವರಿಯಲ್ಲಿ ತಯಾರಿಕಾ ವಲಯದ ಉತ್ಪಾದನೆ ಶೇ 2.8ರಷ್ಟಿತ್ತು. ಅದು ಈ ಫೆಬ್ರುವರಿಯಲ್ಲಿ ಶೇ 6ಕ್ಕೆ ಏರಿಕೆಯಾಗಿದೆ. ಗಣಿಗಾರಿಕೆ ವಲಯದ ಉತ್ಪಾದನೆ ಶೇ 1.6ರಿಂದ ಶೇ 3.1ಕ್ಕೆ ಹೆಚ್ಚಳವಾಗಿದೆ.
  • 2025-26ರ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಫೆಬ್ರುವರಿವರೆಗೆ ದೇಶದ ಕೈಗಾರಿಕಾ ಉತ್ಪಾದನಾ ಬೆಳವಣಿಗೆ ಶೇ 4. 1ರಷ್ಟಾಗಿದೆ.

ಕೈಗಾರಿಕಾ ಉತ್ಪಾದನೆ (Industrial Production) ಒಂದು ದೇಶ ಅಥವಾ ರಾಜ್ಯದ ಆರ್ಥಿಕ ಪ್ರಗತಿಯನ್ನು ಅಳೆಯುವ ಪ್ರಮುಖ ಮಾನದಂಡವಾಗಿದೆ.
೧. ಕೈಗಾರಿಕಾ ಉತ್ಪಾದನಾ ಸೂಚ್ಯಂಕ (IIP – Index of Industrial Production)
ಕೈಗಾರಿಕಾ ವಲಯದ ಬೆಳವಣಿಗೆಯನ್ನು ಅಳೆಯಲು IIP ಅನ್ನು ಬಳಸಲಾಗುತ್ತದೆ. ಇದು ಒಂದು ನಿರ್ದಿಷ್ಟ ಅವಧಿಯಲ್ಲಿ ಕೈಗಾರಿಕಾ ಉತ್ಪನ್ನಗಳ ಉತ್ಪಾದನೆಯ ಪ್ರಮಾಣದಲ್ಲಾಗುವ ಬದಲಾವಣೆಯನ್ನು ತೋರಿಸುತ್ತದೆ.
ಬಿಡುಗಡೆ ಮಾಡುವವರು: ಕೇಂದ್ರ ಸಾಂಖ್ಯಿಕ ಕಚೇರಿ (NSO), ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ.
ಆಧಾರ ವರ್ಷ (Base Year): ಪ್ರಸ್ತುತ 2011-12 ಅನ್ನು ಆಧಾರ ವರ್ಷವಾಗಿ ಬಳಸಲಾಗುತ್ತಿದೆ.

ಪ್ರಮುಖ ವಲಯಗಳು: IIP ಯಲ್ಲಿ ಮೂರು ಮುಖ್ಯ ವಲಯಗಳಿವೆ:
ಗಣಿಗಾರಿಕೆ (Mining)
ತಯಾರಿಕೆ (Manufacturing) – ಇದು ಅತಿ ಹೆಚ್ಚು ತೂಕವನ್ನು (Weightage) ಹೊಂದಿದೆ.
ವಿದ್ಯುತ್ (Electricity)

೨. ಎಂಟು ಪ್ರಮುಖ ಕೈಗಾರಿಕೆಗಳು (Eight Core Industries)
ಭಾರತದ ಒಟ್ಟು ಕೈಗಾರಿಕಾ ಉತ್ಪಾದನೆಯ ಸುಮಾರು ೪೦.೨೭% ಭಾಗವನ್ನು ಈ ಎಂಟು ವಲಯಗಳು ಪ್ರತಿನಿಧಿಸುತ್ತವೆ:

ಕ್ರಮ ಸಂಖ್ಯೆಕೈಗಾರಿಕಾ ವಲಯ (Core Industry)ತೂಕದ ಶೇಕಡಾವಾರು (Weightage in %)
1ಪೆಟ್ರೋಲಿಯಂ ಸಂಸ್ಕರಣಾ ಉತ್ಪನ್ನಗಳು (Refinery Products)28.04% (ಅತಿ ಹೆಚ್ಚು)
2ವಿದ್ಯುತ್ (Electricity)19.85%
3ಉಕ್ಕು (Steel)17.92%
4ಕಲ್ಲಿದ್ದಲು (Coal)10.33%
5ಕಚ್ಚಾ ತೈಲ (Crude Oil)8.98%
6ನೈಸರ್ಗಿಕ ಅನಿಲ (Natural Gas)6.88%
7ಸಿಮೆಂಟ್ (Cement)5.37%
8ರಸಗೊಬ್ಬರ (Fertilizers)2.63% (ಅತಿ ಕಡಿಮೆ)
ಒಟ್ಟುಎಂಟು ಪ್ರಮುಖ ಕೈಗಾರಿಕೆಗಳ ಒಟ್ಟು ಪಾಲು40.27%

ಪಶ್ಚಿಮ ಏಷ್ಯಾದಲ್ಲಿ ಬಿಕ್ಕಟ್ಟು; ಭಾರತದ ಆರ್ಥಿಕತೆಗೆ ಪೆಟ್ಟು?
ಸಂದರ್ಭ: ಪಶ್ಚಿಮ ಏಷ್ಯಾದಲ್ಲಿ ತಿಂಗಳಿಂದ ನಡೆಯುತ್ತಿರುವ ಯುದ್ಧದಿಂದ ಭಾರತದ ಹಲವು ವಲಯಗಳ ಮೇಲೆ ಪರಿಣಾಮ ಉಂಟಾಗುತ್ತಿದೆ. ಪೆಟ್ರೋಲ್ ಪಂಪ್‌ಗಳಲ್ಲಿ ಉದ್ದದ ಸಾಲುಗಳು, ಎಲ್‌ಪಿಜಿ ವಿತರಕರ ಕಚೇರಿಗಳಿಗೆ ಆತಂಕದ ಕರೆಗಳು, ವಾಣಿಜ್ಯ ಸಿಲಿಂಡರ್ಗಗಳ ಕೊರತೆ, ಬಾಗಿಲು ಮುಚ್ಚಿದ ರೆಸ್ಟೋರೆಂಟ್‌ಗಳು… ಕಳೆದ ಕೆಲವು ವಾರಗಳಿಂದ ಕರ್ನಾಟಕ, ತೆಲಂಗಾಣ, ಗುಜರಾತ್, ಉತ್ತರ ಪ್ರದೇಶ, ಜಮ್ಮು-ಕಾಶ್ಮೀರ ಸೇರಿನಂತೆ ದೇಶದ ಹಲವೆಡೆ ಈ ದೃಶ್ಯಗಳು ಕಂಡುಬರುತ್ತಿವೆ.

  • ಭಾರತವು ಇರಾನ್‌ನಿಂದ ತೈಲ ರಫ್ತು ಮಾಡಿಕೊಳ್ಳುವುದನ್ನು 2019ರಲ್ಲೇ ಬಹುತೇಕ ನಿಲ್ಲಿಸಿದೆ. ಆದರೆ, ದೇಶಕ್ಕೆ ಆಮದಾಗುವ ಶೇ 40ರಷ್ಟು ಕಚ್ಚಾ ತೈಲ, ಶೇ 80ರಷ್ಟು ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ಮತ್ತು ಶೇ 90ರಷ್ಟು ಅಡುಗೆ ಅನಿಲ (ಎಲ್‌ಪಿಜಿ) ಸಾಗಣೆಯಾಗುವುದು ಇರಾನ್ ಮತ್ತು ಒಮಾನ್ ನಡುವಿನ ಹೊರ್ಮುಜ್ ಜಲಸಂಧಿ ಮೂಲಕ ದೇಶದ ಇಂಧನ ಮತ್ತು ಎಲ್‌ಪಿಜಿ ಅಗತ್ಯಗಳಿಗಾಗಿ ಹೆಚ್ಚಿನ ಪಾಲು ಆಮದನ್ನೇ ಅವಲಂಬಿಸಿರುವ ಭಾರತದಲ್ಲಿ ಇರಾನ್ ಯುದ್ಧವು ಹಲವು ರೀತಿಯ ಬಿಕ್ಕಟ್ಟುಗಳನ್ನು ಸೃಷ್ಟಿಸಿದೆ.
  • ಯುದ್ಧ ಆರಂಭವಾದ ನಂತರ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ದರ ಶೇ 75ರಷ್ಟು ಹೆಚ್ಚಳವಾಗಿದೆ. ಜಗತ್ತಿನ ಹಲವು ದೇಶಗಳಲ್ಲಿ ಇಂಧನ ಮತ್ತು ಎಲ್‌ಪಿಜಿ ದರ ಹೆಚ್ಚಿಸಲಾಗಿದೆ. ಅಮರಿಕ, ಕೆನಡಾ ಸೇರಿದಂತ ಉತ್ತರ ಅಮೆರಿಕದಲ್ಲಿ ಶೇ 30, ಆತ್ಮೀಯ ಏಷ್ಯಾದಲ್ಲಿ ಶೇ 30ರಿಂದ ಶೇ 50, ಯುರೋಪ್‌ನಲ್ಲಿ ಶೇ 20, ಆಫ್ರಿಕಾದ ರಾಷ್ಟ್ರಗಳಲ್ಲಿ ಶೇ 50ರಷ್ಟು ದರ ಹೆಚ್ಚಳವಾಗಿದೆ. ಭಾರತದಲ್ಲಿ ಅಡುಗೆ ಅನಿಲ, ಕೈಗಾರಿಕಾ ಡೀಸೆಲ್ ಮತ್ತು ಪ್ರೀಮಿಯಂ ಪೆಟ್ರೋಲ್ ದರಗಳಲ್ಲಿ ಹೆಚ್ಚಳವಾಗಿದೆ. ಆದರೆ, ಸಾಮಾನ್ಯ ಪೆಟ್ರೋಲ್, ಡೀಸೆಲ್ ದರ ಹೆಚ್ಚಳವಾಗಿಲ್ಲ ಇದರಿಂದ ಇಂಧನ ಕಂಪನಿಗಳಿಗೆ ಲೀಟರ್ ಪೆಟ್ರೋಲ್‌ಗೆ ₹24 ಮತ್ತು ಲೀಟರ್ ಡೀಸೆಲ್‌ಗೆ ₹30 ನಷ್ಟ ಉಂಟಾಗುತ್ತಿದ್ದು, ಕಂಪನಿಗಳಿಗೆ ದಿನಕ್ಕೆ ₹2,400 ಕೋಟಿ ನಷ್ಟವಾಗುತ್ತಿದೆ.
  • ಇಂಧನ ಕಂಪನಿಗಳ ನಷ್ಟವನ್ನು ಕಡಿಮೆ ಮಾಡಲು ಕೇಂದ್ರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೆಸ್ ಸುಂಕದಲ್ಲಿ ಲೀಟ‌ರ್ಗೆಗೆ ₹10 ಕಡಿಮೆ ಮಾಡಿದೆ. ಜತೆಗೆ ಹಲವು ರೀತಿಯ ಹೆಚ್ಚುವರಿ ಎಕ್ಸೆಸ್ ಸುಂಕವನ್ನೂ ಕಡಿತಗೊಳಿಸಿದೆ ಇದರಿಂದ ಕೇಂದ್ರಕ್ಕೆ 15 ದಿನಕ್ಕೆ ಅಂದಾಜು ₹7,000 ಕೋಟಿ ಆದಾಯ ನಷ್ಟವಾಗಲಿದೆ ಇದರಿಂದಾಗಿ 2026-27ರಲ್ಲಿ ₹1 ಲಕ್ಷ ಕೋಟಿಯಿಂದ 12 ಲಕ್ಷ ಕೋಟಿವರೆಗೆ ನಷ್ಟವಾಗಲಿದೆ.
  • ವ್ಯಾಪಕ ಪರಿಣಾಮ: ಪಶ್ಚಿಮ ಏಷ್ಯಾ ಬಿಕ್ಕಟ್ಟು ಪೆಟ್ರೋಲ್, ಡೀಸೆಲ್ ದರಗಳ ಆಚೆಗೂ ಭಾರತದ ಮೇಲೆ ಗಂಭೀರ ಪರಿಣಾಮ ಉಂಟುಮಾಡುವ ಸಂಭವವಿದೆ. ಕಚ್ಚಾ ಪದಾರ್ಥಗಳಿಗಾಗಿ ಕೊಲ್ಲಿ ರಾಷ್ಟ್ರಗಳನ್ನು ಅವಲಂಬಿಸಿರುವ ಸಿಮೆಂಟ್, ರಸಗೊಬ್ಬರ, ಔಷಧಿ ಇತ್ಯಾದಿ ಕೈಗಾರಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ. ಜತೆಗೆ, ದೇಶದ ಆರ್ಥಿಕತೆಯ ಪ್ರಮುಖ ಸೂಚಕಗಳಾದ ಜಿಡಿಪಿ, ಹಣದುಬ್ಬರ, ವಿತ್ತೀಯ ಕೊರತೆ ಮತ್ತು ವ್ಯಾಪಾರ ಕೊರತೆ ಅಂತರ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ವಿಶ್ಲೇಷಿಸಲಾಗಿದೆ. ತೆರಿಗೆ ಆದಾಯದಲ್ಲಿ ಇಳಿಮುಖವಾಗುವುದು, ಹೆಚ್ಚು ಸಬ್ಸಿಡಿ-ವಿನಾಯ್ತಿ ನೀಡುವುದು ಬಂಡವಾಳ ವೆಚ್ಚದ ಮೇಲೆ ಪರಿಣಾಮ ಬೀರಲಿದ್ದು ಇದು ದೇಶದ ಬೆಳವಣಿಗೆಯ ಮೇಲೆ ಮಧ್ಯಮ ಅವಧಿ ಮತ್ತು ದೀರ್ಘಾವಧಿಯ ಪರಿಣಾಮಗಳನ್ನು ಉಂಟುಮಾಡಲಿದೆ ಎನ್ನುವ ಆತಂಕ ವ್ಯಕ್ತವಾಗಿದೆ.
  • ಜಿಡಿಪಿ ಕುಸಿತ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 2026ರ ಎಪ್ರಿಲ್-ಜೂನ್ ತ್ರೈಮಾಸಿಕಕ್ಕೆ ಶೇ 6.9ರಷ್ಟು ಮತ್ತು ಜುಲೈ-ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಶೇ 7ರಷ್ಟು ಜಿಡಿಪಿ ಬೆಳವಣಿಗೆ ದರವನ್ನು ಅಂದಾಜಿಸಿತ್ತು. ಕಚ್ಚಾ ತೈಲದ ದರ ಬ್ಯಾರಲ್‌ಗೆ 70 ಡಾಲರ್ ಆಧಾರದಲ್ಲಿ ಈ ಅಂದಾಜು ಮಾಡಲಾಗಿದೆ. ಆದರೆ, ಯುದ್ಧದಿಂದ ಕಚ್ಚಾ ತೈಲದ ದರ ಹೆಚ್ಚಾಗಿದೆ. ಕಚ್ಚಾ ತೈಲವು ಬ್ಯಾರಲ್‌ಗೆ 10 ಡಾಲರ್ಗೆಗೆ ಹೆಚ್ಚಾದರೆ, ಅದು ಆರ್ಥಿಕ ಬೆಳವಣಿಗೆಯನ್ನು 10 ಮೂಲಾಂಕಗಳನ್ನು ಕಡಿಮೆ ಮಾಡುತ್ತದೆ. ಬ್ಯಾರಲ್‌ಗೆ 120 ಡಾಲರ್ ಇದ್ದರೆ ಜಿಡಿಪಿ ಬೆಳವಣಿಗೆಯು ಶೇ 6.2ಕ್ಕೆ ಕುಸಿಯುತ್ತದೆ ಎಂದು ವಿಶ್ಲೇಷಿಸಲಾಗಿದೆ. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (ಒಇಸಿಡಿ) ಪ್ರಕಾರ, 2026-27ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರವು ಶೇ 6.1ಕ್ಕೆ ಕುಸಿಯಲಿದೆ. ಗೋಲ್ಡ್‌ಮನ್ ಸ್ಯಾಕ್ಸ್ ಶೇ 5.9ರ ಬೆಳವಣಿಗೆ ದರವನ್ನು ಅಂದಾಜಿಸಿದೆ.
  • ಹಣದುಬ್ಬರ ಏರಿಕೆ: ಇಂದನ ಬೆಲೆ ಹೆಚ್ಚಳ ಮಾಡಿದರೆ, ಅದು ಬಹುತೇಕ ಸರಕುಗಳು, ಗ್ರಾಹಕ ಉತ್ಪನ್ನಗಳು ಮತ್ತು ಸೇವೆಗಳ ದರ ಹೆಚ್ಚಳಕ್ಕೆ ಕಾರಣವಾಗುತ್ತದೆ. ವಿದ್ಯುತ್ ಉತ್ಪಾದನೆ, ರಾಸಾಯನಿಕಗಳು, ಪ್ಲಾಸ್ಟಿಕ್, ಸಿಂಥೆಟಿಕ್ ವಸ್ತುಗಳ ಉತ್ಪಾದನೆ ಮತ್ತು ಬೆಲೆಗಳ ಮೇಲೂ ಇದು ಪರಿಣಾಮ ಬೀರಲಿದೆ. ಇಂಧನ ದರ ಹೆಚ್ಚಳ ಮತ್ತು ಉತ್ಪನ್ನಗಳ ಬೆಲೆ ಹೆಚ್ಚಳವು ಹಲವು ಸರಕು/ಸೇವೆಗಳ ಬೇಡಿಕೆಯನ್ನು ಕಡಿಮೆ ಮಾಡಲಿದ್ದು, ಅದು ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡಲಿದೆ.
  • ಹಣದುಬ್ಬರ ಕಳೆದೊಂದು ವರ್ಷದಲ್ಲಿ ಇಳಿಮುಖವಾಗುತ್ತಾ ಸಾಗಿತ್ತು ಆದರೆ, ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರವು 10 ತಿಂಗಳಲ್ಲಿಯೇ ಅತಿಹಚ್ಚು (ಶೇ 3.21ರಷ್ಟು) ಏರಿಕೆ ಕಂಡಿದೆ. ಸಗಟು ಹಣದುಬ್ಬರವು 11 ತಿಂಗಳಲ್ಲಿಯೇ ಅತಿ ಹೆಚ್ಚು (ಶೇ 2 13) ಏರಿಕೆ ಕಂಡಿದೆ ಆಹಾರ ಪದಾರ್ಥಗಳು ಮತ್ತು ಇಂಧನ ಬೆಲೆಗಳು ಇತ್ತೀಚೆಗೆ ಹಣದುಬ್ಬರವನ್ನು ನಿಯಂತ್ರಣದಲ್ಲಿಟ್ಟಿದ್ದವು. ಆದರೆ, ಮುಂದಿನ ದಿನಗಳಲ್ಲಿ ಪರಿಸ್ಥಿತಿ ವ್ಯತಿರಿಕ್ತವಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ ಅರ್ನ್ಸ್‌ ಆ್ಯಂಡ್ ಯಂಗ್ ಪ್ರಕಾರ, ಪಶ್ಚಿಮ ಏಷ್ಯಾದ ಬಿಕ್ಕಟ್ಟು ಆರ್ಥಿಕ ವರ್ಷದ ಉದ್ದಕ್ಕೂ ವಿಸ್ತರಿಸಿದರೆ, ಭಾರತದ ಜಿಡಿಪಿ ಶೇ 6ಕ್ಕೆ ಕುಸಿಯಲಿದ್ದು, ಸಿಪಿಐ ಹಣದುಬ್ಬರ ಶೇ5.5ಕ್ಕೆ ಏರಲಿದೆ.

ಪತ್ರಿಕೆ-III: ಸಾಮಾನ್ಯ ಅಧ್ಯಯನ-2

ಪತ್ರಿಕೆ-IV: ಸಾಮಾನ್ಯ ಅಧ್ಯಯನ-3

ಪತ್ರಿಕೆ-V: ಸಾಮಾನ್ಯ ಅಧ್ಯಯನ-4

ಕೆಎಎಸ್ ಪ್ರಚಲಿತ ವಿದ್ಯಮಾನಗಳು

ಕೆ.ಎ.ಎಸ್ ಪ್ರಚಲಿತ ವಿದ್ಯಮಾನಗಳು: ಪ್ರಚಲಿತ ವಿದ್ಯಮಾನಗಳು ಕೆ.ಪಿ.ಎಸ್.ಸಿ ಪಠ್ಯಕ್ರಮದ ‘ಜೀವಂತ ನಾಡಿಮಿಡಿತ’ವಿದ್ದಂತೆ. ಇದು ಕೇವಲ ಪ್ರತ್ಯೇಕವಾಗಿ ನೆನಪಿಡಬೇಕಾದ ವಿಷಯವಲ್ಲ; ಬದಲಿಗೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳೆರಡರಲ್ಲೂ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ನೀತಿಶಾಸ್ತ್ರವನ್ನು ಒಂದಕ್ಕೊಂದು ಬೆಸೆಯುವ ಒಂದು ಚಲನಶೀಲ ಕೊಂಡಿಯಾಗಿದೆ. ಮುಂಬರುವ ಪರೀಕ್ಷೆಗಳ ಸಂದರ್ಭದಲ್ಲಿ, ಕೇವಲ “ಸುದ್ದಿ ಓದುವುದರಿಂದ” “ಸುದ್ದಿಯ ಮೂಲಕ ಪಠ್ಯಕ್ರಮವನ್ನು ಅಭ್ಯಾಸ ಮಾಡುವುದು” ಎಂಬ ಹಂತಕ್ಕೆ ಬದಲಾಗುವುದು ಒಬ್ಬ ಗಂಭೀರ ಅಭ್ಯರ್ಥಿಯನ್ನು ಸಾಮಾನ್ಯ ಓದುಗನಿಂದ ಪ್ರತ್ಯೇಕಿಸುವ ಪ್ರಮುಖ ಬದಲಾವಣೆಯಾಗಿದೆ.

“ಪಠ್ಯಕ್ರಮಕ್ಕೆ ಮೊದಲ ಆದ್ಯತೆ” ಎಂಬ ತತ್ವ
ಕೆ.ಪಿ.ಎಸ್.ಸಿ ಪಠ್ಯಕ್ರಮಕ್ಕೆ ಕಟ್ಟುನಿಟ್ಟಾಗಿ ಹೊಂದಿಕೆಯಾಗುವ ಪ್ರಚಲಿತ ವಿದ್ಯಮಾನಗಳ ಮಾದರಿಯನ್ನು ಅನುಸರಿಸುವ ಮೂಲಕ, ನೀವು ದಿನಪತ್ರಿಕೆ ಓದಲು ವ್ಯಯಿಸುವ ಪ್ರತಿ ಗಂಟೆಯೂ ನಿಮ್ಮ ಪರೀಕ್ಷೆಯ ಶ್ರೇಣಿಯನ್ನು (Rank) ಉತ್ತಮಪಡಿಸಲು ಪೂರಕವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

ಪೂರ್ವಭಾವಿ ಪರೀಕ್ಷೆ

ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು

ವಿಶ್ವ ವುಶು ಚಾಂಪಿಯನ್ಷಿಪ್: ಭಾರತಕ್ಕೆ 2 ಕಂಚು
ಸಂದರ್ಭ: ಭಾರತದ ಗೌತಮ್ ಮಂಕಾಸ್ ಹಾಗೂ ಅನು ಅವರು ಇಲ್ಲಿ ನಡೆಯುತ್ತಿರುವ 10ನೇ ವಿಶ್ವ ವುಶು ಚಾಂಪಿಯನ್ಷಿಪ್ನಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಭಾನುವಾರ ಕಂಚಿನ ಪದಕ ಗೆದ್ದುಕೊಂಡರು. ಉಪೇಂದ್ರೋ ಚೌಗಮ್, ಪಮಾ ಹೀಬಾ ಸಿಂಗ್, ಯುವರಾಜ್ ಹಾಗೂ ವಿಕ್ಟರ್ ಅವರು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಸುತ್ತು ಪ್ರವೇಶಿಸಿದರು.

  • ಗೌತಮ್ ಅವರು ಬಾಲಕರ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಪರಾಭವಗೊಂಡರು. ಅನು ಅವರು ನಾಲ್ಕರ ಘಟದಲ್ಲಿ ಚೀನಾದ ಝಾಂಗ್ ಲಿನಿಂಗ್ ವಿರುದ್ಧ ಸೋತರು.
  • ಉಪೇಂದ್ರೋ ಅವರು ಸೆಮಿಫೈನಲ್ ಪಂದ್ಯದಲ್ಲಿ ಈಜಿಪ್ಟ್ನ ಅಹ್ಮದ್ ಮೊಹಮ್ಮದ್ ಅವರನ್ನು ಸೋಲಿಸಿದರು. ಪಮಾ ಅವರು ಸೆನೆಗಲ್‌ನ ಅಲಿಮೂ ಸಿ ಅವರನ್ನು ಮಣಿಸಿ, ಫೈನಲ್ ಪ್ರವೇಶಿಸಿದರು. ಯುವರಾಜ್ ಹಾಗೂ ವಿಕ್ಟರ್ ಅವರು ಸೆಮಿಫೈನಲ್ ಪಂದ್ಯಗಳಲ್ಲಿ ಕ್ರಮವಾಗಿ ಫಿಲಿಪ್ಪಿನ್ಸ್‌ನ ಷಿವೀಲ್ ಬಂಟಾಲಿ ಮತ್ತು ಈಜಿಪ್ಟ್ನ ಸಯೀದ್ ಕರೀಂ ಮೊಹಮ್ಮದ್ ವಿರುದ್ಧ ಗೆಲುವು ಸಾಧಿಸಿದರು.

ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು

ಕಾಂಗ್ರೆಸ್ ಪಕ್ಷವು ಒಟ್ಟು ಐದು ಗ್ಯಾರಂಟಿಗಳನ್ನು ಅಸ್ಸಾಂ ಜನತೆಗೆ ನೀಡಿದೆ

ಅಸ್ಸಾಂ ವಿಧಾನಸಭೆ ಚುನಾವಣೆ 2026ರ ಹಿನ್ನೆಲೆಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಸ್ಸಾಂನ ನೌಬೋಯಿಚಾದಲ್ಲಿ ಸಾರ್ವಜನಿಕ ರಾಲಿಯನ್ನುದ್ದೇಶಿಸಿ ಮಾತನಾಡುತ್ತಾ **’ಐದು ಗ್ಯಾರಂಟಿ’**ಗಳನ್ನು ಘೋಷಿಸಿದ್ದಾರೆ. ಕರ್ನಾಟಕ ಮತ್ತು ತೆಲಂಗಾಣದ ಮಾದರಿಯಲ್ಲೇ ಈ ಯೋಜನೆಗಳನ್ನು ರೂಪಿಸಲಾಗಿದೆ.

ಅಸ್ಸಾಂ ಜನತೆಗೆ ನೀಡಲಾದ ಆ ಐದು ಮುಖ್ಯ ಗ್ಯಾರಂಟಿಗಳು ಇಲ್ಲಿವೆ:

  1. ಮಹಿಳಾ ಸಬಲೀಕರಣ (ಮಹಿಳೆಯರಿಗೆ ಆರ್ಥಿಕ ನೆರವು)
    ಪ್ರತಿಯೊಬ್ಬ ಮಹಿಳೆಗೆ ಯಾವುದೇ ಷರತ್ತುಗಳಿಲ್ಲದೆ ಮಾಸಿಕ ನಗದು ವರ್ಗಾವಣೆ.
    ಇದರೊಂದಿಗೆ, ಮಹಿಳಾ ಉದ್ಯಮಿಗಳಿಗೆ ತಮ್ಮ ವ್ಯಾಪಾರವನ್ನು ಪ್ರಾರಂಭಿಸಲು ಅಥವಾ ವಿಸ್ತರಿಸಲು ₹50,000 ಧನಸಹಾಯ.
  2. ಆರೋಗ್ಯ ರಕ್ಷಣೆ (ಕ್ಯಾಶ್‌ಲೆಸ್ ವಿಮೆ)
    ಪ್ರತಿ ಕುಟುಂಬಕ್ಕೆ ₹25 ಲಕ್ಷ ವರೆಗಿನ ನಗದು ರಹಿತ (Cashless) ಆರೋಗ್ಯ ವಿಮಾ ಸೌಲಭ್ಯ. ಈ ಯೋಜನೆಯನ್ನು ಈಗಾಗಲೇ ರಾಜಸ್ಥಾನ ಮತ್ತು ಕರ್ನಾಟಕದಂತಹ ರಾಜ್ಯಗಳಲ್ಲಿ ಜಾರಿಗೆ ತಂದಿರುವ ಮಾದರಿಯಲ್ಲೇ ರೂಪಿಸಲಾಗಿದೆ.
  3. ಭೂಮಿ ಹಕ್ಕು (ಶಾಶ್ವತ ಪಟ್ಟಾ)
    ಅಸ್ಸಾಂನ ಸುಮಾರು 10 ಲಕ್ಷ ಮೂಲ ನಿವಾಸಿಗಳಿಗೆ (Indigenous people) ವಾರ್ಷಿಕ ಪಟ್ಟಾಗಳ ಬದಲಿಗೆ ಶಾಶ್ವತ ಭೂಮಿ ಪಟ್ಟಾ (Land Rights) ನೀಡುವ ಭರವಸೆ.
  4. ಹಿರಿಯ ನಾಗರಿಕರ ಗೌರವ (ಪಿಂಚಣಿ)
    ರಾಜ್ಯದ ಎಲ್ಲಾ ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು ₹1,250 ಮಾಸಿಕ ಪಿಂಚಣಿ ನೀಡುವ ಯೋಜನೆ.
  5. ಸಾಂಸ್ಕೃತಿಕ ನ್ಯಾಯ (ಜುಬಿನ್ ಗಾರ್ಗ್ ಪ್ರಕರಣ)
    ಅಸ್ಸಾಂನ ಜನಪ್ರಿಯ ಗಾಯಕ ದಿವಂಗತ ಜುಬಿನ್ ಗಾರ್ಗ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ಸಮಗ್ರ ತನಿಖೆ ನಡೆಸಿ ನ್ಯಾಯ ಒದಗಿಸುವ ಭರವಸೆ.

ಮುಖ್ಯ ಪರೀಕ್ಷೆ

ಪತ್ರಿಕೆ-I: ಪ್ರಬಂಧಗಳು

ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ

ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ

ಪತ್ರಿಕೆ-II: ಸಾಮಾನ್ಯ ಅಧ್ಯಯನ-1

ಪತ್ರಿಕೆ-III: ಸಾಮಾನ್ಯ ಅಧ್ಯಯನ-2

ಪತ್ರಿಕೆ-IV: ಸಾಮಾನ್ಯ ಅಧ್ಯಯನ-3

3 ವರ್ಷದ ಹಿಂದೆ ಬಿಎಂಟಿಸಿ ಬಸ್ಗಳಲ್ಲಿ ಮಿಥೆನಾಲ್ ಮಿಶ್ರಿತ ಇಂಧನ ಪ್ರಯೋಗ
ಸಂದರ್ಭ: ಪ್ರಯೋಗಕ್ಕೆ ಸೀಮಿತವಾದ ಮಿಥೆನಾಲ್: ಡೀಸೆಲ್ ಮೇಲಿನ ಅವಲಂಬನೆ ಕಡಿಮೆ ಮಾಡಲು, ವಾಯುಮಾಲಿನ್ಯ ತಡೆಯಲು ಮಿಥೆನಾಲ್ ಮಿಶ್ರಿತ ಇಂಧನ ಪ್ರಯೋಗವನ್ನು ಮೂರು ವರ್ಷಗಳ ಹಿಂದೆ ಬಿಎಂಟಿಸಿ ಬಸ್ಗಳಲ್ಲಿ ನಡೆಸಲಾಗಿತ್ತು ಇದು ಪ್ರಯೋಗಕ್ಕೆ ಸೀಮಿತಗೊಂಡಿದ್ದು, ಬಿಎಂಟಿಸಿಯ ಯಾವುದೇ ಬಸ್ಗಳಲ್ಲಿ ಇದುವರೆಗೆ ಅಳವಡಿಕೆಯಾಗಿಲ್ಲ.

  • ಕೇಂದ್ರ ರಸ್ತೆ ಸಾರಿಗೆ ಸಚಿವಾಲಯದ ಸೂಚನೆಯಂತೆ 2016ರಲ್ಲಿ ನೀತಿ ಆಯೋಗವು ಮಿಥೆನಾಲ್ ಮಿಶ್ರಿತ ಇಂಧನ ಪ್ರಯೋಗ ಆರಂಭಿಸಿತ್ತು ಸತತ 7 ವರ್ಷ ವಿವಿಧ ವಾಹನಗಳಲ್ಲಿ ಪ್ರಯೋಗ ನಡೆಸಿತ್ತು ಸಕಾರಾತ್ಮಕ ಫಲಿತಾಂಶ ಬಂದ ಬಳಿಕ ಸಾರಿಗೆ ವಾಹನಗಳಲ್ಲಿ ಈ ಪ್ರಯೋಗ ನಡೆಸಲು ನಿರ್ಧರಿಸಿತ್ತು. 2023ರ ಮಾರ್ಚ್‌ನಲ್ಲಿ ದೇಶದಲ್ಲೇ ಪ್ರಥಮ ಬಾರಿಗೆ ಬಿಎಂಟಿಸಿಯ 20 ಬಸ್‌ಗಳಲ್ಲಿ ಪ್ರಯೋಗ ಆರಂಭಿಸಿತ್ತು ನಾಲ್ಕು ತಿಂಗಳು ಈ ಬಸ್‌ಗಳು ಮಿಥೆನಾಲ್ ಮಿಶ್ರಿತ ಇಂಧನದಲ್ಲಿ ಸಂಚರಿಸಿದ್ದವು.
  • ‘ಅಶೋಕ ಲೈಲ್ಯಾಂಡ್ ಕಂಪನಿಯು ತಯಾರಿಸಿದ ಬಸ್‌ಗಳನ್ನು ಪ್ರಯೋಗಕ್ಕೆ ಬಳಸಲಾಗಿತ್ತು. 3.2 ಲಕ್ಷ ಕಿ.ಮೀ. ಓಡಾಟ ನಡೆಸಿದ ಬಳಿಕ ಎರಡು ಬಸ್‌ಗಳ ಎಂಜಿನ್‌ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು ಪ್ರಯೋಗಾಲಯದ ವರದಿ, ಸಂಚಾರದ ಸಮಯದ ಸ್ಥಿತಿಗತಿ ಎಲ್ಲ ಸೇರಿಸಿ ಸಾರಿಗೆ ಸಚಿವಾಲಯಕ್ಕೆ ವರದಿ ನೀಡಲಾಗಿದೆ’ ಎಂದು ಮಿಥನಾಲ್ ಕೋರ್ ಕಮಿಟಿ ಸದಸ್ಯ.
  • ‘ಮಿಥೆನಾಲ್ ಮಿಶ್ರಿತ ಇಂಧನ ಪ್ರಯೋಗದ ಸಂದರ್ಭದಲ್ಲಿ ಪ್ರತಿ ಕಿಲೋಮೀಟರ್ಗೆಗೆ ಸುಮಾರು 10 ಉಳಿತಾಯವಾಗಿದೆ. ಡೀಸೆಲ್ ಎಂಜಿನ್ ವಾಹನಗಳನ್ನೇ ಇದಕ್ಕೆ ಬಳಸಲಾಗಿತ್ತು ಸಣ್ಣ ಅವಧಿಯ ಪ್ರಯೋಗದ ಸಮಯದಲ್ಲಿ ದೊಡ್ಡ ಮಟ್ಟದ ಸಮಸ್ಯೆ ಕಾಣಿಸಿಕೊಂಡಿಲ್ಲ, ದೀರ್ಘ ಕಾಲ ಬಳಸಿದಾಗ ಪರಿಣಾಮ ಹೇಗಿರುತ್ತದೆ ಎಂಬುದು ಗೊತ್ತಾಗಿಲ್ಲ ಡೀಸೆಲ್ ಎಂಜಿನ್‌ ವಾಹನದಲ್ಲಿ ಮಿಥೆನಾಲ್ ಮಿಶ್ರಿತ ಡೀಸೆಲ್ ಬಳಸಿದಾಗ ಎಂಜಿನ್ ತುಕ್ಕು ಹಿಡಿಯುವ ಸಾಧ್ಯತೆ ಇರುತ್ತದೆ. ಇಂಧನದಲ್ಲಿ ಉಳಿತಾಯ ಆಗಿದ್ದಕ್ಕಿಂತ ಹೆಚ್ಚು ಎಂಜಿನ್‌ಗೆ ವೆಚ್ಚವಾದರೆ ಕಷ್ಟ’ ಎಂದು ಬಿಎಂಟಿಸಿ ಎಂಜಿನಿಯರ್ ಒಬ್ಬರು ತಿಳಿಸಿದ್ದಾರೆ.
  • ‘ಯುದ್ಧದ ಕರಿನೆರಳು ಪೆಟ್ರೋಲ್ ಡೀಸೆಲ್ ಮೇಲೂ ಬೀಳುತ್ತಿರುವುದರಿಂದ ಮಿಥನಾಲ್ ಬಳಕೆ ಮಾಡಿದ್ದರೆ ಡೀಸೆಲ್ ಮೇಲಿನ ಅವಲಂಬನೆ ಕಡಿಮೆ ಮಾಡಬಹುದಿತ್ತು ಮಿಥನಾಲ್ ಬೆಲೆ ₹25ರಿಂದ ₹27 ಇರುವುದರಿಂದ ವೆಚ್ಚ ಕಡಿಮೆಯಾಗುತ್ತಿತ್ತು ಎಂದು ಚಾಲಕರೊಬ್ಬರು ತಿಳಿಸಿದರು.

ಪ್ರಯೋಗವೇನು?

  • ಈ 15ರಷ್ಟು ಮಿಥನಾಲ್ ಶೇ 12ರಷ್ಟು ಕಪ್ಪರ್ಸ್, ಶೇ 2ರಷ್ಟು ಸಿಟೇನ್ ಇಂಪವರ್ ಹಾಗೂ ಶೇ 71 ಭಾಗ ಡೀಸೆಲ್ ಮಿಶ್ರಣ ಮಾಡಿ ಬಳಸಲಾಗುತ್ತದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮಿಥೆನಾಲ್ ಮಿಶ್ರಣ ಮಾಡಿ ಇಂಧನ ಒದಗಿಸಿತ್ತು 80 ಸಾವಿರ ಲೀಟರ್ ಮಿಥನಾಲ್ ಮಿಶ್ರಣ ಇಂಧನ ಬಳಕೆ ಮಾಡಲಾಗಿತ್ತು.

ಪತ್ರಿಕೆ-V: ಸಾಮಾನ್ಯ ಅಧ್ಯಯನ-4

ಕೆಎಎಸ್ ಪ್ರಚಲಿತ ವಿದ್ಯಮಾನಗಳು

ಕೆ.ಎ.ಎಸ್ ಪ್ರಚಲಿತ ವಿದ್ಯಮಾನಗಳು: ಪ್ರಚಲಿತ ವಿದ್ಯಮಾನಗಳು ಕೆ.ಪಿ.ಎಸ್.ಸಿ ಪಠ್ಯಕ್ರಮದ ‘ಜೀವಂತ ನಾಡಿಮಿಡಿತ’ವಿದ್ದಂತೆ. ಇದು ಕೇವಲ ಪ್ರತ್ಯೇಕವಾಗಿ ನೆನಪಿಡಬೇಕಾದ ವಿಷಯವಲ್ಲ; ಬದಲಿಗೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳೆರಡರಲ್ಲೂ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ನೀತಿಶಾಸ್ತ್ರವನ್ನು ಒಂದಕ್ಕೊಂದು ಬೆಸೆಯುವ ಒಂದು ಚಲನಶೀಲ ಕೊಂಡಿಯಾಗಿದೆ. ಮುಂಬರುವ ಪರೀಕ್ಷೆಗಳ ಸಂದರ್ಭದಲ್ಲಿ, ಕೇವಲ “ಸುದ್ದಿ ಓದುವುದರಿಂದ” “ಸುದ್ದಿಯ ಮೂಲಕ ಪಠ್ಯಕ್ರಮವನ್ನು ಅಭ್ಯಾಸ ಮಾಡುವುದು” ಎಂಬ ಹಂತಕ್ಕೆ ಬದಲಾಗುವುದು ಒಬ್ಬ ಗಂಭೀರ ಅಭ್ಯರ್ಥಿಯನ್ನು ಸಾಮಾನ್ಯ ಓದುಗನಿಂದ ಪ್ರತ್ಯೇಕಿಸುವ ಪ್ರಮುಖ ಬದಲಾವಣೆಯಾಗಿದೆ.

“ಪಠ್ಯಕ್ರಮಕ್ಕೆ ಮೊದಲ ಆದ್ಯತೆ” ಎಂಬ ತತ್ವ
ಕೆ.ಪಿ.ಎಸ್.ಸಿ ಪಠ್ಯಕ್ರಮಕ್ಕೆ ಕಟ್ಟುನಿಟ್ಟಾಗಿ ಹೊಂದಿಕೆಯಾಗುವ ಪ್ರಚಲಿತ ವಿದ್ಯಮಾನಗಳ ಮಾದರಿಯನ್ನು ಅನುಸರಿಸುವ ಮೂಲಕ, ನೀವು ದಿನಪತ್ರಿಕೆ ಓದಲು ವ್ಯಯಿಸುವ ಪ್ರತಿ ಗಂಟೆಯೂ ನಿಮ್ಮ ಪರೀಕ್ಷೆಯ ಶ್ರೇಣಿಯನ್ನು (Rank) ಉತ್ತಮಪಡಿಸಲು ಪೂರಕವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

ಪೂರ್ವಭಾವಿ ಪರೀಕ್ಷೆ

ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು

ರಷ್ಯಾದಿಂದ ಎಸ್-400 ಖರೀದಿ: ಭಾರತ ಒಪ್ಪಂದ
ಸಂದರ್ಭ:
ರಷ್ಯಾದಿಂದ ಐದು ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರ ಖರೀದಿಸಲು ಭಾರತವು ಒಪ್ಪಂದಕ್ಕೆ ಸಹಿ ಹಾಕಿದೆ.

  • ದೇಶದ ವಾಯು ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವುದಕ್ಕಾಗಿ ರಷ್ಯಾದಿಂದ ಐದು ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ) ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರ ಖರೀದಿಸಲು ಭಾರತವು ಒಟ್ಟು ₹2.38 ಲಕ್ಷ ಕೋಟಿ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದೆ.
  • ಹಳೆಯದಾದ ಎಎನ್-32 ವಿಮಾನಗಳ ಬದಲು ಮಧ್ಯಮ ಶ್ರೇಣಿಯ 60 ಸಾರಿಗೆ ವಿಮಾನಗಳ ಖರೀದಿಯೂ ಈ ಒಪ್ಪಂದಲ್ಲಿ ಸೇರಿದೆ. ಖರೀದಿ ಒಪ್ಪಂದಗಳಿಗೆ ರಕ್ಷಣಾ ಸಚಿವ ಅಧ್ಯಕ್ಷತೆಯ ಸಮಿತಿಯು ಅನುಮೋದನೆ ನೀಡಿದೆ.
  • ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಭಾರತಕ್ಕೆ ಬರುವುದು ತಡವಾಗಿತ್ತು. ಈ ವರ್ಷಾಂತ್ಯದೊಳಗೆ ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
  • ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯು, ದೂರದಿಂದಲೇ ಶತ್ರು ಪಡೆಯ ಕ್ಷಿಪಣಿಯನ್ನು ಗುರುತಿಸಿ, ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.
  • ರಷ್ಯಾದಿಂದ ತಂಗುಸ್ಕಾ ಹೆಸರಿನ ವಾಯು ರಕ್ಷಣಾ ಕ್ಷಿಪಣಿ ಖರೀದಿಗೆ ₹445 ಕೋಟಿ ಮೊತ್ತದ ಒಪ್ಪಂದ ಮಾಡಿಕೊಳ್ಳಲಾಗಿದೆ.
  • ನೌಕಾಪಡೆಯ ‘ಪಿಐ’ ಯುದ್ಧ ವಿಮಾನಗಳ ನಿರ್ವಹಣೆಗಾಗಿ ಬೋಯಿಂಗ್ ಕಂಪನಿಯೊಂದಿಗೆ ₹413 ಕೋಟಿ ಮೊತ್ತದ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ರಷ್ಯಾದಿಂದ ಭಾರತ ಖರೀದಿಸಿರುವ S-400 ಟ್ರಯಂಫ್ (Triumf) ಎಂಬುದು ವಿಶ್ವದ ಅತ್ಯಾಧುನಿಕ ‘ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ’ (Air Defence Missile System) ಆಗಿದೆ. ಇದನ್ನು ಭಾರತೀಯ ಸೇನೆಯಲ್ಲಿ ‘ಸುದರ್ಶನ ಚಕ್ರ’ ಎಂದು ಹೆಸರಿಸಲಾಗಿದೆ.

S-400 ಎಂದರೇನು?
ಇದು ಶತ್ರು ದೇಶಗಳ ವಿಮಾನಗಳು, ಕ್ಷಿಪಣಿಗಳು ಅಥವಾ ಡ್ರೋನ್‌ಗಳು ಭಾರತದ ವಾಯುಗಡಿಯೊಳಗೆ ಪ್ರವೇಶಿಸದಂತೆ ತಡೆಯುವ ಒಂದು ‘ರಕ್ಷಣಾ ಕವಚ’. ಇದು ಭೂಮಿಯಿಂದ ಆಗಸಕ್ಕೆ (Surface-to-Air) ಚಿಮ್ಮುವ ಕ್ಷಿಪಣಿ ವ್ಯವಸ್ಥೆಯಾಗಿದೆ.

ಪ್ರಮುಖ ವೈಶಿಷ್ಟ್ಯಗಳು:
ವ್ಯಾಪ್ತಿ (Range): ಇದು ಸುಮಾರು 400 ಕಿ.ಮೀ ದೂರದವರೆಗಿನ ಶತ್ರು ಗುರಿಗಳನ್ನು ಗುರುತಿಸಿ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.
ಏಕಕಾಲದ ದಾಳಿ: ಒಂದೇ ಸಮಯದಲ್ಲಿ ಸುಮಾರು 36 ಗುರಿಗಳನ್ನು ಏಕಕಾಲಕ್ಕೆ ಟ್ರ್ಯಾಕ್ ಮಾಡಬಹುದು ಮತ್ತು ಅವುಗಳ ಮೇಲೆ ದಾಳಿ ಮಾಡಬಹುದು.
ವೇಗ: ಇದರ ಕ್ಷಿಪಣಿಗಳು ಶಬ್ದಕ್ಕಿಂತ ಸುಮಾರು 14 ಪಟ್ಟು ವೇಗವಾಗಿ (Mach 14) ಚಲಿಸಬಲ್ಲವು.
ಬಹುಪದರದ ರಕ್ಷಣೆ: ಇದರಲ್ಲಿ ನಾಲ್ಕು ವಿಧದ ಕ್ಷಿಪಣಿಗಳಿವೆ. ಇವು 40 ಕಿ.ಮೀ ನಿಂದ 400 ಕಿ.ಮೀ ವರೆಗಿನ ವಿಭಿನ್ನ ದೂರದ ಗುರಿಗಳನ್ನು ನಾಶಪಡಿಸುತ್ತವೆ.
ಗುರುತಿಸುವಿಕೆ: ಇದರ ಅತ್ಯಾಧುನಿಕ ರಾಡಾರ್ ವ್ಯವಸ್ಥೆಯು 600 ಕಿ.ಮೀ ದೂರದಲ್ಲೇ ಶತ್ರು ವಿಮಾನಗಳ ಚಲನವಲನವನ್ನು ಪತ್ತೆಹಚ್ಚಬಲ್ಲದು.

ಭಾರತಕ್ಕೆ ಇದರ ಮಹತ್ವವೇನು?
ದ್ವಿಮುಖ ಬೆದರಿಕೆ: ಚೀನಾ ಮತ್ತು ಪಾಕಿಸ್ತಾನದ ಗಡಿಗಳಲ್ಲಿ ಏಕಕಾಲಕ್ಕೆ ರಕ್ಷಣೆ ನೀಡಲು ಇದು ಅತ್ಯಗತ್ಯ.
ಕಾರ್ಯಾಚರಣೆ ಸಿಂಧೂರ್: ಇತ್ತೀಚಿನ ವರದಿಗಳ ಪ್ರಕಾರ, ‘ಆಪರೇಷನ್ ಸಿಂಧೂರ್’ ಸಮಯದಲ್ಲಿ ಈ ವ್ಯವಸ್ಥೆಯು ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದೆ.
ರಕ್ಷಣಾ ಕವಚ: ದೆಹಲಿ ಅಥವಾ ಮುಂಬೈನಂತಹ ಪ್ರಮುಖ ನಗರಗಳ ಮೇಲೆ ಕ್ಷಿಪಣಿ ದಾಳಿಯಾದಾಗ, ಅವು ನಗರ ತಲುಪುವ ಮೊದಲೇ ಆಕಾಶದಲ್ಲೇ ನಾಶಪಡಿಸಲು ಇದು ಸಹಕಾರಿ.

ಒಪ್ಪಂದದ ಸ್ಥಿತಿಗತಿ (2026ರ ಅಂಕಿಅಂಶ):
ಭಾರತವು 2018ರಲ್ಲಿ ಸುಮಾರು 35,000 ಕೋಟಿ ರೂ. ಮೊತ್ತಕ್ಕೆ 5 ಘಟಕಗಳ (Regiments) ಒಪ್ಪಂದ ಮಾಡಿಕೊಂಡಿತ್ತು.
ಈಗಾಗಲೇ 3 ಘಟಕಗಳು ಭಾರತಕ್ಕೆ ತಲುಪಿದ್ದು, ಉಳಿದ 2 ಘಟಕಗಳು 2026ರ ಅಂತ್ಯದ ವೇಳೆಗೆ ಭಾರತಕ್ಕೆ ತಲುಪಲಿವೆ ಎಂದು ರಷ್ಯಾ ದೃಢಪಡಿಸಿದೆ.
ಇತ್ತೀಚೆಗೆ (ಮಾರ್ಚ್ 2026), ಭಾರತವು ತನ್ನ ವಾಯು ರಕ್ಷಣೆಯನ್ನು ಇನ್ನಷ್ಟು ಬಲಪಡಿಸಲು ಹೆಚ್ಚುವರಿ S-400 ಘಟಕಗಳ ಖರೀದಿಗೆ ಒಪ್ಪಿಗೆ ನೀಡಿದೆ.

ಏಷ್ಯಾ ಕಪ್ ಆರ್ಚರಿ: ಭಾರತಕ್ಕೆ 10 ಪದಕ
ಸಂದರ್ಭ: ಭಾರತದ ಕಾಂಪೌಂಡ್ ಆರ್ಚರಿ ಸ್ಪರ್ಧಿಗಳು, ಏಷ್ಯಾ ಕಪ್-ವಿಶ್ವ ಬ್ಯಾಂಕಿಂಗ್ ಟೂರ್ನಿಯಲ್ಲಿ ಪ್ರಾಬಲ್ಯ ಮೆರೆದರು. ಮಿಶ್ರ ತಂಡ ವಿಭಾಗದಲ್ಲಿ ಚಿನ್ನ, ಮಹಿಳಾ ತಂಡ ವಿಭಾಗದಲ್ಲಿ ಬೆಳ್ಳಿ ಜಯಿಸಿದರಲ್ಲದೇ,ಪುರುಷರ ವೈಯಕ್ತಿಕ ವಿಭಾಗದಲ್ಲಿ ಮೂರೂ ಪದಕಗಳನ್ನು ಬಾಚಿಕೊಂಡರು.

  • ರಿಕರ್ವ್ ವಿಭಾಗದಲ್ಲಿ ಭಾರತ ಎರಡು ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿತು. ಒಟ್ಟು ಎರಡು ಚಿನ್ನ. ನಾಲ್ಕು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿತು.
  • ಆದರೆ ಚಿನ್ನದ ಲೆಕ್ಕ ತೆಗೆದು ಕೊಂಡರೆ, ಭಾರತದ ಸಾಧನೆ ಕಡಿಮೆ ಎನಿಸಿತು. ಕಳೆದ ಆವೃತ್ತಿಯಲ್ಲಿ ಭಾರತ ಐದು ಚಿನ್ನ ಗೆದ್ದುಕೊಂಡಿತ್ತು
  • ರಿಕರ್ವ್ ವಿಭಾಗದ ಕಳಪೆ ಸಾಧನೆ ಇದಕ್ಕೆ, ಕಾರಣವಾಯಿತು. ಈ ವಿಭಾಗದಲ್ಲಿ ಭಾರತ ಒಂದೂ ಚಿನ್ನ ಗೆಲ್ಲಲಾಗಲಿಲ್ಲ, ಪುರುಷರ ವೈಯಕ್ತಿಕ ವಿಭಾಗ ಮತ್ತು ಮಿಶ್ರ ತಂಡ ವಿಭಾಗದಲ್ಲಿ ಭಾರತದ ಸ್ಪರ್ಧಿಗಳಿಗೆ ಪದಕ ಗಳಿಸಲು ವಿಫಲರಾದರು.

ಏಷ್ಯಾ ಕಪ್ ಆರ್ಚರಿ (Asia Cup Archery) ಎಂಬುದು ಏಷ್ಯಾ ಖಂಡದ ಬಿಲ್ಲುಗಾರಿಕೆ (Archery) ಕ್ರೀಡಾಪಟುಗಳಿಗಾಗಿ ನಡೆಸಲಾಗುವ ಒಂದು ಪ್ರತಿಷ್ಠಿತ ಅಂತರರಾಷ್ಟ್ರೀಯ ಪಂದ್ಯಾವಳಿಯಾಗಿದೆ.
ಪ್ರಸ್ತುತ 2026ರ ಮಾರ್ಚ್ ತಿಂಗಳಿನಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯಾ ಕಪ್ ಆರ್ಚರಿ ಸ್ಟೇಜ್-1 ಪಂದ್ಯಾವಳಿಯಲ್ಲಿ ಭಾರತದ ಕ್ರೀಡಾಪಟುಗಳು ಅತ್ಯಂತ ಅದ್ಭುತ ಪ್ರದರ್ಶನ ನೀಡಿದ್ದಾರೆ.

1. ಭಾರತದ ಸಾಧನೆ (2026 – ಸ್ಟೇಜ್ 1)
ಬ್ಯಾಂಕಾಕ್‌ನಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ಭಾರತವು ಒಟ್ಟು 10 ಪದಕಗಳನ್ನು (2 ಚಿನ್ನ, 4 ಬೆಳ್ಳಿ ಮತ್ತು 4 ಕಂಚು) ಗೆದ್ದು ಬೀಗಿದೆ.
ಕಂಪೌಂಡ್ ವಿಭಾಗದ ಪ್ರಾಬಲ್ಯ: ಪುರುಷರ ವೈಯಕ್ತಿಕ ಕಂಪೌಂಡ್ (Compound) ವಿಭಾಗದಲ್ಲಿ ಭಾರತದ ಕ್ರೀಡಾಪಟುಗಳು ಮೊದಲ ಮೂರೂ ಪದಕಗಳನ್ನು (ಚಿನ್ನ, ಬೆಳ್ಳಿ, ಕಂಚು) ಗೆದ್ದು ‘ಕ್ಲೀನ್ ಸ್ವೀಪ್’ ಸಾಧನೆ ಮಾಡಿದ್ದಾರೆ.
ಪ್ರಮುಖ ಚಿನ್ನದ ಪದಕ ವಿಜೇತರು:
ಉದಯ್ ಕಾಂಬೋಜ್ (Uday Kamboj): ಪುರುಷರ ವೈಯಕ್ತಿಕ ಕಂಪೌಂಡ್ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ.
ಚಿಕಿತಾ ತನಿಪರ್ತಿ ಮತ್ತು ರಜತ್ ಚೌಹಾಣ್: ಮಿಶ್ರ ತಂಡ (Mixed Team) ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದಾರೆ.

2. ಪದಕ ವಿಜೇತರ ಪಟ್ಟಿ (2026):

ಪದಕವಿಜೇತರುವಿಭಾಗ
ಚಿನ್ನಉದಯ್ ಕಾಂಬೋಜ್ಪುರುಷರ ವೈಯಕ್ತಿಕ ಕಂಪೌಂಡ್
ಚಿನ್ನಚಿಕಿತಾ ಮತ್ತು ರಜತ್ ಚೌಹಾಣ್ಮಿಶ್ರ ತಂಡ ಕಂಪೌಂಡ್
ಬೆಳ್ಳಿಪ್ರಥಮೇಶ್ ಜಾವ್ಕರ್ಪುರುಷರ ವೈಯಕ್ತಿಕ ಕಂಪೌಂಡ್
ಬೆಳ್ಳಿರಿದ್ಧಿ ಪೋರ್ (Ridhi Phor)ಮಹಿಳೆಯರ ವೈಯಕ್ತಿಕ ರಿಕರ್ವ್ (Recurve)
ಬೆಳ್ಳಿಪುರುಷರ ತಂಡಪುರುಷರ ರಿಕರ್ವ್ ತಂಡ
ಬೆಳ್ಳಿಮಹಿಳೆಯರ ತಂಡಮಹಿಳೆಯರ ಕಂಪೌಂಡ್ ತಂಡ
ಕಂಚುರಜತ್ ಚೌಹಾಣ್ಪುರುಷರ ವೈಯಕ್ತಿಕ ಕಂಪೌಂಡ್
ಕಂಚುತೇಜಲ್ ಸಾಳ್ವೆಮಹಿಳೆಯರ ವೈಯಕ್ತಿಕ ಕಂಪೌಂಡ್

    3. ಪರೀಕ್ಷಾ ದೃಷ್ಟಿಕೋನ (Key Highlights):
    ಪಂದ್ಯಾವಳಿ ನಡೆದ ಸ್ಥಳ: ಬ್ಯಾಂಕಾಕ್, ಥೈಲ್ಯಾಂಡ್ (ಮಾರ್ಚ್ 2026).
    ಕಂಪೌಂಡ್ ವರ್ಸಸ್ ರಿಕರ್ವ್: ಬಿಲ್ಲುಗಾರಿಕೆಯಲ್ಲಿ ಎರಡು ವಿಧದ ಬಿಲ್ಲುಗಳಿರುತ್ತವೆ. ರಿಕರ್ವ್ (Recurve – ಒಲಿಂಪಿಕ್ಸ್‌ನಲ್ಲಿರುವ ವಿಧ) ಮತ್ತು ಕಂಪೌಂಡ್ (Compound – ಹೆಚ್ಚು ತಾಂತ್ರಿಕವಾದ ಬಿಲ್). ಭಾರತವು ಈ ಬಾರಿ ಕಂಪೌಂಡ್ ವಿಭಾಗದಲ್ಲಿ ವಿಶ್ವಮಟ್ಟದ ಪ್ರಾಬಲ್ಯ ಸಾಧಿಸಿದೆ.
    ಲಕ್ಷ್ಯ 2028: ಕಂಪೌಂಡ್ ಮಿಶ್ರ ತಂಡ ವಿಭಾಗವು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಪದಕದ ವಿಭಾಗವಾಗಿ ಸೇರ್ಪಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಭಾರತದ ಈ ಚಿನ್ನದ ಪದಕವು ಬಹಳ ಮಹತ್ವದ್ದಾಗಿದೆ.


    ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು

    ಗಿರಿಜಾಗೆ ವರನಟ ಡಾ.ರಾಜಕುಮಾರ್’ ಪ್ರಶಸ್ತಿ
    ಸಂದರ್ಭ: ಕನ್ನಡ ಜನಶಕ್ತಿ ಕೇಂದ್ರ ನೀಡುವ 2026ನೇ ಸಾಲಿನ ‘ವರನಟ ಡಾ.ರಾಜಕುಮಾರ್’ ಪ್ರಶಸ್ತಿಗೆ ರಂಗಭೂಮಿ ಕಲಾವಿದೆ ಗಿರಿಜಾ ಲೋಕೇಶ್ ಆಯ್ಕೆ ಆಗಿದ್ದಾರೆ.

    ಪ್ರಶಸ್ತಿಯು 25 ಸಾವಿರ ನಗದು. ಕಂಚಿನ ಫಲಕ ಹಾಗೂ ಪ್ರಶಸ್ತಿ ಗಿರಿಜಾ ಲೋಕೇಶ್ ಪತ್ರವನ್ನು ಒಳಗೊಂಡಿದೆ.

    ಪ್ರಶಸ್ತಿ ವಿವರಗಳು

    ಅಂಶವಿವರ
    ಪ್ರಶಸ್ತಿಯ ಹೆಸರು‘ವರನಟ ಡಾ. ರಾಜಕುಮಾರ್’ ಪ್ರಶಸ್ತಿ
    ಪ್ರಶಸ್ತಿ ನೀಡುವ ಸಂಸ್ಥೆಕನ್ನಡ ಜನಶಕ್ತಿ ಕೇಂದ್ರ
    2026ರ ಸಾಲಿನ ಪುರಸ್ಕೃತರುಗಿರಿಜಾ ಲೋಕೇಶ್ (ಖ್ಯಾತ ರಂಗಭೂಮಿ ಮತ್ತು ಚಲನಚಿತ್ರ ಕಲಾವಿದೆ)
    ಪ್ರಶಸ್ತಿಯ ಮೊತ್ತ₹25,000 (ಇಪ್ಪತ್ತೈದು ಸಾವಿರ) ನಗದು
    ಗೌರವಕಂಚಿನ ಫಲಕ ಮತ್ತು ಪ್ರಶಸ್ತಿ ಪತ್ರ

    ಕನ್ನಡ ಜನಶಕ್ತಿ ಕೇಂದ್ರ ಪ್ರಶಸ್ತಿಗಳು – 2026

    ಪ್ರಶಸ್ತಿಯ ಹೆಸರುಪುರಸ್ಕೃತರುಕ್ಷೇತ್ರ / ಕೊಡುಗೆ
    ವರನಟ ಡಾ. ರಾಜ್‌ಕುಮಾರ್ ಪ್ರಶಸ್ತಿಗಿರಿಜಾ ಲೋಕೇಶ್ರಂಗಭೂಮಿ ಮತ್ತು ಚಲನಚಿತ್ರ (ನಟನೆ)
    ಪಂಪ ಭಾರತ ಪ್ರಶಸ್ತಿಡಾ. ಎಚ್.ಎಸ್. ವೆಂಕಟೇಶಮೂರ್ತಿಸಾಹಿತ್ಯ (ಕವನ ಮತ್ತು ನಾಟಕಗಳು)
    ಕುವೆಂಪು ವಿಶ್ವಮಾನವ ಪ್ರಶಸ್ತಿಪ್ರೊ. ಬರಗೂರು ರಾಮಚಂದ್ರಪ್ಪಸಾಮಾಜಿಕ ಕ್ರಿಯಾಶೀಲತೆ ಮತ್ತು ಸಾಹಿತ್ಯ
    ಕಾಯಕ ರತ್ನ ಪ್ರಶಸ್ತಿಸಾಲುಮರದ ತಿಮ್ಮಕ್ಕಪರಿಸರ ಸಂರಕ್ಷಣೆ
    ಕನ್ನಡ ಶಕ್ತಿ ಪ್ರಶಸ್ತಿಗಣೇಶ್ ಕಾರ್ಣಿಕ್ಶಿಕ್ಷಣ ಮತ್ತು ಸಾರ್ವಜನಿಕ ಸೇವೆ
    ಮಾಧ್ಯಮ ರತ್ನ ಪ್ರಶಸ್ತಿರಂಗನಾಥ್ ಭಾರದ್ವಾಜ್ಪತ್ರಿಕೋದ್ಯಮ (ಎಲೆಕ್ಟ್ರಾನಿಕ್ ಮೀಡಿಯಾ)

    15 ಅಂಶಗಳ ಪ್ರಶ್ನಾವಳಿ: ‘ವಿ.ಆರ್.ಸಿಟಿ 2026’ ವರದಿ ಪ್ರಕಟ
    ಸಂದರ್ಭ: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್ ದೇಶದ ಅತ್ಯಂತ ವಾಸಯೋಗ್ಯ ನಗರವಾಗಿ ಹೈದರಾಬಾದ್ ಹೊರಹೊಮ್ಮಿದ್ದು, ಬೆಂಗಳೂರು ನಗರವನ್ನು ಹಿಂದಿಕ್ಕಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಈ ಎರಡೂ ನಗರಗಳು ಅತಿ ವೇಗವಾಗಿ ಬೆಳೆಯುತ್ತಿವೆ.

    • ಸುಮಾರು 15 ಅಂಶಗಳ ಪ್ರಶ್ನಾವಳಿಗಳನ್ನು ಆಧಾರವಾಗಿಟ್ಟುಕೊಂಡು ಬೆಂಗಳೂರು ಮೂಲದ ಅನ್‌ಬಾಕ್ಸಿಂಗ್ ಬಿಎಲ್‌ಆರ್ ಸಂಸ್ಥೆ ನಡೆಸಿರುವ ಸಮೀಕ್ಷೆ- ‘ವಿ.ಆರ್.ಸಿಟಿ 2026’ ವರದಿಯಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ.
    • ಉದ್ಯೋಗ, ಬೆಳವಣಿಗೆ ಮತ್ತು ಸಂಪರ್ಕ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳೊಂದಿಗೆ ದೇಶದ ಭವಿಷ್ಯದ ನಗರಗಳಾಗಿ ರೂಪುಗೊಂಡಿರುವ ಎರಡೂ ನಗರಗಳ ಮೇಲೆ ಈ ವರದಿ ಬೆಳಕು ಚೆಲ್ಲಿದೆ.
    • 159 ಪುಟಗಳ ಈ ವರದಿಯಲ್ಲಿ ವಾಸಕ್ಕೆ ಯೋಗ್ಯವಾದ 8 ನಗರಗಳ ಮಾಹಿತಿ ಇದೆ. ಇದರಲ್ಲಿ ಸಂಪರ್ಕ, ವೈವಿಧ್ಯ, ಪ್ರವಾಸ, ವಸತಿ, ಮೂಲಸೌಕರ್ಯ ಹಾಗೂ ಹವಾಮಾನ ಆಧರಿಸಿ ಮಾಹಿತಿ ಸಂಗ್ರಹಿಸಲಾಗಿದೆ.
    • ಈ ಪಟ್ಟಿಯಲ್ಲಿ ಹೈದರಾಬಾದ್ ಅಗ್ರಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಬೆಂಗಳೂರು ಮತ್ತು ಕೋಲ್ಕತ್ತ ನಗರಗಳು ಇವೆ. ಗುಜರಾತ್‌ನ ಅಹಮದಾಬಾದ್ ಈ ಪಟ್ಟಿಯ ಕೊನೆ ಸ್ಥಾನದಲ್ಲಿದೆ. ಉಳಿದಂತೆ ಚೆನ್ನೈ ದೆಹಲಿ ಎನ್,ಆರ್. ಪುಣೆ, ಗ್ರೇಟರ್ ಮುಂಬೈ ಕ್ರಮವಾಗಿ ನಾಲ್ಕು, ಐದು, ಆರು ಮತ್ತು ಏಳನೇ ಸ್ಥಾನದಲ್ಲಿವೆ
    • ಬೆಂಗಳೂರು ಹವಾಗುಣ ವೈವಿಧ್ಯದಲ್ಲಿ ಅಗ್ರ ಸ್ಥಾನದಲ್ಲಿದ್ದರೆ, ಹೈದರಾಬಾದ್ ಸಹ ಈ ಎಲ್ಲಾ ವಿಷಯಗಳಲ್ಲಿ ಸಮಾನ ಪೈಪೋಟಿ ನೀಡಿದೆ ಜತೆಗೆ ಇಲ್ಲಿನ ವಾಹನ ದಟ್ಟಣೆ ಬೆಂಗಳೂರಿನಷ್ಟೇ ಇದೆ
    • ಎರಡೂ ನಗರಗಳಲ್ಲಿ ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿನತ್ತ ಸಾಗಲು ಸಾಮಾನ್ಯವಾಗಿ 22 ಕಿ.ಮೀ. ಕ್ರಮಿಸಲು ಸರಾಸರಿ ಅವಧಿ 58ರಿಂದ 59 ನಿಮಿಷಗಳು.
    • ಪ್ರತಿಷ್ಠಿತ ಬಡಾವಣೆಗಳಲ್ಲಿ ಅತ್ಯಾಧುನಿಕ ಸೌಲಭ್ಯವಿರುವ ಕಚೇರಿ ಸ್ಥಳಾವಕಾಶದ ವಿಷಯದಲ್ಲಿ ಈ ಎರಡೂ ನಗರಗಳು ಶೇಕಡ 53ರಷ್ಟು ಪಾಲು ಹೊಂದಿವೆ ದಿಲ್ಲಿ-ಎನ್‌ಸಿಆರ್ ಮತ್ತು ಗ್ರೇಟರ್ ಮುಂಬೈಗಿಂತ ಕಡಿಮೆ ಜನಸಂಖ್ಯೆ ಇರುವ ನಗರಗಳಾದರೂ ತಮ್ಮ ಸಾಮರ್ಥ್ಯ ಮೀರಿ ಸಾಧನೆ ಮಾಡುತ್ತಿವೆ
    • ಕಳೆದ ಎರಡು ವರ್ಷಗಳಲ್ಲಿ ದೇಶದ ಅಗ್ರ 8 ನಗರಗಳ ನಡುವೆ ಹೊಸ ದೇಶಿಯ ವಿಮಾನ ಸಂಚಾರದಲ್ಲಿ ಬೆಂಗಳೂರು ಮತ್ತು ಹೈದರಾಬಾದ್ ಶೇಕಡ ಎರಡೂ ನಗರಗಳು ತಂತ್ರಜ್ಞಾನ ಆಧರಿತ ಬೆಳವಣಿಗೆ ಸಾಧಿಸಿವೆ. ಆದರೆ, ಕಾರ್ಯನಿರ್ವಹಣಾ ರೀತಿ, ಬೆಳವಣಿಗೆಗಳಲ್ಲಿ ತುಂಬ ಅಂತರಗಳಿವೆ. ನವೋದ್ಯಮ, ಹಣಕಾಸು ನೆರವು, ನಾವೀನ್ಯ ಮತ್ತು ಹೊಸ ಉದ್ಯೋಗಳ ಸೃಷ್ಟಿಯಲ್ಲಿ ಬೆಂಗಳೂರು ಮುನ್ನಡೆ ಸಾಧಿಸಿದ್ದು ದೇಶದ ನವೋದ್ಯಮ ರಾಜಧಾನಿಯಾಗಿದೆ.
    • ಇಲ್ಲಿ ಬ್ಯಾಂಕ್ ಠೇವಣಿ ಪ್ರಮಾಣ ಹೆಚ್ಚಿದೆ. ಹೈದರಾಬಾದ್ ಜಾಗತಿಕ ಸಾಮರ್ಥ್ಯ ಕೇಂದ್ರದ ಹಬ್ ಆಗಿ ಹೊರಹೊಮ್ಮುತ್ತಿದೆ. ಟೆಕ್ ಜಾಬ್‌ಗಳಲ್ಲಿ ಬೆಂಗಳೂರು ಮತ್ತು ಹೈದರಾಬಾದ್ ನಡುವಣ ಅಂತರ ಕಡಿಮೆಯಾಗುತ್ತಿದೆ.
    • ಗ್ರಾಹಕರು ಮತ್ತು ಸಣ್ಣ ಉದ್ಯಮಿಗಳಿಗೆ ನೇರವಾಗಿ ನೀಡುವ ಸಾಲ, ಗೃಹ ಸಾಲದಲ್ಲಿ ಹೈದರಾಬಾದ್ ಮುಂದಿದೆ. ಮೂಲಸೌಕರ್ಯ ಅಭಿವೃದ್ಧಿ, ಮಹಿಳೆಯರ ಸುರಕ್ಷತೆಯಲ್ಲಿ ಹೈದರಾಬಾದ್ ಮುಂದಿದೆ. ಐಟಿ, ತಯಾರಿಕಾ ವಲಯ, ಔಷಧ ಮತ್ತು ಬಿಎಫ್‌ಎಸ್‌ಐ ವಲಯಗಳಲ್ಲಿ ಉದ್ಯೋಗಿಗಳ ನೇಮಕದಲ್ಲಿ ಎರಡೂ ನಗರಗಳು ಪ್ರಾಬಲ್ಯ ಸಾಧಿಸಿವೆ.

    ಮುಖ್ಯ ಪರೀಕ್ಷೆ

    ಪತ್ರಿಕೆ-I: ಪ್ರಬಂಧಗಳು

    ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ

    “ಭಾರತದ ಬ್ರಹ್ಮಾಂಡದ ಜಿಗಿತ – ಚಂದ್ರಯಾನದಿಂದ ಶುಕ್ರಯಾನದವರೆಗೆ: ತಾಂತ್ರಿಕ ಉದ್ದೇಶಗಳ ವಿಕಾಸ, ವೈಜ್ಞಾನಿಕ ಸಾರ್ವಭೌಮತ್ವದ ಕಾರ್ಯತಂತ್ರದ ಅನ್ವೇಷಣೆ ಮತ್ತು ಅಭಿವೃದ್ಧಿಶೀಲ ಆರ್ಥಿಕತೆಗೆ ಆಳವಾದ ಬಾಹ್ಯಾಕಾಶ ಸಂಶೋಧನೆಯ ಸಾಮಾಜಿಕ-ಆರ್ಥಿಕ ಸಮರ್ಥನೆ.”

    ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ

    “ನಗರೀಕರಣದ ಅನಿವಾರ್ಯತೆ ಮತ್ತು ಪರಿಸರದ ಸುಸ್ಥಿರತೆಯ ನಡುವಿನ ಸಂಘರ್ಷ: ‘ನಗರ ತಾಪ ದ್ವೀಪ’ (Urban Heat Island) ಪರಿಣಾಮದ ಹಿನ್ನೆಲೆಯಲ್ಲಿ ಬೆಂಗಳೂರಿನಂತಹ ಮಹಾನಗರಗಳ ಸವಾಲುಗಳು ಮತ್ತು ಅವುಗಳಿಗೆ ಪರಿಹಾರಾತ್ಮಕ ಕ್ರಮಗಳನ್ನು ವಿಶ್ಲೇಷಿಸಿ.”

    ಪತ್ರಿಕೆ-II: ಸಾಮಾನ್ಯ ಅಧ್ಯಯನ-1

    ವಿದೇಶಿ ವಿನಿಮಯ ಸಂಗ್ರಹ ಇಳಿಕೆ
    ಸಂದರ್ಭ: ಮಾರ್ಚ್ 20ಕ್ಕೆ ಅಂತ್ಯಗೊಂಡ ವಾರದಲ್ಲಿ ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ₹1.08 ಲಕ್ಷ ಕೋಟಿಯಷ್ಟು ಕಡಿಮೆ ಆಗಿದೆ.

    • ಒಟ್ಟು ಮೀಸಲು ಸಂಗ್ರಹವು ₹66.16 ಲಕ್ಷ ಕೋಟಿಗೆ ಇಳಿದಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ತಿಳಿಸಿದೆ. ಚಿನ್ನದ ಮೀಸಲು ಸಂಗ್ರಹದಲ್ಲಿನ ಇಳಿಕೆಯೇ ಒಟ್ಟಾರೆ ಮೀಸಲು ಸಂಗ್ರಹ ಕಡಿಮೆಯಾಗಲು ಕಾರಣವಾಗಿದೆ.
    • ವಿದೇಶಿ ಕರೆನ್ಸಿಗಳ ಸಂಪತ್ತಿನ ಮೌಲ್ಯ ₹20.154 ಕೋಟಿಯಷ್ಟು ಹೆಚ್ಚಳವಾಗಿದ್ದು, ₹52.84 ಲಕ್ಷ ಕೋಟಿಯಾಗಿದೆ.
    • ಚಿನ್ನದ ಮೀಸಲು ಸಂಗ್ರಹದಲ್ಲಿ ₹1.27 ಲಕ್ಷ ಕೋಟ ಇಳಿಕೆಯಾಗಿದ್ದು, ₹11.09 ಲಕ್ಷ ಕೋಟಿಯಾಗಿದೆ. ಸ್ಪೆಷಲ್ ಡ್ರಾಯಿಂಗ್ ರೈಟ್ (ಎಸ್‌ಡಿಆರ್) ₹1.76 ಲಕ್ಷ ಕೋಟಿ ಆಗಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಭಾರತದ ಪಾಲು ₹45,795 ಕೋಟಿಯಾಗಿದೆ ಎಂದು ತಿಳಿಸಿದೆ.

    ವಿದೇಶಿ ವಿನಿಮಯ ಸಂಗ್ರಹ ಅಥವಾ ವಿದೇಶಿ ವಿನಿಮಯ ಮೀಸಲು (Foreign Exchange Reserves / Forex Reserves) ಎನ್ನುವುದು ಒಂದು ದೇಶದ ಕೇಂದ್ರೀಯ ಬ್ಯಾಂಕ್ (ಭಾರತದಲ್ಲಿ RBI – ಭಾರತೀಯ ರಿಸರ್ವ ಬ್ಯಾಂಕ್) ಸಂಗ್ರಹಿಸಿಟ್ಟುಕೊಂಡಿರುವ ವಿದೇಶಿ ಕರೆನ್ಸಿ ಮತ್ತು ಇತರ ಆಸ್ತಿಗಳ ಮೊತ್ತವಾಗಿದೆ.
    ಸರಳವಾಗಿ ಹೇಳುವುದಾದರೆ, ತುರ್ತು ಸಂದರ್ಭಗಳಲ್ಲಿ ಅಥವಾ ಅಂತರರಾಷ್ಟ್ರೀಯ ವ್ಯಾಪಾರಕ್ಕಾಗಿ ದೇಶವು ತನ್ನ ಬಳಿ ಇಟ್ಟುಕೊಂಡಿರುವ “ವಿದೇಶಿ ಹಣದ ಬ್ಯಾಂಕ್ ಬ್ಯಾಲೆನ್ಸ್” ಇದಾಗಿದೆ.

    ವಿದೇಶಿ ವಿನಿಮಯ ಸಂಗ್ರಹದಲ್ಲಿ ಏನೇನಿರುತ್ತದೆ? (Components)
    ಭಾರತದ ಫೋರೆಕ್ಸ್ ರಿಸರ್ವ್ ಮುಖ್ಯವಾಗಿ ನಾಲ್ಕು ಅಂಶಗಳನ್ನು ಒಳಗೊಂಡಿದೆ:
    1. ವಿದೇಶಿ ಕರೆನ್ಸಿ ಆಸ್ತಿಗಳು (Foreign Currency Assets – FCA): ಅಮೆರಿಕದ ಡಾಲರ್ ($), ಯುರೋ, ಬ್ರಿಟಿಷ್ ಪೌಂಡ್ ಮತ್ತು ಜಪಾನಿನ ಯೆನ್ ರೂಪದಲ್ಲಿರುವ ಹಣ. ಇದು ಸಂಗ್ರಹದ ಬಹುದೊಡ್ಡ ಭಾಗವಾಗಿದೆ.
    2. ಚಿನ್ನದ ಮೀಸಲು (Gold Reserves): ಆರ್‌ಬಿಐ ತನ್ನ ಬಳಿ ಇಟ್ಟುಕೊಂಡಿರುವ ಬಂಗಾರ.
    3. ವಿಶೇಷ ಹಿಂಪಡೆಯುವಿಕೆ ಹಕ್ಕುಗಳು (SDR): ಇದು ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಸೃಷ್ಟಿಸಿರುವ ಒಂದು ರೀತಿಯ ಅಂತರರಾಷ್ಟ್ರೀಯ ಮೀಸಲು ಆಸ್ತಿ.
    4. ಐಎಂಎಫ್‌ನಲ್ಲಿನ ಮೀಸಲು ಸ್ಥಿತಿ (Reserve Position in IMF): ಭಾರತವು ಐಎಂಎಫ್‌ನಲ್ಲಿ ಇಟ್ಟಿರುವ ಹಣ.

    ಇದರ ಮಹತ್ವವೇನು? (Importance)
    ಆಮದು ಬಿಲ್ ಪಾವತಿ: ನಾವು ವಿದೇಶದಿಂದ ತೈಲ (Oil), ಎಲೆಕ್ಟ್ರಾನಿಕ್ಸ್ ಅಥವಾ ಶಸ್ತ್ರಾಸ್ತ್ರಗಳನ್ನು ಖರೀದಿಸಿದಾಗ ಪಾವತಿಯನ್ನು ಡಾಲರ್ ರೂಪದಲ್ಲೇ ಮಾಡಬೇಕಾಗುತ್ತದೆ. ಈ ಪಾವತಿಗೆ ಫೋರೆಕ್ಸ್ ರಿಸರ್ವ್ ಅಗತ್ಯ.
    ರೂಪಾಯಿ ಮೌಲ್ಯದ ಸ್ಥಿರತೆ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ರೂಪಾಯಿಯ ಮೌಲ್ಯ ಕುಸಿಯದಂತೆ ತಡೆಯಲು ಆರ್‌ಬಿಐ ಈ ಸಂಗ್ರಹವನ್ನು ಬಳಸುತ್ತದೆ.
    ಆರ್ಥಿಕ ಭದ್ರತೆ: ದೇಶಕ್ಕೆ ಆರ್ಥಿಕ ಸಂಕಷ್ಟ ಎದುರಾದಾಗ ಅಥವಾ ಜಾಗತಿಕ ಮಾರುಕಟ್ಟೆಯಲ್ಲಿ ಏರುಪೇರಾದಾಗ ಈ ಸಂಗ್ರಹವು “ರಕ್ಷಣಾ ಕವಚ”ವಾಗಿ ಕೆಲಸ ಮಾಡುತ್ತದೆ.

    ಪತ್ರಿಕೆ-III: ಸಾಮಾನ್ಯ ಅಧ್ಯಯನ-2

    ಪತ್ರಿಕೆ-IV: ಸಾಮಾನ್ಯ ಅಧ್ಯಯನ-3

    ಬಾಹ್ಯಾಕಾಶ ಕಾರ್ಯಕ್ರಮಗಳು ವಿಳಂಬ ಸಾಧ್ಯತೆ: ಸಂಸದೀಯ ಸಮಿತಿ
    ಸಂದರ್ಭ: ಬಿಡುಗಡೆಯಾದ ಅನುದಾನದ ಬಳಕೆ ಹಾಗೂ ಯೋಜನೆ ಅನುಷ್ಠಾನ ನಿರೀಕ್ಷಿತ ಮಟ್ಟದಲ್ಲಿ ಆಗದಿರುವ ಕಾರಣ, ಇಸ್ರೋದ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಕಾರ್ಯಕ್ರಮಗಳು ನಿಗದಿತ ಕಾಲಮಿತಿಯಲ್ಲಿ ಕೈಗೂಡುವುದಿಲ್ಲ ಎಂದು ಸಂಸದೀಯ ಸಮಿತಿಯೊಂದು ತನ್ನ ವರದಿಯಲ್ಲಿ ಕಳವಳ ವ್ಯಕ್ತಪಡಿಸಿದೆ.

    • ‘ಯೋಜನೆ ಅನುಷ್ಠಾನದಲ್ಲಿನ ಈ ವಿಳಂಬದಿಂದಾಗಿ ಉದ್ದೇಶಿತ ಬಾಹ್ಯಾಕಾಶ ಕಾರ್ಯಕ್ರಮಗಳು ಇಸ್ರೋಗೆ ಸವಾಲುಗಳಾಗಿ ಪರಿಣಮಿಸುವ ಸಾಧ್ಯತೆ ಇದೆ’ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತ ಸಂಸದೀಯ ಸ್ಥಾಯಿ ಸಮಿತಿ ಹೇಳಿದೆ.
    • ಚಂದ್ರಯಾನ-4, ಚಂದ್ರಯಾನ-5 ಹಾಗೂ ಶುಕ್ರ ಗ್ರಹ ಕಕ್ಷೆಗಾಮಿ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಬಿಡುಗಡೆಯಾದ ಅನುದಾನ, ಈ ವರೆಗೆ ಆಗಿರುವ ವೆಚ್ಚ. ಯೋಜನೆಗಾಗಿ ಸಾಧನಗಳ ಖರೀದಿ ಕುರಿತಂತೆ ಬಾಹ್ಯಾಕಾಶ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿ ಆಧರಿಸಿ, ಸಮಿತಿ ಈ ವರದಿ ಸಿದ್ಧಪಡಿಸಿದೆ.
    • ಈ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಬಳಸುವ ಗಗನನೌಕೆಯ ವಿನ್ಯಾಸದಲ್ಲಿ ಮಾಡಿರುವ ಬದಲಾವಣೆಗಳು, ಕಚ್ಚಾ ವಸ್ತುಗಳ ಖರೀದಿ ಮುಂದೂಡಿರುವುದು ಸೇರಿ ವಿವಿಧ ಕಾರಣಗಳಿಂದಾಗಿ ಅನುದಾನ ಬಳಕೆ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
    • 2027ರ ಅಕ್ಟೋಬರ್‌ನಲ್ಲಿ ಕಾರ್ಯಗತಗೊಳಿಸುವ ಉದ್ದೇಶದ ಚಂದ್ರಯಾನ-4, ₹2,104 ಕೋಟಿ ವೆಚ್ಚದ ಯೋಜನೆ 2025-26ನೇ ಸಾಲಿನ ಬಜೆಟ್‌ನಲ್ಲಿ ₹129 ಕೋಟಿ ಹಂಚಿಕೆಯಾಗಿತ್ತು. ಈ ಪೈಕಿ ಜನವರಿ 31ರ ವರೆಗೆ ಇಸ್ರೋ ₹34 ಕೋಟಿ ಮಾತ್ರ ಖರ್ಚು ಮಾಡಿದೆ ₹982 ಕೋಟಿ ವೆಚ್ಚದ ಚಂದ್ರಯಾನ-6 ಯೋಜನೆ ಪೈಕಿ ₹58 ಲಕ್ಷ, ₹29 5 ಕೋಟಿ ವೆಚ್ಚದ ಶುಕ್ರ ಗ್ರಹ ಕಾರ್ಯಕ್ರಮದಡಿ ₹5.12 ಕೋಟಿ ಖರ್ಚು ಮಾಡಿದೆ.

    1. ಚಂದ್ರಯಾನ-4 (LUPEX – Lunar Polar Exploration)
    ಇದು ಚಂದ್ರಯಾನ-3ರ ಮುಂದುವರಿದ ಭಾಗವಾಗಿದ್ದು, ಭಾರತ (ISRO) ಮತ್ತು ಜಪಾನ್ (JAXA) ಜಂಟಿಯಾಗಿ ಹಮ್ಮಿಕೊಂಡಿರುವ ಯೋಜನೆಯಾಗಿದೆ.
    ಉದ್ದೇಶ: ಚಂದ್ರನ ದಕ್ಷಿಣ ಧ್ರುವದಲ್ಲಿ ನೀರಿನ ಅಂಶ ಮತ್ತು ಮಂಜುಗಡ್ಡೆಯ ಪ್ರಮಾಣವನ್ನು ನಿಖರವಾಗಿ ಪತ್ತೆಹಚ್ಚುವುದು.
    ವಿಶೇಷತೆ: ಇದು ‘ಸ್ಯಾಂಪಲ್ ರಿಟರ್ನ್’ (Sample Return) ಮಿಷನ್ ಆಗಿರಲಿದ್ದು, ಚಂದ್ರನ ಮೇಲ್ಮೈಯಿಂದ ಮಣ್ಣು ಮತ್ತು ಬಂಡೆಗಳ ಮಾದರಿಯನ್ನು ಸಂಗ್ರಹಿಸಿ ಮತ್ತೆ ಭೂಮಿಗೆ ತರುವ ಗುರಿ ಹೊಂದಿದೆ.
    ಉಡಾವಣೆ: ಸರಿಸುಮಾರು 2028-2029ರ ಅವಧಿಯಲ್ಲಿ ನಿರೀಕ್ಷಿಸಲಾಗಿದೆ.

    2. ಚಂದ್ರಯಾನ-5 (Lunar Night Survival)
    ಚಂದ್ರಯಾನ-4ರ ನಂತರದ ಈ ಯೋಜನೆಯು ಚಂದ್ರನ ಮೇಲಿನ ದೀರ್ಘಾವಧಿಯ ಸಂಶೋಧನೆಗೆ ಒತ್ತು ನೀಡುತ್ತದೆ.
    ಉದ್ದೇಶ: ಚಂದ್ರನ ಮೇಲೆ ಸತತ 14 ದಿನಗಳ ಕಾಲ ಇರುವ ಕತ್ತಲೆಯ ಅವಧಿಯಲ್ಲಿ (Lunar Night) ತಾಪಮಾನವು -200°C ಗಿಂತ ಕಡಿಮೆಯಿರುತ್ತದೆ. ಈ ಭೀಕರ ಚಳಿಯಲ್ಲಿಯೂ ಉಪಕರಣಗಳು ಕಾರ್ಯನಿರ್ವಹಿಸುವಂತೆ ಮಾಡುವ ತಂತ್ರಜ್ಞಾನವನ್ನು ಇದು ಪರೀಕ್ಷಿಸಲಿದೆ.
    ಗುರಿ: ಭವಿಷ್ಯದಲ್ಲಿ ಚಂದ್ರನ ಮೇಲೆ ಮಾನವ ನೆಲೆಗಳನ್ನು ಸ್ಥಾಪಿಸಲು ಬೇಕಾದ ಮೂಲಸೌಕರ್ಯಗಳ ಬಗ್ಗೆ ಸಂಶೋಧನೆ ನಡೆಸುವುದು.

    3. ಶುಕ್ರಯಾನ-1 (Venus Orbiter Mission – Shukrayaan)
    ಮಂಗಳಯಾನದ ಯಶಸ್ಸಿನ ನಂತರ ಇಸ್ರೋ ಈಗ ‘ಶುಕ್ರ’ ಗ್ರಹದತ್ತ ಮುಖ ಮಾಡಿದೆ.
    ಉದ್ದೇಶ: ಶುಕ್ರ ಗ್ರಹದ ಮೇಲ್ಮೈ ಮತ್ತು ಅದರ ದಟ್ಟವಾದ ವಾತಾವರಣವನ್ನು ಅಧ್ಯಯನ ಮಾಡುವುದು. ಶುಕ್ರ ಗ್ರಹದಲ್ಲಿ ಸಲ್ಫ್ಯೂರಿಕ್ ಆಮ್ಲದ ಮೋಡಗಳಿದ್ದು, ಅಲ್ಲಿನ ‘ಗ್ರೀನ್‌ಹೌಸ್ ಪರಿಣಾಮ’ (Greenhouse Effect) ಭೂಮಿಗಿಂತ ವಿಪರೀತವಾಗಿದೆ, ಇದನ್ನು ಅಧ್ಯಯನ ಮಾಡುವುದು ಇದರ ಗುರಿ.
    ವೈಶಿಷ್ಟ್ಯ: ಗ್ರಹದ ಮೇಲ್ಮೈಯನ್ನು ಸ್ಕ್ಯಾನ್ ಮಾಡಲು ‘ಸಿಂಥೆಟಿಕ್ ಅಪರ್ಚರ್ ರಾಡಾರ್’ (SAR) ಅನ್ನು ಬಳಸಲಾಗುತ್ತದೆ.
    ಪ್ರಾಮುಖ್ಯತೆ: ಭೂಮಿ ಮತ್ತು ಶುಕ್ರ ಗ್ರಹಗಳು ಗಾತ್ರದಲ್ಲಿ ಸಮನಾಗಿದ್ದರೂ, ಜೀವನ ವಿಕಾಸದ ಹಾದಿ ಏಕೆ ಬೇರೆಯಾಯಿತು ಎಂಬ ರಹಸ್ಯವನ್ನು ಇದು ಭೇದಿಸಬಹುದು.

    ಪ್ರಮುಖ ಅಂಶಗಳು (Key Highlights):

    ಯೋಜನೆಲಕ್ಷ್ಯಪ್ರಮುಖ ತಂತ್ರಜ್ಞಾನ
    ಚಂದ್ರಯಾನ-4ಮಾದರಿ ಸಂಗ್ರಹ (Sample Return)ಡಾಕಿಂಗ್ ಮತ್ತು ಮರು-ಪ್ರವೇಶ ತಂತ್ರಜ್ಞಾನ
    ಚಂದ್ರಯಾನ-5ದೀರ್ಘಾವಧಿ ಉಳಿವಿಕೆರೇಡಿಯೋ ಐಸೋಟೋಪ್ ಹೀಟರ್‌ಗಳು
    ಶುಕ್ರಯಾನಶುಕ್ರ ಗ್ರಹದ ಕಕ್ಷೆರಾಡಾರ್ ಇಮೇಜಿಂಗ್ ಮತ್ತು ವಾತಾವರಣದ ವಿಶ್ಲೇಷಣೆ

      ಇತ್ತೀಚಿನ ವರದಿಗಳ ಪ್ರಕಾರ, ಇಸ್ರೋ ಈ ಯೋಜನೆಗಳಿಗಾಗಿ ಹೊಸ ತಲೆಮಾರಿನ ಉಡಾವಣಾ ವಾಹನವಾದ NGLV (Next Generation Launch Vehicle) ಅಥವಾ ‘ಸೋಮನಾಥ್’ ರಾಕೆಟ್ ಅನ್ನು ಬಳಸಲು ಸಿದ್ಧತೆ ನಡೆಸುತ್ತಿದೆ.

      ಭಾರತದ ಚಂದ್ರಯಾನ ಯೋಜನೆಗಳ ಕಾಲಾನುಕ್ರಮ ಮತ್ತು ವೈಶಿಷ್ಟ್ಯಗಳು:

      ಮಿಷನ್ (ಯೋಜನೆ)ವರ್ಷಪ್ರಮುಖ ಉದ್ದೇಶ ಮತ್ತು ಸಾಧನೆಗಳುಪ್ರಸ್ತುತ ಸ್ಥಿತಿ
      ಚಂದ್ರಯಾನ-12008ಚಂದ್ರನ ಕಕ್ಷೆಗಾಮಿ (Orbiter). ಚಂದ್ರನ ಮೇಲೆ ನೀರಿನ ಅಣುಗಳ ($H_2O$) ಇರುವಿಕೆಯನ್ನು ಮೊದಲ ಬಾರಿಗೆ ಜಗತ್ತಿಗೆ ದೃಢಪಡಿಸಿತು.ಯಶಸ್ವಿ
      ಚಂದ್ರಯಾನ-22019ಆರ್ಬಿಟರ್, ಲ್ಯಾಂಡರ್ (ವಿಕ್ರಮ್) ಮತ್ತು ರೋವರ್ (ಪ್ರಜ್ಞಾನ್). ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ಪ್ರಯತ್ನ. ತಾಂತ್ರಿಕ ಕಾರಣದಿಂದ ಲ್ಯಾಂಡರ್ ಪತನವಾಯಿತು.ಪಾರ್ಶ್ವ ಯಶಸ್ವಿ (ಆರ್ಬಿಟರ್ ಇಂದಿಗೂ ಕಾರ್ಯನಿರ್ವಹಿಸುತ್ತಿದೆ)
      ಚಂದ್ರಯಾನ-32023ಚಂದ್ರನ ದಕ್ಷಿಣ ಧ್ರುವದ ಸಮೀಪ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆ. ಮಣ್ಣಿನ ರಾಸಾಯನಿಕ ವಿಶ್ಲೇಷಣೆ ನಡೆಸಿತು.ಪೂರ್ಣ ಯಶಸ್ವಿ
      ಚಂದ್ರಯಾನ-42028*‘ಸ್ಯಾಂಪಲ್ ರಿಟರ್ನ್’ (Sample Return): ಚಂದ್ರನ ಮೇಲಿನ ಮಣ್ಣು ಮತ್ತು ಬಂಡೆಗಳ ಮಾದರಿಯನ್ನು ಸಂಗ್ರಹಿಸಿ ಮತ್ತೆ ಭೂಮಿಗೆ ತರುವ ಅತ್ಯಂತ ಸಂಕೀರ್ಣ ಯೋಜನೆ.ಅನುಮೋದನೆ ನೀಡಲಾಗಿದೆ
      ಚಂದ್ರಯಾನ-52030+LUPEX ಯೋಜನೆ: ಜಪಾನ್‌ನ ‘ಜಾಕ್ಸಾ’ (JAXA) ಜೊತೆಗಿನ ಜಂಟಿ ಯೋಜನೆ. ಚಂದ್ರನ ಕತ್ತಲೆಯ ಭಾಗದಲ್ಲಿರುವ ಮಂಜುಗಡ್ಡೆಯ ಪ್ರಮಾಣವನ್ನು ಅಳೆಯುವುದು ಇದರ ಗುರಿ.ಯೋಜನಾ ಹಂತದಲ್ಲಿದೆ

      ಪತ್ರಿಕೆ-V: ಸಾಮಾನ್ಯ ಅಧ್ಯಯನ-4