ಭಾರತ ಮತ್ತು ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದ

ಸಂದರ್ಭ: ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆ ಉತ್ತೇಜನ ಯೋಜನೆ ಅಡಿ, ರಾಜ್ಯದ 414 ಫಲಾನುಭವಿಗಳಿಗೆ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮವು (ಕೆಪೆಕ್) ₹16.28 ಕೋಟಿಯಷ್ಟು ಸಹಾಯಧನ ಬಿಡುಗಡೆ ಮಾಡಿದೆ.
• ಈ ಯೋಜನೆಯ 50ನೇ ಬ್ಯಾಚಿನಲ್ಲಿ ರಾಜ್ಯದ 414 ಫಲಾನುಭವಿಗಳನ್ನು ಕೇಂದ್ರ ಸರ್ಕಾರವು ಆಯ್ಕೆ ಮಾಡಿದೆ.
• ಸರ್ಕಾರದ ಸಹಾಯಧನದ ಪಾಲನ್ನು ಬಿಡುಗಡೆ ಮಾಡಲಾಗಿದೆ.
• 2025-26 ಸಾಲಿನಲ್ಲಿ ಒಟ್ಟು 5,000 ಘಟಕಗಳ ಸ್ಥಾಪನೆಗೆ ರಾಜ್ಯ ಸರ್ಕಾರವು ₹206 ಕೋಟಿ ಅನುದಾನವನ್ನು ತೆಗೆದಿರಿಸಿದೆ. ಈ ಸಾಲಿನಲ್ಲಿ ಇನ್ನೂ 1,000 ಫಲಾನುಭವಿ ಗಳಿಗೆ ಸಹಾಯಧನ ಒದಗಿಸಲು ಕೇಂದ್ರ ಸರ್ಕಾರದಿಂದ ₹79 ಕೋಟಿ ಹೆಚ್ಚುವರಿ ಅನುದಾನ ಒದಗಿಸಿ ಎಂದು ಕೃಷಿ ಸಚಿವಾಲಯಕ್ಕೆ ಇದೇ 5ರಂದು ಮನವಿ ಸಲ್ಲಿಸಲಾಗಿದೆ.
ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆ ಉತ್ತೇಜನ ಯೋಜನೆ (PMFME)
✨ ಸಂಕ್ಷಿಪ್ತ ಪರಿಚಯ
👉 ಈ ಯೋಜನೆಯನ್ನು 2020ರಲ್ಲಿ ಆರಂಭಿಸಲಾಯಿತು.
👉 ಉದ್ದೇಶ: ಕಿರು, ಸೂಕ್ಷ್ಮ ಮತ್ತು ಅಸಂಘಟಿತ ಆಹಾರ ಸಂಸ್ಕರಣಾ ಉದ್ದಿಮೆಗಳನ್ನು ಬಲಪಡಿಸುವುದು, ವಿಶೇಷವಾಗಿ ಗ್ರಾಮೀಣ ಮತ್ತು ಅರೆನಗರ ಪ್ರದೇಶಗಳಲ್ಲಿ.
🎯 ಮುಖ್ಯ ಉದ್ದೇಶಗಳು
ಅಸಂಘಟಿತ ಆಹಾರ ಸಂಸ್ಕರಣಾ ಘಟಕಗಳನ್ನು ಔಪಚಾರಿಕ ಆರ್ಥಿಕ ವ್ಯವಸ್ಥೆಗೆ ಸೇರಿಸುವುದು
ಆದಾಯ ಮತ್ತು ಉದ್ಯೋಗ ಸೃಷ್ಟಿ ಹೆಚ್ಚಿಸುವುದು
ಸ್ಥಳೀಯ ಉತ್ಪನ್ನಗಳಿಗೆ ಮೌಲ್ಯವರ್ಧನೆ (value addition)
One District One Product (ODOP)แนಯವನ್ನು ಉತ್ತೇಜಿಸುವುದು
🔑 ಪ್ರಮುಖ ಅಂಶಗಳು
ವೈಯಕ್ತಿಕ ಘಟಕಗಳಿಗೆ ಸಾಲ ಸಹಾಯ (ಕ್ರೆಡಿಟ್-ಲಿಂಕ್ಡ್ ಸಬ್ಸಿಡಿ)
SHGಗಳು, FPOಗಳು, ಸಹಕಾರಿ ಸಂಘಗಳಿಗೆ ಬೆಂಬಲ
ಕೌಶಲ್ಯಾಭಿವೃದ್ಧಿ, ತರಬೇತಿ ಮತ್ತು ಮಾರುಕಟ್ಟೆ ಸಂಪರ್ಕ
ಬ್ರಾಂಡಿಂಗ್, ಪ್ಯಾಕೇಜಿಂಗ್ ಮತ್ತು ಗುಣಮಟ್ಟ ಸುಧಾರಣೆ
PMFME ಯೋಜನೆ ಅಸಂಘಟಿತ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳನ್ನು ಔಪಚಾರಿಕಗೊಳಿಸಿ, ಆದಾಯ–ಉದ್ಯೋಗ ಹೆಚ್ಚಿಸಲು ODOP ಆಧಾರಿತ ಸಮಗ್ರ ಬೆಂಬಲ ಒದಗಿಸುತ್ತದೆ.
Source: Prajavani
ಭಾರತವು ‘ರಾಜ್ಯಗಳ ಒಕ್ಕೂಟ’ (Union of States) ಎಂಬುದನ್ನು ಸಂವಿಧಾನ ಸ್ಪಷ್ಟಪಡಿಸಿದೆ. ‘ಭಾರತೀಯ ಸಂವಿಧಾನ’ದಮೊದಲ ವಿಧಿಯಲ್ಲಿಯೇ ಈ ಉಲ್ಲೇಖವಿದೆ. ಕೇಂದ್ರ ಮತ್ತು ರಾಜ್ಯ ಎಂಬ ಎರಡು ಹಂತದ ಆಡಳಿತ ವ್ಯವಸ್ಥೆ ದೇಶದಲ್ಲಿದೆ. ಒಕ್ಕೂಟ ವ್ಯವಸ್ಥೆ ಸುಗಮವಾಗಿ ಸಾಗಲು ಕೇಂದ್ರ, ರಾಜ್ಯ ಹಾಗೂ ಸಮವರ್ತಿ ಪಟ್ಟಿಯಲ್ಲಿ ಅಧಿಕಾರ ವರ್ಗೀಕರಿಸಲಾಗಿದೆ
ಸಂವಿಧಾನ ರಚನಾ ಸಮಿತಿ 1949ರ ನ.26 ರಂದು ಒಕ್ಕೂಟ ವ್ಯವಸ್ಥೆಗೆ ಸಮ್ಮತಿ ಸೂಚಿಸಿತು. 1950 ಜ.26ರಂದು ಸಂವಿಧಾನ ಅನುಷ್ಠಾನಗೊಂಡಿತು. ಅಂದಿನಿಂದಲೇ ಒಕ್ಕೂಟ ವ್ಯವಸ್ಥೆಗೆ ಸಾಂವಿಧಾನಿಕ ಮುದ್ರೆ ಸಿಕ್ಕಿತು. ‘ರಾಜ್ಯಗಳ ಒಕ್ಕೂಟ’ವು ದೇಶದ ಸಮಗ್ರತೆಯನ್ನು ರಕ್ಷಿಸಿ, ‘ವೈವಿಧ್ಯದಲ್ಲಿ ಏಕತೆ’ಯನ್ನು ಕಾಪಾಡಿಕೊಳ್ಳಲು ರೂಪಿಸಿದ ವಿಶಿಷ್ಟ ವ್ಯವಸ್ಥೆಯಾಗಿದೆ.
ಒಕ್ಕೂಟ ವ್ಯವಸ್ಥೆಯನ್ನು ಗಟ್ಟಿಯಾಗಿ ಹಿಡಿದಿಟ್ಟಿದ್ದು ಸಂವಿಧಾನ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ರಾಜಕೀಯ, ಆರ್ಥಿಕ, ಆಡಳಿತಾತ್ಮಕ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಸಂಘರ್ಷಗಳು ನಡೆದಿದ್ದರೂ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಆಗದಂತೆ ಕಾಪಾಡಿದೆ.ಭಾರತವು ಪ್ರಜಾಪ್ರಭುತ್ವ ರಾಷ್ಟ್ರ ವಾಗಿಗೆಲ್ಲುವುದಕ್ಕೆ ಸಂವಿಧಾನದ ಕೊಡುಗೆ ಅನನ್ಯ. ‘ರಾಜ್ಯಗಳ ಒಕ್ಕೂಟ’ದಲ್ಲಿ ಪ್ರತಿ ರಾಜ್ಯ ತನ್ನದೇ ಆಗಿರುವ ಅಸ್ಮಿತೆ, ಅನನ್ಯತೆ ಹಾಗೂ ಸಂಪನ್ಮೂಲ ಕಾಪಾಡಿಕೊಳ್ಳುವ ಅವಕಾಶವನ್ನು ಸಂವಿಧಾನ ಕಲ್ಪಿಸಿದೆ.
1947ರ ಅ.15ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೂ ದೇಶದೊಳಗಿನ 570ಕ್ಕೂ ಹೆಚ್ಚು ಸಂಸ್ಥಾನಗಳಲ್ಲಿ ರಾಜಾಡಳಿತವಿತ್ತು.ಭಾರತದಲ್ಲಿ ತಮ್ಮ ಸಂಸ್ಥಾನಗಳನ್ನು ವಿಲೀನಗೊಳಿಸಲು ಅನೇಕರು ಹಿಂದೇಟು ಹಾಕಿದರು. ಈ ಸಂಸ್ಥಾನಗಳನ್ನು ಒಗ್ಗೂಡಿಸಿ ಭಾರತೀಯತೆಯ ಸ್ವರೂಪ ನೀಡುವುದು ಆರಂಭದಲ್ಲಿ ಸವಾಲಾಗಿತ್ತು.
ಭಾಷಾವಾರು ರಾಜ್ಯ ರಚನೆ ದೇಶದ ಒಕ್ಕೂಟ ವ್ಯವಸ್ಥೆಯನ್ನು ಭದ್ರಪಡಿಸಿತು.
ದೇಶದಲ್ಲಿ ಖನಿಜ ಸಂಪತ್ತು ಹೇರಳವಾಗಿದೆ. ಒಡಿಶಾ, ಮಹಾರಾಷ್ಟ್ರದಲ್ಲಿ ಕಲ್ಲಿದ್ದಲು, ಕರ್ನಾಟಕ ದಲ್ಲಿ ಕಬ್ಬಿಣದ ಅದಿರು ಲಭ್ಯವಿವೆ.ಪರಿಸರವನ್ನು ಕಾಪಾಡಿಕೊಂಡು ಸಂಪತ್ತು ಅನುಭವಿಸಬೇಕಿದೆ.
ಇದಕ್ಕೆ ಕೇಂದ್ರ ಸರ್ಕಾರದ ಅನುಮತಿ ಅಗತ್ಯವಿದೆ. ಭವಿಷ್ಯದ ಭಾರತವನ್ನು ದೃಷ್ಟಿಯಲ್ಲಿಟ್ಟುಕೊಂಡು ಹಣಕಾಸು, ಜಲ, ಗಣಿ ಸೇರಿದಂತೆ ದೇಶದ ಸಂಪನ್ಮೂಲಗಳ ಹಂಚಿಕೆಯಾಗಿದೆ. ಸಂವಿಧಾನವು ಸ್ಪಷ್ಟ ಮಾರ್ಗದರ್ಶನ ಕೂಡ ನೀಡಿದೆ.
ಪ್ರಮುಖ ಅಂಶಗಳು
ಸ್ವಾತಂತ್ರ್ಯಪೂರ್ವದ, 1935ರ ‘ಭಾರತ ಸರ್ಕಾರದ ಕಾಯ್ದೆ’ ಒಕ್ಕೂಟ ವ್ಯವಸ್ಥೆಯ ಕುರಿತ ಚರ್ಚೆಯನ್ನು ಮುನ್ನೆಲೆಗೆ ತಂದಿತು. ಆಗ ಭಾರತದಲ್ಲಿ ಪ್ರಾಂತೀಯ ಮತ್ತು ಕೇಂದ್ರೀಯ ವ್ಯವಸ್ಥೆ ಜಾರಿಯಲ್ಲಿತ್ತು.
1946ರಲ್ಲಿ ಮೀರತ್ನಲ್ಲಿ ನಡೆದ ಭಾರತೀಯ ಕಾಂಗ್ರೆಸ್ ಅಧಿವೇಶನದಲ್ಲಿ ಜವಾಹರಲಾಲ್ ನೆಹರೂ ಒಕ್ಕೂಟ ವ್ಯವಸ್ಥೆಗೆ ಸಂಬಂಧಿಸಿದಂತೆ ನಿರ್ಣಯ ಮಂಡಿಸಿದರು.
ಸಂವಿಧಾನವು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಎಂಬ ವ್ಯವಸ್ಥೆ ರೂಪಿಸಿದೆ. ನ್ಯಾಯಾಂಗ ಸ್ವತಂತ್ರವಾಗಿದ್ದು, ಕೇಂದ್ರ ಮತ್ತು ರಾಜ್ಯಗಳ ನಡುವೆ ಮೂಡುವ ಗೊಂದಲ, ವ್ಯಾಜ್ಯಗಳನ್ನು ಬಗೆಹರಿಸುವ ಜವಾಬ್ದಾರಿ ಹೊಂದಿದೆ.
ಒಕ್ಕೂಟ ವ್ಯವಸ್ಥೆಗೆ ಅಪಾಯ ಎದುರಾಗುವ ಸಂದರ್ಭ ತೀರಾ ವಿರಳ. ಸಂವಿಧಾನ ಹಾಗೂ ನ್ಯಾಯಾಂಗ ವ್ಯವಸ್ಥೆಸಬಲವಾಗಿದೆ. ಲಿಖಿತ ಸಂವಿಧಾನದಲ್ಲಿ ಈ ಬಗ್ಗೆ ಸ್ಪಷ್ಟತೆ ಇದೆ.
ನೇರ ತೆರಿಗೆ, ಪರೋಕ್ಷ ತೆರಿಗೆ, ಖನಿಜ ಸಂಪನ್ಮೂಲಗಳ ಹಂಚಿಕೆಗೆ ಸಂಬಂಧಿಸಿದಂತೆ ಸಂವಿಧಾನದಲ್ಲಿ ಸ್ಕೂಲವಾದ ಮಾರ್ಗದರ್ಶನವಿದೆ.
Source: Prajavani
ಸಂದರ್ಭ: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮ ಪ್ರದೇಶವನ್ನು (ಇಎಸ್ಝಡ್) 268 ಚದರ ಕಿ.ಮೀ ನಿಂದ 168 ಚದರ ಕಿ.ಮೀ.ಗೆ ಇಳಿಸಿರುವ ಕರ್ನಾಟಕ ಸರ್ಕಾರದ ಕ್ರಮವನ್ನು ಸುಪ್ರೀಂ ಕೋರ್ಟ್ ನೇಮಿಸಿರುವ ಕೇಂದ್ರ ಉನ್ನತಾಧಿಕಾರ ಸಮಿತಿಯು (ಸಿಇಸಿ) ಕಟುವಾಗಿ ಟೀಕಿಸಿದ್ದು. ಈ ಕ್ರಮವು ಉದ್ಯಾನದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಅಭಿಪ್ರಾಯಪಟ್ಟಿದೆ.

• ಪರಿಸರ ಸೂಕ್ಷ್ಮ ಪ್ರದೇಶವನ್ನು ಇಳಿಸಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಬೆಂಗಳೂರಿನ ನಿವಾಸಿ ಬೆಳ್ಳಿಯಪ್ಪ ಮತ್ತಿತರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು ಈ ಬಗ್ಗೆ, ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸಮಿತಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು ಸಮಿತಿಯು ಸುಪ್ರೀಂ ಕೋರ್ಟ್ಗೆ 524 ಪುಟಗಳ ವರದಿ ಸಲ್ಲಿಸಿದೆ ಯಾವುದೇ ವೈಜ್ಞಾನಿಕ, ಪರಿಸರ ಅಥವಾ ಭೂದೃಶ್ಯ ಮಟ್ಟದ ಅಧ್ಯಯನ ಹಾಗೂ ಮೌಲ್ಯಮಾಪನ ನಡೆಸದೆಯೇ ಪರಿಸರ ಸೂಕ್ಷ್ಮ ಪ್ರದೇಶವನ್ನು ನಿರಂತರವಾಗಿ ಕಡಿತ ಮಾಡಲಾಗಿದೆ ಎಂದೂ ಸಮಿತಿ ತಿಳಿಸಿದೆ.
• ಪರಿಸರ ಸೂಕ್ಷ್ಮ ಪ್ರದೇಶದ ಪಕ್ಕದಲ್ಲೇ ಕರ್ನಾಟಕ ವಸತಿ ಇಲಾಖೆಯು ಸೂರ್ಯನಗರ ಲೇಔಟ್ (ಕೆಎಚ್ ಬಿ ಸೂರ್ಯ ಸಿಟಿ) ಎಂಬ ಬೃಹತ್ ವಸತಿ ಯೋಜನೆ ಅನುಷ್ಠಾನಗೊಳಿಸುತ್ತಿದೆ. ಈ ಪ್ರದೇಶವು ಮೊದಲು ಪರಿಸರ ಸೂಕ್ಷ್ಮ ಪ್ರದೇಶದ ಭಾಗವಾಗಿತ್ತು ವಸತಿ ಬಡಾವಣೆಗಳ ನಿರ್ಮಾಣಕ್ಕೆ ನಿರ್ಬಂಧ ವಿಧಿಸಲಾಗಿತ್ತು ನಗರೀಕರಣದ ಒತ್ತಡದ ನೆಪವೊಡ್ಡಿ 2018ರ ಅಧಿಸೂಚನೆಯಲ್ಲಿ ಈ ಪ್ರದೇಶವನ್ನು ಇಎಸ್ಝಡ್ನಿಂದ ಹೊರಗಿಡಲಾಯಿತು.
• ಆ ಬಳಿಕ ವಸತಿ ಯೋಜನೆಯನ್ನು ಸುಗಮಗೊಳಿಸಲು ದೊಡ್ಡ ಪ್ರಮಾಣದ ಭೂ ಸಮತಟ್ಟು ನೈಸರ್ಗಿಕವಾಗಿ ಎತ್ತರದ ಭೂಪ್ರದೇಶವನ್ನು ಸಮತಟ್ಟಾಗಿಸುವುದು ಸೇರಿದಂತೆ ವ್ಯಾಪಕ ಪ್ರಮಾಣದಲ್ಲಿ ಚಟುವಟಿಕೆಗಳನ್ನು ಕೈಗೊಳ್ಳಲಾಯಿತು.
• ಪರಿಸರ ಪರಿಣಾಮದ ಅಧ್ಯಯನ ಹಾಗೂ ವೈಜ್ಞಾನಿಕವಾಗಿ ಮೌಲ್ಯಮಾಪನ ನಡೆಸದೆಯೇ ಈ ಕಾರ್ಯ ನಡೆಸಲಾಯಿತು ಈ ಯೋಜನೆಯು ಕರಡಿಕ್ಕಲ್-ಮಾದೇಶ್ವರ ಕಾರಿಡಾರ್ನ ಪಕ್ಕದಲ್ಲಿಯೇ ಅನುಷ್ಠಾನಗೊಳ್ಳುತ್ತಿದೆ. ಈ ಭಾಗದಲ್ಲಿ ಈಗಾಗಲೇ ಮಾನವ-ವನ್ಯಜೀವಿ ಸಂಘರ್ಷ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ’ ಎಂದು ಸಮಿತಿಯು ವರದಿಯಲ್ಲಿ ಉಲ್ಲೇಖಿಸಿದೆ.
• ಬೆಂಗಳೂರಿನ ಸುತ್ತಮತ್ತ ತ್ವರಿತ ನಗರ ವಿಸ್ತರಣೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಾಂಪ್ರದಾಯಿಕ ಆನೆ ಕಾರಿಡಾರ್ಗಳ ಅವನತಿಯಿಂದಾಗಿ ಸಮಸ್ಯೆ ಮತ್ತು ಬಿಗಡಾಯಿಸಿದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ದಕ್ಷಿಣ, ಪಶ್ಚಿಮ, ಆಗ್ನೆಯ ಮತ್ತು ನೈರುತ್ಯ ಭಾಗಗಳಲ್ಲಿ ಮಾನವ-ಆನೆ ಸಂಘರ್ಷ ಪ್ರಕರಣಗಳು ವ್ಯಾಪಕ ಪ್ರಮಾಣದಲ್ಲಿ ಜಾಸ್ತಿ ಆಗಿದೆ ಸುಸ್ತಿರ ಮಾನವ ಅಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆ ಸಮತೋಲನದಿಂದ ಸಾಗಲು ಇಎಸ್ಝಡ್ಗಳು ನಿಯಂತ್ರಕಗಳಾಗಿ ಕೆಲಸ ಮಾಡುತ್ತವೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
Source: Prajavani
ಸಂದರ್ಭ: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಸದಸ್ಯರ ಪಟ್ಟಿಯಲ್ಲಿ ಕೆಲವು ಜನಪ್ರತಿ-ನಿಧಿಗಳ ಹೆಸರುಗಳು ಬಿಟ್ಟು ಹೋಗಿರುವುದರಿಂದ ಅವರ ಹೆಸರು ಸೇರಿಸುವ ಉದ್ದೇಶದ ಗ್ರೇಟರ್ ಬೆಂಗಳೂರು ಆಡಳಿತ ಎರಡನೇ ತಿದ್ದುಪಡಿ ಮಸೂದೆ’ಯೂ ಸೇರಿ ಒಟ್ಟು ಆರು ಮಸೂದೆಗಳಿಗೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ.
• ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮಸೂದೆ, ಕರ್ನಾಟಕ ಕಲ್ಯಾಣ ನಿಧಿ ತಿದ್ದುಪಡಿ ಮಸೂದೆ, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳು ತಿದ್ದುಪಡಿ ಮಸೂದೆ, ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ ಮಸೂದೆ, ಬಾಂಬೆ ಪಬ್ಲಿಕ್ ಟ್ರಸ್ಟ್ ಮಸೂದೆಗಳಿಗೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ.
ಕರ್ನಾಟಕದ ಆರು ಪ್ರಮುಖ ಮಸೂದೆಗಳ ಸಂಕ್ಷಿಪ್ತ ವಿವರಣೆ:
| ಮಸೂದೆಯ ಹೆಸರು | ಮುಖ್ಯ ಉದ್ದೇಶ | ಪ್ರಮುಖ ಬದಲಾವಣೆಗಳು |
| ಗ್ರೇಟರ್ ಬೆಂಗಳೂರು ಆಡಳಿತ (ಎರಡನೇ ತಿದ್ದುಪಡಿ) ಮಸೂದೆ | ಜಿಬಿಎ (GBA) ಸದಸ್ಯರ ಪಟ್ಟಿಯನ್ನು ಪರಿಷ್ಕರಿಸುವುದು. | ಬೆಂಗಳೂರು ನಗರದ ಮತದಾರರ ಪಟ್ಟಿಯಲ್ಲಿರುವ ಎಲ್ಲಾ ಸಂಸದರು (MPs) ಮತ್ತು ಶಾಸಕರು (MLAs) ಅಧಿಕೃತವಾಗಿ ಜಿಬಿಎ ಸದಸ್ಯರಾಗುತ್ತಾರೆ. |
| ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (KPME) ತಿದ್ದುಪಡಿ ಮಸೂದೆ | ಖಾಸಗಿ ಆರೋಗ್ಯ ಕೇಂದ್ರಗಳ ಮೇಲೆ ಹೆಚ್ಚಿನ ನಿಗಾ ವಹಿಸುವುದು. | ಹೊಸದಾಗಿ ಆರಂಭವಾಗುವ ಸಂಸ್ಥೆಗಳಿಗೆ 6 ತಿಂಗಳ ತಾತ್ಕಾಲಿಕ ನೋಂದಣಿ ಅವಕಾಶ ಹಾಗೂ ಮಾನಸಿಕ ಆರೋಗ್ಯ ಕೇಂದ್ರಗಳನ್ನು ಈ ಕಾನೂನಿನ ವ್ಯಾಪ್ತಿಗೆ ತರುವುದು. |
| ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ತಿದ್ದುಪಡಿ ಮಸೂದೆ | ಹೆಚ್ಚಿನ ಸಂಖ್ಯೆಯ ಕಾರ್ಮಿಕರಿಗೆ ಸೌಲಭ್ಯ ಒದಗಿಸುವುದು. | ಈ ಮೊದಲು 50 ಕಾರ್ಮಿಕರಿರುವ ಸಂಸ್ಥೆಗಳಿಗೆ ಮಾತ್ರ ಅನ್ವಯಿಸುತ್ತಿತ್ತು, ಈಗ 10 ಕಾರ್ಮಿಕರಿರುವ ಸಂಸ್ಥೆಗಳೂ ಇದರ ವ್ಯಾಪ್ತಿಗೆ ಬರುತ್ತವೆ. |
| ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳು ತಿದ್ದುಪಡಿ ಮಸೂದೆ | ದೇವಸ್ಥಾನಗಳ ಆದಾಯ ಹಂಚಿಕೆ ಸಮತೋಲನಗೊಳಿಸುವುದು. | ಶ್ರೀಮಂತ ದೇವಸ್ಥಾನಗಳ ಆದಾಯದ ಒಂದು ಭಾಗವನ್ನು ಬಳಸಿ, ಕಡಿಮೆ ಆದಾಯದ ದೇವಸ್ಥಾನಗಳ ಪುರೋಹಿತರ ಕಲ್ಯಾಣ ಮತ್ತು ಅಭಿವೃದ್ಧಿಗೆ ಧನಸಹಾಯ ನೀಡುವುದು. |
| ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ಮಸೂದೆ | ಐತಿಹಾಸಿಕ ತಾಣಗಳ ಉತ್ತಮ ನಿರ್ವಹಣೆ. | 2018ರ ಮೂಲ ಕಾಯ್ದೆಗೆ ತಿದ್ದುಪಡಿ ತಂದು, ಅಭಿವೃದ್ಧಿ ಯೋಜನೆಗಳಿಗೆ ಪ್ರಾಧಿಕಾರಕ್ಕೆ ಹೆಚ್ಚಿನ ಆಡಳಿತಾತ್ಮಕ ಅಧಿಕಾರ ನೀಡಲಾಗಿದೆ. |
| ಬಾಂಬೆ ಪಬ್ಲಿಕ್ ಟ್ರಸ್ಟ್ (ಕರ್ನಾಟಕ ತಿದ್ದುಪಡಿ) ಮಸೂದೆ | ಸಾರ್ವಜನಿಕ ಟ್ರಸ್ಟ್ಗಳ ಆಡಳಿತಾತ್ಮಕ ಸುಲಭೀಕರಣ. | ಬೆಳಗಾವಿ ಪ್ರಾದೇಶಿಕ ಆಯುಕ್ತರನ್ನು ಚಾರಿಟಿ ಕಮಿಷನರ್ ಆಗಿ ನೇಮಿಸುವುದು ಮತ್ತು ತಹಶೀಲ್ದಾರರಿಗೆ ಉಪ-ಅಧಿಕಾರಗಳನ್ನು ನೀಡುವುದು. |
👉 ಈ ಮಸೂದೆಗಳು ನಗರ ಆಡಳಿತ, ಆರೋಗ್ಯ, ಕಾರ್ಮಿಕ ಕಲ್ಯಾಣ, ಧಾರ್ಮಿಕ ಸೇವೆಗಳು ಮತ್ತು ಪಾರಂಪರಿಕ ತಾಣಗಳ ಅಭಿವೃದ್ಧಿ ಕ್ಷೇತ್ರಗಳಲ್ಲಿ ಸಮಗ್ರ ಬದಲಾವಣೆಗಳನ್ನು ತರಲಿವೆ.
Source: Prajavani
ಸಂದರ್ಭ: ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಅರ್ಥಿಕತೆಯ ಬೆಳವಣಿಗೆ ಅಂದಾಜನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಈ ವರ್ಷದಲ್ಲಿ ಅರ್ಥ ವ್ಯವಸ್ಥೆಯು ಶೇ 7.4ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಅಂದಾಜಿನಲ್ಲಿ ಹೇಳಲಾಗಿದೆ.
•ಈ ಪ್ರಮಾಣದ ಸಾಧ್ಯವಾದಲ್ಲಿ, ಬೆಳವಣಿಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಅರ್ಥ ವ್ಯವಸ್ಥೆಗಳ ಪೈಕಿ ಅತ್ಯಂತ ವೇಗದ ಬೆಳವಣಿಗೆಯನ್ನು ಭಾರತ ಸಾಧಿಸಿದಂತಾಗುತ್ತದೆ. ಆದರೆ ದ್ರೋಕರೇಜ್ ಕಂಪನಿ ಗೋಲ್ಡ್ಮನ್ ಸಾಕ್ಸ್ ಸಿದ್ಧಪಡಿಸಿರುವ ವರದಿಯೊಂದರ ಪ್ರಕಾರ ಈ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆಯು ಶೇ 7.3ರಷ್ಟು ಆಗಲಿದೆ.
• ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಅಂದಾಜಿನ ಪ್ರಕಾರ ಕೂಡ ಭಾರತದ ಜಿಡಿಪಿ 2025-26ರಲ್ಲಿ ಶೇ 7.3ರಷ್ಟು ಬೆಳೆಯಲಿದೆ. ಜಿಎಸ್ಟಿ ದರ ಇಳಿಕೆ, ಆದಾಯ ತೆರಿಗೆ ಮಿತಿ ಹೆಚ್ಚಳದಂತಹ ಕ್ರಮಗಳು ಆರ್ಥಿಕ ಚಟುವಟಿಕೆ ಚೆನ್ನಾಗಿ ಇರುವುದಕ್ಕೆ ಕಾರಣವಾಗಿವೆ.
• ಚೀನಾದ ಬೆಳವಣಿಗೆ ದರವು 2025ರಲ್ಲಿ ಶೇ 4.9ರಷ್ಟು ಇರಲಿದೆ ಎಂದು ವಿಶ್ವ ಬ್ಯಾಂಕ್ ಅಂದಾಜು ಮಾಡಿದೆ.
• ಮೊದಲ ಮುಂಗಡ ಅಂದಾಜನ್ನು ಪ್ರಕಟಿಸಿದ ಕೇಂದ್ರ ಸರ್ಕಾರ: ದೇಶದ ಅರ್ಥ ವ್ಯವಸ್ಥೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ (2025-26) ಶೇಕಡ 7.4ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆ ಇದೆ. ಹಿಂದಿನ ಹಣಕಾಸು ವರ್ಷದಲ್ಲಿ ಬೆಳವಣಿಗೆ ಪ್ರಮಾಣವು ಶೇ 6.5ರಷ್ಟು ಇತ್ತು.
• ಸೇವಾ ವಲಯ ಹಾಗೂ ತಯಾರಿಕಾ ವಲಯಗಳಲ್ಲಿ ಚಟುವಟಿಕೆ ಚೆನ್ನಾಗಿ ಇರುವುದು ಈ ಬಾರಿ ಬೆಳವಣಿಗೆಯು ಕಳೆದ ವರ್ಷಕ್ಕಿಂತ ಹೆಚ್ಚಿರುವಂತೆ ಮಾಡಲಿದೆ. ಈ ಮೂಲಕ ಭಾರತವು ಪ್ರಮುಖ ಅರ್ಥವ್ಯವಸ್ಥೆಗಳ ಪೈಕಿ ಅತ್ಯಂತ ವೇಗದ ಬೆಳವಣಿಗೆ ಕಾಣುವ ದೇಶವಾಗಿ ಮುಂದುವರಿಯಲಿದೆ.
• 2023-24ರಲ್ಲಿ ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ಪ್ರಮಾಣವು ಶೇ 9.2ರಷ್ಟು ಇತ್ತು.
• ಪ್ರಸಕ್ತ ಹಣಕಾಸು ವರ್ಷದಲ್ಲಿ ತಯಾರಿಕಾ ವಲಯದಲ್ಲಿನ ಒಟ್ಟು ಮೌಲ್ಯ ಸೇರ್ಪಡೆಯು (ಜಿವಿಎ) ಶೇ 7ರಷ್ಟು ಇರಲಿದೆ ಎಂದು ಅಂದಾಜು ಮಾಡಲಾಗಿದೆ.
• ಇದು ಹಿಂದಿನ ವರ್ಷದ ಶೇ 4.5ರಷ್ಟು ಜಿವಿಎಗಿಂತ ಹೆಚ್ಚಿನದ್ದಾಗಲಿದೆ.
• ಸೇವಾ ವಲಯದಲ್ಲಿನ ಬೆಳವಣಿಗೆಯು ಶೇ 9.1ರಷ್ಟು ಇರಲಿದೆ (ಹಿಂದಿನ ವರ್ಷದಲ್ಲಿ ಇದು ಶೇ 7.2ರಷ್ಟು ಇತ್ತು) ಎಂದು ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯದ ಅಧೀನದಲ್ಲಿ ಕೆಲಸ ಮಾಡುವ ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್ಎಸ್ಒ) ಬಿಡುಗಡೆ ಮಾಡಿರುವ ಅಂದಾಜಿನಲ್ಲಿ ಹೇಳಲಾಗಿದೆ.
• ಕೃಷಿ ಮತ್ತು ಸಂಬಂಧಿತ ವಲಯ-ಗಳಲ್ಲಿನ ಬೆಳವಣಿಗೆಯು ಈ ವರ್ಷದಲ್ಲಿ ಶೇ 3.1ಕ್ಕೆ ಇಳಿಕೆ ಆಗುವ ಸಾಧ್ಯತೆ ಇದೆ. ಹಿಂದಿನ ವರ್ಷದಲ್ಲಿ ಇದು ಶೇ 4.6ರ ಮಟ್ಟದಲ್ಲಿತ್ತು. ಈ ವರ್ಷದಲ್ಲಿ ನೈಜ ಜಿಡಿಪಿ ಗಾತ್ರವು ₹201.90 ಲಕ್ಷ ಕೋಟಿಯಷ್ಟಾಗುವ ಅಂದಾಜು ಮಾಡಲಾಗಿದೆ. ಅಮೆರಿಕದ ಡಾಲರ್ ಲೆಕ್ಕದಲ್ಲಿ ಜಿಡಿಪಿ ಗಾತ್ರವು 3.97 ಟ್ರಿಲಿಯನ್ ಆಗಲಿದೆ (1 ಡಾಲರ್ 90 ರೂಪಾಯಿಗೆ ಸಮ ಎಂಬ ಅಂದಾಜಿನೊಂದಿಗೆ).
• ಕೇಂದ್ರ ಸರ್ಕಾರವು ಮುಂದಿನ ಹಣಕಾಸು ವರ್ಷದ ಬಜೆಟ್ ಅನ್ನು ಫೆಬ್ರುವರಿ 1ರಂದು ಮಂಡಿಸುವ ನಿರೀಕ್ಷೆ ಇದ್ದು, ಬಜೆಟ್ ಸಿದ್ಧಪಡಿಸುವ ಸಂದರ್ಭದಲ್ಲಿ ಮುಂಗಡ ಅಂದಾಜನ್ನು ಆಶ್ರಯಿಸುತ್ತದೆ.
• “ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆ ಗಳು ಹೆಚ್ಚಿದ್ದರೂ, ದೇಶದ ಬೆಳವಣಿಗೆ ದರವು ಕಡಿಮೆ ಆಗಿಲ್ಲ. ಹಣಕಾಸು ಮತ್ತು ವಿತ್ತೀಯ ನೀತಿಗಳು ಹೊಂದಾಣಿಕೆಯ ಗುಣ ಹೊಂದಿದ್ದುದು, ಕಾರ್ಪೊರೇಟ್ ಕಂಪನಿಗಳ ಹಣಕಾಸಿನ ಚೆನ್ನಾಗಿರುವುದು, ಮುಂಗಾರು ಮಳೆ ಚೆನ್ನಾಗಿ ಆಗಿರುವುದು ಹಾಗೂ ಕಚ್ಚಾ ತೈಲದ ಬೆಲೆಯು ಕಡಿಮೆ ಇರುವುದು ಇದಕ್ಕೆ ಕಾರಣ’ ಎಂದು ಕ್ರಿಸಿಲ್ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞ ಹೇಳಿದ್ದಾರೆ.
• ಹಬ್ಬಗಳ ಹೊತ್ತಿನಲ್ಲಿ ನಡೆಯುವ ಉತ್ತಮ ಮಾರಾಟ, ಜಿಎಸ್ಟಿ ದರ ಪರಿಷ್ಕರಣೆ ಹಾಗೂ ಆದಾಯ ತೆರಿಗೆ ಮಿತಿಯಲ್ಲಿನ ವಿನಾಯಿತಿಗಳು ಬೇಡಿಕೆಯನ್ನು ಹೆಚ್ಚಿಸುವ ನಿರೀಕ್ಷೆ ಇದೆ. ಹಬ್ಬಗಳ ನಂತರದಲ್ಲಿಯೂ ಬೇಡಿಕೆ ಉತ್ತಮ ಮಟ್ಟದಲ್ಲಿ ಎಂದು ಮುಂದುವರಿದಿದೆ ಬ್ಯಾಂಕ್ ಆಫ್ ಬರೋಡದ ಮುಖ್ಯ ಅರ್ಥಶಾಸ್ತ್ರಜ್ಞೆ ಹೇಳಿದ್ದಾರೆ.
Source: Prajavani
Source: The Hindu
Context: The houselisting phase will be conducted in each State over a 30-day period; second phase of the count will be carried out in February 2027.
Household queries
Context: Indians are shifting from subsistence needs to aspirational and service-oriented spending.

Source: The Hindu