Mon. Apr 20th, 2026

ಕೆ.ಎ.ಎಸ್ ಪ್ರಚಲಿತ ವಿದ್ಯಮಾನಗಳು: ಪ್ರಚಲಿತ ವಿದ್ಯಮಾನಗಳು ಕೆ.ಪಿ.ಎಸ್.ಸಿ ಪಠ್ಯಕ್ರಮದ ‘ಜೀವಂತ ನಾಡಿಮಿಡಿತ’ವಿದ್ದಂತೆ. ಇದು ಕೇವಲ ಪ್ರತ್ಯೇಕವಾಗಿ ನೆನಪಿಡಬೇಕಾದ ವಿಷಯವಲ್ಲ; ಬದಲಿಗೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳೆರಡರಲ್ಲೂ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ನೀತಿಶಾಸ್ತ್ರವನ್ನು ಒಂದಕ್ಕೊಂದು ಬೆಸೆಯುವ ಒಂದು ಚಲನಶೀಲ ಕೊಂಡಿಯಾಗಿದೆ. ಮುಂಬರುವ ಪರೀಕ್ಷೆಗಳ ಸಂದರ್ಭದಲ್ಲಿ, ಕೇವಲ “ಸುದ್ದಿ ಓದುವುದರಿಂದ” “ಸುದ್ದಿಯ ಮೂಲಕ ಪಠ್ಯಕ್ರಮವನ್ನು ಅಭ್ಯಾಸ ಮಾಡುವುದು” ಎಂಬ ಹಂತಕ್ಕೆ ಬದಲಾಗುವುದು ಒಬ್ಬ ಗಂಭೀರ ಅಭ್ಯರ್ಥಿಯನ್ನು ಸಾಮಾನ್ಯ ಓದುಗನಿಂದ ಪ್ರತ್ಯೇಕಿಸುವ ಪ್ರಮುಖ ಬದಲಾವಣೆಯಾಗಿದೆ.

“ಪಠ್ಯಕ್ರಮಕ್ಕೆ ಮೊದಲ ಆದ್ಯತೆ” ಎಂಬ ತತ್ವ
ಕೆ.ಪಿ.ಎಸ್.ಸಿ ಪಠ್ಯಕ್ರಮಕ್ಕೆ ಕಟ್ಟುನಿಟ್ಟಾಗಿ ಹೊಂದಿಕೆಯಾಗುವ ಪ್ರಚಲಿತ ವಿದ್ಯಮಾನಗಳ ಮಾದರಿಯನ್ನು ಅನುಸರಿಸುವ ಮೂಲಕ, ನೀವು ದಿನಪತ್ರಿಕೆ ಓದಲು ವ್ಯಯಿಸುವ ಪ್ರತಿ ಗಂಟೆಯೂ ನಿಮ್ಮ ಪರೀಕ್ಷೆಯ ಶ್ರೇಣಿಯನ್ನು (Rank) ಉತ್ತಮಪಡಿಸಲು ಪೂರಕವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

ಪೂರ್ವಭಾವಿ ಪರೀಕ್ಷೆ

ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು

ಭುವನೇಶ್ವರದಲ್ಲಿ 61ನೇ ಆವೃತ್ತಿಯ ಗ್ರಾಂಡ್ ಫಿನಾಲೆ: ಸಾಧಿ ‘ಫೆಮಿನಾ ಮಿಸ್ ಇಂಡಿಯಾ’
ಸಂದರ್ಭ: ಭುವನೇಶ್ವರದ ಕಳಿಂಗಾ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (ಕೆಐಐಟಿ) ಕ್ಯಾಂಪಸ್‌ನಲ್ಲಿ ನಡೆದ ‘ಭಮಿನಾ ಮಿಸ್ ಇಂಡಿಯಾ-2026 ಸ್ಪರ್ಧೆಯಲ್ಲಿ ಕಾರವಾರ ಶಾಸಕ ಸತೀಶ ಸೈಲ್ ಅವರ ಹಿರಿಯ ಪುತ್ರಿ ಸಾಧಿ ಸ್ಟೈಲ್ ವಿಜೇತೆಯಾಗಿದ್ದಾರೆ.

  • ಶಾಸಕ ಸತೀಶ ಸೈಲ್ ಅವರ ಪುತ್ರಿ ಸಾಧ್ಯ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಗೋವಾ ರಾಜ್ಯವನ್ನು ಪ್ರತಿನಿಧಿಸಿದ್ದರು. ಕಾರವಾರದವರೇ ಆಗಿದ್ದರೂ ಗೋವಾದಲ್ಲಿ ಜನಿಸಿದ್ದರಿಂದ ಜನ್ಮದಾಖಲೆಗಳಲ್ಲಿ ಗೋವಾ ವಿಳಾಸ ಇತ್ತು. ಈ ಕಾರಣಕ್ಕೆ ಗೋವಾದಿಂದಲೇ ರಾಷ್ಟ್ರಮಟ್ಟದ ಸ್ಪರ್ಧೆಗೆ ಪ್ರತಿನಿಧಿಸುವ ಅವಕಾಶ ಸಿಕ್ಕಿತ್ತು.
  • ಪ್ರಾಥಮಿಕ, ಪ್ರೌಢಶಿಕ್ಷಣವನ್ನು ಕಾರವಾರದಲ್ಲಿ ಪೂರ್ಣಗೊಳಿಸಿರುವ ಸಾಧಿ ಕಾಲೇಜು ಶಿಕ್ಷಣವನ್ನು ಬೆಂಗಳೂರಿನಲ್ಲಿ ಮುಗಿಸಿದ್ದಾರೆ. ಬಳಿಕ ಕೆನಡಾದ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕನ್ನಡ ಸೇರಿ 7 ಭಾಷೆಗಳಲ್ಲಿ ನಿರರ್ಗಳವಾಗಿ ಅವರು ಮಾತನಾಡಬಲ್ಲರು. ಮಾಡೆಲಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಜತೆಗೆ ಬೆಂಗಳೂರಿನಲ್ಲಿ ನಿರ್ಮಾಣ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ಯಮವನ್ನೂ ನಡೆಸುತ್ತಿದ್ದಾರೆ.
  • ಪುತ್ರಿ ಸಾಧಿ, ಖ್ಯಾತ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಅವರಿಂದ ಪ್ರೇರಣೆಗೊಂಡು ಅರ್ಥಶಾಸ್ತ್ರ, ವಿಷಯ ಅಧ್ಯಯನ ಮಾಡಿದ್ದಾರೆ. ಸಾಮಾಜಿಕ ಚಟುವಟಿಕೆಗಳಲ್ಲೂ ಸಕ್ರಿಯವಾಗಿರುವ ಸಾಧಿ ಅಪೌಷ್ಠಿಕತೆಯಿಂದ ಬಳಲುವ ಮಕ್ಕಳಿಗೆ ನೆರವಾಗಲು ಕಿಟ್ರೊ ಎಂಬ ಸಂಸ್ಥೆಯೊಂದಿಗೆ ಕೈಜೋಡಿಸಿದ್ದಾರೆ. ಮಕ್ಕಳ ಆರೋಗ್ಯ ಕಾಳಜಿಗೆ ಆರ್ಥಿಕ ಸಂಪನ್ಮೂಲ ಕ್ರೋಡೀಕರಿಸಲು ನೆರವಾಗುತ್ತಿದ್ದಾರೆ.

ಅಸ್ಸಾಂನ ಬಿಹು ಪ್ರದರ್ಶಿಸಿದ ಅಮೆರಿಕ ಗಗನಯಾತ್ರಿ
ಸಂದರ್ಭ: ಅಮೆರಿಕದ ಗಗನಯಾತ್ರಿಯೊಬ್ಬರು ಅಂತರ ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಅಸ್ಸಾಂನ ಸಾಂಪುದಾಯಿಕ ‘ಬಿಹು’ ಪ್ರದರ್ಶನ ನೀಡಿದ್ದಾರೆ. ಮುಖ್ಯಮಂತ್ರಿ ಹಿಮಂತ ಬಿಸ್ನಾ ಶರ್ಮಾ ಅವರು ಗಗನಯಾತ್ರಿಯನ್ನು ಅಭಿನಂದಿಸಿದ್ದಾರೆ.

  • ಗಗನಯಾತ್ರಿ ಮೈಸ್ ಫಿಂಕೆ ಅವರು ಅಸ್ಸಾಂನ ರೆನಿಟಾ ಸೈಕಿಯಾ ಅವರನ್ನು ವಿವಾಹವಾಗಿದ್ದಾರೆ. ಬಾಹ್ಯಾಕಾಶದಲ್ಲಿ ಅವರು ಕುತ್ತಿಗೆಗೆ ಸಾಂಪ್ರದಾಯಿಕ ‘ಗಮೋಸಾ’ (ಸ್ಯಾರ್ಘ) ಧರಿಸಿ, ಬಿಹು ಸಂಗೀತದೊಂದಿಗೆ ನೃತ್ಯ ಪ್ರದರ್ಶಿಸಿದ್ದಾರೆ.
  • ಈ ವಿಡಿಯೋವನ್ನು ‘ಎಕ್ಸ್ನಲ್ಲಿ ಹಂಚಿಕೊಂಡಿರುವ ಹಿಮಂತ ಬಿನ್ನಾ ಅವರು, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಬಿಹು ಪ್ರದರ್ಶನಗೊಂಡಿದೆ. ಅಸ್ಸಾಂನ ಸಂಸ್ಕೃತಿಗೆ ವಿಶೇಷ ಗೌರವ ನೀಡಿದ್ದಕ್ಕಾಗಿ ಮೈಕ್ ಫಿಂಕೆ ಅವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.
  • ‘ರೊಂಗಾಲಿ ಬಿಹು ಹಬ್ಬದ ಮೂಲಕ ಅಸ್ಸಾಂನಲ್ಲಿ ಹೊಸ ವರ್ಷವನ್ನು ಬರಮಾಡಿಕೊಳ್ಳಲಾಗುತ್ತದೆ.

ಅಸ್ಸಾಂನ ಬಿಹು ಅಸ್ಸಾಂ ರಾಜ್ಯದ ಅತ್ಯಂತ ಪ್ರಮುಖ ಹಾಗೂ ಪ್ರಸಿದ್ಧ ಜನಪದ ಹಬ್ಬವಾಗಿದೆ. ಇದು ಅಸ್ಸಾಮಿ ಸಂಸ್ಕೃತಿ, ಕೃಷಿ ಜೀವನ ಮತ್ತು ಸಮುದಾಯ ಏಕತೆಯ ಸಂಕೇತವಾಗಿದೆ. ಬಿಹು ಹಬ್ಬವು ಮುಖ್ಯವಾಗಿ ಕೃಷಿ ಚಕ್ರದ ವಿವಿಧ ಹಂತಗಳಿಗೆ ಸಂಬಂಧಿಸಿದ್ದು, ರೈತರ ಜೀವನದಲ್ಲಿ ವಿಶೇಷ ಸ್ಥಾನ ಹೊಂದಿದೆ. ಈ ಹಬ್ಬದ ಸಂದರ್ಭದಲ್ಲಿ ಜನರು ಸಂಪ್ರದಾಯಬದ್ಧ ನೃತ್ಯ, ಹಾಡು, ವಾದ್ಯ, ಹಬ್ಬದ ಊಟ ಮತ್ತು ಸಮೂಹ ಆಚರಣೆಗಳ ಮೂಲಕ ಸಂತೋಷವನ್ನು ವ್ಯಕ್ತಪಡಿಸುತ್ತಾರೆ.

ಬಿಹುವಿನ ಪ್ರಮುಖ ವಿಧಗಳು:

ಬಿಹುವಿನ ಹೆಸರುಆಚರಿಸುವ ಕಾಲಮಹತ್ವ
ರೊಂಗಾಲಿ ಬಿಹು / ಬೋಹಾಗ್ ಬಿಹುಏಪ್ರಿಲ್ಅಸ್ಸಾಮಿ ಹೊಸ ವರ್ಷದ ಆರಂಭ, ವಸಂತ ಮತ್ತು ಬಿತ್ತನೆ ಕಾಲದ ಹಬ್ಬ
ಭೋಗಾಲಿ ಬಿಹು / ಮಾಘ್ ಬಿಹುಜನವರಿಕೊಯ್ಲಿನ ನಂತರ ಸಮೃದ್ಧಿ ಮತ್ತು ಸಂಭ್ರಮದ ಹಬ್ಬ
ಕೋಂಗಾಲಿ ಬಿಹು / ಕಾತಿ ಬಿಹುಅಕ್ಟೋಬರ್ಬೆಳೆ ಬೆಳೆಯುವ ಅವಧಿಯಲ್ಲಿ ಪ್ರಾರ್ಥನೆ ಮತ್ತು ಸರಳ ಆಚರಣೆಯ ಹಬ್ಬ

ಪ್ರಮುಖ ಲಕ್ಷಣಗಳು:
1.ಕೃಷಿ ಆಧಾರಿತ ಹಬ್ಬ
2.ಅಸ್ಸಾಮಿ ಹೊಸ ವರ್ಷದೊಂದಿಗೆ ಸಂಬಂಧ
3.ಬಿಹು ನೃತ್ಯ ಮತ್ತು ಬಿಹು ಹಾಡುಗಳು ಪ್ರಸಿದ್ಧ
4.ಢೋಲ್, ಪೇಪಾ, ಗೊಗೊನಾ ಮುಂತಾದ ಸಂಪ್ರದಾಯಬದ್ಧ ವಾದ್ಯಗಳ ಬಳಕೆ
5.ಸಮುದಾಯ ಏಕತೆ ಮತ್ತು ಸಾಂಸ್ಕೃತಿಕ ಗುರುತಿನ ಸಂಕೇತ

ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು

ಮದ್ಯ ಸುಂಕ: ರಾಜ್ಯದ ಕ್ರಮಕ್ಕೆ ಬಿಎಐ ಸ್ವಾಗತ
ಸಂದರ್ಭ:
ಪೇಯದಲ್ಲಿ ಇರುವ ಮದ್ಯದ ಪ್ರಮಾಣಕ್ಕೆ ಅನುಗುಣವಾಗಿ ಸುಂಕ ವಿಧಿಸುವ ಕರ್ನಾಟಕದ ಕ್ರಮವನ್ನು ಇತರ ರಾಜ್ಯಗಳೂ ಅನುಕರಿಸಬೇಕು ಎಂಬ ನಿರೀಕ್ಷೆ ಹೊಂದಿರುವುದಾಗಿ ಭಾರತೀಯ ಮದ್ಯ ತಯಾರಕರ ಸಂಘ (ಬಿಎಐ) ಹೇಳಿದೆ.

  • ಮದ್ಯದ ಪ್ರಮಾಣಕ್ಕೆ ಅನುಗುಣವಾಗಿ ಪೇಯದ ಮೇಲೆ ಸುಂಕ ವಿಧಿಸುವುದಕ್ಕೆ ಸಂಬಂಧಿಸಿದ ಕರಡು ಅಧಿಸೂಚನೆಯನ್ನು ರಾಜ್ಯ ಸರ್ಕಾರವು ಹೊರಡಿಸಿದೆ.
  • ಕರ್ನಾಟಕ ಇರಿಸಿರುವ ಹೆಜ್ಜೆಯು ಮಹತ್ವದ ಪರಿವರ್ತನೆ ತರುವಂಥದ್ದು ಎಂದು ಹೇಳಿರುವ ಬಿಎಐ, ಇದರಿಂದಾಗಿ ವರಮಾನ ಸಂಗ್ರಹವು ಉತ್ತಮವಾಗಲಿದೆ ಎಂದು ಹೇಳಿದೆ.
  • ಮದ್ಯದ ಮೇಲೆ ತೆರಿಗೆ ವಿಧಿಸಬೇಕೇ ವಿನಾ ಅದರ ಜೊತೆ ಇರುವ ನೀರಿನ ಮೇಲೆ ಅಲ್ಲ ಎಂಬ ನಂಬಿಕೆಯ ಆಧಾರದಲ್ಲಿ ‘ಕರ್ನಾಟಕ ಅಬಕಾರಿ (ಅಬಕಾರಿ ಸುಂಕ ಮತ್ತು ಶುಲ್ಕಗಳ ತಿದ್ದುಪಡಿ) ನಿಯಮ – 2026’ ಹೊಸ ತೆರಿಗೆ ವ್ಯವಸ್ಥೆಯನ್ನು ರೂಪಿಸುತ್ತದೆ ಎಂದು ಬಿಎಐ ಹೇಳಿದೆ.
  • ‘ಇದು ಮದ್ಯದ ಮೇಲಿನ ತೆರಿಗೆಯ ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ ಒ) ಶಿಫಾರಸು ಮಾಡಿರುವುದಕ್ಕೆ ಅನುಗುಣವಾಗಿದೆ. ಇದನ್ನು ಜಾಗತಿಕವಾಗಿ ವ್ಯಾಪಕವಾಗಿ ಅನುಸರಿಸಲಾಗುತ್ತಿದೆ’ ಎಂದೂ ಬಿಎಐ ಹೇಳಿದೆ.
  • ದೇಶದ ಪ್ರಮುಖ ಮದ್ಯ ತಯಾರಿಕಾ ಕಂಪನಿಗಳಾದ ಯುನೈಟೆಡ್ ಬ್ರಿವರಿಸ್, ಎಬಿಇನ್‌ಬೆವ್ ಕಾರ್ಲ್ಸ್ ಬರ್ಗ್ ಈ ಸಂಘಟನೆಯ ಸದಸ್ಯತ್ವ ಹೊಂದಿವೆ ಇವು ಒಟ್ಟಾಗಿ ದೇಶದ ಬಿಯರ್ ಮಾರುಕಟ್ಟೆಯಲ್ಲಿ ಶೇ 85ರಮ್ಮ ಪಾಲು ಹೊಂದಿವೆ.
  • ಪೇಯದಲ್ಲಿ ಇರುವ ಮದ್ಯದ ಪ್ರಮಾಣಕ್ಕೆ ಅನುಗುಣವಾದ ಸುಂಕ ವಿಧಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ ಎಂದು ಮುಖ್ಯಮಂತ್ರಿ ಅವರು ಬಜೆಟ್ ಭಾಷಣದಲ್ಲಿ ಪ್ರಕಟಿಸಿದ್ದರು.
  • ‘ಈ ಬಗೆಯ ತೆರಿಗೆ ವ್ಯವಸ್ಥೆಯನ್ನು ಘೋಷಿಸುವ ಮೂಲಕ ಕರ್ನಾಟಕವು ವರಮಾನ ಹೆಚ್ಚಳ ಗುರಿಯನ್ನು ಅಪೇಕ್ಷಿತ ಸಾರ್ವಜನಿಕ ಆರೋಗ್ಯದ ಜೊತೆ ಜೋಡಿಸಿದ ಮೊದಲ ರಾಜ್ಯವಾಗಿದೆ’.

ಭಾರತೀಯ ಮದ್ಯ ತಯಾರಕರ ಸಂಘ (ಬಿಎಐ) ಭಾರತದಲ್ಲಿನ ಬಿಯರ್ ಉದ್ಯಮದ ಪ್ರಮುಖ ಕೈಗಾರಿಕಾ ಸಂಘವಾಗಿದ್ದು, United Breweries, AB InBev ಮತ್ತು Carlsberg ಕಂಪನಿಗಳು ಸೇರಿ ಇದನ್ನು ಸ್ಥಾಪಿಸಿವೆ. ಈ ಸಂಘವು World Brewing Alliance ಜೊತೆ ಸಹಭಾಗಿತ್ವದಲ್ಲಿದೆ.

  • ಈ ಸಂಘದ ಉದ್ದೇಶ ಭಾರತದಲ್ಲಿ ಬಿಯರ್ ವಲಯದ ವೃದ್ಧಿ, ಜವಾಬ್ದಾರಿಯುತ ಬಳಕೆ ಕುರಿತು ಜಾಗೃತಿ, ಸರ್ಕಾರದ ನೀತಿಗಳ ಬಗ್ಗೆ ಕೈಗಾರಿಕಾ ಪ್ರತಿನಿಧಿತ್ವ, ಹಾಗೂ ಸಸ್ಟೇನಬಿಲಿಟಿ ಮತ್ತು ನಿಯಂತ್ರಣ ಸುಧಾರಣೆಗಳಿಗೆ ಬೆಂಬಲ ನೀಡುವುದಾಗಿದೆ. ದೆಹಲಿಯನ್ನು ಕೇಂದ್ರವಾಗಿಟ್ಟುಕೊಂಡಿರುವ ಈ ಸಂಘದ ಡೈರೆಕ್ಟರ್ ಜನರಲ್ ವಿನೋದ್ ಗಿರಿ ಆಗಿದ್ದಾರೆ.
  • ಸ್ಥಾಪನೆ – 2024ರಲ್ಲಿ ರೂಪುಗೊಂಡಿತು
  • ಸ್ಥಾಪಕ ಕಂಪನಿಗಳು – United Breweries, AB InBev, Carlsberg
  • ಸಹಭಾಗಿತ್ವ – World Brewing Alliance
  • ಮುಖ್ಯ ಉದ್ದೇಶ – ಬಿಯರ್ ಉದ್ಯಮ ವೃದ್ಧಿ, ನೀತಿ ಪ್ರತಿನಿಧಿತ್ವ, ಜವಾಬ್ದಾರಿಯುತ ಬಳಕೆ, ಸಸ್ಟೇನಬಿಲಿಟಿ
  • ಪ್ರತಿನಿಧಿತ್ವ – ಈ ಸಂಘಕ್ಕೆ ಸೇರಿರುವ ಕಂಪನಿಗಳು ಭಾರತದಲ್ಲಿ ಮಾರಾಟವಾಗುವ ಬಿಯರ್‌ನ ಸುಮಾರು 85% ಅನ್ನು ಪ್ರತಿನಿಧಿಸುತ್ತವೆ.

ಮುಖ್ಯ ಪರೀಕ್ಷೆ

ಪತ್ರಿಕೆ-I: ಪ್ರಬಂಧಗಳು

ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ

ಭಾರತದ ಜನಸಾಂಖ್ಯಿಕ ಲಾಭಾಂಶವನ್ನು ನಿಜವಾದ ಆರ್ಥಿಕ ಶಕ್ತಿಯಾಗಿ ಪರಿವರ್ತಿಸಲು ಯಾವ ನೀತಿಪರ ಬದಲಾವಣೆಗಳು ಅಗತ್ಯ? ವಿಶ್ಲೇಷಿಸಿ.

ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ

ಪತ್ರಿಕೆ-II: ಸಾಮಾನ್ಯ ಅಧ್ಯಯನ-1

ಪಿಂಚಣಿ ಕ್ಷೇತ್ರ: ಶೇ 100ರಷ್ಟು ಎಫ್‌ಡಿಐ ?
ಸಂದರ್ಭ: ಪಿಂಚಣಿ ವಲಯದಲ್ಲಿ ವಿದೇಶಿ ನೇರ ಹೂಡಿಕೆಯನ್ನು (ಎಫ್‌ಡಿಐ) ಕೇಂದ್ರ ಸರ್ಕಾರವು ಶೇಕಡ 100ಕ್ಕೆ ಹೆಚ್ಚಿಸುವ ಸಾಧ್ಯತೆ ಇದೆ. ಇದಕ್ಕೆ ಸಂಬಂಧಿಸಿದ ಮಸೂದೆಯೊಂದನ್ನು ಸಂಸತ್ತಿನ ಮುಂದಿನ ಅಧಿವೇಶನದಲ್ಲಿ ಮಂಡಿಸುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

  • ವಿಮಾ ವಲಯದಲ್ಲಿ ಶೇ 100ರು ಎಫ್‌ಡಿಐಗೆ ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಮಸೂದೆಗೆ ಸಂಸತ್ತು ಕಳೆದ ವರ್ಷ ಒಪ್ಪಿಗೆ ನೀಡಿದೆ.
  • ಪಿಂಚಣಿ ವಲಯದಲ್ಲಿ ಎಫ್‌ಡಿಐ ಮಿತಿಯನ್ನು ಶೇ 100ಕ್ಕೆ ಹೆಚ್ಚಿಸುವ ಅವಕಾಶ ಕಲ್ಪಿಸಲು ‘ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ಕೆ – 2013’ಕ್ಕೆ ಅಗತ್ಯ ತಿದ್ದುಪಡಿಗಳನ್ನು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಅಥವಾ ಚಳಿಗಾಲದ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ. ಈಗ ಪಿಂಚಣಿ ವಲಯದಲ್ಲಿ ಶೇ 49ರಷ್ಟು ಎಫ್‌ಡಿಐಗೆ ಅವಕಾಶ ಇದೆ.
  • ಕಾಯ್ಕೆಗೆ ತಿನ್ನುವಡಿ ತರುವ ಮಸೂದೆಯು ಎನ್‌ಪಿಎಸ್ ಟ್ರು ಅನ್ನು ಪಿಎಫ್‌ಆರ್‌ಡಿ ವ್ಯಾಪ್ತಿಯಿಂದ ಹೊರಗೆ ತರುವ ಅಂಶವನ್ನೂ ಒಳಗೊಳ್ಳು ಹುದು ಎನ್ನಲಾಗಿದೆ.

ಪತ್ರಿಕೆ-III: ಸಾಮಾನ್ಯ ಅಧ್ಯಯನ-2

ಪತ್ರಿಕೆ-IV: ಸಾಮಾನ್ಯ ಅಧ್ಯಯನ-3

ಪತ್ರಿಕೆ-V: ಸಾಮಾನ್ಯ ಅಧ್ಯಯನ-4

0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments