Sat. Feb 7th, 2026
  • ಹಸಿರು ಪಟಾಕಿ ಬಳಕೆಗೆಸುಪ್ರೀಂಅನುಮತಿ

ಸಂದರ್ಭ: ದೀಪಾವಳಿ ಹಬ್ಬದ ಆಚರಣೆಗಾಗಿ ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶಗಳಲ್ಲಿ (ಎನ್ಆರ್ಸಿ) ಹಸಿರು ಪಟಾಕಿಯ ತಯಾರಿಕೆ, ಮಾರಾಟ ಮತ್ತು ಬಳಕೆಗೆ ಸುಪ್ರೀಂ ಕೋರ್ಟ್ಬುಧವಾರ ಅನುಮತಿ ನೀಡಿದೆ. ಆದರೆ, ಇದಕ್ಕೆ ಹಲವು ಷರತ್ತುಗಳನ್ನೂ ವಿಧಿಸಿದೆ.

  • ಹಸಿರು ಪಟಾಕಿ ಬಳಕೆಗೆ ಅನುಮತಿ ನೀಡುವಂತೆ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರ ನ್ಯಾಯಾಲಯಕ್ಕೆ ಮನವಿ ಮಾಡಿದ್ದವು. ಈ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್‌. ಗವಾಯಿ ಮತ್ತು ಕೆ. ವಿನೋದ್‌ ಚಂದ್ರನ್‌ ಅವರ ಪೀಠವು ನಡೆಸಿತ್ತು. ಅ.10ರಂದು ಅಂತಿಮ ವಾದ–ಪ್ರತಿವಾದ ನಡೆದು, ನ್ಯಾಯಾಲಯವು ತನ್ನ ಆದೇಶವನ್ನು ಕಾಯ್ದಿರಿಸಿತ್ತು.
  • lಮಾರಾಟದ ಸ್ಥಳಗಳಲ್ಲಿ ಪೊಲೀಸರ ತಂಡವು ಗಸ್ತು ತಿರುಗುತ್ತಲೇ ಇರಬೇಕು. ಈ ತಂಡದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳೂ ಇರಬೇಕು. ಕ್ಯೂಆರ್‌ ಕೋಡ್‌ ಇರುವ ಹಸಿರು ಪಟಾಕಿಗಳು ಮಾತ್ರವೇ ಮಾರಾಟವಾಗುತ್ತಿವೆಯೇ ಎಂಬುದನ್ನು ಇವರು ಪರಿಶೀಲಿಸುತ್ತಲೇ ಇರಬೇಕು
  • lನೋಂದಾಯಿಸಿಕೊಳ್ಳದ ತಯಾರಿಕಾ ಕಂಪನಿಗಳ ಮತ್ತು ಪರವಾನಗಿ ಇಲ್ಲದ ಮಾರಾಟಗಾರರ ಹಸಿರು ಪಟಾಕಿಗಳು ಜನರ ಕೈ ಸೇರದಂತೆ ಗಸ್ತು ತಂಡವು ನೋಡಿಕೊಳ್ಳಬೇಕು. ಇಂಥ ಪಟಾಕಿಗಳು ಕಂಡುಬಂದರೆ, ತಕ್ಷಣವೇ ವಶಕ್ಕೆ ಪಡೆಯಬೇಕು
  • lನಿಯಮ ಉಲ್ಲಂಘಿಸುವ ತಯಾರಿಕಾ ಕಂಪನಿಗಳಿಗೆ ನೋಟಿಸ್‌ ನೀಡಿ ಅವರ ಪರವಾನಗಿಯನ್ನು ರದ್ದು ಮಾಡಲಾಗುವುದು
  • ಭಾರತ ವಿರುದ್ಧ ಚೀನಾ ದೂರು

ಸಂದರ್ಭ:ವಿದ್ಯುತ್ಚಾಲಿತ ವಾಹನಗಳಿಗೆ ಹಾಗೂ ಬ್ಯಾಟರಿಗಳಿಗೆ ಭಾರತವು ಸಬ್ಸಿಡಿ ನೀಡುತ್ತಿರುವ ವಿಚಾರವಾಗಿ ಚೀನಾ ದೇಶವು ವಿಶ್ವ ವ್ಯಾಪಾರ ಸಂಘಟನೆಗೆ (ಡಬ್ಲ್ಯುಟಿಒ) ದೂರು ಸಲ್ಲಿಸಿದೆ.

  • ಭಾರತದ ಹಲವು ಕ್ರಮಗಳು ಡಬ್ಲ್ಯುಟಿಒ ರೂಪಿಸಿರುವ ವಿವಿಧ ನಿಯಮಗಳ ಉಲ್ಲಂಘನೆಯಂತೆ ಇವೆ ಎಂದು ಚೀನಾ ದೂರಿದೆ. ಭಾರತದ ಕ್ರಮಗಳು ಭಾರತದ ಉದ್ಯಮಗಳಿಗೆ ಹೆಚ್ಚು ಅನುಕೂಲಕರ ಆಗುವಂತೆ ಇವೆ, ಚೀನಾದ ನ್ಯಾಯಸಮ್ಮತವಾದ ಹಿತಾಸಕ್ತಿಗಳಿಗೆ ಅವು ಅನುಕೂಲಕರವಾಗಿ ಇಲ್ಲ ಎಂದು ಚೀನಾದ ವಾಣಿಜ್ಯ ಸಚಿವಾಲಯ ಆರೋಪಿಸಿದೆ.
  • ತಾನು ತಯಾರಿಸುವ ಇ.ವಿ.ಗಳನ್ನು ಭಾರತಕ್ಕೆ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲು ಚೀನಾ ಬಯಸಿದ್ದು, ಈ ಸಂದರ್ಭದಲ್ಲಿ ಅದು ಈ ದೂರು ಸಲ್ಲಿಸಿದೆ. ಅಲ್ಲದೆ, ದ್ವಿಪಕ್ಷೀಯ ಸಂಬಂಧವನ್ನು ಸಹಜಗೊಳಿಸಲು ಎರಡೂ ದೇಶಗಳು ಮುಂದಡಿ ಇರಿಸಿದ ನಂತರದಲ್ಲಿ ಚೀನಾ ಈ ರೀತಿಯ ಕ್ರಮಕ್ಕೆ ಮುಂದಾಗಿದೆ.
  • ಚೀನಾದ ಇ.ವಿ. ತಯಾರಿಕಾ ಕಂಪನಿಗಳು ಭಾರತದ ಮಾರುಕಟ್ಟೆಯನ್ನು ಬಹಳ ಪ್ರಮುಖ ಎಂದು ಪರಿಗಣಿಸಿವೆ. ಈಚೆಗಿನ ಕೆಲವು ವರದಿಗಳ ಪ್ರಕಾರ ಚೀನಾದಲ್ಲಿ ಇ.ವಿ. ತಯಾರಿಕೆಯು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ, ಅಲ್ಲಿನ ಮಾರುಕಟ್ಟೆಯಲ್ಲಿ ಅವುಗಳ ಮಾರಾಟ ಕಡಿಮೆ ಆಗಿದೆ. ಅಲ್ಲಿನ ಇ.ವಿ ಕಂಪನಿಗಳ ಲಾಭವೂ ಕಡಿಮೆ ಆಗಿದೆ. ಹೀಗಾಗಿ ಅವು ಏಷ್ಯಾ ಮತ್ತು ಐರೋಪ್ಯ ಒಕ್ಕೂಟದ ಮಾರುಕಟ್ಟೆ ಮೇಲೆ ಕಣ್ಣಿಟ್ಟಿವೆ.
  • ಚೀನಾ ಸಲ್ಲಿಸಿರುವ ದೂರಿನ ವಿವರಗಳನ್ನು ಪರಿಶೀಲಿಸಲಾಗುತ್ತದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಅವರು ಹೇಳಿದ್ದಾರೆ.
  • ಟರ್ಕಿ, ಕೆನಡಾ ಮತ್ತು ಐರೋಪ್ಯ ಒಕ್ಕೂಟದ ವಿರುದ್ಧವೂ ಚೀನಾ ಇದೇ ಬಗೆಯ ದೂರು ಸಲ್ಲಿಸಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ‘ಅವರು ಭಾರತದ ಜೊತೆ ಸಮಾಲೋಚನೆ ನಡೆಸಲು ಬಯಸಿದ್ದಾರೆ’ ಎಂದು ಅಧಿಕಾರಿ ತಿಳಿಸಿದ್ದಾರೆ.
  • ಡಬ್ಲ್ಯುಟಿಒ ನಿಯಮಗಳ ಪ್ರಕಾರ ವ್ಯಾಜ್ಯ ಇತ್ಯರ್ಥ ಪ್ರಕ್ರಿಯೆಯಲ್ಲಿ ಮೊದಲ ಹಂತವೆಂದರೆ ಸಮಾಲೋಚನೆ ನಡೆಸುವುದು. ಚೀನಾ ದೇಶವು ಭಾರತದ ಎರಡನೆಯ ಅತಿದೊಡ್ಡ ವಾಣಿಜ್ಯ ಪಾಲುದಾರ.
  • ಚೀನಾದ ಇ.ವಿ. ತಯಾರಕರು ವಿದೇಶಗಳಲ್ಲಿ ತುಸು ಪ್ರತಿರೋಧ ಎದುರಿಸುತ್ತಿದ್ದಾರೆ. ಐರೋಪ್ಯ ಒಕ್ಕೂಟವು ಚೀನಾದ ಇ.ವಿ.ಗಳ ಮಾರಾಟಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಅವುಗಳಿಗೆ ಶೇಕಡ 27ರಷ್ಟು ತೆರಿಗೆ ವಿಧಿಸಿದೆ.
  • ಭಾರತದಲ್ಲಿ ಕೇಂದ್ರ ಸರ್ಕಾರವು ಇ.ವಿ. ನೀತಿ ಹಾಗೂ ಉತ್ಪಾದನೆ ಆಧಾರಿತ ಉತ್ತೇಜನ ಯೋಜನೆ ಮೂಲಕ ದೇಶದಲ್ಲಿ ಇ.ವಿ. ತಯಾರಿಕೆಯನ್ನು ಹೆಚ್ಚಿಸಲು ಮುಂದಾಗಿದೆ.
  • ವ್ಯಾಪಾರ ಕೊರತೆ ಅಂತರ 13 ತಿಂಗಳ ಗರಿಷ್ಠ

ಸಂದರ್ಭ: ಸೆಪ್ಟೆಂಬರ್ತಿಂಗಳಲ್ಲಿ ಭಾರತದಿಂದ ಆಗಿರುವ ರಫ್ತು ಶೇಕಡ 6.74ರಷ್ಟು ಹೆಚ್ಚಳ ಕಂಡು, 36.38 ಬಿಲಿಯನ್ಡಾಲರ್ಗೆ (₹3.20 ಲಕ್ಷ ಕೋಟಿ) ತಲುಪಿದೆ. ಆಮದು ಪ್ರಮಾಣವು ಶೇ 16.6ರಷ್ಟು ಹೆಚ್ಚಳ ಕಂಡಿದ್ದು, ವ್ಯಾಪಾರ ಕೊರತೆ ಅಂತರವು 31.15 ಬಿಲಿಯನ್ಡಾಲರ್ಗೆ (₹2.74 ಲಕ್ಷ ಕೋಟಿ) ತಲುಪಿದೆ.

  • ಈ ವ್ಯಾಪಾರ ಕೊರತೆಯು ಒಂದು ವರ್ಷಕ್ಕೂ ಹೆಚ್ಚಿನ ಅವಧಿಯಲ್ಲಿ ಅತಿಹೆಚ್ಚಿನದ್ದಾಗಿದೆ. ಚಿನ್ನ, ರಸಗೊಬ್ಬರ ಮತ್ತು ಬೆಳ್ಳಿಯ ಆಮದು ಹೆಚ್ಚಾದ ಕಾರಣದಿಂದಾಗಿ ಸೆಪ್ಟೆಂಬರ್‌ನಲ್ಲಿ ಆಮದು ಮೊತ್ತವು 68.53 ಬಿಲಿಯನ್ ಡಾಲರ್‌ಗೆ (₹6.03 ಲಕ್ಷ ಕೋಟಿ) ಏರಿಕೆ ಆಗಿದೆ.
  • ಏಪ್ರಿಲ್‌–ಸೆಪ್ಟೆಂಬರ್‌ ಅವಧಿಯಲ್ಲಿ ರಫ್ತು ಪ್ರಮಾಣವು ಶೇ 3.02ರಷ್ಟು ಹೆಚ್ಚಳ ಆಗಿದೆ. ಆಮದು ಪ್ರಮಾಣವು ಇದೇ ಅವಧಿಯಲ್ಲಿ ಶೇ 4.53ರಷ್ಟು ಜಾಸ್ತಿ ಆಗಿದೆ.
  • ಜಾಗತಿಕ ಮಟ್ಟದಲ್ಲಿ ಅರ್ಥ ವ್ಯವಸ್ಥೆಯಲ್ಲಿ ಅಸ್ಥಿರತೆ ಇದ್ದರೂ ಭಾರತದ ಸರಕು ಮತ್ತು ಸೇವೆಗಳ ರಫ್ತು ಚೆನ್ನಾಗಿ ಆಗುತ್ತಿದೆ ಎಂದು ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ತಿಳಿಸಿದ್ದಾರೆ.
  • ದೇಶದ ಉದ್ಯಮ ವಲಯವು ತನ್ನ ವಾಣಿಜ್ಯ ಸಂಬಂಧವನ್ನು ಕಾಪಾಡಿಕೊಂಡಿದೆ, ಪೂರೈಕೆ ವ್ಯವಸ್ಥೆಯನ್ನು ಕೂಡ ಅದು ರಕ್ಷಿಸಿಕೊಂಡಿದೆ. ಹೀಗಾಗಿ ರಫ್ತು ಹೆಚ್ಚಳ ಆಗಿದೆ ಎಂದು ಅಗರ್ವಾಲ್ ಅವರು ‍ಪ್ರಶ್ನೆಯೊಂದಕ್ಕೆ ಉತ್ತರವಾಗಿ ತಿಳಿಸಿದ್ದಾರೆ.
  • ಭಾರತದಿಂದ ಅಮೆರಿಕಕ್ಕೆ ಆಗುವ ರಫ್ತಿನಲ್ಲಿ ಶೇ 45ರಷ್ಟು ಪಾಲು ಈಗಲೂ ಶೇ 50 ಪ್ರಮಾಣದ ಸುಂಕದ ವ್ಯಾಪ್ತಿಯಿಂದ ಹೊರಗಿದೆ ಎಂದಿದ್ದಾರೆ.
  • ಚಾರ್ಲಿ ಕಿರ್ಕ್ಗೆ ಅಮೆರಿಕ ಅತ್ಯುನ್ನತ ನಾಗರಿಕ ಪುರಸ್ಕಾರ 

ಸಂದರ್ಭ: ಅಮೆರಿಕದ ಪ್ರಮುಖ ಬಲಪಂಥೀಯ ಕಾರ್ಯಕರ್ತ ಚಾರ್ಲಿ ಕಿರ್ಕ್ಅವರಿಗೆ ಮರಣೋತ್ತರವಾಗಿ ಅಮೆರಿಕದ ಅತ್ಯುನ್ನತ ನಾಗರಿಕ ಪುರಸ್ಕಾರಪ್ರೆಸಿಡೆನ್ಷಿಯಲ್ಮೆಡಲ್ಆಫ್ಫ್ರೀಡಂ ಅನ್ನು ಅಧ್ಯಕ್ಷ ಡೊನಾಲ್ಡ್ಟ್ರಂಪ್ಪ್ರಕಟಿಸಿದ್ದಾರೆ.

  • ಚಾರ್ಲಿ ಕಿರ್ಕ್‌ ಅವರ 32ನೇ ಜನ್ಮದಿನದ ಸಂದರ್ಭದಲ್ಲೇ ಈ ಪ್ರಶಸ್ತಿ ಘೋಷಣೆಯಾಗಿದೆ.
  • ಅಮೆರಿಕದ ಒರೆಮ್‌ ನಗರದ ಉತಾಹ್‌ ವ್ಯಾಲಿ ವಿಶ್ವವಿದ್ಯಾಲಯದ ಆವರಣದಲ್ಲಿ ಸೆ.10ರಂದು ನಡೆದ ‘ದಿ ಅಮೆರಿಕನ್ ಕಮ್‌ಬ್ಯಾಕ್ ಟೂರ್‌’ ಕಾರ್ಯಕ್ರಮದ ಸಂದರ್ಭದಲ್ಲಿ ಕಿರ್ಕ್‌ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
  • ‘ಮುಂದಿನ ತಲೆಮಾರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಪ್ರತಿಮ ಯೋಧನನ್ನು ನಾವು ಸದಾ ಸ್ಮರಿಸುತ್ತೇವೆ’ ಎಂದು ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.
  • ಅಮೆರಿಕ ಡಾಲರ್ಮೇಲೆಬ್ರಿಕ್ಸ್ದಾಳಿ

ಸಂದರ್ಭ: ಬ್ರಿಕ್ಸ್ ರಾಷ್ಟ್ರಗಳು ಡಾಲರ್ಮೇಲೆ ದಾಳಿ ಮಾಡುತ್ತಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ಟ್ರಂಪ್ ಅವರು ಆರೋಪಿಸಿದ್ದಾರೆ.

  • ಅಮೆರಿಕ ನೀತಿಗಳ ವಿರುದ್ಧವಾಗಿರುವ ‘ಬ್ರಿಕ್ಸ್‌’ ರಾಷ್ಟ್ರಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
  • ಅರ್ಜೆಂಟೀನಾ ಅಧ್ಯಕ್ಷ ಜಾವಿಯರ್‌ ಮಿಲೈ ಅವರ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಟ್ರಂಪ್, ‘ನಾನು ಡಾಲರ್ ಜೊತೆಗೆ ನಿಲ್ಲುತ್ತೇನೆ. ಡಾಲರ್‌ನಲ್ಲಿ ವಹಿವಾಟು ನಡೆಸಲು ಬಯಸುವವರಿಗೆ ಹಲವು ಉಪಯೋಗವಾಗಲಿದೆ. ಇತರರಿಗೆ ಆ ಅವಕಾಶ ಸಿಗಲ್ಲ’ ಎಂದು ಹೇಳಿದರು.
  • ‘ಬ್ರಿಕ್ಸ್‌ನ ಭಾಗವಾಗಲು ಬಯಸುವವ‌ವರ ಬಗ್ಗೆ ಆಕ್ಷೇಪವಿಲ್ಲ. ಆದರೆ ಅವರಿಗೆ ನಾವು ಸುಂಕವನ್ನು ವಿಧಿಸುವುದಾಗಿ ಹೇಳಿದ್ದೆ. ಎಲ್ಲರೂ ಬ್ರಿಕ್ಸ್‌ನಿಂದ ಹೊರಬಂದರು’ ಎಂದು ಹೇಳಿದರು.
  • ಏಕಪಕ್ಷೀಯ ಸುಂಕ ಮತ್ತು ಸುಂಕ ರಹಿತ ಕ್ರಮಗಳಿಂದಾಗಿ ಜಾಗತಿಕ ವಹಿವಾಟಿನ ಮೇಲೆ ಆಗುತ್ತಿರುವ ಪರಿಣಾಮಗಳ ಬಗ್ಗೆ ‘ಬ್ರಿಕ್ಸ್‌’ ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿವೆ.
  • 2040ರಲ್ಲಿ ಚಂದ್ರನ ಮೇಲೆ ಭಾರತೀಯರು

ಸಂದರ್ಭ: 2040ರಲ್ಲಿ ಚಂದ್ರನ ಮೇಲೆ ಭಾರತೀಯರನ್ನು ಇಳಿಸುವ ಗುರಿಯಿದ್ದು, ಅದರ ಭಾಗವಾಗಿ ನಡೆಸಲಾಗುವ ಮೊದಲ ಮಾನವ ಬಾಹ್ಯಾಕಾಶ ಹಾರಾಟಮಿಷನ್ ಗಗನಯಾನ 2027ರಲ್ಲಿ ಉಡಾವಣೆಯಾಗುವ ಹಾದಿಯಲ್ಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಧ್ಯಕ್ಷ ವಿ.ನಾರಾಯಣನ್ ಹೇಳಿದ್ದಾರೆ.

  • 2035ರ ವೇಳೆಗೆ ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಮತ್ತು 2026ರ ವೇಳೆಗೆ ಮಾವನ ರಹಿತ ಮೂರು ‘ಗಗನಯಾನ’ ಕಾರ್ಯಾಚರಣೆಗಳು ಸೇರಿದಂತೆ ಹಲವಾರು ಮಹತ್ವಾ ಕಾಂಕ್ಷೆಯ ಬಾಹ್ಯಾಕಾಶ ಯೋಜನೆಗಳು, ವಲಯ ಸುಧಾರಣೆಗಳು ಪ್ರಸ್ತುತ ನಡೆಯುತ್ತಿವೆ ಎಂದು ನಾರಾಯಣನ್ ಹೇಳಿದ್ದಾರೆ.
  • ಇದರಲ್ಲಿ ‘ವ್ಯೋಮಮಿತ್ರ’ ರೋಬೊಟ್‌ ಅನ್ನು ಒಳಗೊಂಡಿರುವ ಮೊದಲನೆಯ ಯೋಜನೆಯನ್ನು 2025ರ ಡಿಸೆಂಬರ್‌ ವೇಳೆಗೆ ಪೂರ್ಣಗೊಳಿಸುವ ಗುರಿ ಇದೆ.
  • ಗಲ್ಲುಶಿಕ್ಷೆಗೆ ಪರ್ಯಾಯ ಆಯ್ಕೆ: ಒಪ್ಪದ ಕೇಂದ್ರ

ಸಂದರ್ಭ: ಮರಣದಂಡನೆಗೆ ಗುರಿಯಾದ ಅಪರಾಧಿಯನ್ನು ಗಲ್ಲಿಗೇರಿಸಿ ಕೊಲ್ಲುವ ಬದಲು, ಸಿರಿಂಜ್ಮೂಲಕ ವಿಷ ನೀಡುವ ಪರ್ಯಾಯ ಆಯ್ಕೆಯು ಕಾರ್ಯಸಾಧುವಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.

  • ನೇಣುಗಂಬಕ್ಕೆ ಏರಿಸಿ ಅಪರಾಧಿಯನ್ನು ಕೊಲ್ಲುವ ಬದಲು, ಮಾನವೀಯವಾದ ಪರ್ಯಾಯ ಮಾರ್ಗದ ಆಯ್ಕೆಯನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್‌ 2023ರಲ್ಲಿ ಪ್ರಕರಣವೊಂದರಲ್ಲಿ ಹೇಳಿತ್ತು. ‘ಗಲ್ಲಿಗೇರಿಸುವ’ ಪದ್ಧತಿ ರದ್ದತಿ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ವಿಕ್ರಮ್‌ನಾಥ್‌ ಮತ್ತು ಸಂದೀಪ್‌ ಮೆಹ್ತಾ ಅವರನ್ನೊಳಗೊಂಡ ಪೀಠ ನಡೆಸಿತು.
  • ‘ಮರಣದಂಡನೆಗೆ ಗುರಿಯಾಗಿರುವ ಅಪರಾಧಿಗೆ ‘ನೇಣುಗಂಬ’ ಅಥವಾ ‘ಪ್ರಾಣಹರಣ ಮಾಡುವ ಚುಚ್ಚುಮದ್ದು’ ಇವೆರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ವನ್ನಾದರೂ ನೀಡಬೇಕು’ ಎಂದು ಪಿಐಎಲ್‌ ಸಲ್ಲಿಸಿರುವ ವಕೀಲ ರಿಶಿ ಮಲ್ಹೋತ್ರಾ ಕೋರ್ಟ್‌ಗೆ ಮನವಿ ಮಾಡಿದರು.
  • ‘ನೇಣು ಬಿಗಿದು ಕೊಲ್ಲುವುದಕ್ಕಿಂತ ಹೆಚ್ಚು ಮಾನವೀಯವಾದ ಪರ್ಯಾಯ ಮಾರ್ಗ ಚುಚ್ಚುಮದ್ದು ನೀಡುವುದು. ಅಮೆರಿಕದಲ್ಲಿ 50ರಲ್ಲಿ 49 ರಾಜ್ಯಗಳಲ್ಲಿ ವಿಧಾನವನ್ನು ಅಳವಡಿಸಿಕೊಳ್ಳ ಲಾಗಿದೆ. ನೇಣಿಗೇರಿಸಿದ ವ್ಯಕ್ತಿಯ ದೇಹವು 40 ನಿಮಿಷ ಹಗ್ಗದಲ್ಲೇ ನೇತಾಡುತ್ತಿರುತ್ತದೆ. ಇದು ಅನಾಗರಿಕ, ಅಮಾನವೀಯ. ಮರಣದಂಡನೆ ಶಿಕ್ಷೆ ಜಾರಿಗೊಳಿಸುವಾಗ ಮಾನವನ ಘನತೆಗೆ ಸಂಬಂಧಿಸಿದ ಅಂಶಗಳನ್ನೂ ಪರಿಗಣಿಸಬೇಕು ಎಂದು ಅವರು ಪೀಠದ ಗಮನಕ್ಕೆ ತಂದರು.
  • ಮಲ್ಹೋತ್ರಾ ಸಲ್ಲಿಸಿರುವ ಮನವಿಯ ಬಗ್ಗೆ, ಸರ್ಕಾರಕ್ಕೆ ಸಲಹೆ ನೀಡುವಂತೆ ನ್ಯಾಯಪೀಠ, ಕೇಂದ್ರವನ್ನು ಪ್ರತಿನಿಧಿಸಿದ್ದ ವಕೀಲರಿಗೆ ಸೂಚಿಸಿತು.
  • ‘ಈಗಾಗಲೇ ಈ ಬಗ್ಗೆ ಚರ್ಚಿಸಲಾಗಿದೆ. ಆದರೆ, ಪರ್ಯಾಯ ಆಯ್ಕೆ ನೀಡುವುದು ಕಾರ್ಯಸಾಧು ವಲ್ಲ. ಇದು ಸರ್ಕಾರ ನೀತಿ ನಿರ್ಧಾರದ ಭಾಗ. ಆ ಬಗ್ಗೆ ಸರ್ಕಾರ ನಿರ್ಧಾರ ತೆಗೆದು ಕೊಳ್ಳುತ್ತದೆ’ ಎಂದು ಕೇಂದ್ರವನ್ನು ಪ್ರತಿನಿ ಧಿಸಿದ್ದ ವಕೀಲರು ಕೋರ್ಟ್‌ಗೆ ತಿಳಿಸಿದರು.  
  • ಗಲ್ಲಿಗೇರಿಸುವ ಪದ್ಧತಿ ರದ್ದುಗೊಳಿಸುವ ವಿಚಾರವಾಗಿ ಅಟಾರ್ನಿ ಜನರಲ್‌ ಆರ್‌. ವೆಂಕಟರಮಣಿ ಅವರ ಪ್ರಸ್ತಾವದ ಮೇರೆಗೆ, 2023ರಲ್ಲಿ ಸಮಿತಿ ರಚಿಸುವಂತೆ ಸರ್ಕಾರಕ್ಕೆ ಸೂಚಿಸಲಾಗಿತ್ತು. ಈ ಸಮಿತಿ ಏನು ಮಾಡಿದೆ ಎನ್ನುವುದನ್ನೂ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚಿಸಿದ ಕೋರ್ಟ್‌, ಮುಂದಿನ ವಿಚಾರಣೆಯನ್ನು ನವೆಂಬರ್‌ 11ಕ್ಕೆ ನಿಗದಿಪಡಿಸಿತು.

‘ಪರ್ಯಾಯ ಮಾರ್ಗ ಅರಸಬೇಕಿದೆ’

  • ‘ಸಮಸ್ಯೆಯೆಂದರೆ, ಸರ್ಕಾರವು ಕಾಲಕ್ಕೆ ತಕ್ಕಂತೆ ಸುಧಾರಣಾವಾದಿ ಆಲೋಚನೆಗಳನ್ನು ಅಳವಡಿಸಿಕೊಂಡಿಲ್ಲ. ಈಗ ಕಾಲ ಬದಲಾಗಿದೆ. ಮರಣದಂಡನೆ ಜಾರಿಯಲ್ಲೂ ಪರ್ಯಾಯ ಮಾರ್ಗ ಅರಸಬೇಕಿದೆ’ ಎಂದು ನ್ಯಾಯಮೂರ್ತಿ ಸಂದೀಪ್‌ ಮೆಹ್ತಾ ಅಭಿಪ್ರಾಯಪಟ್ಟರು.
  • ‘ಮರಣದಂಡನೆ ಜಾರಿಯಲ್ಲಿ ನಿರ್ದಿಷ್ಟ ವಿಧಾನವನ್ನು ಅಳವಡಿಸಿಕೊಳ್ಳುವಂತೆ ಶಾಸಕಾಂಗಕ್ಕೆ ನಿರ್ದೇಶಿಸಲು ಸಾಧ್ಯವಿಲ್ಲ’ ಎಂದೂ ನ್ಯಾಯಪೀಠ ಸ್ಪಷ್ಟಪಡಿಸಿತು.
  • ಪೋಕ್ಸೊ ಪ್ರಕರಣ ಶೇ 94ರಷ್ಟು ಹೆಚ್ಚಳ

ಸಂದರ್ಭ: ಇನ್ಟು ದಿ ಲೈಟ್ ಇಂಡೆಕ್ಸ್ 2025’ ಸಂಶೋಧನಾ ವರದಿಯಲ್ಲಿ ಬಹಿರಂಗ : ಭಾರತದಲ್ಲಿ 2017 ಹಾಗೂ 2022 ನಡುವೆ ಪೋಕ್ಸೊ ಕಾಯ್ದೆಯಡಿ ದಾಖಲಾದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಅಪರಾಧ ಪ್ರಕರಣಗಳ ಸಂಖ್ಯೆ ಶೇ 94ರಷ್ಟು ಏರಿಕೆಯಾಗಿದೆ ಎಂದುಇನ್ಟು ದಿ ಲೈಟ್ ಇಂಡೆಕ್ಸ್ 2025’ ಸಂಶೋಧನಾ ವರದಿ ಹೇಳಿದೆ.

  • ಎಡಿನ್‌ಬರ್ಗ್‌ ವಿಶ್ವವಿದ್ಯಾಲಯ ಮತ್ತು ನ್ಯೂ ಸೌತ್‌ ವೇಲ್ಸ್‌ ವಿಶ್ವವಿದ್ಯಾಲಯವು ಆಯೋಜಿಸಿರುವ, ಚೈಲ್ಡ್‌ಲೈಟ್‌ ಗ್ಲೋಬಲ್‌ ಚೈಲ್ಡ್ ಸೇಫ್ಟಿ ಇನ್‌ಸ್ಟಿಟ್ಯೂಟ್‌ ಈ ವಾರ ಬಿಡುಗಡೆ ಮಾಡಿದ ಸಂಶೋಧನಾ ವರದಿಯಲ್ಲಿ ಈ ವಿವರಗಳು ಬಹಿರಂಗಗೊಂಡಿವೆ.
  • ಈ ವರದಿ ಪ್ರಕಾರ, ಅಪರಾಧ ಪ್ರಕರಣಗಳ ಸಂಖ್ಯೆ 33,210ರಿಂದ 64,469ಕ್ಕೆ ಹೆಚ್ಚಾಗಿದೆ. ಇದರ ಹೊರತಾಗಿಯೂ ಕಾನೂನು ಕ್ರಮ ಜರುಗಿಸುವ ಪ್ರಮಾಣವು ಶೇ 90ಕ್ಕಿಂತ ಹೆಚ್ಚಿದೆ. ಇದು ಕಾಯ್ದೆಯ ಪರಿಣಾಮಕಾರಿ ಜಾರಿ ಮತ್ತು ಪ್ರಕರಣಗಳ ವರದಿ ಮಾಡುವ ಕಾರ್ಯವಿಧಾನಗಳನ್ನು ಸೂಚಿಸುತ್ತದೆ ಎಂದು ಹೇಳಿದೆ.
  • ಭಾರತದಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ನಿಂದನೆ ಕುರಿತು ಹೆಚ್ಚಿನ ದತ್ತಾಂಶ ಲಭ್ಯವಿದೆ. ಅಪರಾಧಗಳ ಅಂಕಿ– ಅಂಶಗಳಲ್ಲಿನ ಪಾರದರ್ಶಕತೆಯು ಹೆಚ್ಚು ಪರಿಣಾಮಕಾರಿ ಮೇಲ್ವಿಚಾರಣೆ ಮತ್ತು ತ್ವರಿತಗತಿಯ ಕ್ರಮಕ್ಕೆ ಅವಕಾಶ ಮಾಡಿಕೊಡುತ್ತದೆ.
  • ಎಂಟು ಮಕ್ಕಳ ಪೈಕಿ ಒಬ್ಬರು (ಶೇ 12.5) 18 ವರ್ಷ ತುಂಬುವ ಮೊದಲೇ ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ ಎಂಬುದನ್ನು ಭಾರತ, ನೇಪಾಳ ಮತ್ತು ಶ್ರೀಲಂಕಾದಲ್ಲಿ ನಡೆಸಿದ ಸಮೀಕ್ಷೆಯ ದತ್ತಾಂಶವು ತೋರಿಸುತ್ತದೆ. ಈ ಮೂರು ದೇಶಗಳಲ್ಲಿ ಸುಮಾರು 5.4 ಕೋಟಿ ಮಕ್ಕಳು ಇದ್ದಾರೆ.
  • ‘2024ರಲ್ಲಿ ದಕ್ಷಿಣ ಏಷ್ಯಾ ರಾಷ್ಟ್ರಗಳ ಪೈಕಿ ಭಾರತ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ (ಸಿಎಸ್‌ಎಎಂ) ಬಹುಪಾಲು ಪ್ರಕರಣಗಳು ವರದಿಯಾಗಿವೆ. ಆದರೂ, ಭಾರತವು ಅತ್ಯಂತ ಕಡಿಮೆ ಸಿಎಸ್‌ಎಎಂ ಲಭ್ಯತೆಯ ಅನುಪಾತ ಹೊಂದಿದೆ (ಪ್ರತಿ 10 ಸಾವಿರ ಜನರಿಗೆ 15 ವರದಿಗಳು). ಇದು ಪರಿಣಾಮಕಾರಿಯಾದ ಪತ್ತೆ ಕಾರ್ಯ ಮತ್ತು ವರದಿ ಮಾಡುವ ವ್ಯವಸ್ಥೆಗಳನ್ನು ಸೂಚಿಸುತ್ತದೆ’ ಎಂದು ವರದಿ ಹೇಳಿದೆ.
  • ರಷ್ಯಾದಿಂದ ಆಮದು ತಕ್ಷಣಕ್ಕೆ ನಿಲ್ಲದು

ಸಂದರ್ಭ: ಭಾರತವು ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದನ್ನು ತಕ್ಷಣಕ್ಕೆ ನಿಲ್ಲಿಸುವುದು ಸಾಧ್ಯವಾಗದ ಕೆಲಸ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

  • ಕಚ್ಚಾ ತೈಲ ಆಮದು ಬಗ್ಗೆ 4–6 ವಾರಗಳ ಮೊದಲೇ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಹೀಗಾಗಿ, ಕನಿಷ್ಠಪಕ್ಷ ನವೆಂಬರ್‌ ಅಂತ್ಯದವರೆ ಗಿನ ಆಮದು ಬಗ್ಗೆ ಈಗಾಗಲೇ ಒಪ್ಪಂದ ಆಗಿರುತ್ತದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಹೇಳಿರುವುದು ನಿಜ ಎಂದಾದರೆ, ರಷ್ಯಾದಿಂದ ಕಚ್ಚಾ ತೈಲ ಆಮದು ನವೆಂಬರ್‌ ಮೂರನೆಯ ಅಥವಾ ನಾಲ್ಕನೆಯ ವಾರದಿಂದ ಕೊನೆಗೊಳ್ಳಬಹುದು ಎಂದು ತಜ್ಞರು ಹೇಳಿದ್ದಾರೆ.
  • ‘ರಷ್ಯಾದಿಂದ ಕಚ್ಚಾ ತೈಲ ಖರೀದಿ ನಿಲ್ಲಿಸಲು ಭಾರತ ಒಪ್ಪಿದೆ’ ಎಂದು ಟ್ರಂಪ್‌ ಅವರು ಹೇಳಿರುವುದು ರಾಜಕೀಯ ಮಾತಿನಂತೆ ಕಾಣುತ್ತಿದೆ ಎಂದು ವಿಶ್ಲೇಷಣಾ ಸಂಸ್ಥೆ ಕೆಪ್ಲರ್‌ ಹೇಳಿದೆ. ಆಮದು ನಿಲ್ಲಿಸುವ ಬಗ್ಗೆ ಕೇಂದ್ರ ಸರ್ಕಾರವು ಅಧಿಕೃತ ಹೇಳಿಕೆ ನೀಡಿಲ್ಲ.
  • ಅಕ್ಟೋಬರ್‌ನಲ್ಲಿ ಭಾರತವು ರಷ್ಯಾದಿಂದ ದಿನಕ್ಕೆ 18 ಲಕ್ಷ ಬ್ಯಾರಲ್‌ ಕಚ್ಚಾ ತೈಲ ಖರೀದಿಸಿದೆ ಎಂದು ಕೆಪ್ಲರ್‌ ಅಂದಾಜು ಮಾಡಿದೆ. ಸೆಪ್ಟೆಂಬರ್‌ನಲ್ಲಿ ಖರೀದಿಸುತ್ತಿದ್ದ ಮಟ್ಟಕ್ಕೆ ಹೋಲಿಸಿದರೆ ಇದು ದಿನಕ್ಕೆ 2.50 ಲಕ್ಷ ಬ್ಯಾರಲ್‌ನಷ್ಟು ಹೆಚ್ಚು.
  • ಜುಲೈ–ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಖರೀದಿಯು ತುಸು ಕಡಿಮೆ ಆಗಿದ್ದಕ್ಕೆ ಕಾರಣ ಅಮೆರಿಕವು ಭಾರತದ ಸರಕುಗಳ ಮೇಲೆ ವಿಧಿಸಿದ ಸುಂಕ ಅಲ್ಲ. ಅದಕ್ಕೆ ಇತರ ಕಾರಣಗಳಿದ್ದವು, ಅದರಲ್ಲೂ ಮುಖ್ಯವಾಗಿ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣಾ ಘಟಕಗಳಲ್ಲಿ ವಾರ್ಷಿಕ ನಿರ್ವಹಣಾ ಚಟುವಟಿಕೆಗಳು ಕಾರಣವಾಗಿದ್ದವು.
  • ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವಲ್ಲಿ ಎರಡನೆಯ ಸ್ಥಾನದಲ್ಲಿ ಇರುವ ಭಾರತವು ಆಮದನ್ನು ನಿಲ್ಲಿಸಿದರೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಬ್ಯಾರಲ್‌ಗೆ 100 ಡಾಲರ್‌ವರೆಗೆ ಹೆಚ್ಚಳವಾಗುವ ಅಪಾಯ ಇದೆ. ಇದರ ಪರಿಣಾಮವಾಗಿ ಹಣದುಬ್ಬರವು ಜಗತ್ತಿನೆಲ್ಲೆಡೆ ಏರಿಕೆ ಕಾಣಬಹುದು ಎಂದು ತಜ್ಞರು ಭೀತಿ ವ್ಯಕ್ತಪಡಿಸಿದ್ದಾರೆ.
  • ರಷ್ಯಾದ ಕಚ್ಚಾ ತೈಲ ಆಮದು ನಿಲ್ಲಿಸಬೇಕು ಎಂದಾದರೆ ಭಾರತದ ಕಂಪನಿಗಳು ದೊಡ್ಡ ಮಟ್ಟದಲ್ಲಿ ಆರ್ಥಿಕ ಲಾಭವನ್ನು ಬಿಟ್ಟುಕೊಡಬೇಕಾಗುತ್ತದೆ. ಒಂದು ಅಂದಾಜಿನ ಪ್ರಕಾರ ದೇಶದ ವಾರ್ಷಿಕ ಆಮದು ವೆಚ್ಚವು 5 ಬಿಲಿಯನ್‌ ಡಾಲರ್‌ವರೆಗೆ (ಅಂದಾಜು ₹43 ಸಾವಿರ ಕೋಟಿ) ಹೆಚ್ಚಬಹುದು.
  • ಕರುನಾಡು ಗಜನಾಡು

ಭಾ ರತದಲ್ಲಿ 22,446 ಕಾಡಾನೆಗಳಿವೆ ಎಂದು ಸಿಂಕ್ರೋನಸ್ ಆಲ್ ಇಂಡಿಯಾ ಎಲಿಫೆಂಟ್ ಎಸ್ಟಿಮೇಷನ್ ಪ್ರೋಗ್ರಾಂ (ಎಸ್‌ಎಐಇಇ 2021–25) ಹೆಸರಿನಲ್ಲಿ ನಡೆದ ಗಣತಿಯ ಆಧಾರದಲ್ಲಿ ಸಿದ್ಧಪಡಿಸಲಾಗಿರುವ ‘ಭಾರತದಲ್ಲಿ ಆನೆಗಳ ಸ್ಥಿತಿಗತಿ ವರದಿ’ ಹೇಳಿದೆ. ಪರಿಸರ ಸಚಿವಾಲಯ, ಪ್ರಾಜೆಕ್ಟ್ ಎಲಿಫೆಂಟ್ ಮತ್ತು ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಜಂಟಿಯಾಗಿ ಈ ಗಣತಿ ನಡೆಸಿವೆ.

ರಾಜ್ಯಗಳ ಪೈಕಿ ಆನೆಗಳ ಸಂಖ್ಯೆಯಲ್ಲಿ ಕರ್ನಾಟಕವು (6,013) ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಅಸ್ಸಾಂ (4,159), ತಮಿಳುನಾಡು (3,136), ಕೇರಳ (2,785) ಮತ್ತು ಉತ್ತರಾಖಂಡ (1,792) ಇವೆ. ದೇಶದ ಆನೆಗಳ ಪೈಕಿ ಶೇ 59.29ರಷ್ಟು ಕರ್ನಾಟಕ, ಅಸ್ಸಾಂ, ತಮಿಳುನಾಡಿನಲ್ಲಿಯೇ ಇವೆ ಎಂದು ವರದಿ ಹೇಳಿದೆ. ಪ್ರದೇಶವಾರು ಆನೆಗಳ ಸಂಖ್ಯೆಯಲ್ಲಿ, ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯದಲ್ಲಿ ಹರಡಿರುವ ಪಶ್ಚಿಮ ಘಟ್ಟಗಳು ಮುಂಚೂಣಿ ಸ್ಥಾನ ಪಡೆದಿವೆ. ಜತೆಗೆ, ಈಶಾನ್ಯ ರಾಜ್ಯಗಳ ವ್ಯಾಪ್ತಿಯ ಅಸ್ಸಾಂ ಮತ್ತು ಬ್ರಹ್ಮಪುತ್ರ ಜಲಾನಯನ ಪ್ರದೇಶ ಎರಡನೇ ಸ್ಥಾನದಲ್ಲಿದೆ.   

ಆನೆಗಳ ಸಮೀಕ್ಷೆ ಆರಂಭವಾಗಿದ್ದು 2021ರಲ್ಲಿ. ನಾಲ್ಕು ವರ್ಷಗಳ ನಂತರ 2025ರ ಅಕ್ಟೋಬರ್ 14ರಂದು ವರದಿ ಬಿಡುಗಡೆಯಾಗಿದೆ. ವಂಶವಾಹಿ ವಿಶ್ಲೇಷಣೆ ಮತ್ತು ದತ್ತಾಂಶ ದೃಢೀಕರಣವು ಸಂಕೀರ್ಣ ಪ್ರಕ್ರಿಯೆಯಾಗಿದ್ದರಿಂದ ಸಮೀಕ್ಷೆಗೆ ಹೆಚ್ಚು ಸಮಯ ವ್ಯಯವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

ಭಾರತವು ಆನೆಗಳಿಗೆ ಪ್ರಸಿದ್ಧವಾಗಿದ್ದು, ದೇಶದಲ್ಲಿ ಆನೆಗಳ ಸಂತತಿಗೆ ಹಲವು ರೀತಿಯಲ್ಲಿ ಕಂಟಕ ಎದುರಾಗಿದೆ. ಚಾರಿತ್ರಿಕವಾಗಿ ದೇಶದಲ್ಲಿ ಆನೆಗಳ ಸಂಖ್ಯೆ ವಿಪುಲವಾಗಿತ್ತು. ಹಿಂದೆ ಆನೆಗಳು ಇದ್ದ ಒಟ್ಟು ಪ್ರದೇಶದ ಪೈಕಿ ಶೇ 3.5ರಷ್ಟು ಪ್ರದೇಶದಲ್ಲಿ ಮಾತ್ರವೇ ಪ್ರಸ್ತುತ ಅವು ಉಳಿದಿವೆ. ಪ್ರಪಂಚದ ಆನೆಗಳ ಸಂಖ್ಯೆಯಲ್ಲಿ ಭಾರತವು ಶೇ 60ರಷ್ಟು ಆನೆಗಳಿಗೆ ನೆಲೆಯಾಗಿದೆ. ಆದರೂ ಹಲವು ಕಾರಣಗಳಿಂದ ಅವುಗಳ ವಾಸಸ್ಥಳಗಳ ವಿಸ್ತೀರ್ಣ ಕಡಿಮೆಯಾಗುತ್ತಲೇ ಸಾಗುತ್ತಿದೆ ಎಂದು ವರದಿ ಹೇಳಿದೆ.

ಮೈಸೂರು ಭಾಗದಲ್ಲಿ ಹೆಚ್ಚು 

ಕರ್ನಾಟಕದಲ್ಲಿ ಬಂಡೀಪುರ, ನಾಗರಹೊಳೆ, ಭದ್ರಾ, ಕಾಳಿ, ಬಿಳಿಗಿರಿರಂಗನಾಥಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶಗಳ ವ್ಯಾಪ್ತಿಯಲ್ಲಿ ಗಣತಿ ನಡೆಸಲಾಗಿದೆ. ಒಟ್ಟು ಸಿಬ್ಬಂದಿ 45,323 ಕಿ.ಮೀ ದೂರ ಸಾಗಿ ವಿವರಗಳನ್ನು ದಾಖಲಿಸಿದ್ದಾರೆ.

ರಾಜ್ಯದಲ್ಲಿ ಕನಿಷ್ಠ 4,792, ಗರಿಷ್ಠ 7,235 ಆನೆಗಳಿವೆ ಎಂದು ವರದಿ ಹೇಳಿದ್ದು, ಸರಾಸರಿ ಲೆಕ್ಕಾಚಾರದಲ್ಲಿ ರಾಜ್ಯದಲ್ಲಿರುವ ಆನೆಗಳು 6,013. 2017ರ ಗಣತಿಯು 6,049 ಆನೆಗಳು ಇರುವುದಾಗಿ ಹೇಳಿತ್ತು. ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿರುವ ರಕ್ಷಿತಾರಣ್ಯಗಳ ಪೈಕಿ ಮೈಸೂರು ಭಾಗದಲ್ಲೇ ಹೆಚ್ಚು ಆನೆಗಳಿವೆ ಎಂದು ವರದಿ ಹೇಳಿದೆ. 

ಕಾಳಿ, ದಾಂಡೇಲಿ, ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುವ ಚಿಕ್ಕಮಗಳೂರು, ಕೊಪ್ಪ, ಭದ್ರಾವತಿ, ಶಿವಮೊಗ್ಗ ವಿಭಾಗಗಳಲ್ಲಿ ಆನೆಗಳ ಸಾಂದ್ರತೆ ಕಡಿಮೆ ಇದೆ. ಮೈಸೂರು ಭಾಗದ ಬಂಡೀಪುರ, ನಾಗರಹೊಳೆ, ಬಿಆರ್‌ಟಿ ಹಾಗೂ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಹೆಚ್ಚು ಆನೆಗಳಿವೆ. ಹಲವು ವರ್ಷಗಳಿಂದ ಇಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಸಂರಕ್ಷಣಾ ಕ್ರಮಗಳು, ಹಸಿರು ಹೆಚ್ಚಾಗಲು ಕಾರಣವಾಗಿವೆ. ಬೇರೆ ಬೇರೆ ಅರಣ್ಯಗಳ ನಡುವೆ ಸಂಪರ್ಕ ಇರುವುದರಿಂದ ಈ ಭಾಗದಲ್ಲಿ ಆನೆಗಳ ಸಂಖ್ಯೆ ಉತ್ತಮವಾಗಿದೆ ಎಂದು ವರದಿ ವಿವರಿಸಿದೆ. 

ರಾಜ್ಯವು ಆನೆಗಳ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ ಮತ್ತು ಮಾನವ–ಆನೆ ಸಂಘರ್ಷವೂ ಇಲ್ಲಿ ಜಾಸ್ತಿ ಇದೆ. ಅರಣ್ಯದ ಅಂಚಿನಲ್ಲಿ ಕೃಷಿ ಚಟುವಟಿಕೆಗಳು ಹೆಚ್ಚಾಗಿರುವುದು ಇದಕ್ಕೆ ಕಾರಣ. ಅರಣ್ಯದ ಒಳಗೆ ಮತ್ತು ಹೊರಗೆ ಜನವಸತಿ ಪ್ರದೇಶಗಳು ಇರುವುದು ಮತ್ತೊಂದು ಕಾರಣ. ವನ್ಯಜೀವಿಗಳ ಆವಾಸಗಳ ಒತ್ತುವರಿಯೂ ಜಾಸ್ತಿಯಾಗುತ್ತಿದ್ದು, ಜನಸಂಖ್ಯೆಯೂ ಹೆಚ್ಚಾಗುತ್ತಿದೆ. ಮಾನವ ಹಸ್ತಕ್ಷೇಪದಿಂದ ಕಾಳಿ, ಭದ್ರಾ ಹಾಗೂ ಮೈಸೂರು ವ್ಯಾಪ್ತಿಯ ಸಂರಕ್ಷಿತ ಪ್ರದೇಶಗಳ ಅರಣ್ಯ ನಾಶವಾಗುತ್ತಿರುವುದು ಆನೆಗಳ ಸಂರಕ್ಷಣೆಗೆ ಸವಾಲಾಗಿದೆ. 

ಆನೆಗಳ ಸಂಖ್ಯೆ ಇಳಿಕೆಗೆ ಕಾರಣಗಳೇನು?

l ಆವಾಸದ ವ್ಯಾಪ್ತಿ ಕಿರಿದಾಗುತ್ತಿರುವುದು, ಕಾಡುಗಳು ಕಡಿಮೆಯಾಗಿರುವುದು

l ಪಶ್ಚಿಮ ಘಟ್ಟ, ಈಶಾನ್ಯ ಘಟ್ಟ ಸೇರಿದಂತೆ ಆನೆಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಅರಣ್ಯ ಭಾಗದಲ್ಲಿ ಒತ್ತುವರಿ, ಅಭಿವೃದ್ಧಿ ಕಾಮಗಾರಿಗಳು ಮತ್ತು ಭೂ ಬಳಕೆ ಬದಲಾವಣೆಯಿಂದ ಸಾಂಪ್ರದಾಯಿಕ ಕಾರಿಡಾರ್‌ಗಳು ನಾಶವಾಗಿರುವುದು

l ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಟೀ, ಕಾಫಿ ತೋಟಗಳ ವ್ಯಾಪ್ತಿ ವಿಸ್ತರಿಸುತ್ತಿರುವುದು, ಅಭಿವೃದ್ಧಿ ಯೋಜನೆಗಳ ಹೆಚ್ಚಳ

l ದೇಶದ ಮಧ್ಯಭಾಗದಲ್ಲಿ ಗಣಿಗಾರಿಕೆ ಹೆಚ್ಚಾಗಿದೆ. ಇದರಿಂದಾಗಿ ಆನೆಗಳ ಓಡಾಟಕ್ಕೆ ಅಡ್ಡಿ 

l ಈಶಾನ್ಯ ಭಾಗದಲ್ಲಿ ಆನೆಗಳ ಕಾರಿಡಾರ್‌ಗಳು ನಾಶವಾಗಿವೆ. ಅರಣ್ಯ ಛಿದ್ರವಾಗಿವೆ, ಅಭಿವೃದ್ಧಿ ಕಾಮಗಾರಿಗಳು ಹೆಚ್ಚಾಗಿವೆ

l ಅರಣ್ಯದಲ್ಲಿ ಕಳೆ ಗಿಡಗಳು ಹೆಚ್ಚುತ್ತಿರುವುದು, ಮಾನವನ ಹಸ್ತಕ್ಷೇಪ, ಕೃಷಿ ಭೂಮಿಗೆ ಬೇಲಿ ಹಾಕುವುದು

l ಅಕೇಷಿಯಾದಂತಹ ಗಿಡಗಳನ್ನೊಳಗೊಂಡ ನೆಡುತೋಪುಗಳ ನಿರ್ಮಾಣ 

ಡಿಎನ್‌ಎ ಆಧಾರಿತ ಸಮೀಕ್ಷೆ

2017ರವರೆಗೆ ನೇರ ಎಣಿಕೆ, ಮಾದರಿ ಬ್ಲಾಕ್‌ ಎಣಿಕೆ, ಲದ್ದಿ ಎಣಿಕೆ (Total Count Dung Count & Sample Block Count) ವಿಧಾನಗಳ ಮೂಲಕ ಆನೆ ಗಣತಿ ನಡೆಸಲಾಗುತ್ತಿತ್ತು. ಈ ಬಾರಿ ಆ ಮಾರ್ಗವನ್ನು ಕೈಬಿಡಲಾಗಿದೆ. ಮನುಷ್ಯರನ್ನು ಅವರ ವಂಶವಾಹಿ ಮೂಲಕ ಪತ್ತೆ ಹಚ್ಚುವ ವಿಧಾನವನ್ನೇ ಇಲ್ಲೂ ಅನುಸರಿಸಲಾಗಿದೆ. ಭೂಸಮೀಕ್ಷೆ, ಉಪಗ್ರಹ ಆಧಾರಿತ ಮ್ಯಾಪಿಂಗ್, ವಂಶವಾಹಿ ವಿಶ್ಲೇಷಣೆ– ಹೀಗೆ ಮೂರು ಹಂತದಲ್ಲಿ ಗಣತಿ ನಡೆಸಲಾಗಿದೆ. ಆನೆ ಲದ್ದಿ ಮಾದರಿಗಳನ್ನು ಸಂಗ್ರಹಿಸಿ ಡಿಎನ್‌ಎ ಪರೀಕ್ಷೆಗೆ ಒಳಪಡಿಸಲಾಗಿದೆ. ಇದು ಭಿನ್ನ ಪ್ರಯತ್ನವಾಗಿದ್ದು, ಮುಂದಿನ ದಿನಗಳಲ್ಲಿ ಈ ಮಾದರಿಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲಾಗುವುದು. ಆನೆಗಳ ಮೇಲೆ ನಿಗಾ ಮತ್ತು ಸಂರಕ್ಷಣೆಯಲ್ಲೂ ಈ ಮಾರ್ಗವು ನೆರವಾಗಲಿದೆ ಎಂದು ವರದಿ ಉಲ್ಲೇಖಿಸಿದೆ.

0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments