Tue. Mar 24th, 2026

Kannada

ಕೆಎಎಸ್ ಪ್ರಚಲಿತ ವಿದ್ಯಮಾನಗಳು

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು

ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು

ಪತ್ರಿಕೆ-I: ಪ್ರಬಂಧಗಳು

ಪ್ರಬಂಧ-1:

ಮೊಬೈಲ್ ಬಳಕೆ ನಿಯಂತ್ರಣ: ಇದು ವೈಯಕ್ತಿಕ ಹೊಣೆಗಾರಿಕೆಯೇ ಅಥವಾ ಸರ್ಕಾರದ ಹಸ್ತಕ್ಷೇಪ ಅಗತ್ಯವೇ? ಚರ್ಚಿಸಿ.

ಪ್ರಬಂಧ2:

ಗರಿಷ್ಠ ಗ್ಯಾರಂಟಿ ಯೋಜನೆಗಳು: ಸಾಮಾಜಿಕ ನ್ಯಾಯವೇ ಅಥವಾ ಹಣಕಾಸು ಒತ್ತಡವೇ?

ಪತ್ರಿಕೆ-II: ಸಾಮಾನ್ಯ ಅಧ್ಯಯನ-1

₹3.25 ಲಕ್ಷ ಕೋಟಿ ಜೈವಿಕ ಆರ್ಥಿಕತೆ
ಸಂದರ್ಭ: ರಾಜ್ಯದಲ್ಲಿ ಜೈವಿಕ ಆರ್ಥಿಕತೆಯು (ಬಯೋ ಎಕಾನಮಿ) 2025 ರಲ್ಲಿ ₹3.25,360 ಕೋಟಿಗಳಿಗೆ (39.2 ಶತಕೋಟಿ ಡಾಲರ್) ಏರಿಕೆಯಾಗಿದೆ. ಹಿಂದಿನ ವರ್ಷಕ್ಕಿಂತ ಗರಿಷ್ಠ ಬೆಳವಣಿಗೆ ದಾಖಲಿಸಿದೆ.

  • ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿಯು (ಕೆಐಟಿಎಸ್), ಜೈವಿಕ ತಂತ್ರಜ್ಞಾನ ಉದ್ಯಮಗಳ ಸಂಘದ (ಎಬಿಎಲ್‌ಇ) ಸಹಯೋಗದಲ್ಲಿ ಸಿದ್ಧಪಡಿಸಿರುವ ರಾಜ್ಯದ ಜೈವಿಕ ಆರ್ಥಿಕ ವರದಿ 2025 ರಲ್ಲಿ ಈ ಮಾಹಿತಿ ಇದೆ. ಈ ವರದಿಯನ್ನು ಐಟಿ ಬಿಟಿ ಸಚಿವ ಬಿಡುಗಡೆ ಮಾಡಿದರು.
  • ‘ಕರ್ನಾಟಕವು ದೇಶದ ಜೈವಿಕ ಆರ್ಥಿಕತೆಗೆ ಶೇ 21ರಷ್ಟು ಕೊಡುಗೆ ನೀಡುತ್ತಿದೆ. ರಾಜ್ಯದ ಒಟ್ಟು ಅಂತರಿಕ ಉತ್ಪನ್ನದಲ್ಲಿ (ಜಿಎಸ್‌ಡಿಪಿ) ಶೇ 10 ಕ್ಕಿಂತ ಹೆಚ್ಚು ಪಾಲು ಹೊಂದಿದೆ. ಜೈವಿಕ ತಂತ್ರಜ್ಞಾನವು ಅರ್ಥಿಕ ಬೆಳವಣಿಗೆಯ ಪ್ರಮುಖ ಎಂಜಿನ್ ಆಗಿರುವುದಕ್ಕೆ ನಿದರ್ಶನವಾಗಿದೆ. ದೇಶದ ಅತ್ಯಂತ ಪ್ರಬುದ್ಧ ಮತ್ತು ನಾವೀನ್ಯ ಆಧಾರಿತ ಜೈವಿಕ ತಂತ್ರಜ್ಞಾನ ವ್ಯವಸ್ಥೆಯಾಗಿ ಸುಸ್ಥಿರ ರೀತಿಯಲ್ಲಿ ಮುಂಚೂಣಿ ಸ್ಥಾನ ಕಾಯ್ದುಕೊಂಡಿರುವುದನ್ನು ಈ ವರದಿ ಬೆಳಕು ಚೆಲ್ಲಿದೆ’.
  • ಜೈವಿಕ ತಂತ್ರಜ್ಞಾನವು ಇನ್ನು ಮುಂದೆ ಪ್ರಯೋಗಾಲಯಗಳಿಗೆ ಮಾತ್ರ ಸೀಮಿತವಾಗಿರದೇ ಆರ್ಥಿಕ ಬೆಳವಣಿಗೆ, ಕೈಗಾರಿಕಾ ನಾವೀನ್ಯತೆ ಮತ್ತು ಸಾಮಾಜಿಕ ಪ್ರಭಾವದ ಕೇಂದ್ರ ಚಾಲಕ ಶಕ್ತಿಯಾಗಲಿದೆ. ಡೀಪ್ ಟೆಕ್ ನವೋದ್ಯಮಗಳಿಗೆ ಬೆಂಬಲ, ನಾವೀನ್ಯತೆ, ಮೂಲ ಸೌಕರ್ಯಗಳ
  • ಬಲಪಡಿಸುವಿಕೆ ಮತ್ತು ಬೆಳವಣಿಗೆಯು ಬೆಂಗಳೂರು ಅಚೆಗಿನ ಪ್ರತಿಯೊಂದು ಪ್ರದೇಶಕ್ಕೂ ತಲುಪುವಂತೆ ನೋಡಿಕೊಳ್ಳಬೇಕಾಗಿದೆ.

ಪತ್ರಿಕೆ-III: ಸಾಮಾನ್ಯ ಅಧ್ಯಯನ-2

ತಕ್ಷಣವೇ ಸಿಗಲಿದೆ ಮ್ಯುಟೇಷನ್ ಪ್ರತಿ

ಸಂದರ್ಭ: ಕೃಷಿ ಭೂಮಿ ಸೇರಿದಂತೆ ಯಾವುದೇ ಸ್ವತ್ತಿಗೆ ಸ್ವಯಂ ಚಾಲಿತವಾಗಿ ಮ್ಯುಟೇಷನ್ ಪಡೆಯಬಹುದಾದ ಹೊಸ ವ್ಯವಸ್ಥೆಗೆ ಕಂದಾಯ ಸಚಿವ ಚಾಲನೆ ನೀಡಿದರು.

  • ಚಾಲಿತ ಎಲ್ಲ 7 ದಿನಗಳ ಮತ್ತು 15 ದಿನಗಳ ನೋಟಿಸ್ ಅವಧಿ ಹೊಂದಿರುವ ಮ್ಯುಟೇಷನ್‌ಗಳನ್ನು ನೋಟಿಸ್ ಅವಧಿ ಮುಕ್ತಾಯವಾದ ನಂತರ ಮಾನವ ಹಸ್ತಕ್ಷೇಪವಿಲ್ಲದೆ ಸ್ವಯಂ ತಂತ್ರಾಂಶದ ಮೂಲಕ ಸರ್ವರ್ ಸಹಿ ಇರುವ ಮ್ಯುಟೇಷನ್ ಪಡೆಯ ಬಹುದಾಗಿದೆ. ಇದರಿಂದಾಗಿ ಕ್ರಯ, ವಿಭಾಗ, ದಾನ, ಪೌತಿ, ಉಯಿಲುಗಳ ಮ್ಯುಟೇಷನ್ ಸ್ವಯಂಚಾಲಿತವಾಗಿ ಪಡೆಯಬಹುದು.
  • ಒಂದು ವೇಳೆ 7 ಕೆಲಸದ ದಿನಗಳು ಅದವಾ 15 ಕೆಲಸದ ದಿನಗಳ ನೋಟಿಸ್ ಅವಧಿಯೊಳಗೆ ಕಂದಾಯ ನಿರೀಕ್ಷಕರು (ಸರ್ಕಾರಿ ಆಕ್ಷೇಪ) ಅಥವಾ ಸಾರ್ವಜನಿಕರು ತಕರಾರು ಸಲ್ಲಿಸಿದರೆ, ಅಂತಹ ಮ್ಯುಟೇಷನ್‌ಗಳನ್ನು ಪೂರ್ಣಗೊಳಿಸದೆ, ಅರ್‌ಸಿಸಿಎಂಎಸ್ ತಂತ್ರಾಂಶದ ಮೂಲಕ ತಹಶೀಲ್ದಾರ್ ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾಯಿಸಲಾಗುತ್ತದೆ. ತಹಶೀಲ್ದಾರರ ನಿರ್ಧಾರದಂತೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.
  • ಈ ಹಿಂದೆ ಮ್ಯುಟೇಷನ್ ಗಳಿಗೆ ಆಕ್ಷೇಪಣೆ ಇದ್ದಲ್ಲಿ ಅಥವಾ ಅನುಮೋದನೆ ನೀಡಬೇಕಾದಲ್ಲಿ, ರಾಜಸ್ವ ನಿರೀಕ್ಷಕರು ಖುದ್ದಾಗಿ ತಾಲ್ಲೂಕು ಕಚೇರಿಗಳಿಗೆ ಬಂದು ಸಲ್ಲಿಸಬೇಕಾ ಗಿತ್ತು. ಈಗ ರಾಜಸ್ವ ನಿರೀಕ್ಷಕರಿಗೆ ಲಾಗಿನ್ ನೀಡಿದ್ದು, ಯಾವುದೇ ಸ್ಥಳದಿಂದ ಆಕ್ಷೇಪಣೆ ಸಲ್ಲಿಸಲು ತಂತ್ರಾಂಶದಲ್ಲಿ ಅವಕಾಶ ನೀಡಲಾಗಿದೆ.

ಕೇರಳ ಶೀಘ್ರದಲ್ಲೇ ಆಗಲಿದೆ ‘ಕೇರಳಂ’:  ‘ಕೇರಳಂ’ ಹೆಸರಿಗೆ ಸಂಪುಟ ಒಪ್ಪಿಗೆ

ಸಂದರ್ಭ: ಕೇರಳ ಶೀಘ್ರದಲ್ಲೇ ‘ಕೇರಳಂ’ ಆಗಲಿದೆ. ರಾಜ್ಯದ ಮರು ನಾಮಕರಣ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ.

  • ಕೇರಳ ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಬದಲಾಯಿಸಲು ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ.
  • ಕೇರಳದ ಹೆಸರನ್ನು ಅಧಿಕೃತ ವಾಗಿ ‘ಕೇರಳಂ’ ಎಂದು ಬದಲಾಯಿಸುವಂತೆ ಕೇಂದ್ರವನ್ನು ಒತ್ತಾಯಿಸುವ ನಿರ್ಣಯ ‘ವನ್ನು ಕೇರಳ ವಿಧಾನಸಭೆಯು 2023ರ * ಅಗಸ್ಟ್ 9ರಂದು ಅಂಗೀಕರಿಸಿತ್ತು.
  • ‘ಭಾಷೆಗಳ ಆಧಾರದಲ್ಲಿ 1956ರ ನ.1ರಂದು ರಾಜ್ಯಗಳನ್ನು ರಚಿಸಲಾಗಿತ್ತು. ಕೇರಳ ಪಿರವಿ ದಿನವನ್ನೂ ನ.1 ರಂದು ಆಚರಿಸಲಾಗುತ್ತದೆ. ರಾಜ್ಯವನ್ನು ಮಲಯಾಳ ಭಾಷೆಯಲ್ಲಿ ‘ಕೇರಳಂ* ಎಂದೇ ಕರೆಯಲಾಗುತ್ತಿದೆ. ಆದರೆ, ಇತರ ಭಾಷೆಗಳಲ್ಲಿ ರಾಜ್ಯದ ಹೆಸರು ಇನ್ನೂ ಕೇರಳವಾಗಿದೆ. ಸಂವಿಧಾನದ 3ನೇ ವಿಧಿದಡಿ ‘ಕೇರಳಂ’ ಎಂದು ತಿದ್ದುಪಡಿ ಮಾಡಲು ಮತ್ತು ಸಂವಿಧಾನದ 8ನೇ ವಿಧಿಯಡಿದಲ್ಲಿ ಉಲ್ಲೇಖಿಸಿರುವ ಎಲ್ಲ ಭಾಷೆಗಳಲ್ಲಿ ‘ಕೇರಳಂ’ ಎಂದು ಮರು ನಾಮಕರಣ ತಕ್ಷಣ ಮಾಡಲು ಕ್ರಮ ಕೈಗೊಳ್ಳುವಂತೆ ವಿಧಾನಸಭೆ ಸರ್ವಾನುಮತದಿಂದ ಕೇಂದ್ರ ಸರ್ಕಾರ ವನ್ನು ಕೋರುತ್ತದೆ’ ಎಂದು ನಿರ್ಣಯ ತೆಗೆದುಕೊಂಡಿತ್ತು.
  • ಮೊದಲ ಬಾರಿ ಕಳುಹಿಸಿದ್ದನಿರ್ಣಯವನ್ನು ಪರಿಶೀಲಿಸಿದ್ದ ಕೇಂದ್ರ ಗೃಹ ಸಚಿವಾಲಯವು ಕೆಲ ತಾಂತ್ರಿಕ ಬದಲಾವಣೆ ಮಾಡುವಂತೆ ಹೇಳಿತ್ತು. ಹೀಗಾಗಿ, ಕೇರಳ

ಪತ್ರಿಕೆ-IV: ಸಾಮಾನ್ಯ ಅಧ್ಯಯನ-3

ಎಚ್‌ಪಿವಿ ಲಸಿಕೆ ಅಭಿಯಾನ ಶೀಘ್ರ

ಸಂದರ್ಭ: ಗರ್ಭಕಂಠದ ಕ್ಯಾನ್ಸರ್ ತಡೆಗೆ ಕೇಂದ್ರ ಸರ್ಕಾರದಿಂದ ಕ್ರಮ 14 ವರ್ಷದ ಹೆಣ್ಣುಮಕ್ಕಳಿಗೆ ಎಚ್ಪಿವಿ ಲಸಿಕೆ (ಗರ್ಭಕಂಠದ ಕ್ಯಾನ್ಸರ್ ತಡೆಯಲು) ನೀಡುವ ವಿಶೇಷ ಅಭಿಯಾನವನ್ನು ಕೇಂದ್ರ ಸರ್ಕಾರವು ಶೀಘ್ರದಲ್ಲಿಯೇ ಆರಂಭಿಸಲಿದೆ.

  • ಪ್ರತಿವರ್ಷ ಎಲ್ಲ ಸಾಮಾಜಿಕ ಆರ್ಥಿಕ ವರ್ಗದ 1.15 ಕೋಟಿ ಹೆಣ್ಣುಮಕ್ಕಳಿಗೆ ಲಸಿಕೆಯನ್ನು ಉಚಿತವಾಗಿ ನೀಡ ಲಾಗುವುದು ಎಂದು ಮಾಹಿತಿ ನೀಡಿವೆ.
  • ಭಾರತೀಯ ಮಹಿಳೆಯರಲ್ಲಿ ಅತಿ ಹೆಚ್ಚಾಗಿ ಕಂಡುಬರುವ ಕ್ಯಾನ್ಸರ್‌ಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಪ್ರಮಾಣ ಎರಡನೆಯದಾಗಿದೆ. ಹೆಣ್ಣುಮಕ್ಕಳನ್ನು ಇದರ ಕಬಂಧಬಾಹುವಿನಿಂದ ರಕ್ಷಿಸುವ ಉದ್ದೇಶದಿಂದ ವರ್ಷಗಟ್ಟಲೆ ಲಸಿಕೆಯ ಪರೀಕ್ಷೆ ನಡೆಸಿದ್ದ ಕೇಂದ್ರ ಸರ್ಕಾರ, ಈ ವಾರದಿಂದಲೇ ರಾಷ್ಟ್ರದಾದ್ಯಂತ ಲಸಿಕೆ ಅಭಿಯಾನ ಆರಂಭಿಸಲು ಮುಂದಾಗಿದೆ.
  • ಇದು ವಿಶೇಷ ಅಭಿಯಾನವಾಗಿದ್ದು, ಸಾರ್ವತ್ರಿಕ ಲಸಿಕೆ ಕಾರ್ಯಕ್ರಮದ ಭಾಗ ಅಲ್ಲ. ಮೆರ್ಕ್ ಕಂಪನಿಯ ಗಾರ್ಡಸಿಲ್ ಲಸಿಕೆಯನ್ನು ಪೂರೈಸಲಾಗುತ್ತದೆ.
  • ಜನನ ಪ್ರಮಾಣಪತ್ರ, ಆಧಾರ್ ಅಥವಾ ಪಡಿತರ ಚೀಟಿಯಂತಹ ಸರ್ಕಾರಿ ಗುರುತಿನ ಚೀಟಿಯ ಮೇಲೆ ನಮೂದಾಗಿರುವ ಜನ್ಮ ದಿನಾಂಕದ ಆಧಾರದಲ್ಲಿ ವಯಸ್ಸನ್ನು ನಿರ್ಧರಿಸಿ ಲಸಿಕೆಯನ್ನು ವಿತರಿಸಲಾಗುತ್ತದೆ.
  • ಈ ಲಸಿಕೆಯು ಜಗತ್ತಿನಾದ್ಯಂತ ವ್ಯಾಪಕವಾಗಿ ಸಂಶೋಧನೆಗೆ ಒಳಪಟ್ಟಿದ್ದು, ಶೇ 93 100ರಷ್ಟು ಪರಿಣಾಮಕಾರಿಯಾಗಿ ಕ್ಯಾನ್ಸರ್ ತಡೆಗಟ್ಟುತ್ತದೆ ಎಂದು ದೃಢಪಟ್ಟಿದೆ.
  • ‘ಶಿಫಾರಸು ಮಾಡಲಾದ ನಿರ್ದಿಷ್ಟ ವಯೋಮಾನದ ಹೆಣ್ಣುಮಕ್ಕಳಿಗೆ ಈ ಲಸಿಕೆ ನೀಡಿದಲ್ಲಿ ಗರ್ಭಕಂಠ ಕ್ಯಾನ್ಸರ್‌ನಿಂದ ದೀರ್ಘಕಾಲದವರೆಗೆ ರಕ್ಷಣೆ ಪಡೆಯಬಹುದು ಎಂದು ಜಾಗತಿಕ ಮತ್ತು ಭಾರತೀಯ ವೈಜ್ಞಾನಿಕ ಸಾಕ್ಷ್ಯಗಳು ದೃಢಪಡಿಸಿವೆ’ ಎಂದು ಮೂಲಗಳು ತಿಳಿಸಿವೆ.
  • ಈ ಲಸಿಕೆ ವಿತರಣೆಗೆ 2006ರಲ್ಲಿ ಪರವಾನಗಿ ಲಭಿಸಿದ್ದು, ಈವರೆಗೆ ಜಗತ್ತಿನಾದ್ಯಂತ 50 ಕೋಟಿ ಡೋಸ್ ಪೂರೈಕೆ ಮಾಡಲಾಗಿದೆ.
  • ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024ರ ಬಜೆಟ್ ಭಾಷಣದಲ್ಲಿ ಎಚ್‌.ಪಿವಿ ಲಸಿಕೆ ಅಭಿಯಾನದ ಬಗ್ಗೆ ಘೋಷಣೆ ಮಾಡಿದ್ದರು.

ಪತ್ರಿಕೆ-V: ಸಾಮಾನ್ಯ ಅಧ್ಯಯನ-4

ನೈತಿಕ ಪ್ರಕರಣ ಅಧ್ಯಯನ (Ethics Case Study) – ಕೊಪ್ಪಳ ಜಿಲ್ಲೆಯ ಕಾರ್ಖಾನೆ ವಿವಾದ
ಹಿನ್ನಲೆ (Background):

ಕೊಪ್ಪಳ ಜಿಲ್ಲೆಯ ಒಂದು ಗ್ರಾಮದಲ್ಲಿ ಸ್ಥಾಪನೆಯಾಗುತ್ತಿರುವ ಕೈಗಾರಿಕಾ ಘಟಕ (ಕಾರ್ಖಾನೆ) ಕುರಿತಾಗಿ ಸ್ಥಳೀಯ ಜನರಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಕಾರ್ಖಾನೆ ಸ್ಥಾಪನೆಯಿಂದ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಎಂಬುದು ಸರ್ಕಾರದ ವಾದ. ಆದರೆ ಸ್ಥಳೀಯ ರೈತರು ಹಾಗೂ ಗ್ರಾಮಸ್ಥರು, ಕಾರ್ಖಾನೆಯಿಂದ ಪರಿಸರ ಮಾಲಿನ್ಯ, ಕೃಷಿ ಭೂಮಿಗೆ ಹಾನಿ, ನೀರಿನ ಮೂಲಗಳ ಮೇಲೆ ಒತ್ತಡ ಮತ್ತು ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಪ್ರತಿಭಟನೆಗಳು ಶಾಂತಿಯುತವಾಗಿ ಆರಂಭವಾದರೂ, ಕ್ರಮೇಣ ಉದ್ವಿಗ್ನತೆಗೆ ತಿರುಗುವ ಲಕ್ಷಣಗಳು ಕಾಣಿಸುತ್ತಿವೆ. ಸ್ಥಳೀಯ ಆಡಳಿತಾಧಿಕಾರಿಯಾಗಿ ನೀವು ಈ ವಿಷಯವನ್ನು ನಿರ್ವಹಿಸಬೇಕಾದ ಜವಾಬ್ದಾರಿಯನ್ನು ಹೊಂದಿದ್ದೀರಿ. ಒಂದು ಕಡೆ ಅಭಿವೃದ್ಧಿ ಮತ್ತು ಕೈಗಾರಿಕೀಕರಣದ ಅಗತ್ಯ, ಮತ್ತೊಂದು ಕಡೆ ಪರಿಸರ ಸಂರಕ್ಷಣೆ, ಜನರ ಜೀವನೋಪಾಯ ಮತ್ತು ಸಾರ್ವಜನಿಕ ಶಾಂತಿ – ಇವುಗಳ ನಡುವೆ ಸಮತೋಲನ ಸಾಧಿಸುವುದು ನಿಮ್ಮ ಮುಂದೆ ಇರುವ ಸವಾಲಾಗಿದೆ.

ಪ್ರಮುಖ ನೈತಿಕ ಪ್ರಶ್ನೆಗಳು (Ethical Issues)
1.ಆರ್ಥಿಕ ಅಭಿವೃದ್ಧಿ vs ಪರಿಸರ ಸಂರಕ್ಷಣೆ
2.ಉದ್ಯೋಗ ಸೃಷ್ಟಿ vs ಆರೋಗ್ಯ ಮತ್ತು ಜೀವನೋಪಾಯ ರಕ್ಷಣೆ
3.ಸಾರ್ವಜನಿಕ ಹಿತಾಸಕ್ತಿ vs ಖಾಸಗಿ ಹೂಡಿಕೆದಾರರ ಲಾಭ
4.ಕಾನೂನು ಪಾಲನೆ vs ರಾಜಕೀಯ/ಆರ್ಥಿಕ ಒತ್ತಡ

ಪಾಲುದಾರರು (Stakeholders)
ಸ್ಥಳೀಯ ರೈತರು ಮತ್ತು ಗ್ರಾಮಸ್ಥರು
ಕಾರ್ಖಾನೆ ಸ್ಥಾಪಿಸುವ ಕಂಪನಿ
ರಾಜ್ಯ ಸರ್ಕಾರ
ಸ್ಥಳೀಯ ಆಡಳಿತ ಮತ್ತು ಪೊಲೀಸ್ ಇಲಾಖೆ
ಪರಿಸರ ನಿಯಂತ್ರಣ ಮಂಡಳಿ
ನಾಗರಿಕ ಸಮಾಜ ಸಂಘಟನೆಗಳು

ನಿಮ್ಮ ಮುಂದಿರುವ ಆಯ್ಕೆಗಳು (Options)
ಆಯ್ಕೆ 1:
ಕಾರ್ಖಾನೆ ಸ್ಥಾಪನೆಗೆ ತಕ್ಷಣ ಅನುಮತಿ ನೀಡುವುದು.

ಆಯ್ಕೆ 2:
ಎಲ್ಲಾ ಅನುಮತಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಪರಿಸರ ಪರಿಣಾಮ ಅಧ್ಯಯನ (EIA) ಮರುಪರಿಶೀಲನೆ ಮಾಡುವುದು.

ಆಯ್ಕೆ 3:
ಸ್ಥಳೀಯ ಜನರೊಂದಿಗೆ ಸಂವಾದ ನಡೆಸಿ, ಪರಿಹಾರ ಮತ್ತು ಪರಿಹಾರ ಕ್ರಮಗಳೊಂದಿಗೆ ಸಮ್ಮತ ಪರಿಹಾರ ರೂಪಿಸುವುದು.

Sources: Prajavani, Vijayavani

ಕೆಎಎಸ್ ಪ್ರಚಲಿತ ವಿದ್ಯಮಾನಗಳು

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು

ಇಂದಿನಿಂದ ಶೇ 10ರಷ್ಟು ಸುಂಕ
ಸಂದರ್ಭ: ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಸರಕುಗಳ ಮೇಲೆ ಅಮೆರಿಕ ವಿಧಿಸಿರುವ ಶೇ 10ರಷ್ಟು ಹೆಚ್ಚುವರಿ ಸುಂಕವು ಜಾರಿಗೆ ಬರಲಿದೆ. ಈ ಆದೇಶವು 150 ದಿನಗಳವರೆಗೆ ಜಾರಿಯಲ್ಲಿ ಇರಲಿದೆ.

  • ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫೆಬ್ರುವರಿ 24ರಿಂದ ಎಲ್ಲ ದೇಶಗಳಿಂದ ಅಮರಿಕಕ್ಕೆ ಪ್ರವೇಶಿಸುವ ಸರಕುಗಳ ಮೇಲೆ ಶೇ 15ರಷ್ಟು ಸುಂಕ ವಿಧಿಸುವುದಾಗಿ ಹೇಳಿದ್ದಾರೆ. ಆದರೆ, ಇದರ ಅಧಿಕೃತ ಆದೇಶ ಇದುವರೆಗೆ ಜಾರಿ ಆಗಿಲ್ಲ.
  • ಅಮೆರಿಕದ ಸುಪ್ರೀಂ ಕೋರ್ಟ್, ಡೊನಾಲ್ಡ್ ಟ್ರಂಪ್ ಅವರು ಅಮೆರಿಕಕ್ಕೆ ಪ್ರವೇಶಿಸುವ ಸರಕುಗಳ ಮೇಲೆ ಈ ಹಿಂದೆ ವಿಧಿಸಿದ್ದ ಪ್ರತಿಸುಂಕವನ್ನು ಅನೂರ್ಜಿತಗೊಳಿಸಿದೆ. ತೀರ್ಪಿನ ಬಳಿಕ ಟ್ರಂಪ್ ಅವರು ಎಲ್ಲ ದೇಶಗಳಿಂದ ಆಮದಾಗುವ ಸರಕುಗಳ ಮೇಲೆ ಶೇ 10ರಷ್ಟು ಸುಂಕ ವಿಧಿಸಿದ್ದರು. ಆದರೆ, ಈ ಆದೇಶ ಹೊರಡಿಸಿದ ಕೆಲವೇ ಗಂಟೆಗಳಲ್ಲಿ ಸುಂಕವನ್ನು ಶೇ 15ಕ್ಕೆ ಹೆಚ್ಚಳ ಮಾಡಿದ್ದಾರೆ.
  • 150 ದಿನಗಳ ನಂತರ ಏನಾಗುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲದಿರುವುದರಿಂದ ಈ ಸುಂಕದ ಬಗ್ಗೆಯೂ ಗೊಂದಲವಿದೆ.

ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು

ನಲಿ-ಕಲಿ ರದ್ದು ಶಾಲೆಗಳಿಗೆ ಮಾರಕ?
ಸಂದರ್ಭ: ಪ್ರಾಥಮಿಕ ಶಾಲಾ ಶಿಕ್ಷಕರ ಮನವಿಯಂತೆ ರಾಜ್ಯದಲ್ಲಿ ನಲಿ-ಕಲಿ ಯೋಜನೆಯನ್ನು ರದ್ದುಗೊಳಿಸುವ ಪ್ರಕ್ರಿಯೆ ಸರ್ಕಾರದ ಹಂತದಲ್ಲಿ ನಡೆಯುತ್ತಿದೆ.

  • ರಾಜ್ಯದಲ್ಲಿ ಅಂದಾಜು 6,500ಕ್ಕೂ ಹೆಚ್ಚಿನ ಏಕಶಿಕ್ಷಕ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಇವೆಲ್ಲವೂ ಸಾಮಾನ್ಯ ವಾಗಿ ಮೂಲಸೌಕರ್ಯ ಕಲ್ಪಿಸದ ಕುಗ್ರಾಮಗಳಲ್ಲಿಯೇ ಕಾರ್ಯ ನಿರ್ವಹಿಸುತ್ತಿವೆ.
  • ಪ್ರಸ್ತುತ 1ರಿಂದ 3ನೇ ತರಗತಿವರೆಗೂ ಒಂದೇ ಕೊಠಡಿಯಲ್ಲಿ ಮೂರೂ ತರಗತಿಗಳ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಇದೇ ಕಾರಣಕ್ಕೆ ಪಾಲಕರು ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಮೂರು ವರ್ಷ ಒಂದೇ ರೀತಿಯ ಪಾಠ-ಪ್ರವಚನ ನಡೆಯಲಿವೆ. ಮಕ್ಕಳ ಕಲಿಕೆ, ಕೌಶಲದಲ್ಲಿ ಬೆಳವಣಿಗೆಯಾಗುವುದಿಲ್ಲವೆಂಬ ಕಾರಣಕ್ಕಾಗಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ.

ಪತ್ರಿಕೆ-I: ಪ್ರಬಂಧಗಳು

ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ

“ಎಐ ಇಂಪ್ಯಾಕ್ಟ್ ಶೃಂಗಸಭೆ’ ಕೃತಕ ಬುದ್ಧಿಮತ್ತೆ ಕ್ಷೇತ್ರದ ಚಟುವಟಿಕೆಗಳಿಗೆ ಉತ್ತೇಜನ ನೀಡುವಂತಿದೆ ಹಾಗೂ ಆ ಕ್ಷೇತ್ರದಲ್ಲಿನ ಚರ್ಚೆಗಳಲ್ಲಿ ಭಾರತೀಯರಿಗೆ ವೇದಿಕೆ ದೊರಕಿಸುವ ಪ್ರಯತ್ನವಾಗಿದೆ, ವಿವರಿಸಿ.

ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ

ಮಿಷನರಿ ಮುದ್ರಣಾಲಯಗಳಿಂದ ಆಧುನಿಕ ಡಿಜಿಟಲ್ ಮುದ್ರಣವರೆಗೆ ಕನ್ನಡ ಮುದ್ರಣೋದ್ಯಮದ ಇತಿಹಾಸ ಅಭಿವೃದ್ಧಿ ಮತ್ತು ಪಯಣ ಕುರಿತು ಮುದ್ರಣ ತಂತ್ರಜ್ಞಾನದ ಮಹತ್ವ ಚರ್ಚಿಸಿ.

ಪತ್ರಿಕೆ-II: ಸಾಮಾನ್ಯ ಅಧ್ಯಯನ-1

ರಾಜಾಜಿ ಪ್ರತಿಮೆ ಅನಾವರಣ
ಸಂದರ್ಭ: ಸ್ವತಂತ್ರ ಭಾರತದ ಮೊದಲ ಮತ್ತು ಏಕೈಕ ಭಾರತೀಯ ಗವರ್ನರ್ ಜನರಲ್, ಚಕ್ರವರ್ತಿ ರಾಜಗೋಪಾಲಾಚಾರಿ (ರಾಜಾಜಿ) ಅವರ ಪ್ರತಿಮೆಯನ್ನು ರಾಷ್ಟ್ರಪತಿ ದೌಪದಿ ಮುರ್ಮುಅವರು ರಾಷ್ಟ್ರಪತಿ ಭವನದಲ್ಲಿ ಅನಾವರಣಗೊಳಿಸಿದರು.

  • ವಸಾಹತುಶಾಹಿ ಕುರುಹುಗಳನ್ನು ತೊಡೆದುಹಾಕಲು ತೆಗೆದುಕೊಳ್ಳಲಾಗುತ್ತಿರುವ ಸರಣಿ ಕ್ರಮಗಳ ಭಾಗವಾಗಿ ಈ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ರಾಷ್ಟ್ರಪತಿ ಕಚೇರಿ ಹೇಳಿದೆ.
  • ರಾಷ್ಟ್ರ ಪತಿ ಭವನದ ಅಶೋಕ ಮಂಟಪದ ಬಳಿಯಿರುವ ಭವ್ಯವಾದ ತೆರೆದ ಮೆಟ್ಟಿಲುಗಳಲ್ಲಿ ಇದ್ದ. ನವ ದೆಹಲಿಯ ಹಲವಾರು ಕಟ್ಟಡಗಳ ಪ್ರಮುಖ ವಾಸ್ತುಶಿಲ್ಪಿ ಎಡ್ರಿನ್ ಲಟೈನ್ಸ್ ಅವರ ಪ್ರತಿಮೆಯನ್ನು ತೆರವುಗೊಳಿಸಿ. ರಾಜಗೋಪಾಲಾಚಾರಿ ಅವರ ಪ್ರತಿಮೆಯನ್ನು ಇಡಲಾಗಿದೆ.
  • ವಸಾಹತುಶಾಹಿ ಮನಃಸ್ಥಿತಿಯ ಕುರುಹುಗಳನ್ನು ತೊಡೆದುಹಾಕಲು ಮತ್ತು ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಸಂಪ್ರದಾಯಗಳ ಶ್ರೀಮಂತಿಕೆಯನ್ನು ಹೆಮ್ಮೆಯಿಂದ ಅಳವಡಿಸಿಕೊಳ್ಳಲು ಹಾಗೂ ಭಾರತಮಾತೆಗೆ ಅಸಾಧಾರಣ ಸೇವೆ ಸಲ್ಲಿಸಿದವರನ್ನು ಗೌರವಿಸಲು ತೆಗೆದುಕೊಳ್ಳುತ್ತಿ-ರುವ ಸರಣಿ ಕ್ರಮಗಳ ಭಾಗವಾಗಿ ಪ್ರತಿಮೆ ಅನಾವರಣ ಮಾಡಲಾಗಿದೆ’ಎಂದು ರಾಷ್ಟ್ರಪತಿ ಕಚೇರಿ ‘ಎಕ್ಸ್’ ಮಾಡಿದೆ.

3.25 ಲಕ್ಷ ಕೋಟಿ ದಾಟಿದ ಜೈವಿಕ ಆರ್ಥಿಕತೆ
ಸಂದರ್ಭ: ರಾಜ್ಯ ಜೈವಿಕ ಆರ್ಥಿಕತೆಯು 2025ರಲ್ಲಿ 3,25,360 ಕೋಟಿ ರೂ.ಗಳಿಗೆ ತಲುಪಿದೆ. ಸಂಶೋಧನೆ ನೇತೃತ್ವದ ಜತೆಗೆ ತಯಾರಿಕೆ, ವಿತರಣೆ, ಸೇವೆಗಳವರೆಗೆ ಸರಪಳಿ ಒಳಗೊಂಡಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.

  • ಎಲೆಕ್ಟ್ರಾನಿಕ್ಸ್, ಐಟಿ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ (ಕೆಐಟಿಎಸ್), ಜೈವಿಕ ತಂತ್ರಜ್ಞಾನ ಉದ್ಯಮಗಳ ಸಂಘದ (ಎಬಿಎಲ್‌ಇ) ಸಹಯೋಗದಲ್ಲಿ ಸಿದ್ಧಪಡಿಸಿರುವ ವರದಿಯಲ್ಲಿ ಈ ಸಂಗತಿ ಉಲ್ಲೇಖವಾಗಿದೆ.
  • ದೇಶದ ಅತ್ಯಂತ ಪ್ರಬುದ್ಧ ಮತ್ತು ನಾವೀನ್ಯತೆ ಆಧಾರಿತ ಜೈವಿಕ ತಂತ್ರಜ್ಞಾನ ವ್ಯವಸ್ಥೆಯಾಗಿ ರಾಜ್ಯ ಸುಸ್ಥಿರ ರೀತಿಯಲ್ಲಿ ಮುಂಚೂಣಿ ಸ್ಥಾನ ಕಾಯ್ದುಕೊಂಡಿದೆ.
  • ಜೈವಿಕ ತಂತ್ರಜ್ಞಾನವು ಪ್ರಯೋಗಾಲಯಗಳಿಗೆ ಸೀಮಿತವಾಗಿಲ್ಲ. ಆರ್ಥಿಕ ಬೆಳವಣಿಗೆ, ಕೈಗಾರಿಕಾ ನಾವೀನ್ಯತೆ ಮತ್ತು ಸಾಮಾಜಿಕ ಪ್ರಭಾವದ ಕೇಂದ್ರ ಚಾಲಕ ಶಕ್ತಿಯಾಗಿ ಅಭಿವೃದ್ಧಿಗೊಳ್ಳುತ್ತಾ ಮುನ್ನಡೆಯುತ್ತಿದೆ.
  • ಡೀಪ್-ಟೆಕ್ ಸ್ಟಾರ್ಟ್‌ ಅಪ್‌ಗಳಿಗೆ ಬೆಂಬಲ, ನಾವೀನ್ಯತೆ ಮೂಲಸೌಕರ್ಯಗಳ ಬಲಪಡಿಸುವಿಕೆ ಮತ್ತು ಬೆಳವಣಿಗೆಯು ಬೆಂಗಳೂರು ಆಚೆಗಿನ ಪ್ರತಿಯೊಂದು ಪ್ರದೇಶಕ್ಕೂ ತಲುಪುವಂತೆ ನೋಡಿಕೊಳ್ಳುವ ಮೂಲಕ ಸಮಗ್ರ ಜೈವಿಕ ಉತ್ಪಾದನಾ ಆರ್ಥಿಕತೆ ನಿರ್ಮಿಸುವುದರತ್ತ ಸರ್ಕಾರವು ಹೆಚ್ಚು ಗಮನನೀಡಬೇಕಿದೆ.

ಪತ್ರಿಕೆ-III: ಸಾಮಾನ್ಯ ಅಧ್ಯಯನ-2

ಹೊಸ ನೀತಿ ಅನಾವರಣಗೊಳಿಸಿದ ಗೃಹ ಸಚಿವಾಲಯ: ಉಗ್ರರ ನಿಗ್ರಹಕ್ಕೆಪ್ರಹಾರ್

ಸಂದರ್ಭ: ಭಯೋತ್ಪಾದಕಚಟುವಟಿಕೆಗಳನ್ನುಹತ್ತಿಕ್ಕಲು ಮತ್ತುಉಗ್ರರದಾಳಿಗೆ ತಕ್ಕ ಪ್ರತಿಕ್ರಿಯೆ ನೀಡುವ ಕಾರ್ಯತಂತ್ರ ಒಳಗೊಂಡ ದೇಶದ ಮೊತ್ತ ಮೊದಲ ಭಯೋತ್ಪಾದಕ ನಿಗ್ರಹನೀತಿ ‘ಪ್ರಹಾರ್’ ಅನ್ನುಕೇಂದ್ರಗೃಹಸಚಿವಾಲಯಅನಾವರಣಗೊಳಿಸಿದೆ.

  • ಪಹಲ್ಲಾಮ್ ಉಗ್ರ ದಾಳಿ ಬಳಿಕ ಭಯೋತ್ಪಾದನೆ ವಿಚಾರದಲ್ಲಿ ಶೂನ್ಯ ಸಹಿಷ್ಣುತೆ ನೀತಿ ಕಠಿಣಗೊಳಿಸಿರುವ ಕೇಂದ್ರ ಸರ್ಕಾರ, ದೇಶದ ಭದ್ರತೆಯನ್ನು ಸಮಗ್ರ ದಿಕ್ಕುಗಳಲ್ಲೂ ಬಲಪಡಿಸುವ ಉದ್ದೇಶದಿಂದ ‘ಪ್ರಹಾರ್’ ಹೆಸರಿನ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ನೀತಿಯನ್ನು ಬಿಡುಗಡೆ ಮಾಡಿದೆ. ಗಡಿಯಾಚೆಯ ಭಯೋತ್ಪಾದನೆ, ಸೈಬರ್ ದಾಳಿ, ಡೋಣ್‌ಗಳ ದುರ್ಬಳಕೆ ಹಾಗೂ ತಂತ್ರಜ್ಞಾನ ಬಳಸಿಕೊಂಡು ಅಪತ್ತು ಸೃಷ್ಟಿಸುವ ಪ್ರಯತ್ನಗಳನ್ನು ಮಟ್ಟಹಾಕುವ ನಿಟ್ಟಿನಲ್ಲಿ ನೂತನ ನೀತಿ ರೂಪಿಸಲಾಗಿದೆ.
  • ಕೇಂದ್ರ ಸರ್ಕಾರದ ಈ ಕಾರ್ಯತಂತ್ರವು ಬದಲಾಗು ತ್ತಿರುವ ಭಯೋತ್ಪಾದನೆಯ ಸ್ವರೂಪವನ್ನು ಎದುರಿಸಲು ಸಮಗ್ರ ಚೌಕಟ್ಟನ್ನು ರೂಪಿಸಿದೆ. ಕೇಂದ್ರ ಗೃಹ ಸಚಿವಾಲಯವು ಬಿಡುಗಡೆ ಮಾಡಿರುವ ಈ ಹೊಸ ನೀತಿಯು ಭಯೋ ತ್ಪಾದನೆಯನ್ನು ಯಾವುದೇ ಧರ್ಮ, ಜನಾಂಗ ಅಥವಾ ರಾಷ್ಟ್ರೀಯತೆಗೆ ಜೋಡಿಸದೆ, ಹಿಂಸಾಚಾರಕ್ಕೆ ಯಾವುದೇ ಸಮರ್ಥನೆ ಇಲ್ಲ ಎಂಬ ದೃಢ ನಿಲುವನ್ನು ಪ್ರತಿಪಾದಿಸಿದೆ. ಗೃಹ ಸಚಿವಾಲಯದ ವರದಿ ಪ್ರಕಾರ, ಗಡಿಯಾಚೆಗಿನ ಪ್ರಾಯೋಜಿತ ಭಯೋತ್ಪಾದನೆ ಭಾರತಕ್ಕೆ ದೊಡ್ಡ ಸವಾಲಾಗಿದೆ. ಅಲ್‌ಖೈದಾ ಮತ್ತು ಐಸಿಸ್‌ನಂಥ ಜಾಗತಿಕ ಸಂಘಟನೆಗಳು ‘ಸ್ವೀಪರ್ ಸೆಲ್’ಗಳ ಮೂಲಕ ಹಿಂಸಾಚಾರಕ್ಕೆ ಪ್ರಚೋದನೆ ನೀಡಲು ಯತ್ನಿಸುತ್ತಿವೆ.
  • ಭಯೋತ್ಪಾದನೆ ನಿಗ್ರಹ ಕಾರ್ಯದಲ್ಲಿ ತೊಡಗಿರುವ ಏಜೆನ್ಸಿಗಳ ನಡುವೆ ಸಮನ್ವಯತೆ ಸಾಧಿಸುವುದು, ತನಿಖೆಯ ಪ್ರತಿಯೊಂದು ಹಂತದಲ್ಲೂ ಕಾನೂನು ತಜ್ಞರ ಸೇವೆ ಲಭ್ಯವಾಗುವಂತೆ ಮಾಡುವುದು ಹಾಗೂ ಭಯೋತ್ಪಾದಕ ರಿಗೆ ಹಣಕಾಸಿನ ನೆರವು, ಶಸ್ತ್ರಾಸ್ತ್ರ ಗಳು ಲಭ್ಯವಾಗುವುದನ್ನು ತಡೆಯುವ ಗುರಿಯನ್ನು ಈನೀತಿ ಹೊಂದಿದೆ.
  • ಗೃಹ ಸಚಿವಾಲಯ ಸಿದ್ಧಪಡಿಸಿರುವ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ನೀತಿ ಮತ್ತು ಕಾರ್ಯತಂತ್ರ ನೀತಿಯು, ‘ದೇಶದ ಒಳಗಿನ ಮತ್ತು ಹೊರಗಿನ ಕೆಲವು ಶಕ್ತಿಗಳು ಡೋನ್‌ಗಳು ಹಾಗೂ ರೊಬಾಟಿಕ್ ಅನ್ನು ಭಯೋತ್ಪಾದನೆಗಾಗಿ ದುರುಪಯೋಗಪಡಿಸಿಕೊಳ್ಳುವುದು’ ಕಳವಳಕ್ಕೆ ಕಾರಣವಾಗಿದೆ ಎಂದು ಹೇಳಿದೆ.
  • ಪಹಲ್ಲಾಮ್ ಉಗ್ರ ದಾಳಿ ಬಳಿಕ ಭಯೋತ್ಪಾದನೆ ವಿಚಾರದಲ್ಲಿ ಶೂನ್ಯ ಸಹಿಷ್ಣುತೆ ನೀತಿ ಕಠಿಣಗೊಳಿಸಿರುವ ಕೇಂದ್ರ ಸರ್ಕಾರ, ದೇಶದ ಭದ್ರತೆಯನ್ನು ಸಮಗ್ರ ದಿಕ್ಕುಗಳಲ್ಲೂ ಬಲಪಡಿಸುವ ಉದ್ದೇಶದಿಂದ ‘ಪ್ರಹಾರ್’ ಹೆಸರಿನ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ನೀತಿಯನ್ನು ಬಿಡುಗಡೆ ಮಾಡಿದೆ. ಗಡಿಯಾಚೆಯ ಭಯೋತ್ಪಾದನೆ, ಸೈಬರ್ ದಾಳಿ, ಡೋಣ್‌ಗಳ ದುರ್ಬಳಕೆ ಹಾಗೂ ತಂತ್ರಜ್ಞಾನ ಬಳಸಿಕೊಂಡು ಅಪತ್ತು ಸೃಷ್ಟಿಸುವ ಪ್ರಯತ್ನಗಳನ್ನು ಮಟ್ಟಹಾಕುವ ನಿಟ್ಟಿನಲ್ಲಿ ನೂತನ ನೀತಿ ರೂಪಿಸಲಾಗಿದೆ.
  • ಕೇಂದ್ರ ಸರ್ಕಾರದ ಈ ಕಾರ್ಯತಂತ್ರವು ಬದಲಾಗು ತ್ತಿರುವ ಭಯೋತ್ಪಾದನೆಯ ಸ್ವರೂಪವನ್ನು ಎದುರಿಸಲು ಸಮಗ್ರ ಚೌಕಟ್ಟನ್ನು ರೂಪಿಸಿದೆ. ಕೇಂದ್ರ ಗೃಹ ಸಚಿವಾಲಯವು ಬಿಡುಗಡೆ ಮಾಡಿರುವ ಈ ಹೊಸ ನೀತಿಯು ಭಯೋ ತ್ಪಾದನೆಯನ್ನು ಯಾವುದೇ ಧರ್ಮ, ಜನಾಂಗ ಅಥವಾ ರಾಷ್ಟ್ರೀಯತೆಗೆ ಜೋಡಿಸದೆ, ಹಿಂಸಾಚಾರಕ್ಕೆ ಯಾವುದೇ ಸಮರ್ಥನೆ ಇಲ್ಲ ಎಂಬ ದೃಢ ನಿಲುವನ್ನು ಪ್ರತಿಪಾದಿಸಿದೆ. ಗೃಹ ಸಚಿವಾಲಯದ ವರದಿ ಪ್ರಕಾರ, ಗಡಿಯಾಚೆಗಿನ ಪ್ರಾಯೋಜಿತ ಭಯೋತ್ಪಾದನೆ ಭಾರತಕ್ಕೆ ದೊಡ್ಡ ಸವಾಲಾಗಿದೆ. ಅಲ್‌ಖೈದಾ ಮತ್ತು ಐಸಿಸ್‌ನಂಥ ಜಾಗತಿಕ ಸಂಘಟನೆಗಳು ‘ಸ್ವೀಪರ್ ಸೆಲ್’ಗಳ ಮೂಲಕ ಹಿಂಸಾಚಾರಕ್ಕೆ ಪ್ರಚೋದನೆ ನೀಡಲು ಯತ್ನಿಸುತ್ತಿವೆ.
  • ಸವಾಲುಗಳ ಎಚ್ಚರಿಕೆ: ವಿಶೇಷವಾಗಿ ಪಂಜಾಬ್ ಮತ್ತು ಜಮ್ಮು-ಕಾಶ್ಮೀರದಲ್ಲಿ ಡೋನ್ ತಂತ್ರಜ್ಞಾನದ ಮೂಲಕ ಶಸ್ತ್ರಾಸ್ತ್ರ ಮತ್ತು ಮಾದಕ ವಸ್ತುಗಳ ಸಾಗಾಟ ನಡೆಯುತ್ತಿದೆ. ಭಯೋತ್ಪಾದಕರು ಸಂವಹನಕ್ಕಾಗಿ ಎನ್‌ಕ್ರಿಪ್ಪೆಡ್ ಆ್ಯಪ್‌ಗಳು, ಡಾರ್ಕ್ ವೆಬ್ ಮತ್ತು ಕ್ರಿಪ್ಲೋ ವ್ಯಾಲೆಟ್‌ಗಳನ್ನು ಬಳಸುತ್ತಿರುವುದು ಭದ್ರತಾ ಸಂಸ್ಥೆಗಳಿಗೆ ಹೊಸ ಸವಾಲಾಗಿದೆ. ಅಲ್ಲದೆ, ಸೈಬರ್ ದಾಳಿಗಳು ಮತ್ತು ರಾಹಾಯವಿಕ ವಾಡ ಡಿಜಿಟಲ್ ಶಸ್ತ್ರಾಸ್ತ್ರಗಳ
  • ಅಂತಾರಾಷ್ಟ್ರೀಯ ಸಹಕಾರ: ಭಯೋತ್ಪಾದನೆ ಜಾಗತಿಕ ಸಮಸ್ಯೆ ಆಗಿರುವುದರಿಂದ, ಇತರ ರಾಷ್ಟ್ರಗಳೊಂದಿಗೆ ಗುಪ್ತಚರ ಮಾಹಿತಿ ಹಂಚಿಕೆ ಮತ್ತು ಅಪರಾಧಿಗಳ ಹಸ್ತಾಂತರ ಪ್ರಕ್ರಿಯೆ ವೇಗಗೊಳಿಸಲು ಭಾರತ ನಿರ್ಧರಿಸಿದೆ.

ದತ್ತಾಂಶ ಹಂಚಿಕೆ: ಬಳಕೆದಾರರ ಆಯ್ಕೆಗೆ
ಸಂದರ್ಭ: ಮೆಟಾ ಪ್ಲಾಟ್‌ಫಾರ್ಮ್ಸ್ ಅಥವಾ ಮೆಟಾ ಸಮೂಹದ ಇತರ ಕಂಪನಿಗಳೊಂದಿಗೆ ದತ್ತಾಂಶ ಹಂಚಿಕೊಳ್ಳುವ ಆಯ್ಕೆಯನ್ನು ಬಳಕೆದಾರರಿಗೇ ಬಿಡಬೇಕು ಎಂದು ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ನೀಡಿರುವ ಆದೇಶವನ್ನು ಜಾರಿಗೆ ತರುವುದಾಗಿ ವಾಟ್ಸ್ಆ್ಯಪ್, ಸುಪ್ರೀಂ ಕೋರ್ಟ್‌ ತಿಳಿಸಿದೆ.

  • ಸಿಸಿಐ ಶಿಫಾರಸು ಗಮನದಲ್ಲಿ ಇಟ್ಟುಕೊಂಡು, ವಾಟ್ಸ್ಆ್ಯಪ್ ಮತ್ತು ಅದರ ಮಾತೃಸಂಸ್ಥೆ ಮೆಟಾ ಪ್ಲಾಟ್‌ಫಾರ್ಮ್ನಲ್ಲಿ ಜಾಹೀರಾತುಗಳ ಮೇಲೆ ಐದು ವರ್ಷ ನಿಷೇಧ ಹೇರಬೇಕು ಎಂಬ ಅರ್ಜಿಯ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಈ ಎರಡೂ ಕಂಪನಿಗಳಿಗೆ ಸಿಜೆಐ ನೇತೃತ್ವದ ಪೀಠವು ಸೂಚಿಸಿತು.

ಒಂದು ದೇಶ ಒಂದು ಮತಪಟ್ಟಿ: ಚುನಾವಣಾ ಆಯೋಗದಿಂದ ಮಹತ್ವದ ಹೆಜ್ಜೆ
ಸಂದರ್ಭ: ದೇಶಾದ್ಯಂತ ಚುನಾವಣೆಗಳಲ್ಲಿ ಪಾರದರ್ಶಕತೆ ಮತ್ತು ಏಕರೂಪತೆ ತರುವ ನಿಟ್ಟಿನಲ್ಲಿ ಕೇಂದ್ರ ಚುನಾವಣಾ ಆಯೋಗವು ದೆಹಲಿಯ ಭಾರತ ಮಂಟಪದಲ್ಲಿ ರಾಜ್ಯ ಚುನಾವಣಾ ಆಯುಕ್ತರ ರಾಷ್ಟ್ರೀಯ ದುಂಡುಮೇಜಿನ ಸಮ್ಮೇಳನವನ್ನು ಆಯೋಜಿಸಿದ್ದು, ಬರೋಬ್ಬರಿ 27 ವರ್ಷಗಳ ನಂತರ ಇಂಥದ್ದೊಂದು ಬೃಹತ್ ಸಭೆ ನಡೆಯುತ್ತಿರುವುದು ವಿಶೇಷ.

  • ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಭೆಯ ಪ್ರಮುಖ ಉದ್ದೇಶ ‘ಒಂದೇ ಮತದಾರರ ಪಟ್ಟಿ’ ಪರಿಕಲ್ಪನೆಯನ್ನು ಜಾರಿಗೆ ತರುವುದಾಗಿದೆ ಎನ್ನಲಾಗಿದೆ.
  • ಪ್ರಸ್ತುತ, ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಿಗೆ ಕೇಂದ್ರ ಆಯೋಗವು ಪಟ್ಟಿ ಸಿದ್ಧಪಡಿಸಿದರೆ, ಪಂಚಾಯತ್ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ರಾಜ್ಯ ಚುನಾವಣಾ ಆಯೋಗಗಳು ಪ್ರತ್ಯೇಕ ಪಟ್ಟಿ ತಯಾರಿಸುತ್ತವೆ. ಇದರಿಂದ ಮತದಾರರ ಸಂಖ್ಯೆಯಲ್ಲಿ ವ್ಯತ್ಯಾಸಗಳು ಕಂಡುಬರುತ್ತಿದ್ದು, ಗೊಂದಲ ಸೃಷ್ಟಿಯಾಗುತ್ತಿದೆ. ಉದಾಹರಣೆಗೆ, ಉತ್ತರಪ್ರದೇಶದಲ್ಲಿ ಇತ್ತೀಚೆಗೆ ಇಂತಹ ವ್ಯತ್ಯಾಸಗಳು ಕಂಡುಬಂದಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ನಿರ್ಣಾಯಕ ಸಮಾವೇಶ:

  • ಈ ಸಭೆಯಲ್ಲಿ ‘ಇಸಿಐನೆಟ್’ ಎಂಬ ಡಿಜಿಟಲ್ ಫ್ಲ್ಯಾಟ್‌ಫಾರ್ಮ್ ಸೇರಿದಂತೆ ಹಲವು ತಾಂತ್ರಿಕ ಸುಧಾರಣೆಗಳನ್ನು ಪರಿಚಯಿಸಲಾಗುವುದು. ಅಲ್ಲದೆ, ಇವಿಎಂ ಯಂತ್ರಗಳ ಭದ್ರತೆ, ಪಾರದರ್ಶಕತೆ ಮತ್ತು ಮತದಾರರ ಅರ್ಹತೆ ಬಗ್ಗೆಯೂಸುದೀರ್ಘಟರ್ಟೆ ನಡೆಯಲಿದೆ.
  • 1950ರ ಜನತಾ ಪ್ರಾತಿನಿಧ್ಯ ಕಾಯ್ದೆಯಡಿ ಮತದಾರರ ಅರ್ಹತೆಯ ಮೇಲಿನ ತುಲನಾತ್ಮಕ ಅಭ್ಯಾಸಗಳ ಜತೆಗೆ ಎಲೆಕ್ಟ್ರಾನಿಕ್ ಮತಯಂತ್ರಗಳ ದೃಢತೆ, ಪಾರದರ್ಶಕತೆ ಮತ್ತು ಸುರಕ್ಷತೆಯ ಚರ್ಚೆಗಳು ಇದರಲ್ಲಿರಲಿವೆ.
  • ಒಟ್ಟು 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಚುನಾವಣಾ ಆಯುಕ್ತರು ಇದರಲ್ಲಿ ಭಾಗವಹಿಸಲಿದ್ದು, ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ಚುನಾವಣಾ ಪ್ರಕ್ರಿಯೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಈ ಸಮಾವೇಶ ನಿರ್ಣಾಯಕ ಎನ್ನಲಾಗಿದೆ.
  • ಭಾರತೀಯ ಚುನಾವಣಾ ಆಯೋಗವು ಲೋಕಸಭೆ, ವಿಧಾನಸಭೆ, ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿ ಚುನಾವಣಿಗಳಿಗೆ ಜವಾಬ್ದಾರರಾಗಿದ್ದರೆ, ಸಾಂವಿಧಾನಿಕ ನಿಬಂಧನೆಗಳಡಿ ರಚಿಸಲಾದ ರಾಜ್ಯ ಚುನಾವಣಾ ಆಯೋಗಗಳು ಪಂಚಾಯತ್‌ಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಮತದಾರರ ಪಟ್ಟಿ ಸಿದ್ಧಪಡಿಸುವ ಮತ್ತು ಅವುಗಳ ಚುನಾವಣೆಗಳನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿ ಹೊಂದಿವೆ.

ಪತ್ರಿಕೆ-IV: ಸಾಮಾನ್ಯ ಅಧ್ಯಯನ-3

ಅಪ್ಪೆಮಿಡಿ: ವಿಶಿಷ್ಟ ತಳಿಗಳ ಭಂಡಾರ ರಕ್ಷಣೆಗೆ ಕೂಗು
ಸಂದರ್ಭ: ಉತ್ತರ ಕನ್ನಡದ ಅಘನಾಶಿನಿ ನದಿ ಪಾತ್ರದಲ್ಲಿ ಕಂಡುಬರುವ ಅಪರೂಪದ ಅಪ್ಪೆಮಿಡಿ ಮಾವಿನ ವೈವಿಧ್ಯ ಸಂರಕ್ಷಣೆಗಾಗಿ ಈ ಪ್ರದೇಶವನ್ನು ಜೀವವೈವಿಧ್ಯ ಪರಂಪರೆ ತಾಣ’ ಎಂದು ಘೋಷಿಸಬೇಕು ಎಂದು ಪರಿಸರ ತಜ್ಞರು ಮತ್ತು ಪರಿಸರ ಪ್ರೇಮಿಗಳು ಕರ್ನಾಟಕ ಜೀವವೈವಿಧ್ಯ ಮಂಡಳಿಗೆ ಮನವಿ ಸಲ್ಲಿಸಿದ್ದಾರೆ.

  • 30 ಕಿ.ಮೀ ಉದ್ದದ ನದಿದಂದೆಯಲ್ಲಿನ ಅಪ್ಪೆಮಿಡಿ ವೈವಿಧ್ಯದ ರಕ್ಷಣೆ ಇದರ ಉದ್ದೇಶ.
  • ‘ಜೈವಿಕ ವೈವಿಧ್ಯ ಕಾಯ್ದೆ 2002ರ ಅನುಬಂಧ 37ರಡಿ ಈ ವಿಶಿಷ್ಟ ಅನುವಂಶಿಕ ಭಂಡಾರವನ್ನು ರಕ್ಷಿಸಬೇಕು’ ಹಕ್ಕೊತ್ತಾಯ ಮಂಡಿಸಿದ್ದಾರೆ. ‘ಶಿರಸಿ ಮತ್ತು ಸಿದ್ದಾಪುರ ತಾಲ್ಲೂಕು ವ್ಯಾಪ್ತಿಯ ಸರಕುಳಿಯಿಂದ ಉಂಚಳ್ಳಿ ಜಲಪಾತದವರೆಗಿನ ನದಿ ದಂಡೆಯ ಎರಡೂ ಬದಿಯ 100 ಮೀಟರ್ ವ್ಯಾಪ್ತಿಯನ್ನು ಈ ಸಂರಕ್ಷಿತ ವಲಯದಲ್ಲಿ ಸೇರಿಸಬೇಕು’ ಎಂದು ಕೋರಿದ್ದಾರೆ.
  • ‘ಅಘನಾಶಿನಿ ಯಾವ ಅಣೆಕಟ್ಟುಗಳಿಲ್ಲದ ಮುಕ್ತ ಹರಿವಿನ ನದಿ. ಇಲ್ಲಿನ ವಿಶಿಷ್ಟ ಪರಿಸರ ವ್ಯವಸ್ಥೆಯಲ್ಲಿ ಅನಂತ ಭಟ್ಟನ ಅಪ್ಪೆ, ಜೀರಿಗೆ ಮಿಡಿ, ಕಂಚಿಪ್ಪ ಮತ್ತು ಗಿಳಿಸುಂಡಿಯಂಥ ನೂರಾರು ಅಪರೂಪದ ಅಪ್ಪೆಮಿಡಿ ತಳಿಗಳಿವೆ. ಇತ್ತೀಚಿನ ಅಧ್ಯಯನವೊಂದರ ಪ್ರಕಾರ, 10 ಕಿ.ಮೀ. ವ್ಯಾಪ್ತಿಯಲ್ಲಿ ವಿಶಿಷ್ಟ ಪರಿಮಳ ಹಾಗೂ ರುಚಿಯ ಸಾವಿರಕ್ಕೂ ಹೆಚ್ಚು ಮರಗಳಿವೆ’ ಎಂದು ಉಲ್ಲೇಖಿಸಿದ್ದಾರೆ.
  • ‘2023ರಲ್ಲಿ ಅಘನಾಶಿನಿ ಮುಖಜ ಭೂಮಿಗೆ’ ರಾಮ್‌ಸರ್ ತಾಣ’ದ ಮಾನ್ಯತೆ ಸಿಕ್ಕ ಬೆನ್ನಲ್ಲೇ, ನದಿ ಮೇಲ್ಬಾಗದ ಜೈವಿಕ ಸಂಪತ್ತು ಉಳಿಸುವ ತುರ್ತು ಅಗತ್ಯ ಕುರಿತು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ಇಲ್ಲಿ ಅತಿಕ್ರಮಣ, ವಾಣಿಜ್ಯ ಏಕದಳ ಕೃಷಿ, ಹವಾಮಾನ ಬದಲಾವಣೆಯಂಥ ಬೆದರಿಕೆ ಇದೆ’
  • ಈ ವ್ಯಾಪ್ತಿಯ ಅಣಲೆಬೈಲ್, ನೆಗ್ಗು, ಕಾನಸೂರು, ಹಸರಗೋಡು, ಹಾರ್ಸಿಕಟ್ಟಾ, ಸೋವಿನಕೊಪ್ಪ ಮತ್ತು ಹೆಗ್ಗರಣಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಮುದಾಯದ ಸಹಭಾಗಿತ್ತದೊಂದಿಗೆ ಜೀನ್ ಮ್ಯಾಪಿಂಗ್, ಪಾರಂಪರಿಕ ಹಬ್ಬಗಳು ಮತ್ತು ಸಂಶೋಧನಾ ಕಾರ್ಯಕ್ರಮ ಹಮ್ಮಿಕೊಳ್ಳುವ ಉದ್ದೇಶವಿದೆ.
  • ‘ಜೀವವೈವಿಧ್ಯ ಪರಂಪರೆ ತಾಣ’ ಘೋಷಣೆ ಬೇಡಿಕೆಗೆ ಮಾನ್ಯತೆ ಸಿಕ್ಕರೆ, ಸ್ಥಳೀಯ ಕೃಷಿಕರ ಹಕ್ಕುಗಳಿಗೆ ಆದ್ಯತೆ ಸಿಗುತ್ತದೆ. ಅಲ್ಲದೇ, ಪಶ್ಚಿಮ ಘಟ್ಟಗಳ ಈ ಅಪರೂಪದ ಜೈವಿಕ ಹಾಗೂ ಸಾಂಸ್ಕೃತಿಕ ಪರಂಪರೆಯು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಹಸ್ತಾಂತರ ವಾಗಲಿದೆ’.

ಸೂರ್ಯಘರ್ ಅಡಿ 30 ಲಕ್ಷ ಮನೆಗೆ ಸೌರಶಕ್ತಿ: ಮೈಲಿಗಲ್ಲು

  • ಪ್ರಧಾನ ಮಂತ್ರಿ ಸೂರ್ಯಘರ್‌ಯೋಜನೆ ಅಡಿ 30 ಲಕ್ಷ ಮನೆಗಳಿಗೆ ಸೌರಫಲಕ ಆಳವಡಿಸುವ ಮೂಲಕ ಕೇಂದ್ರ ಸರ್ಕಾರ ಮತ್ತೊಂದು ಮೈಲಿಗಲ್ಲು ದಾಟಿದೆ.
  • ‘ಸೂರ್ಯಘರ್ ಮೂಲಕ ಸೌರಶಕ್ತಿ ಫಲಕ ಅಳವಡಿಕೆಯಿಂದ ಇಂಧನ ಸ್ವಾವಲಂಬನೆ ಆಗಲಿದೆ ಹಾಗೂ ವಿದ್ಯುತ್ ಬಿಲ್ ಕಡಿಮೆ ಆಗಲಿದೆ.

ಪತ್ರಿಕೆ-V: ಸಾಮಾನ್ಯ ಅಧ್ಯಯನ-4

ನೈತಿಕ ಪ್ರಕರಣ ಅಧ್ಯಯನ (Ethics Case Study)
ಹಿನ್ನಲೆ (Background):

ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಾಜಮಹೇಂದ್ರವರಂನಲ್ಲಿ ಅನಧಿಕೃತ ಮಾರಾಟಗಾರನಿಂದ ಪೂರೈಸಲಾದ ಕಲಬೆರಕೆ ಹಾಲನ್ನು ಸೇವಿಸಿದ ಪರಿಣಾಮ ಎರಡು ದಿನಗಳಲ್ಲಿ ನಾಲ್ವರು ನಾಗರಿಕರು ಮೃತಪಟ್ಟಿದ್ದು, 12 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಕಲಬೆರಕೆ ಹಾಲು ಸೇವನೆಯಿಂದ ಮೂತ್ರಪಿಂಡ ವೈಫಲ್ಯ ಉಂಟಾಗಿ ಸಾವು ಸಂಭವಿಸಿದೆ. ಹಾಲು ಪೂರೈಸಿದ ಮಾರಾಟಗಾರನು 46 ಹಸುಗಳು ಹಾಗೂ ಸ್ಥಳೀಯ ರೈತರಿಂದ ಹಾಲು ಸಂಗ್ರಹಿಸಿ ಮನೆಗಳಿಗೆ ವಿತರಿಸುತ್ತಿದ್ದನು. ಸರ್ಕಾರ ತನಿಖೆ ಆರಂಭಿಸಿ, ಪರಿಹಾರ ಘೋಷಿಸಿದೆ ಹಾಗೂ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದೆ.

ನೀವು ಆ ಜಿಲ್ಲೆಯ ಜಿಲ್ಲಾಧಿಕಾರಿ (District Collector) ಆಗಿದ್ದೀರಿ:
1.ಪ್ರಕರಣದಲ್ಲಿರುವ ನೈತಿಕ ಸಮಸ್ಯೆಗಳು (Ethical Issues)?

2.ಪಾಲುದಾರರು (Stakeholders)?
3.ಒಳಗೊಂಡಿರುವ ಮೌಲ್ಯಗಳು (Values Involved)

4.ಜಿಲ್ಲಾಧಿಕಾರಿಯಾಗಿ ನಿಮ್ಮ ಆಯ್ಕೆಗಳು (Options)?
ಆಯ್ಕೆ 1: ಕೇವಲ ತನಿಖೆ ನಡೆಸಿ ಕಾನೂನು ಕ್ರಮಕ್ಕೆ ಸೀಮಿತವಾಗುವುದು
ಆಯ್ಕೆ 2: ತುರ್ತು ಸಾರ್ವಜನಿಕ ಆರೋಗ್ಯ ಕ್ರಮಗಳ ಜೊತೆಗೆ ಕಠಿಣ ಆಡಳಿತಾತ್ಮಕ ಕ್ರಮಗಳು
ಆಯ್ಕೆ 3: ದೀರ್ಘಕಾಲಿಕ ಆಹಾರ ಸುರಕ್ಷತಾ ಸುಧಾರಣೆಗಳನ್ನು ಜಾರಿಗೆ ತರುವುದು

    Sources: Prajavani, Kannada Prabha, Vijayavani

    ಸಹಕಾರಿ ‘ಭಾರತ್ ಟ್ಯಾಕ್ಸಿ’ ಸೇವೆ ಶುರು

    ಸಂದರ್ಭ: ಭಾರತ್‌ ಟ್ಯಾಕ್ಸಿ’ ಸೇವೆಗೆ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಚಾಲನೆ ನೀಡಿದ್ದಾರೆ. ಇದು ದೇಶದಲ್ಲಿ ಸಹಕಾರ ತತ್ತ್ವದಲ್ಲಿ ಟ್ಯಾಕ್ಸಿ ಸೇವೆಗಳನ್ನು ಒದಗಿಸುವ ಮೊದಲ ವೇದಿಕೆ ಆಗಿದೆ.

    • ಮುಂದಿನ ಮೂರು ವರ್ಷಗಳಲ್ಲಿ ಭಾರತ್ ಟ್ಯಾಕ್ಸಿ ಸೇವೆಯನ್ನು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಮತ್ತು ದ್ವಾರಕಾದಿಂದ ಕಾಮಾಕ್ಯದವರೆಗೆ ವಿಸ್ತರಿಸಲಾಗುವುದು.
    • ಭಾರತ್ ಟ್ಯಾಕ್ಸಿ ಜೊತೆ ಸೇರಿರುವ ಚಾಲಕರೊಂದಿಗೆ ಲಾಭವನ್ನು ಹಂಚಿಕೊಳ್ಳಲಾಗುವುದು ಚಾಲಕರುಗಳಿಸುವ ಪ್ರತಿ 1 ಖಾತೆಗೆ ಜಮಾ ಆಗಲಿದೆ. ಉಳಿದ ₹20 ವೇದಿಕೆಯಲ್ಲಿ ಉಳಿಯಲಿದೆ. ಆ ₹20ಕ್ಕೂ ಚಾಲಕರೇ ಮಾಲೀಕರಾಗಿ ಇರುತ್ತಾರೆ ಎಂದಿದ್ದಾರೆ.
    • ಗ್ರಾಹಕರು ಈ ವೇದಿಕೆಯ ಮೂಲಕ ಕಾರು, ತ್ರಿಚಕ್ರ ಮತ್ತು ದ್ವಿಚಕ್ರ ವಾಹನಗಳ ಸೇವೆಯನ್ನು ಪಡೆಯಬಹುದಾಗಿದೆ ಎಂದು ಹೇಳಿದ್ದಾರೆ.
    • ಈಗ ದೇಶದಲ್ಲಿ ಟ್ಯಾಕ್ಸಿ ಸೇವೆಗಳನ್ನು ಒದಗಿಸುವ ಮಾರುಕಟ್ಟೆಯಲ್ಲಿ ಊಬರ್, ಓಲಾ ಮತ್ತು ರಾಪಿಡೊ ಪ್ರಾಬಲ್ಯ ಹೊಂದಿವೆ.
    • ಚಾಲಕರೇ ಮಾಲೀಕರಾಗುವ ಅವಕಾಶವನ್ನು ಇಂತಹ ಈ ವೇದಿಕೆಯು ನೀಡಲಿದೆ. ಅವಕಾಶವನ್ನು ಇತರೆ ಯಾವುದೇ ವೇದಿಕೆ ಒದಗಿ-ಸುತ್ತಿಲ್ಲ.
    • ಅಮೂಲ್ ಸೇರಿದಂತೆ ದೇಶದ ಎಂಟು ಪ್ರಮುಖ ಸಹಕಾರ ಸಂಘಗಳ ನೆರವಿನೊಂದಿಗೆ ಕಳೆದ ಡಿಸೆಂಬರ್ 2ರಂದು ದೆಹಲಿ ಎನ್‌ಸಿಆರ್ ಮತ್ತು ಗುಜರಾತ್‌ನಲ್ಲಿ ಪ್ರಾಯೋಗಿಕವಾಗಿ ಈ ಸೇವೆಯನ್ನು ಆರಂಭಿಸಲಾಯಿತು.
    • ಸಹಕಾರ ತತ್ತ್ವದ ಆಧಾರದಲ್ಲಿ ಆ್ಯಪ್ ಮೂಲಕ ಟ್ಯಾಕ್ಸಿ ಸೇವೆ ಒದಗಿಸುವ ಜಗತ್ತಿನ ಅತಿದೊಡ್ಡ ವೇದಿಕೆ ಇದಾಗಿದೆ. ಅಲ್ಲದೆ, ಚಾಲಕರ ಮಾಲೀಕತ್ವದ ವಿಶ್ವದ ಅತಿದೊಡ್ಡ ವೇದಿಕೆಯೂ ಹೌದು ಎಂದು ಸಹಕಾರ ಸಚಿವಾಲಯ ಹೇಳಿದೆ.
    • ಈ ಸೇವೆ ಆರಂಭಗೊಂಡಾಗಿನಿಂದ ಇಲ್ಲಿಯವರೆಗೆ 3 ಲಕ್ಷಕ್ಕೂ ಅಧಿಕ ಚಾಲಕರು ಈ ವೇದಿಕೆ ಸೇರಿದ್ದಾರೆ. 1 ಲಕ್ಷ ಹೆಚ್ಚು ಬಳಕೆದಾರರು ನೋಂದಣಿ ಆಗಿದ್ದಾರೆ.
    • ಮುಂಬರುವ ವರ್ಷಗಳಲ್ಲಿ ಸಂಘಗಳು ಹೊಸ ಸಹಕಾರ ವ್ಯವಹಾರಗಳಿಗೆ ಪ್ರವೇಶಿಸಲಿವೆ. ಈ ಚಾಲಕರನ್ನು ‘ಸಾರಥಿಗಳು’ ಎಂದು ಕರೆಯಲಾಗುತ್ತದೆ. ಈ ಚಾಲಕರಿಗೆ ಇನ್ನೊ-ಟೋಕಿಯೊ ಜನರಲ್‌ ಇನ್ಸೂರೆನ್ಸ್ ಕಂಪನಿಯು ವೈಯಕ್ತಿಕ ಅಪಘಾತ ಮತ್ತು ಆರೋಗ್ಯ ವಿಮಾ ರಕ್ಷಣೆಯನ್ನು ಒದಗಿಸುತ್ತದೆ ಎಂದು ಹೇಳಿದ್ದಾರೆ.
    • ಭಾರತ್ ಟ್ಯಾಕ್ಸಿ ಸೇವೆಯು ಸಾರ್ವಜನಿಕರಿಗೆ ಕೈಗೆಟಕುವ, ಸುರಕ್ಷಿತ ಸೇವೆಯನ್ನು ಒದಗಿಸಲು ಪ್ರಯತ್ನಿಸುತ್ತದೆ ಎಂದಿದ್ದಾರೆ.

    Source: PV

    ರಾಷ್ಟ್ರಪತಿ ಅಂಕಿತಕ್ಕೆ ‘ದ್ವೇಷಭಾಷಣ ತಡೆ’ ಮಸೂದೆ

    ಸಂದರ್ಭ: ಹಲವು ಕಾರಣಗಳನ್ನು ನೀಡಿ ಅಂಕಿತ ಹಾಕದೆ ಆರ್. ರಾಷ್ಟ್ರಪತಿಯ ವಿವೇಚನೆಗೆ ರಾಜ್ಯಪಾಲರು ಕಾಯ್ದಿರಿಸಿದ್ದ ದ್ವೇಷ ಭಾಷಣ ತಡೆ ಮಸೂದೆಯನ್ನು ರಾಷ್ಟ್ರಪತಿಯವರ ಅಂಕಿತಕ್ಕಾಗಿ ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿಗೆ (ನ್ಯಾಯಾಂಗ) ರಾಜ್ಯ ಸರ್ಕಾರವು (ಫೆ. 4) ರವಾನಿಸಿದೆ.

    • ದ್ವೇಷ ಭಾಷಣ ಹಾಗೂ ದ್ವೇಷಾಪರಾಧಗಳನ್ನು ತಡೆಯಲು ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ಮಸೂದೆ -2025’ ಅನ್ನು ಸರ್ಕಾರ ರೂಪಿಸಿ, ಅಂಕಿತ ಹಾಕುವಂತೆ ಕೋರಿ ಲೋಕಭವನಕ್ಕೆ ಕಳುಹಿಸಿತ್ತು.
    • ಆದರೆ, ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್ ನೀಡಿದ್ದ ಕೆಲವು ತೀರ್ಪುಗಳನ್ನು ಉಲ್ಲೇಖಿಸಿ ಮತ್ತು ಸಾಂವಿಧಾನಿಕವಾಗಿ ಸಂರಕ್ಷಿತ ಪ್ರಜಾಪ್ರಭುತ್ವದ ಚರ್ಚೆಯ ಮೇಲೆ ತೀವ್ರ ನಕಾರಾತ್ಮಕ ಪರಿಣಾಮ ಉಂಟು ಮಾಡುವ ಸಾಧ್ಯತೆಯ ಆತಂಕ ವ್ಯಕ್ತಪಡಿಸಿ ಈ ಮಸೂದೆಯನ್ನು ರಾಜ್ಯಪಾಲರು ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದರು.

    ಖೇಮಚಂದ್ ಮಣಿಪುರ ಮುಖ್ಯಮಂತ್ರಿ: ರಾಷ್ಟ್ರಪತಿ ಆಳ್ವಿಕೆರದ್ದು

    • ಸರ್ಕಾರ ರಚನೆಗೆ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೆ ರಾಜ್ಯದಲ್ಲಿದ್ದ ರಾಷ್ಟ್ರ ಪತಿ ಆಳ್ವಿಕೆಯನ್ನೂ ರದ್ದುಗೊಳಿಸಲಾಗಿದೆ.
    • 2025ರ ಫೆಬ್ರುವರಿ 13ರಂದು ಮಣಿಪುರದಲ್ಲಿ ಜಾರಿಗೊಳಿಸಲಾಗಿದ್ದ ರಾಷ್ಟ್ರಪತಿ ಅಳ್ವಿಕೆಯನ್ನು ಸಂವಿಧಾನದ 356ನೇ ವಿಧಿಯ ಷರತ್ತು (2)ರ ಅನ್ವಯ ನೀಡಲಾದ ಹಕ್ಕುಗಳನ್ನು ಚಲಾಯಿಸಿ 2026ರ ಫೆಬ್ರುವರಿ 4ರಂದು ಹಿಂಪಡೆಯುತ್ತಿರುವುದಾಗಿ ರಾಷ್ಟ್ರಪತಿ ಬ್ರೌಪದಿ ಮುರ್ಮು ಅವರು ಪ್ರಕಟಣೆ ಹೊರಡಿಸಿದ್ದಾರೆ.

    ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣ ಉದ್ದಿಮೆ ಉನ್ನತೀಕರಣ ಯೋಜನೆ(ಪಿಎಂಎಫ್‌ಎಂಇ) ಅನುಷ್ಠಾನದಲ್ಲಿ ಕರ್ನಾಟಕ ಮೊದಲ ಸ್ಥಾನ

    ಸಂದರ್ಭ: ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣ ಉದ್ದಿಮೆ ಉನ್ನತೀಕರಣ ಯೋಜನೆ (ಪಿಎಂಎಫ್ಎಂಇ) ಅನುಷ್ಠಾನದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಸಾಲ ವಿತರಣೆಯಲ್ಲಿ ಕರ್ನಾಟಕದ ಜೊತೆಗೆ ತಮಿಳುನಾಡು ಕೂಡ ಮೊದಲ ಸ್ಥಾನ ಹಂಚಿಕೊಂಡಿದೆ.

    • ಕರ್ನಾಟಕದಲ್ಲಿ ಪಿಎಂಎಫ್‌ಎಂಇ ಯೋಜನೆಯ ಅನುಷ್ಠಾನದ ಜವಾಬ್ದಾರಿ ಹೊತ್ತಿರುವ ‘ಕರ್ನಾಟಕ ಆಹಾರ ಸಂಸ್ಕರಣೆ ಮತ್ತು ರಫ್ತು ನಿಗಮ’ವು (ಕೆಪೆಕ್) ಈ ಸಾಧನೆ ಮಾಡಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ಹೇಳಿದ್ದಾರೆ.
    • 2021-22ರಲ್ಲಿ ಶುರುವಾದ ಈ ಯೋಜನೆಯ ಆಡಿ ನೆರವು ಬಯಸಿ ಕೆಪೆಕ್‌ಗೆ ಜನವರಿ ಅಂತ್ಯಕ್ಕೆ 8,734 ಅರ್ಜಿಗಳು ಬಂದಿದ್ದವು. ಈ ಪೈಕಿ 7,872 ಅರ್ಜಿದಾರರಿಗೆ ಸಾಲ ವಿತರಿಸಲಾಗಿದೆ. 2025-26ರ ಆರ್ಥಿಕ ವರ್ಷದಲ್ಲೇ 8.162 ಅರ್ಜಿಗಳನ್ನು ಸ್ವೀಕರಿಸಿ 2,346 ಅರ್ಜಿಗಳಿಗೆ ಸಾಲ ಮಂಜೂರು ಮಾಡಲಾಗಿದೆ. 2,486 ಅರ್ಜಿಗಳು ಬ್ಯಾಂಕುಗಳಲ್ಲಿ ಪರಿಶೀಲನಾ ಹಂತದಲ್ಲಿವೆ. ಯೋಜನೆ ಪ್ರಾರಂಭವಾದ ಐದು ವರ್ಷಗಳಲ್ಲಿ ಇದು ಗರಿಷ್ಠ ಸಾಧನೆ ಎಂದು ಪ್ರಕಟಣೆ ತಿಳಿಸಿದೆ.

    ‘ಪಿನಾಕಿನಿ: ನ್ಯಾಯಮಂಡಳಿ ಸ್ಥಾಪಿಸಿ’

    ಸಂದರ್ಭ: ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಪೆನ್ನಾರ್ (ದಕ್ಷಿಣ ಪಿನಾಕಿನಿ) ನದಿ ನೀರು ಹಂಚಿಕೆ ವಿವಾದಗಳನ್ನು ಬಗೆಹರಿಸಲು ನ್ಯಾಯಮಂಡಳಿ ರಚಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ತೀರ್ಪು ನೀಡಿದೆ. ಇದ ರಿಂದಾಗಿ, ಮಾತುಕತೆ ಮೂಲಕವೇ ವಿವಾದ ಬಗೆಹರಿಸಲು ಮುಂದಾಗಿದ್ದ ಕರ್ನಾಟಕಕ್ಕೆ ಹಿನ್ನಡೆಯಾಗಿದೆ.

    • ತಮಿಳುನಾಡು ಸರ್ಕಾರ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರಿಸಿದ್ದ ನ್ಯಾಯ ಮೂರ್ತಿಗಳಾದ ವಿಕ್ರಮ್ನಾಥ್ ಹಾಗೂ ಎನ್.ವಿ.ಅಂಜಾರಿಯಾ ಅವರಿದ್ದ ಪೀಠವು, ‘1956ರ ಅಂತರರಾಜ್ಯ ನದಿ ನೀರು ವಿವಾದ ಕಾಯ್ದೆಯಡಿ ಕೇಂದ್ರ ಸರ್ಕಾರವು ಶಾಸನಬದ್ದ ಕಾರ್ಯಗಳನ್ನು ನಡೆಸಲು ಯಾವುದೇ ಕಾನೂನು ಅಡಚಣೆ ಇಲ್ಲ’ ಎಂದು ಸ್ಪಷ್ಟಪಡಿಸಿದೆ.
    • ವಿವಾದ ಪರಿಹರಿಸಲು ನ್ಯಾಯ ಮಂಡಳಿ ರಚಿಸುವುದಕ್ಕೆ ಕೇಂದ್ರಕ್ಕೆ ಯಾವುದೇ ಅಡಚಣೆ ಇಲ್ಲ.
    • ತಮಿಳುನಾಡು ತನ್ನ ದೂರನ್ನು ನ್ಯಾಯ ಮಂಡಳಿಯ ಮುಂದೆ ಸಲ್ಲಿಸಬೇಕು ಎಂದು ಪೀಠ ನಿರ್ದೇಶಿಸಿತು. 2018ರಲ್ಲಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಪೀಠ ವಿಲೇವಾರಿ ಮಾಡಿತು.
    • ದಕ್ಷಿಣ ಪಿನಾಕಿನಿ ನದಿಯ ಕಣಿವೆಯಲ್ಲಿ ಕರ್ನಾಟಕ ಸರ್ಕಾರವು ಮಾರ್ಕಂಡೇಯ ನದಿಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಿಸಿದೆ. ಬೆಂಗಳೂರಿನ ಎಲೆ ಮಲ್ಲಪ್ಪ ಚೆಟ್ಟ ಕೆರೆಯಿಂದ ಹೊಸ-ಕೋಟೆಯವರೆಗೆ ನೀರು ಹರಿಸುವ ಕಾಮಗಾರಿ, ಬ್ಯಾಲಹಳ್ಳಿ ಗ್ರಾಮದ ಹತ್ತಿರ ಪೆನ್ನಾರ್ ನದಿಯಿಂದ ನೀರು ಹರಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ.
    • ಈ ಯೋಜನೆಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್‌ಗೆ 2018ರ ಮೇ 18ರಂದು ಅರ್ಜಿ ಸಲ್ಲಿಸಿತ್ತು. ಜಲವಿವಾದ ನ್ಯಾಯಮಂಡಳಿ ಒತ್ತಾಯಿಸಿ ತಮಿಳುನಾಡು ಸರ್ಕಾರವು ಕೇಂದ್ರ ಸರ್ಕಾರಕ್ಕೆ 2019ರ ನವೆಂಬರ್ ತಿಂಗಳಲ್ಲಿ ಮನವಿ ಮಾಡಿತ್ತು.
    • ಜಲಶಕ್ತಿ ಸಚಿವಾಲಯವು 2020ರಲ್ಲಿ ಸಂಧಾನ ಸಭೆ ನಡೆಸಿತ್ತು. ಆದರೆ, ರಾಜ್ಯ ಸರ್ಕಾರಗಳು ಒಮ್ಮತಕ್ಕೆ ಬಂದಿರಲಿಲ್ಲ. ಹೊಸದಾಗಿ ಸಂಧಾನ ನಡೆಸುವಂತೆ ಕರ್ನಾಟಕ ಸರ್ಕಾರವು ಕೇಂದ್ರವನ್ನು 2024ರ ಜೂನ್‌ನಲ್ಲಿ ಒತ್ತಾಯಿಸಿತ್ತು.
    • ಈ ನಡುವೆ, ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ, ಕೇಂದ್ರ ಜಲ ಆಯೋಗದ ಅಧ್ಯಕ್ಷರ ನೇತೃತ್ವದಲ್ಲಿ ಜಲಶಕ್ತಿ ಸಚಿವಾಲಯವು ಹೊಸ ಸಂಧಾನ ಸಮಿತಿ ರಚಿಸಿತ್ತು. ಈ ಸಮಿತಿಯು ಉಭಯ ರಾಜ್ಯಗಳ ನಡುವೆ ಒಂಬತ್ತು ಸಭೆಗಳನ್ನು ನಡೆಸಿತ್ತು.
    • జల ವಿವಾದ ಬಗೆಹರಿಸಲು ನ್ಯಾಯಮಂಡಳಿ ರಚಿಸುವ ಕೇಂದ್ರ ಸರ್ಕಾರದ ಪ್ರಸ್ತಾವಕ್ಕೆ ಕರ್ನಾಟಕ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು. ಮಾತುಕತೆಯ ಮೂಲಕ ಈ ವಿವಾದವನ್ನು ಸೌಹಾರ್ದ-ಯುತವಾಗಿ ಬಗೆಹರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಸರ್ಕಾರವು ಜಲಶಕ್ತಿ ಸಚಿವಾಲಯಕ್ಕೆ ಪತ್ರ ಬರೆದಿತ್ತು.
    • ಕರ್ನಾಟಕದ ಜಲಾನಯನ ಪ್ರದೇಶದಲ್ಲಿ ಒಟ್ಟು 11.77 ಟಿಎಂಸಿ ನೀರಿನಲ್ಲಿ 9.77 ಟಿಎಂಸಿ ನೀರನ್ನು ಬಳಸಲು ಯೋಜಿಸಲಾಗಿದೆ. ಇದರಲ್ಲಿ 2 ಟಿಎಂಸಿ ಮತ್ತು ವಾಡಿಕೆಗಿಂತ ಹೆಚ್ಚು ಮಳೆ ಬಂದಾಗ ದೊರೆಯುವ ಹೆಚ್ಚುವರಿ ನೀರು ತಮಿಳುನಾಡಿಗೆ ಉಳಿಯುತ್ತದೆ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿತ್ತು.

    ದಲೈಲಾಮಾಗೆ ಗ್ರಾಮಿ ಪ್ರಶಸ್ತಿ

    ಸಂದರ್ಭ: ಟಿಬೆಟ್‌ನ ಬೌದ್ಧರ ಅಧ್ಯಾತ್ಮಿಕ ಗುರು ದಲೈ ಲಾಮಾ ಅವರು ‘ಗ್ರಾಮಿ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.

    • ಅಡಿಯೊ ಪುಸ್ತಕ, ನಿರೂಪಣೆ ಹಾಗೂ ಕಥೆ ಹೇಳುವಿಕೆ, ಸಂಗೀತ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ಎಂದು . ‘ಗ್ರಾಮಿ’ಯನ್ನು ಗುರುತಿಸಲಾಗಿದೆ.
    • ಲಾಸ್ ಏಂಜಲೀಸ್‌ನಲ್ಲಿ ನಡೆದ ಗ್ರಾಮಿ ಪ್ರಶಸ್ತಿ ಸಮಾರಂಭದಲ್ಲಿ ‘ಮೆಡಿಟೇಷನ್: ದಿ ರಿಪ್ಲೆಕ್ಷನ್ ಅಫ್ ಹಿಸ್ ಹೋಲಿನೆಸ್ ದಿ ದಲೈ ಲಾಮಾ’ ಎಂಬ ಅಡಿಯೂ ಬುಕ್‌ಗಾಗಿ ಪ್ರಶಸ್ತಿ ಘೋಷಣೆ ಮಾಡಲಾಯಿತು.
    • ಪ್ರಶಸ್ತಿಗೆ ಅರ್ಹರಾಗಿರುವುದಕ್ಕೆ ಕೃತಜ್ಞತೆ ಸಲ್ಲಿಸಿರುವ ದಲೈ ಲಾಮಾ, ‘ಇದು ವೈಯಕ್ತಿಕ ಸಾಧನೆಯಲ್ಲ, ಜಾಗತಿಕ ಹೊಣೆಗಾರಿಕೆ ಹಾಗೂ ಸಹಾನುಭೂತಿಗೆ ಸಂದ ಮನ್ನಣೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
    • ‘ಈ ಪ್ರಶಸ್ತಿಯನ್ನು ವಿನಮ್ರವಾಗಿ ಸ್ವೀಕರಿಸುತ್ತೇನೆ. ಶಾಂತಿ, ಸಹಾನುಭೂತಿ, ಪರಿಸರ ಬಗ್ಗೆ ಕಾಳಜಿ, ಮಾನವೀಯತೆಯ ಏಕತೆ ಮತ್ತು ಎಂಟು ಶತಕೋಟಿ ಜನರ ಯೋಗಕ್ಷೇಮ ಅತ್ಯಗತ್ಯ ಎಂದು ನಾನು ನಂಬಿಕೊಂಡಿದ್ದೇನೆ. ಈ ಸಂದೇಶವನ್ನು ಇನ್ನಷ್ಟು ಪಸರಿಸಲು ಗ್ರಾಮಿ ಪ್ರಶಸ್ತಿ ಪ್ರೇರಣೆಯಾಗಲಿದೆ’ ಎಂದು ಹೇಳಿದ್ದಾರೆ.
    • 1959ರಲ್ಲಿ ಚೀನಾ ಸೇನೆಯ ಅತಿಕ್ರಮಣದಿಂದ ಜೀವಭಯಕ್ಕೆ ಒಳಗಾಗಿ ಭಾರತಕ್ಕೆ ಬಂದು ಆಶ್ರಯ ಪಡೆದಿದ್ದಾರೆ.
    • ಚೀನಾ ಆಕ್ಷೇಪ (ಬೀಜಿಂಗ್ ವರದಿ): ದಲೈ ಲಾಮಾ ಅವರಿಗೆ ಗ್ರಾಮಿ ಪ್ರಶಸ್ತಿ ನೀಡಿದ್ದನ್ನು ಚೀನಾ ಖಂಡಿಸಿದೆ.

    25 ವರ್ಷದಲ್ಲಿ ರೈತರಿಗೆ ₹111 ಲಕ್ಷ ಕೋಟಿ ನಷ್ಟ: ಕೃಷಿ ಸುಧಾರಣಾ ಸಮಿತಿ ಅಧ್ಯಕ್ಷ ದೇವಿಂದ‌ರ್ ಶರ್ಮಾ

    ಸಂದರ್ಭ: ಅಧ್ಯಯನದ ಪ್ರಕಾರ 25 ವರ್ಷದಲ್ಲಿ (2000-2025ರ ಅವಧಿ) ದೇಶದ ರೈತರಿಗೆ ₹111 ಲಕ್ಷ ಕೋಟಿ ನಷ್ಟವಾಗಿದೆ. ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ಕೃಷಿ ಬಿಕ್ಕಟ್ಟಿನಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿ ದ್ದಾರೆ ಎಂದು ಕೃಷಿ ಸುಧಾರಣಾ ಸಮಿತಿ ಅಧ್ಯಕ್ಷ ದೇವಿಂದರ್‌ ಶರ್ಮಾ ಹೇಳಿದರು.

    • ರೈತರ ಆತ್ಮಹತ್ಯೆಗಳ ತಡೆ ಸಮಿತಿ ನಗರದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ರೈತರ ಆತ್ಮಹತ್ಯೆ ತಡೆಯುವ ಕುರಿತು ಚರ್ಚೆ ನಡೆಸಿ ಕೃಷಿ ತಂತ್ರಜ್ಞರ, ರೈತ ನಾಯಕರ ಸಲಹೆ ಪಡೆಯಲಾಯಿತು.
    • 2000-2016ರ ಅವಧಿಯಲ್ಲಿ ₹45 ಲಕ್ಷ ಕೋಟಿ ರೈತರಿಗೆ ನಷ್ಟವಾಗಿತ್ತು. ಇದಕ್ಕೆ ಹಲವು ಕಾರಣಗಳಿವೆ.