Sun. Apr 19th, 2026

ಕೆ.ಎ.ಎಸ್ ಪ್ರಚಲಿತ ವಿದ್ಯಮಾನಗಳು: ಪ್ರಚಲಿತ ವಿದ್ಯಮಾನಗಳು ಕೆ.ಪಿ.ಎಸ್.ಸಿ ಪಠ್ಯಕ್ರಮದ ‘ಜೀವಂತ ನಾಡಿಮಿಡಿತ’ವಿದ್ದಂತೆ. ಇದು ಕೇವಲ ಪ್ರತ್ಯೇಕವಾಗಿ ನೆನಪಿಡಬೇಕಾದ ವಿಷಯವಲ್ಲ; ಬದಲಿಗೆ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳೆರಡರಲ್ಲೂ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ನೀತಿಶಾಸ್ತ್ರವನ್ನು ಒಂದಕ್ಕೊಂದು ಬೆಸೆಯುವ ಒಂದು ಚಲನಶೀಲ ಕೊಂಡಿಯಾಗಿದೆ. ಮುಂಬರುವ ಪರೀಕ್ಷೆಗಳ ಸಂದರ್ಭದಲ್ಲಿ, ಕೇವಲ “ಸುದ್ದಿ ಓದುವುದರಿಂದ” “ಸುದ್ದಿಯ ಮೂಲಕ ಪಠ್ಯಕ್ರಮವನ್ನು ಅಭ್ಯಾಸ ಮಾಡುವುದು” ಎಂಬ ಹಂತಕ್ಕೆ ಬದಲಾಗುವುದು ಒಬ್ಬ ಗಂಭೀರ ಅಭ್ಯರ್ಥಿಯನ್ನು ಸಾಮಾನ್ಯ ಓದುಗನಿಂದ ಪ್ರತ್ಯೇಕಿಸುವ ಪ್ರಮುಖ ಬದಲಾವಣೆಯಾಗಿದೆ.

“ಪಠ್ಯಕ್ರಮಕ್ಕೆ ಮೊದಲ ಆದ್ಯತೆ” ಎಂಬ ತತ್ವ
ಕೆ.ಪಿ.ಎಸ್.ಸಿ ಪಠ್ಯಕ್ರಮಕ್ಕೆ ಕಟ್ಟುನಿಟ್ಟಾಗಿ ಹೊಂದಿಕೆಯಾಗುವ ಪ್ರಚಲಿತ ವಿದ್ಯಮಾನಗಳ ಮಾದರಿಯನ್ನು ಅನುಸರಿಸುವ ಮೂಲಕ, ನೀವು ದಿನಪತ್ರಿಕೆ ಓದಲು ವ್ಯಯಿಸುವ ಪ್ರತಿ ಗಂಟೆಯೂ ನಿಮ್ಮ ಪರೀಕ್ಷೆಯ ಶ್ರೇಣಿಯನ್ನು (Rank) ಉತ್ತಮಪಡಿಸಲು ಪೂರಕವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

ಪೂರ್ವಭಾವಿ ಪರೀಕ್ಷೆ

ಪತ್ರಿಕೆ-I: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನಗಳು
‘ರಾಷ್ಟ್ರೀಯ ಜಲ ಜೀವನ್ ಮಿಷನ್ ಯೋಜನೆ

  • 2019ರ ಆಗುತ್ತ 15ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ‘ರಾಷ್ಟ್ರೀಯ ಜಲ ಜೀವನ್ ಮಿಷನ್ ಯೋಜನೆಗೆ ಚಾಲನೆ ನೀಡಿದರು. ಪ್ರತಿ ಮನೆಗೂ ಕೊಳಾಯಿ ನೀರು ನೀಡುವುದು ಯೋಜನೆಯ ಉದ್ದೇಶ.
  • 2024ರ ಹೊತ್ತಿಗೆ ಭಾರತದ ಗ್ರಾಮೀಣ ಪ್ರದೇಶಗಳ ಪ್ರತಿ ವ್ಯಕ್ತಿಗೆ ದಿನಕ್ಕೆ 55 ಲೀಟರ್ ಶುದ್ಧ ನೀರು ಒದಗಿಸುವ ಮಹತ್ವಾಕಾಂಕ್ಷಿ ಯೋಜನೆ ಅದಾಗಿತ್ತು ಆಯೋಜನೆಯ ಮೂಲ ಅಂದಾಜು ವೆಚ್ಚ ₹3.6 ಲಕ್ಷ ಕೋಟಿ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಕಾರ್ಯಕ್ರಮವನ್ನು ಪುನರ್ ರಚಿಸಿ ಆರಂಭಿಸಿದ ಈ ಯೋಜನೆ, ಜಗತ್ತಿನ ಅತಿದೊಡ್ಡ ಗ್ರಾಮೀಣ ಕುಡಿಯುವ ನೀರಿನ ಕಾರ್ಯಕ್ರಮ ಎಂಬ ಹೆಗ್ಗಳಿಕೆ ಹೊಂದಿದೆ.
  • 2019ರಲ್ಲಿ ದೇಶದ 3.23 ಕೋಟಿ ( 17) ಗ್ರಾಮೀಣ ಕುಟುಂಬಗಳಿಗೆ ಮಾತ್ರ ನಲ್ಲಿ ನೀರಿನ ಸಂಪರ್ಕವಿತ್ತು 2025ರ ಫೆಬ್ರುವರಿ ವೇಳೆಗೆ 15.44 ಕೋಟಿ (ಶೇ 79.74) ಗ್ರಾಮೀಣ ಕುಟುಂಬಗಳಿಗೆ ನಲ್ಲಿ ಸಂಪರ್ತ ನೀಡಲಾಗಿದೆ.

ಅದಾನಿ ಏಷ್ಯಾದ ಶ್ರೀಮಂತ ವ್ಯಕ್ತಿ
ಸಂದರ್ಭ:
ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ, ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಮತ್ತೆ ಹೊರಹೊಮ್ಮಿದ್ದಾರೆ.

  • ರಿಲಯನ್ನು ಇಂಡಸ್ಟ್ರೀಸ್ ಸಮೂಹದ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು ಇದುವರೆಗೆ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದರು. ಇದೀಗ ಅಂಬಾನಿಯನ್ನು ಹಿಂದಿಕ್ಕಿ ಅದಾನಿ, ಭಾರತ ಮತ್ತು ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅದಾನಿ ಸಮೂಹದ ಷೇರು ಮೌಲ್ಯದಲ್ಲಿ ಏರಿಕೆ ಕಂಡುಬಂದ ಕಾರಣ ಅದಾನಿ ಅವರ ನಿವ್ವಳ ಆಸ್ತಿ ಮೌಲ್ಯವು ಗಣನೀಯವಾಗಿ ಹೆಚ್ಚಾಗಿದೆ.
  • ಗೌತಮ್ ಅದಾನಿ ಅವರ ನಿವ್ವಳ ಸಂಪತ್ತಿನ ಮೌಲ್ಯ ₹8.59 ಲಕ್ಷ ಕೋಟಿಗೆ (92.6 ಬಿಲಿಯನ್ ಡಾಲರ್) ಏರಿಕೆ ಆಗಿದೆ. ಅಂಬಾನಿ ಸಂಪತ್ತು 28.42 ಲಕ್ಷ ಕೋಟಿ (90.8 ಬಿಲಿಯನ್ ಡಾಲರ್) ಇದೆ.
  • ಬ್ಲೂಮ್‌ಬರ್ಗ್ ಶುಕ್ರವಾರ ಪ್ರಕಟಿಸಿ ರುವ ಜಾಗತಿಕ ಸಿರಿವಂತರ ಪಟ್ಟಿಯಲ್ಲಿ ಅದಾನಿ 19ನೇ ಸ್ನಾನ ಪಡೆದಿದ್ದಾರೆ. ಜಗತ್ತಿನ 500 ಶ್ರೀಮಂತ ವ್ಯಕ್ತಿಗಳ ಹೆಸರನ್ನು ದಿನನಿತ್ಯ ಬ್ಲೂಮ್‌ಬರ್ಗ್ ನವೀಕರಿಸುತ್ತದೆ.
  • ಅದಾನಿ ಅವರ ಸಂಪತ್ತಿನ ಬಹುಪಾಲು ಆದಾಯವು ಅವರ ಸಮೂಹದ ಪ್ರಮುಖ 10 ಕಂಪನಿಗಳ ಷೇರುಗಳಿಂದ ಬರುತ್ತದೆ ಇತ್ತೀಚಿನ ದಿನಗಳಲ್ಲಿ ಅದಾನಿ ಸಮೂಹದ ಷೇರುಗಳ ಬೆಲೆ ಏರಿಕೆಯಾಗಿದ್ದು. ಸಮೂಹದ ಮಾರುಕಟ್ಟೆ ಮೌಲ್ಯಕ್ಕೆ ಶತಕೋಟಿ ಡಾಲ‌ಗರ್‌ಳನ್ನು ಸೇರಿಸಿದೆ.
  • ಆದರೆ, ರಿಲಯನ್ಸ್ ಇಂಡಸ್ಟ್ರೀಸ್ ಇಂಧನ ದೂರಸಂಪರ್ಕ ಮತ್ತು ರಿಟೇಲ್ ವಹಿವಾಟಿನಲ್ಲಿ ಲಾಭದ ಪ್ರಮಾಣವು ಇಳಿಕೆಯಾಗಿದೆ ಇದು ಅಂಬಾನಿ ಸಂಪತ್ತು ಇಳಿಕೆಗೆ ಕಾರಣವಾಗಿದೆ ಅದರಿಂದ ಶತಕೋಟ್ಯಧಿಪತಿಗಳ(ಬಿಲಿಯನೇರ್‌ಗಳು) ಶ್ರೇಯಾಂಕದಲ್ಲಿ ಬದಲಾವಣೆ ಆಗಿದೆ.
  • ಟೆಸ್ನಾ ಕಂಪನಿಯ ಸಿಇಒ ಇಲಾನ್ ಮಸ್ಕ್ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ ಇವರ ಸಂಪತ್ತಿನ ನಿವ್ವಳ ಮೌಲ್ಯ ₹60 ಲಕ್ಷ ಕೋಟಿ (656 ಬಿಲಿಯನ್ ಡಾಲರ್) ಆಗಿದೆ.

ಪತ್ರಿಕೆ-II: ರಾಜ್ಯದ ಪ್ರಾಮುಖ್ಯತೆಯ ಪ್ರಸ್ತುತ ಘಟನೆಗಳು ಮತ್ತು ರಾಜ್ಯ ಸರ್ಕಾರದ
ಪ್ರಮುಖ ಯೋಜನೆಗಳು

ಜಲಮಂಡಳಿಗೆ ಐಎಸ್ಒ ಮಾನ್ಯತೆ
ಸಂದರ್ಭ:
ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಐಎಸ್ಒ 50001: 2018 ಪ್ರಮಾಣಪತ್ರ ಪಡೆದಿದೆ. ಈ ಪ್ರಮಾಣಪತ್ರ ಪಡೆದ ದೇಶದ ಮೊದಲ ಜಲ ಮಂಡಳಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

  • ಬ್ಯೂರೋ ವೆರಿಟಾಸ್ ಅಧಿಕೃತವಾಗಿ ನೀಡಿರುವ ಈ ಪ್ರತಿಷ್ಠಿತ ಪ್ರಮಾಣಪತ್ರವು, ಮಂಡಳಿಯ ಅತ್ಯುತ್ತಮ ಇಂಧನ ನಿರ್ವಹಣಾ ವ್ಯವಸ್ಥೆಗಳನ್ನು ಔಪಚಾರಿಕವಾಗಿ ಗುರುತಿಸಿದೆ.
  • ಮಂಡಳಿಯ ಕಾವೇರಿ ಜಲಸಂಗ್ರಹದ ಮೂಲವಾದ ಮಂಡ್ಯ ಜಿಲ್ಲೆಯ ತೊರೆಕಾಡನಹಳ್ಳಿ. ಕನಕಪುರ ತಾಲ್ಲೂಕಿನ ಹಾರೋಹಳ್ಳಿ, ಮತ್ತು ತಾತಗುಣಿ ಮೂರು ಪ್ರಮುಖ ಸ್ಥಳಗಳಲ್ಲಿರುವ ತನ್ನ ಬೃಹತ್ ನೀರು ಸರಬರಾಜು ವಂಪಿಂಗ್ ಸ್ಟೇಷನ್ಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ನಿರ್ವಹಿಸುತ್ತಿರುವುದಕ್ಕಾಗಿ ಜಲಮಂಡಳಿಗೆ ಈ ಪ್ರಮಾಣವತ್ರವನ್ನು ನೀಡಿ ಗೌರವಿಸಲಾಗಿದೆ.
  • ಪ್ರಮಾಣ ಪತ್ರವು ಕಾವೇರಿ ಭವನದಲ್ಲಿರುವ ಪ್ರಧಾನ ಕಚೇರಿಯ ಪ್ರಮುಖ ಪೂರಕ ಕಾರ್ಯಗಳನ್ನು ಹಾಗೂ ಬೃಹತ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಿರಂತರ ನೀರು ಸರಬರಾಜು ಮಾಡುವ ಒಟ್ಟಾರೆ ಪ್ರಕ್ರಿಯೆಯನ್ನು ಒಳಗೊಂಡಿದೆ.
  • ಕಳೆದ ವರ್ಷವಷ್ಟೇ ಕೊಳವೆ ಮೂಲಕ ಕುಡಿಯುವ ನೀರು ಸರಬರಾಜು ನಿರ್ವಹಣಾ ವ್ಯವಸ್ಥೆಗಾಗಿ ಭಾರತೀಯ ಮಾನದಂಡಗಳ ಬ್ಯೂರೋ ಪ್ರಮಾಣಪತ್ರವನ್ನು ಪಡೆದಿತ್ತು.

ಯಾಣ ಭೂಪಾರಂಪರಿಕ ತಾಣ: ಜಿಎಸ್ಐ ನಿರ್ಣಯ
ಸಂದರ್ಭ:
ಪ್ರಾಕೃತಿಕ ವೈಶಿಷ್ಟ್ಯದ ಯಾಣ ಪ್ರದೇಶವನ್ನು ರಾಷ್ಟ್ರೀಯ ಭೂಪಾರಂಪರಿಕ ತಾಣ ಎಂದು ಘೋಷಿಸಲು ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ ಸಂಸ್ಥೆ (ಜಿಎಸ್ಐ) ತನ್ನ 176ನೇ ಸಂಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ನಿರ್ಧರಿಸಿದೆ.

  • ‘2,700 ದಶಲಕ್ಷ ವರ್ಷಗಳ ಹಿಂದೆಸುಣ್ಣದ ಕಲ್ಲಿನ ರಚನೆಯಂತಹ ಬಂಡೆ ಗಳಿಂದ ರಚನೆಯಾದ ಅವರೂಪದ ತಾಣವಾದ ಯಾಣ ಭೂ ಸಂರಕ್ಷಣೆ, ಭೂ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆ ಹಾಗೂ ಅಂತರಾಷ್ಟ್ರೀಯ ಮಟ್ಟದ ಪ್ರವಾಸೋದ್ಯಮ ತಾಣವಾಗಿಸಲು ರಾಷ್ಟ್ರೀಯ ಮಹತ್ವದ ಭೂಪಾರಂಪರಿಕ ತಾಣ ಎಂದು ಘೋಷಿಸಲು ನಿರ್ಧರಿಸಲಾಗಿದೆ’ ಎಂದು ಜಿಎಸ್‌ಐ ಏ.13ರಂದುರಾಜ್ಯದ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ತಿಳಿಸಿದೆ.
  • ‘ಯಾಣದಲ್ಲಿರುವ ಗುಹೆಗಳ ಸುಣ್ಣದ ಕಲ್ಲಿನ ರಚನೆಗಳು ಭೂದೃಶ್ಯದವ್ರತಿಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ನೈಸರ್ಗಿಕ ಪ್ರಯೋಗಾಲಯದಂತಿವೆ. ಈ ಸ್ಥಳವು ಹೆಚ್ಚಿನ ಭೌಗೋಳಿಕ ಮತ್ತು ಶೈಕ್ಷಣಿಕ ಮೌಲ್ಯವನ್ನು ಹೊಂದಿದ್ದು ಜೀವವೈವಿಧ್ಯ ಸಮ್ಮದ ಪಶ್ಚಿಮ ಘಟ್ಟಗಳಲ್ಲಿ ಹುದುಗಿರುವ ಭೂರೂಪಗಳ ನಿಧಾನ ಭೂವೈಜ್ಞಾನಿಕ ಪ್ರಕ್ರಿಯೆಗಳ ಶಕ್ತಿಯನ್ನು ಪ್ರದರ್ಶಿಸುತ್ತವೆ. ಇಲ್ಲಿನಶಿಲೆಗಳನ್ನು ರಕ್ಷಿಸುವುದು, ಸಂರಕ್ಷಿಸು ವುದು ಮತ್ತು ನಿರ್ವಹಿಸು ವುದು ಅವಶ್ಯಕವಾಗಿದೆ. ಮುಂದಿನ ಪೀಳಿಗೆಯ ಜ್ಞಾನಕ್ಕಾಗಿ ಇಂತಹ ತಾಣದ ಸಂರಕ್ಷಣೆ ತುರ್ತು ಅಗತ್ಯ’ ಎಂದು ಜಿಎಸ್‌ಐ ಹೇಳಿದೆ.
  • ‘ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ಮೂಲಸೌಕರ್ಯಗಳಿಗೆ ಬಲಬರಬಹುದು ಗಣಿಗಾರಿಕೆ ನಡೆಸಿ ಪರಿಸರಕ್ಕೆ ಧಕ್ಕೆ ತರುವ ಚಟುವಟಿಕೆಗಳಿಗೆ ಕಡಿವಾಣ ಬೀಳಬಹುದು’.


ಮುಖ್ಯ ಪರೀಕ್ಷೆ

ಪತ್ರಿಕೆ-I: ಪ್ರಬಂಧಗಳು

ಪ್ರಬಂಧ-1: ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಷಯ

ಪ್ರಬಂಧ-2: ರಾಜ್ಯ ಮಹತ್ವ/ ಸ್ಥಳೀಯ ಮಹತ್ವ ವಿಷಯ

ಪತ್ರಿಕೆ-II: ಸಾಮಾನ್ಯ ಅಧ್ಯಯನ-1

721 ಟನ್ ಚಿನ್ನ, 7,334 ಟನ್ ಬೆಳ್ಳಿ ಆಮದು: ವಾಣಿಜ್ಯ ಸಚಿವಾಲಯ: ₹6.68 ಲಕ್ಷ ಕೋಟಿ ಚಿನ್ನ ಆಮದು
ಸಂದರ್ಭ:
2025-26ರ ಆರ್ಥಿಕ ವರ್ಷದಲ್ಲಿ ₹6.68 ಲಕ್ಷ ಕೋಟಿ ಮೌಲ್ಯದ ಚಿನ್ನ ದೇಶಕ್ಕೆ ಆಮದಾಗಿದೆ. ಇದು ಸಾರ್ವಕಾಲಿಕ ಗರಿಷ್ಠ ಮಟ್ಟವಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯವು ತಿಳಿಸಿದೆ.

  • 2024-25ರಲ್ಲಿ ₹5.38 ಲಕ್ಷ ಕೋಟಿ ಮೌಲ್ಯದ ಚಿನ್ನ ದೇಶಕ್ಕೆ ಆಮದಾಗಿತ್ತು. ಇದಕ್ಕೆ ಹೋಲಿಸಿದರೆ ಚಿನ್ನದ ಆಮದು ಪ್ರಮಾಣ ಶೇ 24ರಷ್ಟು ಹೆಚ್ಚಳವಾಗಿದೆ. ಚಿನ್ನದ ಬೆಲೆಯಲ್ಲಿ ಹೆಚ್ಚಳವಾಗಿದ್ದರಿಂದ ಆಮದು ಮೌಲ್ಯ ಏರಿಕೆಯಾಗಿದೆ ಎಂದು ತಿಳಿಸಿದೆ.
  • 2024-25ರಲ್ಲಿ 757.09 ಟನ್‌ನಷ್ಟು ಚಿನ್ನ ಆಮದಾಗಿತ್ತು. ಕಳೆದ ಆರ್ಥಿಕ ವರ್ಷದಲ್ಲಿ 721.03 ಟನ್ ಆಮದಾಗಿದ್ದು, ಶೇ 4.76ರಷ್ಟು ಆಮದು ಪ್ರಮಾಣವು ಇಳಿಕೆ ಆಗಿದೆ.
  • ಕಳೆದ ಆರ್ಥಿಕ ವರ್ಷದಲ್ಲಿ ಬೆಳ್ಳಿ, ಆಮದು ಶೇ 150ರಷ್ಟು ಹೆಚ್ಚಳವಾಗಿದ್ದು. ₹1.11 ಲಕ್ಷ ಕೋಟಿ ಮೌಲ್ಯದಷ್ಟು ಆಮದಾಗಿತ್ತು ಗಾತ್ರದ ಲೆಕ್ಕದಲ್ಲಿ 7,334.96 ಟನ್‌ನಮ್ಮ ಆಮದಾಗಿದ್ದು ಶೇ 42ರಷ್ಟು ಏರಿಕೆಯಾಗಿದೆ.
  • ಈ ಲೋಹಗಳ ಆಮದು ಹೆಚ್ಚಳದಿಂದ ದೇಶದ ವ್ಯಾಪಾರ ಕೊರತೆ ₹30.93 ಲಕ್ಷ ಕೋಟಿಗೆ ಏರಿಕೆಯಾಗಿದೆ. ರಫ್ತು ಮೌಲ್ಯಕ್ಕಿಂತ ಆಮದು ಮೌಲ್ಯ ಹೆಚ್ಚಿದ್ದರೆ ಅದನ್ನು ವ್ಯಾಪಾರ ಕೊರತೆ ಎಂದು ಕರೆಯಲಾಗುತ್ತದೆ.
  • ದೇಶದ ಒಟ್ಟು ಬೇಡಿಕೆಯ ಪೈಕಿ ಶೇ 40ರಷ್ಟು ಚಿನ್ನ ಸ್ಕಿಟ್ನರ್ಲೆಂಡ್‌ ನಿಂದ ಆಮದಾಗುತ್ತದೆ. ಯುಎ ಇನಿಂದ ಶೇ 16 ಮತ್ತು ದಕ್ಷಿಣ ಆಫ್ರಿಕಾದಿಂದ ಶೇ 10ರಷ್ಟು ಚಿನ್ನ ಆಮದಾಗುತ್ತದೆ ದೇಶದ ಒಟ್ಟು ಆಮದಿನಲ್ಲಿ ಅಮೂಲ್ಯ ಲೋಹಗಳ ಆಮದು ಪ್ರಮಾಣ ಶೇ 5ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ.
  • ಕಳೆದ ಆರ್ಥಿಕ ವರ್ಷದಲ್ಲಿ ಸ್ವಿಟ್ಸರ್ಲೆಂಡ್‌ನಿಂದ ₹2.25 ಲಕ್ಷ ಕೋಟಿ ಮೌಲ್ಯದ ಚಿನ್ನ ಆಮದಾಗಿದ್ದು 2024-25ಕ್ಕೆ ಹೋಲಿಸಿದರೆ ಶೇ 11ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದೆ.
  • ಚೀನಾ ಬಳಿಕ ಭಾರತವು ಜಗತ್ತಿನ ಎರಡನೇ ಅತಿದೊಡ್ಡ, ಚಿನ್ನದ ಗ್ರಾಹಕ ರಾಷ್ಟ್ರವಾಗಿದೆ.

ಪತ್ರಿಕೆ-III: ಸಾಮಾನ್ಯ ಅಧ್ಯಯನ-2

ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಗೆ ಸರ್ಕಾರದ ಕ್ರಮ: ‘ರೋಹಿತ್ ವೇಮುಲ’ ಮಸೂದೆಗೆ ಅಸ್ತು
ಸಂದರ್ಭ:
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಇತರ ಹಿಂದುಳಿದ ವರ್ಗಗಳು ಹಾಗೂ ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಮಾನ ಅವಕಾಶ ಮತ್ತು ಶಿಕ್ಷಣದ ಹಕ್ಕು ಕಲ್ಪಿಸುವ ಉದ್ದೇಶದಿಂದ ರೂಪಿಸಿರುವ ‘ಕರ್ನಾಟಕ ರೋಹಿತ್ ವೇಮುಲ ಮಸೂದೆಗೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

  • ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಮ ತಡೆಯಲು ‘ಕರ್ನಾಟಕ ರೋಹಿತ್ ವೇಮುಲ’ (ಬಹಿಷ್ಕಾರ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು ಮಸೂದೆಯನ್ನು ಸರ್ಕಾರ ರೂಪಿಸಿದೆ.
  • ‘ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಯಾರೊಬ್ಬರೂ ಜಾತಿ ಆಧಾರದಲ್ಲಿ ತಾರತಮ್ಮ ಎದುರಿಸಬಾರದು ಇದನ್ನು ಖಾತ್ರಿಪಡಿಸಲು ‘ರೋಹಿತ್ ವೇಮುಲ ಕಾಯ್ದೆ ಹೆಸರಿನ ಕಾನೂನು ಕರ್ನಾಟಕ ದಲ್ಲೂ ರೂಪಿಸಿ, ಜಾರಿಗೊಳಿಸಬೇಕು’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಹಿಂದೆ ಪತ್ರ ಬರೆದು ಆಗ್ರಹಿಸಿದ್ದರು.
  • ಮಸೂದೆಯು ಕಾಯ್ಕೆಯಾಗಿ ಜಾರಿಗೆ ಬಂದ ನಂತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವರ್ಗಗಳು, ಹಾತಿಗಳು ಮತಗಳು, ಲಿಂಗ, ದೇಶ ಎಂಬ ತಾರತಮ್ಮ ಇಲ್ಲದೆ ಮುಕ್ತ ವಾತಾವರಣ ಇರಲಿದೆ. ಈ ಸಂಸ್ಥೆಗಳಲ್ಲಿನ ಪ್ರದೇಶವು ಜಾತಿ, ವರ್ಗ, ಮತ, ಲಿಂಗ ಅಥವಾ ದೇಶ ಎಂಬ ಭೇದ ಇಲ್ಲದೆ ಎಲ್ಲರಿಗೂ ಮುಕ್ತವಾಗಿರುತ್ತದೆ. ಅರ್ಹತಾ ಪರೀಕ್ಷೆಗಳಲ್ಲಿನ ಅಂಕಗಳ ಆಧಾರದಲ್ಲಿ ಪ್ರದೇಶಾತಿ ಸಿಗಲಿದೆ. ನಿಯಮವನ್ನು ಉಲ್ಲಂಘಿಸಿದ ವ್ಯಕ್ತಿಗಳಿಗೆ ಒಂದು ವರ್ಷ ಜೈಲು ಶಿಕ್ಷೆ, 10 ಸಾವಿರ ದಂಡ ವಿಧಿಸಲು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
  • ಸಂತ್ರಸ್ತನಿಗೆ ಆರೋಪಿಯು ಸೂಕ್ತ ವರಿಹಾರ ನೀಡುವಂತೆ ನ್ಯಾಯಾಲಯ ಅನುಮತಿಸಲು ಕೂಡ ಅವಕಾಶ ಸಿಗಲಿದೆ ಆ ಮೊತ್ತವು ಗರಿಷ್ಠ 21 ಲಕ್ಷದವರೆಗೆ ಮತ್ತು ಅದಕ್ಕೆ ಹೆಚ್ಚುವರಿಯಾಗಿ ಬಡ್ಡಿಯೂ ಇರಲಿದೆ. ಈ ಹಿಂದೆ ಅವರಾಧ ಎಸಗಿದ ಕಾರಣಕ್ಕೆ ಶಿಕ್ಷೆಗೊಳಗಾದವರು ಮತ್ತೆ ಈ ಕಾಯ್ಕೆಯಡಿ ಶಿಕ್ಷೆಗೆ ಒಳಗಾದರೆ, ಅಂಥವರಿಗೆ ಕನಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲು ಮತ್ತು ₹1 ಲಕ್ಷ ದಂಡ ವಿಧಿಸಬೇಕೆಂಬ ಪ್ರಸ್ತಾವವೂ ಈ ಮಸೂದೆಯಲ್ಲಿದೆ.
  • ಈ ಕಾಯ್ದೆಯಡಿ ಎಸಗುವ ಪ್ರತಿಯೊಂದು ಅಪರಾಧವು ಸಂಜೆಯ ಮತ್ತು ಜಾಮೀನು ರಹಿತ ಎಂದು ಪರಿಗಣಿಸಲಾಗುವುದು ಕಾಯ್ಕೆಯ ನಿಬಂಧನೆಗಳನ್ನು ಉಲ್ಲಂಘಿಸುವ ಸಂಸ್ಥೆಗೆ ರಾಜ್ಯ ಸರ್ಕಾರವು ಯಾವುದೇ ಆರ್ಥಿಕ ನೆರವು ಅಥವಾ ಅನುದಾನ ನೀಡಬಾರದು ಅಪರಾಧ ಎಸಗುವ ಪ್ರತಿಯೊಬ್ಬ ವ್ಯಕ್ತಿ ಮತ್ತು ಕೃತ್ಯ ಎಸಗಲು ಇನ್ನೊಬ್ಬರಿಗೆ ಸಹಾಯ ಮಾಡುವ ಅಥವಾ ಪ್ರಚೋದಿಸುವ ವ್ಯಕ್ತಿ ಕೂಡ ಅವರಾಧದಲ್ಲಿ ಭಾಗವಹಿಸಿದ್ದಾರೆಂದು ಪರಿಗಣಿಸಲಾಗುತ್ತದೆ ಎಂದು ಮಸೂದೆ ಪ್ರಸ್ತಾಪಿಸಿದೆ.

ಪತ್ರಿಕೆ-IV: ಸಾಮಾನ್ಯ ಅಧ್ಯಯನ-3

ಪತ್ರಿಕೆ-V: ಸಾಮಾನ್ಯ ಅಧ್ಯಯನ-4

Source: Prajavani

0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments