ಭಾರತ – ಯುರೋಪಿಯನ್ ಒಕ್ಕೂಟ

ಸಂದರ್ಭ: ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸುವ ದೇಶಗಳ ಸಾಲಿನಲ್ಲಿ ಭಾರತವು ಡಿಸೆಂಬರ್ನಲ್ಲಿ ಮೂರನೆಯ ಸ್ಥಾನಕ್ಕೆ ಇಳಿದಿದೆ ಎಂದು ಯುರೋಪಿನ ‘ಇಂಧನ ಮತ್ತು ಶುದ್ಧಗಾಳಿ ಕುರಿತ ಸಂಶೋಧನಾ ಕೇಂದ್ರ’ (ಸಿಆರ್ಇಎ) ಹೇಳಿದೆ.
• ಸಿಆರ್ಇಎ ಅಂದಾಜಿನ ಪ್ರಕಾರ ಡಿಸೆಂಬರ್ನಲ್ಲಿ ಭಾರತವು ರಷ್ಯಾದಿಂದ ಆಮದು ಮಾಡಿಕೊಂಡ ಕಚ್ಚಾ ತೈಲ, ಕಲ್ಲಿದ್ದಲಿನ ಮೊತ್ತವು 2.3 ಬಿಲಿಯನ್ ಯೂರೊ (ಸರಿಸುಮಾರು ₹24 ಸಾವಿರ ಕೋಟಿ) ಆಗಿದೆ. ನವೆಂಬರ್ ತಿಂಗಳಲ್ಲಿ ಇದು 3.3 ಬಿಲಿಯನ್ ಯೂರೊ (ಸರಿಸುಮಾರು ₹34 ಸಾವಿರ ಕೋಟಿ) ಆಗಿತ್ತು.
• ಎರಡನೆಯ ಸ್ಥಾನಕ್ಕೆ ಟರ್ಕಿ ದೇಶ ಬಂದಿದೆ ಎಂದು ಅದು ಹೇಳಿದೆ. ಮೊದಲ ಸ್ಥಾನದಲ್ಲಿ ಚೀನಾ ಮುಂದುವರಿದಿದೆ.
• ಅಮೆರಿಕವು ರಷ್ಯಾದ ರೊಸ್ಸೆಫ್ಟ್ ಮತ್ತು ಲುಕಾಯಿಲ್ ಕಂಪನಿಗಳ ಮೇಲೆ ನಿರ್ಬಂಧ ಹೇರಿದೆ. ಇವೆರಡು ರಷ್ಯಾದ ಅತಿದೊಡ್ಡ ತೈಲ ಉತ್ಪಾದನಾ ಕಂಪನಿಗಳಾಗಿವೆ. ಈ ನಿರ್ಬಂಧದ ಕಾರಣದಿಂದಾಗಿ ರಿಲಯನ್ಸ್ ಇಂಡಸ್ಟ್ರೀಸ್, ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್, ಎಚ್ಪಿಸಿಎಲ್-ಮಿತ್ತಲ್ ಎನರ್ಜಿ ಲಿ. ಮತ್ತು ಎಂಆರ್ಪಿಎಲ್ ಲಿಮಿಟೆಡ್ ರಷ್ಯಾದಿಂದ ಕಚ್ಚಾ ತೈಲ ಅಮದುಮಾಡಿಕೊಳ್ಳುವುದನ್ನು ಒಂದೋ ನಿಲ್ಲಿಸಿವೆ ಅಥವಾ ಆಮದು ಪ್ರಮಾಣವನ್ನು ತಗ್ಗಿಸಿವೆ.
ಸಂದರ್ಭ: ಭ್ರಷ್ಟಾಚಾರ ತಡೆ (ತಿದ್ದುಪಡಿ) ಕಾಯ್ದೆ-2018ರ ಸಾಂವಿಧಾನಿಕ ಸಿಂಧುತ್ವ ಕುರಿತಂತೆ ಸುಪ್ರೀಂ ಕೋರ್ಟ್ ಭಿನ್ನಮತದ ತೀರ್ಪು ಪ್ರಕಟಿಸಿದೆ.
• ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು, ‘ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17ಎ ಅಸಾಂವಿಧಾನಿಕ. ಅದನ್ನು ತೆಗೆದುಹಾಕಬೇಕಿದೆ’ ಎಂದರು.
• ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಅವರು, ‘ಆ ಸೆಕ್ಷನ್ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿಹಿಡಿದು, ಪ್ರಾಮಾಣಿಕ ಅಧಿಕಾರಿಗಳನ್ನು ರಕ್ಷಿಸಬೇಕಿದೆ’ ಎಂದು ಒತ್ತಿ ಹೇಳಿದರು.
• ಸಕ್ಷಮ ಪ್ರಾಧಿಕಾರದ ಅನುಮತಿಯ ಅಗತ್ಯವು ಭ್ರಷ್ಟಾಚಾರ ತಡೆ ಕಾಯ್ದೆಗೆ ವಿರುದ್ಧವಾಗಿದೆ. ಇದು ಭ್ರಷ್ಟರನ್ನು ರಕ್ಷಿಸುತ್ತದೆ ಎಂದು ನ್ಯಾಯಮೂರ್ತಿ ನಾಗರತ್ನ ಅಭಿಪ್ರಾಯಪಟ್ಟರು.
• ನ್ಯಾಯಮೂರ್ತಿ ವಿಶ್ವನಾಥನ್ ಅವರು, ‘ಸೆಕ್ಷನ್ 17ಎ ಕೈಬಿಡುವುದು, ಸ್ನಾನದ ನೀರಿನ ಜೊತೆಗೆ ಮಗುವನ್ನೂ ಎಸೆದಂತೆ. ಚಿಕಿತ್ಸೆಯೇ ಕಾಯಿಲೆಗಿಂತಲೂ ಭಯಾನಕ ಎಂದು ಹೇಳಿದ ಹಾಗಾಗುತ್ತದೆ’ ಎಂದರು.
• ಪ್ರಕರಣದ ಕುರಿತ ಅಂತಿಮ ನಿರ್ಣಯಕ್ಕಾಗಿ ಮುಖ್ಯ ನ್ಯಾಯ ಮೂರ್ತಿ ಸೂರ್ಯಕಾಂತ್ ಅವರು ವಿಸ್ತ್ರತ ನ್ಯಾಯಪೀಠ ರಚಿಸಲಿದ್ದಾರೆ.
• ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 17ಎ ಪ್ರಕಾರ, ಈ ಕಾಯ್ದೆಯಡಿ ಜನಪ್ರತಿನಿಧಿಗಳು ಸಾರ್ವಜನಿಕ ಸೇವೆ/ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಮಾಡಿರುವ ಯಾವುದೇ ಶಿಫಾರಸುಗಳು ಮತ್ತು ನಿರ್ಧಾರಗಳ ಕುರಿತ ಆರೋಪಗಳ ಮೇಲೆ ತನಿಖೆ ಅಥವಾ ವಿಚಾರಣೆ ಮಾಡುವ ಮೊದಲು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯುವುದು ಕಡ್ಡಾಯ.
ಬೆಂಗಳೂರು ರಸ್ತೆಗಳಲ್ಲಿ ಪ್ರತಿ 200 ಅಡಿಗೆ ಎರಡು ಜಾಹೀರಾತಿಗೆ ಅವಕಾಶ ನೀಡುವ ‘ಗ್ರೇಟರ್ ಬೆಂಗಳೂರು ಪ್ರದೇಶ ಜಾಹೀರಾತು ನಿಯಮಗಳು-2025’ ಅನ್ನು ಅಂತಿಮಗೊಳಿಸಿ ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿದೆ.

Context: The Supreme Court, in a judgment on Tuesday, said that equality in society had to start in school, where the child of a multi-millionaire or a Supreme Court judge had to sit shoulder-to-shoulder with a child of an autorickshaw driver or a street vendor.
‘National mission’
Context: Mizoram Governor Vijay Kumar Singh extended Governor’s Rule in the Chakma Autonomous District Council (CADC) for six more months, citing continuing political uncertainty.
Context: The Supreme Court urged corporates and investors to consider the inclusion of persons with disabilities not just as a mere “compliance issue” but also as a “strategic advantage” that would enhance their business performance, resilience, and social impact.
Source: The Hindu
Context: The Supreme Court delivered a split verdict on the legality of a provision in an anti-corruption law which mandates prior sanction before prosecuting public servants.
Policy paralysis
Source: The Hindu
ಸಂದರ್ಭ: ಅಕಾಡೆಮಿಯನ್ನು (ಎನ್ಒಎ) ‘ವಿಧ್ಯುಕ್ತವಾಗಿ ಕ್ರಿಯಾಶೀಲಗೊಳಿಸಲಾಗಿದೆ ಎಂದು ಭಾರತ ಒಲಿಂಪಿಕ್ ಸಮಿತಿ (ಐಒಎ) ಘೋಷಿಸಿದೆ. ಭಾರತದಲ್ಲಿ ಒಲಿಂಪಿಕ್ ಅಂದೋಲನವನ್ನು ಬಲಪಡಿಸುವ ನಿಟ್ಟಿನಲ್ಲಿ ಇದನ್ನು ದೊಡ್ಡಹೆಜ್ಜೆ.
• ಈ ಅಕಾಡೆಮಿಗೆ ದಿಗ್ಗಜ ಅಸ್ಟ್ರೀಟ್ ಹಾಗೂ ಐಓಎ ಹಾಲಿ ಅಧ್ಯಕ್ಷೆ ಪಿ.ಟಿ.ಉಷಾ ಅವರೇ ಮುಖ್ಯಸ್ಥರಾಗಿರುತ್ತಾರೆ.
• ರಾಷ್ಟ್ರೀಯ ಒಲಿಂಪಿಕ್ ಶಿಕ್ಷಣ ಮತ್ತು ಅಭಿವೃದ್ಧಿ ಕಾರ್ಯಕ್ರಮವನ್ನೂ (ಎನ್ಒಇಡಿಪಿ) ಆರಂಭಿಸಲಾಗುತ್ತಿದೆ ಎಂದೂ ಐಒಎ ತಿಳಿಸಿದೆ.
• ‘ರಾಷ್ಟ್ರೀಯ ಒಲಿಂಪಿಕ್ ಅಕಾಡೆಮಿಗೆ ಪಿ.ಟಿ.ಉಷಾ ಅವರನ್ನು ಅಧ್ಯಕ್ಷರನ್ನಾಗಿ ಮತ್ತು ಐಒಎ ಉಪಾಧ್ಯಕ್ಷ ಹಾಗೂ ಒಲಿಂಪಿಕ್ ಪದಕ ವಿಜೇತ ಗಗನ್ ನಾರಂಗ್ ಅವರನ್ನು ನಿರ್ದೇಶಕನ್ನರಾಗಿ ಮಾಡಲು ಐಒಎ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ನೀಡಲಾಯಿತು’.
• ಅಹಮದಾಬಾದಿನಲ್ಲಿ ಜನವರಿ 8ರಂದು ನಡೆದ ಐಒಎ ಕಾರ್ಯನಿರ್ವಾಹಕ ಮಂಡಳಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಜನವರಿ 9ರಂದು ಐಒಎ ವಾರ್ಷಿಕ ಮಹಾಸಭೆಯಲ್ಲಿ ಇದನ್ನು ಅನುಮೋದಿಸಲಾಯಿತು.
ಹಿನ್ನೆಲೆ
NOA 2018ರಿಂದ ಅಸ್ತಿತ್ವದಲ್ಲಿದ್ದರೂ, COVID-19 ಸೇರಿದಂತೆ ಹಲವು ಕಾರಣಗಳಿಂದ ಕಾರ್ಯಾಚರಣೆ ಸ್ಥಗಿತಗೊಂಡಿತ್ತು.
ಈಗ IOA ವಾರ್ಷಿಕ ಸಾಮಾನ್ಯ ಸಭೆಯಲ್ಲಿ (AGM) ಅಹಮದಾಬಾದ್ನಲ್ಲಿ ಅಧಿಕೃತವಾಗಿ ಪುನರ್ಸಕ್ರಿಯಗೊಳಿಸಲಾಗಿದೆ.
ಇದು Bharat Centre of Olympic Research and Education (BCROE), ಗಾಂಧಿನಗರದ Rashtriya Raksha Universityಯಲ್ಲಿ ನಡೆದ ಸಂಶೋಧನಾ ಚಟುವಟಿಕೆಗಳೊಂದಿಗೆ ಸಂಬಂಧ ಹೊಂದಿದೆ.