Sat. Feb 7th, 2026
  • ಮೊಬೈಲ್ನಲ್ಲಿ ಟ್ರಾಫಿಕ್ಸಿಗ್ನಲ್ಮಾಹಿತಿ

ಸಂದರ್ಭ: ಸಿಲಿಕಾನ್ಸಿಟಿ ಟ್ರಾಫಿಕ್ಸಿಗ್ನಲ್ಗಳಲ್ಲಿ ಹಸಿರು, ಕೆಂಪು ನಿಶಾನೆ ತೋರುವ ಸಮಯ ಎಷ್ಟು ಸೆಕೆಂಡ್ಗಳವರೆಗೆ ಇರಲಿದೆ ಎಂಬ ರಿಯಲ್ಟೈಮ್ಮಾಹಿತಿಯನ್ನು ಮ್ಯಾಪಲ್ಸ್ಆ್ಯಪ್ನಲ್ಲಿ ಲೈವ್ಆಗಿ ನೀಡ ಲಾಗುತ್ತದೆ. ಬೆಂಗಳೂರು ನಗರದಲ್ಲಿ ಮೊದಲ ಬಾರಿಗೆ ಇದನ್ನು ಪ್ರಾಯೋಗಿಕ ವಾಗಿ ಜಾರಿಗೊಳಿಸಲಾಗಿದೆ. ಇದರಿಂದ ಯಾವ ರಸ್ತೆಯಲ್ಲಿ ಎಷ್ಟು ಸಮಯ ದವರೆಗೆ ಸಂಚಾರ ದಟ್ಟಣೆ ಇರಲಿದೆ ಎಂಬ ಮಾಹಿತಿಯನ್ನು ಪ್ರಯಾಣಿಕರು ಅಂಗೈಯಲ್ಲಿ ಪಡೆದುಕೊಳ್ಳಬಹುದು.

  • ಬೆಂಗಳೂರು ನಗರ ಸಂಚಾರ ಪೊಲೀಸ್ ವಿಭಾಗ, ಅರ್ಕಾಡಿಸ್ ಇಂಡಿಯಾ ಮತ್ತು ಮ್ಯಾಪಲ್ಸ್‌ (ಮ್ಯಾಪ್‌ ಮೈ ಇಂಡಿಯಾ) ಜಂಟಿಯಾಗಿ ಈ ಉಪಕ್ರಮವನ್ನು ಜಾರಿಗೊಳಿಸಿವೆ.
  • ಮ್ಯಾಪಲ್ಸ್‌ ಆ್ಯಪ್‌ ಬಳಕೆದಾರರು ಬೆಂಗಳೂರು ನಗರದ ಟ್ರಾಫಿಕ್‌ ಸಿಗ್ನಲ್‌ಗಳು ಸಮೀಪಿಸುತ್ತಿದ್ದಂತೆಯೇ ಟ್ರಾಫಿಕ್‌ ಸಿಗ್ನಲ್‌ಗಳು ಕೆಂಪು ಅಥವಾ ಹಸಿರು ನಿಶಾನೆಗೆ ಬದಲಾಗಲು ಎಷ್ಟು ಸೆಕೆಂಡುಗಳಿವೆ ಎಂಬ ನಿಖರ ಮಾಹಿತಿಯನ್ನು ಈಗ ಮೊಬೈಲ್‌ನಲ್ಲಿಯೇ ವೀಕ್ಷಿಸಬಹುದು.
  • ಪ್ರತಿ ಸಿಗ್ನಲ್‌ಗೂ ಕಾಲಮಿತಿ ಅಳವಡಿಸಿ ವಾಹನ ಸಂಚಾರ ನಿಯಂತ್ರಣ ಮಾಡುವ ಹಳೆಯ ವ್ಯವಸ್ಥೆಯ ಬದಲಿಗೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿಕೊಂಡು ಆಯಾ ರಸ್ತೆಗಳಲ್ಲಿನ ವಾಹನ ದಟ್ಟಣೆಯನ್ನು ಗ್ರಹಿಸಿ ಹಸಿರು ನಿಶಾನೆ ನೀಡುವ ಅಡ್ಯಾಪ್ಟಿವ್‌ ಟ್ರಾಫಿಕ್‌ ಕಂಟ್ರೋಲ್‌ ಸಿಸ್ಟಮ್‌ (ಎಟಿಸಿಎಸ್‌) ನಗರದ 169 ಜಂಕ್ಷನ್‌ಗಳಲ್ಲಿ ಕಾರ್ಯಾಚರಣೆ ಮಾಡುತ್ತಿದೆ. ಈ ಟ್ರಾಫಿಕ್‌ ಸಿಗ್ನಲ್‌ಗಳು ಎಷ್ಟು ಸೆಕೆಂಡುಗಳ ಕಾಲ ಹಸಿರು, ಕೆಂಪು ನಿಶಾನೆ ತೋರುತ್ತವೆ ಎಂಬುದನ್ನು ಮ್ಯಾಪಲ್ಸ್‌ ಆ್ಯಪ್‌ನಲ್ಲಿ ನೋಡಬಹುದು.
  • ‘ಈ ಎಐ ಚಾಲಿತ ಸ್ಮಾರ್ಟ್‌ ಸಿಗ್ನಲ್‌ಗಳಲ್ಲಿ ವೆಹಿಕಲ್‌ ಆಕ್ಚುಯೇಟೆಡ್‌ ಕಂಟ್ರೋಲ್ಡ್‌ (ವಿಎಸಿ) ತಂತ್ರಜ್ಞಾನದ ಸಹಾಯದಿಂದ ಸಿಗ್ನಲ್‌ಗಳಲ್ಲಿ ಬಿತ್ತರಿಸುವ ನೈಜ ಸಮಯವನ್ನು ಮ್ಯಾಪಲ್ಸ್ ಆ್ಯಪ್‌ನಲ್ಲಿ ತೋರಿಸಲಾಗುತ್ತದೆ. ಇದನ್ನು ಸಂಚಾರ ವಿಭಾಗದ ಪೊಲೀಸರು ಮ್ಯಾನ್ಯುಯಲ್ ಆಗಿ ನಿರ್ವಹಣೆ ಮಾಡಿದರೆ, ಆ್ಯಪ್‌ನಲ್ಲಿ ಮಾಹಿತಿ ಸಿಗುವುದಿಲ್ಲ’ ಎಂದು ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. 
  • ‘ಎಐ ಸಿಗ್ನಲ್‌ಗಳಲ್ಲಿ ಬರುವ ಕೌಂಟ್‌ಡೌನ್‌ ಅವಧಿಯನ್ನು ಮ್ಯಾಪಲ್ಸ್‌ ಆ್ಯಪ್‌ನಲ್ಲಿ ತೋರಿಸಲಾಗುತ್ತಿದೆ. ಇದರಿಂದ ವಾಹನ ಸವಾರರು ಟ್ರಾಫಿಕ್‌ ಸಿಗ್ನಲ್‌ನ 500 ಮೀಟರ್‌ ದೂರದಿಂದಲೇ ಹಸಿರು ಅಥವಾ ಕೆಂಪು ನಿಶಾನೆ ಬರಲು ಎಷ್ಟು ಸೆಕೆಂಡುಗಳಿವೆ ಎಂಬುದನ್ನು ತಿಳಿದುಕೊಂಡು, ಬೇರೆ ಮಾರ್ಗದ ಮೂಲಕ ತೆರಳಲು ಅವಕಾಶ ಕಲ್ಪಿಸುತ್ತದೆ. ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಇದು ಸಹಾಯಕವಾಗಲಿದೆ’ ಎಂದು ಅವರು ವಿವರಿಸಿದರು.

ಹಲವು ಆವಿಷ್ಕಾರಗಳಿಗೆ ಮ್ಯಾಪಲ್ಸ್ಸಾಕ್ಷಿ

  • ‘ಟ್ರಾಫಿಕ್‌ ಸಿಗ್ನಲ್‌ನ ಹಸಿರು ಅಥವಾ ಕೆಂಪು ನಿಶಾನೆ ತೋರುವ ಸಮಯ ಎಷ್ಟು ಸೆಂಕಡ್‌ಗಳವರೆಗೆ ಇರಲಿದೆ ಎಂಬ ಮಾಹಿತಿಯನ್ನು ಈಗ ಮ್ಯಾಪಲ್ಸ್‌ ಆ್ಯಪ್‌ನಲ್ಲಿಯೂ ನೋಡಬಹುದು. ಸ್ವದೇಶಿ ನಿರ್ಮಿತ್‌ ಆ್ಯಪ್‌ ಇನ್ನೂ ಹಲವು ಆವಿಷ್ಕಾರಗಳಿಗೆ ಸಾಕ್ಷಿಯಾಗಲಿದೆ’ ಎಂದು ಮ್ಯಾಪ್‌ ಮೈ ಇಂಡಿಯಾ ನಿರ್ದೇಶಕ ರೋಹನ್ ವರ್ಮಾ ಅವರು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
  • ಸುಧಾರಣೆಯ ಹಾದಿಯಲ್ಲಿ ಎನ್‌ಪಿಎಸ್

ಖಾಸಗಿ ವಲಯದ ಬಹುತೇಕ ಉದ್ಯೋಗಿಗಳು ಬಾಳಿನ ಮುಸ್ಸಂಜೆಯಲ್ಲಿ ಜೀವನ ನಿರ್ವಹಣೆಗೆ ಇಡುಗಂಟು ಇಲ್ಲದೆ ತೊಂದರೆಗೆ ಸಿಲುಕುತ್ತಾರೆ. ನಿವೃತ್ತಿ ನಂತರದ ಬದುಕಿನ ಬಂಡಿ ಎಳೆಯಲು ಪೂರ್ವಸಿದ್ಧತೆ ಇಲ್ಲದವರ ಕೊರಳಿಗೆ ಸಂಕಷ್ಟಗಳ ಸಂಕೋಲೆ ಬೀಳುತ್ತದೆ. ಅಂಥವರಿಗೆ ನೆರವಾಗಲೆಂದೇ ಕೇಂದ್ರ ಸರ್ಕಾರವು ಪಿಂಚಣಿ ಯೋಜನೆಯನ್ನು ಖಾಸಗಿಯವರಿಗೂ ವಿಸ್ತರಿಸಿತ್ತು.   

2004ರಲ್ಲಿ ಕೇಂದ್ರ ಸರ್ಕಾರವು ಹಳೆಯ ಪಿಂಚಣಿ ವ್ಯವಸ್ಥೆಯನ್ನು (ಒಪಿಎಸ್‌) ರದ್ದುಪಡಿಸಿ, ಸಾಮಾಜಿಕ ಭದ್ರತೆಯ ಭಾಗವಾಗಿ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು (ಎನ್‌ಪಿಎಸ್‌) ಜಾರಿಗೊಳಿಸಿತು. ಆರಂಭದಲ್ಲಿ ಈ ಯೋಜನೆಯು ಕೇಂದ್ರ ಸರ್ಕಾರಿ ನೌಕರರಿಗಷ್ಟೆ ಸೀಮಿತವಾಗಿತ್ತು. 2009ರಿಂದ ಖಾಸಗಿ ವಲಯದ ಉದ್ಯೋಗಿಗಳಿಗೂ ಇದನ್ನು ವಿಸ್ತರಿಸಿತು. ಪ್ರಸ್ತುತ ಈ ಯೋಜನೆಯು ಸಾರ್ವಜನಿಕ, ಖಾಸಗಿ, ಅಸಂಘಟಿತ ವಲಯದ ಉದ್ಯೋಗಿಗಳು ಮತ್ತು ಮಕ್ಕಳೂ ಸೇರಿದಂತೆ ಎಲ್ಲಾ ನಾಗರಿಕರಿಗೂ ಮುಕ್ತವಾಗಿದೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಪಿಎಫ್‌ಆರ್‌ಡಿಎ) ಇದರ ನಿರ್ವಹಣೆಯ ಹೊಣೆ ಹೊತ್ತಿದೆ.

ಎನ್‌ಪಿಎಸ್‌, ಷೇರು ಮಾರುಕಟ್ಟೆ ಸಂಯೋಜಿತ ಹೂಡಿಕೆ ಮತ್ತು ಉಳಿತಾಯ ಯೋಜನೆ. ನಿವೃತ್ತಿ ನಂತರವೂ ನಿಯಮಿತ ಆದಾಯವನ್ನು ಒದಗಿಸುತ್ತದೆ. ಜೊತೆಗೆ, ಚಂದಾದಾರರಿಗೆ ಆರ್ಥಿಕ ಸ್ಥಿರತೆ ಮತ್ತು ಭದ್ರತೆಯನ್ನೂ ಖಾತರಿಪಡಿಸುತ್ತದೆ. ಇದರಡಿ ಹೂಡಿಕೆ ಮಾಡುವವರಿಗೆ ಆದಾಯ ತೆರಿಗೆಯ ವಿನಾಯಿತಿ ಲಭಿಸುತ್ತದೆ. ಎನ್‌ಪಿಎಸ್‌ನಡಿ ಹೂಡಿಕೆ ಮಾಡಿದರೆ ಸೆಕ್ಷನ್‌ 80ಸಿ ಅಡಿ ₹1.50 ಲಕ್ಷ ಹಾಗೂ ಸೆಕ್ಷನ್‌ 80ಸಿಸಿಡಿ (1ಬಿ) ಅಡಿ ₹50 ಸಾವಿರ ವಿನಾಯಿತಿ ದೊರೆಯುತ್ತದೆ. 

ಮತ್ತೊಂದೆಡೆ, ಮ್ಯೂಚುವಲ್‌ ಫಂಡ್‌ಗಳ ನಿರ್ವಹಣಾ ಶುಲ್ಕಕ್ಕೆ ಹೋಲಿಸಿದರೆ ಎನ್‌ಪಿಎಸ್‌ ನಿರ್ವಹಣಾ ಶುಲ್ಕ ಅತ್ಯಲ್ಪ. ಮ್ಯೂಚುವಲ್‌ ಫಂಡ್‌ಗಳ ವಾರ್ಷಿಕ ನಿರ್ವಹಣಾ ಶುಲ್ಕ ಶೇ 1ರಿಂದ ಶೇ 2.5ರಷ್ಟಿದೆ. ಎನ್‌ಪಿಎಸ್‌ನಲ್ಲಿ ವಾರ್ಷಿಕ ನಿರ್ವಹಣಾ ಶುಲ್ಕ ಶೇ 0.09ರಷ್ಟಿದೆ. ಅಂದರೆ ₹1 ಲಕ್ಷ ಹೂಡಿಕೆ ಮೊತ್ತಕ್ಕೆ ಚಂದಾದಾರರು ಕೇವಲ ₹90 ಶುಲ್ಕವನ್ನಷ್ಟೆ ಭರಿಸುತ್ತಾರೆ. ಈ ಯೋಜನೆಯಡಿ ಇಂಥ ಸಾಕಷ್ಟು ಅನುಕೂಲಗಳಿದ್ದರೂ ಅರಿವಿನ ಕೊರತೆಯಿಂದಾಗಿ ಹೆಚ್ಚು ಜನಪ್ರಿಯತೆ ಪಡೆದಿಲ್ಲ.

ನಿಯಮ ಇನ್ನಷ್ಟು ಸರಳ:ಇದಕ್ಕಾಗಿಯೇ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಎನ್‌ಪಿಎಸ್‌ನಲ್ಲಿ ಹೂಡಿಕೆ, ಚಂದಾದಾರಿಕೆ ಅಂತ್ಯಗೊಳಿಸುವ ಮತ್ತು ಹಣ ಹಿಂಪಡೆಯುವಿಕೆ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಲು ಅಣಿಯಾಗಿದೆ. ಇದಕ್ಕಾಗಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಡಿ ನಿರ್ಗಮನ ಮತ್ತು ಹಿಂಪಡೆಯುವಿಕೆ) ನಿಯಮಗಳು– 2015ರ ತಿದ್ದುಪಡಿ ಕರಡು ಪ್ರಕಟಿಸಿದೆ. ಉದ್ದೇಶಿತ ತಿದ್ದುಪಡಿ ನಿಯಮಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರನ್ನು ಹೊರತುಪಡಿಸಿ ಉಳಿದ ಎಲ್ಲ ರೀತಿಯ ಉದ್ಯೋಗಿಗಳಿಗೂ ಅನ್ವಯಿಸುತ್ತವೆ.

ಎನ್‌ಪಿಎಸ್‌ ಸ್ವಾವಲಂಬನೆ (ಅಸಂಘಟಿತ ವಲಯ), ಎನ್‌ಪಿಎಸ್ ವಾತ್ಸಲ್ಯ (ಮಕ್ಕಳ ಹೆಸರಿನಲ್ಲಿ ಚಂದಾದಾರಿಕೆ), ಎಲ್ಲ ನಾಗರಿಕರು, ಕಾರ್ಪೊರೇಟ್ ವಲಯಗಳ ಸಿಬ್ಬಂದಿಗೆ (ಎನ್‌ಪಿಎಸ್‌ನ ಟೈರ್‌–1 ಖಾತೆ) ಈ ನಿಯಮಗಳು ಅನ್ವಯಿಸುತ್ತವೆ.

ಶೇ 80ರಷ್ಟು ಇಡುಗಂಟು ಲಭ್ಯ 

ಪಿಎಫ್‌ಆರ್‌ಡಿಎ ಪ್ರಕಟಿಸಿರುವ ಹೊಸ ಪ್ರಸ್ತಾವದನ್ವಯ ಚಂದಾದಾರರಿಗೆ ಹೆಚ್ಚಿನ ಅನುಕೂಲ ಲಭಿಸಲಿದೆ. ಹಾಲಿ ನಿಯಮದ (ಸಾಮಾನ್ಯ ಯೋಜನೆ) ಅನ್ವಯ ಚಂದಾದಾರರಿಗೆ ಯೋಜನೆಯಿಂದ ಹೊರಬರಲು ನಿವೃತ್ತಿಯ ವಯಸ್ಸು ಅಂದರೆ 60 ವರ್ಷದ ಮಿತಿ ನಿಗದಿಪಡಿಸಲಾಗಿತ್ತು. ಈ ವೇಳೆ ದೊರೆಯುವ ಪಿಂಚಣಿಯ ಇಡುಗಂಟಿನಲ್ಲಿ (ಕಾರ್ಪಸ್‌) ಶೇ 60ರಷ್ಟು ಮೊತ್ತ ಹಿಂಪಡೆಯಲು ಅವಕಾಶವಿತ್ತು. ಈ ಮೊತ್ತವು ಆದಾಯ ತೆರಿಗೆಯಿಂದ ಮುಕ್ತವಾಗಿದೆ. ಉಳಿದ ಶೇ 40ರಷ್ಟು ನಿಧಿಯನ್ನು ನಿಯಮಿತವಾಗಿ ಆದಾಯ ತರುವ ಯೋಜನೆಯಲ್ಲಿ (ಪರ್ಚೇಸ್ ಆಫ್ ಆ್ಯನುಟಿ) ಕಡ್ಡಾಯವಾಗಿ ಹೂಡಿಕೆ ಮಾಡಬೇಕಿತ್ತು.  ‌

ಕರಡಿನಲ್ಲಿ ಇಡುಗಂಟು ಹಿಂಪಡೆಯುವಿಕೆ ಪ್ರಮಾಣವನ್ನು ಶೇ 80ಕ್ಕೆ ಹೆಚ್ಚಿಸುವ ಕುರಿತು ಪ್ರಸ್ತಾಪಿಸಲಾಗಿದೆ (ಈ ಪೈಕಿ ಶೇ 60ರಷ್ಟು ಮೊತ್ತಕ್ಕೆ ತೆರಿಗೆ ವಿನಾಯಿತಿ ಇದ್ದರೆ, ಉಳಿದ ಶೇ 20ರಷ್ಟು ಮೊತ್ತವು ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡುತ್ತದೆ). ಉಳಿದ ಶೇ 20ರಷ್ಟು ಮೊತ್ತವನ್ನು ಚಂದಾದಾರರು ನಿಯಮಿತವಾಗಿ ಆದಾಯ ತರುವ ಯೋಜನೆಯಲ್ಲಿ ಹೂಡುವುದು ಕಡ್ಡಾಯ. ಹೊಸ ಪ್ರಸ್ತಾವವು ಖಾತೆದಾರರಿಗೆ ಹೆಚ್ಚಿನ ಆರ್ಥಿಕ ಭದ್ರತೆ ಒದಗಿಸಲಿದೆ. ಅಲ್ಲದೆ, ಆರ್ಥಿಕ ಸಂಕಷ್ಟಗಳನ್ನು ಪರಿಹರಿಸಿಕೊಳ್ಳಲು ನೆರವಾಗಲಿದೆ ಎನ್ನುತ್ತಾರೆ ಹೂಡಿಕೆ ತಜ್ಞರು.

ಸಾಮಾನ್ಯ ಚಂದಾದಾರಿಕೆ ಹೊರಬರುವ ವ್ಯವಸ್ಥೆಯಡಿ (60 ವರ್ಷಕ್ಕೆ) ಚಂದಾದಾರರ ಖಾತೆಯಲ್ಲಿ ₹2.5 ಲಕ್ಷ ಇಡುಗಂಟು ಇದ್ದರೆ, ಇಡೀ ಮೊತ್ತ ಹಿಂಪಡೆಯಲು ಹಾಲಿ ನಿಯಮದಲ್ಲಿ ಅವಕಾಶವಿದೆ. ಈ ಮೊತ್ತದ ಪ್ರಮಾಣ ಹೆಚ್ಚಿಸಲು ತಿದ್ದುಪಡಿಯಲ್ಲಿ ಪ್ರಸ್ತಾಪಿಸಲಾಗಿದೆ. ಇಡುಗಂಟು ₹12 ಲಕ್ಷಕ್ಕಿಂತ ಕಡಿಮೆ ಇದ್ದರೆ ಆ ಮೊತ್ತದಲ್ಲಿ ಶೇ 50ರಷ್ಟನ್ನು ಒಂದೇ ಬಾರಿಗೆ ಹಿಂಪಡೆಯಬಹುದಾಗಿದೆ. ಉಳಿದ ಶೇ 50ರಷ್ಟು ಮೊತ್ತವನ್ನು ಐದು ವರ್ಷಗಳಲ್ಲಿ ವ್ಯವಸ್ಥಿತವಾಗಿ ಹಿಂಪಡೆಯಲು ಅವಕಾಶವಿದೆ ಅಥವಾ ಚಂದಾದಾರರು ಇಚ್ಛಿಸಿದರೆ ಈ ಮೊತ್ತವನ್ನು ನಿಯಮಿತವಾಗಿ ಆದಾಯ ತರುವ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ.

ಕೆಲವು ಚಂದಾದಾರರು ಅವಧಿ ಮುಗಿಯುವ ಮೊದಲೇ ಇಡುಗಂಟು ಹಿಂಪಡೆಯಲು ಇಚ್ಛಿಸುವುದುಂಟು. ಹಾಲಿ ನಿಯಮದಡಿ ₹2.5 ಲಕ್ಷ ಇಡುಗಂಟು ಇದ್ದರೆ ಇಡೀ ಮೊತ್ತವನ್ನು ಹಿಂಪಡೆಯಬಹುದಾಗಿದೆ. ಈ ಮೊತ್ತ ಹೆಚ್ಚಿಸುವ ಕುರಿತು ತಿದ್ದುಪಡಿಯಲ್ಲಿ ಉಲ್ಲೇಖಿಸಲಾಗಿದೆ. ₹4 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಮೊತ್ತ ಇದ್ದರೆ ಸಂಪೂರ್ಣವಾಗಿ ಹಿಂಪಡೆಯಲು ಅವಕಾಶ ಕಲ್ಪಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಅಂತಹ ಚಂದಾದಾರರು ನಿಯಮಿತವಾಗಿ ಆದಾಯ ತರುವ ಯೋಜನೆಯಲ್ಲಿ ಹೂಡಿಕೆ ಮಾಡುವ ಪ್ರಮೇಯ ಇರುವುದಿಲ್ಲ.

ಪ್ರಸ್ತುತ ಎನ್‌ಪಿಎಸ್‌ ಸೇರ್ಪಡೆಗೆ ಗರಿಷ್ಠ ವಯಸ್ಸು 70 ವರ್ಷ. 75 ವರ್ಷದವರೆಗೂ ಖಾತೆ ಮುಂದುವರಿಸಬಹುದು. ತಿದ್ದುಪಡಿಯಲ್ಲಿ ಸೇರ್ಪಡೆ ಮತ್ತು ಖಾತೆ ಮುಂದುವರಿಸುವ ಅವಧಿಯನ್ನು 85 ವರ್ಷದವರೆಗೆ ವಿಸ್ತರಿಸುವ ಕುರಿತು ಉಲ್ಲೇಖಿಸಲಾಗಿದೆ. ಪ್ರಸ್ತುತ ಚಂದಾದಾರರ ಎನ್‌ಪಿಎಸ್‌ ಮೊತ್ತಕ್ಕೆ ಸಾಲ ಸೌಲಭ್ಯವಿಲ್ಲ. ಕರಡಿನಲ್ಲಿ, ಸಾಲ ನೀಡುವ ಬಗ್ಗೆಯೂ ಪ್ರಸ್ತಾಪಿಸಲಾಗಿದೆ.

ಬಹು ಯೋಜನೆಯ ಚೌಕಟ್ಟು

ಎನ್‌ಪಿಎಸ್‌ ಬಲವರ್ಧನೆಗೆ ಪ್ರಾಧಿಕಾರವು ಬಹು ಯೋಜನೆ ಚೌಕಟ್ಟು (ಎಂಎಸ್‌ಎಫ್‌) ರೂಪಿಸಿದೆ. ಇದರಡಿ ಅನುಷ್ಠಾನಗೊಳಿಸಿರುವ ಹೊಸ ಯೋಜನೆಯು ಚಂದಾದಾರರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ.

ಪ್ರಸ್ತುತ ಎನ್‌ಪಿಎಸ್‌ ಚಂದಾದಾರರ ಕೊಡುಗೆಯನ್ನು ಷೇರುಪೇಟೆ, ಸರ್ಕಾರಿ ಬಾಂಡ್‌, ಕಾರ್ಪೊರೇಟ್‌ ಬಾಂಡ್‌ ಮತ್ತು ಇತರ ನಿಧಿಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಯಾವ ಹೂಡಿಕೆಗೆ ಎಷ್ಟು ಮೊತ್ತ ಹಂಚಿಕೆ ಮಾಡಬೇಕು ಎಂಬುದನ್ನು ಚಂದಾದಾರರೇ ನಿರ್ಧರಿಸಬಹುದು. ಚಂದಾದಾರರ ಸೂಚನೆ ಅನ್ವಯ ಫಂಡ್‌ ಮ್ಯಾನೇಜರ್‌ಗಳು ಹೂಡಿಕೆಯನ್ನು ನಿರ್ವಹಣೆ ಮಾಡುತ್ತಾರೆ.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯಾಗಿರುವ ಎನ್‌ಪಿಎಸ್‌ ಮೊತ್ತವು ವಾರ್ಷಿಕ ಶೇ 13ರಷ್ಟು ರಿಟರ್ನ್ಸ್‌ ತಂದುಕೊಟ್ಟಿದೆ. ಕಾರ್ಪೊರೇಟ್ ಬಾಂಡ್‌ ಮತ್ತು ಸರ್ಕಾರಿ ಬಾಂಡ್‌ಗಳಲ್ಲಿನ ಹೂಡಿಕೆಯು ಶೇ 9ರಷ್ಟು ರಿಟರ್ನ್ಸ್‌ ನೀಡಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಸದ್ಯ ಎನ್‌ಪಿಎಸ್‌ ಚಂದಾದಾರರು ತಮ್ಮ ಕೊಡುಗೆಯ ಶೇ 75ರಷ್ಟು ಮೊತ್ತವನ್ನಷ್ಟೇ ಷೇರುಪೇಟೆಯಲ್ಲಿ ಹೂಡಲು ಅವಕಾಶವಿದೆ. ಆದರೆ, ಬಹಳಷ್ಟು ಚಂದಾದಾರರು ಹೆಚ್ಚಿನ ರಿಟರ್ನ್ಸ್‌ ಅನ್ನು ಅಪೇಕ್ಷಿಸುತ್ತಾರೆ. ಅಂತಹ ಚಂದಾದಾರರಿಗೆ ತಮ್ಮ ಕೊಡುಗೆಯ ಶೇ 100ರಷ್ಟು ಮೊತ್ತವನ್ನೂ ಷೇರುಪೇಟೆಯಲ್ಲಿ ಹೂಡಿಕೆಗೆ ಬಹು ಯೋಜನೆ ಚೌಕಟ್ಟಿನಡಿ ಅವಕಾಶ ಕಲ್ಪಿಸಲಾಗಿದೆ. ಅಕ್ಟೋಬರ್‌ 1ರಿಂದಲೇ ಇದು ಜಾರಿಗೆ ಬಂದಿದೆ.   

‘ಜೆನ್‌-ಝೀ’ ಪೀಳಿಗೆ ಮತ್ತು ಗಿಗ್‌ ಕಾರ್ಮಿಕರು ಎನ್‌ಪಿಎಸ್‌ನಿಂದ ದೂರವಿದ್ದಾರೆ. ಅವರನ್ನು ಈ ಯೋಜನೆಯತ್ತ ಆಕರ್ಷಿಸುವ ಉದ್ದೇಶದಿಂದ ಪಿಎಫ್‌ಆರ್‌ಡಿಎ ಈ ಚೌಕಟ್ಟು ರೂಪಿಸಿದೆ. ಆದರೆ, ಜಾಗತಿಕ ಹಾಗೂ ದೇಶೀಯ ವಿದ್ಯಮಾನಗಳು ದೇಶೀಯ ಷೇರುಪೇಟೆ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ, ಹೆಚ್ಚಿನ ರಿಟರ್ನ್ಸ್‌ ನಿರೀಕ್ಷಿಸುವ ಚಂದಾದಾರರು ರಿಸ್ಕ್‌ ಭರಿಸಲೂ ಸಿದ್ಧವಿರಬೇಕಿದೆ. 

ಆಧಾರ: ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ವೆಬ್‌ಸೈಟ್, ಎನ್‌ಪಿಸ್‌ಟ್ರಸ್ಟ್.ಒಆರ್‌ಜಿ.ಇನ್, 

15 ವರ್ಷಕ್ಕೆ ಹೊರಬರಲು ಅವಕಾಶ 

ಪ್ರಸ್ತಾವಿತ ತಿದ್ದುಪಡಿ ನಿಯಮದಲ್ಲಿ 15 ವರ್ಷಗಳಿಗೆ ಎನ್‌ಪಿಎಸ್‌ನಿಂದ ಹೊರಬರುವುದಕ್ಕೆ ಅವಕಾಶ ಕಲ್ಪಿಸಲಾಗಿದೆ (ಹಾಲಿ ನಿಯಮದಡಿ 60 ವರ್ಷ ಆಗಿರಬೇಕು). ಉದಾಹರಣೆಗೆ, ಒಬ್ಬ ಖಾಸಗಿ ವಲಯದ ಉದ್ಯೋಗಿಯು 30ನೇ ವಯಸ್ಸಿಗೆ ಎನ್‌ಪಿಎಸ್‌ ಖಾತೆ ತೆರೆದು 45ನೇ ವಯಸ್ಸಿಗೆ ತನ್ನ ಚಂದಾದಾರಿಕೆಯನ್ನು ಕೊನೆಗೊಳಿಸಬಹುದು. 

ಆ ಸಮಯದಲ್ಲಿ ಆ ಉದ್ಯೋಗಿಯ ಎನ್‌ಪಿಎಸ್‌ ಖಾತೆಯಲ್ಲಿ ‌₹50 ಲಕ್ಷ ಹೊಂದಿದ್ದರೆ, ಆ ಪೈಕಿ ಶೇ 60ರಷ್ಟು ಮೊತ್ತ (₹30 ಲಕ್ಷ) ಹಿಂಪಡೆಯಬಹುದು. ಉಳಿದ ಶೇ 40ರಷ್ಟು ಮೊತ್ತವನ್ನು (₹20 ಲಕ್ಷ) ನಿಯಮಿತವಾಗಿ ಆದಾಯ ತರುವ ಯೋಜನೆಯಲ್ಲಿ ಹೂಡಿಕೆ ಮಾಡಲು ಮೀಸಲಿಡಬೇಕಿದೆ.

18 ತುಂಬಿದ ನಂತರವಷ್ಟೇ ಚಂದಾದಾರಿಕೆ ಅಂತ್ಯ 

ಎನ್‌ಪಿಎಸ್‌ –ವಾತ್ಸಲ್ಯ ಚಂದಾದಾರರಿಗೆ ಸಂಬಂಧಿಸಿದಂತೆ ಮಕ್ಕಳಿಗೆ 18 ವರ್ಷ ತುಂಬಿದ ಬಳಿಕಷ್ಟೇ ಅವರು ಚಂದಾದಾರಿಕೆಯಿಂದ ಹೊರಬರಬಹುದು ಎಂದು ಕರಡು ನಿಯಮದಲ್ಲಿ ಹೇಳಲಾಗಿದೆ. ಚಂದಾದಾರಿಕೆ ಅಂತ್ಯಗೊಳಿಸಿದ ನಂತರ ನಿಧಿಯಲ್ಲಿ ಸಂಗ್ರಹವಾಗಿರುವ ಮೊತ್ತದಲ್ಲಿ ಶೇ 80ರಷ್ಟನ್ನು ನಿಯಮಿತವಾಗಿ ಆದಾಯ ತರುವ ಯೋಜನೆಯಲ್ಲಿ ಹೂಡಿಕೆ ಮಾಡಬೇಕು. ಶೇ 20ರಷ್ಟನ್ನು ಇಡುಗಂಟು ರೂಪದಲ್ಲಿ ನೀಡಲಾಗುತ್ತದೆ. ಒಂದು ವೇಳೆ, ಎನ್‌ಪಿಎಸ್‌ ಖಾತೆಯಲ್ಲಿ ಸಂಗ್ರಹವಾದ ಮೊತ್ತ ₹4 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಇದ್ದರೆ, ಒಂದೇ ಸಲಕ್ಕೆ ಪೂರ್ಣ ಮೊತ್ತವನ್ನು ವಾಪಸ್‌ ಪಡೆಯುವುದಕ್ಕೂ ಅವಕಾಶ ಇದೆ. ಇದನ್ನು ಆಯ್ಕೆ ಮಾಡಿಕೊಂಡವರಿಗೆ ನಂತರ ಪಿಂಚಣಿ ಆದಾಯ ಸಿಗುವುದಿಲ್ಲ.   

ಮಕ್ಕಳಿಗೆ 18 ವರ್ಷ ಪೂರ್ಣವಾದ ನಂತರವೂ ಚಂದಾದಾರಿಕೆಯಿಂದ ಹೊರಬಾರದೇ ಇದ್ದ ಪಕ್ಷದಲ್ಲಿ ಚಂದಾದಾರಿಕೆಯು ಎನ್‌ಪಿಎಸ್‌ನ ಎಲ್ಲ ನಾಗರಿಕರು (All citizens) ವಿಭಾಗದಲ್ಲಿ ಮುಂದುವರಿಯುತ್ತದೆ.

  • ನಲಿಕಲಿಮಕ್ಕಳಿಗೆ ದಿನಕ್ಕೊಂದು ರೂಪಾಯಿ

ಸಂದರ್ಭ: ಕೊಪ್ಪಳ ತಾಲ್ಲೂಕಿನ ಲಿಂಗದೇವರಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿನಲಿ ಕಲಿ ಶಿಕ್ಷಣದ ಮಕ್ಕಳಿಗೆ ದಿನಕ್ಕೆ ₹ 1 ನೀಡಲು ಮುಖ್ಯ ಶಿಕ್ಷಕ ಎಂ.ಕೆ. ಹೊಳಜೋಗಿ ತೀರ್ಮಾನಿಸಿದ್ದು, ದಾಖಲಾತಿ ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ.

  • ಶಾಲೆಯಲ್ಲಿ 1ರಿಂದ 3ನೇ ತರಗತಿಯವರೆಗೆ ನಲಿಕಲಿ ಶಿಕ್ಷಣ ಕ್ರಮವಿದೆ. 1, 2ನೇ ತರಗತಿಯಲ್ಲಿ 7 ಮಕ್ಕಳಿದ್ದಾರೆ. 3ನೇ ತರಗತಿಯಲ್ಲಿ ಮಕ್ಕಳಿಲ್ಲ. ಹೀಗಾಗಿ, ದಾಖಲಾತಿ ಹೆಚ್ಚಳಕ್ಕಾಗಿ ಹೊಳಜೋಗಿ ಅವರು ‘ದಿನಕ್ಕೆ ₹ 1 ಯೋಜನೆ’ ರೂಪಿಸಿದ್ದಾರೆ.
  • ಸರ್ಕಾರಿ ಕನ್ನಡ ಶಾಲೆಗೆ ದಾಖಲಾಗುವ ಮಕ್ಕಳ ಹೆಸರಿನಲ್ಲಿ ಸದ್ಯ ₹ 1,111 ಠೇವಣಿ ಇರಿಸಿರುವ ಹೊಳಜೋಗಿ, ಅದರ ಜೊತೆಗೆ ದಿನಕ್ಕೆ ₹ 1 ನೀಡುವುದಾಗಿ ಘೋಷಿಸಿದ್ದಾರೆ.
  • ‘ಮಕ್ಕಳ ಹೆಸರಿನಲ್ಲಿ ಪೋಷಕರು ಈಗಾಗಲೇ ಬ್ಯಾಂಕ್ ಖಾತೆ ತೆರೆದಿದ್ದಾರೆ. ಅದೇ ಖಾತೆಗೆ ದಿನದ ಲೆಕ್ಕದಲ್ಲಿ ಪ್ರತಿ ತಿಂಗಳೂ ಹಣ ಜಮೆ ಮಾಡುತ್ತೇನೆ. ಮಕ್ಕಳು ಸರ್ಕಾರಿ ಶಾಲೆಗೆ ಬರಲಿ ಎಂಬ ಕಾರಣಕ್ಕೆ ಈ ಕ್ರಮವಹಿಸಿದ್ದೇನೆ. ಜೊತೆಗೆ, ಹಣ ಉಳಿತಾಯದ ಬಗ್ಗೆಯೂ ಮಕ್ಕಳಲ್ಲಿ ಜಾಗೃತಿ ಮೂಡುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.
  • ಪಶ್ಚಿಮ ಏಷ್ಯಾ ದೇಶಗಳಿಂದ ಕಚ್ಚಾ ತೈಲ ಖರೀದಿ?

ಸಂದರ್ಭ: ರಷ್ಯಾದ ತೈಲ ಕಂಪನಿಗಳ ಮೇಲಿನ ನಿರ್ಬಂಧ: ಬೇರೆಡೆ ಖರೀದಿಗೆ ಮುಂದಾದ ಭಾರತದ ಕಂಪನಿಗಳು ರಷ್ಯಾದಿಂದ ತೈಲ ಖರೀದಿಗೆ ಸಂಬಂಧಿಸಿದಂತೆ ಅಮೆರಿಕ ಮತ್ತು ಇತರೆ ಪಾಶ್ಚಿಮಾತ್ಯ ದೇಶಗಳು ವಿಧಿಸಿರುವ ನಿರ್ಬಂಧಗಳನ್ನು ಪಾಲಿಸಲಾಗುವುದುರಿಲಯನ್ಸ್ ಇಂಡಸ್ಟ್ರೀಸ್ ರಷ್ಯಾದ ಎರಡು ಪ್ರಮುಖ ತೈಲ ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದೆ. ಇದರಿಂದಾಗಿ, ಕಚ್ಚಾ ತೈಲ ಆಮದಿನಲ್ಲಿ ಉಂಟಾಗುವ ಕೊರತೆಯನ್ನು ಸರಿದೂಗಿಸಿ ಕೊಳ್ಳಲು ಭಾರತೀಯ ತೈಲ ಸಂಸ್ಕರಣಾ ಕಂಪನಿಗಳು ಪಶ್ಚಿಮ ಏಷ್ಯಾ, ಲ್ಯಾಟಿನ್ ಅಮೆರಿಕ ಮತ್ತು ಅಮೆರಿಕದಿಂದ ಕಚ್ಚಾ ತೈಲ ಖರೀದಿಯನ್ನು ಹೆಚ್ಚಿಸುವ ಸಾಧ್ಯತೆಯಿದೆ.

  • ಕಚ್ಚಾ ತೈಲ ಉತ್ಪನ್ನ ಮಾಡುವ  ರಷ್ಯಾದ ಅತಿದೊಡ್ಡ ಕಂಪನಿಗಳಾದರೊಸ್ನೆಫ್ಟ್‌’ ಮತ್ತುಲುಕಾಯಿಲ್‌’ ಮೇಲೆ ಅಕ್ಟೋಬರ್ 22ರಂದು ಅಮೆರಿಕ ನಿರ್ಬಂಧ ವಿಧಿಸಿದೆ. ಆ ಮೂಲಕ, ಈ ಕಂಪನಿಗಳು ಮತ್ತು ಅವುಗಳ ಅಂಗ ಸಂಸ್ಥೆಗಳೊಂದಿಗೆ ಅಮೆರಿಕದ ಕಂಪನಿಗಳು ಮತ್ತು ವ್ಯಕ್ತಿಗಳು ವಹಿವಾಟು ನಡೆಸುವುದನ್ನು ನಿಷೇಧಿಸಲಾಗಿದೆ. ಅಲ್ಲದೆ, ಅವುಗಳಿಂದ ಅಮೆರಿಕದ್ದಲ್ಲದ ಕಂಪನಿಗಳು ತೈಲ ಖರೀದಿಸಿದರೆ ಅಂತಹ ಸಂಸ್ಥೆಗಳೂ ನಿರ್ಬಂಧದ ಪರಿಣಾಮವನ್ನು ಎದುರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
  • ರಷ್ಯಾದ ಈ ಎರಡೂ ಕಂಪನಿಗಳ ಜತೆಗಿನ ವಹಿವಾಟುಗಳನ್ನು ನವೆಂಬರ್‌ 21ರೊಳಗೆ ಅಂತ್ಯಗೊಳಿಸಬೇಕು ಎಂದು ಅಮೆರಿಕ ಹೇಳಿದೆ.
  • ಪ್ರಸ್ತುತ ಭಾರತವು ರಷ್ಯಾದಿಂದ ನಿತ್ಯ 17 ಲಕ್ಷ ಬ್ಯಾರಲ್ನಷ್ಟು ಕಚ್ಚಾ ತೈಲ ಖರೀದಿಸುತ್ತಿದೆ. ಪೈಕಿರೊಸ್ನೆಫ್ಟ್‌’ ಮತ್ತುಲುಕಾಯಿಲ್‌’ನಿಂದಲೇ 12 ಲಕ್ಷ ಬ್ಯಾರಲ್ ತೈಲವನ್ನು ಖರೀದಿ ಮಾಡುತ್ತಿದೆ. ಖಾಸಗಿ ಕಂಪನಿಗಳಾದ ರಿಲಯನ್ಸ್ ಇಂಡಸ್ಟ್ರೀಸ್ಮತ್ತು ನಯಾರಾ ಎನರ್ಜಿ ಕಂಪನಿಗಳು ತೈಲದಲ್ಲಿ ಹೆಚ್ಚಿನ ಪ್ರಮಾಣವನ್ನು ಖರೀದಿಸುತ್ತಿವೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಕಡಿಮೆ ಪ್ರಮಾಣದಲ್ಲಿ ಖರೀದಿ ಮಾಡುತ್ತಿವೆ
  • ‘ರಷ್ಯಾದಿಂದ ನವೆಂಬರ್‌ 21ರವರೆಗೆ ನಿಗದಿಯಂತೆ ಕಚ್ಚಾ ತೈಲ ಆಮದು ಆಗಲಿದೆ. ಆ ನಂತರ ತೈಲ ಖರೀದಿ ಪ್ರಮಾಣ ಇಳಿಕೆಯಾಗಲಿದೆ. ಅಮೆರಿಕ ವಿಧಿಸಿರುವ ನಿರ್ಬಂಧದ ಪರಿಣಾಮಗಳನ್ನು ತಪ್ಪಿಸಿಕೊಳ್ಳಲು ಭಾರತದ ತೈಲ ಸಂಸ್ಕರಣಾಗಾರಗಳು ಪ್ರಯತ್ನಿಸುತ್ತಿವೆ’  ಎಂದು ಕೆಪ್ಲೆರ್‌ನ ಸಂಶೋಧನಾ  ವಿಶ್ಲೇಷಕ (ಸಂಸ್ಕರಣೆ ಮತ್ತು ಮಾಡೆಲಿಂಗ್)  ಸುಮಿತ್ ರಿಟೋಲಿಯಾ ಹೇಳಿದ್ದಾರೆ.
  • ‘ದಿನಕ್ಕೆ 5 ಲಕ್ಷ ಬ್ಯಾರಲ್‌ನಂತೆ 25 ವರ್ಷ ಕಚ್ಚಾ ತೈಲ ಪೂರೈಕೆ ಮಾಡಲು ರಿಲಯನ್ಸ್‌, ರೊಸ್ನೆಫ್ಟ್‌ ಜೊತೆ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ. ನಯಾರಾ ಎನರ್ಜಿ, ರಷ್ಯಾದ ತೈಲ ಕಂಪನಿಗಳ ಮೇಲೆಯೇ ಸಂಪೂರ್ಣವಾಗಿ ಅವಲಂಬಿತವಾಗಿದೆ. ಅದಕ್ಕಿರುವ ಆಯ್ಕೆ ಕಡಿಮೆ. ಆದರೂ, ಸಂಸ್ಕರಣಾಗಾರರು ಮಧ್ಯವರ್ತಿಗಳ ಮೂಲಕ ಖರೀದಿಯನ್ನು ಮುಂದುವರಿಸಬಹುದು’ ಎಂದು ಅವರು ಹೇಳಿದ್ದಾರೆ.
  • ‍ಕಚ್ಚಾ ತೈಲ ಆಮದಿನಲ್ಲಿ ಉಂಟಾಗುವ ಕೊರತೆಯನ್ನು ಸರಿದೂಗಿಸಿಕೊಳ್ಳಲು ಭಾರತವು ಪಶ್ಚಿಮ ಏಷ್ಯಾ, ಬ್ರೆಜಿಲ್‌, ಲ್ಯಾಟಿನ್ ಅಮೆರಿಕ, ಪಶ್ಚಿಮ ಆಫ್ರಿಕಾ, ಕೆನಡಾ, ಅಮೆರಿಕದಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲ ಖರೀದಿಸುವ ನಿರೀಕ್ಷೆಯಿದೆ‍ಅಮೆರಿಕದ ನಿರ್ಬಂಧಗಳು  ಭಾರತದ ತೈಲ ಖರೀದಿ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದ್ದು, ಭಾರತವು ಬೇರೆ ದೇಶಗಳಿಂದ ತೈಲ ಖರೀದಿಸಿದರೆ ವೆಚ್ಚ ಹೆಚ್ಚಳವಾಗ ಬಹುದು ಎಂದು ಅವರು ವಿವರಿಸಿದ್ದಾರೆ.
  • ಕೇರಳ: ಎಡಪಕ್ಷಗಳಲ್ಲಿ ಆಂತರಿಕ ಸ್ಫೋಟ: ಪಿ.ಎಂ.ಶ್ರೀ ಶಾಲಾ ಯೋಜನೆಗೆ ಸೇರಲು ಕೇರಳ ಸರ್ಕಾರಕೇಂದ್ರ ಸರ್ಕಾರ ಒಪ್ಪಂದ

ಸಂದರ್ಭ: ಕೇಂದ್ರ ಸರ್ಕಾರ ಪ್ರಾಯೋಜಿತಪಿ.ಎಂ.ಶ್ರೀ ಶಾಲಾ ಯೋಜನೆಗೆ ಸೇರ್ಪಡೆಯಾಗಲು ಕೇರಳದ ಶಾಲಾ ಶೈಕ್ಷಣಿಕ ಇಲಾಖೆ ಒಪ್ಪಿಗೆ ಸೂಚಿಸಿರುವುದು ರಾಜ್ಯದ ಎಡಪಕ್ಷಗಳ ನೇತೃತ್ವದ ಸರ್ಕಾರದಲ್ಲಿ ಆಂತರಿಕ ಕಲಹಕ್ಕೆ ಕಾರಣವಾಗಿದೆ. ಎಲ್ಡಿಎಫ್ಒಕ್ಕೂಟದಲ್ಲಿ ಸಿಪಿಐ ಎರಡನೇ ಅತೀ ದೊಡ್ಡ ಮೈತ್ರಿ ಪಕ್ಷವಾಗಿದ್ದು, ಶಿಕ್ಷಣ ಖಾತೆ ಹೊಂದಿರುವ ಸಿಪಿಎಂ ನಿಲುವಿನಿಂದ ಅಸಮಾಧಾನ ಗೊಂಡಿದೆ.

ವಿವಾದ ಏಕೆ?:

  • ‘ಪಿ.ಎಂ.ಶ್ರೀ ಶಾಲಾ ಯೋಜನೆ’ ಮೂಲಕ ರಾಜ್ಯದಲ್ಲಿ ಸಂಘ ಪರಿವಾರದ ಕಾರ್ಯಸೂಚಿಯನ್ನು ಜಾರಿಗೊಳಿಸುವ ಯತ್ನ ನಡೆಯುತ್ತಿದೆ ಎಂದು ಆರೋಪಿಸಿ ಸಿಪಿಐ ಈ ಹಿಂದೆ ಸೇರ್ಪಡೆಯಾಗದಂತೆ ತಡೆ ಹಿಡಿದಿತ್ತು. ಆದರೆ, ಈ ಬಾರಿ ಸಚಿವ ಸಂಪುಟದಲ್ಲಿ ಚರ್ಚೆ ನಡೆಸದೇ, ಕೇಂದ್ರ ಸರ್ಕಾರದ ಯೋಜನೆಗೆ ಸೇರ್ಪಡೆಯಾಗಲು ರಾಜ್ಯ ಸರ್ಕಾರ ಒಪ್ಪಿಗೆ‌ ನೀಡಿದೆ. ಶಿಕ್ಷಣ ಇಲಾಖೆ ಕಾರ್ಯದರ್ಶಿ ಕೆ. ವಾಸುಕಿ ಅವರು ನವದೆಹಲಿಯಲ್ಲಿ ಕೇಂದ್ರ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಭೇಟಿಯಾಗಿ ಒಪ್ಪಂದಕ್ಕೆ ಸಹಿ ಹಾಕಿರುವುದೇ ವಿವಾದ ಸೃಷ್ಟಿಸಿದೆ.
  • ಸಿಪಿಐ ಈ ಹಿಂದೆ ಎರಡು ಸಲ ರಾಜ್ಯ ಸರ್ಕಾರದ ನಿರ್ಧಾರವನ್ನು ತಡೆಹಿಡಿದಿತ್ತು. ಮೈತ್ರಿ ಪಕ್ಷ ಸಿಪಿಐ ಅನ್ನು ಹಿರಿಯ ಪಾಲುದಾರ ಸಿಪಿಎಂ ಪಕ್ಕಕ್ಕೆ ತಳ್ಳುತ್ತಿದೆ ಎಂದು ಆರೋಪಿಸಿತ್ತು. ಇದರಿಂದಾಗಿಯೇ, ಒಪ್ಪಂದಕ್ಕೆ ಸಹಿಹಾಕಲು ಒಂದು ತಿಂಗಳ ಕಾಲ ಹಿಂಜರಿದಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನೇತೃತ್ವದ ಸರ್ಕಾರವು, ಸಿಪಿಐ ಪ್ರಬಲ ವಿರೋಧದ ಹೊರತಾಗಿಯೂ ‘ಪ್ರಧಾನಮಂತ್ರಿ ಸ್ಕೂಲ್ಸ್‌ ಫಾರ್‌ ರೈಸಿಂಗ್‌’ (ಪಿಎಂ–ಶ್ರೀ) ಸಹಿಹಾಕಲು ಒಪ್ಪಿಗೆ ಸೂಚಿಸಿದ್ದರು.
  • ಭಾರತದ ಅಥ್ಲೀಟ್ಗಳಿಗೆ ನಾಲ್ಕು ಪದಕ: ಏಷ್ಯನ್ ಯೂತ್ಗೇಮ್ಸ್‌: ಎಡ್ವಿನಾ, ಏಶಿನ್ಗೆ ಬೆಳ್ಳಿ

ಸಂದರ್ಭ: ಭಾರತದ ಅಥ್ಲೀಟ್ಗಳಾದ  ಎಡ್ವಿನಾ  ಜೇಸನ್ ಮತ್ತು  ಓಶಿನ್ ಅವರು ಏಷ್ಯನ್ ಯೂತ್ಗೇಮ್ಸ್ನಲ್ಲಿ ಕ್ರಮವಾಗಿ ಮಹಿಳೆಯರ 400 ಮೀಟರ್ ಓಟ ಮತ್ತು ಡಿಸ್ಕಸ್ಥ್ರೋ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದರು.

  • ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆ ಗಳಲ್ಲಿ ಭಾರತ  ಎರಡು ಬೆಳ್ಳಿ ಮತ್ತು ಎರಡು ಕಂಚು ಗೆದ್ದಿತು. ಇದರೊಂದಿಗೆ ಪದಕಗಳ ಸಂಖ್ಯೆ 15ಕ್ಕೆ (ಎರಡು ಚಿನ್ನ, ಐದು ಬೆಳ್ಳಿ ಮತ್ತು ಎಂಟು ಕಂಚು) ಏರಿಕೆಯಾಯಿತು. ಪದಕ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನದಲ್ಲಿದೆ.
  • ಎಡ್ವಿನಾ ಅವರು  ಫೈನಲ್‌ನಲ್ಲಿ 55.43 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಯುಎಇಯ ಆಯಿಷಾ ತಾರಿಕ್ (54.26ಸೆ) ಚಿನ್ನ ಗೆದ್ದರೆ, ತೈವಾನ್‌ನ ಚಿಯಾ ಯಿಂಗ್ (56.60ಸೆ) ಕಂಚಿನ ಪದಕ ತಮ್ಮದಾಗಿಸಿಕೊಂಡರು.
  • ಡಿಸ್ಕಸ್ ಥ್ರೋನಲ್ಲಿ ಓಶಿನ್ 43.38 ಮೀಟರ್ ಸಾಧನೆಯೊಂದಿಗೆ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ ತಂದುಕೊಟ್ಟರು. ಚೀನಾದ ಕ್ಸಿನ್ಯಿ ವಾಂಗ್ (55.38 ಮೀ) ಚಿನ್ನ ಗೆದ್ದರು. ತೈವಾನ್‌ನ ಶಿಹ್ ಯುಹ್-ಜೆನ್ (43 ಮೀ) ಕಂಚಿನ ಪದಕಕ್ಕೆ ತೃಪ್ತಿಪಟ್ಟರು.
  • ಪಲಾಶ್‌ ಮಂಡಲ್ ಅವರು ಬಾಲಕರ 5,000 ಮೀ. ನಡಿಗೆ ಸ್ಪರ್ಧೆಯಲ್ಲಿ ಶುಕ್ರವಾರ ಕಂಚಿನ ಪದಕ ಗೆದ್ದುಕೊಂಡರು. ಮಂಡಲ್ ಈ ದೂರವನ್ನು 24ನಿ.48.92 ಸೆ. ಗಳಲ್ಲಿ ಕ್ರಮಿಸಿದರು. ಚೀನಾದ ಹಾವೊಝ್ ಝಾಂಗ್ (21ನಿ.43.82 ಸೆ.) ಚಿನ್ನ ಗೆದ್ದರೆ, ಅದೇ ದೇಶದ ಯುಜೀ ಲು (22ನಿ.28.64 ಸೆ.) ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
  • ಪುರುಷರ ಹೈಜಂಪ್‌ನಲ್ಲಿ ಜುಬಿನ್ ಗೊಹೈನ್ ಭಾರತಕ್ಕೆ ಮತ್ತೊಂದು ಕಂಚಿನ ಪದಕವನ್ನು ತಂದುಕೊಟ್ಟರು. ಅವರು ತಮ್ಮ ಎರಡನೇ ಪ್ರಯತ್ನದಲ್ಲಿ 2.03 ಮೀ ಎತ್ತರ ಜಿಗಿದರು.
  • ಭಾರತದ ಶೌರ್ಯಾ ಅಂಬುರೆ ಅವರು ಮಹಿಳೆಯರ 100 ಮೀಟರ್‌ ಹರ್ಡಲ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದರು. ಅವರು 13.73 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು.
  • ದಕ್ಷಿಣ ಏಷ್ಯಾ ಅಥ್ಲೆಟಿಕ್ಸ್: ಸಮರ್ದೀಪ್ ಕೂಟ ದಾಖಲೆ

ಸಂದರ್ಭ: ಭಾರತದ ಉದಯೋನ್ಮುಖ ಶಾಟ್ಪಟ್ ಸ್ಪರ್ಧಿ ಸಮರ್ದೀಪ್ ಸಿಂಗ್ ಗಿಲ್ ಅವರು ಶುಕ್ರವಾರ ಇಲ್ಲಿ ಆರಂಭವಾದ ದಕ್ಷಿಣ ಏಷ್ಯಾ ಅಥ್ಲೆಟಿಕ್ಸ್ ಫೆಡರೇಷನ್ ಸೀನಿಯರ್ ಚಾಂಪಿಯನ್ಷಿಪ್ನಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು.

  • ಉದ್ಘಾಟನಾ ಸಮಾರಂಭದಲ್ಲಿ ಭಾರತ ತಂಡದ ಧ್ವಜಧಾರಿಯಾಗಿದ್ದ ಗಿಲ್ ಅವರು ಪುರುಷರ ಶಾಟ್‌ಪಟ್‌ ಸ್ಪರ್ಧೆಯಲ್ಲಿ 19.59 ಮೀಟರ್ ಸಾಧನೆ ಮೆರೆದರು. 2008ರ ಆವೃತ್ತಿಯಲ್ಲಿ ಎಸ್. ಕುಮಾರ್ ಸಿಂಗ್ ಸ್ಥಾಪಿಸಿದ (17.71 ಮೀಟರ್) ದಾಖಲೆಯನ್ನು ಮುರಿದರು. ‌ಭಾರತದವರೇ ಆದ ರವಿ ಕುಮಾರ್ (17.95 ಮೀ) ಬೆಳ್ಳಿ ಗೆದ್ದರೆ, ಶ್ರೀಲಂಕಾದ ಮಿಥುನ್ರಾಜ್ ಕಂಚಿನ ಪದಕ ಪಡೆದರು.
  • 5000 ಮೀಟರ್ ಓಟದಲ್ಲಿ ಭಾರತದ ಅಥ್ಲೀಟ್‌ಗಳು ಪಾರಮ್ಯ ಮೆರೆದರು. ಪುರುಷರ ವಿಭಾಗದಲ್ಲಿ ಪ್ರಿನ್ಸ್ ಕುಮಾರ್ 14 ನಿಮಿಷ 22.17 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ಶ್ರೀಲಂಕಾದ ವಕ್ಷನ್ ವಿಕ್ನರಾಜ್ (14:23.21) ಬೆಳ್ಳಿ ಪದಕ ಗೆದ್ದರು. ಮಹಿಳೆಯರ ವಿಭಾಗದಲ್ಲಿ ಸಂಜನಾ ಸಿಂಗ್ ಚಿನ್ನ, ಸೀಮಾ ಬೆಳ್ಳಿ ಪದಕವನ್ನು ಗೆದ್ದರು.
  • ಪುರುಷರ 100 ಮೀಟರ್‌ ಓಟದಲ್ಲಿ ಶ್ರೀಲಂಕಾದ ಯೊಡಸಿಂಘೆ ಚಾಮೊ (10.30ಸೆ) ಚಿನ್ನ ಗೆದ್ದರು‌. ಭಾರತದ ಪ್ರಣವ್ ಗುರವ್ (10.32) ಮತ್ತು ಹರ್ಷ್ ರಾವತ್ (10.42) ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದರು.
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments