Sat. Feb 7th, 2026
  • ಖಾತಾದಲ್ಲಿ ಯುಪಿಒಆರ್ಮಾಹಿತಿ: ಇಂಟಿಗ್ರೇಟೆಡ್ ವ್ಯವಸ್ಥೆ: ಮುನೀಶ್ಮೌದ್ಗಿಲ್

ಸಂದರ್ಭ: ಜಿಬಿಎ ವ್ಯಾಪ್ತಿಯಲ್ಲಿನ ಆಸ್ತಿಗಳ ಖಾತಾದಲ್ಲಿ ನಗರ ಆಸ್ತಿ ಮಾಲೀಕತ್ವದ ದಾಖಲೆಗಳನ್ನು (ಯುಪಿ ಒಆರ್‌) ಅಳವಡಿಸುವಇಂಟಿಗ್ರೇಟೆಡ್ ಖಾತಾ ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ.

  • ನಗರ ಸಮೀಕ್ಷೆಯಲ್ಲಿ ಯುಪಿಒಆರ್‌ ನಲ್ಲಿ ಆಸ್ತಿ ನಕ್ಷೆಗಳು, ಡ್ರೋನ್ ಮೂಲಕ ಪಡೆದುಕೊಂಡ ಓವರ್-ವ್ಯೂ ಚಿತ್ರಗಳನ್ನು ಜಿಬಿಎ ನೀಡುತ್ತಿರುವ ಇ-ಖಾತಾ ವ್ಯವಸ್ಥೆ ಯೊಂದಿಗೆ ಸಂಯೋಜಿಸಲಾಗಿದೆ.
  • ನಗರದಲ್ಲಿ ಸುಮಾರು ಎರಡು ವರ್ಷ ಗಳಿಂದ ಯುಪಿಒಆರ್‌ ಯೋಜನೆಯಡಿ ನಿರ್ವಹಿಸಲಾಗಿರುವ ಕಾರ್ಯವನ್ನು ಇ-ಖಾತಾ ವ್ಯವಸ್ಥೆಗೆ ಸಂಯೋಜಿಸಲು ಕಂದಾಯ ಇಲಾಖೆ ಅಧಿಕಾರಿಗಳು ಮಾಡಿರುವ ಕಾರ್ಯ ಶ್ಲಾಘನೀಯ.
  • ಇ-ಖಾತಾದಲ್ಲಿರುವ ನಿಖರ ಜಿಪಿಎಸ್‌ ಮಾಹಿತಿ, ಯುಪಿಒಆರ್ ನಕ್ಷೆ ಮತ್ತು ಚಿತ್ರಗಳನ್ನು ಜೋಡಿಸುವುದು ಅತ್ಯಂತ ಪ್ರಮುಖವಾಗಿದೆ. ಈಗಾಗಲೇ ಸುಮಾರು ಒಂದು ಲಕ್ಷ ಸಂಯೋಜಿತ ಇ-ಖಾತಾಗಳನ್ನು ನೀಡಲಾಗಿದ್ದು, ಪ್ರತಿದಿನವೂ ಈ ಸಂಖ್ಯೆ ಮತ್ತಷ್ಟು ಹೆಚ್ಚಿಸಲು ಕ್ರಮವಹಿಸಲಾಗುವುದು.
  • ಜಿಬಿಎ ವ್ಯಾಪ್ತಿಯಲ್ಲಿ ಸುಮಾರು 9 ಲಕ್ಷ ಅಂತಿಮ ಇ-ಖಾತಾ ನೀಡಲಾಗಿದ್ದು, ಪ್ರತಿದಿನ ಸರಾಸರಿ 2,500 ಇ-ಖಾತಾಗಳನ್ನು ನೀಡಲಾಗುತ್ತಿದೆ. ಕಾಯುವ ಅವಧಿ ಸರಾಸರಿ ಎರಡು ದಿನ.

ಲಭ್ಯವಿರುವ ಮಾಹಿತಿ

l ಮಾಲೀಕರ ವಿವರ l ಆಸ್ತಿಯ ಎಲ್ಲ ವಿವರ

l ಆಸ್ತಿಯ ಚಿತ್ರ l ಮಾಲೀಕರ ಚಿತ್ರ

l ಆಸ್ತಿಯ ಜಿಪಿಎಸ್‌ ಅಂಕಿಗಳು l ಆಸ್ತಿಯ ಡಿಜಿಟಲ್ ಮ್ಯಾಪ್, ಸ್ಥಳದ ಚಿತ್ರ

l ಆಸ್ತಿಯ ತೆರಿಗೆ, ಬಳಕೆ ವಿವರ l ಬೆಸ್ಕಾಂ ಮೀಟರ್ ಸಂಖ್ಯೆ

l ಆಸ್ತಿ ಮಾಲೀಕತ್ವ ಪಡೆದಿರುವ ದಾಖಲೆ ಸಂಖ್ಯೆ

  • ವನ್ಯಜೀವಿ ಮಾನವ ಸಂಘರ್ಷ ತಡೆಗೆ ಕಮಾಂಡ್ ಸೆಂಟರ್ ಆರಂಭ

ಸಂದರ್ಭ: ಸಿಬ್ಬಂದಿ ಕಾಡಿನಲ್ಲಿ ಎಷ್ಟು ಹೊತ್ತು ಗಸ್ತು ತಿರುಗುತ್ತಾರೆ ಎಂದು ಗಮನಿಸಲು ಗಸ್ತು ತಂತ್ರಾಂಶ ರೂಪಿಸಿದ್ದು, ಎಂ.ಸ್ಟ್ರೈಪ್ ಜೊತೆಗೆ ಜಾರಿಗೆ ಸೂಚಿಸಲಾಗಿದೆ.

  • ‘ಮಾನವ ಹಾಗೂ ವನ್ಯಜೀವಿ ಸಂಘರ್ಷ ತಡೆಯಲು ನಾಗರಹೊಳೆ, ಮಲೆಮಹದೇಶ್ವರ ಬೆಟ್ಟ, ಕಾಳಿ, ಮಡಿಕೇರಿ ವನ್ಯಧಾಮಗಳಲ್ಲಿ ಕಮಾಂಡ್ ಕೇಂದ್ರ ತೆರೆಯಲಾಗಿದೆ’.‘ಅರಣ್ಯದೊಳಗೆ ಗಸ್ತು ಹೆಚ್ಚಿಸಲು ಇದು ಸಹಕಾರಿ.
  • ಚಿಕ್ಕಮಗಳೂರು, ಬನ್ನೇರು ಘಟ್ಟ ರಾಷ್ಟ್ರೀಯ ಉದ್ಯಾನ, ಮೈಸೂರು ವಿಭಾಗ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶ, ಹಾಸನ ವಲಯದಲ್ಲೂ ಸೆಂಟರ್ ತೆರೆಯಲಾಗುವುದು.
  • ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಕೇಂದ್ರವನ್ನು ಅಧಿವೇಶನದ ನಂತರ ಉದ್ಘಾಟಿಸಲಾಗುವುದು.
  • ‘ಈ ಕೇಂದ್ರದಲ್ಲಿ ಕೃತಕ ಬುದ್ಧಿಮತ್ತೆ ಕ್ಯಾಮೆರಾ, ಥರ್ಮಲ್ ಡ್ರೋನ್ ಕ್ಯಾಮೆರಾ, ಆಧುನಿಕ ತಂತ್ರಜ್ಞಾನ ಆಧಾರಿತ ಪರಿಕರಗಳು ಇರಲಿದ್ದು, ವನ್ಯಜೀವಿಗಳ ಚಲನವಲನದ ಬಗ್ಗೆ ನಿಗಾ ಇರಿಸಲಾಗುವುದು.
  • ಯಾವ ಗ್ರಾಮಗಳ ವನ್ಯಜೀವಿ ಬಳಿ ಬಂದಿವೆ ಎಂಬ ಅರಿತು ಕ್ರಮ ವಹಿಸಿ ಜೀವಹಾನಿ ತಡೆಯಬಹುದು.
  • ರಾಜ ಭವನಅಲ್ಲಲೋಕ ಭವನ

ಸಂದರ್ಭ: ಕೇಂದ್ರ ಗೃಹ ಸಚಿವಾಲಯದ ತೀರ್ಮಾನದಂತೆ ದೇಶದಾದ್ಯಂತ ಇರುವರಾಜ ಭವನಗಳ ಹೆಸರನ್ನುಲೋಕ ಭವನಎಂದು ಮರುನಾಮಕರಣ ಮಾಡಲಾಗಿದ್ದು, ‘ರಾಜ ಭವನ, ಕರ್ನಾಟಕಎನ್ನುವುದನ್ನುಲೋಕ ಭವನ, ಕರ್ನಾಟಕಎಂದು ಹೆಸರಿಸಲಾಗಿದೆ.

  • ಈ ಬಗ್ಗೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಪತ್ರ ಬರೆದಿರುವ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ, ‘ಹೆಸರು ಬದಲಾವಣೆಗೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ಅನುಮೋದನೆ ನೀಡಿದ್ದಾರೆ. ಈ ಆದೇಶವು ತಕ್ಷಣದಿಂದ ಜಾರಿಗೆ ಬರಲಿದೆ.
  • ‘ಮುಂದಿನ ದಿನಗಳಲ್ಲಿ ಸರ್ಕಾರದ ಎಲ್ಲ ಇಲಾಖೆಗಳು, ಸರ್ಕಾರಿ ಆದೇಶಗಳು, ಅಧಿಕೃತ ಪತ್ರ ವ್ಯವಹಾರಗಳು, ವೆಬ್‌ಸೈಟ್‌ ಹಾಗೂ ಫಲಕಗಳಲ್ಲಿ ‘ರಾಜ ಭವನ ಕರ್ನಾಟಕ’ ಬದಲು ‘ಲೋಕ ಭವನ ಕರ್ನಾಟಕ’ ಎಂದು ಬಳಸಬೇಕು.

ಬಡತನದ ಸುಳಿಯಲ್ಲಿ ಭಾರತದ ಮಕ್ಕಳು

  • ಕರ್ನಾಟಕದ ಸಹಕಾರ ಸಂಘಗಳ ಅಭಿವೃದ್ಧಿಗೆ ₹4,164 ಕೋಟಿ

ಸಂದರ್ಭ: ಕರ್ನಾಟಕದಲ್ಲಿನ ಸಹಕಾರ ಸಂಘಗಳ ಅಭಿವೃದ್ಧಿಗೆ ₹4,164 ಕೋಟಿ ನೀಡಲಾಗಿದೆ ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ರಾಜ್ಯಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

  • ನವೆಂಬರ್‌ 25ರವರೆಗೆ ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮವು (ಎನ್‌ಸಿಡಿಸಿ) ದೇಶದಲ್ಲಿನ ಸಹಕಾರ ಸಂಸ್ಥೆಗಳ ಅಭಿವೃದ್ಧಿಗೆ ₹4.67 ಲಕ್ಷ ಕೋಟಿ ಮಂಜೂರು ಮಾಡಿದೆ. ಈ ಪೈಕಿ ಕರ್ನಾಟಕದಲ್ಲಿನ ಸಹಕಾರ ಸಂಘಗಳ ಅಭಿವೃದ್ಧಿಗೆ ₹4,164 ಕೋಟಿ ನೀಡಲಾಗಿದೆ ಎಂದು ಬುಧವಾರ ತಿಳಿಸಿದ್ದಾರೆ.
  • ರಾಷ್ಟ್ರೀಯ ಸಹಕಾರ ದತ್ತಾಂಶದ ಪ್ರಕಾರ, ಕರ್ನಾಟಕದಲ್ಲಿ 46,798 ಸಹಕಾರ ಸಂಘಗಳು ಇದ್ದು, ಅವು ಒಟ್ಟು 2.38 ಕೋಟಿ ಸದಸ್ಯರನ್ನು ಹೊಂದಿವೆ.
  • 2021ರಲ್ಲಿ ಕೇಂದ್ರ ಸಹಕಾರ ಸಚಿವಾಲಯ ಆರಂಭವಾಯಿತು. ಅಂದಿನಿಂದ ‘ಸಹಕಾರದಿಂದ ಸಮೃದ್ಧಿ’ ಗುರಿ ಸಾಧಿಸಲು ಮತ್ತು ಕರ್ನಾಟಕ ಸೇರಿದಂತೆ ದೇಶದ ಎಲ್ಲೆಡೆ ಹೈನುಗಾರಿಕೆ, ಸಕ್ಕರೆ ಮತ್ತು ಕೃಷಿ ಸಹಕಾರ ಸಂಘಗಳ ಬಲವರ್ಧನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
  • ಪಾನ್ ಮಸಾಲಾ ಮೇಲೆ ಬೆಲೆ ನಮೂದು ಕಡ್ಡಾಯ

ಸಂದರ್ಭ: ಪಾನ್ಮಸಾಲಾ ಪೊಟ್ಟಣಗಳ ಮೇಲೆ ಚಿಲ್ಲರೆ ಮಾರಾಟ ದರವನ್ನು (ಆರ್ಎಸ್ಪಿ) ನಮೂದು ಮಾಡುವುದು ಕಡ್ಡಾಯ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ಹೇಳಿದೆ.

  • ಪೊಟ್ಟಣಗಳ ಗಾತ್ರ ಯಾವುದೇ ಇರಲಿ, ಅದರಲ್ಲಿ ಇರುವ ಉತ್ಪನ್ನದ ತೂಕ ಎಷ್ಟೇ ಇರಲಿ, ಆರ್‌ಎಸ್‌ಪಿ ಹಾಗೂ ‘ಕಾನೂನು ಮಾಪನಶಾಸ್ತ್ರ (ಪೊಟ್ಟಣದಲ್ಲಿನ ಸರಕುಗಳು) ನಿಯಮ–2011’ರ ಅಡಿಯಲ್ಲಿ ಹೇಳಿರುವ ಸಂಗತಿಗಳನ್ನು ನಮೂದು ಮಾಡುವುದು ಕಡ್ಡಾಯ ಎಂದು ಇಲಾಖೆಯು ಸ್ಪಷ್ಟಪಡಿಸಿದೆ.
  • ಈ ಆದೇಶ ಫೆಬ್ರುವರಿ 1ರಿಂದ ಅನ್ವಯ ವಾಗಲಿದೆ. 10 ಗ್ರಾಂ ಹಾಗೂ ಅದ ಕ್ಕಿಂತ ಕಡಿಮೆ ತೂಕದ ಪೊಟ್ಟಣ ಗಳಲ್ಲಿ ಕೆಲವು ವಿವರಗಳನ್ನು ನೀಡುವ ಅಗತ್ಯ ಇಲ್ಲ ಎಂದು ಈ ಹಿಂದೆ ವಿನಾಯಿತಿ ನೀಡಲಾಗಿತ್ತು. ಆದರೆ ಈಗಿನ ಆದೇ ಶವು ವಿನಾಯಿತಿಗಳನ್ನು ಇಲ್ಲವಾಗಿಸಲಿದೆ.
  • ತಂಬಾಕು ಉತ್ಪನ್ನಗಳ ಮೇಲೆ ಅಬಕಾರಿ ಸುಂಕ ಮಸೂದೆಗೆ ಅನುಮೋದನೆ

ಸಂದರ್ಭ: ತಂಬಾಕು ಮತ್ತು ಅದಕ್ಕೆ ಸಂಬಂಧಿಸಿದ ಉತ್ಪನ್ನಗಳ ಮೇಲೆ ಹೆಚ್ಚಿನ ಅಬಕಾರಿ ಸುಂಕ ವಿಧಿಸುವ ಮಸೂದೆಯನ್ನು ಲೋಕಸಭೆ ಅಂಗೀಕರಿಸಿದೆ.

  • ಕೇಂದ್ರ ಅಬಕಾರಿ (ತಿದ್ದುಪಡಿ) ಮಸೂದೆ– 2025 ಅನ್ನು ಲೋಕಸಭೆಯಲ್ಲಿ ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.
  • ಪ್ರಸ್ತುತ ಜಾರಿಯಲ್ಲಿರುವ ತೆರಿಗೆ ಪರಿಹಾರದ ಸ್ವರೂಪವು 2026ರ ಮಾರ್ಚ್‌ ವೇಳೆಗೆ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಈ ಮಸೂದೆ ಜಾರಿಗೆ ಬಂದ ನಂತರ ಸಿಗರೇಟ್‌, ಜಗಿಯುವ ತಂಬಾಕು, ಸಿಗಾರ್‌, ಹುಕ್ಕಾ, ಜರ್ದಾ ಮತ್ತು ಪರಿಮಳಯುಕ್ತ ತಂಬಾಕಿನಂತಹ ಎಲ್ಲ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಗರಿಷ್ಠ ಮಟ್ಟದಲ್ಲೇ ಮುಂದುವರಿಸಲು ಅವಕಾಶ ಸಿಗುತ್ತದೆ.
  • ಪ್ರಸ್ತುತ, ತಂಬಾಕು ಮತ್ತು ಸಂಬಂಧಿತ ಉತ್ಪನ್ನಗಳ ಮೇಲೆ ಶೇ 28ರಷ್ಟು ಜಿಎಸ್‌ಟಿ ಜೊತೆಗೆ ವಿವಿಧ ತೆರಿಗೆ ವಿಧಿಸಲಾಗುತ್ತಿದೆ.
  • ಈ ಮಸೂದೆಯು, ತಯಾರಿಸದ ತಂಬಾಕಿನ ಮೇಲೆ ಶೇ 60–70ರಷ್ಟು ಅಬಕಾರಿ ಸುಂಕ ವಿಧಿಸಲು ಪ್ರಸ್ತಾಪಿಸುತ್ತದೆ. ಸಿಗಾರ್‌ ಮತ್ತು ಚುಟ್ಟ ಮೇಲಿನ ಅಬಕಾರಿ ಸುಂಕವು ಶೇ 25ರಷ್ಟು ಅಥವಾ ಒಂದು ಸಾವಿರ ಸಿಗಾರ್‌ ಮೇಲೆ ₹5 ಸಾವಿರ ಯಾವುದು ಹೆಚ್ಚೋ ಅದನ್ನು ಪ್ರಸ್ತಾಪಿಸಲಾಗಿದೆ.
  • ಉದ್ದವಿರುವ ಹಾಗೂ ಫಿಲ್ಟರ್‌ ಆಧರಿಸಿ ಒಂದು ಸಾವಿರ ಸಿಗರೇಟ್‌ ಮೇಲೆ ₹2,700ರಿಂದ ₹11 ಸಾವಿರವರೆಗೆ ತೆರಿಗೆ ವಿಧಿಸಲು ಪ್ರಸ್ತಾಪಿಸಲಾಗಿದೆ. ಆದರೆ, ಜಗಿಯುವ ತಂಬಾಕಿಗೆ ಪ್ರತಿ ಕೆ.ಜಿಗೆ ₹100ವರೆಗೆ ತೆರಿಗೆ ವಿಧಿಸಲಾಗುತ್ತದೆ.
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments