Sat. Feb 7th, 2026
  • ವಿಮಾನ ನಿಲ್ದಾಣದಲ್ಲಿಕಲಾ ಲೋಕಮಳಿಗೆ

ಸಂದರ್ಭ: ಕೆಐಎಎಲ್ನಲ್ಲೂ ಸಿಗಲಿದೆ ಚನ್ನಪಟ್ಟಣ ಆಟಿಕೆ, ಇಳಕಲ್ಸೀರೆ ಒಂದೇ ಸೂರಿನಡಿ ನಾಡಿನ ಪಾರಂಪರಿಕವಿಶಿಷ್ಟ ಉತ್ಪನ್ನಗಳು ಲಭ್ಯ.

  • ಚನ್ನಪಟ್ಟಣದ ಆಟಿಕೆ, ಇಳಕಲ್ ಸೀರೆ, ಲಂಬಾಣಿ ಕಸೂತಿ ಸೇರಿ ನಾಡಿನ ಅಸ್ಮಿತೆ ಬಿಂಬಿಸುವ ಉತ್ಪನ್ನಗಳು ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ (ಕೆಐಎಎಲ್‌) ದೊರೆಯಲಿವೆ. ಕೆಐಎಎಲ್‌ನಲ್ಲಿ ಈಗಾಗಲೇ ‘ಕಲಾ ಲೋಕ’ ಮಳಿಗೆಗಳು ತಲೆಯೆತ್ತಿದ್ದು, ದೇಶ–ವಿದೇಶದ ಪ್ರಯಾಣಿಕರನ್ನು ತನ್ನತ್ತ ಕೈಬೀಸಿ ಕರೆಯಲು ಅಣಿಗೊಂಡಿವೆ.
  • ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಈ ವಿಮಾನ ನಿಲ್ದಾಣಕ್ಕೆ ಪ್ರತಿ ವರ್ಷ ಕೋಟ್ಯಂತರ ಪ್ರಯಾಣಿಕರು ಭೇಟಿ ನೀಡುತ್ತಿದ್ದಾರೆ.
  • ಇದು ದೇಶದ ಅತ್ಯಂತ ದೊಡ್ಡ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ಈ ವಿಮಾನ ನಿಲ್ದಾಣದ ಟರ್ಮಿನಲ್ –2 ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ವಿಶಿಷ್ಟ ಹಸಿರು ವಿನ್ಯಾಸವನ್ನು ಹೊಂದಿದ್ದು, ಸಂಸ್ಕರಿಸಿದ ಬಿದಿರು ಮತ್ತು ಇತರ ನೈಸರ್ಗಿಕ ವಸ್ತುಗಳಿಂದ ಅಲಂಕರಿಸಲ್ಪಟ್ಟಿದೆ.
  • ಇದರ ದೇಶೀಯ ಮತ್ತು ಅಂತರ ರಾಷ್ಟ್ರೀಯ ನಿರ್ಗಮನ ವಲಯದಲ್ಲಿ ಕೈಗಾರಿಕೆ ಇಲಾಖೆಯಡಿ ‘ಕಲಾ ಲೋಕ’ ಮಳಿಗೆಗಳನ್ನು ಆರಂಭಿಸಲಾಗಿದೆ.
  • ದೇಶಿಯ ನಿರ್ಗಮನ ವಲಯದಲ್ಲಿನ ಮಳಿಗೆ ಉದ್ಘಾಟನೆಗೆ ಸಜ್ಜುಗೊಂಡಿದ್ದು, ಭೌಗೋಳಿಕ ಸೂಚಕ (ಜಿಐ ಟ್ಯಾಗ್) ಪಡೆದ ನಾಡಿನ ಆಯ್ದ ಉತ್ಪನ್ನಗಳ ಜತೆಗೆ ಇಲ್ಲಿನ ವಿಶೇಷ ಹಾಗೂ ಪಾರಂಪರಿಕ ಉತ್ಪನ್ನಗಳು ದೊರೆಯಲಿವೆ.
  • ಮೈಸೂರು ಸ್ಯಾಂಡಲ್‌ ಸೋಪು, ಮೈಸೂರು ಸಿಲ್ಕ್ ಸೀರೆ ಸೇರಿ ವಿವಿಧ ಉತ್ಪನ್ನಗಳ ವಿಶೇಷತೆ ಹಾಗೂ ಸಂಕ್ಷಿಪ್ತ ಇತಿಹಾಸವೂ ಲಭ್ಯ.
  • ಸರ್ಕಾರಿ ಸಂಸ್ಥೆಗಳ ಉತ್ಪನ್ನ: ಪ್ರತಿ ಉತ್ಪನ್ನಕ್ಕೂ ಪ್ರತ್ಯೇಕ ಸ್ಥಳಾವಕಾಶ ಒದಗಿಸಿ, ಪ್ರದರ್ಶನ ಮತ್ತು ಮಾರಾಟಕ್ಕೆ ಇರಿಸಲಾಗಿದೆ. ಈಗಾಗಲೇ ರಾಜ್ಯದ 45 ಉತ್ಪನ್ನಗಳು ಜಿಐ ಟ್ಯಾಗ್ ಹೊಂದಿದ್ದು, ಅವುಗಳಲ್ಲಿ ಆಯ್ದ ಉತ್ಪನ್ನಗಳು ಇಲ್ಲಿ ಕಾಣಸಿಗುತ್ತವೆ. ನಾಡಿನ ವಿಶೇಷ ಹಾಗೂ ಪಾರಂಪರಿಕ ಉತ್ಪನ್ನಗಳ ಜತೆಗೆ ಸರ್ಕಾರಿ ಸಂಸ್ಥೆಗಳು ಸಿದ್ಧಪಡಿಸುತ್ತಿರುವ ಉತ್ಪನ್ನಗಳೂ ಇಲ್ಲಿ ದೊರೆಯಲಿವೆ. ಕಾಫಿ ಮಂಡಳಿ, ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ, ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಂತಹ ಸಂಸ್ಥೆಗಳ ಉತ್ಪನ್ನಗಳನ್ನೂ ಇಲ್ಲಿ ಇರಿಸಲಾಗಿದೆ.
  • ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೇಟಿ ನೀಡುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇಲ್ಲಿ ಮಳಿಗೆಗಳ ನಿರ್ಮಾಣದಿಂದ ಮೈಸೂರು ಸ್ಯಾಂಡಲ್‌ ಸೋಪಿನಂತಹ ಉತ್ಪನ್ನಗಳು ಜಗತ್ತಿನ ಎಲ್ಲೆಡೆ ತನ್ನ ಕಂಪನ್ನು ಪಸರಿಸುವ ಸಾಧ್ಯತೆಯಿದೆ. 2024–25ರಲ್ಲಿ ಈ ವಿಮಾನ ನಿಲ್ದಾಣವನ್ನು 4.18 ಕೋಟಿ ಪ್ರಯಾಣಿಕರು ಬಳಕೆ ಮಾಡಿದ್ದರು. ದಿನಕ್ಕೆ ಸರಾಸರಿ 1.15 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ.
  • ಟರ್ಮಿನಲ್ 1 ವಾರ್ಷಿಕ 3 ಕೋಟಿ ಪ್ರಯಾಣಿಕರನ್ನು ನಿರ್ವಹಣೆ ಮಾಡುವ ಸಾಮರ್ಥ್ಯ ಹೊಂದಿದೆ. 2023ರಲ್ಲಿ ಕಾರ್ಯಾರಂಭಗೊಂಡ ಟರ್ಮಿನಲ್ 2ರ ಮೊದಲನೇ ಹಂತವು 12.55 ಲಕ್ಷ ಚದರ ಮೀಟರ್ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿದ್ದು, ವಾರ್ಷಿಕ 1.6 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.

ಮಳಿಗೆಯಲ್ಲಿ ಏನೆಲ್ಲ ಇರಲಿದೆ?

ಮೈಸೂರು ಸಿಲ್ಕ್ ಸೀರೆ, ಚನ್ನಪಟ್ಟಣದ ಆಟಿಕೆ ಮತ್ತು ಬೊಂಬೆಗಳು, ಮೈಸೂರು ಸಾಂಪ್ರದಾಯಿಕ ಚಿತ್ರಕಲೆ, ಬಿದರಿ ಕಲೆ ಹೊಂದಿರುವ ಉತ್ಪನ್ನಗಳು, ಮೈಸೂರು ರೋಸ್‌ ವುಡ್‌ ಇನ್ಲೆ ಕಲಾಕೃತಿಗಳು, ಶ್ರೀಗಂಧದ ಕೆತ್ತನೆಗಳು, ಶ್ರೀಗಂಧದ ಸೋಪು, ಶ್ರೀಗಂಧದ ಎಣ್ಣೆ, ಅಗರಬತ್ತಿ, ಸಾಂಪ್ರದಾಯಿಕ ರೇಷ್ಮೆ ಸೀರೆಗಳು, ಚರ್ಮದ ಉತ್ಪನ್ನಗಳು, ಕಾಫಿ ಪುಡಿ ಹಾಗೂ ಸಹ ಉತ್ಪನ್ನಗಳ ಜತೆಗೆ ಪಾರಂಪರಿಕ ಹಾಗೂ ವಿವಿಧ ಸರ್ಕಾರಿ ಸಂಸ್ಥೆಗಳ ಉತ್ಪನ್ನಗಳು ದೊರೆಯಲಿವೆ.

  • ಫೇಸ್ಲೆಸ್‌, ಸಂಪರ್ಕರಹಿತ, ಆನ್ಲೈನ್ಖಾತಾ

ಸಂದರ್ಭ: ನಾಗರಿಕರಿಗೆ ಆಗುತ್ತಿದ್ದ ಕಿರುಕುಳ ತಪ್ಪಿಸಲು, ಭ್ರಷ್ಟಾಚಾರ ನಿಯಂತ್ರಣಕ್ಕೆ ವ್ಯವಸ್ಥೆ: ಪಾಲಿಕೆಗಳ ಅಧಿಕಾರಿಗಳನ್ನು ಭೇಟಿ ಮಾಡದೆ, ‘ಫೇಸ್ಲೆಸ್‌, ಸಂಪರ್ಕ ರಹಿತ, ಆನ್ಲೈನ್ಖಾತಾ ಪಡೆಯುವ ವ್ಯವಸ್ಥೆಯನ್ನು ಜಿಬಿಎ ವ್ಯಾಪ್ತಿಯಲ್ಲಿ ಜಾರಿಗೊಳಿಸಲಾಗಿದೆ.

  • ‘ಅಂತಿಮ ಇ-ಖಾತಾ ಅಥವಾ ಹೊಸ ಖಾತಾವನ್ನು ಅನುಮೋದಿಸಲು ಸಹಾಯಕ ಕಂದಾಯ ಅಧಿಕಾರಿ (ಎಆರ್‌ಒ) ಅಥವಾ ವಿಷಯ ನಿರ್ವಾಹಕರು ಆಸ್ತಿ ದಾಖಲೆಗಳನ್ನು ಮಾತ್ರ ನೋಡಬೇಕಾಗುತ್ತದೆ. ದಾಖಲೆಗಳು ಆನ್‌ಲೈನ್‌ನಲ್ಲಿ ಲಭ್ಯವಿರುವುದರಿಂದ ನಾಗರಿಕರು ಅವರನ್ನು ಭೇಟಿ ಮಾಡುವ ಅಗತ್ಯವಿಲ್ಲ. ನಾಗರಿಕರಿಗೆ ಆಗುತ್ತಿದ್ದ ಕಿರುಕುಳ ತಪ್ಪುತ್ತದೆ, ಭ್ರಷ್ಟಾಚಾರ ಇಲ್ಲದಂತಾಗುತ್ತದೆ’ ಎಂದು ಹೇಳಿದರು.
  • ‘ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯು ನಾಗರಿಕರು ಸಲ್ಲಿಸಿದ ಅರ್ಜಿಯನ್ನು ಉಪ ವಿಭಾಗದ ಹೊರಗಿನ ಅಧಿಕಾರಿಗಳಿಗೆ ಹಂಚಿಕೆ ಮಾಡುತ್ತದೆ. ಅರ್ಜಿಗಳನ್ನು ಎಲ್ಲ ಅಧಿಕಾರಿಗಳಿಗೆ ಸಮಾನವಾಗಿ ವಿತರಿಸ ಲಾಗುತ್ತದೆ. ಇದರಿಂದಾಗಿ ನಗರ ಪಾಲಿಕೆ ಯೊಳಗೆ ಎಲ್ಲರಿಗೂ ಕೆಲಸದ ಹೊರೆ ಸಮಾನ ವಾಗಿ ಹಂಚಿಕೆಯಾಗುತ್ತದೆ. ಮಧ್ಯವರ್ತಿ ಗಳು ಇ-ಖಾತಾ ಕೊಡಿಸುವುದಾಗಿ ನಾಗರಿಕರಿಂದ ಹಣ ಸಂಗ್ರಹಿಸುತ್ತಿದ್ದರು. ಅದೂ ಈ ಹೊಸ ವ್ಯವಸ್ಥೆಯಿಂದ ನಿಂತು ಹೋಗಿದೆ’ ಎಂದು ಮಾಹಿತಿ ನೀಡಿದರು.
  • ‘ಹಳೆಯ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಾಗರಿಕರು ತಮ್ಮ ಖಾತಾ ಪಡೆಯಲು ಮತ್ತು ವರ್ಗಾವಣೆಗೆ ಎಆರ್‌ಒ ಕಚೇರಿ ಗಳಿಗೆ ಭೇಟಿ ನೀಡಬೇಕಾಗಿತ್ತು. ದಾಖಲೆ ಗಳನ್ನು ಭೌತಿಕವಾಗಿ ಸ್ಥಳೀಯವಾಗಿ ಪರಿ ಶೀಲಿಸಲಾಗುತ್ತಿತ್ತು. ಮಧ್ಯವರ್ತಿಗಳು ನಾಗ ರಿಕರಿಂದ ಹಣವನ್ನು ಸಂಗ್ರಹಿಸಿ ಅಧಿಕಾರಿ ಗಳನ್ನು ಪ್ರಭಾವಿಸುತ್ತಿದ್ದರು. ಭ್ರಷ್ಟಾಚಾರವು ತುಂಬಾ ಹೆಚ್ಚಾಗಿತ್ತು. ನಾಗರಿಕರು ಸಂಪೂರ್ಣವಾಗಿ ಮಧ್ಯವರ್ತಿಗಳು ಮತ್ತು ಅಧಿಕಾರಿಗಳ ಮೇಲೆ ಅವಲಂಬಿತ ರಾಗಿದ್ದರು. ಈಗ ಇದ್ಯಾವುದಕ್ಕೂ ಅವಕಾಶ ಇಲ್ಲ’ ಎಂದು ಹೇಳಿದರು.
  • ಖಾತಾ ವ್ಯವಸ್ಥೆಯು ಕೇಂದ್ರ ಸರ್ಕಾರ ದಿಂದ ರಾಷ್ಟ್ರೀಯ ಗವರ್ನೆನ್ಸ್ ಪ್ರಶಸ್ತಿ (ಚಿನ್ನ)– 2025 ಅನ್ನು ಗೆದ್ದಿದೆ. ಖಾತಾ ಆನ್ಲೈನ್ವ್ಯವಸ್ಥೆಯು ಕಾವೇರಿ ಮತ್ತು ಸ್ವಯಂಚಾಲಿತ ತಿದ್ದುಪಡಿಗಳೊಂದಿಗೆ ಏಕೀಕರಣ ಹೊಂದಿದೆ. ಖಾತಾ ದಲ್ಲಾಗುವ ಬದಲಾವಣೆಗಳ ಪ್ರಕಾರ ಆಸ್ತಿ ತೆರಿಗೆ ದಾಖಲೆಗಳು ಮತ್ತು ಬೆಸ್ಕಾಂ ಮಾಲೀ ಕತ್ವದಲ್ಲಿ ಸ್ವಯಂಚಾಲಿತ ಬದಲಾವಣೆ ಗಳಾಗುತ್ತವೆ. ಭ್ರಷ್ಟಾಚಾರವನ್ನು ಕಡಿಮೆ ಮಾಡುತ್ತದೆ ಮತ್ತು ಏಜೆಂಟರು ಅಥವಾ ಮಧ್ಯವರ್ತಿಗಳಿಂದ ನಡೆಯುವ ಶೋಷಣೆ ತಡೆಯುತ್ತದೆ. ಅಧಿಕಾರಿ-ಮಧ್ಯವರ್ತಿಗಳ ಒಪ್ಪಂದವನ್ನೂ ಮುರಿಯುತ್ತದೆ’ ಎಂದು ಮುನೀಶ್‌ ಮೌದ್ಗಿಲ್ ವಿವರಿಸಿದರು.
  • ಅಂತಿಮ ಇ-ಖಾತಾ ಅರ್ಜಿಯನ್ನು 7 ದಿನಗಳಲ್ಲಿ ಮತ್ತು ಹೊಸ ಖಾತಾ ಸಂದರ್ಭ ದಲ್ಲಿ 60 ದಿನದಲ್ಲಿ (ಹೊಸ ಖಾತಾ ನೀಡಲು ಕ್ಷೇತ್ರ ಭೇಟಿ ಮತ್ತು ಪರಿಶೀಲನೆ ಅಗತ್ಯ ಇರುವುದರಿಂದ) ವಿಲೇವಾರಿ ಮಾಡು ವುದು ಜಿಬಿಎ ಮತ್ತು ನಗರ ಪಾಲಿಕೆಗಳ ಬದ್ಧತೆಯಾಗಿದೆ. ಖಾತಾ ಬದಲಾವಣೆಗಳು, ತಿದ್ದುಪಡಿ ಅಥವಾ ವಿಚಾರಣೆಯ ಅಗತ್ಯವಿ ರುವ ವಿವಾದದ ಅಂತಿಮ ಇ-ಖಾತಾ ಅರ್ಜಿ ಗಳನ್ನು ಒಂದು ತಿಂಗಳೊಳಗೆ ವಿಲೇವಾರಿ ಮಾಡಲಾಗುತ್ತದೆ ಎಂದು ತಿಳಿಸಿದರು.
  • ದರೋಜಿ ಬಳಿ ನೈಟ್ಜಾರ್ ಪಕ್ಷಿ ಗೋಚರ

ಸಂದರ್ಭ: ತಾಲ್ಲೂಕಿನ ದರೋಜಿ ಕರಡಿಧಾಮ ಪ್ರದೇಶದಲ್ಲಿ  ಕುರುಡುಗಪ್ಪಟ (ಸವನ್ನಾ ನೈಟ್‌ಜಾರ್‌) ಎಂಬ ಅಪರೂಪದ ನಿಶಾಚರ ಪಕ್ಷಿ ಗೋಚರಿಸಿದೆ.

  • ಪಕ್ಷಿ ವೀಕ್ಷಣೆ ಪ್ರವಾಸಿ ಸಂಘಟನೆ ‘ನೇಚರ್ ಇಂಡಿಯಾ ಮುಂಬೈ’ ನ ಆದೇಶ್ ಶಿವಕರ್ ಅವರ ತಂಡದ ಸದಸ್ಯೆ ಅಂಜಲಿ ಕೇಲ್ಕರ್ ಅವರ ಕ್ಯಾಮೆರಾ ಕಣ್ಣಿಗೆ ಈ ಪಕ್ಷಿ ಸೆರೆಯಾಗಿದೆ.
  • ದೊಡ್ಡ ಕಣ್ಣು, ವಿಶಿಷ್ಟ ಧ್ವನಿಯ ಈ ಪಕ್ಷಿಯು ನೆಲದಲ್ಲಿ ಗೂಡು ಕಟ್ಟಿ, ಮರದಲ್ಲಿ ವಿಶ್ರಮಿಸುತ್ತದೆ. ‘ನೈಟ್‌ಜಾರ್‌’ ಇರುವಿಕೆ ಇಲ್ಲಿಗೆ ಸಮೀಪದ ಗುಂಡಾ ಮೀಸಲು ಅರಣ್ಯ ಪ್ರದೇಶದಲ್ಲಿದೆ ಎಂಬ ಮಾಹಿತಿ ಇತ್ತು. ಆದರೆ, ಸುಲಭವಾಗಿ ಕಾಣಸಿಗುತ್ತಿರಲಿಲ್ಲ.
  • ‘ನತ್ತಿಂಗ ಎಂದೂ ಕರೆಯಿಸಿ ಕೊಳ್ಳುವ ಇಂಡಿಯನ್ ನೈಟ್‌ಜಾರ್ ಪಕ್ಷಿ ಸಾಮಾನ್ಯವಾಗಿ ಕಾಣಸಿಗುತ್ತದೆ.   ಅದೇ ಕುಟುಂಬದ ಸವನ್ನಾ ನೈಟ್‌ಜಾರ್‌ನ ಆವಾಸಸ್ಥಾನ ಉತ್ತರ ಪಾಕಿಸ್ತಾನದಿಂದ ಇಂಡೋನೇಷ್ಯಾದವರೆಗಿನ ವ್ಯಾಪ್ತಿ ಹೊಂದಿದೆ’ ಎಂದು ಪಕ್ಷಿತಜ್ಞ ಪಂಪಯ್ಯಾ ಮಳಿಮಠ ‘ಪ್ರಜಾವಾಣಿ’ಗೆ ತಿಳಿಸಿದರು.
  • ಉತ್ತರ ಪ್ರದೇಶ: ಶಿಕ್ಷಣ ಸಂಸ್ಥೆಗಳಲ್ಲಿ ವಂದೇ ಮಾತರಂ ಕಡ್ಡಾಯ

ಸಂದರ್ಭ: ಉತ್ತರ ಪ್ರದೇಶದ ಎಲ್ಲ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ವಂದೇ ಮಾತರಂ ಹಾಡುವುದು ಕಡ್ಡಾಯ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ತಿಳಿಸಿದ್ದಾರೆ.

  • ಗೋರಖಪುರದಲ್ಲಿ ನಡೆದ ಏಕತಾ ಮೆರವಣಿಗೆಯಲ್ಲಿ ಮಾತನಾಡಿದ ಆದಿತ್ಯನಾಥ ಅವರು, ‘ವಂದೇ ಮಾತರಂ ಹಾಡುವ ಮೂಲಕ ಭಾರತ ಮಾತೆ ಮತ್ತು ತಾಯ್ನಾಡಿನ ಬಗ್ಗೆ ಭಕ್ತಿ ಮತ್ತು ಹೆಮ್ಮೆಯ ಭಾವ ಮೂಡುತ್ತದೆ’ ಎಂದರು.
  • ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್:  ಮಹಿಳಾ ಮೀಸಲಾತಿ ಕಾಯ್ದೆ ಶೀಘ್ರ ಜಾರಿ

ಸಂದರ್ಭ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮೂರನೇ ಒಂದರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವ 2023ನಾರಿ ಶಕ್ತಿ ವಂದನ ಕಾಯ್ದೆಯನ್ನು ಜಾರಿಗೆ ತರುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ಪರಿಶೀಲನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೋರಿದೆ.

  • ಮಹಿಳೆಯರು ದೇಶದಲ್ಲಿ ಅತಿದೊಡ್ಡ ಅಲ್ಪಸಂಖ್ಯಾತರು ಎಂಬುದನ್ನು ಗಮನಿಸಿದ ನ್ಯಾಯಮೂರ್ತಿ ಗಳಾದ ಬಿ.ವಿ. ನಾಗರತ್ನ ಮತ್ತು ಆರ್. ಮಹಾದೇವನ್ ಅವರ ಪೀಠವು ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದೆ.
  • ‘ದೇಶದ ಎಲ್ಲಾ ನಾಗರಿಕರು ರಾಜಕೀಯ ಮತ್ತು ಸಾಮಾಜಿಕವಾಗಿ ಸಮಾನತೆಗೆ ಅರ್ಹರು ಎಂದು ಸಂವಿಧಾನದ ಪೀಠಿಕೆ ಹೇಳುತ್ತದೆ. ಈ ದೇಶದಲ್ಲಿ ಅತಿದೊಡ್ಡ ಅಲ್ಪ ಸಂಖ್ಯಾತರು ಯಾರು? ಒಟ್ಟು ಜನ ಸಂಖ್ಯೆಯಲ್ಲಿ ಶೇ 48ರಷ್ಟಿರುವ ಮಹಿಳೆಯರು ಎಂಬುದರಲ್ಲಿ ಯಾವುದೇ ಅನುಮಾನ ಬೇಡ. ಇದು ಮಹಿಳೆಯರ ರಾಜಕೀಯ ಸಮಾನತೆಗೆ ಸಂಬಂಧಿಸಿದ ವಿಷಯ’ ಎಂದು ನ್ಯಾಯಮೂರ್ತಿ ನಾಗರತ್ನ ಹೇಳಿದರು.
  • ಅರ್ಜಿದಾರರಾದ ಜಯಾ ಠಾಕೂರ್ ಪರ ಹಾಜರಾದ ಹಿರಿಯ ವಕೀಲೆ ಶೋಭಾ ಗುಪ್ತಾ, ‘ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಮಹಿಳೆಯರು ತಮ್ಮ ಪ್ರಾತಿನಿಧ್ಯಕ್ಕಾಗಿ ನ್ಯಾಯಾಲಯದ ಮೊರೆಹೋಗಬೇಕಾಗಿರುವುದು ದುರದೃಷ್ಟಕರ’ ಎಂದರು.
  • ದತ್ತಾಂಶಗಳ ಆಧಾರದ ಮೇಲೆ ಲೋಕಸಭೆ ಮತ್ತು ರಾಜ್ಯ ಶಾಸನಸಭೆಗಳಲ್ಲಿನ ಒಟ್ಟು ಸ್ಥಾನಗಳಲ್ಲಿ ಮೂರನೇ ಒಂದು ಭಾಗವನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ ಎಂದು ಅವರು ವಾದಿಸಿದರು.
  • ಕಾನೂನನ್ನು ಜಾರಿಗೊಳಿಸುವುದು ಕಾರ್ಯಾಂಗದ ವಿಶೇಷಾಧಿಕಾರವಾಗಿದ್ದು, ಈ ವಿಷಯಲ್ಲಿ ಯಾವುದೇ ಆದೇಶ ಹೊರಡಿಸಲಾಗುವುದಿಲ್ಲ ಎಂದು ಪೀಠ ಹೇಳಿತು. ‘ಇಂತಹ ವಿಷಯಗಳಲ್ಲಿ ಮಧ್ಯಪ್ರವೇಶಿಸುವಾಗ ನ್ಯಾಯಾಲಯಗಳಿಗೆ ಇತಿಮಿತಿಗಳಿವೆ’ ಎಂದು ನ್ಯಾಯಮೂರ್ತಿ ನಾಗರತ್ನ ಹೇಳಿದರು.
  • ನಾರಿ ಶಕ್ತಿ ವಂದನ ಮಸೂದೆಗೆ 2023 ಸೆಪ್ಟೆಂಬರ್‌ 21ರಂದು ಸಂಸತ್ತಿನ ಅಂಗೀಕಾರ ಲಭಿಸಿತ್ತು. ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಬಹುತೇಕ ಸರ್ವಾನುಮತದಿಂದ ಹಾಗೂ ರಾಜ್ಯಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿತ್ತು.2023 ಸೆಪ್ಟೆಂಬರ್ 28ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಮಸೂದೆಗೆ ಒಪ್ಪಿಗೆ ನೀಡಿದ್ದರು. ಕಾಯ್ದೆಯು ಲೋಕಸಭೆ ಹಾಗೂ ವಿಧಾನಸಭಾ ಕ್ಷೇತ್ರಗಳಲ್ಲಿ ಶೇಕಡ 33ರಷ್ಟನ್ನು ಮಹಿಳೆಯರಿಗೆ ಮೀಸಲಾಗಿ ಇರಿಸುತ್ತದೆ.
  • ಲೋಕಸಭೆಗೆ 2029ರಲ್ಲಿ ನಡೆಯಲಿರುವ ಚುನಾವಣೆಗೂ ಮುನ್ನ ಕಾಯ್ದೆ ಜಾರಿಗೆ ಬರುವ ಸಾಧ್ಯತೆ ಇಲ್ಲ. ಕಾಯ್ದೆಯು ಜಾರಿಗೆ ಬರಬೇಕು ಎಂದಾದರೆ ಕ್ಷೇತ್ರಗಳ ಪುನರ್ವಿಂಗಡಣೆ ಆಗಬೇಕು ಎಂದು ಕಾಯ್ದೆಯಲ್ಲಿ ಹೇಳಲಾಗಿದೆ. ಪುನರ್‌ ವಿಂಗಡಣೆಗೆ ಕಾಯದೆಯೇ ಕಾಯ್ದೆ ಜಾರಿಗೊಳಿಸಬೇಕು ಎಂದು ಜಯಾ ಠಾಕೂರ್‌ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
  • ಎಐ ಅಪಾಯ ಉಲ್ಲೇಖಿಸಿದ ಸಿಜೆಐ

ಸಂದರ್ಭ: ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರು ಕೃತಕ ಬುದ್ಧಿಮತ್ತೆಯ (ಎಐ) ಅಪಾಯವನ್ನು ಎತ್ತಿತೋರಿಸಿದ್ದಾರೆ. ತಮ್ಮ ನ್ಯಾಯಾಲಯದ ಕೋಣೆಯಲ್ಲಿ ಶೂ ಎಸೆಯಲು ಯತ್ನಿಸಿದ ಘಟನೆಯನ್ನು ತಪ್ಪಾಗಿ ಬಿಂಬಿಸಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ತಿರುಚಿದ ವಿಡಿಯೊ ಬಗ್ಗೆ ತಮಗೆ ತಿಳಿದಿದೆ ಎಂದು ಅವರು ತಿಳಿಸಿದ್ದಾರೆ.

  • ನ್ಯಾಯಾಂಗದಲ್ಲಿ ಎಐ ಬಳಕೆಯನ್ನು ನಿಯಂತ್ರಿಸಲು ಮಾರ್ಗಸೂಚಿಗಳನ್ನು ರೂಪಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಎರಡು ವಾರಗಳ ನಂತರ ವಿಚಾರಣೆಗೆ ಪಟ್ಟಿ ಮಾಡಿದ ಮುಖ್ಯ ನ್ಯಾಯಮೂರ್ತಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರ ಪೀಠವು, ನಂತರ ಈ ಹೇಳಿಕೆಯನ್ನು ನೀಡಿತು.
  • ವಿಚಾರಣೆ ಸಮಯದಲ್ಲಿ, ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಪ್ರಕ್ರಿಯೆಯಲ್ಲಿ ಎಐಯನ್ನು ಅನಿಯಂತ್ರಿತವಾಗಿ ಅವಳಡಿಸಿಕೊಳ್ಳುವುದರ ವಿರುದ್ಧ ಎಚ್ಚರಿಸುತ್ತಾ, ‘ಈ ನ್ಯಾಯಾಲಯ ಕೂಡ ಎಐ ಬಳಸುತ್ತಿದೆ’ ಎಂದಿದ್ದಾರೆ.
  • ಈ ವೇಳೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ, ‘ನಮಗೆ ಅದರ ಅರಿವಿದೆ, ನಮ್ಮಿಬ್ಬರ ತಿರುಚಿದ ವಿಡಿಯೊವನ್ನು ನಾವು ನೋಡಿದ್ದೇವೆ’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ನಕಲಿ ವಿಡಿಯೊವನ್ನು ಉಲ್ಲೇಖಿಸುತ್ತಾ ಹೇಳಿದ್ದಾರೆ.
  • ನಗರ ಸಹಕಾರಿ ಬ್ಯಾಂಕ್ಆ್ಯಪ್ಗೆ ಚಾಲನೆ

ಸಂದರ್ಭ: ನಗರ ಸಹಕಾರಿ ಬ್ಯಾಂಕ್ಗಳಲ್ಲಿ ಡಿಜಿಟಲ್ಪಾವತಿಯ ಬಳಕೆಯನ್ನು ಹೆಚ್ಚಿಸಲುಸಹಕಾರ್ ಡಿಜಿ ಪೇ ಮತ್ತುಸಹಕಾರ್ಡಿಜಿ ಲೋನ್ ಎಂಬ ಎರಡು ಮೊಬೈಲ್ಆ್ಯಪ್ಗಳಿಗೆ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಸೋಮವಾರ ಚಾಲನೆ ನೀಡಿದ್ದಾರೆ.

  • ನಗದು ರಹಿತ ಪಾವತಿ ವಿಧಾನ ಹೆಚ್ಚುತ್ತಿದ್ದು, ಸಹಕಾರಿ ಬ್ಯಾಂಕ್‌ಗಳ ಉಳಿವಿಗೆ ಡಿಜಿಟಲ್ ಪಾವತಿ ಅಳವಡಿಕೆ ಅಗತ್ಯ. ನಗರ ಸಹಕಾರಿ ಬ್ಯಾಂಕ್‌ಗಳು (ಯುಸಿಬಿ) ಮತ್ತು ಪತ್ತಿನ ಸಹಕಾರ ಸಂಘಗಳ ವೃತ್ತಿಪರತೆ ಹೆಚ್ಚಿಸಲು ಕೇಂದ್ರ ಸರ್ಕಾರ ಶ್ರಮಿಸುತ್ತಿದೆ ಎಂದು ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
  • ದೇಶದ ಸಹಕಾರ ವಲಯದ ಎನ್‌ಪಿಎ ಕಳೆದ ಎರಡು ವರ್ಷದ ಹಿಂದೆ ಶೇ 2.8ರಷ್ಟಿತ್ತು. ಅದು ಈಗ ಶೇ 0.6ಕ್ಕೆ ಇಳಿದಿದೆ. ಎನ್‌ಪಿಎ ಸುಧಾರಣೆ ಕಂಡಿದೆ. ಬ್ಯಾಂಕ್‌ಗಳ ಕಾರ್ಯಾಚರಣೆಯಲ್ಲಿ ಸುಧಾರಣೆ ಮತ್ತು ಆರ್ಥಿಕ ಶಿಸ್ತು ಉಂಟಾಗಿದೆ ಎಂದಿದ್ದಾರೆ.
  • ರಾಷ್ಟ್ರೀಯ ನಗರ ಸಹಕಾರಿ ಬ್ಯಾಂಕ್‌ ಹಾಗೂ ಪತ್ತಿನ ಸಂಸ್ಥೆಗಳ ಒಕ್ಕೂಟವು (ಎನ್‌ಎಎಫ್‌ಸಿಯುಬಿ) ಮುಂದಿನ ಐದು ವರ್ಷದೊಳಗೆ ಎರಡು ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಇರುವ ಪ್ರತಿ ಪಟ್ಟಣದಲ್ಲಿ ಕನಿಷ್ಠ ಒಂದಾದರೂ ಹೆಚ್ಚುವರಿ ನಗರ ಸಹಕಾರಿ ಬ್ಯಾಂಕ್‌ ಸ್ಥಾಪಿಸುವ ಗುರಿ ಸಾಧಿಸಬೇಕು ಎಂದು ಸೂಚಿಸಿದ್ದಾರೆ.
  • ‘ಡಿಜಿ ಪೇ ಇಂದು ಅಗತ್ಯವಾಗಿದೆ. ನಗರ ಸಹಕಾರಿ ಬ್ಯಾಂಕ್‌ಗಳು ಈ ಪಾವತಿ ವಿಧಾನಕ್ಕೆ ಹೊಂದಿಕೊಳ್ಳ ದಿದ್ದರೆ, ಸ್ಪರ್ಧೆಯಿಂದ ಹೊರಗುಳಿ ಯುತ್ತವೆ. ಎರಡು ವರ್ಷದೊಳಗೆ 1,500 ಬ್ಯಾಂಕ್‌ಗಳು ಈ ಅಪ್ಲಿಕೇಷನ್‌ ಅನ್ನು ಅಳವಡಿಸಿಕೊಳ್ಳಬೇಕು’ ಎಂದು ಹೇಳಿದ್ದಾರೆ.
  • ಎನ್‌ಎಫ್‌ಸಿಯುಬಿ ಗೌರವಾಧ್ಯಕ್ಷ ಮತ್ತು ಕರ್ನಾಟಕದ ಕಾನೂನು ಸಚಿವ ಎಚ್‌.ಕೆ.ಪಾಟೀಲ, 20 ನಗರ ಸಹಕಾರಿ ಬ್ಯಾಂಕ್‌ಗಳು ಮುಚ್ಚುವ ಹಂತಕ್ಕೆ ಬಂದಿವೆ ಎಂದು ಆತಂಕ ವ್ಯಕ್ತಪಡಿಸಿದರು. ಇವುಗಳ ಪುನರುಜ್ಜೀವನಕ್ಕೆ ಕ್ರಮ ತೆಗೆದು ಕೊಳ್ಳಬೇಕು ಎಂದರು.‌
  • ಕಲಬೆರಕೆ ಪೆಟ್ರೋಲ್‌, ನೀರಿನಲ್ಲಿ ಬೆರೆತ ತೈಲ ಪತ್ತೆಗೆ ಐಐಟಿ ಸಂಶೋಧನೆ

ಸಂದರ್ಭ: ಕಲಬೆರಕೆ ಪೆಟ್ರೋಲ್ಅಥವಾ ಸೀಮೆಎಣ್ಣೆ ಮಿಶ್ರಣ ಮತ್ತು ನೀರಿನಲ್ಲಿ ಸೇರಿದ ತೈಲದ ಅಂಶವನ್ನು ಪತ್ತೆ ಮಾಡಬಲ್ಲ ಹೊಸ ವಸ್ತುವೊಂದನ್ನು ಗುವಾಹಟಿಯ ಇಂಡಿಯನ್ಇನ್ಸ್ಟಿಟ್ಯೂಟ್ಆಫ್ಟೆಕ್ನಾಲಜಿಯ (ಐಐಟಿ) ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಈ ವಸ್ತುವು ನೀರಿನಲ್ಲಿರುವ ತೈಲದ ಅಂಶ ಹೀರಿಕೊಳ್ಳುವ ಮತ್ತು ಘನೀಕರಿಸುವ ಸಾಮರ್ಥ್ಯವನ್ನು ಹೊಂದಿದೆ. ಸಂಶೋಧನೆಯ ಅಂಶಗಳನ್ನು  ಪ್ರತಿಷ್ಠಿತ ‘ಕೆಮಿಕಲ್‌ ಎಂಜಿನಿಯರಿಂಗ್‌’ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ. ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಗೋಪಾಲ್‌ ದಾಸ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
  • ‘ತೈಲ ಟ್ಯಾಂಕರ್‌ಗಳ ಸೋರಿಕೆ ಅಂಕಿಅಂಶ–2024ರ ಪ್ರಕಾರ ಜಾಗತಿಕವಾಗಿ ಸುಮಾರು 10,000 ಟನ್‌ನಷ್ಟು ತೈಲವು ಸಮುದ್ರ ಮತ್ತು ಸಾಗರವನ್ನು ಸೇರುತ್ತಿದೆ. ಇದು ಜಾಗತಿಕವಾಗಿ ನೈಸರ್ಗಿಕ ವಿಕೋಪವಾಗಿ ಪರಿಣಮಿಸುತ್ತಿದೆ. ಸಾಗರ ಜೀವಿಗಳು, ಕರಾವಳಿ ಪ್ರದೇಶ ಮತ್ತು ಇವುಗಳನ್ನು ಅವಲಂಬಿಸಿರುವ ಜನಜೀವನದ ಮೇಲೂ ಹಾನಿ ಉಂಟು ಮಾಡುತ್ತಿದೆ’ ಎಂದು ಹೇಳಿದ್ದಾರೆ.
  • ‘ಸದ್ಯ ಅನುಸರಿಸುತ್ತಿರುವ ರಾಸಾ ಯನಿಕ ವಿಧಾನ ಅಥವಾ ತೈಲವನ್ನು ಉರಿಸುವ ವಿಧಾನಗಳು ಎರಡನೇ ಹಂತದ ಮಾಲಿನ್ಯ ಉಂಟುಮಾಡುತ್ತವೆ. ಸಂಸ್ಥೆಯು ಅಭಿವೃದ್ಧಿಪಡಿಸಿರುವ ‘ಫೇಸ್‌ ಸೆಲೆಕ್ಟೀವ್‌ ಆರ್ಗೊಜಿಲೇಟರ್‌ (ಪಿಎಸ್‌ಓಜಿ)’ ಅಣು (ಜೆಲ್ ಮಾದರಿಯ ಸಣ್ಣ ಕಣ) ಸುರಕ್ಷಿತ ವಸ್ತುವಾಗಿದ್ದು, ನೀರಿನಲ್ಲಿ ಸೇರಿದ ತೈಲವನ್ನು ಘನೀಕರಿಸುತ್ತದೆ’ ಎಂದು ತಿಳಿಸಿದ್ದಾರೆ. 
  • ಭಾರತದಲ್ಲಿ ಪೆಟ್ರೋಲ್‌ಗೆ ಸೀಮೆಎಣ್ಣೆ ಮಿಶ್ರಣ ಮಾಡಿ ಕೆಲವರು ಬಳಸುತ್ತಿದ್ದಾರೆ. ಇದು ಸ್ಫೋಟದಂತಹ ಅನಾಹುತಕ್ಕೂ ಕಾರಣವಾಗುತ್ತಿದೆ. ತೈಲ ಕಲಬೆರಕೆ ಪತ್ತೆ ಹಚ್ಚಲು ಜಿಲೇಟರ್ ಮಾಲೆಕ್ಯೂಲ್‌ (ಜೆಲ್ ಮಾದರಿಯ ಸಣ್ಣ ಕಣ) ನೆರವಾಗಲಿದೆ. ಇದರ ದಕ್ಷತೆ ಇನ್ನಷ್ಟು ಹೆಚ್ಚಿಸುವ ಯತ್ನ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
  • ದತ್ತಾಂಶ ಕೇಂದ್ರ: ಮುಂಬೈ ಅಗ್ಗ

ಸಂದರ್ಭ: ದತ್ತಾಂಶ ಕೇಂದ್ರಗಳ ಮೇಲಿನ ಹೂಡಿಕೆಗೆ ಭಾರತವು ಅತ್ಯಂತ ಆಕರ್ಷಕವಾಗಿ ಕಾಣುತ್ತಿದೆ ಎಂದು ವರದಿಯೊಂದು ಹೇಳಿದೆ.

  • ದತ್ತಾಂಶ ಕೇಂದ್ರಗಳ ನಿರ್ಮಾಣಕ್ಕೆ ಈಗ ಮುಂಬೈ ಜಾಗತಿಕ ಮಟ್ಟದಲ್ಲಿ ಎರಡನೆಯ ಅತ್ಯಂತ ಕಡಿಮೆ ಖರ್ಚಿನ ನಗರವಾಗಿ ಪರಿಗಣಿತವಾಗಿದೆ ಎಂದು ‘ಟರ್ನರ್ ಆ್ಯಂಡ್‌ ಟೌನ್‌ಸೆಂಡ್‌ ದತ್ತಾಂಶ ಕೇಂದ್ರ ನಿರ್ಮಾಣ ವೆಚ್ಚ ಸೂಚ್ಯಂಕ’ ಹೇಳಿದೆ.
  • ಮುಂಬೈನಲ್ಲಿ ದತ್ತಾಂಶ ಕೇಂದ್ರ ನಿರ್ಮಾಣ ಮಾಡುವುದರ ವೆಚ್ಚವು ಪ್ರತಿ ವಾಟ್‌ಗೆ ಅಂದಾಜು ₹589 ಮಾತ್ರ.
  • ಕಡಿಮೆ ವೆಚ್ಚದಲ್ಲಿ ದತ್ತಾಂಶ ಕೇಂದ್ರವನ್ನು ಮುಂಬೈನಲ್ಲಿ ನಿರ್ಮಿಸಲು ಸಾಧ್ಯವಿರುವುದು, ಭಾರತಕ್ಕೆ ಈ ವಲಯದಲ್ಲಿ ಹೂಡಿಕೆ ಆಕರ್ಷಿಸಲು ಹೆಚ್ಚಿನ ತಾಕತ್ತನ್ನು ನೀಡಲಿದೆ. ಟೋಕಿಯೊ, ಸಿಂಗಪುರ, ಜುರಿಕ್‌ನಂತಹ ನಗರಗಳಲ್ಲಿ ದತ್ತಾಂಶ ಕೇಂದ್ರ ನಿರ್ಮಿಸಲು ಬೇಕಿರುವ ಮೊತ್ತವು ಮುಂಬೈಗೆ ಹೋಲಿಸಿದರೆ ದುಪ್ಪಟ್ಟಾ ಗುತ್ತದೆ ಎಂದು ವರದಿ ಹೇಳಿದೆ.
  • ಜಗತ್ತಿನಲ್ಲಿ ಸೃಷ್ಟಿಯಾಗುವ ದತ್ತಾಂಶದಲ್ಲಿ ಶೇಕಡ 20ರಷ್ಟು ಪಾಲು ಭಾರತದ್ದು. ಆದರೆ ಜಾಗತಿಕ ದತ್ತಾಂಶ ಕೇಂದ್ರ ಸಾಮರ್ಥ್ಯದಲ್ಲಿ ಭಾರತದ ಪಾಲು ಶೇ 3ರಷ್ಟು ಮಾತ್ರ. ಭಾರತದಲ್ಲಿ ದತ್ತಾಂಶ ಕೇಂದ್ರಗಳಿಗೆ ವಿಸ್ತರಣೆ ಕಾಣಲು ಭಾರಿ ಅವಕಾಶ ಇದೆ ಎಂಬುದನ್ನು ಇದು ಹೇಳುತ್ತಿದೆ.
  • ಸಲ್ಮಾನ್ ರಶ್ದಿಗೆಡೇಟನ್ಜೀವಮಾನ ಸಾಧನೆ ಪ್ರಶಸ್ತಿಪ್ರದಾನ

ಸಂದರ್ಭ: ಓಹಿಯೋದಲ್ಲಿ ನಡೆದಡೇಟನ್ಸಾಹಿತ್ಯ ಶಾಂತಿ ಪ್ರಶಸ್ತಿ ಸಮಾರಂಭದಲ್ಲಿ ಭಾರತೀಯ ಸಂಜಾತ, ಲೇಖಕ ಸಲ್ಮಾನ್ರಶ್ದಿ ಅವರಿಗೆಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

  • ಮೂರು ವರ್ಷಗಳ ಹಿಂದೆ ನ್ಯೂಯಾರ್ಕ್‌ ನಗರದಲ್ಲಿ ನಡೆದಿದ್ದ ಉಪನ್ಯಾಸ ಕಾರ್ಯಕ್ರಮದ ವೇದಿಕೆಯಲ್ಲಿ ರಶ್ದಿ ಅವರ ಮೇಲೆ ವ್ಯಕ್ತಿಯೊಬ್ಬ ಚಾಕುವಿನಿಂದ ದಾಳಿ ನಡೆಸಿದ್ದ. ಈ ವೇಳೆ ರಶ್ದಿ ಬಲಗಣ್ಣನ್ನು ಕಳೆದುಕೊಂಡಿದ್ದರು. ಈ ಘಟನೆ ಬಳಿಕ ಅವರು ಕಾದಂಬರಿಯನ್ನು ಪ್ರಕಟಿಸಿದ ನಂತರ ‘ಜೀವಮಾನ ಸಾಧನೆ ಪ್ರಶಸ್ತಿ’ಯನ್ನು ಸ್ವೀಕರಿಸಿದ್ದಾರೆ.
  • ದೆಹಲಿ ವಾಯುಮಾಲಿನ್ಯ: ಮೀಮ್ಗಳದ್ದೇ ಸದ್ದು: ಸಾಮಾಜಿಕ ಮಾಧ್ಯಮಗಳ ಮೂಲಕ ಟೀಕೆ

ಸಂದರ್ಭ: ದೆಹಲಿಯ ವಾಯುಮಾಲಿನ್ಯದ ವಿಚಾರವು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿ ರುವುದು ಮಾತ್ರವಲ್ಲದೆ, ಸಾಮಾಜಿಕ ಮಾಧ್ಯಮದಲ್ಲಿಮೀಮ್ಗಳ ಮೂಲಕವೂ ಸದ್ದು ಮಾಡುತ್ತಿದೆ.

  • ‘ವೆಡ್ಡಿಂಗ್‌ ವಿ‌ದ್‌ ಆಕ್ಸಿಜನ್‌ ಮಾಸ್ಕ್‌’ ಎಂಬ ವಿಡಿಯೊ ವೈರಲ್ ಆಗಿದೆ. ವಾಯಮಾಲಿನ್ಯಯುಕ್ತ ನಗರದಲ್ಲಿ ಸಂಗಾತಿಗಳಿಬ್ಬರು ಮಾಸ್ಕ್ ಧರಿಸಿಕೊಂಡು ಪ್ರೇಮಿಸುವ ಪರಿಸ್ಥಿತಿ ಇದೆ ಎಂದು ವ್ಯಂಗ್ಯವಾಗಿ ವಿಡಿಯೊ ಮಾಡಲಾಗಿದೆ.
  • ಮದುಮಗನು ಮದುಮಗಳ ಮೇಲೆ ಹೂವು ಸುರಿಯುವ ಬದಲಾಗಿ, ಔಷಧದ ಲಕೋಟೆಗಳನ್ನು ಸುರಿಯುವ ದೃಶ್ಯವನ್ನು ಸೃಷ್ಟಿಸಲಾಗಿದೆ. ಭವ್ಯ ಅರಮನೆ ಅಥವಾ ಉದ್ಯಾನದ ಬದಲಿಗೆ ಆಸ್ಪತ್ರೆಯ ಒಳಗೆ ಆಕ್ಸಿಜನ್‌ ಸಿಲಿಂಡರ್‌ ಮತ್ತು ಇತರ ಉಪಕರಣಗಳ ಮಧ್ಯೆ ಫೋಟೊ ತೆಗೆಸಿಕೊಳ್ಳುವ ಮತ್ತು ಕೊನೆಯಲ್ಲಿ ಕೈಯಲ್ಲಿ ಮಾಸ್ಕ್‌ ಅನ್ನು ತೋರಿಸುವ ಮೂಲಕ ತಾವು ದೆಹಲಿ ನಾಗರಿಕರು ಎಂದು ತಿಳಿಸುವ ರೀತಿಯಲ್ಲಿ ವ್ಯಂಗ್ಯ ಮಾಡಲಾಗಿದೆ.
  • ದೆಹಲಿಯ ಗಾಳಿಯಲ್ಲಿ 10 ನಿಮಿಷ ಹಾರಾಡಿದ ಬಳಿಕ ‘ಸೂಪರ್‌ಮ್ಯಾನ್‌’ ಕೂಡ ಆಸ್ಪತ್ರೆಗೆ ದಾಖಲಾಗಿ ಮಾಸ್ಕ್‌ ಧರಿಸಬೇಕಾಗುತ್ತದೆ ಎಂಬ ಮೀಮ್‌ ಒಂದು ‘ಎಕ್ಸ್‌’ನಲ್ಲಿದೆ.
  • ‘ದೆಹಲಿಗೆ ಇಂದ್ರಪ್ರಸ್ಥ ಎಂದು ಮರುನಾಮಕರಣ ಮಾಡುವ ಪ್ರಯತ್ನವಾಗುತ್ತಿದೆ. ಮಾಲಿನ್ಯ ಮತ್ತು ಅಪರಾಧ ವ್ಯವಸ್ಥೆಯು 14ನೇ ಶತಮಾನದತ್ತ ಮರಳುತ್ತಿದೆ’ ಎಂದು ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಟೀಕಿಸಿದ್ದಾರೆ.
  • ರಾಜಕೀಯ ಮತ್ತು ಮಾಲಿನ್ಯವನ್ನು ಸಮೀಕರಿಸಿಕೊಂಡು ಟೀಕಿಸಿರುವ ನೆಟ್ಟಿಗರು, ‘ಅಬ್‌ ಕಿ ಬಾರ್‌, 1000 ಎಕ್ಯುಐ ಪಾರ್‌’ ಎಂದು ಪೋಸ್ಟ್ ಮಾಡಿದ್ದಾರೆ.

ಗಾಳಿಯ ಗುಣಮಟ್ಟ ತೀರಾ ಕಳಪೆ

  • ದೇಶದ ರಾಜಧಾನಿ ದೆಹಲಿಯಲ್ಲಿ ಬೆಳಿಗ್ಗೆ ವಿಷಯುಕ್ತ ಗಾಳಿಯು ಪರದೆಯಂತೆ ಆವರಿಸಿತ್ತು. ಗಾಳಿಯ ಗುಣಮಟ್ಟ ತೀರಾ ಕಳಪೆಯಾಗಿತ್ತು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ) ತಿಳಿಸಿದೆ.
  • ಸಿಪಿಸಿಬಿ ದತ್ತಾಂಶಗಳ ಪ್ರಕಾರ, ದೆಹಲಿಯ ಒಟ್ಟಾರೆ ಗಾಳಿಯ ಗುಣಮಟ್ಟ ಸೂಚ್ಯಂಕವು (ಎಕ್ಯುಐ) 345 ಇತ್ತು.
  • ಗಾಳಿಯ ಗುಣಮಟ್ಟ ಸೂಚ್ಯಂಕವು ಮುಂಜಾನೆ ತೀವ್ರವಾಗಿ (391 ಎಕ್ಯುಐ) ಕುಸಿದಿತ್ತು. ಬಳಿಕ ಸ್ವಲ್ಪ ಸುಧಾರಿಸಿದೆ.
  • ಬೂಕರ್ ಸ್ಪರ್ಧೆಯಲ್ಲಿ ಕಿರಣ್

ಸಂದರ್ಭ: ಭಾರತೀಯ ಲೇಖಕಿ ಕಿರಣ್ದೇಸಾಯಿ ಅವರದಿ ಲೋನ್ಲಿನೆಸ್ಆಫ್ಸೋನಿಯಾ ಆ್ಯಂಡ್ಸನ್ನಿ ಪುಸ್ತಕವು ಬೂಕರ್ಪ್ರಶಸ್ತಿಯ ಸ್ಪರ್ಧೆಯಲ್ಲಿದ್ದು, ತಾವು ಅನುಭವಿಸಿದಕಲಾತ್ಮಕ ಒಂಟಿತನವನ್ನೇ (ಬೇಗುದಿ) ಆಧರಿಸಿ ಪುಸ್ತಕ ಬರೆದಿರುವುದಾಗಿ ಕಿರಣ್ಹೇಳಿಕೊಂಡಿದ್ದಾರೆ.

  • ಲಂಡನ್‌ನಲ್ಲಿ ನಡೆದ ಪ್ರಶಸ್ತಿ ಪೂರ್ವ ಸಮಾರಂಭದಲ್ಲಿ ತಮ್ಮ ಪುಸ್ತಕದ ವಸ್ತುವಿಷಯದ ಕುರಿತು ಕಿರಣ್‌ ಮಾತನಾಡಿದರು. ‘ದೀರ್ಘಕಾಲದಿಂದ ಬಗೆಹರಿಯದ ಪ್ರೇಮ ಕಥೆಯೊಂದರ ಮೂಲಕ ಜಗತ್ತಿನ ಒಂಟಿತನದ ವಿಚಾರದ ಬಗ್ಗೆ ಬರೆಯಬೇಕು ಎಂದುಕೊಂಡಿದ್ದೆ’ ಎಂದು ಅವರು ಹೇಳಿದ್ದಾರೆ.
  • ಅಲ್ಲದೇ, ‘ವಿದ್ಯಾಭ್ಯಾಸಕ್ಕಾಗಿ ಮೊದಲ ಬಾರಿ ಭಾರತವನ್ನು ತೊರೆದಾಗ ಅನುಭವಿಸಿದ ಒಂಟಿತನ ಹಾಗೂ ಬರೆಯಲು ಆರಂಭಿಸಿದ ನಂತರ ಪ್ರೇಕ್ಷರಿಗೆ ತಲುಪಲು ಸಾಧ್ಯವಾಗದೆ, ಯಾರೂ ನಮ್ಮನ್ನು ಗುರುತಿಸದೇ ಎದುರಾದ ಬೇಗುದಿಯ ಅನುಭವ ಪುಸ್ತಕವಾಗಿಸಿ ದ್ದೇನೆ.
  • ಇದನ್ನು ಕಲಾತ್ಮಕ ಒಂಟಿತನದ ಬರಹ ವೆಂದೇ ಭಾವಿಸುವೆ’ ಎಂದಿದ್ದಾರೆ. 2006ರಲ್ಲಿ ಕಿರಣ್‌ ಅವರ ‘ದಿ ಇನ್‌ಹೆರಿಟೆನ್ಸ್‌ ಆಫ್‌ ಲಾಸ್‌’ ಕೃತಿಗೆ ಬೂಕರ್‌ ಪ್ರಶಸ್ತಿ ಲಭಿಸಿತ್ತು.
  • ಸ್ವರ್ಣಕ್ಕೆ ಗುರಿಯಿಟ್ಟ ರಾಣಾ : ಐಎಸ್ಎಸ್ಎಫ್ವಿಶ್ವ ಶೂಟಿಂಗ್ಚಾಂಪಿಯನ್ಷಿಪ್

ಸಂದರ್ಭ: ಭಾರತದ ಯುವ ಶೂಟರ್ ಸಾಮ್ರಾಟ್ ರಾಣಾ ಅವರು ಐಎಸ್ಎಸ್ಎಫ್ವಿಶ್ವ ಚಾಂಪಿಯನ್ಷಿಪ್ ಪುರುಷರ 10 ಮೀಟರ್ಏರ್ಪಿಸ್ತೂಲ್ಸ್ಪರ್ಧೆಯಲ್ಲಿ ಚಿನ್ನಕ್ಕೆ ಗುರಿಯಿಟ್ಟರು.

  • ಕರ್ನಲ್ ಮೂಲದ ಸಾಮ್ರಾಟ್ ಫೈನಲ್‌ನಲ್ಲಿ 243.7 ಅಂಕಗಳನ್ನು ಗಳಿಸಿ ಚೀನಾದ ಹು ಕೈ ಅವರನ್ನು ಸೋಲಿಸಿದರು. 243.3 ಅಂಕಗಳೊಂದಿಗೆ ಹು ಕೈ  ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಉತ್ತರ ಪ್ರದೇಶದ ಬಾಗ್‌ಪತ್‌ನ ವರುಣ್ ತೋಮರ್‌ ಅವರು 221.7 ಅಂಕಗಳೊಂದಿಗೆ ಕಂಚಿನ ಪದಕ ಗೆದ್ದರು.
  • ಮನು, ಇಶಾಗೆ ತಪ್ಪಿದ ಪದಕ: ಒಲಿಂಪಿಕ್ ಅವಳಿ ಪದಕ ವಿಜೇತ ಶೂಟರ್ ಮನು ಭಾಕರ್ ಮತ್ತು ಏಷ್ಯನ್ ಕ್ರೀಡಾಕೂಟದ ಪದಕ ವಿಜೇತೆ ಇಶಾ ಸಿಂಗ್ ಅವರು ಮಹಿಳೆಯರ ವೈಯಕ್ತಿಕ 10 ಮೀಟರ್ ಏರ್ ಪಿಸ್ತೂಲ್ ಫೈನಲ್‌ ಪದಕ ಗೆಲ್ಲಲು ವಿಫಲರಾದರು. ಆದರೆ, ತಂಡ ವಿಭಾಗದಲ್ಲಿ ಸುರುಚಿ ಸಿಂಗ್‌ ಅವರೊಂದಿಗೆ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
  • ಇಶಾ (583), ಮನು (580) ಮತ್ತು ಸುರುಚಿ (577) ಹೀಗೆ ಒಟ್ಟು 1740 ಅಂಕಗಳೊಂದಿಗೆ ತಂಡ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದರು. ವೈಯಕ್ತಿಕ ಸ್ಪರ್ಧೆಯಲ್ಲಿ ಇಶಾ ಆರನೇ ಸ್ಥಾನ ಮತ್ತು ಮನು ಏಳನೇ ಸ್ಥಾನಗಳೊಂದಿಗೆ ಅಭಿಯಾನ ಮುಗಿಸಿದರು.
  • ಮೂರು ಚಿನ್ನ, ಮೂರು ಬೆಳ್ಳಿ ಮತ್ತು ಮೂರು ಕಂಚಿನೊಂದಿಗೆ ಭಾರತ ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆರು ಚಿನ್ನ, ನಾಲ್ಕು  ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳೊಂದಿಗೆ ಚೀನಾ ಅಗ್ರಸ್ಥಾನದಲ್ಲಿದೆ.
  • ಏಷ್ಯನ್ ಆರ್ಚರಿ: ಭಾರತಕ್ಕೆ 2 ಪದಕ ಖಚಿತ

ಸಂದರ್ಭ: ಭಾರತದ ಪುರುಷರ ರಿಕರ್ವ್ ತಂಡ, ಏಷ್ಯನ್ ಆರ್ಚರಿ ಚಾಂಪಿಯನ್ಷಿಪ್ ಫೈನಲ್ ತಲುಪಿದೆ. ಇದರಿಂದ ಕೂಟದಲ್ಲಿ ದೀರ್ಘಕಾಲದ ಪದಕ ಬರ ಅಂತ್ಯಗೊಳ್ಳುವ ಕ್ಷಣ ಸನ್ನಿಹಿತವಾಗಿದೆ. ಭಾರತ ತಂಡವು ಚಿನ್ನದ ಪದಕಕ್ಕಾಗಿ ದಕ್ಷಿಣ ಕೊರಿಯಾ ತಂಡವನ್ನು ಎದುರಿಸಲಿದೆ.

  • ಮಹಿಳೆಯರ ವಿಭಾಗದಲ್ಲಿ ಕಾಂಪೌಂಡ್ ವಿಭಾಗದ ಹಾಲಿ ಚಾಂಪಿಯನ್ ಭಾರತ ಸತತ ಎರಡನೇ ಬಾರಿ ಫೈನಲ್ ತಲುಪಿದೆ. ಇದರಿಂದಾಗಿ ಭಾರತಕ್ಕೆ ಈ ಕೂಟದಲ್ಲಿ ಎರಡು ಪದಕಗಳು ಖಾತರಿಯಾಗಿವೆ.
  • ಯಶದೀಪ್ ಭೋಗೆ, ಅತನು ದಾಸ್‌ ಮತ್ತು ರಾಹುಲ್ ಅವರಿದ್ದ ತಂಡ, ತೀವ್ರ ಸೆಣಸಾಟದಲ್ಲಿ ಕಜಾಕಸ್ತಾನ ತಂಡವನ್ನು 5–3 ರಿಂದ ಸೋಲಿಸಿತು.
  • ದಕ್ಷಿಣ ಕೊರಿಯಾವು ಪ್ರಮುಖ ಸ್ಪರ್ಧಿಗಳಿಗೆ ವಿಶ್ರಾಂತಿ ನೀಡಿ ಎರಡನೇ ಹಂತದ ತಂಡವನ್ನು ಈ ಕೂಟಕ್ಕೆ ಕಳುಹಿಸಿದೆ.
  • ಮಹಿಳೆಯರ ವಿಭಾಗದಲ್ಲಿ ದೀಪ್ಶಿಕಾ, ಜ್ಯೋತಿ ಸುರೇಖಾ ವೆನ್ನಂ ಮತ್ತು ಪ್ರತೀಕಾ ಪ್ರದೀಪ್ ಅವರಿದ್ದ ಕಾಂಪೌಂಡ್‌ ತಂಡ ಸೆಮಿಫೈನಲ್‌ನಲ್ಲಿ 234– 227 ರಿಂದ ಆತಿಥೇಯ ಬಾಂಗ್ಲಾದೇಶ ತಂಡವನ್ನು ಸೋಲಿಸಿತು. ಫೈನಲ್‌ನಲ್ಲಿ ದಕ್ಷಿಣ ಕೊರಿಯಾ ತಂಡವನ್ನು ಎದುರಿಸಲಿದೆ. ಕೊರಿಯನ್ನರ ತಂಡ ಸೆಮಿಫೈನಲ್‌ನಲ್ಲಿ 237–227 ರಿಂದ ಇರಾನ್ ಮೇಲೆ ಜಯಗಳಿಸಿತು.
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments