Sat. Feb 7th, 2026

Kannada

ಫೆ.1ಕ್ಕೆ ಕೇಂದ್ರ ಬಜೆಟ್

ಸಂದರ್ಭ: ಸಂಸತ್ತಿನ ಬಜೆಟ್ ಅಧಿವೇಶನವು ಜನವರಿ 28ರಂದು ಆರಂಭವಾಗಿ ಏಪ್ರಿಲ್ 2ರಂದು ಕೊನೆಗೊಳ್ಳಲಿದೆ. ಫೆಬ್ರುವರಿ 1ರಂದು ಬಜೆಟ್ ಮಂಡನೆ ಆಗಲಿದೆ. ವಾಡಿಕೆಯಂತೆ, ರಾಷ್ಟ್ರಪತಿ ಬ್ರೌಪದಿ ಮುರ್ಮು ಅವರು 28ರಂದು ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರ ಜಂಟಿ ಸಭೆ ಉದ್ದೇಶಿಸಿ ಮಾಡುವ ಭಾಷಣದೊಂದಿಗೆ ಅಧಿವೇಶನ ಆರಂಭವಾಗುತ್ತದೆ.
• ‘ದೌಪದಿ ಮುರ್ಮು ಅವರು ಬಜೆಟ್ ಅಧಿವೇಶನಕ್ಕಾಗಿ ಸಂಸತ್ತಿನ ಎರಡೂ ಸದನಗಳನ್ನು ಕರೆಯಲು ಅನುಮೋದನೆ ನೀಡಿದ್ದಾರೆ’ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ. ಅಧಿವೇಶನದ ಮೊದಲ ಹಂತವು ಜನವರಿ 28ರಿಂದ ಫೆಬ್ರುವರಿ 13ರವರೆಗೆ, ಎರಡನೇ ಹಂತವು ಮಾರ್ಚ್ 9ರಿಂದ ಏಪ್ರಿಲ್ 2ರವರೆಗೆ ನಡೆಯಲಿದೆ.
ಸಾಮಾನ್ಯವಾಗಿ ಬಜೆಟ್ ಅನ್ನು ಫೆಬ್ರುವರಿ 1ರಂದು ಮಂಡಿಸಲಾಗುತ್ತದೆ.

ಬಜೆಟ್‌

ಭಾರತದ ಸಂವಿಧಾನದ ವಿಧಿ 112ರ ಅಡಿಯಲ್ಲಿ ಇದನ್ನು ‘ವಾರ್ಷಿಕ ಹಣಕಾಸು ವರದಿ’ (Annual Financial Statement) ಎಂದು ಕರೆಯಲಾಗುತ್ತದೆ.

ಬಜೆಟ್ ಎಂದರೆ ಸರಳವಾಗಿ ಹೇಳುವುದಾದರೆ, ಮುಂದಿನ ಒಂದು ವರ್ಷದ ಸರ್ಕಾರದ ಆದಾಯ (Income) ಮತ್ತು ವೆಚ್ಚದ (Expenditure) ಅಂದಾಜು ಪಟ್ಟಿ.

📑 ಬಜೆಟ್‌ನ ಎರಡು ಮುಖ್ಯ ಭಾಗಗಳು
ಬಜೆಟ್ ಅನ್ನು ಎರಡು ಪ್ರಮುಖ ವಿಭಾಗಗಳಾಗಿ ವಿಂಗಡಿಸಬಹುದು:

ಭಾಗವಿವರಣೆಒಳಗೊಂಡಿರುವ ಅಂಶಗಳು
1. ಕಂದಾಯ ಬಜೆಟ್ (Revenue Budget)ಸರ್ಕಾರದ ದೈನಂದಿನ ಚಟುವಟಿಕೆಗಳಿಗೆ ಸಂಬಂಧಿಸಿದ್ದು. ಇದರಿಂದ ಯಾವುದೇ ಆಸ್ತಿ ಸೃಷ್ಟಿಯಾಗುವುದಿಲ್ಲ.ಆದಾಯ: ತೆರಿಗೆಗಳು (GST, Income Tax).
ವೆಚ್ಚ: ಸಂಬಳ, ಪೆನ್ಷನ್, ಸಬ್ಸಿಡಿ, ಸಾಲದ ಬಡ್ಡಿ.
2. ಬಂಡವಾಳ ಬಜೆಟ್ (Capital Budget)ದೀರ್ಘಾವಧಿಯ ಹೂಡಿಕೆ ಅಥವಾ ಸಾಲ ತೀರಿಸುವುದಕ್ಕೆ ಸಂಬಂಧಿಸಿದ್ದು. ಇದು ಆಸ್ತಿಗಳನ್ನು ಸೃಷ್ಟಿಸುತ್ತದೆ.ಆದಾಯ: ಸಾಲ ಪಡೆಯುವುದು, ಸಾರ್ವಜನಿಕ ಉದ್ಯಮಗಳ ಮಾರಾಟ (Disinvestment).
ವೆಚ್ಚ: ರಸ್ತೆ, ರೈಲ್ವೆ, ಆಸ್ಪತ್ರೆಗಳ ನಿರ್ಮಾಣ.

💰 ಸರ್ಕಾರದ ಹಣ ಎಲ್ಲಿಂದ ಬರುತ್ತದೆ ಮತ್ತು ಎಲ್ಲಿಗೆ ಹೋಗುತ್ತದೆ?
ಬಜೆಟ್ ಅನ್ನು ಅರ್ಥಮಾಡಿಕೊಳ್ಳಲು ಈ ಕೆಳಗಿನ ‘ಒಂದು ರೂಪಾಯಿ’ ಲೆಕ್ಕಾಚಾರ ಬಹಳ ಸುಲಭ:

ಹಣ ಎಲ್ಲಿಂದ ಬರುತ್ತದೆ? (Rupee Comes From)

ಸಾಲ ಮತ್ತು ಇತರ ಹೊಣೆಗಾರಿಕೆಗಳು: ಸುಮಾರು 27% (ಅತಿ ದೊಡ್ಡ ಮೂಲ)

ಜಿಎಸ್ಟಿ (GST): 18%

ಆದಾಯ ತೆರಿಗೆ (Income Tax): 19%

ಕಾರ್ಪೊರೇಟ್ ತೆರಿಗೆ: 17%

ಹಣ ಎಲ್ಲಿಗೆ ಹೋಗುತ್ತದೆ? (Rupee Goes To)

ಸಾಲದ ಮೇಲಿನ ಬಡ್ಡಿ ಪಾವತಿ: 20% (ಅತಿ ದೊಡ್ಡ ವೆಚ್ಚ)

ರಾಜ್ಯಗಳಿಗೆ ತೆರಿಗೆ ಪಾಲು: 20%

ಕೇಂದ್ರ ವಲಯದ ಯೋಜನೆಗಳು: 16%

ರಕ್ಷಣೆ (Defence): 8%

🗝️ ಬಜೆಟ್‌ನ ಪ್ರಮುಖ ಪದಗಳು (Key Terms)
ಹಣಕಾಸು ಕೊರತೆ (Fiscal Deficit): ಸರ್ಕಾರದ ಒಟ್ಟು ಆದಾಯಕ್ಕಿಂತ ವೆಚ್ಚ ಹೆಚ್ಚಾದಾಗ ಉಂಟಾಗುವ ವ್ಯತ್ಯಾಸ. ಇದನ್ನು ತುಂಬಲು ಸರ್ಕಾರ ಸಾಲ ಮಾಡುತ್ತದೆ.

ನೇರ ತೆರಿಗೆ (Direct Tax): ವ್ಯಕ್ತಿ ಅಥವಾ ಸಂಸ್ಥೆಗಳು ನೇರವಾಗಿ ಸರ್ಕಾರಕ್ಕೆ ಕಟ್ಟುವ ತೆರಿಗೆ (ಉದಾ: Income Tax).

ಪರೋಕ್ಷ ತೆರಿಗೆ (Indirect Tax): ಸರಕು ಮತ್ತು ಸೇವೆಗಳ ಮೇಲೆ ವಿಧಿಸುವ ತೆರಿಗೆ (ಉದಾ: GST).

ಹಣದುಬ್ಬರ (Inflation): ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗುವ ಪ್ರಕ್ರಿಯೆ. ಬಜೆಟ್‌ನ ನಿರ್ಧಾರಗಳು ಇದರ ಮೇಲೆ ಪರಿಣಾಮ ಬೀರುತ್ತವೆ.

🗓️ ಬಜೆಟ್ ಪ್ರಕ್ರಿಯೆ
ಯಾರು ಮಂಡಿಸುತ್ತಾರೆ?: ಕೇಂದ್ರ ಹಣಕಾಸು ಸಚಿವರು (ಪ್ರಸ್ತುತ ನಿರ್ಮಲಾ ಸೀತಾರಾಮನ್).

ಯಾವಾಗ?: ಪ್ರತಿ ವರ್ಷ ಫೆಬ್ರವರಿ 1 ರಂದು.

ಜಾರಿ: ಏಪ್ರಿಲ್ 1 ರಿಂದ ಮಾರ್ಚ್ 31 ರವರೆಗೆ (ಹಣಕಾಸು ವರ್ಷ).

ಭಾರತದ ಮೇಲೆ ಶೇ 500 ಸುಂಕ ಮಸೂದೆಗೆ ಅಸ್ತು

ಸಂದರ್ಭ: ರಷ್ಯಾದಿಂದ ತೈಲ ಖರೀಸುವ ದೇಶಗಳ ಮೇಲೆ ಶೇ 500ರಷ್ಟು ಸುಂಕ ವಿಧಿಸಲು ಅವಕಾಶ ನೀಡುವ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಗೆ ಸೂಚಿಸಿದ್ದಾರೆ.
• ರಷ್ಯಾ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ಹೇರುವ ಈ ಮಸೂದೆಯು ರಷ್ಯಾದಿಂದ ಕಡಿಮೆ ಬೆಲೆಗೆ ಕಚ್ಚಾತೈಲ ಖರೀದಿಸುತ್ತಿರುವ ಭಾರತ, ಚೀನಾ ಮತ್ತು ಇತರ ದೇಶಗಳ ಮೇಲೆ ಅತ್ಯಧಿಕ ಸುಂಕ ವಿಧಿಸಲು ಶ್ವೇತಭವನಕ್ಕೆ ಅವಕಾಶ ನೀಡುತ್ತದೆ.
• ಈ ಕುರಿತು ಮಾಹಿತಿ ನೀಡಿದ ಅಮೆರಿಕದ ಸೆನೆಟರ್ ಲಿಂಡ್ರೆ ಗ್ರಹಾಂ, ‘ಭಾರತ, ಚೀನಾ ಮತ್ತು ಬ್ರೆಜಿಲ್ನಂತಹ ದೇಶಗಳು ರಷ್ಯಾದಿಂದ ಅಗ್ಗದ ಬೆಲೆಗೆ ತೈಲ ಖರೀದಿಸುತ್ತಿವೆ. ಅದನ್ನು ತಡೆಯುವುದಕ್ಕೆ ಈ ಮಸೂದೆಯು ಶ್ವೇತಭವನಕ್ಕೆ ಅಪರಿಮಿತ ಅಧಿಕಾರ ನೀಡುತ್ತದೆ’ ಎಂದರು. ‘ರಷ್ಯಾ ವಿರುದ್ಧದ ದ್ವಿಪಕ್ಷೀಯ ನಿರ್ಬಂಧ ಮಸೂದೆ ಬಗ್ಗೆ ನಾನು, ಸೆನೆಟರ್ ಬಂದರಿಂದಾಲ್ ಮತ್ತು ಇತರರ ಜತೆಗೆ ಹಲವು ತಿಂಗಳು ಕೆಲಸ ಮಾಡಿದ್ದೇನೆ. ಅಧ್ಯಕ್ಷ ಟ್ರಂಪ್ ಅವರ ಜತೆ ಈ ಕುರಿತು ಇಂದು ಮಹತ್ವದ ಸಭೆ ನಡೆಯಿತು. ಅವರು ಈ ಮಸೂದೆಗೆ ಹಸಿರು ನಿಶಾನೆ ತೋರಿದ್ದಾರೆ’ ಎಂದು ಗ್ರಹಾಂ ತಿಳಿಸಿದರು.
• ‘ಇದು ಸಂದರ್ಭೋಚಿತ ನಿರ್ಧಾರ. ಉಕ್ರೇನ್-ರಷ್ಯಾ ಯುದ್ಧ ನಿಲ್ಲಿಸಲು ಅಮೆರಿಕ ಸರ್ವ ಪ್ರಯತ್ನ ಮಾಡುತ್ತಿದೆ. ಆದರೆ, ರಷ್ಯಾ ಅಧ್ಯಕ್ಷ ಬ್ಲಾದಿಮಿರ್ ಪುಟಿನ್ ಅವರು ಮುಗ್ಧರ ಹತ್ಯೆಯನ್ನು ಮುಂದುವರಿಸಿ-ದ್ದಾರೆ. ರಷ್ಯಾದಿಂದ ಕಡಿಮೆ ಬೆಲೆಗೆ ತೈಲ ಖರೀದಿಸುವ ಮೂಲಕ ಕೆಲ ದೇಶಗಳು ಯುದ್ಧವನ್ನು ಉತ್ತೇಜಿಸುತ್ತಿವೆ’ ಎಂದಿದ್ದಾರೆ.
• ಉಕ್ರೇನ್ನಲ್ಲಿ ಪುಟಿನ್ ಹರಿಸುತ್ತಿರುವ ರಕ್ತಪಾತಕ್ಕೆ ಹಣಕಾಸು ಒದಗಿಸುತ್ತಿವೆ. ಅದನ್ನು ತಡೆಯಲು ಮತ್ತು ತೈಲ ಖರೀದಿ ದೇಶಗಳನ್ನು ಶಿಕ್ಷಿಸಲು ಈ ಮಸೂದೆಯು ಟ್ರಂಪ್ ಅವರಿಗೆ ಅಧಿಕಾರ ನೀಡುತ್ತದೆ’ ಎಂದೂ ಹೇಳಿದ್ದಾರೆ.
• ಮುಂದಿನ ವಾರದ ಆರಂಭದಲ್ಲಿ ಈ ಮಸೂದೆಗೆ ಎರಡೂ ಪಕ್ಷಗಳ ಸದಸ್ಯರು ಬಹುಮತದಿಂದ ಅಂಗೀಕಾರ ನೀಡುತ್ತಾರೆ ಎಂಬ ನಿರೀಕ್ಷೆಯಿದೆ ಎಂದು ಗ್ರಹಾಂಭರವಸೆ ವ್ಯಕ್ತಪಡಿಸಿದರು.
• ಗ್ರಹಾಂ ಮತ್ತು ಬ್ಲೂಮೆಂಥಾಲ್ ಅವರು ಈ ಮಸೂದೆಯನ್ನು ಕಳೆದ ವರ್ಷ ಪರಿಚಯಿಸಿದ್ದರು. ರಷ್ಯಾದಿಂದ ತೈಲ ಖರೀದಿಸುವ ಮತ್ತು ಅದನ್ನು ಮರು ಮಾರಾಟ ಮಾಡುವ ದೇಶಗಳ ಮೇಲೆ ಶೇ 500ರಷ್ಟು ಸುಂಕ ವಿಧಿಸುವುದನ್ನು ಅದರಲ್ಲಿ ಪ್ರಸ್ತಾಪಿಸಲಾಗಿದೆ. ಇದನ್ನು ಸೆನೆಟ್ನ ವಿದೇಶಾಂಗ ವ್ಯವಹಾರಗಳ ಸಮಿತಿಯ ಸದಸ್ಯರು ಸರ್ವಾನುಮತದಿಂದ ಬೆಂಬಲಿಸಿದ್ದರು.
• ಭಾರತದ ಸರಕುಗಳ ಮೇಲೆ ಶೇ 50ರಷ್ಟು ಸುಂಕವನ್ನು ಈಗಾಗಲೇ ವಿಧಿಸಿದ್ದಾರೆ. ಇದರಲ್ಲಿ ರಷ್ಯಾದಿಂದ ಇಂಧನ ಖರೀದಿಸುತ್ತಿರುವುದಕ್ಕೆ ಶೇ 25ರಷ್ಟು ಸುಂಕವೂ ಸೇರಿದೆ.

Source: Prajavani

ಜಯಮಾಲಾಗೆ ಡಾ.ರಾಜ್, ಸತ್ಯುಗೆ ಕಣಗಾಲ್ ಪ್ರಶಸ್ತಿ

ಸಂದರ್ಭ: ರಾಜ್ಯ ಸರ್ಕಾರ ಚಲನಚಿತ್ರ ಕ್ಷೇತ್ರದಲ್ಲಿನ 2020ನೇ ಹಾಗೂ 2021ನೇ ಸಾಲಿನ ಜೀವಮಾನ ಸಾಧನೆ ಪ್ರಶಸ್ತಿಗಳನ್ನು ಘೋಷಿಸಿದೆ.
• 2020 ಸಾಲಿನ ಡಾ.ರಾಜಕುಮಾರ್ ಪ್ರಶಸ್ತಿ’ಗೆ ನಟಿ ಜಯಮಾಲಾ, ‘ಪುಟ್ಟಣ್ಣ ಕಣಗಾಲ್ ಪ್ರಶಸ್ತಿ’ಗೆ ನಿರ್ದೇಶಕ ಎಂ.ಎಸ್. ಸತ್ಯು (ಇವರ ‘ಗರಂ ಹವಾ’ ಚಿತ್ರವು ಭಾರತೀಯ ಸಿನೆಮಾ ಇತಿಹಾಸದಲ್ಲಿ ಮೈಲಿಗಲ್ಲಾಗಿದೆ), ‘ಡಾ.ವಿಷ್ಣುವರ್ಧನ್ ಪ್ರಶಸ್ತಿ’ಗೆ ಸ್ಥಿರ ಛಾಯಾಗ್ರಾಹಕ ‘ಪ್ರಗತಿ’ ಅಶ್ವತ್ಥನಾರಾಯಣ ಅವರನ್ನು ಆಯ್ಕೆ ಮಾಡಲಾಗಿದೆ.
• 2021 ಸಾಲಿನ ‘ಡಾ.ರಾಜಕುಮಾರ್ ಪ್ರಶಸ್ತಿ’ಗೆ ನಿರ್ಮಾಪಕ, ಗೋವಿಂದು, ‘ಪುಟ್ಟಣ್ಣ ಕಣಗಾಲ್ ಪ್ರಶಸ್ತಿ’ಗೆ ನಿರ್ದೇಶಕ ಕೆ. ಶಿವರುದ್ರಯ್ಯ, ‘ಡಾ.ವಿಷ್ಣುವರ್ಧನ್ ಪ್ರಶಸ್ತಿ’ಗೆ ನಟ ನಿರ್ಮಾಪಕ ಎಂ.ಕೆ. ಸುಂದರ್ ರಾಜ್ ಅವರನ್ನು ಆಯ್ಕೆ ಮಾಡಲಾಗಿದೆ.
• ಈ ಮೂರೂ ಪ್ರಶಸ್ತಿಗಳು ತಲಾ ₹5 ಲಕ್ಷ ನಗದು ಮತ್ತು 50 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿದೆ.

ಕರ್ನಾಟಕ ರಾಜ್ಯ ಚಲನಚಿತ್ರ ಗೌರವ ಪ್ರಶಸ್ತಿಗಳ ವಿವರ:

ಪ್ರಶಸ್ತಿಯ ಹೆಸರುಯಾರ ಹೆಸರಿನಲ್ಲಿ ನೀಡಲಾಗುತ್ತದೆ?ಯಾವ ಸಾಧನೆಗಾಗಿ ನೀಡಲಾಗುತ್ತದೆ?ಪ್ರಶಸ್ತಿಯ ಸ್ವರೂಪ
ಡಾ. ರಾಜಕುಮಾರ್ ಪ್ರಶಸ್ತಿನಟಸಾರ್ವಭೌಮ ಡಾ. ರಾಜಕುಮಾರ್ಚಿತ್ರರಂಗಕ್ಕೆ ಸಲ್ಲಿಸಿದ ಒಟ್ಟಾರೆ ಜೀವಮಾನದ ಶ್ರೇಷ್ಠ ಸಾಧನೆಗಾಗಿ (ಸಾಮಾನ್ಯವಾಗಿ ನಟರು ಅಥವಾ ನಿರ್ಮಾಪಕರಿಗೆ).₹5 ಲಕ್ಷ ನಗದು + 50 ಗ್ರಾಂ ಚಿನ್ನದ ಪದಕ
ಪುಟ್ಟಣ್ಣ ಕಣಗಾಲ್ ಪ್ರಶಸ್ತಿಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ಚಲನಚಿತ್ರ ನಿರ್ದೇಶನ ಕ್ಷೇತ್ರದಲ್ಲಿ ಅಪ್ರತಿಮ ಕೊಡುಗೆ ನೀಡಿದ ಶ್ರೇಷ್ಠ ನಿರ್ದೇಶಕರಿಗೆ.₹5 ಲಕ್ಷ ನಗದು + 50 ಗ್ರಾಂ ಚಿನ್ನದ ಪದಕ
ಡಾ. ವಿಷ್ಣುವರ್ಧನ್ ಪ್ರಶಸ್ತಿಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ನಟನೆ, ತಾಂತ್ರಿಕತೆ ಅಥವಾ ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಅಸಾಧಾರಣ ಸೇವೆ ಸಲ್ಲಿಸಿದವರಿಗೆ.₹5 ಲಕ್ಷ ನಗದು + 50 ಗ್ರಾಂ ಚಿನ್ನದ ಪದಕ

ಆಯ್ಕೆ ಪ್ರಕ್ರಿಯೆ: ರಾಜ್ಯ ಸರ್ಕಾರವು ನೇಮಿಸುವ ತಜ್ಞರ ಸಮಿತಿಯು ಅರ್ಹ ಸಾಧಕರನ್ನು ಆಯ್ಕೆ ಮಾಡುತ್ತದೆ.

ಗೌರವ: ಈ ಪ್ರಶಸ್ತಿಗಳನ್ನು ಕರ್ನಾಟಕದ ‘ಚಲನಚಿತ್ರ ರಂಗದ ಪದ್ಮ ಪ್ರಶಸ್ತಿಗಳು’ ಎಂದು ಪರಿಗಣಿಸಲಾಗುತ್ತದೆ.

Source: Prajavani

11 ಮಸೂದೆಗಳಿಗೆ ರಾಜ್ಯಪಾಲರ ಅಸ್ತು

ಸಂದರ್ಭ:ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯ ಪ್ರಮಾಣ ಮಾರ್ಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾ ರಸು ಮಾಡಲು, ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿ ಶಿಷ್ಟ ಬುಡಕಟ್ಟುಗಳ ಆಯೋಗಕ್ಕೆ ಅಧಿಕಾರ ನೀಡುವ ತಿದ್ದುಪಡಿ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.
• ಸರ್ಕಾರದಿಂದ ಹೊಸ ದತ್ತಾಂಶ ಅಥವಾ ಮಾಹಿತಿ ಸ್ವೀಕರಿಸಿದ ಬಳಿಕ, ಪರಿಶಿಷ್ಟ ಜಾತಿಯ ವಿವಿಧ ಪ್ರವರ್ಗಗಳಿಗೆ ಒಳ ಮೀಸಲಾತಿ ಹಂಚಿಕೆ ಪ್ರಮಾಣದಲ್ಲಿ ಬದಲಾವಣೆ ಮಾಡಿ ಎಂದು ಆಯೋಗವು ಶಿಫಾರಸು ಮಾಡಬಹುದಾಗಿದೆ.
• ಇತರ ಮಸೂದೆಗಳು: ಕರ್ನಾಟಕ ಬಾಡಿಗೆ ತಿದ್ದುಪಡಿ ಮಸೂದೆ, ಬಯಲುಸೀಮೆ ಪ್ರದೇಶಾಭಿ-ವೃದ್ಧಿ ಮಂಡಳಿ ತಿದ್ದುಪಡಿ ಮಸೂದೆ. ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ತಿದ್ದುಪಡಿ ಮಸೂದೆ, ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ತಿದ್ದುಪಡಿ ಮಸೂದೆ, ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ತಿದ್ದುಪಡಿ ಮಸೂದೆ.
• ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ತಿದ್ದುಪಡಿ ಮಸೂದೆ, ಕರ್ನಾಟಕ ಭೂ ಕಂದಾಯ 2ನೇ ತಿದ್ದುಪಡಿ ಮಸೂದೆ, ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮಸೂದೆ, ಕರ್ನಾಟಕ ವಿಶ್ವವಿ-ದ್ಯಾಲಯ ಎರಡನೇ ತಿದ್ದುಪಡಿ ಮಸೂದೆ, ಚಂದ್ರಗುತ್ತಿ ಶ್ರೀರೇಣುಕಾಂಬ ಕ್ಷೇತ್ರ ಅಭಿವೃದ್ಧಿಪ್ರಾಧಿಕಾರ.
• ಡಿಸಿಎಂಗೆ ಮಸೂದೆ: ರಾಜ್ಯಪಾಲರು ಹಿಂತಿರುಗಿಸಿದ್ದ ಎರಡು ಮಸೂದೆಗಳ ಪೈಕಿ ‘ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಮಸೂದೆ’ಯನ್ನು ಉಪ ಮುಖ್ಯಮಂತ್ರಿಯವರಿಗೆ ಕಳುಹಿಸಲಾಗಿದೆ. ‘ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ತಿದ್ದುಪಡಿ ಮಸೂದೆ’ಯನ್ನು ಹೆಚ್ಚಿನ ವಿವರಣೆ ಪಡೆಯಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಕಳುಹಿಸಲಾಗಿದೆ.

ಕರ್ನಾಟಕ ಸರ್ಕಾರದ ಇತ್ತೀಚಿನ ಪ್ರಮುಖ ಮಸೂದೆಗಳು ಮತ್ತು ಅವುಗಳ ಪ್ರಭಾವ
ಈ ಮಸೂದೆಗಳು ಕೇವಲ ಆಡಳಿತಕ್ಕೆ ಸೀಮಿತವಾಗದೆ, ಸಾಮಾಜಿಕ ನ್ಯಾಯ, ಸಾರಿಗೆ ಮತ್ತು ಸಂಸ್ಕೃತಿಯ ರಕ್ಷಣೆಯ ಮೇಲೆ ಹೆಚ್ಚಿನ ಗಮನಹರಿಸಿವೆ.’

ಮಸೂದೆಯ ಹೆಸರುಮುಖ್ಯ ಉದ್ದೇಶನಿರೀಕ್ಷಿತ ಪರಿಣಾಮ
ಪರಿಶಿಷ್ಟ ಜಾತಿ/ಬುಡಕಟ್ಟುಗಳ ಆಯೋಗ ತಿದ್ದುಪಡಿ ಮಸೂದೆಹೊಸ ದತ್ತಾಂಶ ಆಧರಿಸಿ ಒಳ ಮೀಸಲಾತಿ ಪ್ರಮಾಣ ಬದಲಾಯಿಸಲು ಅಧಿಕಾರ ನೀಡುವುದು.ವಿವಿಧ ಪ್ರವರ್ಗಗಳಿಗೆ ನ್ಯಾಯಸಮ್ಮತ ಮೀಸಲಾತಿ ಹಂಚಿಕೆ ಸಾಧ್ಯವಾಗಲಿದೆ.
ಕರ್ನಾಟಕ ಬಾಡಿಗೆ ತಿದ್ದುಪಡಿ ಮಸೂದೆಹಳೆಯ ಬಾಡಿಗೆ ಕಾನೂನುಗಳಲ್ಲಿ ಕಾಲಕ್ಕೆ ತಕ್ಕಂತೆ ಬದಲಾವಣೆ ತರುವುದು.ಬಾಡಿಗೆದಾರರು ಮತ್ತು ಮಾಲೀಕರ ನಡುವಿನ ಹಕ್ಕುಗಳ ಸಮತೋಲನ.
ಬಯಲುಸೀಮೆ & ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಸೂದೆಗಳುಆಯಾ ಭಾಗದ ಪ್ರಾದೇಶಿಕ ಸಮಸ್ಯೆಗಳಿಗೆ ಅನುಗುಣವಾಗಿ ಅಭಿವೃದ್ಧಿ ಮಾಡುವುದು.ಮೂಲಸೌಕರ್ಯ, ನೀರಾವರಿ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳ ಸುಧಾರಣೆ.
ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ಮಸೂದೆಸಾರಿಗೆ ವ್ಯವಸ್ಥೆಯಲ್ಲಿ ಸಮನ್ವಯ ತರುವುದು.ಬಸ್ ಮತ್ತು ಮೆಟ್ರೋ ಸೇವೆಗಳ ಏಕೀಕರಣದಿಂದ ಸುಗಮ ಸಂಚಾರ.
ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ಮಸೂದೆಕಲಾವಿದರು ಮತ್ತು ಸಿನಿಮಾ ಕ್ಷೇತ್ರದ ಕೆಲಸಗಾರರ ರಕ್ಷಣೆ.ಅರ್ಹ ಕಲಾವಿದರಿಗೆ ಪಿಂಚಣಿ, ವಿಮೆ ಮತ್ತು ಕಲ್ಯಾಣ ನಿಧಿಯ ಭದ್ರತೆ.
ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಮಸೂದೆರಸ್ತೆ ಸುರಕ್ಷತಾ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸುವುದು.ಅಪಘಾತಗಳ ಸಂಖ್ಯೆಯಲ್ಲಿ ಇಳಿಕೆ ಮತ್ತು ಸುರಕ್ಷಿತ ಸಂಚಾರ ವ್ಯವಸ್ಥೆ.
ಕರ್ನಾಟಕ ಭೂ ಕಂದಾಯ 2ನೇ ತಿದ್ದುಪಡಿ ಮಸೂದೆಭೂ ದಾಖಲೆಗಳ ನಿರ್ವಹಣೆಯಲ್ಲಿ ಸುಧಾರಣೆ ತರುವುದು.ರೈತರಿಗೆ ತಮ್ಮ ಭೂ ದಾಖಲೆಗಳ ನಿರ್ವಹಣೆ ಸುಲಭ ಮತ್ತು ಸರಳವಾಗಲಿದೆ.
ಧಾರ್ಮಿಕ ಕ್ಷೇತ್ರ ಅಭಿವೃದ್ಧಿ ಮಸೂದೆಗಳು (ಮಲೆ ಮಹದೇಶ್ವರ & ಚಂದ್ರಗುತ್ತಿ)ಪ್ರಸಿದ್ಧ ಯಾತ್ರಾ ಸ್ಥಳಗಳ ಅಭಿವೃದ್ಧಿ ಪ್ರಾಧಿಕಾರ ರಚನೆ.ಯಾತ್ರಿಕರಿಗೆ ಉತ್ತಮ ಮೂಲಸೌಕರ್ಯ ಮತ್ತು ಕ್ಷೇತ್ರದ ಸಮಗ್ರ ಸಂರಕ್ಷಣೆ.
ಕರ್ನಾಟಕ ವಿಶ್ವವಿದ್ಯಾಲಯ 2ನೇ ತಿದ್ದುಪಡಿ ಮಸೂದೆಉನ್ನತ ಶಿಕ್ಷಣದ ಆಡಳಿತದಲ್ಲಿ ಸುಧಾರಣೆ ತರುವುದು.ಪಠ್ಯಕ್ರಮ ಮತ್ತು ಆಡಳಿತದಲ್ಲಿ ಆಧುನಿಕ ಬದಲಾವಣೆಗಳು.

Source: Prajavani

ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆ ಉತ್ತೇಜನ ಯೋಜನೆ (PMFME)

ಸಂದರ್ಭ: ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆ ಉತ್ತೇಜನ ಯೋಜನೆ ಅಡಿ, ರಾಜ್ಯದ 414 ಫಲಾನುಭವಿಗಳಿಗೆ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮವು (ಕೆಪೆಕ್) ₹16.28 ಕೋಟಿಯಷ್ಟು ಸಹಾಯಧನ ಬಿಡುಗಡೆ ಮಾಡಿದೆ.
• ಈ ಯೋಜನೆಯ 50ನೇ ಬ್ಯಾಚಿನಲ್ಲಿ ರಾಜ್ಯದ 414 ಫಲಾನುಭವಿಗಳನ್ನು ಕೇಂದ್ರ ಸರ್ಕಾರವು ಆಯ್ಕೆ ಮಾಡಿದೆ.
• ಸರ್ಕಾರದ ಸಹಾಯಧನದ ಪಾಲನ್ನು ಬಿಡುಗಡೆ ಮಾಡಲಾಗಿದೆ.
• 2025-26 ಸಾಲಿನಲ್ಲಿ ಒಟ್ಟು 5,000 ಘಟಕಗಳ ಸ್ಥಾಪನೆಗೆ ರಾಜ್ಯ ಸರ್ಕಾರವು ₹206 ಕೋಟಿ ಅನುದಾನವನ್ನು ತೆಗೆದಿರಿಸಿದೆ. ಈ ಸಾಲಿನಲ್ಲಿ ಇನ್ನೂ 1,000 ಫಲಾನುಭವಿ ಗಳಿಗೆ ಸಹಾಯಧನ ಒದಗಿಸಲು ಕೇಂದ್ರ ಸರ್ಕಾರದಿಂದ ₹79 ಕೋಟಿ ಹೆಚ್ಚುವರಿ ಅನುದಾನ ಒದಗಿಸಿ ಎಂದು ಕೃಷಿ ಸಚಿವಾಲಯಕ್ಕೆ ಇದೇ 5ರಂದು ಮನವಿ ಸಲ್ಲಿಸಲಾಗಿದೆ.

ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆ ಉತ್ತೇಜನ ಯೋಜನೆ (PMFME)

✨ ಸಂಕ್ಷಿಪ್ತ ಪರಿಚಯ

👉 ಈ ಯೋಜನೆಯನ್ನು 2020ರಲ್ಲಿ ಆರಂಭಿಸಲಾಯಿತು.
👉 ಉದ್ದೇಶ: ಕಿರು, ಸೂಕ್ಷ್ಮ ಮತ್ತು ಅಸಂಘಟಿತ ಆಹಾರ ಸಂಸ್ಕರಣಾ ಉದ್ದಿಮೆಗಳನ್ನು ಬಲಪಡಿಸುವುದು, ವಿಶೇಷವಾಗಿ ಗ್ರಾಮೀಣ ಮತ್ತು ಅರೆನಗರ ಪ್ರದೇಶಗಳಲ್ಲಿ.

🎯 ಮುಖ್ಯ ಉದ್ದೇಶಗಳು

ಅಸಂಘಟಿತ ಆಹಾರ ಸಂಸ್ಕರಣಾ ಘಟಕಗಳನ್ನು ಔಪಚಾರಿಕ ಆರ್ಥಿಕ ವ್ಯವಸ್ಥೆಗೆ ಸೇರಿಸುವುದು

ಆದಾಯ ಮತ್ತು ಉದ್ಯೋಗ ಸೃಷ್ಟಿ ಹೆಚ್ಚಿಸುವುದು

ಸ್ಥಳೀಯ ಉತ್ಪನ್ನಗಳಿಗೆ ಮೌಲ್ಯವರ್ಧನೆ (value addition)

One District One Product (ODOP)แนಯವನ್ನು ಉತ್ತೇಜಿಸುವುದು

🔑 ಪ್ರಮುಖ ಅಂಶಗಳು

ವೈಯಕ್ತಿಕ ಘಟಕಗಳಿಗೆ ಸಾಲ ಸಹಾಯ (ಕ್ರೆಡಿಟ್-ಲಿಂಕ್ಡ್ ಸಬ್ಸಿಡಿ)

SHGಗಳು, FPOಗಳು, ಸಹಕಾರಿ ಸಂಘಗಳಿಗೆ ಬೆಂಬಲ

ಕೌಶಲ್ಯಾಭಿವೃದ್ಧಿ, ತರಬೇತಿ ಮತ್ತು ಮಾರುಕಟ್ಟೆ ಸಂಪರ್ಕ

ಬ್ರಾಂಡಿಂಗ್, ಪ್ಯಾಕೇಜಿಂಗ್ ಮತ್ತು ಗುಣಮಟ್ಟ ಸುಧಾರಣೆ

PMFME ಯೋಜನೆ ಅಸಂಘಟಿತ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳನ್ನು ಔಪಚಾರಿಕಗೊಳಿಸಿ, ಆದಾಯ–ಉದ್ಯೋಗ ಹೆಚ್ಚಿಸಲು ODOP ಆಧಾರಿತ ಸಮಗ್ರ ಬೆಂಬಲ ಒದಗಿಸುತ್ತದೆ.

Source: Prajavani

ಒಕ್ಕೂಟ ವ್ಯವಸ್ಥೆಗೆ ಸಂವಿಧಾನದ ಕಾವಲು

ಭಾರತವು ‘ರಾಜ್ಯಗಳ ಒಕ್ಕೂಟ’ (Union of States) ಎಂಬುದನ್ನು ಸಂವಿಧಾನ ಸ್ಪಷ್ಟಪಡಿಸಿದೆ. ‘ಭಾರತೀಯ ಸಂವಿಧಾನ’ದಮೊದಲ ವಿಧಿಯಲ್ಲಿಯೇ ಈ ಉಲ್ಲೇಖವಿದೆ. ಕೇಂದ್ರ ಮತ್ತು ರಾಜ್ಯ ಎಂಬ ಎರಡು ಹಂತದ ಆಡಳಿತ ವ್ಯವಸ್ಥೆ ದೇಶದಲ್ಲಿದೆ. ಒಕ್ಕೂಟ ವ್ಯವಸ್ಥೆ ಸುಗಮವಾಗಿ ಸಾಗಲು ಕೇಂದ್ರ, ರಾಜ್ಯ ಹಾಗೂ ಸಮವರ್ತಿ ಪಟ್ಟಿಯಲ್ಲಿ ಅಧಿಕಾರ ವರ್ಗೀಕರಿಸಲಾಗಿದೆ

ಸಂವಿಧಾನ ರಚನಾ ಸಮಿತಿ 1949ರ ನ.26 ರಂದು ಒಕ್ಕೂಟ ವ್ಯವಸ್ಥೆಗೆ ಸಮ್ಮತಿ ಸೂಚಿಸಿತು. 1950 ಜ.26ರಂದು ಸಂವಿಧಾನ ಅನುಷ್ಠಾನಗೊಂಡಿತು. ಅಂದಿನಿಂದಲೇ ಒಕ್ಕೂಟ ವ್ಯವಸ್ಥೆಗೆ ಸಾಂವಿಧಾನಿಕ ಮುದ್ರೆ ಸಿಕ್ಕಿತು. ‘ರಾಜ್ಯಗಳ ಒಕ್ಕೂಟ’ವು ದೇಶದ ಸಮಗ್ರತೆಯನ್ನು ರಕ್ಷಿಸಿ, ‘ವೈವಿಧ್ಯದಲ್ಲಿ ಏಕತೆ’ಯನ್ನು ಕಾಪಾಡಿಕೊಳ್ಳಲು ರೂಪಿಸಿದ ವಿಶಿಷ್ಟ ವ್ಯವಸ್ಥೆಯಾಗಿದೆ.

ಒಕ್ಕೂಟ ವ್ಯವಸ್ಥೆಯನ್ನು ಗಟ್ಟಿಯಾಗಿ ಹಿಡಿದಿಟ್ಟಿದ್ದು ಸಂವಿಧಾನ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ರಾಜಕೀಯ, ಆರ್ಥಿಕ, ಆಡಳಿತಾತ್ಮಕ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಸಂಘರ್ಷಗಳು ನಡೆದಿದ್ದರೂ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಆಗದಂತೆ ಕಾಪಾಡಿದೆ.ಭಾರತವು ಪ್ರಜಾಪ್ರಭುತ್ವ ರಾಷ್ಟ್ರ ವಾಗಿಗೆಲ್ಲುವುದಕ್ಕೆ ಸಂವಿಧಾನದ ಕೊಡುಗೆ ಅನನ್ಯ. ‘ರಾಜ್ಯಗಳ ಒಕ್ಕೂಟ’ದಲ್ಲಿ ಪ್ರತಿ ರಾಜ್ಯ ತನ್ನದೇ ಆಗಿರುವ ಅಸ್ಮಿತೆ, ಅನನ್ಯತೆ ಹಾಗೂ ಸಂಪನ್ಮೂಲ ಕಾಪಾಡಿಕೊಳ್ಳುವ ಅವಕಾಶವನ್ನು ಸಂವಿಧಾನ ಕಲ್ಪಿಸಿದೆ.

1947ರ ಅ.15ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೂ ದೇಶದೊಳಗಿನ 570ಕ್ಕೂ ಹೆಚ್ಚು ಸಂಸ್ಥಾನಗಳಲ್ಲಿ ರಾಜಾಡಳಿತವಿತ್ತು.ಭಾರತದಲ್ಲಿ ತಮ್ಮ ಸಂಸ್ಥಾನಗಳನ್ನು ವಿಲೀನಗೊಳಿಸಲು ಅನೇಕರು ಹಿಂದೇಟು ಹಾಕಿದರು. ಈ ಸಂಸ್ಥಾನಗಳನ್ನು ಒಗ್ಗೂಡಿಸಿ ಭಾರತೀಯತೆಯ ಸ್ವರೂಪ ನೀಡುವುದು ಆರಂಭದಲ್ಲಿ ಸವಾಲಾಗಿತ್ತು.
ಭಾಷಾವಾರು ರಾಜ್ಯ ರಚನೆ ದೇಶದ ಒಕ್ಕೂಟ ವ್ಯವಸ್ಥೆಯನ್ನು ಭದ್ರಪಡಿಸಿತು.

ದೇಶದಲ್ಲಿ ಖನಿಜ ಸಂಪತ್ತು ಹೇರಳವಾಗಿದೆ. ಒಡಿಶಾ, ಮಹಾರಾಷ್ಟ್ರದಲ್ಲಿ ಕಲ್ಲಿದ್ದಲು, ಕರ್ನಾಟಕ ದಲ್ಲಿ ಕಬ್ಬಿಣದ ಅದಿರು ಲಭ್ಯವಿವೆ.ಪರಿಸರವನ್ನು ಕಾಪಾಡಿಕೊಂಡು ಸಂಪತ್ತು ಅನುಭವಿಸಬೇಕಿದೆ.

ಇದಕ್ಕೆ ಕೇಂದ್ರ ಸರ್ಕಾರದ ಅನುಮತಿ ಅಗತ್ಯವಿದೆ. ಭವಿಷ್ಯದ ಭಾರತವನ್ನು ದೃಷ್ಟಿಯಲ್ಲಿಟ್ಟುಕೊಂಡು ಹಣಕಾಸು, ಜಲ, ಗಣಿ ಸೇರಿದಂತೆ ದೇಶದ ಸಂಪನ್ಮೂಲಗಳ ಹಂಚಿಕೆಯಾಗಿದೆ. ಸಂವಿಧಾನವು ಸ್ಪಷ್ಟ ಮಾರ್ಗದರ್ಶನ ಕೂಡ ನೀಡಿದೆ.

ಪ್ರಮುಖ ಅಂಶಗಳು
ಸ್ವಾತಂತ್ರ್ಯಪೂರ್ವದ, 1935ರ ‘ಭಾರತ ಸರ್ಕಾರದ ಕಾಯ್ದೆ’ ಒಕ್ಕೂಟ ವ್ಯವಸ್ಥೆಯ ಕುರಿತ ಚರ್ಚೆಯನ್ನು ಮುನ್ನೆಲೆಗೆ ತಂದಿತು. ಆಗ ಭಾರತದಲ್ಲಿ ಪ್ರಾಂತೀಯ ಮತ್ತು ಕೇಂದ್ರೀಯ ವ್ಯವಸ್ಥೆ ಜಾರಿಯಲ್ಲಿತ್ತು.

1946ರಲ್ಲಿ ಮೀರ‌ತ್‌ನಲ್ಲಿ ನಡೆದ ಭಾರತೀಯ ಕಾಂಗ್ರೆಸ್ ಅಧಿವೇಶನದಲ್ಲಿ ಜವಾಹರಲಾಲ್‌ ನೆಹರೂ ಒಕ್ಕೂಟ ವ್ಯವಸ್ಥೆಗೆ ಸಂಬಂಧಿಸಿದಂತೆ ನಿರ್ಣಯ ಮಂಡಿಸಿದರು.

ಸಂವಿಧಾನವು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಎಂಬ ವ್ಯವಸ್ಥೆ ರೂಪಿಸಿದೆ. ನ್ಯಾಯಾಂಗ ಸ್ವತಂತ್ರವಾಗಿದ್ದು, ಕೇಂದ್ರ ಮತ್ತು ರಾಜ್ಯಗಳ ನಡುವೆ ಮೂಡುವ ಗೊಂದಲ, ವ್ಯಾಜ್ಯಗಳನ್ನು ಬಗೆಹರಿಸುವ ಜವಾಬ್ದಾರಿ ಹೊಂದಿದೆ.

ಒಕ್ಕೂಟ ವ್ಯವಸ್ಥೆಗೆ ಅಪಾಯ ಎದುರಾಗುವ ಸಂದರ್ಭ ತೀರಾ ವಿರಳ. ಸಂವಿಧಾನ ಹಾಗೂ ನ್ಯಾಯಾಂಗ ವ್ಯವಸ್ಥೆಸಬಲವಾಗಿದೆ. ಲಿಖಿತ ಸಂವಿಧಾನದಲ್ಲಿ ಈ ಬಗ್ಗೆ ಸ್ಪಷ್ಟತೆ ಇದೆ.

ನೇರ ತೆರಿಗೆ, ಪರೋಕ್ಷ ತೆರಿಗೆ, ಖನಿಜ ಸಂಪನ್ಮೂಲಗಳ ಹಂಚಿಕೆಗೆ ಸಂಬಂಧಿಸಿದಂತೆ ಸಂವಿಧಾನದಲ್ಲಿ ಸ್ಕೂಲವಾದ ಮಾರ್ಗದರ್ಶನವಿದೆ.

Source: Prajavani

ಬನ್ನೇರುಘಟ್ಟ ಪರಿಸರ ಸೂಕ್ಷ್ಮ ಪ್ರದೇಶ ಕಡಿತ: ಸರ್ಕಾರಕ್ಕೆ ಸಿಇಸಿ ತಪರಾಕಿ

ಸಂದರ್ಭ: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮ ಪ್ರದೇಶವನ್ನು (ಇಎಸ್ಝಡ್) 268 ಚದರ ಕಿ.ಮೀ ನಿಂದ 168 ಚದರ ಕಿ.ಮೀ.ಗೆ ಇಳಿಸಿರುವ ಕರ್ನಾಟಕ ಸರ್ಕಾರದ ಕ್ರಮವನ್ನು ಸುಪ್ರೀಂ ಕೋರ್ಟ್ ನೇಮಿಸಿರುವ ಕೇಂದ್ರ ಉನ್ನತಾಧಿಕಾರ ಸಮಿತಿಯು (ಸಿಇಸಿ) ಕಟುವಾಗಿ ಟೀಕಿಸಿದ್ದು. ಈ ಕ್ರಮವು ಉದ್ಯಾನದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಅಭಿಪ್ರಾಯಪಟ್ಟಿದೆ.

• ಪರಿಸರ ಸೂಕ್ಷ್ಮ ಪ್ರದೇಶವನ್ನು ಇಳಿಸಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಬೆಂಗಳೂರಿನ ನಿವಾಸಿ ಬೆಳ್ಳಿಯಪ್ಪ ಮತ್ತಿತರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು ಈ ಬಗ್ಗೆ, ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸಮಿತಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು ಸಮಿತಿಯು ಸುಪ್ರೀಂ ಕೋರ್ಟ್ಗೆ 524 ಪುಟಗಳ ವರದಿ ಸಲ್ಲಿಸಿದೆ ಯಾವುದೇ ವೈಜ್ಞಾನಿಕ, ಪರಿಸರ ಅಥವಾ ಭೂದೃಶ್ಯ ಮಟ್ಟದ ಅಧ್ಯಯನ ಹಾಗೂ ಮೌಲ್ಯಮಾಪನ ನಡೆಸದೆಯೇ ಪರಿಸರ ಸೂಕ್ಷ್ಮ ಪ್ರದೇಶವನ್ನು ನಿರಂತರವಾಗಿ ಕಡಿತ ಮಾಡಲಾಗಿದೆ ಎಂದೂ ಸಮಿತಿ ತಿಳಿಸಿದೆ.
• ಪರಿಸರ ಸೂಕ್ಷ್ಮ ಪ್ರದೇಶದ ಪಕ್ಕದಲ್ಲೇ ಕರ್ನಾಟಕ ವಸತಿ ಇಲಾಖೆಯು ಸೂರ್ಯನಗರ ಲೇಔಟ್ (ಕೆಎಚ್ ಬಿ ಸೂರ್ಯ ಸಿಟಿ) ಎಂಬ ಬೃಹತ್ ವಸತಿ ಯೋಜನೆ ಅನುಷ್ಠಾನಗೊಳಿಸುತ್ತಿದೆ. ಈ ಪ್ರದೇಶವು ಮೊದಲು ಪರಿಸರ ಸೂಕ್ಷ್ಮ ಪ್ರದೇಶದ ಭಾಗವಾಗಿತ್ತು ವಸತಿ ಬಡಾವಣೆಗಳ ನಿರ್ಮಾಣಕ್ಕೆ ನಿರ್ಬಂಧ ವಿಧಿಸಲಾಗಿತ್ತು ನಗರೀಕರಣದ ಒತ್ತಡದ ನೆಪವೊಡ್ಡಿ 2018ರ ಅಧಿಸೂಚನೆಯಲ್ಲಿ ಈ ಪ್ರದೇಶವನ್ನು ಇಎಸ್ಝಡ್ನಿಂದ ಹೊರಗಿಡಲಾಯಿತು.
• ಆ ಬಳಿಕ ವಸತಿ ಯೋಜನೆಯನ್ನು ಸುಗಮಗೊಳಿಸಲು ದೊಡ್ಡ ಪ್ರಮಾಣದ ಭೂ ಸಮತಟ್ಟು ನೈಸರ್ಗಿಕವಾಗಿ ಎತ್ತರದ ಭೂಪ್ರದೇಶವನ್ನು ಸಮತಟ್ಟಾಗಿಸುವುದು ಸೇರಿದಂತೆ ವ್ಯಾಪಕ ಪ್ರಮಾಣದಲ್ಲಿ ಚಟುವಟಿಕೆಗಳನ್ನು ಕೈಗೊಳ್ಳಲಾಯಿತು.
• ಪರಿಸರ ಪರಿಣಾಮದ ಅಧ್ಯಯನ ಹಾಗೂ ವೈಜ್ಞಾನಿಕವಾಗಿ ಮೌಲ್ಯಮಾಪನ ನಡೆಸದೆಯೇ ಈ ಕಾರ್ಯ ನಡೆಸಲಾಯಿತು ಈ ಯೋಜನೆಯು ಕರಡಿಕ್ಕಲ್-ಮಾದೇಶ್ವರ ಕಾರಿಡಾರ್ನ ಪಕ್ಕದಲ್ಲಿಯೇ ಅನುಷ್ಠಾನಗೊಳ್ಳುತ್ತಿದೆ. ಈ ಭಾಗದಲ್ಲಿ ಈಗಾಗಲೇ ಮಾನವ-ವನ್ಯಜೀವಿ ಸಂಘರ್ಷ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ’ ಎಂದು ಸಮಿತಿಯು ವರದಿಯಲ್ಲಿ ಉಲ್ಲೇಖಿಸಿದೆ.
• ಬೆಂಗಳೂರಿನ ಸುತ್ತಮತ್ತ ತ್ವರಿತ ನಗರ ವಿಸ್ತರಣೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಾಂಪ್ರದಾಯಿಕ ಆನೆ ಕಾರಿಡಾರ್ಗಳ ಅವನತಿಯಿಂದಾಗಿ ಸಮಸ್ಯೆ ಮತ್ತು ಬಿಗಡಾಯಿಸಿದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ದಕ್ಷಿಣ, ಪಶ್ಚಿಮ, ಆಗ್ನೆಯ ಮತ್ತು ನೈರುತ್ಯ ಭಾಗಗಳಲ್ಲಿ ಮಾನವ-ಆನೆ ಸಂಘರ್ಷ ಪ್ರಕರಣಗಳು ವ್ಯಾಪಕ ಪ್ರಮಾಣದಲ್ಲಿ ಜಾಸ್ತಿ ಆಗಿದೆ ಸುಸ್ತಿರ ಮಾನವ ಅಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆ ಸಮತೋಲನದಿಂದ ಸಾಗಲು ಇಎಸ್ಝಡ್ಗಳು ನಿಯಂತ್ರಕಗಳಾಗಿ ಕೆಲಸ ಮಾಡುತ್ತವೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

Source: Prajavani

ಆರು ಮಸೂದೆಗಳಿಗೆ ರಾಜ್ಯಪಾಲರ ಅಂಕಿತ

ಸಂದರ್ಭ: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಸದಸ್ಯರ ಪಟ್ಟಿಯಲ್ಲಿ ಕೆಲವು ಜನಪ್ರತಿ-ನಿಧಿಗಳ ಹೆಸರುಗಳು ಬಿಟ್ಟು ಹೋಗಿರುವುದರಿಂದ ಅವರ ಹೆಸರು ಸೇರಿಸುವ ಉದ್ದೇಶದ ಗ್ರೇಟರ್ ಬೆಂಗಳೂರು ಆಡಳಿತ ಎರಡನೇ ತಿದ್ದುಪಡಿ ಮಸೂದೆ’ಯೂ ಸೇರಿ ಒಟ್ಟು ಆರು ಮಸೂದೆಗಳಿಗೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ.
• ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮಸೂದೆ, ಕರ್ನಾಟಕ ಕಲ್ಯಾಣ ನಿಧಿ ತಿದ್ದುಪಡಿ ಮಸೂದೆ, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳು ತಿದ್ದುಪಡಿ ಮಸೂದೆ, ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ ಮಸೂದೆ, ಬಾಂಬೆ ಪಬ್ಲಿಕ್ ಟ್ರಸ್ಟ್ ಮಸೂದೆಗಳಿಗೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ.

ಕರ್ನಾಟಕದ ಆರು ಪ್ರಮುಖ ಮಸೂದೆಗಳ ಸಂಕ್ಷಿಪ್ತ ವಿವರಣೆ:

ಮಸೂದೆಯ ಹೆಸರುಮುಖ್ಯ ಉದ್ದೇಶಪ್ರಮುಖ ಬದಲಾವಣೆಗಳು
ಗ್ರೇಟರ್ ಬೆಂಗಳೂರು ಆಡಳಿತ (ಎರಡನೇ ತಿದ್ದುಪಡಿ) ಮಸೂದೆಜಿಬಿಎ (GBA) ಸದಸ್ಯರ ಪಟ್ಟಿಯನ್ನು ಪರಿಷ್ಕರಿಸುವುದು.ಬೆಂಗಳೂರು ನಗರದ ಮತದಾರರ ಪಟ್ಟಿಯಲ್ಲಿರುವ ಎಲ್ಲಾ ಸಂಸದರು (MPs) ಮತ್ತು ಶಾಸಕರು (MLAs) ಅಧಿಕೃತವಾಗಿ ಜಿಬಿಎ ಸದಸ್ಯರಾಗುತ್ತಾರೆ.
ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (KPME) ತಿದ್ದುಪಡಿ ಮಸೂದೆಖಾಸಗಿ ಆರೋಗ್ಯ ಕೇಂದ್ರಗಳ ಮೇಲೆ ಹೆಚ್ಚಿನ ನಿಗಾ ವಹಿಸುವುದು.ಹೊಸದಾಗಿ ಆರಂಭವಾಗುವ ಸಂಸ್ಥೆಗಳಿಗೆ 6 ತಿಂಗಳ ತಾತ್ಕಾಲಿಕ ನೋಂದಣಿ ಅವಕಾಶ ಹಾಗೂ ಮಾನಸಿಕ ಆರೋಗ್ಯ ಕೇಂದ್ರಗಳನ್ನು ಈ ಕಾನೂನಿನ ವ್ಯಾಪ್ತಿಗೆ ತರುವುದು.
ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ತಿದ್ದುಪಡಿ ಮಸೂದೆಹೆಚ್ಚಿನ ಸಂಖ್ಯೆಯ ಕಾರ್ಮಿಕರಿಗೆ ಸೌಲಭ್ಯ ಒದಗಿಸುವುದು.ಈ ಮೊದಲು 50 ಕಾರ್ಮಿಕರಿರುವ ಸಂಸ್ಥೆಗಳಿಗೆ ಮಾತ್ರ ಅನ್ವಯಿಸುತ್ತಿತ್ತು, ಈಗ 10 ಕಾರ್ಮಿಕರಿರುವ ಸಂಸ್ಥೆಗಳೂ ಇದರ ವ್ಯಾಪ್ತಿಗೆ ಬರುತ್ತವೆ.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳು ತಿದ್ದುಪಡಿ ಮಸೂದೆದೇವಸ್ಥಾನಗಳ ಆದಾಯ ಹಂಚಿಕೆ ಸಮತೋಲನಗೊಳಿಸುವುದು.ಶ್ರೀಮಂತ ದೇವಸ್ಥಾನಗಳ ಆದಾಯದ ಒಂದು ಭಾಗವನ್ನು ಬಳಸಿ, ಕಡಿಮೆ ಆದಾಯದ ದೇವಸ್ಥಾನಗಳ ಪುರೋಹಿತರ ಕಲ್ಯಾಣ ಮತ್ತು ಅಭಿವೃದ್ಧಿಗೆ ಧನಸಹಾಯ ನೀಡುವುದು.
ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ಮಸೂದೆಐತಿಹಾಸಿಕ ತಾಣಗಳ ಉತ್ತಮ ನಿರ್ವಹಣೆ.2018ರ ಮೂಲ ಕಾಯ್ದೆಗೆ ತಿದ್ದುಪಡಿ ತಂದು, ಅಭಿವೃದ್ಧಿ ಯೋಜನೆಗಳಿಗೆ ಪ್ರಾಧಿಕಾರಕ್ಕೆ ಹೆಚ್ಚಿನ ಆಡಳಿತಾತ್ಮಕ ಅಧಿಕಾರ ನೀಡಲಾಗಿದೆ.
ಬಾಂಬೆ ಪಬ್ಲಿಕ್ ಟ್ರಸ್ಟ್ (ಕರ್ನಾಟಕ ತಿದ್ದುಪಡಿ) ಮಸೂದೆಸಾರ್ವಜನಿಕ ಟ್ರಸ್ಟ್‌ಗಳ ಆಡಳಿತಾತ್ಮಕ ಸುಲಭೀಕರಣ.ಬೆಳಗಾವಿ ಪ್ರಾದೇಶಿಕ ಆಯುಕ್ತರನ್ನು ಚಾರಿಟಿ ಕಮಿಷನರ್ ಆಗಿ ನೇಮಿಸುವುದು ಮತ್ತು ತಹಶೀಲ್ದಾರರಿಗೆ ಉಪ-ಅಧಿಕಾರಗಳನ್ನು ನೀಡುವುದು.

👉 ಈ ಮಸೂದೆಗಳು ನಗರ ಆಡಳಿತ, ಆರೋಗ್ಯ, ಕಾರ್ಮಿಕ ಕಲ್ಯಾಣ, ಧಾರ್ಮಿಕ ಸೇವೆಗಳು ಮತ್ತು ಪಾರಂಪರಿಕ ತಾಣಗಳ ಅಭಿವೃದ್ಧಿ ಕ್ಷೇತ್ರಗಳಲ್ಲಿ ಸಮಗ್ರ ಬದಲಾವಣೆಗಳನ್ನು ತರಲಿವೆ.

Source: Prajavani

ಜಿಡಿಪಿ: ಈ ವರ್ಷದಲ್ಲಿ 87.4 3 7.4ರಷ್ಟು ಬೆಳವಣಿಗೆ

ಸಂದರ್ಭ: ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಅರ್ಥಿಕತೆಯ ಬೆಳವಣಿಗೆ ಅಂದಾಜನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಈ ವರ್ಷದಲ್ಲಿ ಅರ್ಥ ವ್ಯವಸ್ಥೆಯು ಶೇ 7.4ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಅಂದಾಜಿನಲ್ಲಿ ಹೇಳಲಾಗಿದೆ.
•ಈ ಪ್ರಮಾಣದ ಸಾಧ್ಯವಾದಲ್ಲಿ, ಬೆಳವಣಿಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಅರ್ಥ ವ್ಯವಸ್ಥೆಗಳ ಪೈಕಿ ಅತ್ಯಂತ ವೇಗದ ಬೆಳವಣಿಗೆಯನ್ನು ಭಾರತ ಸಾಧಿಸಿದಂತಾಗುತ್ತದೆ. ಆದರೆ ದ್ರೋಕರೇಜ್ ಕಂಪನಿ ಗೋಲ್ಡ್ಮನ್ ಸಾಕ್ಸ್ ಸಿದ್ಧಪಡಿಸಿರುವ ವರದಿಯೊಂದರ ಪ್ರಕಾರ ಈ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆಯು ಶೇ 7.3ರಷ್ಟು ಆಗಲಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಅಂದಾಜಿನ ಪ್ರಕಾರ ಕೂಡ ಭಾರತದ ಜಿಡಿಪಿ 2025-26ರಲ್ಲಿ ಶೇ 7.3ರಷ್ಟು ಬೆಳೆಯಲಿದೆ. ಜಿಎಸ್ಟಿ ದರ ಇಳಿಕೆ, ಆದಾಯ ತೆರಿಗೆ ಮಿತಿ ಹೆಚ್ಚಳದಂತಹ ಕ್ರಮಗಳು ಆರ್ಥಿಕ ಚಟುವಟಿಕೆ ಚೆನ್ನಾಗಿ ಇರುವುದಕ್ಕೆ ಕಾರಣವಾಗಿವೆ.
ಚೀನಾದ ಬೆಳವಣಿಗೆ ದರವು 2025ರಲ್ಲಿ ಶೇ 4.9ರಷ್ಟು ಇರಲಿದೆ ಎಂದು ವಿಶ್ವ ಬ್ಯಾಂಕ್ ಅಂದಾಜು ಮಾಡಿದೆ.
• ಮೊದಲ ಮುಂಗಡ ಅಂದಾಜನ್ನು ಪ್ರಕಟಿಸಿದ ಕೇಂದ್ರ ಸರ್ಕಾರ: ದೇಶದ ಅರ್ಥ ವ್ಯವಸ್ಥೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ (2025-26) ಶೇಕಡ 7.4ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆ ಇದೆ. ಹಿಂದಿನ ಹಣಕಾಸು ವರ್ಷದಲ್ಲಿ ಬೆಳವಣಿಗೆ ಪ್ರಮಾಣವು ಶೇ 6.5ರಷ್ಟು ಇತ್ತು.
ಸೇವಾ ವಲಯ ಹಾಗೂ ತಯಾರಿಕಾ ವಲಯಗಳಲ್ಲಿ ಚಟುವಟಿಕೆ ಚೆನ್ನಾಗಿ ಇರುವುದು ಈ ಬಾರಿ ಬೆಳವಣಿಗೆಯು ಕಳೆದ ವರ್ಷಕ್ಕಿಂತ ಹೆಚ್ಚಿರುವಂತೆ ಮಾಡಲಿದೆ. ಈ ಮೂಲಕ ಭಾರತವು ಪ್ರಮುಖ ಅರ್ಥವ್ಯವಸ್ಥೆಗಳ ಪೈಕಿ ಅತ್ಯಂತ ವೇಗದ ಬೆಳವಣಿಗೆ ಕಾಣುವ ದೇಶವಾಗಿ ಮುಂದುವರಿಯಲಿದೆ.
2023-24ರಲ್ಲಿ ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ಪ್ರಮಾಣವು ಶೇ 9.2ರಷ್ಟು ಇತ್ತು.
• ಪ್ರಸಕ್ತ ಹಣಕಾಸು ವರ್ಷದಲ್ಲಿ ತಯಾರಿಕಾ ವಲಯದಲ್ಲಿನ ಒಟ್ಟು ಮೌಲ್ಯ ಸೇರ್ಪಡೆಯು (ಜಿವಿಎ) ಶೇ 7ರಷ್ಟು ಇರಲಿದೆ ಎಂದು ಅಂದಾಜು ಮಾಡಲಾಗಿದೆ.
• ಇದು ಹಿಂದಿನ ವರ್ಷದ ಶೇ 4.5ರಷ್ಟು ಜಿವಿಎಗಿಂತ ಹೆಚ್ಚಿನದ್ದಾಗಲಿದೆ.
• ಸೇವಾ ವಲಯದಲ್ಲಿನ ಬೆಳವಣಿಗೆಯು ಶೇ 9.1ರಷ್ಟು ಇರಲಿದೆ (ಹಿಂದಿನ ವರ್ಷದಲ್ಲಿ ಇದು ಶೇ 7.2ರಷ್ಟು ಇತ್ತು) ಎಂದು ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯದ ಅಧೀನದಲ್ಲಿ ಕೆಲಸ ಮಾಡುವ ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್ಎಸ್ಒ) ಬಿಡುಗಡೆ ಮಾಡಿರುವ ಅಂದಾಜಿನಲ್ಲಿ ಹೇಳಲಾಗಿದೆ.
• ಕೃಷಿ ಮತ್ತು ಸಂಬಂಧಿತ ವಲಯ-ಗಳಲ್ಲಿನ ಬೆಳವಣಿಗೆಯು ಈ ವರ್ಷದಲ್ಲಿ ಶೇ 3.1ಕ್ಕೆ ಇಳಿಕೆ ಆಗುವ ಸಾಧ್ಯತೆ ಇದೆ. ಹಿಂದಿನ ವರ್ಷದಲ್ಲಿ ಇದು ಶೇ 4.6ರ ಮಟ್ಟದಲ್ಲಿತ್ತು. ಈ ವರ್ಷದಲ್ಲಿ ನೈಜ ಜಿಡಿಪಿ ಗಾತ್ರವು ₹201.90 ಲಕ್ಷ ಕೋಟಿಯಷ್ಟಾಗುವ ಅಂದಾಜು ಮಾಡಲಾಗಿದೆ. ಅಮೆರಿಕದ ಡಾಲರ್ ಲೆಕ್ಕದಲ್ಲಿ ಜಿಡಿಪಿ ಗಾತ್ರವು 3.97 ಟ್ರಿಲಿಯನ್ ಆಗಲಿದೆ (1 ಡಾಲರ್ 90 ರೂಪಾಯಿಗೆ ಸಮ ಎಂಬ ಅಂದಾಜಿನೊಂದಿಗೆ).
• ಕೇಂದ್ರ ಸರ್ಕಾರವು ಮುಂದಿನ ಹಣಕಾಸು ವರ್ಷದ ಬಜೆಟ್ ಅನ್ನು ಫೆಬ್ರುವರಿ 1ರಂದು ಮಂಡಿಸುವ ನಿರೀಕ್ಷೆ ಇದ್ದು, ಬಜೆಟ್ ಸಿದ್ಧಪಡಿಸುವ ಸಂದರ್ಭದಲ್ಲಿ ಮುಂಗಡ ಅಂದಾಜನ್ನು ಆಶ್ರಯಿಸುತ್ತದೆ.
• “ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆ ಗಳು ಹೆಚ್ಚಿದ್ದರೂ, ದೇಶದ ಬೆಳವಣಿಗೆ ದರವು ಕಡಿಮೆ ಆಗಿಲ್ಲ. ಹಣಕಾಸು ಮತ್ತು ವಿತ್ತೀಯ ನೀತಿಗಳು ಹೊಂದಾಣಿಕೆಯ ಗುಣ ಹೊಂದಿದ್ದುದು, ಕಾರ್ಪೊರೇಟ್ ಕಂಪನಿಗಳ ಹಣಕಾಸಿನ ಚೆನ್ನಾಗಿರುವುದು, ಮುಂಗಾರು ಮಳೆ ಚೆನ್ನಾಗಿ ಆಗಿರುವುದು ಹಾಗೂ ಕಚ್ಚಾ ತೈಲದ ಬೆಲೆಯು ಕಡಿಮೆ ಇರುವುದು ಇದಕ್ಕೆ ಕಾರಣ’ ಎಂದು ಕ್ರಿಸಿಲ್ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞ ಹೇಳಿದ್ದಾರೆ.
• ಹಬ್ಬಗಳ ಹೊತ್ತಿನಲ್ಲಿ ನಡೆಯುವ ಉತ್ತಮ ಮಾರಾಟ, ಜಿಎಸ್ಟಿ ದರ ಪರಿಷ್ಕರಣೆ ಹಾಗೂ ಆದಾಯ ತೆರಿಗೆ ಮಿತಿಯಲ್ಲಿನ ವಿನಾಯಿತಿಗಳು ಬೇಡಿಕೆಯನ್ನು ಹೆಚ್ಚಿಸುವ ನಿರೀಕ್ಷೆ ಇದೆ. ಹಬ್ಬಗಳ ನಂತರದಲ್ಲಿಯೂ ಬೇಡಿಕೆ ಉತ್ತಮ ಮಟ್ಟದಲ್ಲಿ ಎಂದು ಮುಂದುವರಿದಿದೆ ಬ್ಯಾಂಕ್ ಆಫ್ ಬರೋಡದ ಮುಖ್ಯ ಅರ್ಥಶಾಸ್ತ್ರಜ್ಞೆ ಹೇಳಿದ್ದಾರೆ.

Source: Prajavani

ರಷ್ಯಾದಿಂದ ₹15 ಲಕ್ಷ ಕೋಟಿ ಮೌಲ್ಯದ ಕಚ್ಚಾ ತೈಲ ಖರೀದಿ

ಸಂದರ್ಭ: ಉಕ್ರೇನ್ ಮತ್ತು ರಷ್ಯಾ ನಡುವೆ ಸಮರ ಆರಂಭವಾದ ನಂತರದಲ್ಲಿ ಭಾರತವು ರಷ್ಯಾದಿಂದ ಅಂದಾಜು 144 ಬಿಲಿಯನ್ ಯೂರೊ (ಸರಿಸುಮಾರು ₹15.19 ಲಕ್ಷ ಕೋಟಿ) ಮೌಲ್ಯದ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದೆ ಎಂದು ಯುರೋಪಿನ ‘ಇಂಧನ ಮತ್ತು ಶುದ್ಧ ಗಾಳಿ ಕುರಿತ ಸಂಶೋಧನಾ ಕೇಂದ್ರ’ (ಸಿಆರ್ಇಎ) ಅಂದಾಜು ಮಾಡಿದೆ.
ಇದೇ ಅವಧಿಯಲ್ಲಿ ಚೀನಾ ದೇಶವು ರಷ್ಯಾದಿಂದ ಅಂದಾಜು 210 ಬಿಲಿಯನ್ ಯೂರೊ ಮೌಲ್ಯದ (ಸರಿಸುಮಾರು ₹22.16 ಲಕ್ಷ ಕೋಟಿ) ಕಚ್ಚಾ ತೈಲವನ್ನು ಖರೀದಿಸಿದೆ.
ಭಾರತವು ರಷ್ಯಾದಿಂದ ಕಚ್ಚಾ ತೈಲ ಮಾತ್ರವೇ ಅಲ್ಲದೆ 18.18 ಬಿಲಿಯನ್ ಯೂರೊ (ಸರಿಸುಮಾರು ₹1.91 ಲಕ್ಷ ಕೋಟಿ) ಮೌಲ್ಯದ ಕಲ್ಲಿದ್ದಲನ್ನು ಕೂಡ ಖರೀದಿಸಿದೆ.
ಚೀನಾ ಕೂಡ ರಷ್ಯಾದಿಂದ ಹಾಗೂ ಅನಿಲವನ್ನು ಕಲ್ಲಿದ್ದಲು ಖರೀದಿಸಿದೆ.
ಇದೇ ಅವಧಿಯಲ್ಲಿ ಐರೋಪ್ಯ ಒಕ್ಕೂಟವು ರಷ್ಯಾದಿಂದ ಒಟ್ಟು 218.1 ಬಿಲಿಯನ್ ಯೂರೊ (ಸರಿಸುಮಾರು ₹23.02 ಲಕ್ಷ ಕೋಟಿ) ಮೌಲ್ಯದ ಪಳೆಯುಳಿಕೆ ಇಂಧನವನ್ನು (ಕಲ್ಲಿದ್ದಲು. ತೈಲ ಮತ್ತು ಅನಿಲ) ಖರೀದಿಸಿದೆ.