Sun. Feb 8th, 2026

Current Affairs

ಅಮೆರಿಕ ಓಪನ್ ಟೇಬಲ್ ಟೆನಿಸ್ ಚಾಂಪಿಯನ್ ಷಿಪ್‌: ಅಂಜನಾರಾವ್

ಕ್ರೀಡೆ: ಅಮೆರಿಕ ಓಪನ್ ಟಿಟಿ

  • ಅಮೆರಿಕ ಓಪನ್ ಟಿಟಿ: ಎರಡು ಕಂಚು ಗೆದ್ದ ಅಂಜನಾ ರಾವ್
  • ಕರ್ನಾಟಕದ ಅಂಜನಾ ರಾವ್ ಅವರು ಅಮೆರಿಕದ ಲಾಸ್ ವೇಗಸ್‌ನಲ್ಲಿ ಇತ್ತೀಚೆಗೆ ನಡೆದ ಅಮೆರಿಕ ಓಪನ್ ಟೇಬಲ್ ಟೆನಿಸ್ ಚಾಂಪಿಯನ್ ಷಿಪ್‌ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.
  • ವಿಶ್ವದ ವಿವಿಧ ದೇಶಗಳಿಂದ ಒಟ್ಟು 1300 ಮಂದಿ ಈ ಚಾಂಪಿಯನ್‌ಷಿಪ್‌ನ ವಿವಿಧ ವಿಭಾಗಗಳಲ್ಲಿ ಭಾಗವಹಿಸಿದ್ದರು. ಮಹಿಳೆಯರ 40 ವರ್ಷ ಮೇಲ್ಪಟ್ಟವರ ವಿಭಾಗದ ಸಿಂಗಲ್ಸ್‌ನಲ್ಲಿ ಮತ್ತು ಇದೇ ವಿಭಾಗದ ಡಬಲ್ಸ್‌ನಲ್ಲಿ ಅವರು ಈ ಪದಕಗಳನ್ನು ಜಯಿಸಿದ್ದಾರೆ.

ತಂಬಾಕು ಉತ್ಪನ್ನಗಳು: ಸಿಗರೇಟು

ಆರ್ಥಿಕತೆ: ಸುಂಕ; ತಂಬಾಕು ಉತ್ಪನ್ನಗಳು

ಸಂದರ್ಭ: ಹೊಸ ವ್ಯವಸ್ಥೆಯ ಅಡಿಯಲ್ಲಿಪ್ರತಿ1,000 ಸಿಗರೇಟುಗಳಿಗೆ ಹೆಚ್ಚುವರಿಯಾಗಿ ₹2,050 ರಿಂದ ₹8,500ರವರೆಗೆ ಸುಂಕ ವಿಧಿಸಲಾಗುತ್ತದೆ.

  • ಸುಂಕದ ಪ್ರಮಾಣವು ಸಿಗರೇಟಿನ ಉದ್ದ ಹಾಗೂ ಅದಕ್ಕೆ ಫಿಲ್ಟ‌ರ್ ಇದೆಯೇ ಎಂಬುದನ್ನು ಆಧರಿಸಿ ನಿರ್ಧಾರವಾಗಲಿದೆ.ಕೇಂದ್ರ ಸರ್ಕಾರವು ಹೊಸ ನಿಯಮವನ್ನು ಅಧಿಸೂಚನೆಯಲ್ಲಿ ಪ್ರಕಟಿಸಿದ ನಂತರದಲ್ಲಿ ದೇಶದ ಪ್ರಮುಖ ಸಿಗರೇಟು ತಯಾರಿಕಾ ಕಂಪನಿಗಳ ಷೇರುಮೌಲ್ಯವು ಭಾರಿ ಪ್ರಮಾಣದಲ್ಲಿ ಕುಸಿದಿದೆ.ಐಟಿಸಿ ಷೇರುಮೌಲ್ಯವು ಶೇ 9.69ರಷ್ಟು ಕುಸಿದಿದೆ. ಗಾಡ್‌ಪ್ರೇ ಫಿಲಿಪ್ಸ್ ಕಂಪನಿಯ ಷೇರುಮೌಲ್ಯ ಶೇ 17.17ರಷ್ಟು ಕುಸಿದಿದೆ.
  • ತಂಬಾಕು ಸಂಬಂಧಿತ ಕಾಯಿಲೆಗಳಿಂದ ದೇಶದ ಮೇಲೆ ಆಗುವ ಆರ್ಥಿಕ ಹೊರೆಯು ವಾರ್ಷಿಕ ₹2.4 ಲಕ್ಷ ಕೋಟಿಗಿಂತ ಹೆಚ್ಚಾಗುವ ಅಂದಾಜು ಇದೆ. ಇಂತಹ ಸಂದರ್ಭದಲ್ಲಿ ಸಿಗರೇಟು ಬಹಳ ಅಗ್ಗವಾಗಬಾರದು ಎಂಬ ಉದ್ದೇಶದಿಂದ ಸುಂಕವನ್ನು ಹೆಚ್ಚಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.ಬೇರೆ ಉತ್ಪನ್ನಗಳಿಗೆ ಹೋಲಿಸಿದರೆ ತಂಬಾಕಿನ ಮೇಲೆ ಭಾರಿ ಪ್ರಮಾಣದ ತೆರಿಗೆ ಇರಬೇಕು ಎಂಬ ಕೇಂದ್ರದ ನಿಲುವಿಗೆ ಇದು ಅನುಗುಣವಾಗಿದೆ ಎಂದು ಅದು ತಿಳಿಸಿದೆ.

ಜೊಹ್ರಾನ್ ಮಮ್ಹಾನಿ: ನ್ಯೂಯಾರ್ಕ್ ಮೇಯ‌ರ್

  • ಜೊಹ್ರಾನ್ ಮಮ್ಹಾನಿ ಅಧಿಕಾರ ಸ್ವೀಕಾರ: ನ್ಯೂಯಾರ್ಕ್ ಮೇಯ‌ರ್ ಆಗಿ ಕುರಾನ್ ಮೇಲೆ ಕೈಯಿಟ್ಟು ಪ್ರಮಾಣವಚನ
  • ಭಾರತ ಸಂಜಾತ ಜೊಹ್ರಾನ್ ಮಮ್ಹಾನಿ ಅವರು ಹೊಸ ವರ್ಷದ ಮೊದಲ ದಿನದಂದು ನ್ಯೂಯಾರ್ಕ್‌ನ 112ನೇ ಮೇಯರ್ ಆಗಿ ಪ್ರಮಾಣವಚನ ಸ್ವೀಕರಿಸಿದರು.
  • 34 ವರ್ಷದ ಅವರು ಅಮೆರಿಕದ ಅತಿ ದೊಡ್ಡ ನಗರದ ‘ಪ್ರಥಮ ಪ್ರಜೆ’ಯಾಗಿ ಅಧಿಕಾರ ವಹಿಸಿಕೊಂಡ ಮೊದಲ ಮುಸ್ಲಿಂ ಹಾಗೂ ದಕ್ಷಿಣ ಏಷ್ಯಾದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾಲುದಾರರು.

ಜಿಎಸ್‌ಟಿ: ₹1.74 ಲಕ್ಷಕೋಟಿಸಂಗ್ರಹ

ಆರ್ಥಿಕತೆ: ತೆರಿಗೆ ಸುಧಾರಣೆಗಳು; ಜಿಎಸ್‌ಟಿ;

ಸಂದರ್ಭ: ಮರುಪಾವತಿಯಲ್ಲಿ ಶೇ31ರಷ್ಟು ಹೆಚ್ಚಳ ಸೆಸ್ಸಂಗ್ರಹದಲ್ಲಿಇಳಿಕೆ, ಸರಕುಮತ್ತುಸೇವಾ ತೆರಿಗೆ(ಜಿಎಸ್‌ಟಿ) ಮೂಲಕ ಡಿಸೆಂಬರ್ತಿಂಗಳಿನಲ್ಲಿ₹1,74,550 ಕೋಟಿ ವರಮಾನ ಸಂಗ್ರಹವಾಗಿದೆ.

  • 2024ರ ಡಿಸೆಂಬರ್‌ನಲ್ಲಿ ₹1.64 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹವಾ ಗಿತ್ತು. ಇದಕ್ಕೆ ಹೋಲಿಸಿದರೆ 2025ರ ಡಿಸೆಂಬರ್‌ನ ವರಮಾನ ಸಂಗ್ರಹ ಶೇ 6.1ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಸರ್ಕಾರದ ಅಂಕಿ-ಅಂಶಗಳು ತಿಳಿಸಿವೆ. ನವೆಂಬರ್‌ನಲ್ಲಿ ₹1.70 ಲಕ್ಷ ಕೋಟಿ ಸಂಗ್ರಹವಾಗಿತ್ತು.
  • ಒಟ್ಟು ಜಿಎಸ್‌ಟಿ ಸಂಗ್ರಹದ ಪೈಕಿ, ದೇಶದ ಆಂತರಿಕ ವಹಿವಾಟುಗಳಿಂದ ಬರುವ ಜಿಎಸ್‌ಟಿ ವರಮಾನವು ಶೇ 1.2ರಷ್ಟು ಏರಿಕೆ ಕಂಡಿದ್ದು, ₹1.22 ಲಕ್ಷ ಕೋಟಿಯಾಗಿದೆ. ಆಮದು ಮಾಡಿಕೊಂಡ ಸರಕುಗಳಿಂದ ಬಂದ ವರಮಾನವು ₹51,977 ಕೋಟಿಯಾಗಿದ್ದು, ಶೇ 19.7ರಷ್ಟು ಏರಿಕೆಯಾಗಿದೆ.
  • ಜಿಎಸ್‌ಟಿ ಮರುಪಾವತಿಯಲ್ಲಿ ಶೇ 31ರಷ್ಟು ಹೆಚ್ಚಳವಾಗಿದ್ದು, ₹28,980 ಕೋಟಿಯಾಗಿದೆ. ನಿವ್ವಳ ಜಿಎಸ್‌ಟಿ ಸಂಗ್ರಹವು ₹1.45 ಲಕ್ಷ ಕೋಟಿಯಾಗಿದೆ ಎಂದು ತಿಳಿಸಿದೆ.
  • 2024ರ ಡಿಸೆಂಬರ್‌ನಲ್ಲಿ ಸೆಸ್ ಮೂಲಕ ₹12,003 ಕೋಟಿ ಸಂಗ್ರಹ-ವಾಗಿತ್ತು. ಅದು ಕಳೆದ ಡಿಸೆಂಬರ್‌ನಲ್ಲಿ ₹4,238 ಕೋಟಿಗೆ ಇಳಿದಿದೆ.
  • ಜಿಎಸ್‌ಟಿ ಮಂಡಳಿಯು ಸೆಪ್ಟೆಂಬರ್ 22ರಂದು ಜಿಎಸ್‌ಟಿ ದರ ಪರಿಷ್ಕರಣೆ ಮಾಡಿತು. ಇದರಿಂದ ಹಲವು ಸರಕುಗಳ ಬೆಲೆ ಕಡಿಮೆ ಆಯಿತು. ಇದು ವರಮಾನ ಸಂಗ್ರಹ ಇಳಿಕೆಗೆ ಕಾರಣವಾಗಿದೆ. ನವೆಂಬರ್ ತಿಂಗಳಿಗೆ ಹೋಲಿಸಿದರೆ ಡಿಸೆಂಬರ್‌ನಲ್ಲಿ ವರಮಾನ ಸಂಗ್ರಹದಲ್ಲಿ ಏರಿಕೆ ಕಂಡು ಬಂದಿದೆ.
  • ‘ಪ್ರಸಕ್ತ ಆರ್ಥಿಕ ವರ್ಷದ ಮೊದಲ ಆರು ತಿಂಗಳಿನಲ್ಲಿ ಜಿಎಸ್‌ಟಿ ಸಂಗ್ರಹವು ಸದೃಢವಾಗಿತ್ತು. ಆದರೆ, ಜಿಎಸ್‌ಟಿ ದರ ಪರಿಷ್ಕರಣೆಯ ಬಳಿಕ ಸಂಗ್ರಹದ ಪ್ರಮಾಣವು ಇಳಿಕೆ ಕಂಡಿದೆ’ ಎಂದು ಡೆಲಾಯ್ಸ್ ಇಂಡಿಯಾ ಪಾಲುದಾರ ಮಣಿ ಹೇಳಿದ್ದಾರೆ.
  • ‘ಮಹಾರಾಷ್ಟ್ರ, ಗುಜರಾತ್, ಕರ್ನಾಟಕ ಮತ್ತು ಹರಿಯಾಣ ಜಿಎಸ್‌ಟಿ ಸಂಗ್ರಹಕ್ಕೆ ಹೆಚ್ಚಿನ ಕೊಡುಗೆ ನೀಡಿವೆ’ ಎಂದು ಗ್ರಾಂಟ್ ಥಾರ್ನ್‌ಟನ್ ಭಾರತ್ ಪಾಲುದಾರ ಮನೋಜ್  ಹೇಳಿದ್ದಾರೆ.

ಕನ್ನಡಿಗರಿಗೆ ಮೀಸಲು: ಮಸೂದೆ ಅಂತಿಮ

ಭಾರತೀಯ ರಾಜಕೀಯ: ಕನ್ನಡಿಗರಿಗೆ ಉದ್ಯೋಗ ಮೀಸಲಾತಿ

ಸಂದರ್ಭ:ಖಾಸಗಿ ಉದ್ಯಮ ಮತ್ತುಸಂಸ್ಥೆಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವಉದ್ದೇಶದ ಮಸೂದೆ ಅಂತಿಮಗೊಂಡಿದೆ.

  • ಯಾವುದೇ ಕಂಪನಿಯ ಆಡಳಿತಾತ್ಮಕ ಹುದ್ದೆಗಳ ಪೈಕಿ ಶೇ 50ರಷ್ಟು, ಸಿ ಮತ್ತು ಡಿ ದರ್ಜೆಯ ಹುದ್ದೆಗಳಲ್ಲಿ ಶೇ 75ರಷ್ಟು ಮೀಸಲಾತಿ ನೀಡಲು ಈ ಮಸೂದೆ ರೂಪಿಸಲಾಗಿದೆ. ಈ ಹಿಂದೆ ಸಚಿವ ಸಂಪುಟ ಸಭೆಯಲ್ಲಿ ಮಸೂದೆಯ ಕುರಿತು ಸಚಿವರ ಮಧ್ಯೆ ಒಮ್ಮತ ಮೂಡದ ಕಾರಣ ತಡೆ ಹಿಡಿಯಲಾಗಿತ್ತು.
  • ‘ಈ ಮಸೂದೆಯ ಬಗ್ಗೆ ಇನ್ನಷ್ಟು ವಿಸ್ತ್ರತ ಚರ್ಚೆ ನಡೆಯಬೇಕಾಗಿದ್ದ ಕಾರಣ ತಡೆ ಹಿಡಿಯಲಾಗಿದೆ’ ಎಂದು ಮುಖ್ಯಮಂತ್ರಿ ಹೇಳಿದ್ದರು. ಮಸೂದೆಗಳ ವಿಚಾರದಲ್ಲಿ ಸಚಿವರ ಮಧ್ಯೆ ಸಮನ್ವಯಕ್ಕಾಗಿ ಸಮಿತಿಯನ್ನೂ ರಚಿಸಲಾಗಿತ್ತು. ಮಸೂದೆಯಲ್ಲಿ ಸಣ್ಣಪುಟ್ಟ ಮಾರ್ಪಾಡುಗಳನ್ನು ಮಾಡಲಾಗಿದೆ. ಸದ್ಯವೇ ಸಚಿವ ಸಂಪುಟ ಸಭೆ ಒಪ್ಪಿಗೆಗೆ ಎಂದು ಮೂಲಗಳು ಹೇಳಿವೆ.
  • ಖಾಸಗಿ ಉದ್ಯಮ ಮತ್ತು ಸಂಸ್ಥೆಯು ನಿಗದಿಪಡಿಸಿದ ಶೇಕಡಾವಾರು ಪ್ರಮಾಣದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡದಿದ್ದರೆ ಅಥವಾ ಅದಕ್ಕಿಂತ ಕಡಿಮೆ ಮೀಸಲಾತಿ ನೀಡಿದ್ದರೆ ಅಂತಹ ಸಂಸ್ಥೆಗಳಿಗೆ ರಿಯಾಯಿತಿ ದರದಲ್ಲಿ ಭೂಮಿ, ತೆರಿಗೆ ರಿಯಾಯಿತಿ ಅಥವಾ ತೆರಿಗೆಯ ಮುಂದೂಡಿಕೆ, ಸಹಾಯಧನ ಮತ್ತು ಇತರ ಸೌಲಭ್ಯಗಳನ್ನು ಪಡೆಯಲು ಅರ್ಹರಿರುವುದಿಲ್ಲ.
  • ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಬಗ್ಗೆ ಸರ್ಕಾರಕ್ಕೆ ಲಿಖಿತ ಭರವಸೆ ನೀಡಿಯೂ ಆ ಪ್ರಕಾರ ನಡೆದುಕೊಳ್ಳದ ಉದ್ಯಮಗಳಿಗೆ ಸರ್ಕಾರ ನೀಡಿದ್ದ ತೆರಿಗೆ ರಿಯಾಯಿತಿ ಅಥವಾ ತೆರಿಗೆಯ ಮುಂದೂಡಿಕೆ, ಸಹಾಯಧನ ಮತ್ತು ಇತರ ಸೌಲಭ್ಯಗಳನ್ನು ಮುಂದುವರಿಸಬಾರದು. ದಂಡ ವಿಧಿಸಬಹುದು ಎಂಬ ಅಂಶವನ್ನೂ ಸೇರಿಸಲಾಗಿತ್ತು.

ಕರ್ನಾಟಕ ರಾಜ್ಯ ಮರ್ಯಾದೆ ಹತ್ಯೆ ತಡೆ ಮಸೂದೆ 2025

ಭಾರತೀಯ ರಾಜಕೀಯ: ಮರ್ಯಾದೆಗೇಡು ಹತ್ಯೆಗೆ ಜೈಲು

ಸಂದರ್ಭ: ಜಾತಿಮೀರಿಪ್ರೀತಿಸುವವರು,ಮದುವೆಯಾದವರನ್ನು’ಮರ್ಯಾದೆ’ಯಹೆಸರಿನಲ್ಲಿಹಲ್ಲೆಮಾಡುವ, ಹತ್ಯೆಗೈಯುವಇಲ್ಲವೆಅವರಿಗೆಬಹಿಷ್ಕಾರಹಾಕುವವರನ್ನುಹೆಡೆಮುರಿಕಟ್ಟಲುಮುಂದಾಗಬೇಕೆಂಬಜನಾಗ್ರಹಕ್ಕೆಸ್ಪಂದಿಸಿರುವಸರ್ಕಾರ, ಇದಕ್ಕಾಗಿಮಸೂದೆಯೊಂದನ್ನುಸಿದ್ಧಪಡಿಸಿದೆ.

  • ಇಂತಹ ಕೃತ್ಯ ಎಸಗುವವರಿಗೆ ಜೀವಾವಧಿ ಜೈಲು ವಾಸ ಹಾಗೂ ₹5 ಲಕ್ಷದವರೆಗೆ ದಂಡ ವಿಧಿಸಲು ಮಸೂದೆ ಅವಕಾಶ ಕಲ್ಪಿಸಿದೆ.
  • ತಾಲ್ಲೂಕಿನ ಇನಾಂ ಇತ್ತೀಚೆಗೆ ಹುಬ್ಬಳ್ಳಿ ವೀರಾಪುರ ಗ್ರಾಮದಲ್ಲಿ ಮರ್ಯಾದೆಗೇಡು ಹತ್ಯೆ ನಡೆದಿತ್ತು. ಆ ಬೆನ್ನಲ್ಲೆ, ‘ಇಂತಹ ಮೃಗೀಯ, ಅಮಾನವೀಯ ಮತ್ತು ನಾಗರಿಕ ಸಮಾಜ ತಲೆತಗ್ಗಿಸುವ ಘಟನೆಗಳನ್ನು ತಡೆಯಲು ಪ್ರತ್ಯೇಕ ಕಾಯ್ದೆ ಜಾರಿಗೆ ತರಬೇಕು’ ಎಂಬ ಅಗ್ರಹ ಹೆಚ್ಚಿತ್ತು.
  • ಈ ಅಶಯ ಸಾಕಾರಗೊಳಿಸಲು ಕಾರ್ಯೋನ್ಮುಖ ವಾಗಿರುವ ಸರ್ಕಾರ, ‘ಕರ್ನಾಟಕ ಮದುವೆ ಮತ್ತು ಸಂಗಾತಿ ಆಯ್ಕೆಯ ಸ್ವಾತಂತ್ರ್ಯ, ಗೌರವ ಮತ್ತು ಸಂಪ್ರದಾಯದ ಹೆಸರಿನಲ್ಲಿ ಅಪರಾಧಗಳ ತಡೆಗಟ್ಟುವಿಕೆ ಮತ್ತು ನಿಷೇಧ ಮಸೂದೆ-2026’ರ ಕರಡು ರೂಪಿಸಿದೆ. ಕಾನೂನು ಮತ್ತು ಸಂಸದೀಯ ಇಲಾಖೆ ಇದನ್ನು ಸಿದ್ಧಪಡಿಸಿದೆ.
  • ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಅಪರಾಧ ತಡೆಗೆ ಕಾನೂನು ಅವಶ್ಯ. ಮದುವೆ ಮತ್ತು ಸಂಬಂಧಗಳಲ್ಲಿ ವೈಯಕ್ತಿಕ ಆಯ್ಕೆಯ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವ ಯಾವುದೇ ನಡವಳಿಕೆಯನ್ನು ತಡೆಯಲು, ಶಿಕ್ಷಿಸಲು, ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವ ಉದ್ದೇಶವನ್ನು ಮಸೂದೆ ಹೊಂದಿದೆ.
  • ವೈಯಕ್ತಿಕ ಜೀವನದ ವಿಷಯದಲ್ಲಿ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಸಂಗಾತಿ ಆಯ್ಕೆ ಮತ್ತು ಸಂಬಂಧದ ಹಕ್ಕುಗಳೂ ಸೇರಿವೆ. ತಮ್ಮ ಕುಟುಂಬದ ಸದಸ್ಯರು ಸೇರಿದಂತೆ ಯಾರಿಂದಲೂ ಅಡೆತಡೆ ಇಲ್ಲದೆ, ತಮ್ಮ ಆಯ್ಕೆಯಂತೆ ಮದುವೆಯಾಗುವ ಹಕ್ಕು ವಯಸ್ಕರಿಗೆ ಇದೆ.
  • ಮದುವೆ ಅಥವಾ ಸಂಬಂಧವು ಜಾತಿ, ಬುಡಕಟ್ಟು, ಸಮುದಾಯ. ಧರ್ಮ, ಸಂಪ್ರದಾಯಕ್ಕೆ ಅಗೌರವ ತಂದಿದೆ ಅಥವಾ ಕುಟುಂಬದ ಇಚ್ಛೆಗೆ ವಿರುದ್ಧವಾಗಿದೆ ಎಂಬ ಕಾರಣಕ್ಕೆ ವಿರೋಧಿಸುವುದು ಕಾನೂನುಬಾಹಿರ ಹಾಗೂ ಅಪರಾಧ ಎನಿಸಲಿದೆ. ಈ ರೀತಿಯ ವಿರೋಧ ವ್ಯಕ್ತವಾಗುವ ಆತಂಕ ಇರುವವರು ನ್ಯಾಯಾಲಯದ ಮೂಲಕ ಪೊಲೀಸರ ರಕ್ಷಣೆ ಪಡೆಯಬಹುದು. ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಪೊಲೀಸರ ಜವಾಬ್ದಾರಿ, ಆದೇಶ, ಉಲ್ಲಂಘಿಸಿದರೆ ಎರಡು ವರ್ಷಗಳವರೆಗೆ ಜೈಲು ಅಥವಾ ₹1 ಲಕ್ಷದವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದು. ಮಹಿಳೆಯರಿಗೆ ಜೈಲು ಶಿಕ್ಷೆ ಇರುವುದಿಲ್ಲ. ಇಂತಹ ಕೃತ್ಯದ ಪುರಾವೆ ನಾಶ, ಕೃತ್ಯಕ್ಕೆ ಪ್ರೇರೇಪಿಸುವುದು, ಸಂಚು ರೂಪಿಸುವುದು ಅಥವಾ ಆತ್ಮಹತ್ಯೆಗೆ ಪ್ರೋತ್ಸಾಹಿಸುವುದೂ ಅಪರಾಧ. ಇಂತಹ ಅಪರಾಧಗಳಲ್ಲಿ ಸಂಜ್ಞೆಯ, ಜಾಮೀನುರಹಿತ ಮತ್ತು ರಾಜೀ ಸಂಧಾನಕ್ಕೆ ಅವಕಾಶ ಇರುವುದಿಲ್ಲ.
  • ಬಾಧಿತ ದಂಪತಿ ರಕ್ಷಣೆ ಕೋರಿ ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿ, ಪೊಲೀಸರಿಗೆ ದೂರು ನೀಡಬಹುದು.
  • ದಂಪತಿಗೆ ಸುರಕ್ಷಿತ ಸ್ಥಳದಲ್ಲಿ ಮನೆ, ನಗದು ಅಥವಾ ವಸ್ತುವಿನ ರೂಪದಲ್ಲಿ ಪರಿಹಾರ ಒದಗಿಸುವುದು ರಾಜ್ಯ ಸರ್ಕಾರದ ಕರ್ತವ್ಯ ದೂರಿನ ಮೇಲೆ 60 ದಿನಗಳ ಒಳಗೆ ತನಿಖೆ ನಡೆಸಿ ವಿಶೇಷ ನ್ಯಾಯಾಲಯದಲ್ಲಿ ಆರೋ ಸಲ್ಲಿಸಬೇಕು. ಆರೋಪಪಟ್ಟಿ
  • ಜಿಲ್ಲಾಧಿಕಾರಿ ಅಥವಾ ಎಸ್‌ಪಿಗಳು ದೂರನ್ನು ಸೂಕ್ಷ್ಮವಾಗಿ ನಿರ್ವಹಿಸ ಬೇಕು. ಮದುವೆಯನ್ನು ಶಾಸ್ಕೋ-ಕ್ತವಾಗಿ ನಡೆಸಲು ಮತ್ತು ಅವರು ಬಯಸಿದರೆ ಪೊಲೀಸ್ ರಕ್ಷಣೆಯಲ್ಲಿ ನೋಂದಾಯಿಸಲು ನೆರವು ನೀಡ ಬಹುದು. ಮದುವೆಯ ನಂತರ ದಂಪತಿ ಬಯಸಿದರೆ, ನೆಪ ಮಾತ್ರದ ಶುಲ್ಕ ಪಾವತಿಸಿ ಒಂದು ತಿಂಗಳ ಅವಧಿಗೆ ವಸತಿ ಒದಗಿಸಬಹುದು. ನಂತರ ತಿಂಗಳ ಆಧಾರದಲ್ಲಿ ವಿಸ್ತರಿಸಬಹುದು.
  • ಮೇಲ್ವಿಚಾರಣೆಗೆ ಸಮಿತಿ: ಇಂತಹ ಅಪರಾಧಗಳನ್ನು ತಡೆಗಟ್ಟಲು ಪ್ರತಿ ಜಿಲ್ಲೆಯಲ್ಲಿ ವಿಶೇಷ ಕೋಶವನ್ನು ಸರ್ಕಾರ ರಚಿಸಬೇಕು. ಈ ಕೋಶಗಳು ದೂರು ಸ್ವೀಕರಿಸಲು, ಸಹಾಯ ಮತ್ತು ರಕ್ಷಣೆ ನೀಡಲು 24 ಗಂಟೆಗಳ ಸಹಾಯವಾಣಿ ಸ್ಥಾಪಿಸಬೇಕು.
  • ಕಾಯ್ದೆಯ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಮೇಲ್ವಿಚಾರಣಾ ಸಮಿತಿ ರಚಿಸಬೇಕು. ಈ ಸಮಿತಿಯು ಶಾಸಕರು, ಎಸ್‌ಪಿ, ಮೂವರು ಗ್ರೂಪ್ ‘ಎ’ ಅಧಿಕಾರಿಗಳು ಮತ್ತು ಸರ್ಕಾರೇತರ ಸಂಸ್ಥೆಗಳ ಮೂವರು ಸದಸ್ಯರನ್ನು ಒಳಗೊಂಡಿರುತ್ತದೆ. ಸಮಿತಿಯು ಕನಿಷ್ಠ * 3 ತಿಂಗಳಿಗೊಮ್ಮೆ ಸಭೆ ಸೇರಬೇಕು.
  • ಪ್ರಕರಣಗಳ ವಿಚಾರಣೆಗೆ ವಿಶೇಷ ತ್ವರಿತ ಗತಿ ನ್ಯಾಯಾಲಯವನ್ನು ರಚಿಸಬಹುದು ಎಂದೂಮಸೂದೆ ಹೇಳಿದೆ.

First Vande Bharat sleeper train to ply between Guwahati and Kolkata

Economy: Infrastructure; Railways;

Context: Prime Minister Narendra Modi will flag off the first Vande Bharat sleeper train later this month. It will ply between Guwahati and Kolkata.

  • The 16-coach train, with a capacity of 823 passengers, has a design speed of upto 180 kmph. It has 11 three-tier and four two-tier AC coaches, and a first-class AC coach.
  • The third-AC fare will be ₹2,300, second AC ₹3,000, and first AC ₹3,600.
  • The train boasts ergonomically designed berths with improved cushioning, automatic doors, and enhanced ride comfort with superior suspension and noise reduction.
  • Safety measures include Kavach, an indigenously developed, high-tech automatic train protection system designed to prevent collision, advanced controls, and safety systems inside the driver’s cabin.
  • There will be CCTV cameras on all coaches, and specially designed seats for passengers with disabilities, he said.
  • The districts that will benefit from this service include Kamrup Metropolitan and Bongaigaon in Assam and Coochbehar, Jalpaiguri, Maldah, Murshidabad, Purba Bardhaman, Hooghly, and Howrah in West Bengal.
  • Assamese cuisine will be served aboard when the train originates from Guwahati and Bengali cuisine on its return journey.

Bullet train

  • The Minister also announced that the country’s first bullet train would be ready in August 2027, and the route would be opened in a phased manner. The first section to open will be from Surat to Bilimora, followed by Vapi to Surat, Vapi to Ahmedabad, Thane to Ahmedabad, and finally Mumbai to Ahmedabad.
  • The 508-km Mumbai-Ahmedabad high-speed rail corridor has been steadily progressing, with significant work completed on viaducts, bridges, tunnels, and stations. The corridor will see speeds of up to 320 kmph and is set to reduce travel time between Mumbai and Ahmedabad to two hours.

R.K. Shriramkumar receives Sangita Kalanidhi award

Culture: Music Awards; Sangita Kalanidhi award

Violin maestro R.K. Shriramkumar has been conferred the prestigious Sangita Kalanidhi award for the year 2025 by The Music Academy, Chennai — one of the highest honours in Carnatic classical music.

About the Award
The Sangita Kalanidhi is regarded as the highest recognition in Carnatic music, given annually to an outstanding musician in recognition of lifetime achievement and contribution to the art.
The awardee typically presides over the Music Academy’s annual conference and concert series held during Chennai’s famous December Music Season.

About R.K. Shriramkumar
R.K. Shriramkumar is a renowned Carnatic violinist from the celebrated Rudrapatnam lineage of musicians in Karnataka.
He has accompanied generations of legendary vocalists and musicians, including Semmangudi Srinivasa Iyer, M.S. Subbulakshmi, D.K. Pattammal, and contemporary stars like T.M. Krishna, Bombay Jayashri, and others.

His deep musical scholarship and expertise — particularly in the compositions and musicological work of Subbarama Dikshitar and Muthuswami Dikshitar’s tradition — have greatly contributed to his selection.

Significance of the 2025 Award
Shriramkumar’s selection coincides with the 250th birth anniversary of the composer Muthuswami Dikshitar, adding special cultural significance to the honour this year.