Sat. Feb 7th, 2026

ವಿಐಎಸ್‌ಎಲ್ ಪುನಶ್ಚೇತನಕ್ಕೆ ₹4,000 ಕೋಟಿ: ಎಚ್‌ಡಿಕೆ

ಸಂದರ್ಭ:‘ಭದ್ರಾವತಿಯ ವಿಶ್ವೇಶ್ವರಾಯ ಉಕ್ಕಿನ ಕಾರ್ಖಾನೆಯ (ವಿಐಎಸ್ಎಲ್) ಪುನಶ್ಚೇತನಕ್ಕೆ  ₹4,000 ಕೋಟಿ ಮೊತ್ತದ ವಿಸ್ತೃತ ಯೋಜನಾ ವರದಿ (ಡಿಪಿಆರ್).

  • ಭಾರತೀಯ ಉಕ್ಕು ಪ್ರಾಧಿಕಾರ ಬಂಡವಾಳ ಹೂಡಲಿದೆ. ಪುನಶ್ಚೇತನದ ನಂತರ ರೈಲ್ವೆ ಹಾಗೂ ರಕ್ಷಣಾ ವಲಯದ ಬೇಡಿಕೆ ಆಧರಿಸಿ ಉತ್ಪಾದನೆ ಆರಂಭಿಸಲಾಗುವುದು.
  • ಕಾರ್ಖಾನೆಯ 50 ವರ್ಷಗಳ ಭವಿಷ್ಯ ಗಮನದಲ್ಲಿಟ್ಟುಕೊಂಡು ಮಾರುಕಟ್ಟೆ ಹಾಗೂ ಹೊಸ ತಂತ್ರಜ್ಞಾನದ ಕುರಿತು ಅಧ್ಯಯನ ನಡೆಸಿ ಪ್ರತ್ಯೇಕ ಡಿಪಿಆರ್ ರೂಪಿಸಲಾಗಿದೆ.

ಕೂಸಿನ ಮನೆ ‘ಆರೈಕೆದಾರ’ರಿಗೆ ಸಂಕಷ್ಟ: ನರೇಗಾದಡಿ ಗೌರವಧನ ಪಾವತಿಗೆ ಅವಕಾಶ ಇಲ್ಲ: ಕೇಂದ್ರ l ಇವರು ನರೇಗಾ ಭಾಗ.

ಸಂದರ್ಭ: ‘ಉದ್ಯೋಗ ಖಾತ್ರಿ ಯೋಜನೆ ಕಾರ್ಮಿಕರಿಗೆ ಕೂಲಿಯನ್ನು ಕೇಂದ್ರದ ಅನುದಾನದಲ್ಲಿ ನೀಡಲಾಗುತ್ತದೆ; ಸಲಕರಣೆಗಳ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸುತ್ತದೆ.

  • ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಕೆಲಸ ಮಾಡುವ ಕಾರ್ಮಿಕರ ಮಕ್ಕಳ ಆರೈಕೆಗಾಗಿ ರಾಜ್ಯ ಸರ್ಕಾರ ಆರಂಭಿ ಸಿದ್ದ ‘ಕೂಸಿನ ಮನೆ’ ಆರೈಕೆದಾರರಿಗೆ ನರೇಗಾದಡಿ ಗೌರವಧನ ನೀಡಲು ಅವಕಾಶ ಇಲ್ಲ ಎಂದು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ತಿಳಿಸಿದೆ.
  • ಇದರಿಂದಾಗಿ ರಾಜ್ಯದಲ್ಲಿ ಕೂಸಿನ ಮನೆಯಲ್ಲಿ ಆರೈಕೆದಾರರಾಗಿ ನೇಮಕಗೊಂಡಿದ್ದ 7,358 ಕೂಲಿ ಕಾರ್ಮಿಕರಿಗೆ ಸಂಕಷ್ಟ ಎದುರಾಗಿದೆ.
  • ನರೇಗಾ ಯೋಜನೆಯ ಕಾರ್ಮಿಕರ ಎಳೆಯ ಮಕ್ಕಳ ಪಾಲನೆ, ಆರೈಕೆಗಾಗಿ ರಾಜ್ಯ ಸರ್ಕಾರ 2023ರಲ್ಲಿ ಕಾರ್ಯಕ್ರಮ ರೂಪಿಸಿದೆ.
  • ಒಂದು ‘ಕೂಸಿನ ಮನೆ’ಗೆ ಸಕ್ರಿಯ ಉದ್ಯೋಗ ಚೀಟಿ ಹೊಂದಿದ್ದ ಇಬ್ಬರು ಮಹಿಳೆಯರನ್ನು ಆರೈಕೆದಾರರಾಗಿ ನೇಮಿಸಲಾಗಿದೆ. ಇವರಿಗೆ ಸಾಮೂಹಿಕ ಕಾಮಗಾರಿಗಳಲ್ಲಿ ಪ್ರತ್ಯೇಕ ಎನ್‌ಎಂಆರ್‌ (ನಾಮಿನಲ್‌ ಮಾಸ್ಟರ್‌ ರೋಲ್‌) ಸೃಜಿಸಿ, ಕೆಲಸದ ಸ್ಥಳದಲ್ಲಿ ದೈನಂದಿನ ಹಾಜರಾತಿಯಿಂದ ವಿನಾಯಿತಿ ನೀಡಿದ್ದು ಗೌರವಧನವಾಗಿ ಕೂಲಿ ಪಾವತಿಸಲಾಗುತ್ತಿತ್ತು. ಕಾಮಗಾರಿ ಇಲ್ಲದಿದ್ದಾಗ ಗ್ರಾಮ ಪಂಚಾಯಿತಿ ಅನುದಾನದಲ್ಲಿ ಗೌರವಧನ ಭರಿಸಲಾಗುತ್ತಿತ್ತು.
  • ನರೇಗಾದಲ್ಲಿ ಹೆಚ್ಚು ಮಾನವ ದಿನಗಳನ್ನು ಸೃಜಿಸಿದ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 4,000 ಕೂಸಿನ ಮನೆಗಳನ್ನು ಸ್ಥಾಪಿಸಿತ್ತು. ಈಗಮನೆಗಳ ಸಂಖ್ಯೆ 3,679ಕ್ಕೆ ಇಳಿದಿದೆ. 46,723 ಮಕ್ಕಳ ನೋಂದಣಿ ಆಗಿದೆ.
  • ಕೆಲ ದಿನಗಳ ಹಿಂದೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ರಾಜ್ಯದ ಗ್ರಾಮೀಣಾಭಿವೃದ್ಧಿ ಆಯುಕ್ತಾ ಲಯಕ್ಕೆ ಪತ್ರ ಬರೆದಿದ್ದು, ‘ಆರೈಕೆದಾರರ ಗೌರವಧನವನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಭರಿಸಲು ನರೇಗಾ ಕಾಯ್ದೆಯ ಶೆಡ್ಯೂಲ್–2ರಲ್ಲಿ ಅವಕಾಶ ಇಲ್ಲ’ ಎಂದು ತಿಳಿಸಿದೆ.
  • ಆದ್ದರಿಂದ ಆರೈಕೆದಾರರಿಗೆ ತಕ್ಷಣದಿಂದ ವಿನಾಯಿತಿ ರದ್ದು ಪಡಿಸುವಂತೆ ಇಲಾಖೆ ಸುತ್ತೋಲೆ ಹೊರಡಿಸಿದೆ.
  • ‘ಮಹಿಳಾ ಕಾರ್ಮಿಕರು ಮಕ್ಕಳನ್ನು ‘ಕೂಸಿನ ಮನೆ’ಗಳಲ್ಲಿ ಬಿಟ್ಟು ನಿಶ್ಚಿಂತೆಯಿಂದ ನರೇಗಾದಲ್ಲಿ ದುಡಿದು ಕೂಲಿ ಪಡೆಯುತ್ತಿದ್ದಾರೆ. ಕೂಸಿನ ಮನೆಯ ಆರೈಕೆದಾರರೂ ನರೇಗಾ ಭಾಗವೇ ಆಗಿದ್ದಾರೆ. ಆದ್ದರಿಂದ ಅವರಿಗೆ ಹಾಜರಾತಿಯಿಂದ ವಿನಾಯಿತಿ ನೀಡಲಾಗುತ್ತಿತ್ತು.

2080ಕ್ಕೆ ದೇಶದ ಜನಸಂಖ್ಯೆಯಲ್ಲಿ ಸ್ಥಿರತೆ

ಸಂದರ್ಭ: ಫಲವಂತಿಕೆ ದರ (ಫರ್ಟಿಲಿಟಿ ರೇಟ್) ಕುಸಿತದಿಂದಾಗಿ ದೇಶದ ಜನಸಂಖ್ಯೆಯು 2080 ವೇಳೆಗೆ ಸ್ಥಿರಗೊಳ್ಳುವ ನಿರೀಕ್ಷೆಯಿದೆ ಎಂದು ಇಂಡಿಯನ್ ಅಸೋಸಿಯೇಷನ್ ಫಾರ್ ದಿ ಸ್ಟಡಿ ಆಫ್ಪಾಪುಲೇಷನ್‌ (ಐಐಎಸ್ಪಿ) ಹೇಳಿದೆ.

  • ಪ್ರಸ್ತುತ ಫಲವಂತಿಕೆಯ ದರ 1.9ರಷ್ಟಿದ್ದು, ಕಳೆದ ಎರಡು ದಶಕಗಳಲ್ಲಿ ಜನನ ಪ್ರಮಾಣವು ತೀವ್ರವಾಗಿ ಕುಸಿಯುತ್ತಿದೆ.
  • ‘ನಮ್ಮ ದೇಶದ ಫಲವಂತಿಕೆಯ ಒಟ್ಟು ದರ 2000ನೇ ಇಸ್ವಿಯಲ್ಲಿ ಶೇಕಡ 3.5ರಷ್ಟಿತ್ತು. ಇದೀಗ ಶೇ 1.9ಕ್ಕೆ ನಿಂತಿದ್ದು, ತೀವ್ರವಾಗಿ ಕುಸಿತಗೊಂಡಿದೆ.
  • ‘ದೇಶದ ಜನಸಂಖ್ಯೆಯು 2080ರ ವೇಳೆಗೆ 180 ಕೋಟಿ ಅಥವಾ 190 ಕೋಟಿಗೆ ಏರಿಕೆಯಾಗುವ ನಿರೀಕ್ಷೆಯಿದೆ. ಬೆಳವಣಿಗೆ ದರವೂ ಸ್ಥಿರಗೊಳ್ಳುವ ನಿರೀಕ್ಷೆಯಿದೆ.
  • ಈಗಿನ ಎಲ್ಲ ಅಂದಾಜುಗಳು, ಭಾರತದ ಗರಿಷ್ಠ ಜನಸಂಖ್ಯೆಯು 200 ಕೋಟಿಗಿಂತ ಕಡಿಮೆಯಿರುತ್ತದೆ ಎಂಬುದನ್ನು ತೋರಿಸುತ್ತಿವೆ.

ಕಾಮನ್‌ವೆಲ್ತ್: ₹ 3000–5000 ಕೋಟಿ ನಿರ್ವಹಣಾ ವೆಚ್ಚ

ಸಂದರ್ಭ: ಅಹಮದಾಬಾದಿ ನಲ್ಲಿ 2030ರಲ್ಲಿ ನಡೆಯಲಿರುವ ಕಾಮನ್ವೆಲ್ತ್ ಕ್ರೀಡಾಕೂಟಕ್ಕಾಗಿ ಸಂಘಟನಾ ಸಮಿತಿಯೊಂದನ್ನು ರಚಿಸಲಾಗುವುದು. ಕೂಟದ ಕಾರ್ಯ ನಿರ್ವಹಣಾ ವೆಚ್ಚವು ಅಂದಾಜು ₹ 3000 ರಿಂದ ₹ 5000 ಕೋಟಿ ಆಗುವ ಸಾಧ್ಯತೆ ಇದೆ.

  • ಕೂಟದ ಯೋಜನೆಯಲ್ಲಿ ಭಾಗಿಯಾಗಿರುವ ಮೂಲಗಳ ಪ್ರಕಾರ, ಕ್ರೀಡೆ ಮತ್ತು ಸಾರ್ವಜನಿಕ ಬಳಕೆಗಾಗಿ ಇರುವ ಮೂಲಸೌಲಭ್ಯಗಳನ್ನು ಉನ್ನತ ದರ್ಜೆಗೆ ಏರಿಸುವುದು, ಹೊಸ ಸೌಲಭ್ಯ ಗಳನ್ನು ನಿರ್ಮಿಸುವುದು ಸೇರಿದಂತೆ  ಇರುವ ಕಾರ್ಯ ಯೋಜನೆಗಳಿಗೆ ಒಟ್ಟಾರೆ ವೆಚ್ಚವನ್ನು ಅಂದಾಜು ಮಾಡಲಾಗುತ್ತಿದೆ.

ವಿಶ್ವ ಯುವ ಟಿಟಿ: ದಿವ್ಯಾಂಶಿಗೆ ಕಂಚು

ಸಂದರ್ಭ: ಭಾರತದ ಉದಯೋನ್ಮುಖ ಆಟಗಾರ್ತಿ ದಿವ್ಯಾಂಶಿ ಭೌಮಿಕ್ ಅವರು ಐಟಿಟಿಎಫ್ವಿಶ್ವ ಯುವ ಟೇಬಲ್ಟೆನಿಸ್ಚಾಂಪಿಯನ್ಷಿಪ್ನಲ್ಲಿ 15 ವರ್ಷದೊಳಗಿನವರ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡರು.

  • ಭಾರತ ತಂಡ ವಿಭಾಗದಲ್ಲಿ ಎರಡು ಪದಕಗಳನ್ನು ಗೆದ್ದುಕೊಂಡಿತು. 15 ವರ್ಷದೊಳಗಿನ ಬಾಲಕಿಯರ ತಂಡ (ದಿವ್ಯಾಂಶಿ, ಅನನ್ಯಾ ಮುರಳೀಧರನ್, ಅಂಕೊಲಿಕಾ ಚಕ್ರವರ್ತಿ ಮತ್ತು ನೈಶಾ ರೆವಾಸ್ಕರ್‌) ಕಂಚಿನ ಪದಕ ಗೆದ್ದಿತ್ತು.
  • 19 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ ಭಾರತ ತಂಡ ಬೆಳ್ಳಿ ಪದಕ ಗೆದ್ದಿತು. ಅಂಕುರ್ ಭಟ್ಟಾಚಾರ್ಜಿ, ಅಭಿನಂದ್‌ ಪ್ರದಿವಾಧಿ, ಪುನಿತ್ ಬಿಸ್ವಾಸ್‌ ಮತ್ತು ಪ್ರಿಯಾನುಜ್ ಭಟ್ಟಾಚಾರ್ಯ ಅವರನ್ನು ತಂಡ ಒಳಗೊಂಡಿತ್ತು.
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments